Author: UllalaVani

Kannada News From Coastal Karnataka

UN NETWORKS ಉಳ್ಳಾಲ: ನಾವು ಮಾತ್ರವಲ್ಲ ನಮ್ಮ ಜೊತೆ ಎಲ್ಲರೂ ಸಂತೋಷದಿಂದ ಜೀವನ ಸಾಗಿಸಬೇಕು ಎಂಬ ಮನೋಭಾವ ನಮ್ಮಲ್ಲಿರಬೇಕು. ಹೆಲ್ಪ್ ಇಂಡಿಯಾ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯದೊಂದಿಗೆ ಮುನ್ನಡೆಯುತ್ತಿದ್ದು ಇದೀಗ ಅನಾಥಾಶ್ರಮದ ಹಿರಿಯರೊಂದಿಗೆ ಈದುಲ್ ಫಿತ್ರ್ ಹಬ್ಬ ಆಚರಣೆ ಕಾರ್ಯಕ್ರಮವು ಮಾದರಿಯಾದುದು ಎಂದು ಸಚಿವರಾದ ಯು.ಟಿ.ಖಾದರ್ ಅವರು ಹೇಳಿದರು. ಅವರು ಬುಧವಾರ ಹೆಲ್ಪ್ ಇಂಡಿಯಾ ಫೌಂಡೇಶನ್ ಇದರ ವತಿಯಿಂದ ಕೋಟೆಕಾರು ಸೋಮೇಶ್ವರದ ಪಶ್ಚಿಮ್ ರಿಹಾಬ್ ಸೆಂಟರ್ ಅನಾಥಾಶ್ರಮದಲ್ಲಿ ಹಿರಿಯರೊಂದಿಗೆ ಈದುಲ್ ಫಿತ್ರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಸೌಹಾರ್ದಯುತ ಕಾರ್ಯಕ್ರಮಗಳು ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುವಂತಿರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಶನ್‍ನ ಸ್ಫಾಪಕಾಧ್ಯಕ್ಷ ರಾಝಿಕ್ ಉಳ್ಳಾಲ್ ಮಾತನಾಡಿ, ಅನಾಥಶ್ರಮದಲ್ಲಿರುವವರನ್ನು ನಾವು ಕೀಳರಿಮೆಯಿಂದ ಕಾಣದೆ ಸಮಾನತೆಯೊಂದಿಗೆ ಅವರನ್ನು ಗೌರವಿಸುವ ಕಾರ್ಯವಾಗಬೇಕು. ಅಲ್ಲದೆ ಆಶ್ರಮಗಳಿಗೆ ನಾವು ಪ್ರಾಮಾಣಿಕವಾಗಿ ನೆರವಾದರೆ ಅದರ ಪುಣ್ಯ ಖಂಡಿತಾ ಪ್ರಾಪ್ತವಾಗುತ್ತದೆ. ಇಂತಹ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.…

Read More

UN NETWORKS ಉಳ್ಳಾಲ : ತಾಳ್ಮೆ , ಪ್ರೀತಿ, ವಿಶ್ವಾಸ, ಸಹಕಾರ ಈದ್ ಹಬ್ಬದ ಸಂದೇಶವಾಗಿದೆ. ಒಂದು ತಿಂಗಳ ಉಪವಾಸ ಆಚರಿಸಿ ಈದ್ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿದೆ. ಸಹೋದರತೆ, ಏಕತೆ, ಸಹಕಾರ, ತಾಳ್ಮೆ ಕಾಪಾಡುವ ಮೂಲಕ ಪ್ರೀತಿಯ ಸಮಾಜ ನಿರ್ಮಿಸುವ ಮುಖೇನ ಸರ್ವರನ್ನೂ ಪ್ರೀತಿಸಿಕೊಂಡು ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು. ಈದ್ ಉಲ್ ಫಿತ್ರ್ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಸರ್ವರಿಗೂ ಸರಕಾರದ ಪ್ರಯುಕ್ತ ಈದ್ ಹಬ್ಬದ ಶುಭಾಷಯಗಳನ್ನು ಜನತೆಗೆ ಸಲ್ಲಿಸಿ ಮಾತನಾಡಿದರು. ಈದ್ ಹಬ್ಬದ ಸಂದೇಶಗಳನ್ನು ಪರಸ್ಪರ ಹಂಚುವುದು, ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ, ಎಲ್ಲಾ ಧರ್ಮದವರ ಜತೆಗೆ ವಿಶ್ವಾಸ ಗಳಿಸಿಕೊಂಡು ಅಭಿವೃದ್ಧಿಯ ಕರ್ನಾಟಕ, ವಿಶ್ವಾಸಯುತ ಸಮಾಜ, ಬಲಿಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು. ವಿಶ್ವ ಶಾಂತಿಗೆ ಎಲ್ಲರೂ ಪ್ರಾರ್ಥಿಸಬೇಕು. ಎಲ್ಲಾ ಧರ್ಮೀಯರ ಹಬ್ಬಗಳನ್ನು ಪರಸ್ಪರ ಬೆರೆತುಕೊಂಡು ಆಚರಿಸುವುದೇ ಧರ್ಮ ಎಂದರು. ಜಿಲ್ಲೆಯಲ್ಲಿ ಹಾಹಾಕಾರವಿಲ್ಲ: ಜಿಲ್ಲೆಯಲ್ಲಿ ನೀರಿನ…

Read More

UN NETWORKS ಉಳ್ಳಾಲ : ಗೋವಾ – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಫ್ಲೈಓವರ್ (ಮೇಲ್ ಸೇತುವೆ)ಸಿದ್ಧವಾಗುತ್ತಿದ್ದು, ಸ್ಥಳೀಯರು ಬಳಸುವ ಫ್ಲೈಓವರ್ ಕೆಳಗಡೆಯ ರಸ್ತೆಗಳ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವ ಖಾದರ್ ಅವರು ರಾಷ್ಚ್ರೀಯ ಹೆದ್ದಾರಿ ಅಭಿವೃದ್ಧಿ ಮಾಡುವ ಸ್ಥಳೀಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ದೇರಳಕಟ್ಟೆ ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳು ಉಳ್ಳಾಲ ಮತ್ತು ಸೋಮೇಶ್ವರ ಕಡೆಗೆ ಹೋಗುವುದು ಕ್ಲಿಷ್ಟಕರ ಆಗಲಿದೆ. ಫ್ಲೈಓವರ್ ಮೂಲಕ ಬರುವ ವಾಹನಗಳು ಮತ್ತು ಕಾಸರಗೋಡು ಕಡೆಯಿಂದ ಬರುವ ವಾಹನಗಳು ದಟ್ಟಣೆಯನ್ನು ದಾಟಿ ಉಳ್ಳಾಲ ಕಡೆಗೆ ವಾಹನ ಸಂಚಾರದಲ್ಲಿ ಸಮಸ್ಯೆ ಆಗಲಿದೆ. ಈ ಸ್ಥಳದಲ್ಲಿ ಅಪಘಾತಗಳು ನಡಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಚಿವ ಖಾದರ್ ಹೇಳಿದರು. ಈ ಜಂಕ್ಷನಿನಲ್ಲಿ ಅಹಘಾತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ…

Read More

UN NETWORKS ಉಳ್ಳಾಲ : ಸೌಹಾರ್ದ ಇಫ್ತಾರ್ ಕೂಟ ಅಯೋಜಿಸುವ ಮೂಲಕ ಉಳ್ಳಾಲ ಭಾಗದಲ್ಲಿ ಧರ್ಮಗಳ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಮೂಡಿಸಲು ಸಾಧ್ಯವಿದೆ. ಇಂತಹ ಕಾರ್ಯಕ್ರಮ ನಡೆಸುತ್ತಿರುವ ಸಂಘಟಕರ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅಳೇಕಲ ನುಸ್ರತುಲ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪೊಸಕುರಲ್ ಬಳಗದ ಸಹಕಾರದಿಂದ ಹಳೆಕೋಟೆ ಹಝ್ರತ್ ಸೈಯದ್ ಮದನಿ ಶಾಲೆಯಲ್ಲಿ ಶನಿವಾರ ನಡೆದ ಆರನೇ ವರ್ಷದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು. ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಫಾ.ಡಾ.ಜೆ.ಬಿ.ಸಲ್ದಾನ ಮಾತನಾಡಿ ಅಮೆರಿಕಾದಲ್ಲಿ ಚರ್ಚೊಂದು ಪ್ರತಿ ಶುಕ್ರವಾರ ಮಸೀದಿಯಾಗಿ ಮಾರ್ಪಾಡುತ್ತದೆ. ಇದು ಪ್ರಸ್ತುತ ದಿನಗಳಲ್ಲಿ ಮಾನವರು ಸೌಹಾರ್ದತ್ತ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ. ಎಲ್ಲಾ ಧರ್ಮೀಯರು ಪವಿತ್ರ ಯಾತ್ರೆ ಕೈಗೊಳ್ಳಲು ಹಾತೊರೆಯುತ್ತಾರೆ. ಆದರೆ ಪರರ ಸೇವೆ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಬಂದಾಗ ಸೌಹಾರ್ದಕ್ಕೆ ಎಂದಿಗೂ ಧಕ್ಕೆ ಬಾರದು ಎಂದರು. ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸರ್ವ ಧರ್ಮೀಯರನ್ನು…

Read More

UN NETWORKS ಕುತ್ತಾರ್ : ಮುನ್ನೂರು ಗ್ರಾಮದ ಕುತ್ತಾರ್ ಬಟ್ಟೆದಡಿ ಡಿವೈಎಫ್‌ಐ ಘಟಕದ ವತಿಯಿಂದ ರವಿವಾರ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ತೇವುಲದಲ್ಲಿ ನಡೆಯಿತು. ಈ ಸಂದರ್ಭ ಉಳ್ಳಾಲ ವಲಯ ಡಿವೈಎಫ್‌ಐ ಮುಖಂಡ ಅಶ್ರಫ್ ಕೆಸಿ ರೋಡ್, ಶಿಕ್ಷಕಿ ಚಿತ್ರಾ ಕಬೆಕೋಡಿ , ಸಿಪಿಎಂ ಮುಖಂಡ ವಿಶ್ವನಾಥ್ ತೇವುಲ, ಡಿವೈಎಫ್‌ಐ ಮುಖಂಡ ಸುನಿಲ್ ತೇವುಲ, ನಿತಿನ್ ಕುತ್ತಾರ್ , ಶ್ರವಣ್ ತೇವುಲ , ಮಹಾಬಲ ದೆಪ್ಪಲಿಮಾರ್, ದಿವ್ಯರಾಜ್ ತೇವುಲ ಉಪಸ್ಥಿತರಿದ್ದರು. ವಿಕಾಸ್ ಕುತ್ತಾರ್ ಸ್ವಾಗತಿಸಿದರು. ಸಾಂಕೇತ್ ಕಂಪ ವಂದಿಸಿದರು.

Read More

UN NETWORKS ಉಳ್ಳಾಲ: ತಂಬಾಕು ಕುರಿತ ಜನಜಾಗೃತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ನಡೆಯುತ್ತಿರಲಿ. ನಿಟ್ಟೆ ವಿ.ವಿ ತಂಬಾಕು ರಹಿತ ಕ್ಯಾಂಪಸ್ ಆಗಿ ಮೂಡಿಸುವಲ್ಲಿ ಸಫಲರಾಗಿದ್ದೇವೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದ್ದಾರೆ. ಅವರು ಕ್ಷೇಮ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗ, ನಿಟ್ಟೆ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ತಂಬಾಕು ರಹಿತ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಯಸ್ ಕೃಷ್ಣ ನಾಯಕ್ ಮಾತನಾಡಿ, ತಂಬಾಕು ವಿರೋಧಿಸಿ ಶ್ವಾಸಕೋಶ ಆರೋಗ್ಯ ಕಾಪಾಡುವ ಜಾಗೃತಿ ಪ್ರಸ್ತುತ ದಿನಗಳಲ್ಲಿ ಆಗುತ್ತಿದೆ. ಕ್ಷೇಮ ಆಸ್ಪತ್ರೆ ವತಿಯಿಂದ ಎನ್ ಆರ್ ಟಿ ಥೆರಪಿ ಸೇರಿದಂತೆ ವಿದ್ಯಾರ್ಥಿಗಳಿಂದ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗುತ್ತಿದೆ ಎಂದರು. ವೈದ್ಯಕೀಯ ಅಧೀಕ್ಷಕ ಮೇ. ಶಿವಕುಮಾರ್ ಹಿರೇಮಠ್, ತಂಬಾಕು ವಿರೋಧಿ ಆಂದೋಲನ…

Read More

UN NETWORKS ಮುಡಿಪು : ಜೋಗಿ ಸಮಾಜ ಸಂಘ ಮುಡಿಪು ವಲಯ, ಇದರ ಉದ್ಘಾಟನೆಯನ್ನು ವಿಟ್ಲ ಯೋಗೇಶ್ವರ (ಜೋಗಿ) ಮಠಾಧೀಶರಾದ ರಾಜಯೋಗಿ ಸರ್ದಾನಾಥಜೀಯವರು ಇತ್ತೀಚೆಗೆ ಮುಡಿಪು ಆಡಿಟೋರಿಯಂನಲ್ಲಿ ನೆರವೇರಿಸಿ ಆಶೀರ್ವಚನವಿತ್ತರು. ಸಮಾಜವು ಸಂಘಟಿತವಾಗಿ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಅಭಿಪ್ರಾಯಪಟ್ಟರು. ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಕುಮಾರ್ ಬದಿಯಾರ್, ಉಪಾಧ್ಯಕ್ಷರಾಗಿ ಭುಜಂಗ ಕಣಂತೂರು, ಕಾರ್ಯದರ್ಶಿಯಾಗಿ ಜನಾರ್ದನ ಪುರುಷ, ಉಪ ಕಾರ್ಯದರ್ಶಿಗಳಾಗಿ ಭಾಸ್ಕರ ಕೊಪ್ಪಲ ಮತ್ತು ತೀರ್ಥನಾಥ್ ಜೋಗಿ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಕೂಟತ್ತಜೆ, ಕೋಶಾ„ಕಾರಿಯಾಗಿ ಜನಾರ್ದನ ಕಂಬಳಪದವು ಆಯ್ಕೆಯಾದರು. ರುಕ್ಮಯ ಜೋಗಿ ಇವರನ್ನು ಗೌರವ ಅಧ್ಯಕ್ಷರಾಗಿ ಹಾಗೂ ಸಂಜೀವ ಜೋಗಿ ಕೂಟತ್ತಜೆ ಇವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಯಿತು. ಅಧ್ಯಕ್ಷತೆಯನ್ನು ಸತೀಶ್ ಕುಮಾರ್ ಬದಿಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕೋಶಾಧಿಕಾರಿ ಹೆಚ್ ಕೆ. ಪುರುಷೋತ್ತಮ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹರಿನಾಥ್ ಜೋಗಿ, ಪುತ್ತೂರು ಜೋಗಿ ಸಮಾಜ…

Read More

UN NETWORKS ಇರಾ : ಇರಾ ತಾಳಿತ್ತಬೆಟ್ಟು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಪ್ರಾರಂಬೋತ್ಸವವನ್ನು ವಿಭಿನ್ನ ರೀತಿಯಲ್ಲಿ ನಡೆಯಿತು. ಹೊಸ ದಾಖಲಾತಿ ವಿದ್ಯಾರ್ಥಿಗಳನ್ನು ಕಳಸ, ಬ್ಯಾಂಡ್‍ವಾದನದೊಂದಿಗೆ ಬಿಸ್ಕತ್ ಕೊಟ್ಟು ಪನ್ನೀರು ಬರ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೆನ್ನಿ ಡಿ’ಸೋಜಾ, ಎಸ್‍ಡಿಎಮ್‍ಸಿ ಉಪಾಧ್ಯಕ್ಷ ಚಂದ್ರಿಕಾ, ಫ್ಲೋರಿನ್ ಡಿ’ಸಿಲ್ವಾ, ಎಸ್‍ಡಿಎಮ್‍ಸಿ ಅಧ್ಯಕ್ಷ ಮುರಳೀಧರ ಭಂಡಾರಿ, ಶಾಲಾ ಮುಖ್ಯ ಶಿಕ್ಷಕಿ ಸುಜಾತ ಟಿ.ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2018-19ನೇ ಸಾಲಿನ ವಿದ್ಯಾರ್ಥಿಗಳಿಗೆ ಹಾಜರಾತಿ ಬಹುಮಾನ, ಶೈಕ್ಷಣಿಕ ಬಹುಮಾನ, ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಶಿಕ್ಷಕ ಜೋನ್ ಅಂತೋನಿ ಫೆರ್ನಾಂಡೀಸ್ ಕಾರ್ಯಕ್ರಮ ನಿರ್ವಹಿಸಿದರು.

Read More

UN NETWORKS ಉಳ್ಳಾಲ : ಕಿನ್ಯ ಕೇಶವ ಶಿಶು ಮಂದಿರದ ಶಾಲಾ ಪ್ರಾರಂಭೋತ್ಸೋವ ಮಕ್ಕಳಿಗೆ ಆರತಿ ಬೆಳಗುವ ಮೂಲಕ ಅರಸಿನ ಕುಂಕುಮದೊಂದಿಗೆ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಶಿಶು ಮಂದಿರದ ಸದಸ್ಯರು, ಮಾತಾಜಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Read More

UN NETWORKS ಬಂಟ್ವಾಳ: ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನಲ್ ಸೆಂಟರ್ ಸುರಿಬೈಲಿನಲ್ಲಿ ಪ್ರಾರ್ಥನಾ ಸಂಗಮ ಹಾಗೂ ಬೃಹತ್ ಇಫ್ತಾರ್ ಕೂಟ ಜೂ02ರಂದು ಅದಿತ್ಯವಾರ ಸಂಜೆ 4.30ಕ್ಕೆ ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ವಠಾರದಲ್ಲಿ ನಡೆಯಲಿದೆ. ಅಸೈಯ್ಯದ್ ಯು.ಎಸ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವವಹಿಸಲಿದ್ದಾರೆ. ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಸಿ.ಎಚ್ ಯೂಸುಫ್ ಮದನಿ ಮಸ್ಕತ್, ವಾಲೆಮುಂಡೋವು ಉಸ್ತಾದ್, ಬೊಳ್ಮಾರ್ ಉಸ್ತಾದ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಟಕಣೆಯಲ್ಲಿ ತಿಳಿಸಿದೆ.

Read More