ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಖಾಸಗಿ ಶಾಲೆ ವಿದ್ಯಾರ್ಥಿನಿಗೆ ಶಾಲಾ ವಾಹನ ಚಾಲಕನಿಂದ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತೊಕ್ಕೊಟ್ಟುವಿನ ಆಸ್ಪತ್ರೆ ಎದುರುಗಡೆ ನಡೆದ ಹಿಂಸಾಚಾರ, ಗಲಭೆ ಮತ್ತು ವಾಹನ ಚಾಲಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾಡೂರು ನಿವಾಸಿಗಳಾದ ಆಸೀಫ್ (33) ಮತ್ತು ಸೈಯ್ಯದ್ ಉಮ್ಮರ್ ಕೋಯ (25) ಎಂಬವರನ್ನು ಬಂಧಿಸಲಾಗಿದೆ. ಘಟನೆ ಹಿನ್ನೆಲೆ: 2015ರ ಎ.13ರಂದು ತೊಕ್ಕೊಟ್ಟು ಖಾಸಗಿ ಶಾಲೆ ಯುಕೆಜಿ ವಿಭಾಗದ ವಿದ್ಯಾರ್ಥಿನಿಯ ಮೇಲೆ ಶಾಲಾ ವಾಹನ ಚಾಲಕನಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ತಂಡವೊಂದು ಶಾಲೆಗೆ ಅಕ್ರಮ ಪ್ರವೇಶಗೈದು, ಚಾಲಕನಿಗೆ ಗಂಭೀರವಾಗಿ ಹಲ್ಲೆ ನಡೆಸಿತ್ತು. ಬಳಿಕ ತೊಕ್ಕೊಟ್ಟು ಸಹಾರಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ವಿದ್ಯಾರ್ಥಿನಿಯನ್ನು ಕೊಂಡೊಯ್ದ ಸಂದರ್ಭ ಆಸ್ಪತ್ರೆ ಹೊರಗೆ ಜಮಾಯಿಸಿದ್ದ ತಂಡ ಬಸ್ಸಿಗೆ ಮತ್ತು ಪೊಲೀಸ್ ವಾಹನಕ್ಕೆ ಕಲ್ಲೆಸೆದು ಹಾನಿಗೊಳಿಸಿತ್ತಲ್ಲದೆ, ಮಾಧ್ಯಮದವರ ಮೇಲೂ ಮುಗಿಬಿದ್ದು, ಕೆಮರಾ ಕಸಿಯಲು ಯತ್ನಿಸಿ…
Author: UllalaVani
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ಮಳೆ ಅವಾಂತರದಿಂದ ರಾಜ್ಯವೇ ತತ್ತರಿಸಿಹೋಗಿದೆ. ಇದೀಗ ಮತ್ತೆ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಲ್ಲಿನ ಮನೆ ಜಲಾವೃತಗೊಂಡಿದೆ. ಭೂಕುಸಿತ, ಟ್ರಾಫಿಕ್ ಜಾಮ್ ನಿಂದ ಜನರು ಕಂಗಾಲಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಇದೀಗ 100 ವರ್ಷಗಳ ದಾಖಲೆಯನ್ನು ಮುರಿದಿದೆ. ಮಳೆಯಿಂದಾಗಿ ತಮಿಳುನಾಡಿನ ಪ್ರಮುಖ ಮಧ್ಯಕೈಲಾಶ್ ಸಿಗ್ನಲ್ ರಸ್ತೆ ಕುಸಿತಗೊಂಡಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿದ್ದು ಭಾರೀ ಮಳೆಗೆ ಈಗಾಗಲೇ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ ಹಲವು ಶಾಲಾ, ಕಾಲೇಜುಗಳಿಗೆ ಮಂಗಳವಾರದವರೆಗೂ ರಜೆ ಘೋಷಿಸಿದೆ. ಚೆನ್ನೈನಲ್ಲಿ ಇನ್ನೂ 3, 4 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮಣನ್ ತಿಳಿಸಿದ್ದು ಇದೇ ರೀತಿ ಮಳೆ ಸುರಿಯುತ್ತಿದ್ದರೆ ಕರಾವಳಿ ತೀರ ಪ್ರದೇಶಗಳಲ್ಲಿ ಪ್ರವಾಹವುಂಟಾಗುವ ಭೀತಿ ಇದೀಗ ಎಲ್ಲರಲ್ಲೂ ಉಂಟು ಮಾಡಿದೆ. ಬೆಂಗಳೂರು, ಕೋಲಾರ ಸೇರಿದಂತೆ ಕರ್ನಾಟಕದ ಹಲವೆಡೆಯೂ ಮಳೆಯಾಗುವ ಸಾಧ್ಯತೆ…
ಹೈದರಾಬಾದ್: ಶಾಲಾ ಶೌಚಾಲಯದಲ್ಲೇ 13 ವರ್ಷ ಪ್ರಾಯದ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿ ಘಟನೆಯೊಂದು ತೆಲಂಗಾಣದ ಮಾಧಾಪುರ ಪಟ್ಟಣದಲ್ಲಿ ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು, ತರಗತಿ ನಡೆಯುತ್ತಿದ್ದಾಗಲೇ ಹೆರಿಗೆ ನೋವನ್ನು ಅನುಭವಿಸತೊಡಗಿದ ಈಕೆಗೆ ತನಗೆ ಏನಾಗುತ್ತಿದೆ ಎಂಬ ಅರಿವೇ ಇರಲಿಲ್ಲ. ತನಗೆ ಹೊಟ್ಟೆ ನೋವು ಬರುತ್ತಿದೆ ಎಂದು ವಿದ್ಯಾರ್ಥಿನಿಯು ತರಗತಿಯ ಶಿಕ್ಷಕಿಯಲ್ಲಿ ಹೇಳಿಕೊಂಡಾಗ ಆ ಶಿಕ್ಷಕಿಯು ಶೌಚಾಲಯಕ್ಕೆ ಹೋಗುವಂತೆ ಆಕೆಗೆ ಸೂಚಿಸಿದರು. ಶೌಚಾಲಯಕ್ಕೆಂದು ತೆರಳಿದ ವಿದ್ಯಾರ್ಥಿನಿ ಅಲ್ಲೇ ಹೆಣ್ಣು ಮಗುವಿಗೆ ನೀಡಿದ್ದಾಳೆ. ಒಡನೆಯೇ ಶಾಲೆಯ ಆಡಳಿತಾಧಿಕಾರಿಗಳು ವಿದ್ಯಾರ್ಥಿನಿಯ ಹೆತ್ತವರಿಗೆ ಸುದ್ದಿ ಮುಟ್ಟಿಸಿದರು. ಆದರೆ ವಿಚಿತ್ರವೆನೆಂದರೆ ಆಕೆ ಗರ್ಭಿಣಿಯೆಂದು ಹೆತ್ತವರಿಗಾಗಲಿ ಅಥವಾ ಶಾಲಾ ಶಿಕ್ಷಕರಿಗಗಾಲಿ ಗೊತ್ತಿರಲಿಲ್ಲವಂತೆ! ತಮ್ಮ ಮಗಳು ಗರ್ಭಿಣಿಯಾಗಿದ್ದಳೆಂಬುದು ತಮ್ಮ ಗಮನಕ್ಕೆ ಎಂದೂ ಬಂದದ್ದೇ ಇಲ್ಲ ಎಂದವರು ಹೇಳಿದರು. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ವಿದ್ಯಾರ್ಥಿನಿಯ ಹೆರಿಗೆಯು ನಡೆದದ್ದು ಶನಿವಾರ – ಆದರೆ ಎಲ್ಲರ ಗಮನಕ್ಕೆ ಬಂದದ್ದು ಸೋಮವಾರ !…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ನಾವು ಮಾಡುವ ಕಾರ್ಯ, ಮಾತು ಮಾನಸಿಕವಾಗಿ ನಮ್ಮಿಂದ ಯಾರಿಗಾದರೂ ನೋವಾಗಿರುತ್ತದೆ. ಕಾಯಿಕ, ವಾಚಿಕ, ಮಾನಸಿಕ ತಪ್ಪುಗಳು ಒಂದಿಲ್ಲೊಂದು ರೀತಿಯಲ್ಲಿ ನಡೆದಿರುವುದರಿಂದ ಅದರಿಂದ ಎದುರಾಗುವ ಪಾಪಕೃತ್ಯ ದೂರವಾಗಬೇಕಾದರೆ ನಾವು ದೇವರಿಗೆ ಶರಣಾಗುವುದೊಂದೇ ದಾರಿ. ಆ ದಿಸೆಯಲ್ಲಿ ಪರಿಹಾರಕ್ಕೋಸ್ಕರ ನಾಗದೇವರ ಪೂಜೆಯೂ ಒಂದಾಗಿದ್ದು ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲು ಹಾಗೂ ಪುಣ್ಯಕಟ್ಟಿಕೊಳ್ಳಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ವೆಂಕಟರಮಣ ಆಸ್ರಣ್ಣ ನುಡಿದರು. ಅವರು ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದ ವತಿಯಿಂದ ಕ್ಷೇತ್ರದ ವಠಾರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಸೋಮವಾರ ನಡೆದ ಭೂಮಿಪೂಜೆ(ಚಿಟ್ಟೆ ಪೂಜೆ)ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಭೂಕಂಪ ಎಂಬುದು ಆದಿಶೇಷನ ಅಲುಗಾಡುವಿಕೆಯ ಪರಿಣಾಮ ಎಂಬ ನಂಬಿಕೆ ಇರುವುದರಿಂದಲೇ ನಾಗದೇವರನ್ನು ತೃಪ್ತಿಪಡಿಸಿದರೆ ನಾಗದೇವರು ಸ್ವಲ್ಪಮಟ್ಟಿಗೆ ಶಾಂತನಾಗುತ್ತಾರೆ. ಶಾಸ್ತ ್ರದಲ್ಲಿ ಉಲ್ಲೇಖಿಸಿರುವಂತೆ ನಿಧಿಯನ್ನು ಕಾಯುವವ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಸೋಮವಾರ ಮುಂಜಾನೆ ಮಸೀದಿ ಗುರುಗಳಿಗೆ ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಡಿಪು ಬಾಳೆಪುಣಿ ಗ್ರಾಮದ,ಮುದುಂಗರ ಕಟ್ಟೆಯಲ್ಲಿ ನಡೆದಿದೆ. ಮುನೀರ್ ಅಹಮದ್ ಸಖಾಫಿ ಎಂಬವರೇ ಯುವಕರಿಂದ ಮಾರಣಾಂತಿಕ ಹಲ್ಲೆಗೊಳಗಾದವರು. ಮುನೀರ್ ಅವರು ಕೆ.ಸಿ ರೋಡ್ ಮಸೀದಿಯಲ್ಲಿ ಕಳೆದ ಒಂದೂವರೆ ವರುಷದಿಂದ ಗುರುಗಳಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದು ,ಸೋಮವಾರ ಮುಂಜಾನೆ ವೇಳೆ ಸಾಲೆತ್ತೂರು ಕೊಲ್ನಾಡು ಗ್ರಾಮದ ,ಅಗರಿ ಹೌಸ್ ನಲ್ಲಿರುವ ತನ್ನ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮುಡಿಪು ,ಮುದುಂಗರ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಎರಡು ಬೈಕುಗಳಲ್ಲಿ ಬಂದ ಐದು ಯುವಕರು ಮುನೀರ್ ಅವರ ಬೈಕಿಗೆ ಅಡ್ಡಗಟ್ಟಿ ರಾಡು ಮತ್ತು ಸೋಂಟೆಗಳಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಹಲ್ಲೆ ನಡೆಸಿದವರನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದು ಈ ಬಗ್ಗೆ ಕೊಣಾಜೆ ಪೊಲೀಸರಲ್ಲಿ ದೂರು ನೀಡಲು ತೆರಳಿದಾಗ ಹಲ್ಲೆ ನಡೆಸಿದ ಆರೋಪಿಗಳು ಪೊಲೀಸ್ ಠಾಣೆಯ ಮುಂದುಗಡೆ ಜಮಾಯಿಸಿದರೆನ್ನಲಾಗಿದೆ ,ಅವರನ್ನ ಬಂಧಿಸುವಂತೆ ಹೇಳಿದಾಗ ಠಾಣಾಧಿಕಾರಿ ಸುಧಾಕರ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಟಿಪ್ಪು ಜಯಂತಿ ಆಚರಣೆ ವೇಳೆ ಉಳ್ಳಾಲದಲ್ಲಿ ನಡೆದ ಅಹಿತಕರ ಘಟನೆ ವೇಳೆ ಉದ್ರಿಕ್ತ ಜನರನ್ನು ಚದುರಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ ನಗರಸಭಾ ಸದಸ್ಯರಿಬ್ಬರಿಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿ ,ಧರ್ಮನಿಂದನೆ ಮಾಡಿದ ಪೋಲೀಸರ ವಿರುದ್ಧ ಸಂತ್ರಸ್ತ ಕೌನ್ಸಿಲರ್ ಹನೀಫ್ ಕೋಟೆಪುರ ಅವರು ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ. ಟಿಪ್ಪು ಜಯಂತಿ ವಿವಾದದಲ್ಲಿ ಉಳ್ಳಾಲದಲ್ಲಿ ಅಹಿತಕರ ಘಟನೆಗಳು ನಡೆದಿದ್ದ ಸಂದರ್ಭ ನ.13 ರಂದು ರಾತ್ರಿ ಉಳ್ಳಾಲ ವೀರಭಧ್ರ ದೇವಸ್ಥಾನದ ಬಳಿ ಇಕ್ಬಾಲ್ ಎಂಬವರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಗಳ ಪತ್ತೆಯಲ್ಲಿದ್ದ ಸಂದರ್ಭ ಮೊಗವೀರಪಟ್ನ ಸಮೀಪ ಇದ್ದ ಮೂವರು ಯುವಕರು ಸಮುದ್ರ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಈ ಸಂಧರ್ಭ ಸಮುದ್ರದಲ್ಲಿ ನಾಡದೋಣಿ ಮೂಲಕ ಬಂದ ಮತ್ತೊಂದು ಕೋಮಿನ ಯುವಕರು ಮೊಗವೀರ ಪಟ್ಣದ ಯುವಕರಿಗೆ ಹಲ್ಲೆ ಮಾಡಿ ಕರಾವಳಿ ರಕ್ಷಣಾ ಪಡೆಗೆ ಸೆರೆ ಸಿಕ್ಕಿದ್ದರು. ಇದೇ ವೇಳೆ ಕೋಟೆಪುರದಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಂಘ ಸಂಸ್ಥೆಗಳು ,ಆಸ್ಪತ್ರೆಗಳು ಸೇರಿ ನಡೆಸುವ ಉಚಿತ ಆರೋಗ್ಯ ಶಿಬಿರಗಳಲ್ಲಿ ತಾತ್ಸಾರ ಮನೋಭಾವವಿರಿಸದೆ ಮುಕ್ತವಾಗಿ ಭಾಗವಹಿಸಿದಲ್ಲಿ ಸಾರ್ವಜನಿಕರು ಉತ್ತಮ ಆರೋಗ್ಯ ಬೆಳೆಸಲು ಸಾಧ್ಯ ಎಂದು ಮಂಗಳೂರು ಕೆಎಮ್ಸಿ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಹರ್ಬರ್ಟ್ ಮರಿಯೊ ಪಿರೇರ ಅವರ ಅಭಿಪ್ರಾಯ ಪಟ್ಟರು . ಅವರು ಆತ್ಮ ಶಕ್ತಿ ವಿವಿದ್ಧೋದ್ಧೇಶ ಸಹಕಾರಿ ಸಂಘ(ನಿ) ಉಳ್ಳಾಲ ಶಾಖೆ ಮತ್ತು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಘಟಕ ಬಂಡಿಕೊಟ್ಯ ,ಉಳ್ಳಾಲ ಇವರ ಜಂಟಿ ಆಶ್ರಯದಲ್ಲಿ ಭಾನುವಾರದಂದು ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ನಡೆದ “ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು “ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡ ವರ್ಗದ ಜನರು ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಯಿಂದ ವಂಚಿತರಾಗಿದ್ದು ,ಅವರ ಉಪಯೋಗಕ್ಕೆಂದೇ ಕೆಎಮ್ಸಿ ಆಸ್ಪತ್ರೆಯು ಇಂತಹ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದು ,ಎಲ್ಲರಿಗೂ ಉತ್ತಮ ಆರೋಗ್ಯ ನೀಡಲು ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.ಅಲ್ಲದೆ ಆಸ್ಪತ್ರೆಗೆ ತಪಾಸಣೆ ಮತ್ತು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಭಾರತೀಯ ಸಂಸ್ಕøತಿ, ಯೋಗ ಪದ್ದತಿಯು ಅಭೂತಪೂರ್ವವಾದದ್ದು ಇತ್ತೀಚೆಗೆ ವಿಶ್ವದೆಲ್ಲೆಡೆ ಮನ್ನಣೆ ಸಿಗುತ್ತಿದ್ದು ಹೆಮ್ಮೆಯ ವಿಚಾರವಾಗಿದೆ. ಹಲವಾರು ಶತಮಾನಗಳ ಹಿಂದೆಯೇ ಆರ್ಯುವೇದ ಹಾಗೂ ಇಲ್ಲಿಯ ಸಂಸ್ಕøತಿಯು ಶ್ರೀಮಂತವಾಗಿತ್ತು. ಆದರೆ ಬ್ರಿಟೀಷರ ಒಡೆದು ಆಳುವ ನೀತಿಯಿಂದಾಗಿ ಇದರ ಮಹತ್ವದ ಬಗ್ಗೆ ನಮಗೇ ಅರಿವಿರಲಿಲ್ಲ. ಆರ್ಯುವೇದ ಎಂದರೆ ಜೀವನ ಪದ್ದತಿ. ಯಾವುದರಿಂದ ಹಿತ, ಯಾವುದರಿಂದ ಅಹಿತವಾಗುತ್ತದೋ, ಯಾವುದರಿಂದ ಒಳ್ಳೆಯ ಜ್ಞಾನವನ್ನು ಪಡೆಯಬಹುದೋ ಅದೇ ಆರ್ಯರ್ವೇದವಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ.ಜ್ಞಾನೇಶ್ವರ ನಾಯಕ್ ಅವರು ಅಭಿಪ್ರಾಯ ಪಟ್ಟರು. ಅವರು ಶ್ರೀ ಮಹಾಕಾಳಿ ಮಿತ್ರಮಂಡಳಿ, ಮಾತೃ ಮಂಡಳಿ ಕುಂಟಾಳಗುಳಿ ಹಾಗೂ ಪತಂಜಲಿ ಯೋಗ ಸಮಿತಿ ಮುಡಿಪು ಇದರ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಕುಂಟಾಲಗುಳಿ ವನಸಾನ್ನಿಧ್ಯದಲ್ಲಿ ಭಾನುವಾರ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದಿಂದ ಯಾರೂ ದಂಡೆತ್ತಿ ಹೋಗಿಲ್ಲ. ವಿಶ್ವದ ಅತ್ಯಂತ ಸಹಿಷ್ಣುವಾದ ದೇಶ ಎಂದರೆ ಅದು ಭಾರತ ಮಾತ್ರ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾನೀರ್: ಪ್ರಾಯವಾಗುತ್ತಿದ್ದಂತೆ ಒಂದೊಂದೇ ಕಾಯಿಲೆ ಮನುಷ್ಯನನ್ನು ಭಾದಿಸಲಿದ್ದು ನಿಗದಿತ ಸಮಯದಲ್ಲಿ ವೈದ್ಯರನ್ನು ಕಂಡು ಪರೀಕ್ಷಿಸಿದಲ್ಲಿ ಆರೋಗ್ಯ ಸ್ಥಿರವಾಗಿಡಲು ಸಾಧ್ಯ ಎಂದು ನಿಟ್ಟೆ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಲ್ಯಾನ್ಸಿ ಲೋಬೋ ಹೇಳಿದರು. ಉಳ್ಳಾಲ ಪಾನೀರ್ ಪಾವ್ಲ್ ಸಭಾ ವತಿಯಿಂದ ಭಾನುವಾರ ಪಾನೀರ್ ಮೆರ್ಸಿಯಮ್ಮ ಚರ್ಚ್ ಸಭಾಂಗಣದಲ್ಲಿ ನಡೆದ ಹಿರಿಯರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಹನ ಹಳೆಯದಾದಂತೆ ವಿವಿಧ ಸಮಸ್ಯೆಗಳು ಬರುತ್ತದೆ, ನಿಗದಿತ ಸಮಯದಲ್ಲಿ ದುರಸ್ತಿ, ಸರ್ವೀಸ್ ಮಾಡುತ್ತಿದ್ದರೆ ದೊಡ್ಡ ಸಮಸ್ಯೆಗಳು ಇಲ್ಲದಂತೆ ಮಾಡಬಹುದು. ಅದೇ ರೀತಿ ಮನುಷ್ಯನಿಗೆ ಪ್ರಾಯವಾದಂತೆ ಗಂಟು ನೋವು, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಸಹಿತ ವಿವಿಧ ಕಾಯಿಲೆಗಳು ಬರುತ್ತದೆ. ಪ್ರತಿದಿನ ವ್ಯಾಯಾಮ, ನಡಿಗೆ, ಯೋಗ ಮನೆ ಕೆಲಸ ಮಾಡುತ್ತಿದ್ದರೆ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ. ಕನಿಷ್ಟ ಆರು ತಿಂಗಳಿಗೊಮ್ಮೆ ವೈದ್ಯರನ್ನು ಕಂಡು ಪರೀಕ್ಷಿಸಿದರೆ ಉತ್ತಮ ಎಂದರು. ಪಾನೀರ್ ಮೆರ್ಸಿಯಮ್ಮ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ನಮ್ಮಲ್ಲಿ ವಿವಿಧ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೆ.ಸಿ.ನಗರ: ಎಸ್.ಎಸ್.ಎಫ್ ಕೆ.ಸಿ ನಗರ ಶಾಖೆ ಇದರ ವತಿಯಿಂದ 24 ನೇ ವಾರ್ಷಿಕೋತ್ಸವದ ಪ್ರಯುಕ್ತ ಯೇನಪೋಯ ಮೆಡಿಕಲ್ ಕಾಲೇಜ್ ದೇರಳೆಕಟ್ಟೆ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ದಂತ ಮತ್ತು ವೈದ್ಯಕೀಯ ಶಿಬಿರ ಕೆ.ಸಿ.ನಗರದ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು ಯೇನಪೋಯ ಡೆಂಟಲ್ ಕಾಲೇಜಿನ ಊಔಆ. ಡಾ.ಗಣೇಶ್ ಶೆಣೈ.ಪಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್.ಎಸ್.ಎಫ್ ಕೆಸಿನಗರ ಶಾಖೆ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಹಳಷ್ಟು ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ.ಜಾತಿ ಮತ ಭೇದವಿಲ್ಲದೆ ಹಲವಾರು ಮಂದಿ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಆಳ್ವ, ಬ್ಯಾರಿ ಸಾಹಿತ್ಯ ಅಕಾಡಮಿ ರಿಜಿಸ್ಟರ್ ಉಮ್ಮರ್ ಮಾಸ್ಟರ್ ,ಡಾ ಇಮ್ರಾನ್ ಪಾಶ, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್. ಉಳ್ಳಾಲ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಕೆ.ಸಿ. ನಗರ .ಅಬ್ದುಲ್ ಖಾದರ್…

