Author: UllalaVani

Kannada News From Coastal Karnataka

ಉಳ್ಳಾಲ: ಕಳೆದ 20 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಬೈಠಕ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಸೌಖ್ಯಕ್ಕೀಡಾಗಿ ಸಾವನ್ನಪ್ಪಿದ ಜನಸಂಘ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಕ್ರಿಯ ಸದಸ್ಯರಾಗಿದ್ದ ಕುತ್ತಾರುಗುತ್ತು ಸಮೀಪದ ನಿವಾಸಿ ಮಾಧವ ಆಚಾರ್ಯ ಕುಟುಂಬ ಇಂದು ಆರ್ಥಿಕ ಸ್ಥಿತಿ ಹಾಗೂ ಸಹೋದರನ ಆರೋಗ್ಯ ಸ್ಥಿತಿಯಿಂದ ಕಂಗಾಲಾಗಿದ್ದು, ಮಾಜಿ ಶಾಸಕ ಜಯರಾಮ ಶೆಟ್ಟಿ ಸೇರಿದಂತೆ ಕುತ್ತಾರು ಬಿಜೆಪಿ ಮುಖಂಡರು ಮನೆಗೆ ಭೇಟಿ ನೀಡಿ ರೂ.2 ಲಕ್ಷದ ಚೆಕ್ ಅನ್ನು ಸಹಾಯಹಸ್ತವಾಗಿ ವಿತರಿಸಿದ್ದಾರೆ. ಮಾಜಿ ಶಾಸಕ ಜಯರಾಮ ಶೆಟ್ಟಿ ಅವರು ಮಾತನಾಡಿ, ಸಂಘ, ಬಿಜೆಪಿ, ಜನಸಂಘಕ್ಕೆ ಕೆಲಸ ಮಾಡಿದವರು ಮಾಧವ ಆಚಾರ್ಯರು. ತೊಕ್ಕೊಟ್ಟು ಜ್ಯುವೆಲ್ಲರಿಯನ್ನು ನಡೆಸುತ್ತಾ ಕುಟುಂಬದ ಜೀವನಾಧಾರವಾಗಿದ್ದರು. ಆದರೆ 20 ವರ್ಷಗಳ ಹಿಂದಿನ ಅವರ ಸಾವು ಇಡೀ ಕುಟುಂಬಕ್ಕೆ ಜೀವನಾಧಾರವನ್ನೇ ಕಸಿದಿತ್ತು. ಅವರ ಸಾವಿನ ನಂತರ ಇಬ್ಬರು ಸಹೋದರರೂ ಸಾವನ್ನಪ್ಪಿ, ಸಹೋದರಿಗೂ ವಿವಾಹ ನಡೆಸಲು ಅಸಾಧ್ಯವಾಗಿತ್ತು. ಮರದ ಕೆಲಸ ನಿರ್ವಹಿಸುತ್ತಾ ಸಹೋದರ ಲಕ್ಷ್ಮಣ್ ಆಚಾರ್ಯ ಸಹೋದರಿಯರು, ಅವರ ಪುತ್ರಿಯರ ಜವಾಬ್ದಾರಿಯನ್ನು ನಿಭಾಯಿಸುತ್ತಾ…

Read More

ಉಳ್ಳಾಲ, ಜ. 19 : ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್‌ ಶಾಖೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಒಂದು ವರ್ಷ. ಆದರೆ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ ಪೊಲೀಸರ ಸಹಕಾರದಲ್ಲಿ ಕಾರ್ಯಾ ಚರಣೆ ನಡೆಸಿದ್ದ ಮಂಗಳೂರು ಪೊಲೀಸರು ಪ್ರಕರಣ ನಡೆದು ನಾಲ್ಕು ದಿನದೊಳಗೆ ನಾಲ್ವರು ಆರೋಪಿಗಳ ಸಹಿತ ಎಲ್ಲ 13.50 ಕೋ.ರೂ. ಮೌಲ್ಯದ 18 ಕೆಜಿ 360 ಗ್ರಾಂ ಚಿನ್ನ ಹಾಗೂ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ದರೋಡೆ ಯಾಗಿದ್ದ ಸೊತ್ತುಗಳು ಸಿಕ್ಕಿರುವುದ ರಿಂದ ಬಾಕಿ ಆರೋಪಿಗಳ ಬಂಧನಕ್ಕೆ ಪೊಲೀಸರು ಆಸಕ್ತಿ ತೋರಿಸಿರಲಿಲ್ಲ. ಈಗಾಗಲೇ ಬಂಧಿತರಿಗೂ ಉಳಿದ ಮೂವರಿಗೂ ಯಾವುದೇ ಮಾಹಿತಿ, ಪರಿಚಯವಿಲ್ಲ. ಅವರು ಬೇರೆಯೇ ತಂಡದ ಸದಸ್ಯರು. ಹಾಗಾಗಿ ಅವರ ಬಂಧನ ಪೊಲೀಸರಿಗೂ ಸವಾಲಾಗಿದೆ.ಪ್ರಸ್ತುತ ಕಮಿಷನರ್‌ ಸುಧೀರ್‌ಕುಮಾರ್‌ ರೆಡ್ಡಿ ಮತ್ತು ಪ್ರಕರಣದ ತನಿಖಾಧಿಕಾರಿ ಮಂಗಳೂರು ನಗರ ದಕ್ಷಿಣ ಎಸಿಪಿ ವಿಜಯ ಕ್ರಾಂತಿ ಅವರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಜತೆಗೆ ಬಂಧಿತ ಆರೋಪಿಗಳಿಗೆ…

Read More

ಕೋಝಿಕ್ಕೋಡ್ ಜ. 19: ತುಂಬಾ ರಶ್ ಬಸ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ವಿಡಿಯೋದಲ್ಲಿದ್ದ ಯುವಕ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಆರೋಪ ಹೊತ್ತಿದ್ದ ಕೋಝಿಕ್ಕೋಡ್‌ನ ಗೋವಿಂದಪುರಂ ಮೂಲದ ದೀಪಕ್(40) ಎಂದು ಗುರುತಿಸಲಾಗಿದೆ. ಪಯ್ಯನ್ನೂರಿನಲ್ಲಿ ಈ ಘಟನೆ ನಡೆದಿದೆ. ಜನದಟ್ಟಣೆಯ ಬಸ್ಸಿನಲ್ಲಿ ಲೈಂಗಿಕ ಉದ್ದೇಶದಿಂದ ಅವನು ಉದ್ದೇಶಪೂರ್ವಕವಾಗಿ ತನ್ನನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸುಮಾರು 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಡಿಯೊವನ್ನು ವೀಕ್ಷಿಸಿದ್ದಾರೆ ಮತ್ತು ಅನೇಕ ಜನರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ದೀಪಕ್ ತುಂಬಾ ದುಃಖಿತನಾಗಿದ್ದ, ವಿಡಿಯೋ ವೈರಲ್ ಆದ ಮರುದಿನ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ…

Read More

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ಬೆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದ ಕಾರಣ ಬೆಡಿ ಉತ್ಸವ ಸಮಿತಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಮಿತಿ ಅಧ್ಯಕ್ಷ ಸದಾನಂದ ಕಾಮತ್ ಕೆ, ಸದಸ್ಯರುಗಳಾದ ಲಕ್ಷö್ಮಣ ಪ್ರಭು ಕುಂಬ್ಳೆ, ಸುಧಾಕರ ಕಾಮತ್, ದಯಾರಾಜ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಜಾತ್ರೋತ್ಸವಕ್ಕೆ ಬಂದ ಜನರಿಗೆ ಅಪಾಯಗಳುಂಟಾಗುವoತೆ ನಿರ್ಲಕ್ಷ್ಯ ವಹಿಸಿ, ಅಜಾಗರೂಕತನದಿಂದ ಸಿಡಿಮದ್ದು ಸಿಡಿಸಲಾಗಿದೆ ಎಂದು ಉಲ್ಲೇಖಿಸಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದೇವರ ಬೆಡಿಕಟ್ಟೆ ಸಮೀಪ ಸಿಡಿಮದ್ದು ಪ್ರದರ್ಶನ ನಡೆದಿತ್ತು. ಭಾರೀ ಸಂಖ್ಯೆಯ ಜನರು ನೆರೆದಿದ್ದರು. ಪ್ರಸಿದ್ಧವಾದ ಕುಂಬಳೆ ಬೆಡಿ ಉತ್ಸವಕ್ಕೆ ಸರಿಯಾದ ಮುನ್ನೆಚ್ಚರಿಕಾ ಮಾನದಂಡ ಪಾಲಿಸಲಿಲ್ಲವೆಂದು ಇವರ ವಿರುದ್ಧ ಕೇಸು ದಾಖಲಿಸಲಾಗಿದೆ.

Read More

ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನಡೆದ ಜಾಗತಿಕ ಬಿಲ್ಲವ ಕ್ರೀಡಾ ಕೂಟದಲ್ಲಿ ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡ ಬ್ರಹ್ಮಶ್ರೀ ಉಳ್ಳಾಲ ತಂಡದ ಕ್ರೀಡಾಪಟುಗಳಿಗೆ , ಆಟಗಾರರನ್ನು ಒಗ್ಗೂಡಿಸಲು ಹಗಲು ರಾತ್ರಿ ಸಹಕರಿಸಿದ ನಾಯಕರಿಗೆ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಅಧ್ಯಕ್ಷ ಕೆ.ಟಿ.ಸುವರ್ಣ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಾಗತಿಕ ಬಿಲ್ಲವ ಕ್ರೀಡಾಕೂಟದಲ್ಲಿ ಜಾಗತಿಕ ಬಿಲ್ಲವ ಕ್ರೀಡಾ ಚಾಂಪಿಯನ್ಸ್ ಟ್ರೋಫಿಯನ್ನು ಬ್ರಹ್ಮಶ್ರೀ ಉಳ್ಳಾಲ ತಂಡ ಪಡೆದುಕೊಂಡಿದೆ. ಬ್ರಹ್ಮಶ್ರೀ ಉಳ್ಳಾಲ ತಂಡ ವಾಲಿಬಾಲ್ ಪ್ರಥಮ , ಹಗ್ಗ ಜಗ್ಗಾಟ ದ್ವಿತೀಯ , ತ್ರೋಬಾಲ್‌ ನಲ್ಲಿ ತೃತೀಯ ಪಡೆದು ಉಳ್ಳಾಲಕ್ಕೆ ಹೆಚ್ಚಿನ ಅಂಕವನ್ನು ಸಾಧಿಸಿತ್ತು. ಯಶಸ್ಸಿನಲ್ಲಿ ಉಳ್ಳಾಲ ಭಾಗದ ಬಿಲ್ಲವ ಸಂಘಗಳಾದ ಕೊಲ್ಯ ಬಿಲ್ಲವ ಸಂಘ, ಗ್ರಾಮ ಚಾವಡಿ ಬಿಲ್ಲವ ಸಂಘ, ಅಂಬ್ಲಮೊಗರು ಬಿಲ್ಲವ ಸಂಘ , ಬಿಲ್ಲವ ಸಂಘ ಕಿನ್ಯ ಬೆಳರಿಂಗೆ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು, ತಲಪಾಡಿ ಬಿಲ್ಲವ ಸಂಘ , ಬೋಳಿಯಾರ್ ಬಿಲ್ಲವ ಸಂಘ , ಬ್ರಹ್ಮಶ್ರೀ ಮಹಿಳಾ ವೇದಿಕೆ…

Read More

ಕುತ್ತಾರು;ಕೊರಗಜ್ಜನ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಭೇಟಿ, ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಇವರು, ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡುವ ತಮ್ಮ ಆಶಯ ಈಡೇರಿದೆ. ಕರಾವಳಿಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ತುಳು ಸಿನಿಮಾದಲ್ಲೂ ನಟಿಸಿರುವುದಾಗಿ ತಿಳಿಸಿದ್ರು. ಇನ್ನು ಪುತ್ರ ಅಹಾನ್ ಶೆಟ್ಟಿ ನಟಿಸಿರುವ ‘ಬಾರ್ಡರ್-೨’ ಚಿತ್ರದ ಯಶಸ್ಸಿಗೆ ಆಶೀರ್ವಾದ ಕೋರಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕುತ್ತಾರು ಕ್ಷೇತ್ರದ ಆಡಳಿತ ಸಮಿತಿಯಿಂದ ಅವರನ್ನು ಶಾಲುಹೊದಿಸಿ ಗೌರವಿಸಲಾಯಿತು.

Read More

ಉಳ್ಳಾಲ: ದೇರಳಕಟ್ಟೆ ಭಾಗದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಮಾದಕ ವಸ್ತು ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಕೇರಳ ತೆರಳುವ ಕಾಲೇಜು ಬಸ್ಸುಗಳನ್ನು ತಡೆದು ಬೀರಿ ಕೋಟೆಕಾರು ಮತ್ತು ಅಸೈಗೋಳಿಯಲ್ಲಿ ಜಂಟಿಯಾಗಿ ದಿಢೀರ್‌ ಮಾದಕ ವಸ್ತು ಪರೀಕ್ಷಾ ಕಾರ್ಯಾಚರಣೆಯನ್ನು ನಡೆಸಿದರು. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿ.ಎ. ಕಾಲೇಜಿನ ಎರಡು ಬಸ್‌ಗಳನ್ನು ತಡೆದು 87 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್‌ ಆಗಿದೆ. ಇದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇರೀತಿ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳು ಹಾಗೂ ಕಾಲೇಜು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಲಾಯಿತು. ನಿಟ್ಟೆ ವಿಶ್ವವಿದ್ಯಾಲಯ (ಕೆ.ಎಸ್‌. ಹೆಗ್ಡೆ), ಕನಚೂರು ಇನ್ಸ್ಟಿಟ್ಯೂಟ್‌, ಪಿ.ಎ. ಕಾಲೇಜು, ಸೇಂಟ್‌ ಅಲೋಶಿಯಸ್‌ ಕಾಲೇಜು ಹಾಗೂ ಎಕ್ಕೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಒಳಪಟ್ಟಿದ್ದರು. ಇಲ್ಲಿವರೆಗೆ ಒಟ್ಟು 103 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 101 ಮಂದಿಯ…

Read More

ಮಂಗಳೂರು; ಕಾಪಿಕಾಡು ಶ್ರೀ ಉಮಾಮಹೇಶ್ವರಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ತಾಯಿ ಭದ್ರಕಾಳಿ ದೇವಿಯ ಪ್ರತಿಷ್ಠೆಯ ಎಲ್ಲಾ ದೇವತಾ ಕಾರ್ಯಕ್ರಮಗಳ ಸಮಾಲೋಚನೆ ಸಭೆಯು ಬ್ರಹ್ಮಕಲೋಶೋತ್ಸವ ಸಮಿತಿಯ ಅಧ್ಯಕ್ಷರಾದ ಸತೀಶ್ ಕುಂಪಲ ನೇತೃತ್ವದಲ್ಲಿ ಮಂಗಳೂರು ಶರವು ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತಿçಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮೋನಪ್ಪ ಭಂಡಾರಿಯವರನ್ನು ಮಂಗಳೂರು ವಿಭಾಗದ ಹೊರೆಕಾಣಿಕೆಯ ಪ್ರಮುಖರನ್ನಾಗಿ ನೇಮಿಲಾಯಿತು. ಅವರ ಮಾರ್ಗದರ್ಶನದಂತೆ ಹೊರೆಕಾಣಿಕೆ ಸಮಿತಿ ಕಾರ್ಯ ನಿರ್ವಹಿಸುವುದಾಗಿ ತೀರ್ಮಾನಿಸಿ ಒಂದು ಹೊಸ ತಂಡವನ್ನು ಕೂಡ ರಚಿಸಲಾಯಿತು. ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್ ಮಾತಾಡಿ, ಶರವು ದೇವಳದಿಂದ ಶುರುವಾದ ಕಾರ್ಯ ಯಾವುದೇ ವಿಘ್ನವಿಲ್ಲದೇ ನಡೆಯುತ್ತದೆ ಎಂಬ ನಂಬಿಕೆ ಬಲವಾಗಿದೆ. ಈ ನಿಟ್ಟಿನಲ್ಲಿ ಇಂದು ಸಭೆ ನಡೆಯುತ್ತಿದ್ದು, ಹಸಿರು ಹೊರೆಕಾಣಿಕೆಗೆ ಹೆಚ್ಚಾಗಿ ಹಾಳಾಗದಂತಹ ಹೆಚ್ಚು ದಿನ ಬರುವಂತಹ ತರಕಾರಿ, ದಿನಸಿಗಳನ್ನು ನೀಡಿದ್ರೆ ಉತ್ತಮ ಎನ್ನುತ್ತಾ ಕ್ಷೇತ್ರದ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಎಲ್ಲರೂ ಒಟ್ಟಾಗಿ ನಿಂತು ಧಾರ್ಮಿಕ ಕಾರ್ಯಕ್ರಮವನ್ನು…

Read More

ಕ್ಯಾಪ್ಸ್‌ ಫೌಂಡೇಶನ್ ವತಿಯಿಂದ ಕೃಷ್ಣ ಎಸ್‌ಎಂಯುಕೆ ಸೈನ್ಸ್ ಪಾರ್ಕ್ 4.0ರ ಇದರ ಉದ್ಘಾಟನಾ ಸಮಾರಂಭ ಜನವರಿ 19 ರ ಸೋಮವಾರ ಬೆಳಿಗ್ಗೆ 9.30ಕ್ಕೆ ಎಸ್ ಎಂ ವಿ ಕೆ, ಕುಂಜತ್ತೂರು ನಲ್ಲಿ ನಡೆಯಲಿದೆ. ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಹೊಂದಿರುವ ಈ ಯೋಜನೆ, ಹೊರಾಂಗಣ ಪ್ರಯೋಗಗಳು ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಪ್ರಾಯೋಗಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಕ್ಯಾಪ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸಿಎ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ. ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ವಿಜ್ಞಾನವನ್ನು ಆಟದ ಮೂಲಕ ಕಲಿಸುವ ಉದ್ದೇಶದಿಂದ ಕಟೀಲು, ಕೋಟ, ರಾಮಕುಂಜದಲ್ಲಿ ಭಾಗಗಳಲ್ಲಿ ಯಶಸ್ಸಿನ ಕಾರ್ಯಕ್ರಮವನ್ನು ನಡೆಸಿದೆ. 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಜ್ಞಾನ ವನ ಸೈನ್ಸ್ ಪಾರ್ಕ್ ಅಪಾರ ಜನಪ್ರತಿಕ್ರಿಯೆ ಪಡೆದುಕೊಂಡಿದೆ. ವಿಜ್ಞಾನವನ್ನು ಮನರಂಜನೆಯೊಂದಿಗೆ ಮಕ್ಕಳಿಗೆ ಪರಿಚಯಿಸುವ ಈ ಪಾರ್ಕ್ ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು…

Read More

ಕಾರ್ಕಳ, ಜ. 16 : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾಗಿ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿರುವ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ 1:30ರ ಸುಮಾರಿಗೆ ನಡೆದಿದೆ. ಮುದ್ದಣ್ಣ ನಗರದ ವಾರಿಜಾ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಹಾನಿಗೊಳಗಾಗಿದೆ.ಮನೆಯ ಹೊರಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸಿಲಿಂಡರ್ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Read More