Author: UllalaVani

Kannada News From Coastal Karnataka

UN NETWORKS ಮಂಜೇಶ್ವರ: ಮಂಜೇಶ್ವರದ ಮಳ್ಹರ್ ಇನ್ಸ್ ಟ್ಯೂಟ್ ಆಫ್ ಇಸ್ಲಾಮಿಕ್ ಇದರ ಹಳೆ ವಿದ್ಯಾರ್ಥಿ ಸಂಘಟನೆಯಾದ ಸ್ಮಾರ್ಟ್ ವತಿಯಿಂದ ಮಳ್ ಹರ್ ಕ್ಯಾಂಪಸ್ ನಲ್ಲಿ ರಿಪಬ್ಲಿಕ್ ಡೇ ಆಚರಿಸಲಾಯಿತು.ಮಳ್ಹರ್ ಮಾನೇಜರ್ ಹಸನ್ ಮಳ್ ಹರ್ ಧ್ವಜಾರೋಹಣ ಗೈದರು. ಸಯ್ಯಿದ್ ಮುಸ್ತಫ ಸಿದ್ದೀಖಿ ಅಲ್ ಬುಖಾರಿ ಮಂಬುರಂ ದುಆ ಗೈದರು.ನಂತರ ಮಳ್ ಹರ್ ವಿದ್ಯಾಥಿಗಳ ಕಾರ್ಯಕ್ರಮ ನಡೆಯಿತು. ಸುಹೈಲ್ ಕನ್ಯಾನ ಸ್ವಾಗತ ಹಾಗೂ ಸಿನಾನ್ ಬೊಳ್ಮಾರ್ ದನ್ಯವಾದ ಗೈದರು.

Read More

UN NETWORKS ಉಳ್ಳಾಲ : ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮತ್ತು ಪ್ರತಿ ವಿಷಯದಲ್ಲಿಯು ಕನಿಷ್ಠ ಅಂಕವನ್ನುಗಳಿಸುವ ತಾಂತ್ರಿಕತೆಯನ್ನು ತಿಳಿಸುವ ಗೆಲುವಿಗೊಂದು ಸುಗಮಹಾದಿ ಎಂಬ ಕಾರ್ಯಕ್ರಮವನ್ನು ಉಳ್ಳಾಲದ ಹಳೆಕೋಟೆ ಸಯ್ಯದ್ ಮದನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಇದರ ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಯಿತು. ಉಧ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಶಿಕ್ಷಣ ಸಾಹಿತ್ಯ ಸಮಿತಿ ಅಧ್ಯಕ್ಷರಾದ ಹಾಜಿ ಶಾಹುಲ್ ಹಮೀದ್ ರವರು ಶಿಕ್ಷಣವು ಮಾನವನ ಸರ್ವಾಂಗಿನ ಬೆಳವಣಿಗೆಯ ಪೂರಕ ಅಂಶವಾಗಿದೆ ಯಾವುದೇ ಸಂಧರ್ಭದಲ್ಲಿ ನಾವು ಪಡೆದ ಶಿಕ್ಷಣವೇ ನಮಗೆ ರಕ್ಷಣೆ ಮತ್ತು ಕೀರ್ತಿಯನ್ನು ತಂದುಕೊಡುತ್ತದೆ .ಅಲ್ಲದೆ ನಾವು ಸಂಪಾದಿಸಿದ ಸಂಪತ್ತು ಭೌಧಿಕವಾಗಿ ಇರುತ್ತದೆ ವಿನಹ ಶಾಶ್ವತವಾಗಿ ಅಲ್ಲ . ಆದುದರಿಂದ ಎಸ್.ಎಸ್.ಎಲ್.ಸಿ ಎಂಬುದು ನಮ್ಮ ಜೀವನದ ಪ್ರಾಮುಖ್ಯ ಘಟ್ಟ ಇದರಲ್ಲಿ ನಾವೇಲ್ಲರು ತೇರ್ಗಡೆಯಾಗಲೆಬೇಕೆಂದರು. ದಕ್ಷಿಣ ಕನ್ನಡ…

Read More

UN NETWORKS ಉಳ್ಳಾಲ: ಬಬ್ಬುಕಟ್ಟೆ ಪೆರ್ಮನ್ನೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಷ ಸಹ್ವ ಇವರು ಮಂಗಳ ಜ್ಯೋತಿ ವಿದ್ಯಾಸಂಸ್ಥೆ ವಾಮಂಜೂರು ಇಲ್ಲಿ ನಡೆದ 7ನೇ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಕ್ರೀಡಾಕೂಟ-2017-18 ರ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.

Read More

UN NETWORKS ಉಳ್ಳಾಲ: ಉಳ್ಳಾಲ ಬೀಚ್ ಉತ್ಸವ ಉಳ್ಳಾಲದ ಪ್ರತಿಯೊಬ್ಬರ ಉತ್ಸವವೆಂದು ಕೈಜೋಡಿಸಬೇಕಾಗಿದ್ದು, ಸರಕಾರದಿಂದ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಬದ್ಧ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಮೊಗವೀರಪಟ್ನ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೋಮವಾರ ಫೆ.9,10,11 ರಂದು ಉಳ್ಳಾಲದಲ್ಲಿ ನಡೆಯಲಿರುವ ಬೀಚ್ ಉತ್ಸವದ ಪ್ರಯುಕ್ತ ಜರಗಿದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿರೀಕ್ಷೆಗೂ ಮೀರಿ ಜನರು ಬರುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳ ಸಂಪೂರ್ಣ ಸಹಕಾರ ಅಗತ್ಯ. ಅಧಿಕಾರಿಗಳ ಜತೆಗೆ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸಬೇಕಿದೆ. ಸಮುದ್ರ ತೀರದಲ್ಲಿ ಭದ್ರತೆಯನ್ನು ಒದಗಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಕೆಲವೇ ದಿನಗಳಲ್ಲಿ ಅಬ್ಬಕ್ಕ ಉತ್ಸವವೂ ಕ್ಷೇತ್ರದಲ್ಲಿ ನಡೆಯಲಿದ್ದು, ಉಳ್ಳಾಲ ವ್ಯಾಪ್ತಿಯಲ್ಲಿ ಉತ್ಸವಗಳ ಮೂಲಕ ಉಳ್ಳಾಲದ ಹೆಸರು ದೇಶಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಬೇಕಿದ್ದು, ಈ ಮೂಲಕ ಪ್ರವಾಸಿಗರ ತಾಣವಾಗಿ ಬೆಳೆಯಬೇಕಿದೆ ಎಂದ ಸಚಿವರು ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ದೊರಕಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ. ಒಂದು ಹಂತದಲ್ಲಿ ಸ್ಥಳೀಯಾಡಳಿತದಲ್ಲಿ ಅನುದಾನಗಳ ಕೊರತೆ ಎದುರಾದಲ್ಲಿ ಶಾಸಕರ ನಿಧಿಯಿಂದ…

Read More

UN NETWORKS ಮಂಗಳೂರು: ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕ ಪ್ರಯುಕ್ತ ದಫ್ಫು ರಾತೀಬು ಮತ್ತು ರಿಫಾಯಿಯ್ಯಾ ಮಾಲೆ ಆಲಾಪನೆ ಪಕ್ಕಲಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು. ಫಹಾದುದ್ದೀನ್ ಫ್ಥವಿ ಅಸ್ಸಖಾಫ್ ಕಣ್ಣೂರು ಮತ್ತು ಜುನೈದ್ ಪರಪ್ಪನಂಙಡಿ ರಿಫಾಯಿಯ್ಯಾ ಮಾಲೆ ಆಲಾಪನೆ ನೇತೃತ್ವ ವಹಿಸಿದ್ದರು. ರಿಫಾಯಿಯ್ಯ ದಫ್ಫ್ ಕಮಿಟಿ ಪಕ್ಕಲಡ್ಕ ಅಧ್ಯಕ್ಷ ಝೈನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬ್ ವಿ.ಎ ನಝೀರ್ ಅಝ್ ಹರಿ ಬೊಳ್ಮಿನಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಮುಹಮ್ಮದ್ ಅಝ್ ಹರ್ ಫೈಝಿ ದುಅ ನೆರವೇರಿಸಿದರು. ಬುಖಾರಿಯ್ಯಾ ತಂಡ ಮಳ್ ಹರ್ ರವರಿಂದ ಹಸನ್ ಸ ಅದಿ ಮತ್ತು ಮಾಸ್ಟರ್ ಶಮ್ಮಾಝ್ ಬಜಾಲ್ ನೇತೃತ್ವದಲ್ಲಿ ನಹತೇ ಶರೀಫ್ ನಡೆಯಿತು. ಸುಲ್ತಾನುಲ್ ಆರಿಫೀನ್ ಅಹ್ಮದುಲ್ ಖಬೀರುರ್ರಿಫಾಯಿ ರವರ ಹೆಸರಿನಲ್ಲಿ ನಡೆಸುವ ವಾರ್ಷಿಕ ದಫ್ಫು ರಾತೀಬುಗೆ ಮುಸ್ಲಿಂ ಉಸ್ತಾದ್ ಕಾಸರಗೋಡು ಮತ್ತು ಸಿ.ಟಿ.ಎಂ ಸೈಯ್ಯದ್ ಮುಹಮ್ಮದ್ ಸಲೀಂ ಅಸ್ಸಖಾಫ್…

Read More

UN NETWORKS ಉಳ್ಳಾಲ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಧರ್ಮ ರಾಜಕೀಯ ಜಾಗೃತವಾಗುತ್ತದೆ. ಅದರಲ್ಲೂ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಅವರಂತೂ ತನ್ನ ಕ್ಷೇತ್ರವ್ಯಾಪ್ತಿಯಲ್ಲಿ ಭೂತಕೋಲ, ನೇಮ ಸೇರಿದಂತೆ ನಿತ್ಯ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ಕೊಡುತ್ತಿದ್ದಾರೆ. ಆದರೆ ಇದೀಗ ಸಚಿವರ ಈ ದೈವಾರಾಧನೆಯ ಕಾರ್ಯ ಸಾಮಾಜಿಕ ತಾಣಗಳಲ್ಲಿ ವಿವಾದ ಎಬ್ಬಿಸಿದ್ದು, ಮುಸ್ಲಿಂ ಮೂಲಭೂತವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವರು ತನ್ನ ಸ್ವಕ್ಷೇತ್ರವಾದ ಉಳ್ಳಾಲದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ದೈವದ ಕೈಯಿಂದ ಪ್ರಸಾದವನ್ನು ಸ್ವೀಕಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಖಾದರ್ ಅವರು ರಾಜಕೀಯಕ್ಕಾಗಿ ಇಸ್ಲಾಂ ಧರ್ಮದ ಕಟ್ಟುಪಾಡುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೈವದ ಕೈಯಿಂದ ಪ್ರಸಾದ! ಖಾದರ್ ವಿಡಿಯೋ ವೈರಲ್ ಕಳೆದ ಶನಿವಾರ ತಮ್ಮ ಸ್ವಕ್ಷೇತ್ರವಾದ ಉಳ್ಳಾಲದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಯು.ಟಿ ಖಾದರ್ ಭಾಗವಹಿಸಿದ್ದರು. ಅದೇ ಸಂದಭ9ದಲ್ಲಿ ಕೊರಗಜ್ಜ ದೈವದ ಕೈಯಿಂದ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಈ ವಿಡಿಯೋ ಹಾಗೂ ಪೋಟೋವನ್ನು ತೆಗೆಯಲಾಗಿದ್ದು,…

Read More

UN NETWORKS ಕಿನ್ಯಾ: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಮೀಂಪ್ರೀಯ 1ನೇ ಮತ್ತಿ 2ನೇ ಅಡ್ಡ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕಿನ್ಯಾ ಗ್ರಾಮ ಪಂಚಾತ್ ವ್ಯಾಪ್ತಿಯಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಅವರ ಅನುದಾನದಿಂದ ಬಹಳಷ್ಟು ಕಾಮಗಾರಿಗಳು ಆಗಿದ್ದು,ಕಿನ್ಯಾ ಗ್ರಾಮವು ಅಭಿವೃದ್ಧಿಯೆಡೆಗೆ ಸಾಗುತ್ತಿದ್ದು ,ಮಂಗಳುರು ಕೇತ್ರದಲ್ಲಿ ಕಿನ್ಯಾ ಗ್ರಾಮ ಪಂಚಾಯತ್ ಒಂದು ಮಾದರಿ ಗ್ರಾಮ ಪಂಚಾಯತ್ತಾಗಿದೆ ಎಂದರು. ತಾಲೂಕು ಪಂಚಾತ್ ಸದಸ್ಯ ಸಿದ್ದೀಕ್ ತಲಪಾಡಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ಕಿನ್ಯಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಹುಸೈನ್ ಕುಂಞ,ಪಂಚಾಯತ್ ಸದಸ್ಯರಾ ಹಮೀದ್ ಕಿನ್ಯಾ,ಆಸಿಯಮ್ಮ, ಆಶಲತಾ, ರುಕ್ಮಿಣಿ, ಮಾಜಿ ಸದಸ್ಯ ಸಿದ್ದೀಕ್ ಕಲ್ಲಾಂಡ, ಸಯ್ಯದ್ ಅಲವಿ ತಂಗಳ್, ಗುತ್ತಿಗೆದಾರ ಅಬೂಬಕರ್,ಶಕೀರ್,ಬಾವುಞ,ಹಮೀದ್ ಟಿಂಬರ್,ಅಬ್ಬಾಸ್ ಮಿಂಪ್ರಿ,ರಫೀಕ್ ಮೀಂಪ್ರಿ, ರಝಾಕ್ ಕುಚ್ಚಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಮಂಗಳೂರು: ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯಿದೆ, ವಾರದ ರಜೆ, ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಗುರುತಿನ ಚೀಟಿ, ಲೈಂಗಿಕ ದೌರ್ಜನ್ಯ , ಜಾತೀಯತೆ ತಡೆಗಟ್ಟುವಿಕೆ, ಬಿಪಿಎಲ್ ಪಡಿತರ ಸಿಗುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಸ್ತ್ರೀ ಜಾಗೃತಿ ಸಮಿತಿ ಮುಖಂಡೆ ಹಾಗೂ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟದ ಸಲಹೆಗಾರರಾದ ಬೆಂಗಳೂರಿನ ಗೀತಾ ಮೆನನ್ ಹೇಳಿದ್ದಾರೆ. ಅವರು ಗೃಹ ಕಾರ್ಮಿಕರ ಒಕ್ಕೂಟದ ವತಿಯಿಂದ ಕುಂಜತ್ತಬೈಲಿನಿಂದ ಕಾವೂರು ಜಂಕ್ಷನ್ನಿನವರೆಗೆ ಜಾಥಾ ಮತ್ತು ಕಾರ್ಮಿಕರ ಮಾನವ ಸರಪಳಿ ಸರಕಾರವನ್ನು ಒತ್ತಾಯಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೃಹಕಾರ್ಮಿಕರು ಜೀತದ ಆಳುಗಳಲ್ಲ, ಯಂತ್ರಗಳು ಅಲ್ಲ. ಎಲ್ಲರಂತೆ ಕಾರ್ಮಿಕರೆಂದು ಸಮಾಜ ಗುರುತಿಸಿ ಗೌರವಿಸಬೇಕಾಗಿದೆ. ಸಣ್ಣ ಮೌಲ್ಯಕ್ಕೆ ಮನೆಕೆಲಸ ನಿರ್ವಹಿಸುವ ಮಹಿಳೆಯರನ್ನು ಅತ್ಯಂತ ತಾತ್ಸಾರ ಭಾವನೆಯಿಂದ ನೋಡಲಾಗುತ್ತಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ ಓ) ಮನೆಕೆಲಸ ಗೌರವದ ಕೆಲಸ ಎಂದು ಘೋಷಿಸಿದೆ. ಗೃಹ ಕಾರ್ಮಿಕರೂ ಇತರ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಮಂಗಳೂರಿನಲ್ಲಿ ಗೃಹ ಕಾರ್ಮಿಕರ…

Read More

UN NETWORKS ಉಳ್ಳಾಲ:`ಕಳೆದ ಚುನಾವಣೆ ಸಂದರ್ಭ ವಿರೋಧಿಗಳು ಸಾಕಷ್ಟು ಅಪಪ್ರಚಾರ ಮಾಡಿದ್ದರೂ ಮತದಾರರು ಸಚಿವ ಸ್ಥಾನದಲ್ಲಿ ಕೂರುವಂತೆ ಮಾಡಿದರು, ಈ ಬಾರಿಯೂ ವಾಟ್ಸಾಪ್‍ನಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ, ಅಂತಹವರು ಧೈರ್ಯವಿದ್ದರೆ ಮುಂದೆ ಬಂದು ಮಾತನಾಡಲಿ’ ಇದು ಆಹಾರ ಸಚಿವ ಯು.ಟಿ.ಖಾದರ್ ಅವರ ಸವಾಲು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಭಾನುವಾರ ತೊಕ್ಕೊಟ್ಟುವಿನಲ್ಲಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಉಸ್ಮಾನ್ ಕಲ್ಲಾಪು ಉಸ್ತುವಾರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ಬಂತೆಂದರೆ ವಿವಿಧ ವೇಷಧಾರಿಗಳನ್ನು ಕಾಣಲು ಸಾಧ್ಯವಾಗುತ್ತದೆ. ಅದೇ ರೀತಿ ಚುನಾವಣೆ ಎಂದರೆ ದಸರಾ ಇದ್ದಂತೆ, ಚುನಾವಣೆ ಸಮೀಪಿಸುತ್ತಲೇ ವಿರೋಧ ಪಕ್ಷದವರು ಮತದಾರರ ಬಳಿ ಬಂದು ಹಸಿ ಸುಳ್ಳುಗಳನ್ನು ಹೇಳಿ ನಂತರ ಐದು ವರ್ಷ ಪತ್ತೆಯಿರುವುದಿಲ್ಲ. ಯಾವುದೇ ಭಾಗದ ಮತದಾರರನ್ನು ಮೂರ್ಖರನ್ನಾಗಿಸಿದರೂ ಉಳ್ಳಾಲದ ಮತದಾರರನ್ನು ಈ ವಿಷಯದಲ್ಲಿ ಏಮಾರಿಸಲು ಆಗದು ಎಂದು ಹೇಳಿದರು. ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್,…

Read More

UN NETWORKS ಕೆ.ಸಿ.ರೋಡು: ಅತ್ಯಂತ ಸಣ್ಣ ಪ್ರದೇಶದಲ್ಲಿ 20 ವರ್ಷಗಳ ಹಿಂದೆ ಆರಂಭಗೊಂಡ ಮಸೀದಿಯಲ್ಲಿ ಹಲವು ಯೋಜನೆಗಳ ಮುಖಾಂತರ ಸ್ಥಳೀಯರ್ನು ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅಲ್-ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ಹೇಳಿದರು. ಭಾನುವಾರ ನಡೆದ ಕೆ.ಸಿ.ರೋಡು ಸಮೀಪದ ಹಿದಾಯತ್‍ನಗರ ಅಲ್ ಹಿದಾಯ ಜುಮಾ ಮಸೀದಿಯ ಮೇಲಂತಸ್ತು ಉದ್ಘಾಟನೆ, ಮೆಹ್‍ಫಿಲೇ ತ್ವೈಬಾ ಹಾಗೂ ಶೈಖ್ ರಿಫಾಯೀ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಸೀದಿ ವತಿಯಿಂದ 13 ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸ ನೀಡಲಾಗುತ್ತಿದ್ದು, ಮದರಸ ಬಿಟ್ಟವರಿಗೆ ವಿಶೇಷ ತರಗತಿ ನೀಡಲಾಗುತ್ತಿದೆ. ಮಂಗಳವಾರ ಮಹಿಳೆಯರಿಗಾಗಿಯೇ ಪ್ರತ್ಯೇಕ ತರಗತಿ ನಡೆಸಲಾಗುತ್ತಿದೆ. ಶುಕ್ರವಾರ ಮೂರು ಶಾಲೆಗಳಿಂದ 500ರಷ್ಟು ವಿದ್ಯಾರ್ಥಿಗಳು ನಮಾಝ್‍ಗೆ ಬರುತ್ತಿದ್ದು ಈ ನಿಟ್ಟಿನಲ್ಲಿ ಮಸೀದಿ ವಿಸ್ತರಿಸುವ ಯೋಜನೆಗೆ ದಾನಿಗಳು ಹಿಂದೇಟು ಹಾಕದೆ ಸಹಕರಿಸಿದ್ದಾರೆ ಎಂದರು. ಕೆ.ಸಿ.ರೋಡ್ ಸಿಟಿಎಮ್ ಸಲೀಂ ಅಸ್ಸಖಾಫ್ ತಂಙಳ್ ದುಆ ಮಾಡಿದರು. ಕಾಸರಗೋಡು ಜಾಮಿಯಾ ಸಅದಿಯಾ ಪ್ರೊಫೆಸರ್ ಅಲ್‍ಹಾಜ್ ಕೆ.ಪಿ.ಹುಸೈನ್ ಸಅದಿ ನೇತೃತ್ವ ವಹಿಸಿದ್ದರು. ಆಹಾರ…

Read More