UN NETWORKS ಮಂಗಳೂರು : ಶಿಕ್ಷಣ ಕ್ಷೇತ್ರವು ಸಾರ್ವಕಾಲಿಕ ಪವಿತ್ರವಾದುದು .ಶಿಕ್ಷಣ ರಂಗದಲ್ಲಿ ಅರ್ಪಣಾಭಾವನೆಯಿಂದ ಕಾರ್ಯ ನಿರ್ವಹಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಅಭಿನಂದನಾರ್ಹರು ಎಂದು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷರಾದ ಜನಾಬ್ ಹಾಜಿ ಅಬ್ದುಲ್ ರಶೀದ್ ರವರು ಹೇಳಿದರು . ಅವರು ಇತ್ತೀಚೆಗೆ ಉಳ್ಳಾಲ ಕ್ಲಸ್ಟರ್ನಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಜಿಲ್ಲಾ ಪ್ರಶಸ್ತಿ ವೀಜೇತ ಶಿಕ್ಷಕಿಯನ್ನು ಸನ್ಮಾನಿಸಿ ಮಾತಾಡುತ್ತಾ ತಂದೆ ,ತಾಯಿಗಳನ್ನು ತೊರೆದು ಎಳೆಯ ಮಕ್ಕಳು ಶಿಕ್ಷಕರನ್ನೇ ಸರ್ವಸ್ವ ಎಂದು ಭಾವಿಸಿ ಅವರ ಬಳಿಗೆ ಬಂದಾಗ ಗುಣಾತ್ಮಕವಾದ ಶಿಕ್ಷಣ ನೀಡಬೇಕು ಎಂದರು . ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಉರ್ದು ಹಿ.ಪ್ರಾ.ಶಾಲೆ ಹಳೆಕೋಟೆ ಇಲ್ಲಿನ ನಿವೃತ್ತರಾದ ಶಿಕ್ಷಕಿ ಶಶಿಕಲಾ ಶೆಟ್ಟಿ , ಬಿ.ಎಂ.ಶಾಲೆಯ ಶಿಕ್ಷಕಿಯರಾದ ಪ್ರಫುಲ್ಲ ಮತ್ತು ಎಸ್ತಾರ್ ದೇವದತ್ತ್ , ಒಂಭತ್ತು ಕೆರೆಯ ಶಾಲೆಯ ಶಿಕ್ಷಕಿ ಶೋಭನ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಭಾರತ್ ಪ್ರೌಢ ಶಾಲೆಯ ಶಿಕ್ಷಕಿ ವಿನಯರವರನ್ನು ಸನ್ಮಾನಿಸಲಾಯಿತು…
Author: UllalaVani
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ `ಅರಿವಿನ ಅಲೆ’ ಸಂಶೋಧನಾ ಚಾವಡಿಯ ನಾಲ್ಕನೇ ಪ್ರಬಂಧ ಮಂಡನೆಯು ಗುರುವಾರ ನಡೆಯಿತು. `ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ಅತೀಂದ್ರಿಯ ಪ್ರಕಟ-ಒಂದು ಟಿಪ್ಪಣಿ’ ಎನ್ನುವ ವಿಚಾರದ ಕುರಿತು ಕನಕದಾಸ ಸಂಶೋಧನಾ ಕೇಂದ್ರದ ಸಂಶೋಧನಾ ಸಹಾಯಕರಾದ ಆನಂದ ಎಂ.ಕಿದೂರು ಅವರು ಮಾತನಾಡಿ,ಭೂತ, ವರ್ತಮಾನ ಭವಿಷ್ಯತ್ಗಳ ಕಥನ ಪ್ರತಿಬಿಂಬವನ್ನು ಮೂಕಜ್ಜಿಯ ಪಾತ್ರ ಮುಂದಿಡುತ್ತದೆ ಎಂದರು. ಕಾರಂತರ ಜೀವನದೃಷ್ಟಿ ಪರಂಪರೆಯೊಂದರ ಕೊಂಡಿಯಂತೆಯೂ ಕಲಾಸೃಷ್ಟಿಯ ಆಯಾಮವನ್ನು ಮುಂದಿಡುತ್ತದೆ. ಮೂಕಜ್ಜಿಯ ಮೂಲಕ ಪರಂಪರೆಯೊಂದರ ತರ್ಕಕ್ಕೆ ನಿಲುಕದ ಕಥನಗಳ ಅನಾವರಣ ಮಾಡಿಸಿದ್ದು ಕಾರಂತರ ಶ್ರೇಷ್ಟವಾದ ಕೃತಿಸೃಷ್ಟಿಯೇ ಸರಿ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ.ಸೋಮಣ್ಣ ಅವರು, ಮುಂದಿನ ದಿನಗಳಲ್ಲಿ ವಿಭಾಗದ ಸಂಶೋಧನಾ ಚಟುವಟಿಕೆ ಚುರುಕಾಗಬೇಕಿದೆ. ಸಂಶೋಧಕರ ಜೊತೆಗೆ ವಿದ್ಯಾರ್ಥಿಗಳು ಸಹಭಾಗಿತ್ವದ ಪ್ರಬಂಧಗಳನ್ನು ಮಂಡಿಸುವ ಉತ್ತಮ ವೇದಿಕೆ `ಅರಿವಿನ ಅಲೆ’ ಎಂದು ಅಭಿಪ್ರಾಯಪಟ್ಟರು. ವಿಭಾಗದ…
UN NETWORKS ಪಜೀರು: ಮಂಗಳೂರು ರಥಬೀದಿಯ ಡಾ| ದಯಾನಂದ ಪೈ. ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಕಾರ್ಯ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳ ನಡೆ ರೈತರ ಹಡಿಲು ಭೂಮಿಯ ಕಡೆ ಕಾರ್ಯಕ್ರಮದಲ್ಲಿ ಭತ್ತದ ಕೃಷಿಯಿಂದ ಉತ್ಪಾದನೆಯಾದ ಸುಮಾರು 30 ಸಾವಿರ ಮೌಲ್ಯದ ಬೈಹುಲ್ಲನ್ನು ರವಿವಾರ ಗೋವನಿತಾಶ್ರಯದಲ್ಲಿ ನಡೆದ ಗೋವಿಗಾಗಿ ನಾವು ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರ ಸಮ್ಮುಖದಲ್ಲಿ ಗೋವನಿತಾಶ್ರಯದಲ್ಲಿರುವ ಗೋಶಾಲೆಗೆ ಹಸ್ತಾಂತರಿಸಲಾಯಿತು. ಕೊಣಾಜೆ ಗ್ರಾಮದ ಎರಡು ವಾರ್ಡ್ಗಳಲ್ಲಿ ಕಳೆದ ಆರು ತಿಂಗಳಿನಿಂದ ಸುಮಾರು ನಾಲ್ಕು ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯನ್ನು ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳೊಂದಿಗೆ ರೆಡ್ಕ್ರಾಸ್, ರೋವರ್ಸ್ ರೇಂಜರ್ಸ್ ಮತ್ತು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ ಸಂಪಿಗೆದಡಿ ಹರೇಕಳ ಮತ್ತು ಮುಂಬೈಯ ಉದ್ಯಮಿ ದೇವರಾಜ್ ರೈ ಹರೇಕಳ ಅವರ ಆರ್ಥಿಕ ಪ್ರೋತ್ಸಾಹದೊಂದಿಗೆ ಯಶಸ್ವಿಯಾಗಿ ನಡೆಸಿದ್ದರು. ಭತ್ತದ ತೆನೆಯನ್ನು ಬೇರ್ಪಡಿಸಿದ ಬಳಿಕ ಉಳಿದ ಬೈಹುಲ್ಲನ್ನು ದೇವರಾಜ ರೈ…
UN NETWORKS ಮುಡಿಪು: ದೇಶದ ಸಂವಿಧಾನದ ಕುರಿತು ತಿಳುವಳಿಕೆ ಮತ್ತು ಅದರ ಸಮರ್ಪಕವಾದ ಆಚರಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಂಗಳೂರಿನ ಎ.ಸಿ.ಬಿ ಯ ಡಿ.ವೈ.ಎಸ್ .ಪಿ ಸುಧೀರ್ ಹೆಗಡೆ ಅಭಿಪ್ರಾಯಪಟ್ಟರು . ಅವರು ಮುಡಿಪಿನ ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ದೇಶದ ಪ್ರತಿಯೊಂದು ವಿಭಾಗದಲ್ಲೂ ಪ್ರತಿಯೊಂದು ಹಂತದಲ್ಲೂ ಸಂವಿಧಾನವಿದೆ ಆದರೆ ಅದಕ್ಕೆ ನಾವು ಎಷ್ಟು ಗೌರವ ಕೊಡಬೇಕೊ ಅಷ್ಟನ್ನು ನೀಡುತ್ತಿಲ್ಲ ,ಹೀಗಾಗದೇ ದೇಶದ ಕುರಿತು ಪ್ರೀತಿ, ಭಕ್ತಿ, ಬೆಳೆಯಬೇಕು ಎಂದರು.ಅಲ್ಲದೇ ಗಣರಾಜ್ಯೋತ್ಸವ ಆಚರಣೆಯ ಇತಿಹಾಸವನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ಮಂಜುನಾಥ ರೇವಣ್ಕರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶದ ಇತಿಹಾಸದ ಕುರಿತು ಗೌರವ ಹೆಚ್ಚಾಗಬೇಕು ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕರಾದ ಲಕ್ಷ್ಮೀಶ್ ಹೆಗಡೆ ಸೋಂದಾ, ಪ್ರಾಚಾರ್ಯರಾದ ಪ್ರಸನ್ನ ಕುಮಾರ್,ಮುಖ್ಯ ಶಿಕ್ಷಕಿ ವಿಮಲಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ರಶ್ಮಿ ಸ್ವಾಗತಿಸಿದರು,ಉಪನ್ಯಾಸಕಿ ಸೀಮಾ ವಂದಿಸಿದರು,ದಿವ್ಯಶ್ರೀ ನಿರ್ವಹಿಸಿದರು.ನಂತರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
UN NETWORKS ಕೊಣಾಜೆ: ಯಕ್ಷಗಾನ ಕಲೆಯು ಕರಾವಳಿಯ ಜನರಲ್ಲಿ ಆಳವಾಗಿ ನೆಲೆವೂರಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪೌರಣಿಕ ಕಲೆಗಳು ವಿನಾಶದತ್ತ ಮುಖಮಾಡಿ ನಿಂತಿದ್ದರೂ ಕರಾವಳಿಯಲ್ಲಿ ಯಕ್ಷಗಾನವು ಇಂದಿಗೂ ಸಮೃದ್ಧವಾಗಿದೆ. ಕರಾವಳಿ ಜನತೆಯ ಕಲಾಪ್ರೀತಿಯೇ ಇದಕ್ಕೆ ಕಾರಣವೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು. ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷ ವರ್ಣ ವಿನ್ಯಾಸ’ ಒಂದು ದಿನದ ಬಣ್ಣಗಾರಿಕೆ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ನಾಟಕ ಮತ್ತು ಸಿನಿಮಾ ರಂಗಗಳಲ್ಲಿನ ಪ್ರಸಾದನಾ ವಿಧಾನಕ್ಕಿಂತ ಭಿನ್ನವಾಗಿ ಕಲಾವಿದನೇ ಬಣ್ಣಗಾರಿಕೆಯನ್ನು ಮಾಡುವ ವಿಶಿಷ್ಟತೆಯು ಯಕ್ಷಗಾನದಲ್ಲಿದೆ. ಬಣ್ಣಗಾರಿಕೆ ಕೇವಲ ಕಲಾತ್ಮಕ ಮಾತ್ರವಲ್ಲದೆ ಅದು ಪಾತ್ರದ ವ್ಯಕ್ತಿತ್ವವನ್ನು ಅಭಿವ್ಯಕ್ತಿಸುವುದು ಹಾಗೂ ಸಾಂಕೇತಿಕ ಧ್ವನಿಯನ್ನು ಹೊಂದಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡೆ ಮತ್ತು ಸಾಂಸ್ಕೃತಿಕ ರಂಗಗಳಿಗೆ ವಿಶೇಷ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವು ಕ್ರಿಯಾತ್ಮಕವಾಗಿ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. ಯಕ್ಷಗಾನ…
UN NETWORKS ಉಳ್ಳಾಲ: ಉಪ್ಪಳ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮ, ಜಗದ್ಗುರು ಶ್ರೀ ನಿತ್ಯಾನಂದ ಮಹಾಪಪೀಠಮ್ ಇವರಿಂದ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ` ನಕ್ಷತ್ರೇಷ್ಟಿ’ ಯಾಗ ಫೆ.1 ರಿಂದ 4ರ ವರೆಗೆ ಹಾಗೂ 15 ನೇ ವರ್ಷದ ಅಖಂಡ ಭಜನಾ ಸಪ್ತಾಹ ಫೆ.4 ರಿಂದ ಫೆ.11ರವರೆಗೆ ಜರಗಲಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಗುರುವಾರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 2019 ರಲ್ಲಿ ನಡೆಯಲಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗ ನಕ್ಷತ್ರೇಷ್ಟಿ ಯಾಗ ಹಮ್ಮಿಕೊಳ್ಳಲಾಗಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರ ಆಚರ್ಯಾತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಶ್ರೌತ ವಿದ್ವಾಂಸರಾದ ಶ್ರೀ ಕ್ಷೇತ್ರ ಗೋಕರ್ಣದ ವೇದಮೂರ್ತಿ ಗಣೇಶ ವಾಸುದೇವ ಜೋಗಳೇಕರ್ ರವರ ನೇತೃತ್ವದಲ್ಲಿ…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ವಿದ್ಯಾಸಂಸ್ಥೆಗಳಲ್ಲಿ ನಡೆದ ಗಣರಾಜ್ಯೋತ್ಸವ ದಲ್ಲಿ ಸಹಾಯಕ ಧರ್ಮಗುರು ಫಾ. ಸ್ಟ್ಯಾನಿ ಪಿಂಟೋ ಧ್ವಜಾರೋಹಣಗೈದರು.
UN NETWORKS ತೊಕ್ಕೊಟ್ಟು:ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವಾರ್ಷಿಕ ಮಹಾಸಭೆ ಅಳೇಕಲದ ಸುನ್ನೀ ಸೆಂಟರ್ ನಲ್ಲಿ ಶಂಸುದ್ದೀನ್ ರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ಸೆಕ್ಟರ್ ಚುನಾವಣಾದಿಕಾರಿ ಶಮೀರ್ ಸೇವಂತಿಗುಡ್ಡೆ, ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ,ಮೀಡಿಯಾ ಕಾರ್ಯದರ್ಶಿ ಇಸ್ಮಾಯಿಲ್ ಕುತ್ತಾರ್ ಭಾಗವಹಿಸಿದರು. ಶಾಖಾ ಪ್ರ.ಕಾರ್ಯದರ್ಶಿ ಆರೀಫ್ ಅಳೇಕಲ ವರದಿ ವಾಚಿಸಿ , ಲೆಕ್ಕಪತ್ರ ಮಂಡಿಸಿದರು.2018-19 ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ಅಧ್ಯಕ್ಷರಾಗಿ ಆರೀಫ್ ಅಳೇಕಲ,ಉಪಾದ್ಯಕ್ಷರುಗಳಾಗಿ ಅನ್ಸಾರ್ ಅಳೇಕಲ,ಸಾದಿಕ್ ಪಾಂಡೇಲ್,ಪ್ರ.ಕಾರ್ಯದರ್ಶಿಯಾಗಿ ಜವಾದ್ ಅಳೇಕಲ,ಕಾರ್ಯದರ್ಶಿಗಳಾಗಿ ಆಶಿಕ್, ಶಾಕಿರ್,ಕೋಶಾಧಿಕಾರಿಯಾಗಿ ಬಶೀರ್,ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ನಾಫಿಹ್,ರೀಡ್ ಪ್ಲಸ್ & ಇಶಾರ ಕನ್ವೀನರಾಗಿ ತಾಝಿಲ್,ಎಸ್.ಬಿ.ಎಸ್ ಕನ್ವೀನರಾಗಿ ಶಫೀಕ್ ಯು.ಎಸ್,ಹೈಸ್ಕೂಲ್ ಕನ್ವೀನರಾಗಿ ನಿಯಾಝ್.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫೈಝಲ್ ಸಿ.ಎಂ, ಶಂಸುದ್ದೀನ್, ಯಾಕೂಬ್, ಜಂಶೀರ್, ಇಕ್ಬಾಲ್, ಜಾವಿದ್, ಝಾಹಿರ್ ತಂಙಲ್, ಮುಹಮ್ಮದ್ ಫಾಝಿಲ್, ಅರ್ಮಾನ್ ಮುಹಮ್ಮದ್ ಆಯ್ಕೆಗೊಂಡರು. ಆರೀಫ್ ಸ್ವಾಗತಿಸಿ, ಜವಾದ್ ವಂದಿಸಿದರು.
UN NETWORKS ದೇರಳಕಟ್ಟೆ : ಕಣಚೂರು ಸಮೂಹ ವಿದ್ಯಾಸಂಸ್ಥೆಯಲ್ಲಿ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಕಣಚೂರು ಸಂಸ್ಥೆಯ ಮುಖ್ಯಸ್ಥರಾದ ಯು.ಕೆ ಮೋನು ರವರು ಧ್ವಜಾರೋಹಣ ಗೈದರು. ಕಣಚೂರು ಇನ್ಸ್ಟ್ಯೂಟ್ ಆಫ್ ಮ್ಯಾನೆಜ್ಮೆಂಟ್ ಆಂಡ್ ಸಾಯನ್ಸ್ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ ಸ್ವಾಗತಿಸಿದರು. ಕುಮಾರ ಅನಿಕೇತ್ 8ನೇ ತರಗತಿ ವಿದ್ಯಾರ್ಥಿ ಇವರು ಗಣತಂತ್ರ ದಿನದ ಮಹತ್ವವನ್ನು ವಿವರಿಸಿದರು. ಕಣಚೂರು ಮೆಡಿಕಲ್ ಕಾಲೇಜಿನ (ಕಮ್ಯುನಿಟಿ ಮೆಡಿಸನ್ ವಿಭಾಗದವರು) ಏರ್ಪಡಿಸಿದ ರಸ್ತೆ ಸುರಕ್ಷತೆಯ ಸಪ್ತಾಹ ಜನವರಿ 2018ರಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಣಚೂರು ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ದುಲ್ ರಹಿಮಾನ್, ಕಣಚೂರು ಮೆಡಿಕಲ್ ಕಾಲೇಜಿನ ವೈಸ್ ಡೀನ್ ಡಾ. ಶ್ರೀಷಾ ಕಂಡಿಗೆ, ಆಡಳಿತ ಅಧಿಕಾರಿ ಡಾ. ರೊಹನ್ ಮೊನಿಸ್, ಪ್ರಾಂಶುಪಾಲರುಗಳಾದ ವಿನಿಟಾ ಗಾಮ ರೋಸ್ ಮಥಾಯಸ್, ಆನಂದಿ ಕೆ, ಹೇಮಲತಾ ಮತ್ತು ಪೂರ್ವಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಲಿನೆಟ್ ಡಿ’ಸೋಜರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯಾದ ಕುಮಾರಿ ಸಕೀನಾ ಕಾನುಮ್ ಕಾರ್ಯಕ್ರಮ ನಿರೂಪಿಸಿದರು.…
UN NETWORKS ಮುಡಿಪು: ಸಂವಿಧಾನದ ಬಗ್ಗೆ ನಿರಂತರವಾಗಿ ಅವಹೇಳನ ಮಾಡುತ್ತಾ ದಲಿತರನ್ನು ಬೀದಿ ನಾಯಿಗೆ ಹೋಲಿಸಿ ಅವಮಾನಗೈದ ಬಿ.ಜೆ.ಪಿ.ಯ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆಯ ಹೇಳಿಕೆಯನ್ನು ಖಂಡಿಸಿ ನಿನ್ನೆ ಮುಡಿಪು ಜಂಕ್ಷನ್ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ಮುಡಿಪು ಹೋಬಳಿ ಸಮಿತಿಯ ಆಶ್ರಯದಲ್ಲಿ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಕಾರ್ಯಕರ್ತರು ಕೇಂದ್ರಸಚಿವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿಯಿಂದ ದಹನ ಮಾಡಿದರು.

