Author: UllalaVani

Kannada News From Coastal Karnataka

UN NETWORKS  ಮುಡಿಪು: ಒಂದೆಡೆ ಭಜನೆಯ ವಾತಾವರಣ, ಇನ್ನೊಂದೆಡೆ ಸ್ತಬ್ಧಚಿತ್ರಗಳ ಪ್ರದರ್ಶನ, ಹೀಗೆ 100ಕ್ಕೂ ಅಧಿಕ ಹಿಂದೂ ಭಕ್ತರು ಭಾಗವಹಿಸಿದ್ದ ಶೋಭಾಯಾತ್ರೆಯಲ್ಲಿ ಮುಸ್ಲಿಂ ಯುವಕರ ಸಂಘದ ವತಿಯಿಂದ ಮುಸ್ಲಿಂ ಯುವಕರು ಸಿಹಿತಿಂಡಿ ಮತ್ತು ತಂಪುಪಾನೀಯಗಳನ್ನು ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಮುಡಿಪು ಕಾಲೇಜಿನಲ್ಲಿ ನಡೆಯುವ 40 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ನಿಮಿತ್ತ ಕೆಲ ಕಿ.ಮೀ ಉದ್ದಕ್ಕೂ ಕ್ರಮಿಸಿ ದನಿವಾದ ಹಿಂದೂ ಬಾಂಧವರಿಗೆ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ ಸಹಕರಿಸಿದ್ದಾರೆ. ಮುಡಿಪು ಸರಕಾರಿ ಕಾಲೇಜಿನಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 40 ನೇ ವರ್ಷದ ಆಚರಣೆಯಲ್ಲಿ ಮುಸ್ಲಿಂ ಯುವಕರು ಜತೆಗೂಡಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗೆ ಹಾಗೂ ಸಮಿತಿ ಸದಸ್ಯರಿಗೆ ತಂಪು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಗಿದೆ. ಪ್ರಥಮವಾಗಿ ನಡೆಸಿರುವ ಕಾರ್ಯಕ್ರಮ ಎಲ್ಲರಿಗೂ ಸಂತಸ ತಂದಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಹಲವು ಮುಸ್ಲಿಂ ಯುವಕರು ಸಿಹಿತಿಂಡಿ, ಪಾನೀಯ ನೀಡುವಲ್ಲಿ…

Read More

ಗಲ್ಲಿಯಿಂದ ಹಿಡಿದು ದಿಲ್ಲಿಯ ವರೆಗೆ ಪ್ರತಿಯೊಂದು ಹಿಂದೂಗಳು ಆಚರಿಸುವ ಸಂಭ್ರಮದ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆಯನ್ನು ಪಡೆಯುವ ವಿಘ್ನೇಶ್ವರನ್ನು ಈ ದಿನದಂದು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ. ವರ್ಷಂಪ್ರತಿಯಂತೆ ಈ ಭಾರಿಯು ಕೂಡ ಸಂಭ್ರಮದ ಗೌರಿ ಗಣೇಶ ಹಬ್ಬ ಮತ್ತೆ ಬಂದಿದೆ. ಸಂಬಂಧಗಳ ನಂಟನ್ನು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವುದೆಂದರೆ ಹಿಂದೂಗಳಿಗೆ ಅದು ಎಲ್ಲಿಲ್ಲದ ಖುಷಿ. ಅದರಲ್ಲೂ ಕೂಡ ಹಬ್ಬಗಳು ಬಂತೆಂದರೆ ಸಾಕು ಸಂಭ್ರಮ ಸಡಗರ ಮನೆಯಲ್ಲಿಯೂ ಮನದಲ್ಲಿಯೂ ಮೂಡಿರುತ್ತದೆ. ಮೊನ್ನೆ ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡ ನಮಗೆ ಅದರ ಬೆನ್ನ ಹಿಂದೆಯೇ ಗೌರಿ-ಗಣೇಶ ಹಬ್ಬ ಬಂದಿರುವುದು ಇನ್ನೊಂದು ಸಡಗರವೇ ಸರಿ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ. ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ…

Read More

UN NETWORKS ಕೋಟೆಕಾರು: ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಂ ಇದರ ಕೋಟೆಕಾರು ಶಾಖೆಯ ವತಿಯಿಂದ ಆ.24 ಮತ್ತು ಆ.25ರವೆರೆಗೆ ಗೌರಿ ಹಬ್ಬ ಮತ್ತು ಶ್ರೀ ಗಣೇಶ ಹಬ್ಬ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ಕೋಟೆಕಾರಿನಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.24ರ ಪೂರ್ವಾಹ್ನ 8.30ಕ್ಕೆ ಶ್ರೀ ಗೌರಿ ವಿಗ್ರಹದ ಪ್ರತಿಷ್ಠೆ, ಲಲಿತಾ ಹೋಮದ ಆರಂಭ, ಬೊಳ್ಳಾವ ವಿದ್ಯಾಶಂಕರವರಿಂದ ಕರ್ನಾಟಕ ಸಂಗೀತ ಕಚೇರಿ, ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಹರ್ಷ ಕುಮಾರ್ ಕೇದಗೆ ಮತ್ತು ಕನಕವಲ್ಲಿ ಹೆಚ್. ಕೇದಗೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆನೆಗುಂದಿ ಮಹಾಸಂಸ್ಥಾನಂ, ಸರಸ್ವತಿ ಪೀಠ ಕಟಪಾಡಿಯ ಗೌರವಾರ್ಧಯಕ್ಷ ಕೆ.ಕೇಶವ ಆಚಾರ್ಯ, ನ್ಯಾಯವಾದಿ ಅನಿಲ್ ಬೇಕಲ್, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪಾರ್ ಪತ್ತಿಗೆದಾರರಾದ ಪಿ. ಲಕ್ಷ್ಮೀನಾರಾಯಣ ರಾವ್, ಆರ್ಯ ಮರಾಠ ಸಮಾಜ ಸಂಘ…

Read More

UN NETWORKS ಪಾನೀರು : ಶಾಲೆಗಳಲ್ಲಿ ನಾಲ್ಕು ಗೋಡೆಯೊಳಗೆ ಪಾಠ ಮಾಡಲಾಗುತ್ತದೆ, ಆದರೆ ಹೊರಗಡೆಯ ಅಭಿವೃದ್ಧಿಯೂ ಅಗತ್ಯವಿದ್ದು, ಕ್ರೀಡೆಯಲ್ಲಿ ಶಿಕ್ಷಣ, ಮನರಂಜನೆ, ಅಭಿವೃದ್ಧಿ ಎಲ್ಲವೂ ಸಿಗುತ್ತದೆ ಎಂದು ಪಾನೀರ್ ಚರ್ಚ್‍ನ ಧರ್ಮಗುರು ವಂದನೀಯ ಫಾ.ಡೆನ್ನಿಸ್ ಸುವಾರಿಸ್ ಅಭಿಪ್ರಾಯಪಟ್ಟರು. ಪಾನೀರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಪಾನೀರ್ ಚರ್ಚ್ ಮೈದಾನದಲ್ಲಿ ಮಂಗಳವಾರ ನಡೆದ ಉಳ್ಳಾಲ ಬಿ. ಹೋಬಳಿ ಮಟ್ಟದ ಪಾಥಮಿಕ ಶಾಲಾ ಬಾಲಕ-ಬಾಲಕಿಯರ ಖೋ-ಖೋ ಮತ್ತು ವಾಲಿಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ಸೃಷ್ಟಿಸುವ ಅವಶ್ಯಕತೆ ನಮ್ಮ ದೇಶಕ್ಕಿದೆ, ಆ ನಿಟ್ಟಿನಲ್ಲಿ ಎಳವೆಯಲ್ಲೇ ಕ್ರೀಡಾ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಿದ್ದು, ಕ್ರೀಡಾಕೂಟಗಳ ಸಹಕಾರಿಯಾಗಿದೆ ಎಂದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಲ್ಯಾನ್ಸಿ ಡಿಸೋಜ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ರಾವ್, ನೋಡೆಲ್ ಅಧಿಕಾರಿಗಳಾದ ಪುರುಷೋತ್ತಮ, ಪ್ರಮೋದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ…

Read More

UN NETWORKS ಉಳ್ಳಾಲ: ಆಧುನಿತೆಗೆ ತಕ್ಕಂತೆ ಬದಲಾವಣೆಗಳೂ ಅಗತ್ಯ, ಶಾಲೆಯಲ್ಲಿ ನೀಡುವ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತಿದ್ದು ಅದೇ ಮಾದರಿಯ ಶಿಕ್ಷಣ ಮದರಸಾ ಮಕ್ಕಳಿಗೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಮದರಸಾಗಳಲ್ಲೂ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುತ್ತಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದರು. ಕೇಂದ್ರ ಜುಮಾ ಮಸೀದಿಯ ದ್ಸಿಕ್ರ್ ಸಭಾಂಗಣದಲ್ಲಿ ಮಂಗಳವಾರ ಮದರಸಾಗಳಲ್ಲಿ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಧಾರ್ಮಿಕ ಶಿಕ್ಷಣ ಬಲಗೊಂಡರೆ ಧರ್ಮವೂ ಬಲಗೊಳ್ಳುತ್ತದೆ, ಇಂದು ಕುರ್‍ಆನ್‍ಗಳು ಭಾಷಾಂತರಗೊಂಡ ಕಾರಣ ವಿದೇಶಗಳಲ್ಲಿ ಇಸ್ಲಾಂ ಸ್ವೀಕರಿಸುವವರು ಹೆಚ್ಚಾಗಿದ್ದಾರೆ. ನಮ್ಮಲ್ಲಿನ ವೈಮನಸ್ಸಿನಿಂದಾಗಿ ಇಸ್ಲಾಮಿಕ್ ಕಾನೂನುಗಳು ಕೈತಪ್ಪುತ್ತಿವೆ. ಕ್ಷುಲ್ಲಕ ವಿಚಾರಗಳಲ್ಲಿ ಪರಸ್ಪ ಹೊಡೆದಾಡುವ ಬದಲು ಒಗ್ಗಟ್ಟಿನಿಂದ ಬರುವ ಸಮಸ್ಯೆಗಳನ್ನು ಎದುರಿಸಬೇಕಿದೆ. ಬಡಮಕ್ಕಳಿಗೆ ಮದರಸಾದಲ್ಲಿ ಆಧುನಿಕ ಶಿಕ್ಷಣ ಸಿಗಬೇಕೆನ್ನುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದ್ದು, ಮುಂದೆ ಎಲ್ಲಾ ಮದರಸಾಗಳಿಗೆ ವಿಸ್ತರಿಸಲಾಗುವುದು, ಇದಕ್ಕೆ ಜಮಾಅತಿನ ಸರ್ವರೂ ಒಗ್ಗಟ್ಟಿನಿಂದ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಮದರಸಾಗಳ ಮುಫತ್ತಿಸ್ ಸುಲೈಮಾನ್ ಸಖಾಫಿ ಮಾತನಾಡಿ, 1ರಿಂದ 7ನೇ ತರಗತಿವರೆಗೆ ಮದರಸಾದಲ್ಲಿ…

Read More

UN NETWORKS  ಕಿನ್ಯಾ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಸಂಪೂರ್ಣ ಕುಸಿದುಬಿದ್ದು, ಮನೆಮಂದಿ ಪವಾಡಸದೃಶವಾಗಿ ಪಾರಾದ ಘಟನೆ ಕಿನ್ಯ ಗ್ರಾಮಪಂಚಾಯಿತಿನ ಮಿನಾದಿ ಎಂಬಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ದಂಪತಿ ಹಾಗೂ ಮಕ್ಕಳಾದ ಸುಶಾಂತ್, ನಿಶಾಂತ್, ಶುಭಶ್ರೀ ಪವಾಡಸದೃಶವಾಗಿ ಪಾರಾಗಿದ್ದಾರೆ. ಮನೆ ಕುಸಿಯಲು ಆರಂಭವಾಗುತ್ತಿದ್ದಂತೆ ಸದ್ದು ಕೇಳಿ ಎಲ್ಲರೂ ಹೊರಬಂದ ತಕ್ಷಣ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು, ಗೋಡೆಗಳಲ್ಲಿ ಬಿರುಕುಂಟಾಗಿದೆ. ಘಟನೆಯಿಂದ ರೂ.1 ಲಕ್ಷ ನಷ್ಟ ಸಂಭವಿಸಿದೆ. ಅಶಕ್ತ ಕುಟುಂಬ : ಮೂರು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಅವರ ತಾಯಿ ತೀರಿಕೊಂಡಿದ್ದರು. ಅಲ್ಲದೆ ಶ್ರೀನಿವಾಸ್ ಅವರು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಓರ್ವ ಪುತ್ರನೂ ಅಂಗವಿಕಲನಾಗಿದ್ದಾನೆ. ಇಬ್ಬರು ಎಳೆಯ ಹರೆಯದ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ ಶ್ರೀನಿವಾಸ್ ಅವರ ಮೇಲಿದ್ದರೂ, ಅನಾರೋಗ್ಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಅಪರೂಪಕ್ಕೊಮ್ಮೆ…

Read More

UN NETWORKS ಉಳ್ಳಾಲ: ಆ.22ರ ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ದುಲ್ -ಹಜ್ಜ್ ಒಂದರ ಚಂದ್ರ ದರ್ಶನವಾಗಿರುವುದರಿಂದ ಸೆ.1 ರಂದು ಶುಕ್ರವಾರ ಈದುಲ್-ಅಝ್‍ಹಾ (ಬಕ್ರೀದ್ ಹಬ್ಬ) ಆಗಿರುತ್ತದೆ ಎಂದು ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ತೊಕ್ಕೊಟ್ಟು: ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಮಾರಾಟ ಮಾಡಿ ಖಾಸಗಿಯವರಿಗೆ ನೀಡಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಕುಟುಂಬಕ್ಕೆ ಆಗಿರುವ ವಂಚನೆಗೆ ಕಂದಾಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘದ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಗಾಂಧಿನಗರದಲ್ಲಿ ಮಂಗಳವಾರ ದಲಿತ ಸಂಘಟನೆ ಗಳ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ತೊಕ್ಕೊಟ್ಟು ಕಾಪಿಕಾಡು ನಿವಾಸಿ ದಿ. ತೋಮರವರಿಗೆ ಮಂಜೂರಾಗಿರುವ ಸರಕಾರಿ ಜಮೀನಿನ ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿದ ಕಂದಾಯ ಅಧಿಕಾರಿಗಳ ಧೋರಣೆ ಹಾಗೂ ನ್ಯಾಯಾಲಯ ನೀಡಿದ ಆದೇಶವನ್ನು ಜಾರಿ ಮಾಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನಸೇವೆಗೆಂದು ಇರುವ ಸರಕಾರಿ ಅಧಿಕಾರಿಗಳು ಜನವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹಣ ಗಳಿಸುವ ಉದ್ದೇಶದಿಂದಲೇ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿದ ಜಾಗವನ್ನು ಇಂದು ಕಬಳಿಸಲಾಗಿದೆ. ಬಂಗಲೆ ನಿರ್ಮಾಣದಲ್ಲಿ ನಿರತರಾಗಿರುವ ಅಧಿಕಾರಿಗಳ ವಿರುದ್ಧ ಜನರ ಪರ ದನಿ ಎತ್ತುತ್ತಿಲ್ಲ. ಜಿಲ್ಲೆಯಾದ್ಯಂತ ಎಕರೆಗಟ್ಟಲೆ ಸರಕಾರಿ ಭೂಮಿಯಿದ್ದರೂ ದಲಿತರಿಗೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.…

Read More

UN NETWORKS  ಕೊಲ್ಯ: ಸೇವಾ ಭಾರತಿ ಉಳ್ಳಾಲ ಇದರ ವತಿಯಿಂದ ಉಳ್ಳಾಲ ಹೋಬಳಿ ವಲಯದ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯು ಕೊಲ್ಯ ಶ್ರೀ ರಮಾನಂದಾಶ್ರಮದಲ್ಲಿ ಭಾನುವಾರ ನಡೆಯಿತು. ಕೊಲ್ಯ ಶ್ರೀ ರಮಾನಂದಾಶ್ರಮದ ಅರ್ಚಕ ಶ್ಯಾಂಪ್ರಕಾಶ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಧ್ಯಕ್ಷತೆಯನ್ನು ನಾರಾಯಣ ಕುಂಪಲ ವಹಿಸಿದ್ದರು. ಪಾವೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಪ್ರಶಾಂತ್, ತೊಕ್ಕೊಟ್ಟು ಸೆಬೆಸ್ಟಿಯನ್ ಕಾಲೇಜಿನ ಕನ್ನಡ ಉಪನ್ಯಾಸಕ ಅರುಣ್, ಬೊಳ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಹರಿಪ್ರಸಾದ್ ತೀರ್ಪುಗಾರರಾಗಿದ್ದರು. ರವಿಚಂದ್ರನ್, ರೋಹಿತ್, ಮಹೇಶ್ ಬಹುಮಾನ ವಿತರಿಸಿದರು. ಕುಂಪಲ ಶಾಲೆಯ ಮುಖ್ಯೋಪಾಧ್ಯಯರಾದ ವಿಶ್ವನಾಥ್ ಎಂ.ಕೆ ಪ್ರಸ್ತಾವನೆಗೈದರು, ಸುರೇಶ್ ಸ್ವಾಗತಿಸಿದರು.

Read More

UN NEWTWORKS ನವದೆಹಲಿ: ದೇಶದ್ಯಾಂತ ತೀವ್ರ ಕುತೂಹಲ ಕೆರಳಿಸಿದ್ದ  ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಬಹುಮತದ  ತೀರ್ಪಿನ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸು ಮಹತ್ವದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದೆ. ಸಿಜೆಐ ನೇತೃತ್ವದ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳ ಪೀಠದಲ್ಲಿ ಇಬ್ಬರು ಸದಸ್ಯರು ತ್ರಿವಳಿ ತಲಾಖ್ ಗೆ ಅನುಮೋದನೆ ನೀಡಿದ್ದು, ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಯ್ ಲಲಿತ್, ಕುರಿಯನ್ ಜೋಸೆಫ್ ಹಾಗೂ ರೋಹಿಂಗ್ಟನ್ ಅವರು ಎಂದು ಹೇಳಿ ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿ ಬಹುಮತದ ತೀರ್ಪು ನೀಡಿದ್ದಾರೆ.  ಅದರಂತೆ ಬಹುಮತದ ಆಧಾರದ ಮೇಲೆ ತ್ರಿವಳಿ ತಲ್ಲಾಖ್ ಅನ್ನು ಮುಂದಿನ 6 ತಿಂಗಳ ಕಾಲ ರದ್ದು ಮಾಡಲಾಗಿದ್ದು, 6 ತಿಂಗಳೊಳಗೆ ಈ ಬಗ್ಗೆ ಸೂಕ್ತ ಕಾನಾನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಐವರು…

Read More