UN NETWORKS ಪಾವೂರು: ಗರ್ಭಿಣಿಯರು ಹಾಗೂ ಬಾಣಂತಿಯರು ಸಂಕಷ್ಟ ಎದುರಿಸಬಾರದು ಎನ್ನುವ ನೆಲೆಯಲ್ಲಿ ಮಹತ್ವಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿ ಮಹಾತ್ಮಾ ಗಾಂಧಿ ಜನ್ಮ ದಿನದಂದು ಫಲಾನುಭವಿಗಳಿಗೆ ಸಮರ್ಪಿಸಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ತಿಳಿಸಿದರು. ಪಾವೂರು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತೃತ್ವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ ಸಹಿತ ಮಾನವ ಜೀವ ಉಳಿಸುವುದೂ ಸರ್ಕಾರದ ಗುರಿ. ಮಾತೃತ್ವ ಯೋಜನೆ ರಾಜ್ಯದಾದ್ಯಂತ ಚಾಲನೆ ದೊರೆತಿದ್ದು, ದ.ಕ.ಜಿಲ್ಲೆಯಲ್ಲಿ ಮೂಡಬಿದಿರೆ, ಮಂಗಳೂರು ಉತ್ತರ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಪಾವೂರಿನಲ್ಲಿ ಸಾಂಕೇತಿಕ ಕಾರ್ಯಕ್ರಮದ ಮುಖಾಂತರ ಉದ್ಘಾಟಿಸಲಾಗಿದೆ ಎಂದು ಹೇಳಿದರು. ಮಂಗಳೂರು ಸಹಾಯಕ ಆಯುಕ್ತ ರೇಣಿಕಾ ಪ್ರಸಾದ್ ಮಾತನಾಡಿ, ಗರ್ಭಿಣಿಯರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೊರತೆ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಸರ್ವೇ ಸಂದರ್ಭ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳ ಜೊತೆ ಮಾತೃತ್ವ ಯೋಜನೆ ಜಾರಿಗೆ ತಂದಿದ್ದು,…
Author: UllalaVani
UN NETWORKS ಕೊಣಾಜೆ: ವಿಶ್ವಮಂಗಳ ವಿದ್ಯಾಸಂಸ್ಥೆ ಕೊಣಾಜೆ ಇಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾಸಂಸ್ಧೆಯ ಸ್ಕೌಟ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು. ಪ್ರೌಢಶಾಲಾ ವಿದ್ಯಾರ್ಥಿ ಎಡನ್ ಡಿಸೋಜಾರವರು ದಿನದ ಮಹತ್ವದ ಬಗ್ಗೆ ಮಾತಾನಾಡಿದರು ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಇಸ್ಮಾಯಿಲ್ ಬಿ, ಕಾರ್ಯದರ್ಶಿಗಳಾದ ಭೋಜ ಪೂಜಾರಿ, ಖಜಾಂಚಿಯಾದ ಡಾ.ಪರಮೇಶ್ವರ್ ಹಾಗೂ ಸದಸ್ಯರು, ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರೌಢಶಾಲಾ ಮುಖ್ಯಶಿಕ್ಷಕಿ ಪ್ರಿಯಾ ಎನ್. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೋಭಾವತಿ ಹಾಗೂ ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಪೂರ್ಣಿಮಾ ಡಿ. ಶೆಟ್ಟಿ, ಶಿಕ್ಷಕ ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಹಾಜರಿದ್ದರು. ದಿನದ ಅಂಗವಾಗಿ ಶಾಲಾ ಪರಿಸರ ಶುಚಿತ್ವ ಮಾಡಲಾಯಿತು.
UN NETWORKS ಮಂಗಳೂರು: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಕ್ಟೋಬರ್ 1 ಇದರ ಅಂಗವಾಗಿ ಶ್ರೀ ಭಾರತಿ ಕಾಲೇಜು ನಂತೂರು ಇಲ್ಲಿ ರಕ್ತದಾನ ಶಿಬಿರ 1/10/2017ನೇ ಭಾನುವಾರದಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು, ಹವ್ಯಕ ಸಭಾ ಮಂಗಳೂರು ಇದರ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಈ ರಕ್ತದಾನ ಶಿಬಿರ ನಡೆಯಿತು. ಚೂಂತಾರು ಪ್ರತಿಷ್ಠಾನ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಇವರು ದೀಪ ಬೆಳಗಿಸುದರ ಮುಖಾಂತರ ಶಿಬಿರವನ್ನು ಉದ್ಘಾಟಿಸಿದರು. ರಕ್ತದಾನಕ್ಕಿಂತ ಮಿಗಿಲಾದ ದಾನ ಇನ್ನೊಂದು ಇಲ್ಲ. ರಕ್ತದಾನ ಹೃದಯಗಳನ್ನು ಬೆಸೆಯುತ್ತದೆ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಸಂಕೇತ ರಕ್ತದಾನದಿಂದ ರವಾನೆಯಾಗುತ್ತದೆ ಎಂದು ಅಭಿಪ್ರಾಯಿಸಿದ್ದರು. ಮಂಗಳೂರು ಹವ್ಯಕ ಸಭಾವ ಅಧ್ಯಕ್ಷರಾದ ಶ್ರೀ ಕೃಷ್ಣ ನೀರಮೂಲೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹವ್ಯಕ ಸಭಾದ ನಿಕಟ ಪೂರ್ವ ಅದ್ಯಕ್ಷ ಮೆದು ತಿರುಮಲೇಶ್ವರ ಭಟ್ ಅವರು ಉಪಸ್ಥಿತರಿದ್ದರು. ಪೋಲಿಸ್ ಇಲಾಖೆಯ ಬಾಲಕೃಷ್ಣ ಭಟ್ ಕೊಂಚಾಡಿ ಇವರು…
UN NETWORKS ಉಳ್ಳಾಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ನಗರದಲ್ಲಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಲಪಾಡಿ ಕೆ.ಸಿ.ನಗರದ ಜುಬೈನ್ ಕ್ವಾಟೇಜ್ ನ ಟಿ.ಉಸ್ಮಾನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ವಿದೇಶದಲ್ಲಿರುವ ಉಸ್ಮಾನ್ ಅವರ ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಕಳವು ನಡೆದಿದೆ. ಮುಂಬಾಗಿಲ ಚಿಲಕ ಮುರಿದು ಒಳನುಗ್ಗಿದ ಕಳ್ಳಲು ಕಪಾಟಿನಲ್ಲಿದ್ದ ಸೊತ್ತುಗಳನ್ನು ಕಳವು ನಡೆಸಿದ್ದಾರೆ. ಎಟಿಎಂನಲ್ಲಿ ಹಣ ಡ್ರಾ ಮಾಡಿದರು ! : ಕಳ್ಳರು ಮನೆಯಲ್ಲಿದ್ದ ಲ್ಯಾಪ್ ಟಾಪ್, ಐಫೋನ್, ರೂ. 600 ನಗದು ಮತ್ತು ಎಟಿಎಂ ನ್ನು ಕಳವು ನಡೆಸಿದ್ದಾರೆ. ಕಳವು ನಡೆಸಿದ ಎರಡು ದಿನಗಳ ನಂತರ ಭಾನುವಾರ ಎಟಿಎಂ ನಿಂದ ರೂ. 30,000 ಹಣ ಡ್ರಾ ಮಾಡಿರುವ ಸಂದೇಶ ವಿದೇಶದಲ್ಲಿರುವ ಉಸ್ಮಾನ್ ಅವರಿಗೆ ಹೋಗಿತ್ತು. ಈ ಕೂಡಲೇ ಅವರು ಪತ್ನಿಯನ್ನು ಪ್ರಶ್ನಿಸಿದಾಗ ಅವರು ತಾಯಿ ಮನೆಗೆ ತೆರಳಿರುವುದಾಗಿ ತಿಳಿಸಿದ್ದು, ಬಳಿಕ ಮನೆಗೆ ಬಂದು…
UN NETWORKS ಉಳ್ಳಾಲ: ನಗರಸಭೆ ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ.ವಿ.ಆಳ್ವ ಹೇಳಿದ್ದಾರೆ. ಅವರು ಗಾಂಧಿ ಜಯಂತಿ ಪ್ರಯುಕ್ತ ಉಳ್ಳಾಲ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ ಅಭಿಯಾನದಡಿ ನಗರಸಭೆಯ 27 ವಾರ್ಡುಗಳಲ್ಲಿ ಹಮ್ಮಿಕೊಂಡ “ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ” “ನಮ್ಮ ಉಳ್ಳಾಲ ಸ್ವಚ್ಛ ಸುಂದರ ಉಳ್ಳಾಲ ಇರಲಿ ನಿಮ್ಮ ಸಹಕಾರ” ಎಂಬ ಸ್ವಚ್ಛತೆ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಚಿವರ ಸಂಪೂರ್ಣ ಸಹಕಾರದೊಂದಿಗೆ ಸ್ವಚ್ಛತ ಅಭಿಯಾನ ಕಾರ್ಯಕ್ರಮ ಉಳ್ಳಾಲದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವ ಮೂಲಕ ಸ್ಥಳದ ಉತ್ತಮ ವಾತಾವರಣವನ್ನು ಕಾಪಾಡಬೇಕಿದೆ. ಇದರಲ್ಲಿ ಸಾರ್ವಜನಿಕರ ಸಹಕಾರವು ಅಗತ್ಯ ಬೇಕಿದೆ ಎಂದರು. ನಗರಸಭೆಯ ಅಧ್ಯಕ್ಷರಾದ ಹುಸೈನ್ ಕುಂಞ ಮೋನು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಸ್ವಚ್ಚತಾ ಪ್ರತಿಜ್ಞೆಯನ್ನು…
UN NETWORKS ಪಾನೀರು: ಅಹಿಂಸೆ, ಸರಳತೆ ಹಾಗೂ ಸೇವಾ ಮನೋಭಾವನೆಯುಳ್ಳ ಬದುಕು ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಮಹಾತ್ಮಾ ಗಾಂಧೀಜಿ. ಲಾಲ್ ಬಹದ್ದೂರ್ ಶಾಸ್ತ್ರಿ, ಮದರ್ ತೆರೆಸಾ ಅವರ ಬದುಕು ಮಾದರಿ ಎಂದು ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್ ಹೇಳಿದರು. ಪಾನೀರು ಆಶ್ರಮ ಶಾಲೆಯಲ್ಲಿ ದ.ಕ. ಜಿಲ್ಲಾ `ಡಿ’ ವರ್ಗ ಸರಕಾರಿ ನೌಕರರ ಸಂಘದ ವಜ್ರ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ಗಾಂಧಿ ಜಯಂತಿ ಅಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ಅವರಿಗೆ ದೇಶದ ಏಕೈಕ ಮಹಾತ್ಮನ ಸ್ಥಾನ, ಕೇವಲ ಎರಡು ಜೊತೆ ಬಟ್ಟೆ ಹೊಂದಿದ್ದಂತಹ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಹಾಗೂ ಪ್ರಾಮಣಿಕತೆಗೆ ಪ್ರಧಾನ ಮಂತ್ರಿ ಸ್ಥಾನ ಹಾಗೂ ಕೊಲ್ಕೊತ್ತಾದಲ್ಲಿ ಯಾವ ಸೌಲಭ್ಯವೂ ಇಲ್ಲದ ಚಿಕ್ಕ ಕೊಠಡಿಯಲ್ಲಿ…
UN NETWORKS ಬಂಟ್ವಾಳ : ಗಾಂಧಿ ಜಯಂತಿ ಪ್ರಯುಕ್ತ ಬಂಟ್ವಾಳ ಕೂರಿಯಾಳ ದುರ್ಗಾನಗರದ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ಕೂರಿಯಾಳದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ಜರಗಿತು. ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಜಗದೀಶ್ ಭಂಡಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
UN NETWORKS ಉಳ್ಳಾಲ: ಸಮಯ ಅತೀ ವೇಗವಾಗಿ ಹೋಗುತ್ತಿದೆ, ಇದರ ಮಹತ್ವ ಅರಿತವರು ಒಂದು ಕ್ಷಣವನ್ನೂ ವ್ಯಯಿಸಲು ಅಸಾಧ್ಯ, ಶ್ರೀಮಂತರಾವರೆಲ್ಲರೂ ಪ್ರತೀ ನಿಮಿಷದ ಲೆಕ್ಕಾಚಾರ ಹಾಕಿ ದೊಡ್ಡ ಸ್ಥಾನ ತಲುಪಿದ್ದಾರೆ ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮಸ್ಲಿಯಾರ್ ಅಭಿಪ್ರಾಯಪಟ್ಟರು. ಮೇಲಂಗಡಿ ಮುಹಿಯುದ್ದೀನ್ (ಹೊಸಪಳ್ಳಿ) ಮಸೀದಿಯಲ್ಲಿ ಶುಕ್ರವಾರದ ನಮಾಝ್ ಆರಂಭಗೊಂಡು ನಾಲ್ಕು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನಮಾಝ್ಗೆ ನೇತೃತ್ವ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಹರ್ರಂ ಇಸ್ಲಾಮಿಕ್ ಕ್ಯಾಲೆಂಡರ್ನ ಹೊಸ ವರ್ಷ ಆರಂಭದ ತಿಂಗಳಾಗಿವೆ, ಕಳೆದು ದಿನಗಳ ಕಹಿ ನೆನಪುಗಳನ್ನು ಮರೆತು ಮುಂದಿನ ದಿನಗಳಲ್ಲಿ ಪ್ರತಿ ಕ್ಷಣವನ್ನೂ ವ್ಯಯಿಸದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ವ್ಯಾಜ್ಯ, ಘರ್ಷಣೆಯಿಂದ ಯಾರೂ ಏನನ್ನೂ ಸಾಧಿಸಲು ಅಸಾಧ್ಯ. ಯಾವುದೇ ಉತ್ತಮ ಕೆಲಸ ಬಿಕ್ಕಟ್ಟಿನಿಂದ ಆರಂಭಗೊಂಡರೂ ಬಳಿಕ ವಿಜಯದತ್ತ ಸಾಗಲು ಸಹಕಾರಿಯಾಗುತ್ತದೆ ಎನ್ನುವುದಕ್ಕೆ ಮೇಲಂಗಡಿಯಲ್ಲಿ ಆರಂಭಗೊಂಡ ಜುಮಾ ನಮಾಝ್ ಸಾಕ್ಷಿ.…
UN NETWORKS ಕುತ್ತಾರು: ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಹಿಳೆಯರಿಗೆ ಸ್ವಾವಲಂಬಿಯಾಗಲು ದಾರಿ ತೋರಿಸುವ ಕುತ್ತಾರಿನ ದುರ್ಗಾವಾಹಿನಿ ಮಹಿಳಾ ಮಂಡಲ ಬಡ ಹೆಣ್ಮಕ್ಕಳ, ನಿರ್ಗತಿಕರಿಗೆ ಸಹಾಯ ಮಾಡುವುದರ ಜತೆಗೆ ಸಾಮಾಜಿಕವಾಗಿ ತೊಡಗಿಸಿಕೊಂಡು ಸಮಾಜಮುಖಿಯಾಗಿದೆ ಎಂದು ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಹೇಳಿದ್ದಾರೆ. ಅವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ಒಂದು ತಿಂಗಳ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದುಸ್ತಾನ್ ಲಿವರ್ ಲಿ. ಇದರ ಲೇಬರ್ ನೆಟ್ ಪ್ರಭಾತ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ಅಡಿಯಲ್ಲಿ ನಡೆದ ಎಂಬ್ರಾಯಿಡರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ಕಲಾವಿದ ಹಾಗೂ ತರಬೇತುದಾರ ದಯಾನಂದ ಗಟ್ಟಿ ಪಿಲಿಕೂರು ಮಾತನಾಡಿ ಮಹಿಳಾ ಮಂಡಲದಲ್ಲಿ ಯಕ್ಷಗಾನ ತರಬೇತಿ ಮುಂದೆ ನಡೆಯಲಿದ್ದು, ಗಂಡು ಕಲೆ ಯಕ್ಷಗಾನ ಆಗಿದ್ದರೂ ಮಹಿಳೆಯರು, ಹೆಣ್ಮಕ್ಕಳು ಕಲೆಯಲ್ಲಿ ಭಾಗವಹಿಸುವುದರಿಂದ ದೇಹಕ್ಕೆ ವ್ಯಾಯಾಮ ಸಿಗಲು ಸಾಧ್ಯ ಎಂದರು. ಲೇಬರ್ ನೆಟ್ ಇದರ ಸಂಯೋಜಕ ಸತ್ಯೇಂದ್ರ ಪ್ರಕಾಶ್ ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಬೇಕು…
UN NETWORKS ಕಿನ್ಯ: ಕಿನ್ಯ ಕೀಶವ ಶಿಶು ಮಂದಿರ ಕೊಂಡಾಣ ಮಂಗಳೂರು ವುಡ್ ಇಂಡಸ್ಟ್ರೀಸ್ ವತಿಯಿಂದ ಧ್ವನಿವರ್ದಕವನ್ನು ಕಂಪೆನಿಯ ಪಾಲುದಾರರಾದ ಶ್ರೀದರ ಹೆಗಡೆಯವರು ನೀಡಿದರು. ಶಿಶು ಮಂದಿರದಲ್ಲಿ ನಡೆದ ಶಾರದಾ ಪೂಜಾ ಸಂಧರ್ಭ ಪುಟಾಣಿ ಮಕ್ಕಳಿಂದ ಹಂಸರಾಗ ಭಜನೆಯೊಂದಿಗೆ ಉದ್ಘಾಟಿಸಲಾಯಿತು. ಈ ಸಂಧರ್ಭ ಶಿಶು ಮಂದಿರ ವಿಶ್ವಸ್ಥ ಮಂಡಳಿಯ ಪ್ರ.ಕಾರ್ಯದರ್ಶಿ ಮೋಹನ್ದಾಸ್ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಕಜೆ,ಕಾರ್ಯದರ್ಶಿ ಚೇತನ್ ಪಿಲಿಕೂರು,ಕಿನ್ಯ ಗ್ರಾಮ ಬಿಜೆಪಿ ಅಧ್ಯಕ್ಷ ಪಾರ್ಥ ಸಾರಥಿ,ಸದಾಶಿವ ಆಚಾರ್ಯ,ರಮಾನಾಥ ಮಿತ್ತಡ,ಪುರುಷೋತ್ತಮ ಮಿತ್ತಡ ಮೊದಲಾದವರು ಉಪಸ್ಥಿತರಿದ್ದರು

