Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ವಿದ್ಯಾ ಸಂಸ್ಥೆಗಳಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ನಡೆಯಿತು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ ಒಂದನೇ ತರಗತಿಗೆ ದಾಖಾಲಾತಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಯ್ಯಿದ್ ಮದನಿ ಚಾರೀಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಯು. ಕೆ. ಇಬ್ರಾಹಿಂ, ಉಳ್ಳಾಲ ನಗರ ಸಭೆಯ ಸಹಾಯಕ ಅಭಿಯಂತರ ಉಮೇಶ್ ಕಾಮತ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರನ್ನು ಗೌರವಿಸಿದರು, ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಸಮನ್ವಯಾ„ಕಾರಿ ಡಾ| ಪ್ರಶಾಂತ್ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿದರು .ವೇದಿಕೆಯಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ಅಬ್ದುಲ್ ಲತೀಫ್ ,ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯು.ಎನ್ ಇಬ್ರಾಹಿಂ ,ಕೋಶಾಧಿಕಾರಿ ಅಬ್ದುಲ್ ಕರೀಂ ಸದಸ್ಯ ಅಲ್ತಾಫ್ ಯು.ಹೆಚ್. ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿ .ಶಿಕ್ಷಕಿ ಸಪ್ನಾರವರು ವಂದಿಸಿದರು .ಶಿಕ್ಷಕಿ ಜಯಲಕ್ಷ್ಮಿ…

Read More

UN NETWORKS ತೊಕ್ಕೊಟ್ಟು : ಹಿರಾ ಬಾಲಕಿಯರ ಪ್ರೌಢ ಶಾಲೆ ಬಬ್ಬುಕಟ್ಟೆ, ತೊಕ್ಕೊಟ್ಟು ,ಇಲ್ಲಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಇಸ್ಲಾಂ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಕೆ.ಎಂ ಅಶ್ರಫ್ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳು ಶಿಕ್ಷಣದಲ್ಲಿ ಯಾವ ರೀತಿ ಮುಂದುವರಿಯಬೇಕು, ಶಿಕ್ಷಣದ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಶಾಲಾ ವಿದ್ಯಾರ್ಥಿನಿಯರಾದ ಮುಫಿದರವರು ಸ್ವಾಗತಿಸಿದರು. ಹನೀನ ಶರೀಫ ಕಾರ್ಯಕ್ರಮವನ್ನು ನಿರೂಪಿಸಿದರು. ಫಾತಿಮ ಹನೀನ್ ವಂದಿಸಿದರು.

Read More

UN NETWORKS ಉಳ್ಳಾಲ : ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದ್ದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ.98 ಪೂರ್ಣಗೊಂಡಿದೆ.  ಉಳಿದ ಕಾಮಗಾರಿ ಶೀಘ್ರವೇ ಪೂರ್ಣಗೊಂಡು  ಜೂ.10 ಕ್ಕೆ  ಜನಸಂಪರ್ಕಕ್ಕೆ ಅನುಕೂಲವಾಗುವಂತೆ ವಾಹನಗಳು ತೆರಳಲು ತಾವೇ ನಿಂತು ಗ್ರೀನ್ ಸಿಗ್ನಲ್ ನೀಡುವುದಾಗಿ  ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ತೊಕ್ಕೊಟ್ಟು ಭರದಿಂದ ಸಾಗಿರುವ  ಫ್ಲೈಓವರ್ ಕಾಮಗಾರಿಯ ಲೋಪ, ಅಡೆತಡೆಗಳು ಹಾಗೂ ಕಳಪೆಯಾಗಿದ್ದಲ್ಲಿ  ವೀಕ್ಷಿಸಲು ಬುಧವಾರ ಭೇಟಿ ನೀಡಿದ ಸಂದರು  ಸ್ಥಳೀಯರಿಂದ  ಅಭಿಪ್ರಾಯಗಳನ್ನು ಪಡೆದುಕೊಂಡರು. ತಾಂತ್ರಿಕ ಅಡಚಣೆಗಳಿಂದಾಗಿ  ಫ್ಲೈಓವರ್ ಕಾಮಗಾರಿ ವಿಳಂಬವಾಗಿದೆ. ಕೇಂದ್ರ ಮಂತ್ರಿ ನಿತಿನ್ ನಿತಿನ್ ಗಡ್ಕರಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿ ವಿಳಂಬವಾಗಿದ್ದ ಕಾಮಗಾರಿಗೆ ವೇಗ ಕೊಡುವ ಕೆಲಸವಾಗಿತ್ತು. ಆದರೆ ನೀತಿ ಸಂಹಿತೆ ಜಾರಿಯಿಂದಾಗಿ ಸಭೆಯನ್ನು ಮುಂದುವರಿಸಲು ಅಸಾಧ್ಯವಾಯಿತು. ಇದೀಗ ಚುನಾವಣಾ ಮುಗಿದು ನೀತಿ ಸಂಹಿತೆ ಮುಗಿದ ಹಿನ್ನೆಲೆಯಲ್ಲಿ ವೀಕ್ಷಣೆ  ಮಾಡುವ ನಿಟ್ಟಿನಲ್ಲಿ ಇ ಭೇಟಿಯಾಗಿದೆ.  ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಶೇ.90  ಮುಗಿದಿದೆ. ಇನ್ನು ಶೇ.2  ಬಾಕಿಯಿದೆ.  ಈ ಹಿಂದೆ…

Read More

UN NETWORKS ಮಂಗಳೂರು : ಕುಣಿಲ್ ಸೆಂಟರ್ ಮ್ಯೆಂಟನನ್ಸ್ ಕಮಿಟಿ ವತಿಯಿಂದ ಮಂಗಳೂರು ನಗರದ ಹಂಪನಕಟ್ಟ ದಲ್ಲಿ ಇರುವ ಕುಣಿಲ್ ಸೆಂಟರ್ ಮ್ಯೆಂಟನನ್ಸ್ ಎಂಡ್ ಡೆವಲಪರ್ಸ್ ಕಮಿಟಿ ವತಿಯಿಂದ ಸರ್ವ ಧರ್ಮ ಇಪ್ತಾರ್ ಕೂಟ ನಡಯಿತು. ಈ ಸಂದರ್ಬದಲ್ಲಿ ಮ್ಯೆಂಟನನ್ಸ್ ಕಮಿಟಿ ಅದ್ಯಕ್ಷರಾದ ಮೊಹಶಿರ್ ಅಹಮ್ಮದ್ ಸಾಮಣಿಗೆ,ಕಮಿಟಿ ಉಸ್ತುವಾರಿಗಳಾದ ರಿಯಾಝ್ ಆರ್ ಕೆ,ರಶೀದ್ ಚುನರಿ,ಕೊಶಾಧಿಕಾರಿ ಕ್ರಷ್ಣ ಸಾಲ್ಯಾನ್ ಬಿಜ್ಯೆ, ಮ್ಯೆಂಟನನ್ಸ್ ಕಮಿಟಿ ಉಪಾಧ್ಯಕ್ಷರಾದ ಪಯಾಝ್ ,ಸೆಮೀರ್, ಪ್ರದಾನ ಕಾರ್ಯದರ್ಶಿ ಆದಮ್ ಶಾಕಿರ್,ರೆಹಾಮಾನ್ ,ಸಿದ್ದಿಕ್ ಜೊಕ್ಕಟ್ಟೆ,,ಸಪ್ವಾನ್ ಉಳ್ಲಾಲ್,ಶರೀಪ್,ರಶಿದ್ ,ಸೆಮೀರ್ ಕೆ,ಸಿ ರೋಡ್ ಉಪಸ್ಥಿತರಿದ್ದರು.

Read More

UN NETWORKS ತೊಕ್ಕೊಟ್ಟು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ರಂಗಚಲನ (ರಿ) ಮಂಗಳೂರು ಆಶ್ರಯದಲ್ಲಿ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ತುಳು ಭಾಷಾ ಕಮ್ಮಟವನ್ನು ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೇಸಿಗೆ ರಜೆಯ ದಿನಗಳಲ್ಲಿ ಇಂತಹ ಕಮ್ಮಟಗಳು ಮಕ್ಕಳಿಗೆ ಮತ್ತಷ್ಟು ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ತುಳುವಿನಲ್ಲೇ ಮಾತು-ವ್ಯವಹಾರಗಳು ಹೆಚ್ಚಿಸಿದರೆ ಭಾಷೆ ಸಮೃದ್ಧಿಗೊಳ್ಳಲಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತುಳುವಿನ ಬೆಳವಣಿಗೆಗಾಗಿ ಶಾಲಾ ಕಾಲೇಜುಗಳಲ್ಲಿ ತುಳು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. 36 ಕಾಲೇಜುಗಳಲ್ಲಿ ತುಳು ಕಾರ್ಯಕ್ರಮ ನಡೆದಿದ್ದು, ಮುಂದೆಯೂ ಇದು ಮುಂದುವರಿಯಲಿದೆ. 2018-19ನೇ ನೇ ಸಾಲಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 41 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸೆಸೆಲ್ಸಿ ಪರೀಕ್ಷೆ ಬರೆದ 618 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಈ ಪೈಕಿ 65 ಮಕ್ಕಳು ನೂರಕ್ಕೆ 100 ಅಂಕ ಪಡೆದು…

Read More

UN NETWORKS ತೊಕ್ಕೊಟ್ಟು : ಉಳ್ಳಾಲವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 60 ಕೋಟಿ ರೂ ಮತ್ತು ಸಮಗ್ರ ಕುಡಿಯುವ ನೀರಿನ ವ್ಯವಸ್ಥೆಗೆ 200 ಕೋಟಿ ರೂ. ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವಹಾಗೂ ಜಿಲ್ಲಾ ಉಸ್ತುವಾರಿ ಸಚಿವಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಉಳ್ಳಾಲದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು ಉಳ್ಳಾಲ ಸಂಪರ್ಕಿಸುವ ತೊಕ್ಕೊಟ್ಟಿನಿಂದ ದೇರಳಕಟ್ಟೆವರೆಗೆ ಚತುಷತ ರಸ್ತೆ 17 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೋಟೆಕಾರ್ ಸೋಮೆಶ್ವರ ಮಾರ್ಗವಾಗಿ ಉಳ್ಳಾಲದ ಮುಕ್ಕಚ್ಚೇರಿಯಂದ ಅಬ್ಬಕ್ಕ ಸರ್ಕಲ್‍ವರೆಗೆ ರಸ್ತೆ ಅಗಲೀಕರಣ ಮತ್ತು ಅಭವೃದ್ಧಿಗೆ 6 ಕೋಟಿ, ಅಬ್ಬಕ್ಕ ಸರ್ಕಲ್‍ನಿಂದ ಕೋಟೆಪುರ 5 ಕೋಟಿ, ಅಬ್ಬಕ್ಕ ಸರ್ಕಲ್‍ನಿಂದ ಮಾಸ್ತಿಕಟ್ಟೆ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರಸ್ತೆ ಸೌಂದರ್ಯಕರಣಕ್ಕೆ ಹೆಚ್ಚುವರಿ 12 ಕೋಟಿ, ಉಳ್ಳಾಲ ಮುಖ್ಯ ರಾಜಕಾಲುವೆ 5ಕೋಟಿ,ಗ್ರಾಮ ಮಟ್ಟದ ವಿವಿಧ ರಸ್ತೆಗಳಿಗೆ 10 ಕೋಟಿ ವಿಶೇಷ ಅನುದಾನ, ಉಳ್ಳಾಲ ನಗರಸಭೆ…

Read More

UN NETWORKS ಉಳ್ಳಾಲ : ಸೋಮೆಶ್ವರ ಉಚ್ಚಿಲ ಸಮುದ್ರದ ಬಳಿ ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರ ನಾರಾಯಣ ಜೆ.ಉಚ್ಚಿಲ್ (71) ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಳೆದ ಹಲವು ದಶಕಗಳಿಂದ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿದ್ದ ನಾರಾಯಣ್ ಕಳೆದ ಹಲವು ವರ್ಷಗಳಿಂದ ಟ್ಯೂಬ್ ಬಳಸಿಕೊಂಡು ಏಕಾಂಗಿಯಾಗಿ ಮೀನುಗಾರಿಕೆ ನಡೆಸುತ್ತಿದ್ದರು. ಬೆಳಗ್ಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಇವರ ಟ್ಯೂಬ್ ಸಮುದ್ರದಲ್ಲಿ ತೇಲಿಕೊಂಡು ಹೋಗುವುದನ್ನು ಸ್ಥಳೀಯ ಮೀನುಗಾರರು ಗಮನಿಸಿ ನಾರಾಯಣ್ ಅವರನ್ನು ಹುಡುಕಾಡಿದಾಗ ಪತ್ತೆಯಾಗಿರಲಿಲ್ಲ. ಬಳಿಕ ಅವರ ಬನಿಯಾನ್ ಸಮುದ್ರದ ಮದ್ಯೆ ತೇಲುತ್ತಿರುವುದನ್ನು ಗಮನಿಸಿ ಅಲ್ಲಿಗೆ ತೆರಳಿದಾಗ ಮುಳುಗಿ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಮೃತ ನಾರಾಯಣ್ ಅವರ ಪತ್ನಿಆರು ತಿಂಗಳ ಹಿಂದೆ ಮೃತಪಟ್ಟಿದ್ದು, ಮೂವರು ಪುತ್ರಿಯರನ್ನುಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಉಳ್ಳಾಲ: ಯುಡಿಎಫ್ ಬೆಂಬಲಿತ ಅಭ್ಯರ್ಥಿ ರಾಜಮೋಹನ್ ಉನ್ನಿತ್ತಾನ್ ಕಾಸರಗೋಡು ಸಂಸದರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರದ ಲೀಗ್ ಕಾರ್ಯಕರ್ತರು ಧ್ವಜದೊಂದಿಗೆ  ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ವಿಜಯೋತ್ಸವ ಆಚರಿಸುವುದನ್ನು ವಿರೋಧಿಸಿದ ಉಳ್ಳಾಲ ಪೊಲೀಸರ ವಿರುದ್ಧ ಯುಡಿಎಫ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನ ಜಖಂಗೊಳಿಸಲು ಯತ್ನಿಸಿರುವ ಘಟನೆ ತಲಪಾಡಿ ಟೋಲ್ ಗೇಟ್ ಸಮೀಪ ಶನಿವಾರ ಸಂಜೆ ಸಂಭವಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿ  ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದ ತೂಮಿನಾಡು ಕಡೆಯಿಂದ  ಕರ್ನಾಟಕದ ತಲಪಾಡಿ ಟೋಲ್ ಸಮೀಪಕ್ಕೆ ಮುಸ್ಲಿಂ ಲೀಗ್ ಧ್ವಜ ಹಾರಿಸಿಕೊಂಡು ಬಂದ ನಾಲ್ವರು ಬೈಕ್ ಸವಾರರು  ಘೋಷಣೆಗಳನ್ನು ಕೂಗುತ್ತಾ  ವಿಜಯವನ್ನು ಆಚರಿಸುತ್ತಿದ್ದರು. ಇದನ್ನು ತಲಪಾಡಿ ನಿವಾಸಿಗಳು ವಿರೋಧಿಸಿದಾಗ ಎರಡು ಕಡೆಯಿಂದ ಮಾತಿನಚಕಮಕಿ ನಡೆದು   ಎರಡು ಬೈಕ್ ವಾಪಸ್ಸಾಗಿತ್ತು.  ಸ್ವಲ್ಪ ಹೊತ್ತಿನ ನಂತರ ಕೇರಳದ ಕೆಎಸ್ ಆರ್‍ಪಿ ಪೊಲೀಸರ ವಾಹನ ತಲಪಾಡಿಗೆ ಬಂದು  ಅಲ್ಲಿ ಸೇರಿದ್ದ ಯುವಕರನ್ನು ` ತೆರಳುವಂತೆ ಸೂಚಿಸಿದ್ದಾರೆ.  ಆ ಬಳಿಕ ಮತ್ತೆ…

Read More

UN NETWORKS ಉಳ್ಳಾಲ: ಯಾವುದೇ ಸಂಘ-ಸಂಸ್ಥೆಗಳು ಧನಾತ್ಮಕವಾಗಿ ಮುನ್ನಡೆದಾಗ ಆಡಳಿತ ವ್ಯವಸ್ಥೆ ಸುಲಭವಾಗುತ್ತದೆ. ಮುನ್ನೂರು ಯುವಕ ಮಂಡಲ ಕಳೆದ ಐವತ್ತು ವರ್ಷಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸಫಲವಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಕುತ್ತಾರ್‍ನಲ್ಲಿರುವ ಮುನ್ನೂರು ಯುವಕ ಮಂಡಲದ ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸ್ಮರಣ ಸಂಕಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಂಘ-ಸಂಸ್ಥೆಗಳು ಸುವರ್ಣ ಮಹೋತ್ಸವ ಆಚರಿಸುವುದು ಮುಖ್ಯವಲ್ಲ, ಸುದೀರ್ಘ ಅವಧಿಯಲ್ಲಿ ಆ ಸಂಘದಿಂದ ಸಮಾಜಕ್ಕೆ ಎಷ್ಟು ಲಾಭವಾಯಿತು, ಎಷ್ಟು ಫಲಾನುಭವಿಗಳಿಗೆ ಪ್ರಯೋಜನವಾಗಿದೆ ಎನ್ನುವುದು ಮುಖ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಂಘ-ಸಂಸ್ಥೆಗಳು ಹುಟ್ಟು ಪಡೆದ ಮಾತ್ರಕ್ಕೆ ಮುನ್ನಡೆಯುತ್ತದೆ ಎಂದೇನೂ ಇಲ್ಲ. ಆದರೆ ಮುನ್ನೂರು ಯುವಕ ಮಂಡಲ ಸುದೀರ್ಘ ಅವಧಿಯಲ್ಲಿ ಸೇವೆಯೊಂದಿಗೆ ಸಂವತ್ಸರದಲ್ಲೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ, ಇಂದಿನ ಕಾಲದಲ್ಲಿ ಸಿಇಟಿ. ನೀಟ್ ಸೇರಿದಂತೆ ಹಲವಾರು…

Read More

UN NETWORKS ಉಳ್ಳಾಲ : ಉತ್ಸಾಹಿ ಯುವ ಜನಾಂಗ ಹೆಚ್ಚು,ಹೆಚ್ಚು ಗಾಳದ ಕೊಂಕಣಿ ಅಭ್ಯುದಯ ಸಂಘದಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಬೇಕು ಎಂದು ಉಳ್ಳಾಲ ಉಳಿಯ ಶ್ರೀಧರ್ಮರಸು ಕ್ಷೇತ್ರದ ಅಂತು ಗುರಿಕಾರ್ ಹೇಳಿದ್ದಾರೆ. ಕುತ್ತಾರ್ ಶ್ರೀ ದುರ್ಗಾವಾಹಿನಿ ಮಹಿಳಾ ಮಂಡಲದ ಸಭಾಭವನದಲ್ಲಿ ಭಾನುವಾರ ನಡೆದ ಗಾಳದ ಕೊಂಕಣಿ ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಉಚಿತ ಪುಸ್ತಕವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಂಕವನ್ನೇ ಪ್ರಮುಖವಾಗಿ ಗುರಿಯಾಗಿಸುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯೆಯ ಮೌಲ್ಯ ಕಸಿಯುತ್ತಿರುವುದು ವಿಷಾದನೀಯ,ಪುಸ್ತಕದ ಜ್ಞಾನದ ಜೊತೆಗೆ ಪ್ರಾಕ್ಟಕಲ್ ಜ್ಞಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಜೆ.ರವೀಂದ್ರ ನಾಯ್ಕ್ ಹೇಳಿದರು‌. 2017-18ಹಾಗೂ 2018-19 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಕಾಜಲ್,ಮಾನ್ವಿತ್,ಚಿರಾಗ್ ,ದೀಕ್ಷಿತಾ,ಧನ್ಯಶ್ರೀ,ಕೀರ್ತನಾ ಆದೇರೀತಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಅಶೀಕಾ,ಶರಣ್ ಆರ್,ಲಿಕಿತಾರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಹಾಗೆಯೇ ಸಂಘದ…

Read More