Author: UllalaVani

Kannada News From Coastal Karnataka

UN NETWORKS ಮುಂಬಯಿ: ಸಂಘ ಒಬ್ಬನಿಗಾಗಿ ಅಲ್ಲ. ಎಲ್ಲಾ ಸದಸ್ಯರು ಪ್ರಯೋಜನ ಪಡೆದಾಗಲೇ ಸಂಘದ ಸೇವೆ ಫಲಪ್ರ ದವಾಗುವುದು. ಈ ಸಂಸ್ಥೆಯ ಮೂಲಕ ನಾವು ಸೇವೆಯನ್ನೀಡಲು ಸಾಧ್ಯವಾದಷ್ಟು ಶ್ರಮ ಮಾಡಿದ್ದೇವೆ, ಮಾಡುತ್ತಿದ್ದೇವೆ ಮುಂದೆಯೂ ಮಾಡುತ್ತೇವೆ. ಇವರೆಗೂ ಸಂಘವನ್ನು ಸಂವಿಧಾನ ಬದ್ಧವಾಗಿ ಮುನ್ನಡೆಸಿದ್ದು, ಭವಿಷ್ಯತ್ತಿನಲ್ಲೂ ಪ್ರಾಮಾಣಿಕವಾಗಿ ಸಂಘವನ್ನು ಪ್ರಗತಿಪರತೆಯತ್ತ ಒಯ್ಯುತ್ತೇವೆ. ಸಂಘದ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಬಾರದು. ಲೋಪದೋಷ ಅಥವಾ ಒಳ್ಳೆದಿದ್ದರೂ ಖುದ್ದಾಗಿ ತಿಳಿಸಿ ಇಲ್ಲವೇ ಸುಮ್ಮಗಿರಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು. ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಒಂಬತ್ತನೇ (9) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿದರು. ಸದಸ್ಯರ ಸಕ್ರೀಯತೆಯಿಂದಲೇ ಸಂಘದ ಸಧೃಡತೆ ಸಾಧ್ಯ. ಆದುದರಿಂದ ಸದಸ್ಯರಲ್ಲಿ ಸದ್ಧರ್ಮತೆ ಅವಶ್ಯಕತೆವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಒಮ್ಮಸ್ಸಿನಿಂದ ಮುನ್ನಡೆಸೋಣ ಎಂದೂ ಪಾಲೆತ್ತಾಡಿ ಕರೆಯಿತ್ತರು. ವೇದಿಕೆಯಲ್ಲಿ…

Read More

UN NETWORKS ಕೊಣಾಜೆ: ಪರಧರ್ಮಗಳನ್ನು, ಪರಧರ್ಮ ವಿಚಾರಗಳನ್ನು ಗೌರವಿಸುವ ಕೆಲಸ ನಮ್ಮದಾಗಬೇಕು ಎಂಬುದನ್ನು ಕವಿರಾಜಮಾರ್ಗದಲ್ಲಿ ಕವಿ ಅಂದಿನ ಕಾಲದಲ್ಲಿಯೇ ಉಲ್ಲೇಖಿಸಿದ್ದನು. ಆದರೆ ಇಂದು ಪರಧರ್ಮಗಳನ್ನು, ವಿಚಾರಗಳನ್ನು ಗೌರವಿಸುವುದು ಬಿಡಿ ಅದಕ್ಕೆ ವಿರುದ್ದವಾಗಿಯೇ ಇಂದು ನಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ `ಕನ್ನಡ ಸಂಶೋಧನೆ: ಕನ್ನಡ ಜಗತ್ತು’ ಎಂಬ ವಿಷಯದಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ಸಂಶೋಧನಾ ಕಮ್ಮಟವನ್ನು ಸೋಮವಾರದಂದು ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯಕರ ಮನಸ್ಸು, ಉತ್ತಮ ವೈಚಾರಿಕ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳುವುದರಿಂದ ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಿದೆ. ಸಂಶೋಧನಾ ಕ್ಷೇತ್ರದಲ್ಲಿ ನಾವು ಯಾವತ್ತೂ ನೈಜತೆಯ ವಿಷಯಗಳಿಗೆ ಒತ್ತುಕೊಡಬೇಕಾಗಿದೆ. ಆದರೆ ಇತ್ತೀಚೆಗೆ ಸಂಶೋಧನೆಗಳಲ್ಲಿ ನೈಜ…

Read More

UN NETWORKS ಮೋಂಟುಗೋಳಿ: ಹತ್ತು ದಿನಗಳಲ್ಲಿ ಸರಕಾರಿ ಬಸ್ಸು ಬಾರದೇ ಇದ್ದಲ್ಲಿ ಒಂದು ದಿನ ಮೋಂಟುಗೋಳಿ ನಾಟೆಕಲ್ ನಡುವಿನ ಬಸ್ ಬಂದ್ ನಡೆಸಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಡಿವೈಎಫ್ ಐಟಿ ಮೋಂಟುಗೋಳಿ ಘಟಕದ ಅಧ್ಯಕ್ಷ ರಝಾಕ್ ಮೊಂಟೆಪದವು ಎಚ್ಚರಿಸಿದ್ದಾರೆ. ಮೋಂಟುಗೋಳಿ ಸಮೀಪ ಸರಕಾರಿ ಬಸ್ಸಿಗೆ ಒತ್ತಾಯಿಸಿ ಸೋಮವಾರ ಡಿವೈ ಎಫ್ ಐ ಆಯೋಜಿಸಿದ್ದ ಪ್ರತಿಬಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಆರ್ ಟಿ ಓ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂಧನೆಯಿಲ್ಲ. ಅಧಿಕಾರಿಗಳು ಬಸ್ಸು ಮಾಲೀಕರ ಸೂಟ್ ಕೇಸ್ ಪಡೆದುಕೊಂಡು ಬಸ್ಸು ಹಾಕಲು ಮುಂದಾಗುತ್ತಿಲ್ಲ. ಖಾಸಗಿ ಬಸ್ಸಿನಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸುತ್ತಾರೆ, ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗಿ ಬಿದ್ದು ಜೀವಹಾನಿಯಾಗುತ್ತಿದೆ. ಚಿಲ್ಲರೆ ನೆಪದಲ್ಲಿ ಗಲಾಟೆಗಿಳಿಯುವ ಬಸ್ಸು ಸಿಬ್ಬಂದಿ ವರ್ತನೆಯೂ ಸಹಿಸಲು ಅಸಾಧ್ಯ. ಅಲ್ಲದೆ ಮದುವೆ ಟ್ರಿಪ್ ಗಳಿಗೆ ಬಸ್ಸುಗಳು ತೆರಳುವುದರಿಂದ ಜನ ಪರದಾಡಬೇಕಾದ ಸ್ಥಿತಿಯಿದೆ ಎಂದ ಅವರು 10 ದಿನಗಳಲ್ಲಿ ಬಸ್ಸು ಬಾರದೇ ಇದ್ದಲ್ಲಿ ಬಂದ್ ನಡೆಸಿ ಪ್ರತಿಭಟಿಸುವ ಎಚ್ಚರಿಕೆ…

Read More

UN NETWORKS ಉಳ್ಳಾಲ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ದರದೊಂದಿಗೆ ಔಷಧಿ ಸಿಗುವಂತೆ ರಾಜ್ಯ ಮತ್ತು ಕೇಂದ್ರ ಡ್ರಗ್ ಕಂಟ್ರೋಲ್ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮಂಗಳೂರು 1 ಇದರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ರಮಾಕಾಂತ್ ಕುಂಟೆ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ವಿಭಾಗ ಸೋಮವಾರ ಪಾನೀರು ವಿನಿಂದ ನಿಟ್ಟೆ ಆಸ್ಪತ್ರೆ ವರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಹಾಗೂ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ವಿಶ್ವ ಫಾರ್ಮಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಹೆಚ್ಚು ಮೂರು ಡ್ರಗ್ ಟೆಸ್ಟಿಂಗ್ ಲ್ಯಾಬ್ ಗಳನ್ನು ತೆರೆಯಲಾಗಿದ್ದು, ಈ ಮೂಲಕ ನಕಲಿ ಔಷಧಿಗಳ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಸಹಕಾರಿಯಾಗಿದೆ. ರಕ್ತದ ವಿಚಾರದಲ್ಲೂ ಹಲವು ರೀತಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಇಲಾಖೆ ಮೂಲಕ ಪತ್ತೆಹಚ್ಚಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು 2 ರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ…

Read More

UN NETWORKS ತೊಕ್ಕೊಟ್ಟು : ಕೃಷಿ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಇಂದಿನ ಯುವ ಪೀಳಿಗೆಗೆ ಕೃಷಿಯತ್ತ ಸೆಳೆಯುವ ಕಾರ್ಯ ಆಗಬೇಕಾಗಿದ್ದು. ಈ ನಿಟ್ಟಿನಲ್ಲಿ ಸೇವಾ ಭಾರತಿಯಂತಹ ಸಂಸ್ಥೆಗಳು ಆಟದೊಂದಿಗೆ ಕೃಷಿ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಚರ್ಚ್‍ನ ಧರ್ಮಗುರು ರೆ| ಡಾ| ಜೋನ್ ಬಾಪ್ಟಿಸ್ಟ್ ಸಲ್ದಾನ್ಹಾ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಸಮೀಪದ ಅಂಬಿಕಾರೋಡು ಬಾರ್ದೆ ಮಲರಾಯ ದೈವಸ್ಥಾನದ ಎದುರಿನ ಗದ್ದೆಯಲ್ಲಿ ರವಿವಾರ ಸೇವಾಭಾರತಿ ಉಳ್ಳಾಲ ಕ್ಷೇತ್ರ ಸಮಿತಿ ಆಶ್ರಯದಲ್ಲಿ “ಕೃಷಿಯೆಡೆಗೆ ನಮ್ಮ ನಡೆ” ಕೆಸರ್ದ ಕಂಡೊಡು ಗೊಬ್ಬುಗ ಬಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದಿನ ಕಾಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಕೃಷಿ ಸಂಸ್ಕೃತಿಯ ಪರಿಚಯ ಮಾಡುತ್ತಿದ್ದರು. ಆದರೆ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಸಂಸ್ಕೃತಿ ಆಧುನಿಕ ತಂತ್ರಜ್ಞಾನ   ಯುಗದಿಂದ ಇಂದಿನ ಯುವ ಪೀಳಿಗೆ ಮರೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಮಕ್ಕಳಿಗೆ ಕೃಷಿ ಪಾಠದ ಅಗತ್ಯವಿದ್ದು ಗ್ರಾಮೀಣ ಪ್ರದೇಶದ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಂದ ಕೃಷಿ ಸಂಸ್ಕøತಿಯನ್ನು ಉಳಿಸುವ ಕಾರ್ಯ…

Read More

UN NETWORKS ತೊಕ್ಕೊಟ್ಟು: ಭಾರತದ ಯುವಜನತೆಯ ಪೌರುಷ, ಶತ್ರು ರಾಷ್ಟ್ರದ ವಿರುದ್ಧ ಎದೆಗುಂದದ ಹೋರಾಟ ಎಂಥದ್ದು ಎಂಬುದನ್ನು ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಜಗತ್ತಿಗೆ ಪಸರಿಸಿದ ಮಹಾನ್ ಚೇತನ ಭಗತ್ ಸಿಂಗ್‍ನದ್ದು ವಿಶಿಷ್ಠ ವ್ಯಕ್ತಿತ್ವ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ನ್ಯಾಯವಾದಿ ಕೆ. ಮೋನಪ್ಪ ಭಂಡಾರಿ ಅಭಿಪ್ರಾಯ ಪಟ್ಟರು. ತೊಕ್ಕೊಟ್ಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮದಡಿಯಲ್ಲಿ ಭಗತ್ ಸಿಂಗ್ ಜನ್ಮ ದಿನಾಚರಣೆ ಪ್ರಯುಕ್ತ ಕೊಲ್ಯ ಸೌಭಾಗ್ಯಸದನದಲ್ಲಿ ಭಾನುವಾರ ನಡೆದ `ಕ್ರಾಂತಿವೀರನ ನೆನಪು’ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ಮಕ್ಕಳಿಗೆ ದೇಶಪ್ರೇಮಿಗಳು ಸ್ಪೂರ್ತಿಯಾಗಬೇಕು. ಸಿನಿಮಾ ನೋಡಲಿ ತಪ್ಪಿಲ್ಲ. ಆದರೆ ನಟರನ್ನೇ ಸ್ಪೂರ್ತಿ ಯಾಗಿ ತೆಗೆದುಕೊಳ್ಳಬಾರದು. ಅವರ ನಟರಷ್ಟೆ. ನಿಜವಾದ ಹೀರೋಗಳು ನಮ್ಮ ಸೈನಿಕರು. ನಮ್ಮದು ಭಗತ್ ಸಿಂಗ್ ಸಂಸ್ಕಾರ. ಭಗತ್ ಸಿಂಗ್ ವೀರ ಪುರುಷ…

Read More

UN NETWORKS ಇನೋಳಿ: ಪದವಿ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿಗಾಗಿ ವ್ಯವಹಾರಿಕ ಜಗತ್ತಿಗೆ ಕಾಲಿಡುತ್ತಿದ್ದು ಅಲ್ಲಿ ಯಾವುದೇ ತಪ್ಪುಗಳನ್ನು ನಡೆಯದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾಕೆಂದರೆ ಯಾವುದೇ ಸಣ್ಣ ತಪ್ಪುಗಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಾವು ಪದವೀಧರರು ಎಂಬ ಪ್ರತಿಷ್ಠೆಯನ್ನು ಮೆರೆಯದೆ ಪ್ರತಿಯೊಬ್ಬರಿಗೂ ಗೌರವಿಸುವ ಮನೋಭಾವ ಇಟ್ಟುಕೊಳ್ಳಬೇಕು ಎಂದು ಸುರತ್ಕನ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ. ಕೆ. ಉಮಾ ಮಹೇಶ್ವರ ರಾವ್ ಅಭಿಪ್ರಾಯಪಟ್ಟರು. ಮಂಗಳೂರು ಇನೋಳಿಯ ಬ್ಯಾರೀಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಕ್ಯಾಂಪಸ್‍ನಲ್ಲಿ ನಡೆದ ಬಿಐಟಿಯ ಐದನೇ ವರ್ಷದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಿಕ್ಸೂಚಿ ಭಾಷಣಗೈದ ಸೌದಿ ಅರೇಬಿಯಾದ ಕಿಂಗ್ ಫ್ಹಾದ್ ಪೆಟ್ರೋಲಿಯಂ ಆ್ಯಂಡ್ ಮಿನರಲ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಕಮ್ಯುನಿಕೇಶನ್ ಆ್ಯಂಡ್ ಐಟಿ ರಿಸರ್ಚ್, ಸೆಂಟರ್ ಫಾರ್ ಎಕಾನಮಿಕ್ಸ್ ಆ್ಯಂಡ್ ಮೆನೇಜ್‍ಮಂಟ್ ಸಿಸ್ಟಮ್ಸ್ ನ ನಿರ್ದೇಶಕ ಡಾ. ಸಾದಿಕ್ ಸೈದ್ ಮಹಮ್ಮದ್ ಸಂಸ್ಥೆಗಳು ಉದ್ಯೋಗಿಗಳ ಜ್ಞಾನಕ್ಕಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಎಲ್ಲರೂ…

Read More

UN NETWORKS ಮಂಗಳೂರು : ಸುನ್ನೀ ಎಜ್ಯುಕೇಶನಲ್ ಡೆವಲಪ್ ಮೆಂಟ್ ಕಮಿಟಿ ಆಫ್ ಕರ್ನಾಟಕ ಇದರ ಮಹಾಸಭೆ ಇತ್ತೀಚೆಗೆ ಕಾಟಿಪಳ್ಳ ಜಾಸ್ಮೀನ್ ಮಹಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ ವಹಿಸಿದ್ದರು. ಮಜೂರು ಅಬ್ದುರ್ರಶೀದ್ ಸಖಾಫಿ ಉದ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಸ್ವಾಗತಿಸಿದರು. ನೂತನ ಸಮಿತಿ: ಅಧ್ಯಕ್ಷರು: ಕೆ.ಕೆ.ಎಂ. ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ, ಕೋಶಾಧಿಕಾರಿ : ಮುಫತ್ತಿಶ್ ಹಾಫಿಝ್ ಹನೀಫ್ ಮಿಸ್ಬಾಹೀ, ಉಪಾಧ್ಯಕ್ಷರುಗಳು: ಆತೂರು ಸಅದ್ ಮುಸ್ಲಿಯಾರ್, ಒ.ಕೆ.ಸಯೀದ್ ಮುಸ್ಲಿಯಾರ್, ಉರುಮನೆ ಇಸ್ಮಾಯಿಲ್ ಸಅದಿ, ಕಳಂಜಿಬೈಲು ಅಬ್ದುಲ್ ಹಮೀದ್ ಸಅದಿ, ಮಜೂರು ಅಬ್ದುಲ್ ರಶೀದ್ ಕಾಮಿಲ್ ಸಖಾಫಿ; ಕಾರ್ಯದರ್ಶಿಗಳು : ಕಣ್ಣೂರು ಉಸ್ಮಾನ್ ಸಖಾಫಿ, ಬೆಟ್ಟಂಪಾಡಿ ಅಬ್ದುಲ್ ಅಝೀಝ್ ನೂರಾನಿ, ಸೈಫುಲ್ಲಾ ಸಖಾಫಿ ಸಾಗರ, ಕೆ.ಸಿ.ರೋಡ್ ಮುಹಮ್ಮದ್ ಮದನಿ, ಸರಳಿಕಟ್ಟೆ ಮುತ್ತಲಿಬ್ ಸಖಾಫಿ; ಹಿಫಾಝತ್ ಕಮಿಟಿ ಚಯರ್ಮಾನ್ : ಆತೂರು ಸಅದ್ ಮುಸ್ಲಿಯಾರ್, ಕನ್ವೀನರ್ :…

Read More

UN NETWORKS ಉಳ್ಳಾಲ: ಅಲ್ಜೀಮರ್ ಕಾಯಿಲೆಗೆ ತುತ್ತಾದವರನ್ನು ಕಟ್ಟಿಹಾಕದೆ, ಹಿಂಸಿಸದೆ ಗೊತ್ತಿಲ್ಲದ ವಿಚಾರವನ್ನು ಕೇಳಿ ನೋಯಿಸದೆ, ಹಿಯ್ಯಾಳಿಸದೆ ಅವರೊಂದಿಗೆ ಮಾನವೀಯತೆಯಿಂದ ವರ್ತಿಸಿ ಎಂದು ಏಜ್ ಮಂಗಳೂರು ಸ್ಥಾಪಕ ಸದಸ್ಯೆ ಹಾಗೂ ಯೆನೆಪೋಯ ವೈದ್ಯಕೀಯ ವಿಭಾಗ ಮುಖ್ಯಸ್ಥೆ ಡಾ.ಪ್ರಭಾ ಅಧಿಕಾರಿ ಕಿವಿ ಮಾತು ಹೇಳಿದ್ದಾರೆ. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಮನೋವೈದ್ಯಶಾಸ್ತ್ರ ವಿಭಾಗ ಮತ್ತು ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ವತಿಯಿಂದ ಆಸ್ಪತ್ರೆಯ ` ಕ್ಷೇಮ ಸಂಧ್ಯಾ ‘ ಕೇಂದ್ರದಲ್ಲಿ ಗುರುವಾರ ಆಯೋಜಿಸಲಾಗಿದ್ದ `ವಿಶ್ವ ಅಲ್ಝೀಮರ್ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತಾಯಿಯಲ್ಲಿರುವ ಅಪೌಷ್ಠಿಕತೆಯಿಂದ ಹುಟ್ಟುವ ಮಗುವಿನ ಮೆದುಳು ಸರಿಯಾಗಿ ಬೆಳೆಯದೆ, ಮದ್ಯವಯಸ್ಸಿನಲ್ಲಿ ಮನಸ್ಸಿನ ಮೇಲೆ ಆಗುವ ಆಘಾತಗಳು, ಖಿನ್ನತೆಗೆ ಜಾರುವುದು, ದೂಮಪಾನ, ಮದ್ಯಪಾನಗಳಿಂದಲೂ ಅಲ್ಝೀಮರ್‍ಗೆ 65ರ ಹರೆಯಕ್ಕಿಂತ ಮೇಲ್ಪಟ್ಟವರು ತುತ್ತಾಗುವ ಸಾಧ್ಯತೆಗಳಿವೆ. ಆದರೆ ಮನಸ್ಸನ್ನು ಸದೃಢವಾಗಿರಿಸಿಕೊಳ್ಳುವ ಮೂಲಕ ರೋಗದ ತಡೆಗಟ್ಟುವಿಕೆ ಸಾಧ್ಯ. ಮನಸ್ಸು ಆರೋಗ್ಯಯುತವಾಗಿದಲ್ಲಿ ವೃದ್ಧರಾಗಲು ಅಸಾಧ್ಯ, ವೃದ್ಧಾಪ್ಯದಲ್ಲೂ ಸದಾ ಕ್ರಿಯಶೀಲತೆಯಿಂದ ಕೂಡಿ, ಎಲ್ಲರ ಜತೆಗೆ ಬೆರೆತು, ಮನಸ್ಸಿಗೆ…

Read More

UN NETWORKS ಕೊಣಾಜೆ : ಫುಟ್ಬಾಲ್ ಲೀಗ್ ನ ಆಯೋಜನೆಯಿಂದ ಹಲವು ಉತ್ತಮ ಆಟಗಾರರು ಬೆಳೆಯಲು ಸಾಧ್ಯ, ಇಂತಹ ಲೀಗ್ ಆಯೋಜಕರ ಕಾರ್ಯ ಶ್ಲಾಘನೀಯ ಮತ್ತು ಆಟದಲ್ಲಿ ತೊಡಗಿಸುವವರು ಉತ್ತಮವಾಗಿ ಶಕ್ತಿಪ್ರದರ್ಶನವನ್ನು ಪ್ರದರ್ಶಿಸಬೇಕಿದೆ ಎಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ ಮಹಮ್ಮದ್ ರಫಿ ಹೇಳಿದ್ದಾರೆ. ಅವರು ಕೊಣಾಜೆ ನಡುಪದವಿನಲ್ಲಿರುವ ಪಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಆರನೇ ಆವೃತ್ತಿಯ ` ಪಿ ಎ ಪ್ರೀಮಿಯರ್ ಲೀಗ್ -2017 ಫುಟ್ಬಾಲ್ ಪಂದ್ಯಾಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಸಹತಂಡಗಳು ಮತ್ತು ತಂಡಗಳ ಒಳಗೆ ಉತ್ತಮ ಸಂಬಂಧವನ್ನು ನಿರ್ವಹಿಸುವ ಮೂಲಕ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯಕರ ಪಂದ್ಯಾಟ ನಡೆಯಲು ಸಾಧ್ಯ. ಇದರಿಂದ ಆಯೋಜಕರ ಉದ್ದೇಶವೂ ಪೂರ್ಣವಾಗುವುದು ಎಂದರು. ಈ ಸಂದರ್ಭ ಪಿ.ಎ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ, ನಿರ್ದೇಶಕ ಕೆ.ಎಂ.ಹನೀಫ್, ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ.ಕೆ.ಎಂ ರಮೀಝ್, ಅಕಾಡೆಮಿಕ್ಸ್ ನಿರ್ದೇಶಕ ಸಫ್ರಾಝ್ ಹಾಸಿಂ.ಜೆ, ಕ್ರೀಡಾ ನಿರ್ದೇಶಕ ಇಕ್ಬಾಲ್, ಕಾಸರಗೋಡು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ನಿನ ಅಧ್ಯಕ್ಷ ಪಿ.ಸಿ.…

Read More