Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರನ್ನು ಈಜುಗಾರರ ಸಂಘದ ಸದಸ್ಯರು ರಕ್ಷಿಸಿದ ಘಟನೆ ಉಳ್ಳಾಲದ ಮೊಗವೀರಪಟ್ನದಲ್ಲಿ ಇಂದು ಮದ್ಯಾಹ್ನ ವೇಳೆ ಸಂಭವಿಸಿದೆ. ಬೆಂಗಳೂರು ಮೂಲದ ಅಬ್ದುಲ್ ರಹಿಮಾನ್ ಎಂಬವರು ಕುಟುಂಬ ಸಮೇತ ಉಳ್ಳಾಲದ ದರ್ಗಾ ಸಂದರ್ಶನಕ್ಕೆಂದು ನಸುಕಿನ ಜಾವ ಬಂದಿದ್ದರು. ಬಳಿಕ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಕುಟುಂಬ ಸ್ನಾನಗೈಯ್ಯುವ ವೇಳೆ ಬೃಹತ್ ಗಾತ್ರದ ಅಲೆಗೆ ರಹಿಮಾನ್ ಸೇರಿದಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯ ಮೊಗವೀರರ ತಂಡ ಕೂಡಲೇ ಸಮುದ್ರಕ್ಕೆ ಧುಮುಕಿ ನಾಲ್ವರನ್ನು ರಕ್ಷಿಸಿದ್ದಾರೆ. ಇದೀಗ ನಾಲ್ವರು ಉಳ್ಳಾಲದ ಸರೋಜ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಬ್ದುಲ್ ರಹಿಮಾನ್ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಅಣ್ಣೆರೆಪಾಲು ಕೊಣಾಜೆ ಇದರ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ 5ನೇ ವರ್ಷದ  ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಶ್ರೀ ಸೀತಾರಾಮ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾ.ಜ.ಪಾ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಸನತ್ ರೈ ಕಕ್ಕೆಮಜಲು, ಸಮಿತಿಯ ಮಾರ್ಗದರ್ಶಕರೂ ಶ್ರೀ ರಾಮಕೃಷ್ಣ ಪ್ರೌಡಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರ ರೈ ಹರೇಕಳ, ಶ್ರೀ ದುರ್ಗಾ ಪ್ರಿಂಟರ್ಸ್ ಗುರುಮೇರು ಇದರ ಮಾಲಕರಾದ ಶ್ರೀಮತಿ ತುಳಸಿ ಗುರುಮೇರು ಮುಖ್ಯ ಅತಿಥಿಗಳಾಗಿದ್ದರು. ಶ್ರೀ ದುರ್ಗಾ ಪರಮೇಶ್ವರೀ ಸೇವಾ ಸಮಿತಿಯ ಅಧ್ಯಕ್ಷರಾದ ಚಂದಯ್ಯ ಗೌಡ ಅಣ್ಣೆರೆಪಾಲು, ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಮಾಂಜನೇಯ ವ್ಯಾಯಾಮ ಶಾಲೆ ಗುಡ್ಡುಪಾಲು ಇದರ ಅಧ್ಯಕ್ಷರಾದ ಆನಂದ ಗೌಡ ಅಣ್ಣೆರೆಪಾಲು, ಕೊಣಾಜೆ ಪಂಚಾಯತ್ ಸದಸ್ಯರಾದ ಗೋವಿಂದ ಗೌಡ, ಸಮಿತಿಯ ಸದಸ್ಯರಾದ ನರ್ಸು ಗೌಡ, ಯಶವಂತ ಗುರುಮೇರು, ಪರಮೇಶ್ವರ ಗೌಡ, ಪ್ರಶಾಂತ್ ಗುರುಮೇರು, ಶೇಖರ್ ಕೊಪ್ಪಳ ಉಪಸ್ಥಿತರಿದ್ದರು. ಭವ್ಯಾ ಪುರುಷಕೋಡಿ ಸ್ವಾಗತಿಸಿ ನವೀನ್ ಕೊಪ್ಪಳ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬ್ಲಮೊಗರು:  ಅಂಬ್ಲಮೊಗರು ಗ್ರಾಮ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಇಂದಿಗೂ ಮನೆ, ನಿವೇಶನವಿಲ್ಲದ ಬಡ ಕುಟುಂಬ ಸಾಕಷ್ಟು ಇವೆ, ಬಡವರಿಗೆ ನಿವೇಶನ ಒದಗಿಸುವುದು ಗ್ರಾಮ ಪಂಚಾಯಿತಿ ಕರ್ತವ್ಯ. ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ನಿವೇಶನರಹಿತರ ಪಟ್ಟಿ ನೀಡಬೇಕಿದ್ದು, ಸರ್ಕಾರವೇ ಖಾಸಗಿ ಜಮೀನು ಖರೀದಿಸಿ ವಿತರಿಸುತ್ತದೆ, ಆದರೆ ಅಂಬ್ಲಮೊಗರು ಗ್ರಾಮದಿಂದ ಜಿಲ್ಲಾಧಿಕಾರಿಗೆ ಪಟ್ಟಿಯೇ ಹೋಗಿಲ್ಲ ಎಂದರು. ರೈತ ಸಂಘ ಗ್ರಾಮ ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಮದಕ ಮಾತನಾಡಿ, ಅಂಬ್ಲಮೊಗರುವಿನಲ್ಲಿ ಐದು ಎಕರೆ ಸರ್ಕಾರಿ ಜಮೀನು ಇದ್ದರೂ ನಿವೇಶನರಹಿತರಿಗೆ ನೀಡಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಏಳು ತಿಂಗಳಿಂದ ಮುಗಿದಿಲ್ಲ, ಎಲ್ಲೋ ಒಂದು ಮೂಲೆಯಲ್ಲಿ ಘಟಕ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ, ಪಿಡಿಓ ಮಧ್ಯೆ ಇರುವ ವೈಮನಸ್ಸಿನಿಂದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು; ಮುಡಿಪು ಮೂಳೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಮೂಳೂರು ನಾಗರಿಕ ಹೋರಾಟ ಸಮಿತಿ ಮುಡಿಪು ಚೆಕ್ ಪೋಸ್ಟ್ ಸಮೀಪ ರಸ್ತೆ ತಡೆ ನಡೆಸಿ , ವಾಹನಗಳು ತೆರಳದಂತೆ ಪ್ರತಿಭಟನೆ ನಡೆಸಿತು. ರಸ್ತೆಗಡ್ಡವಾಗಿ ಕಲ್ಲು, ಹಳೆ ಮನೆ ಸಾಮಗ್ರಿಗಳನ್ನು ಇರಿಸಿದ ಪ್ರತಿಭಟನಕಾರರು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೂ ವಾಹನಗಳು ತೆರಳದಂತೆ ತಡೆಯೊಡ್ಡಿದರು. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಇದರಿಂದ ಮಂಚಿ, ಇರಾ, ಮೂಳೂರು ಭಾಗಕ್ಕೆ ತೆರಳುವ ಪ್ರಯಾಣಿಕರು, ರಸ್ತೆಯಲ್ಲೇ ಉಳಿದು ಪರದಾಡುವಂತಾಯಿತು. ಸುಮಾರು 9ರ ಹೊತ್ತಿಗೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಭೇಟಿ ನೀಡಿ ಪ್ರತಿಭಟನಾಕಾರರ ಕೈಜೋಡಿಸಿದರು. ಹಿಂದೆ ಜಿಲ್ಲಾ ಪಂಚಾಯಿತಿ ಅಧೀನದಲ್ಲಿದ್ದರೂ ಸದ್ಯ ಕೆಐಎಡಿಬಿ ಇಲಾಖೆ ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಅವರ ಬೇಜವಾಬ್ದಾರಿಯಿಂದ ಕಾಮಗಾರಿ ನಡೆದಿಲ್ಲ. ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕಿದೆ. ಅಲ್ಲದೆ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದು, ಮತ್ತೆ ರಸ್ತೆ ತಡೆ ಮುಂದುವರಿಯಿತು. 50 ವರ್ಷಗಳ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ:ಗಾಳದ ಕೊಂಕಣಿ ಅಭ್ಯುದಯ ಸಂಘದ 62 ನೇ ವಾರ್ಷಿಕ ಮಹಾಸಭೆ,ಉಚಿತ ಪುಸ್ತಕ ವಿತರಣೆ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುತ್ತಾರು ಶ್ರೀ ದುರ್ಗಾವಾಹಿನಿ ಮಹಿಳಾ ಮಂಡಳಿ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶ್ಥೀ ಕ್ಷೇತ್ರ ಸೋಮನಾಥ ಉಳಿಯದ ವಠಾರದಲ್ಲಿ  ಸಮುದಾಯ ಭವನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಎಲ್ಲರ ಸಹಕಾರ ಯಾಚಿಸಿದರು. ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್ ರವರು ಮಾತನಾಡಿ ಮಕ್ಕಳಿಗೆ ಎಳವೆಯಲ್ಲೆ ಶಿಸ್ತು,ಸಂಸ್ಕಾರ ನೀಡುವ ಕಾರ್ಯಾ ಆಗಬೇಕು,ಶಿಕ್ಷಣಕ್ಕಾಗಿ ಸಂಘ ನೀಡುವ ಪ್ರೋತ್ಸಾಹ ಹಾಗೂ ಸಮುದಾಯದ ಏಳಿಗೆಗೆ ಕೈಗೊಂಡ ಚಟುವಟಿಕೆಯನ್ನು ಶ್ಲಾಘಿಸಿದರು..ಶ್ರೀ ಸೋಮೇಶ್ವರಿ ಸೌ.ಸ.ಸಂಘದ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ,ಮುಂಬೈ ಸಜ್ಜನ್ ಸೇವಾ ಸಂಘದ ಮಾಜಿ ಅಧ್ಯಕ್ಷ ದೇವದಾಸ ನಾಯ್ಕ್,ಮಾಜಿ ಅಧ್ಯಕ್ಷರುಗಳಾದ ಅರುಣ್ ಕುಮಾರ್ ಕಾಫಿಕಾಡ್,ಯು.ದಯಾನಂದ ನಾಯ್ಕ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಂಜನ್ ಎಂ.ನಾಯ್ಕ್ ,ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎ.ಮಹಮ್ಮದ್ ಬಶೀರ್ ಕಿನ್ಯ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ ಪೆರ್ಮನ್ನೂರು ಆಯ್ಕೆಯಾದರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಬಂಟ್ವಾಳ ತಾಲೂಕಿನ ಸಹಕಾರ ಅಬಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಕೆ. ಚುನವಾಣಾ ಪ್ರಕ್ರಿಯೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷ ಕೆ. ಕೃಷ್ಣಪ್ಪ ಸಾಲ್ಯಾನ್ ಕುತ್ತಾರ್ , ನಿರ್ಗಮಿತ ಉಪಾಧ್ಯಕ್ಷ ಮೊೈದಿನ್ ಕುಂಞ ಮರಾಠಿಮೂಲೆ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವೇಣುಗೋಪಾಲ್, ನಿರ್ದೇಶಕರಾದ ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ಯು. ಅರುಣ್ ಕುಮಾರ್ ಉಳ್ಳಾಲ್, ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು, ನಾರಾಯಣ ತಲಪಾಡಿ, ರಾಜೀವಿ ಪಿಲಾರ್. ದಕ್ಷಿಣ ಕನ್ನಡ ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್‍ನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ, ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿರಾಜ್…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ತಲಪಾಡಿ: ಕಾರು ಚಾಲಕನಿಗೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ಕರ್ನಾಟಕ-ಕೇರಳ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್‍ಬೂತ್‍ನಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿ ಇಬ್ಬರು ಟೋಲ್ ಸಿಬ್ಬಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತಲಪಾಡಿ ನಾರ್ಲಪಡೀಲು ನಿವಾಸಿ ಅನ್ಸಾರ್ ( 28) ಹಲ್ಲೆಗೊಳಗಾದವರು. ಹಲ್ಲೆಗೆ ಸಂಬಂಧಿಸಿ ತಲಪಾಡಿ ಟೋಲ್ ಸಿಬ್ಬಂದಿಗಳಾದ ದೀಕ್ಷಿತ್ (28) ಮತ್ತು ಕೌಶಿಕ್ (21) ಎಂಬವರನ್ನು ಕೊಲೆಯತ್ನ ಪ್ರಕರಣ ದಾಖಲಿಸಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಮಂಗಳೂರಿನಿಂದ ಝೈಲೋ ವಾಹನದಲ್ಲಿ ತಲಪಾಡಿ ಕಡೆಗೆ ಅನ್ಸಾರ್ ಹಾಗೂ ನಾಲ್ವರ ತಂಡ ಬಂದಿತ್ತು. ಟೋಲ್‍ಬೂತ್‍ನಲ್ಲಿ ಸುಂಕ ಕೇಳಿದಾಗ ಕಾರಿನಲ್ಲಿದ್ದವರು ತಾವು ಸ್ಥಳೀಯರೆಂದು ತಿಳಿಸಿದ್ದರು. ಆದರೆ ಕಾರು ಮಹಾರಾಷ್ಟ್ರ ನೋಂದಾಯಿಸಿಕೊಂಡಿದ್ದ ವಾಹನವಾಗಿದ್ದರಿಂದಾಗಿ ಟೋಲ್ ಸಿಬ್ಬಂದಿ ಗುರುತಿನ ಚೀಟಿ ಅಥವಾ ವಾಹನದ ದಾಖಲೆ ಪತ್ರಗಳನ್ನು ನೀಡುವಂತೆ ತಿಳಿಸಿದ್ದರು. ಆದರೆ ಕಾರಿನಲ್ಲಿದ್ದವರು ದಾಖಲೆ ಪತ್ರಗಳನ್ನು ನೀಡದೆ ವಾಗ್ವಾದಕ್ಕೆ ಇಳಿದಿದ್ದರು. ಆ ಬಳಿಕ ಟೋಲ್ ಸಿಬ್ಬಂದಿ ಹಾಗೂ ಕಾರಿನಲ್ಲಿದ್ದವರ ನಡುವೆ ಮಾತಿನ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪಾವೂರು: ಪಾವೂರು ಗ್ರಾಮದ ಇನೋಳಿ ಜಾಮಿಯಾ ಮುಬಾರಕ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು ಪದಾಧಿಕಾರಿಗಳ ಆಯ್ಕೆ ಹಾಗೂ ಎಸ್‍ಬಿವಿ ಮದರಸ ವಿದ್ಯಾರ್ಥಿ ಸಂಘದ ಆಯ್ಕೆ ಸರ್ವಾನುಮತದಿಂದ ನಡೆಯಿತು. ಅಧ್ಯಕ್ಷರಾಗಿ ಐ.ಹುಸೈನ್ ಕಡವು, ಗೌರವಾಧ್ಯಕ್ಷ-ಅಬ್ದುಲ್ ಖಾದರ್ ಕೆಳಗಿನಕೆರೆ, ಉಪಾಧ್ಯಕ್ಷ-ಚಕ್ಕರ್ ಮಹಮ್ಮದ್ ಇನೋಳಿ, ಪ್ರಧಾನ ಕಾರ್ಯದರ್ಶಿ-ಶಬೀರ್ ಎ’ಸೈಟ್, ಕಾರ್ಯದರ್ಶಿ-ಅನ್ಸಾರ್ ಮುಕ್ರಿ, ಕೋಶಾಧಿಕಾರಿ-ಅಹ್ಮದ್ ಪೊರ್ಸೋಟ, ಲೆಕ್ಕ ಪರಿಶೋಧಕ-ಟಿ.ಎಚ್.ಅಬ್ಬಾಸ್, ಕಾರ್ಯಕಾರಿ ಸಮಿತಿಗೆ ಮಹಮ್ಮದ್ ಗಂಡಿ, ಹುಸೈನ್ ಬಾವು, ಅಕ್ರಂ ಬಿ’ಸೈಟ್, ಟಿ.ಎಚ್.ನಝೀರ್, ಇಕ್ಬಾಲ್ ಕಕ್ಕೆಬೊಟ್ಟು, ಮಹಮ್ಮದ್ ವರಂತೋಟ, ಹೈದರ್ ಸಖಾಫಿ, ಸಮದ್ ಮುಕ್ರಿ, ಇಬ್ರಾಹಿಂ ನಡುಗುಡ್ಡೆ, ಸಲೀಂ ಅಹ್ಸನಿ, ಅಶ್ರಫ್ ಎಂ.ಎ. ಮುಟ್ಟಿಂಜ ಹಾಗೂ ಲತೀಫ್ ನಂದಾವರ ಆಯ್ಕೆಯಾದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಉಳ್ಳಾಲ ಭಾಗದಲ್ಲಿ ಮಳೆಗಾಲ ಆರಂಭಗೊಂಡಾಗ ವಿದ್ಯುತ್ ಸಮಸ್ಯೆ ಗಂಭೀರವಾಗಿ ಸಾರ್ವಜನಿಕರು ಮೆಸ್ಕಾಂ ಛೀಮಾರಿ ಹಾಕುತ್ತಿದ್ದರು, ಆದರೆ ದಯಾನಂದ ಅವರ ಆಗಮನದ ಬಳಿಕ ಸಮಸ್ಯೆಗಳು ಪರಿಹಾರಗೊಂಡಿರುವುದು ಸಂತಸದ ವಿಚಾರ ಎಂದು ಮೆಲಗಂಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್ ಹೇಳಿದರು. ಉಳ್ಳಾಲ ಜನಹಿತ ಪೌರ ಸಮಿತಿ ಆಶ್ರಯದಲ್ಲಿ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಉಳ್ಳಾಲ ಉಪವಿಭಾಗದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಬಿ.ದಯಾನಂದ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಹಿಂದೆಲ್ಲಾ ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಜೊತೆ ಸಿಬ್ಬಂದಿಯಿಂದ ಅನುಚಿತ ವರ್ತನೆಗಳೂ ನಡೆಯುತ್ತಿದ್ದು ಜನರು ಮೆಸ್ಕಾಂ ಸೇವೆಯಿಂದ ಬೇಸತ್ತಿದ್ದರು. ದಯಾನಂದ ಆಗಮನದ ಬಳಿಕ ಉಳ್ಳಾಲ ನಗರಸಭೆಯಿಂದ ಯಾರೂ ವಹಿಸದ ದಾರಿದೀಪ ಸ್ವತಃ ಮೆಸ್ಕಾಂನಿಂದಲೇ ನಿರ್ವಹಿಸುವ ಮೂಲಕ ಉಳ್ಳಾಲದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಯಾವುದೇ ಸಮಯದಲ್ಲೂ ವಿದ್ಯುತ್ ಸಮಸ್ಯೆ ಎದುರಾದಾಗ ತಕ್ಷಣವೇ ಸಿಬ್ಬಂದಿ ಕಾರ್ಯನಿರ್ವಹಿಸುವುದು ನೆಮ್ಮದಿ ತಂದಿದೆ ಎಂದರು. ಅಭಿನಂದನೆ ಸ್ವೀಕರಿಸಿದ ಬಿ.ದಯಾನಂದ ಮಾತನಾಡಿ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಂಬಯಿ: ರಾಷ್ಟ್ರದ ಮಾಧ್ಯಮ ಲೋಕದ ಹೆಸರಾಂತ ಸಂಸ್ಥೆ ಮಿಡ್‍ಡೇ ಸಮೂಹವು ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ `ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ’ಪ್ರದಾನಿಸಿ ಗೌರವಿಸಿತು. ಕಳೆದ ಮಂಗಳವಾರ ಅಂಧೇರಿ ಪೂರ್ವದ ಸಹಾರ ಇಲ್ಲಿನ ಹೈಯತ್ತ್ ರೀಜೆನ್ಸಿ ಪಂಚತಾರಾ ಹೊಟೇಲ್‍ನ ಸಭಾಗೃಹದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ, ಬಿಜೆಪಿ ಮಹಾರಾಷ್ಟ್ರ ಪ್ರದೇಶ ಸಮಿತಿಯ ಖಜಾಂಚಿ, ಮುಂಬಯಿಯ ವಕ್ತಾರೆ, ಫ್ಯಾಶನ್ ಡಿಸಾಯ್ನಾರ್ ಶೈನಾ ಎನ್.ಸಿ ಅವರು ಈ ಪುರಸ್ಕಾರವನ್ನು ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರದಾನಿಸಿ ಗೌರವಿಸಿದರು. ಶಿಕ್ಷಣ ರಂಗದ ಅಪರಿಮಿತ ಸೇವಾ ಕೊಡುಗೆಗಾಗಿ ಮಿಡ್‍ಡೇ ಸಮೂಹವು ಶೈಕ್ಷಣಿಕ ಜೀವಮಾನ ಸಾಧಕ ಪುರಸ್ಕಾರ ಪ್ರದಾನಿಸಿ ಗೌರವಿಸಿತು. ದಣಿಯದ ಪರಿಶ್ರಮ ಮತ್ತು ಗಮನಾರ್ಹ ಸೇವಾ ಕೊಡುಗೆಗಾಗಿ ಕೊಡಮಾಡಲಾಗಿದೆ. ಶಿಕ್ಷಣದ ದೂರದೃಷ್ಠಿತ್ವವುಳ್ಳ ಇವರ ಕಾಲ್ಪನಿಕತ್ವ…

Read More