UN NETWORKS ಉಳ್ಳಾಲ : ಬದ್ರಿಯ ಜುಮಾ ಮಸೀದಿ ದೇರಳಕಟ್ಟೆ ಇದರಅಧೀನ ಸಂಸ್ಥೆ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಶನ್ ಇದರ 35ನೇ ವಾರ್ಷಿಕ ಪ್ರಯುಕ್ತ ರಂಝಾನ್ ಪ್ರಭಾಷ ಹಾಗೂ ಬೃಹತ್ ಇಫ್ತಾರ್ ಕೂಟ ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಅಬುದಾಭಿ ರಂಝಾನ್ ಮಾಸದ ಸಂದೇಶ ನೀಡಿದರು. ಈ ಸಂದರ್ಭ ಅಂತರಾಷ್ಟ್ರೀಯ ಯುವ ವಾಗ್ಮಿ ಸಿಂಸಾರುಲ್ ಹಕ್ ಹುದವಿರವರನ್ನು ಅನ್ಸಾರುಲ್ ಮುಸ್ಲಿಮೀನ್ ಎಸೋಸಿಶನ್ ವತಿಯಿಂದ ಸನ್ಮಾನಿಸಲಾಯಿತು. ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ನ ಅಧ್ಯಕ್ಷ ಇಲ್ಯಾಸ್ ಹಾಜಿ ಡಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಾವಿರಕ್ಕೂ ಅಧಿಕ ಮಂದಿ ಸಮೂಹಿಕ ಇಫ್ತಾರ್ ಕೂಟ ಸಂಗಮದಲ್ಲಿ ಭಾಗವಹಿಸಿದರು. ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ. ಡಿ, ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಡಿ.ಎಂ ಮುಹಮ್ಮದ್, ಹಯಾತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಾಸರ್, ಬದ್ರಿಯ…
Author: UllalaVani
UN NETWORKS ದೇರಳಕಟ್ಟೆ : ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ರಮಳಾನ್ ಪ್ರಭಾಷಣ ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತದ ಅಂತರ್ ರಾಷ್ಟ್ರೀಯ ಪ್ರಭಾಷಣಗಾರ ಅಬುದಾಬಿ ಬ್ರಿಟೀಷ್ ಇಂಟರ್ ನ್ಯಾಷನಲ್ ಸ್ಕೂಲ್ ಉಪಾನ್ಯಾಸಕರು ಆದ ಉಸ್ತಾದ್ ಸಿಂಸಾರುಲ್ ಹಕ್ ಹುದವಿ ರವರು SKSSF ದೇರಳಕಟ್ಟೆ ಶಾಖಾ ಕಚೇರಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ SKSSF ವತಿಯಿಂದ ಅವರನ್ನು ಸನ್ಮಾನಿಸಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ SKSSF ಕೇಂದ್ರ ಸಮಿತಿ ಸದಸ್ಯ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ.ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಇಲ್ಯಾಸ್, ಡಿಎಸ್.ವೈ.ಎಸ್.ಅಧ್ಯಕ್ಷ ಹಾಜಿ ಮೊಹಮ್ಮದ್ ಅಲಿ,SKSSF ಮಾಜಿ ಅಧ್ಯಕ್ಷರಾದ ಜನಾಬ್ ನೌಫಾಲ್ ಬಿ,ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾದ ಹಂಝ HR, ಡಿ.ಎಂ ಮೊಹಮ್ಮದ್, SKSSF ಉಪಾಧ್ಯಕ್ಷರಾದ ಹರ್ಷಾದ್,ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್, ಮೊಹಮ್ಮದ್ ನಡುಪದವು.ಯಾಕೂಬ್ ದೇರಳಕಟ್ಟೆ ಮುಂತಾದವರು ಬಾಗವಹಿಸಿದರು.
UN NETWORKS ಉಳ್ಳಾಲ : ಎಸ್ಸೆಸ್ಸೆಫ್ ತೌಡುಗೊಳಿ ಶಾಖೆ ವತಿಯಿಂದ ಇಫ್ತಾರ್ ಸಂಗಮ ಹಾಗೂ ಬದ್ರಿಯ ಜುಮಾ ಮಸೀದಿ ವತಿಯಿಂದ ಬದ್ರ್ ಮೌಲೂದ್ ಪಾರಾಯನ ಸಂಗಮ ತೌಡುಗೋಳಿ ಬದ್ರಿಯಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಬದ್ರಿಯಾ ಜುಮಾ ಮಸ್ಜಿದ್ ಖತೀಬ ಅಬ್ದುಲ್ ಹಮೀದ್ ಸಖಾಫಿ ದುಅ ಗೈದು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ತೌಡುಗೊಳಿ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಟಿ. ಎಚ್, ಕಾರ್ಯದರ್ಶಿ ಶೇಕ್ ಅಬ್ದುಲ ಬರೆಬಾಯಿ, ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಅಧ್ಯಕ್ಷ ಫಾರೂಕ್ ಸುನ್ನಂಗಳ, ಎಸ್ ವೈ.ಎಸ್ ಶಾಖಾ ಅಧ್ಯಕ್ಷ ಅಬ್ಬಾಸ್ ಹಾಜಿ ಶಾಂತಿಪಲ್ಕೆ,ಎಸ್.ವೈ.ಎಸ್ ಕಾರ್ಯದರ್ಶಿ ಹೈದರ್ ಮುಸ್ಲಿಯಾರ್, ಎಸ್.ವೈ.ಎಸ್ ತೌಡುಗೊಳಿ ಶಾಖಾ ಸದಸ್ಯರಾದ ಅಬ್ಬಾಸ್ ಸುನ್ನಂಗಳ, ಹಮೀದ್ ತೌಡುಗೊಳಿ, ಸ್ಟಾರ್ ಆಟ್ಸ್&ಸ್ಪೋಟ್ಸ್ ತೌಡುಗೊಳಿ ಇದರ ಕಾರ್ಯದರ್ಶಿ ಸಿಹಾಬುದ್ದೀನ್ ತೌಡುಗೊಳಿ, ಅಲ್ ಅಮಾನ್ ಜಿ.ಸಿ.ಸಿ ಸದಸ್ಯರಾದ ಹನೀಫ್ ತೌಡುಗೊಳಿ,ಇಬ್ರಾಹಿಂ ,ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ಸದಸ್ಯರಾದ ಮೊಯ್ದೀನ್ ಕುಂಞಿ ಬಲಪು, ಮುಸ್ತಫಾ ತೌಡುಗೊಳಿ, ಸಿದಿಕ್ ಬವಲಗುರಿ,ಮಸೂದ್ ಬಾಹ್ಶನಿ ಉಪಸ್ಥಿತರಿದ್ದರು.
UN NETWORKS ಕೊಣಾಜೆ : ಕೊಣಾಜೆ ಗ್ರಾಮದ ಕುಂಟಾಲಗುಳಿಯ ಶ್ರೀ ಮಹಾಕಾಳಿ ವನಸಾನಿಧ್ಯದಲ್ಲಿ ಪ್ರತಿಷ್ಠಾ ದಿನದ ಅಂಗವಾಗಿ ಶ್ರೀ ಮಹಾಕಾಳಿ ಸೇವಾ ಮಂಡಳಿಯ ವತಿಯಿಂದ ಸಾಮೂಹಿಕ ದುರ್ಗಾಪೂಜೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ದುರ್ಗಾ ಪೂಜೆಯ ಬಳಿಕ ಕೊಣಾಜೆ ಕುಂಟಲಗುಳಿಯ ಸಿ.ಎಚ್.ಕೃಷ್ಣ ಭಟ್ ಹಾಗೂ ಉದಯಕುಮಾರ್ ಅವರನ್ನು ಶ್ರೀ ಮಹಾಕಾಳಿ ಸೇವಾ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಹಾಕಾಳಿ ವನಸಾನಿಧ್ಯಕ್ಕೆ ಕೊಡುಗೆ ನೀಡಿದ ಈಶ್ವರ ಭಟ್ ಸುಣ್ಣಂಬಳ ಹಾಗೂ ಹೇಮಾವತಿ ನಡುಪದವು ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಭಟ್ ಕೊಣಾಜೆ ಬೀಡು ಹಾಗೂ ಸತೀಶ್ ಕೊಣಾಜೆ ಸನ್ಮಾನ ಪತ್ರ ವಾಚಿಸಿದರು. ಶಿವಪ್ರಕಾಶ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಾಕಾಳಿ ಸೇವಾಮಂಡಳಿಯ ಮಹಾಕಾಳಿ ಸೇವಾ ಮಂಡಳಿ, ಮಹಾಕಾಳಿ ಮಿತ್ರಮಂಡಳಿ ಹಾಗೂ ಮಾತೃಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ 35 ,000 ಅಂತರದಲ್ಲಿದ್ದ ಮತಗಳನ್ನು 11,000 ಅಂತರಕ್ಕೆ ತಂದು ನಿಲ್ಲಿಸಿರುವುದರ ಹಿಂದೆ ಕ್ಷೇತ್ರದ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಇಂತಹ ಕಾರ್ಯಕರ್ತರಿಂದ ಹಾಗೂ ಪ್ರಧಾನಿ ಮೋದಿಯವರ ಜಗತ್ತು ಮೆಚ್ಚುವ ಕಾರ್ಯಗಳಿಂದಾಗಿ ಮತ್ತೊಮ್ಮೆ ಜಗತ್ತಿನಾದ್ಯಂತ ಪ್ರಧಾನಿ ಮೋದಿ ಶಕ್ತಿಯನ್ನು ಪ್ರದರ್ಶಿಸುವ ಅವಕಾಶ ದೊರೆತಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ಅವರು ಪಂಡಿತ್ ಹೌಸ್ ನಲ್ಲಿ ಬಿಜೆಪಿ ಕಾರ್ಯಕರ್ತರ ನಡೆಸಿದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಜಗತ್ತು ನೋಡುತ್ತಿದೆ ದೇಶದ ಸಂಭ್ರಮ. ಮೋದಿ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತೊಂದು ಅವಕಾಶ ಸಿಕ್ಕಿದೆ. ಪೂರ್ಣ ಬಹುಮತ ಸೇರಿದಂತೆ 302 ಸೀಟುಗಳನ್ನು ಪಡೆದ ಬಿಜೆಪಿ, ಎನ್ಡಿಎ ಜೊತೆಗೆ 350 ಸೀಟುಗಳು ಪಡೆಯುವುದರ ಮೂಲಕ ಅತ್ಯಂತ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಚಿಂತನೆಯಂತೆ ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸಿ, ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಲಾಗಿರುವುದು ದೊಡ್ಡ ಯಶಸ್ಸು ಎಂದರು. ಈ ಸಂದರ್ಭ ಉದ್ಯಮಿ ಚಂದ್ರಹಾಸ್…
UN NETWORKS ಕುತ್ತಾರು : ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಅರ್ಚಕ ವಿಜಯ ಭಟ್ ಪ್ರಾರ್ಥನೆ ನೆರವೇರಿಸಿದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಮಿತಿಯ ನಾರಾಯಣ ಕುಂಪಲ,ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ ಘಟಕದ ಸಂಚಾಲಕ ಸುನಿಲ್ ಕುಮಾರ್, ರಾಕೇಶ್ ಕುಮಾರ್ ಕುತ್ತಾರ್,ರಾಜು ಕುತ್ತಾರ್, ಪ್ರಜ್ವಲ್ ಮುಂಡೊಳಿ,ಮಹೇಶ್ ಮುಂಡೊಳಿ,ಜಗದೀಶ್ ಸಂತೋಷ ನಗರ,ಪ್ರೇಮ್ ಸಂತೋಷ ನಗರ,ಸತೀಶ್ ಪಂಡಿತ್ಹೌಸ್, ಚಂದ್ರಕಾಂತ್ ಪ್ರಕಾಶ್ ನಗರ, ಶಶಿಧರ, ಸೋಮನಾಥ ಕುತ್ತಾರ್,ನಿಖೀಲ್,ದಿನೇಶ್ಸಂತೋಷ ನಗರ,ದೇವಸ್ಥಾನದ ಉಪಾಧ್ಯಕ್ಷ ಈಶ್ವರ, ಗಿರೀಶ್ ಪಿಲಾರು ಮೊದಲಾದವರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಗಾಂಧಿ ಹಂತಕ ನಾಥುರಾಂ ಗೋಡ್ಸೆ ಜನ್ಮದಿನಾಚರಣೆ ಆಚರಿಸಿದ ಹಿಂದು ಮಹಾ ಸಭಾ ಕಾರ್ಯಕರ್ತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಖಂಡನನ್ನು ಉಳ್ಳಾಲ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಖಿಲ ಭಾರತೀಯ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯ ಪ್ರಭಾರಿ, ತೊಕ್ಕೊಟ್ಟು ನಿವಾಸಿ ರಾಜೇಶ್ ಪೂಜಾರಿ ಯಾನೆ ಟಿಕ್ಕಿ ರಾಜ ಬಂಧಿತ . ಮೇ.19 ರಂದು ರಾಜೇಶ್ ಪೂಜಾರಿ ನೇತೃತ್ವದಲ್ಲಿ ಕುಂಪಲದ ಆಶ್ರಯಕಾಲನಿ ನಿವಾಸಿ ವಿಶ್ವನಾಥ್ ಎಂಬವರ ಮನೆಯಲ್ಲಿ ಗೋಡ್ಸೆ ಜನ್ಮದಿನಾಚರಣೆ ಆಚರಿಸಲಾಗಿತ್ತು. ಗೋಡ್ಸೆ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ನಡೆಸಿದ ಫೋಟೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಆಧಾರದಂತೆ ಉಳ್ಳಾಲ ಪೊಲೀಸ್ ಉಪನಿರೀಕ್ಷಕ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜೇಶ್, ಲೋಹಿತ್, ವಿಶ್ವನಾಥ್ ಪೂಜಾರಿ, ಧರ್ಮೇಂದ್ರ, ಲೋಕೇಶ್ ಎಂಬ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತ ರಾಜೇಶ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
UN NETWORKS ದೇರಳಕಟ್ಟೆ: ಬದ್ರಿಯಾ ಜುಮಾ ಮಸ್ಜಿದ್ ದೇರಳಕಟ್ಟೆ ಇದರ ಅಂಗ ಸಂಸ್ಥೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ವತಿಯಿಂದ ಮೇ 24 ಶುಕ್ರವಾರ ಜುಮಾ ನಮಾಝ್ ನ ನಂತರ ದೇರಳಕಟ್ಟೆ ಮಸೀದಿ ವಠಾರದಲ್ಲಿ ಅಂತರಾಷ್ಟ್ರೀಯ ಯುವ ವಾಗ್ಮಿ ಬಹು! ಸಿಂಸಾರುಲ್ ಹಕ್ ಹುದವಿ ಅಬುದಾಭಿ ರವರಿಂದ ರಂಝಾನ್ ಪ್ರಭಾಷಣವು ನಡೆಯಲಿದೆ ಎಂದು ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ರಿ) ಹಯಾತುಲ್ ಇಸ್ಲಾಂ ಮದರಸ ಪ್ರಕಟನೆಯಲ್ಲಿ ತಿಳಿಸಿದೆ.
UN NETWORKS ಬೆಂಗಳೂರು : ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್ ಬೆಂಗಳೂರು ಇದರ ಆಶ್ರಯದಲ್ಲಿ ಬೃಹತ್ ಇಫ್ತಾರ್ ಕೂಟವು ಮೇ 22 ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕಬ್ಬನ್ ಪೇಟೆಯ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಎಮ್ ಉಮ್ಮರ್ ಹಾಜಿ ವಹಿಸಲಿದ್ದಾರೆ. ಹಾಶಿಮ್ ಜಿಫ್ರಿ ತಂಗಳ್ ದುಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಲ್ಲೇಗ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದಿಕ್ ಜಲಾಲಿ ಮತ್ತು ಶಾಫಿ ಸಹದಿ ಬೆಂಗಳೂರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಕ್ಫ್ ಸಚಿವರಾದ ಜನಾಬ್ ಜಮೀರ್ ಅಹ್ಮದ್ ಖಾನ್, ರಾಜ್ಯ ನಗರಾಭಿವೃದ್ಧಿ ಜನಾಬ್ ಯು ಟಿ ಖಾದರ್, ವಿಧಾನಸಭಾ ಸದಸ್ಯ ಬಿ ಎಮ್ ಫಾರೂಕ್, ಮಾಜಿ ಪೊಲೀಸ್ ಆಯುಕ್ತರಾದ ಜಿ.ಎ ಬಾವ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಝಫ್ರುಲಾಹ್ ಖಾನ್, ಬಿಬಿಎಮ್ ಪಿ ಕಾರ್ಪೊರೇಟರ್ಗಳಾದ ಮುಜಾಹಿದ್ ಪಾಷ, ಇಮ್ರಾನ್ ಪಾಷ, ಪುತ್ತೂರು ಕಾರ್ಪೊರೇಟರ್ ಮಹಮದ್…
UN NETWORKS ಬೆಳ್ತಂಗಡಿ: ಬೆಳ್ತಂಗಡಿಯ ಗರ್ಡಾಡಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೈಂಟ್ ಸೆಬಸ್ಟಿನ್ ಚರ್ಚ್ ಉದ್ಘಾಟನಾ ಸಮಾರಂಭವು ಕಳೆದ ಶನಿವಾರ ಬೃಹತ್ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಜರುಗಿತು. ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ನೂತನ ಚರ್ಚ್ನ್ನು ಆಶೀರ್ವಚಿಸಿ ಉದ್ಘಾಟಿಸಿ ದಿವ್ಯಪೂಜೆ ನೆರವೇರಿಸಿ ಸಮಾರಂಭ ನಡೆಸಿದರು. ಪ್ರಾರ್ಥನೆ ಜೊತೆಗೆ ಹೊಸ ಬೆಲ್ನ್ನು ರಿಂಗ್ ಮಾಡಿ, ಬಿಷಪ್ ರಿಬ್ಬನ್ ಕತ್ತರಿಸಿದ ಬಳಿಕ ಚರ್ಚನ್ನು ಭಕ್ತರಿಗಾಗಿ ತೆರೆಯಲಾಯಿತು. ಬಳಿಕ ನೆರೆದ ಸಮಸ್ತ ಧರ್ಮಗುರುಗಳಿಗೆ ಸಾಮೂಹಿಕ ಅಭಿನಂದನೆ ಸಮರ್ಪಣಾ ಸಮಾರಂಭವನ್ನು ನೆರವೇರಿಸಲಾಯಿತು. ಸಮೂಹ ಪ್ರಾರ್ಥನೆ ಬಳಿಕ ಚರ್ಚ್ನ ಪಾಲನಾ ಮಂಡಳಿ ಗೌರವಾರ್ಪಣಾ ಕಾರ್ಯಕ್ರಮ ನಡೆಸಿತು. ಕಾಪುಚಿನ್ನ ಹೋಲಿ ಟ್ರಿನಿಟಿ ಪ್ರೊವಿನ್ಸಿಯಲ್ ರೆ| ಫಾ| ಆಲ್ವಿನ್ ಡಯಾಸ್ ಮುಖ್ಯ ಅತಿಥಿಯಾಗಿದ್ದು, ಚರ್ಚ್ನ ಪೂರ್ವ ಧರ್ಮಗುರು, ಸಹಾಯಕ ಧರ್ಮಗುರು, ಆಲ್ವಿನ್ ಸಿಕ್ವೇರಾ (ಓರ್ಲೆಮ್-ಮಲಾಡ್, ಮುಂಬಯಿ) ಸೇರಿದಂತೆ ಇತರ ದಾನಿಗಳನ್ನು, ಪಾಲನಾ ಮಂಡಳಿಯ ಮುಖ್ಯಸ್ಥರನ್ನು ಸಮಾರಂಭದಲ್ಲಿ ಬಿಷಪ್ ಡಾ| ಪೀಟರ್ ಪೌಲ್ ಗೌರವಿಸಿದರು. ಬೆಳ್ತಂಗಡಿ ಶಾಸಕ ಹರೀಶ್…

