Author: UllalaVani

Kannada News From Coastal Karnataka

UN networks ಉಳ್ಳಾಲ: ಶ್ರೀ ವಿದ್ಯಾರಣ್ಯ ಕಲಾವೃಂದ ಉಳ್ಳಾಲ ಇದರ ಆಶ್ರಯದಲ್ಲಿ ನಡೆದ 38 ನೇ ವರ್ಷದ ಶ್ರೀ ವಿದ್ಯಾ ವಿನಾಯಕ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯಿಂದ ಹಿಡಿದು ವಿಸರ್ಜನೆವರೆಗೂ ಎಲ್ಲಾ ಸಮುದಾಯದವರು ಭಾಗಿಯಾಗುವ ಮೂಲಕ ಈ ಬಾರಿಯ ಗಣೇಶೋತ್ಸವ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕೆಥೋಲಿಕ್ ಸಮುದಾಯದವರೇ ಹೆಚ್ಚಿರುವ ಉಳ್ಳಾಲ ಹೊಯ್ಗೆಯ ಕಿಂಗ್ ಸ್ಟಾರ್ ಸೇವಾ ಸಮಿತಿ ಉಳ್ಳಾಲದ ಗಣೇಶೋತ್ಸವ ಕ್ಕೆ ಶುಭ ಕೋರಿದ್ದಲ್ಲದೆ, ಗಣೇಶ ವಿಗ್ರಹ ವಿಸರ್ಜನೆಯಲ್ಲಿ ಭಾಗವಹಿಸಿ ಬಳಿಕ ನಡೆದ ವಿಸರ್ಜನೆಯಲ್ಲಿ ಕಿಂಗ್ ಸ್ಟಾರ್ ನ ಸದಸ್ಯರೆಲ್ಲರೂ ಕೆರೆ ನೀರಿಗೆ ಇಳಿದು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.ಉತ್ಸವಕ್ಕೆ ಉಳ್ಳಾಲ ನಗರಸಭೆ ಸದಸ್ಯೆ ವೀಣಾ ಶಾಂತಿ ಡಿಸೋಜ, ನವೀನ್ ಡಿಸೋಜ, ರಿಯಾಝ್ ಮಂಗಳೂರು, ಪ್ರೇಮ್ ಪ್ರಕಾಶ್ ಡಿಸೋಜ, ಸಿರಿಲ್ ಜಾನ್ ಡಿಸೋಜ, ಶೈನಿ ಡಿಸೋಜ ಸ್ವಾಗತ ಕೋರಿದ್ದರು. ಕೋಮು ಸೂಕ್ಷ್ಮ ಪ್ರದೇಶ ಎಂದು ಕರೆಯಲ್ಪಡುತ್ತಿರುವ ಉಳ್ಳಾಲಕ್ಕೆ ಗಣೇಶೋತ್ಸವ ಉತ್ತಮ ವಾತಾವರಣವನ್ನು ನಿರ್ಮಿಸುವ ಮೂಲಕ ಶಾಂತಿಯ ಉಳ್ಳಾಲ ಎಂಬುದನ್ನು ಸಾಬೀತುಪಡಿಸಿದೆ ಎಂಬುದು ನಗರಸಭೆ ಸದಸ್ಯರ ಅಭಿಪ್ರಾಯವಾಗಿದೆ.ಉಳ್ಳಾಲ ಉಳಿಯ…

Read More

UN networks ಉಳ್ಳಾಲ: ಯುವತಿ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿಬಂದಿದ್ದು, ಉಳ್ಳಾಲದ ಮೀನುಗಾರರು ಮೃತದೇಹ ಸಮುದ್ರ ಸೇರುವುದನ್ನು ತಪ್ಪಿಸಿ ಹೊಯ್ಗೆಬಜಾರ್ ತೀರಕ್ಕೆ ತಲುಪಿಸಿದ್ದಾರೆ. ಸುಮಾರು 20-35 ರ ಒಳಗಿನ ಯುವತಿ ಮೃತದೇಹ ಇದಾಗಿದೆ. ಪ್ಯಾಂಟ್ ಹಾಗೂ ಟೀಶಟ್ ೯ ಧರಿಸಿದ್ದಳು. ಆತ್ಮಹತ್ಯೆ ಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ದೋಣಿಯವರು ಉಳ್ಳಾಲ ಉಳಿಯ ನಿವಾಸಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮೃತದೇಹವಿದ್ದ ಸ್ಥಳಕ್ಕೆ ತೆರಳಿ ಇಬ್ಬರು ಮೀನುಗಾರರು ಅದನ್ನು ಹಿಡಿದು ಹೊಯ್ಗೆಬಝಾರ್ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ದೋಣಿಯಲ್ಲಿ ಪ್ರೇಮ್ ಪ್ರಕಾಶ್, ಅನಿಲ್ ಮೊಂತೇರೋ ಇದ್ದರು. ಪಾಂಡೇಶ್ಬರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.

Read More

UN networks ಸೋಮೇಶ್ವರ : ಜಿಲ್ಲಾಡಳಿತದ ಆದೇಶದಂತೆ ಲಕ್ಷ ಲಸಿಕಾ ಮೇಳದನ್ವಯ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ನಡೆದ ಕೋವಿಡ್-19 ಲಸಿಕಾ ಶಿಬಿರದಲ್ಲಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಒಟ್ಟು 606 ನಾಗರಿಕರು ಪ್ರಯೋಜನವನ್ನು ಪಡೆದುಕೊಂಡರು. ಇದರಲ್ಲಿ ೧೧ ಮಂದಿ ಅನಾರೋಗ್ಯ ಪೀಡಿತರ ಮನೆಗೆ ಹೋಗಿ ಸಿಬ್ಬಂದಿ ಲಸಿಕೆಯನ್ನು ನೀಡಿದರು. ಶಿಬಿರದಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆ, ಹನುಮಾನ್ ನಗರ, ಕುಂಪಲ ಮತ್ತು ಕೊಲ್ಯಶಾರದಾ ಸಭಾ ಭವನ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಎಲ್ಲಾ ವಾರ್ಡುಗಳ ಮಾಜಿ ಸದಸ್ಯರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಹಾಗೂ ಉಚ್ಚಿಲ ರಹಮಾನಿಯಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಮಾಜಿ ಸದಸ್ಯರು, ಸಾರ್ವಜನಿಕರು, ಕೋಟೆಕಾರು ಆರೋಗ್ಯಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು.ಈ ಸಂದರ್ಭ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ವಿ ಆಳ್ವ ನೇತೃತ್ವದಲ್ಲಿ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಕಂದಾಯ ನಿರೀಕ್ಷಕ ಸಿದ್ಧರಾಯ ಕಟ್ಟಿಮನಿ ಹಾಗೂ ಸಿಬ್ಬಂದಿ ಶ್ರೀನಾಥ್, ಸುಧಿನ್, ರೇಖಾ, ಸೌಮ್ಯಾ, ಶ್ರೇಯಸ್ ಹಾಗೂ ದೀಕ್ಷಾ…

Read More

UN networks ನಾಟೆಕಲ್‌ : ಕೋವಿಡ್‌ ಸೋಂಕಿನಿಂದ ಮೂರು ತಿಂಗಳ ನಂತರವೂ ಲಕ್ಷಣಗಳು ಇದ್ದಲ್ಲಿ ಅದು ದೀರ್ಘಕಾಲಿಕ ಕೊರೊನಾ ಎಂದು ಉಲ್ಲೇಖಿಸಬಹುದು. ಕೋವಿಡ್‌ ನಿಂದ ಬದುಕಲು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಭಾರತೀಯರ ಹೆಚ್ಚಿನವರ ಶ್ವಾಸಕೋಶ 1.5 ಲೀ. ಸಾಮರ್ಥ್ಯದ್ದಾಗಿದ್ದು, ಕೋವಿಡ್‌ ಎದುರಿಸಬೇಕಾದಲ್ಲಿ 5 ಲೀ. ಸಾಮರ್ಥ್ಯದ ಅಗತ್ಯತೆ ಇದೆ. ಅದನ್ನು ವೃದ್ಧಿಸುವಲ್ಲಿ ಫಿಸಿಯೋಥೆರಪಿಗಳು ರೋಗಿಗಳ ಗಮನ ಹರಿಸಬೇಕಿದೆ ಎಂದು ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಫಿಸಿಯೋಥೆರಪಿಸ್ಟ್‌, ದ ಇಂಡಿಯನ್‌ ಅಸೋಷಿಯೇಷನ್‌ ಆಫ್‌ ಫಿಸಿಯೋಥೆರಪಿಸ್ಟ್‌ , ಇಂಟರ್‌ ನ್ಯಾಷನಲ್‌ ಅಫೇರ್ಸ್‌ ಇದರ ಮುಖ್ಯಸ್ಥ ಡಾ.ಅಲಿ ಇರಾನಿ ಅಭಿಪ್ರಾಯಪಟ್ಟರು. ಅವರು ನಾಟೆಕಲ್‌ ಕಣಚೂರು ಫಿಸಿಯೋಥೆರಪಿ ಕಾಲೇಜು ವತಿಯಿಂದ ವಿಶ್ವ ಫಿಸಿಯೋಥೆರಪಿ ದಿನ-2021 ಪ್ರಯುಕ್ತ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾದ ಕೋವಿಡ್‌ -19 ನಿರ್ವಹಣೆಯಲ್ಲಿ ಫಿಸಿಯೋಥೆರಪಿಗಳ ಪಾತ್ರ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮಂಗಳೂರಿನಲ್ಲಿ ಅಧಿಕ ಫಿಸಿಯೋಥೆರಪಿ ಕಾಲೇಜುಗಳು ಸ್ಥಾಪನೆಯಾಗಿವೆ . ಇಲ್ಲಿ ಇರುವ ಅರ್ಧದಷ್ಟು ಕಾಲೇಜುಗಳ…

Read More

UN networks ಉಳ್ಳಾಲ: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರವಿರಾಜ ಶೆಟ್ಟಿ ಜಿ. ಯವರಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಇವರ ವತಿಯಿಂದ “ ಜೀವ ವೈವಿಧ್ಯ ಕ್ಷೇತ್ರದ ವಿಶೇಷ ಸಾಧಕ ಪ್ರಶಸ್ತಿ ” ನೀಡಿ ಗೌರವಿಸಲಾಗಿದೆ. ಸೆ. 3 ರಂದು ಮಂಗಳೂರು ಜಿಲ್ಲಾ ಪರಿಷತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಅಭಿಯಾನ-2021 ರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಡಾ. ರವಿರಾಜ ಶೆಟ್ಟಿ ಜಿ ಇವರು ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಔಷಧೀಯ ಗಿಡಗಳ ಸಂರಕ್ಷಣೆ ಕುರಿತ ಸಂಶೋಧನೆ, ವಿಸ್ತರಣೆ, ಬೋಧನೆ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ ವೈಜ್ಞಾನಿಕ ಸಂಶೋಧನಾ ಲೇಖನಗಳು, ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳ ಸಂಶೋಧನೆಗೆ ನೀಡಿದ ಮಾರ್ಗದರ್ಶನ, ವಿದೇಶಗಳಿಗೆ ನೀಡಿದ ವೃತ್ತಿಪರ ಭೇಟಿ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಮಂಡಿಸಿರುವ ಸಂಶೋಧನಾ…

Read More

ಮಂಗಳೂರು: ನಗರದ ಹೃದಯಭಾಗ ಫಳ್ನೀರ್ನಲ್ಲಿ ಎಂ ಎಫ್ ಸಿ ಬ್ಯಾನರ್ ನಡಿ ರಾಯಲ್ ಬೇಕ್ಸ್ ದ ರಿಯಲ್ ಟೇಸ್ಟ್ ಆಫ್ ಇಂಡಿಂiÀi ಬೇಕರಿ ಹಾಗೂ ರೆಸ್ಟೋರೆಂಟ್‌ ಅನ್ನು ವಿಧಾನಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ ಸೋಮವಾರ ಉದ್ಘಾಟಿಸಿದರು. ಪ್ಲಾಟಿನಂ ಥಿಯೇಟರ್‌ ಇದ್ದ ಸ್ಥಳದಲ್ಲಿ ಸಂಸ್ಥೆ ಕಾರ್ಯಾರಂಭಗೊಂಡಿದ್ದು, ಉತ್ತಮ ಜನಾರ್ಕಷಣೆಯನ್ನು ಹೊಂದಿದೆ. 2012 ರಲ್ಲಿ ಅಥೆನಾ ಆಸ್ಪತ್ರೆ ಎದುರುಗಡೆ ಎಂಎಫ್‌ಸಿ ಮೊದಲ ಘಟಕವನ್ನು ಆರಂಭಿಸಿತ್ತು. 2020 ರ ಆ.13 ರಂದು ಫಳ್ನೀರ್‌ ನಲ್ಲಿಫುಡ್‌ ಮಾರ್ಟ್‌ ರೆಸ್ಟೋರೆಂಟ್‌ ಆಗಿ ಎರಡನೇ ಘಟಕ ಆರಂಭಗೊಂಡಿತು. . ಇದೀಗ ಗ್ರಾಹಕರ ಬೇಡಿಕೆಯ ಮೇರೆಗೆ ರಾಯಲ್‌ ಬೇಕ್ಸ್‌ ಅನ್ನು ಬೇಕರಿ ಆರಂಭಿಸಲಾಗಿದೆ. ಇಲ್ಲಿ ಡ್ರೈಫ್ರೂಟ್ಸ್‌, ಬೇಕರಿ ಐಟಂ, ಇಂಪೋರ್ಟೆಡ್‌ ಸ್ವೀಟ್ಸ್‌ ಹಾಗೂ ಚಾಕಲೇಟುಗಳು, ಅತ್ಯುತ್ತಮ ಗುಣಮಟ್ಟದ ಕ್ಯಾಷಿವ್‌ ಸ್ವೀಟ್ಸ್‌, ಬೆಂಗಾಳಿ ಸ್ವೀಟ್ಸ್‌, ರಸಗುಲ್ಲಾ, ಮಲಾಯಿಗುಲ್ಲ, ಇಂಪೋರ್ಟೆಡ್‌ ಫ್ರೂಟ್ಸ್‌, ಎನರ್ಜಿ ಡ್ರಿಂಕ್ಸ್‌ ಮುಂಬೈನಲ್ಲಿ ಖ್ಯಾತಿ ಗಳಿಸಿರುವ ಅಫ್ಲಾತುಲ್‌, ಮಾಂಗುಲಾಯಿ ನಂತಹ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿದೆ. ಸ್ನ್ಯಾಕ್ಸ್‌ ಹಾಗೂ…

Read More

ಮಂಗಳೂರು : ಸಾಮಾಜಿಕ ,ಆಧ್ಯಾತ್ಮಿಕ, ಧನಾತ್ಮಕ ಹಿತಚಿಂತನೆಗಳ ಮುಖೇನ ಓರ್ವ ಆದರ್ಶ ವ್ಯಕ್ತಿಯಾಗಿ, ಉತ್ಸಾಹಿ ಸೇವಾ ಕಾರ್ಯಕರ್ತರಾಗಿ, ಮನೋಜಾಗೃತರಾಗಿ, ಧಾರ್ಮಿಕ ಮಾರ್ಗದರ್ಶಕರಾಗಿ, ಶಕ್ತಿ_ಯುಕ್ತಿ-ಪ್ರೇರಕರಾಗಿ ಜನಮಾನಸದ ಹೃದಯದಿ ಶೋಭಿಸುತ್ತಿರುವ ನಿಸ್ವಾರ್ಥ ಸೇವಾ ಮಾಣಿಕ್ಯ. ಧೀಮಂತ ನಾಯಕನಾಗಿ ಪ್ರಾಮಾಣಿಕತೆ, ದಕ್ಷತೆ,ಶಿಸ್ತುಗಾರವಾಗಿ ನೇರನುಡಿಪಾಲಕನಾಗಿ, ನಿಷ್ಟುರವಾದಿಯಾಗಿ, ಮಿತಭಾಷಿಯಾಗಿ, ರಾಜ ಗಾಂಭೀರ್ಯ ಕಳೆಯ ಸುಂದರ ಅಜಾನುಬಾಹು ಆಕರ್ಷಕ ಮೈಕಟ್ಟು, ಚುರುಕುತನದ ಬುದ್ಧಿವಂತಿಕೆಯಿಂದ ಕೂಡಿದ್ದು ಸಭೆ ಸಮಾರಂಭಗಳಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾದರಸದಂತೆ ಕ್ರಿಯಾಶೀಲರಾಗಿ ಸರ್ವರ ಕಣ್ಮನ ಸೆಳೆದು ಮಿಂಚುತ್ತಿರುವ ಹಿರಿಯ ನಿಷ್ಠಾವಂತ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ್ ಪದ್ಮನಾಭ ಮಾಣಿಂಜರವರ ಯಶಸ್ವಿ ಸಾಧನೆಯ ಯಶೋಗಾಥೆ.ತುಳುನಾಡಿನ ಅಳಿಯ ಕಟ್ಟಿನ ಪ್ರತಿಷ್ಠಿತ ಮುಗ್ಗಗುತ್ತು ಮನೆತನದ ಕೇಶವ ಪೂಜಾರಿ ಮತ್ತು ಕುಕ್ಕಿನಡ್ಡ ಮನೆತನದ ಮೋಹಿನಿ ದಂಪತಿ ಪ್ರಥಮ ಪುತ್ರನಾಗಿ 1937 ನೇ ಸಪ್ಟೆಂಬರ್ 5 ರಂದು ಜನಿಸಿದರು. ಪಾಣೆಮಂಗಳೂರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೆÇರೈಸಿ ತದನಂತರ ಮಂಗಳೂರು ಸರ್ಕಾರಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದವರು. ಅಜ್ಞಾನದಿಂದ…

Read More

UN network ಮಂಗಳೂರು : ಕಾವೂರು ವಲಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ವಾಮಂಜೂರು ವಿದ್ಯಾ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಪ್ರಥಮ ಚಿಕಿತ್ಸಾ ಜಾಗೃತಿ ಶಿಬಿರ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಾವೂರು ವಲಯ ಲಯನ್ಸ್ ಕ್ಲಬ್ ಕ್ಲಬ್ಬಿನ ಸದಸ್ಯರಾದ ನಿಕಟ ಪೂರ್ವ ಅಧ್ಯಕ್ಷೆ ಸುಜಾತ, ಕಾರ್ಯದರ್ಶಿ ವಿಕ್ಟರ್ ಮೋರಸ್, ಖಾಜಾಂಚಿ ಶ್ರೀಧರ್ ನಾಯಕ್, ಪ್ರಾಂತೀಯ ಅಧ್ಯಕ್ಷೆ ಸ್ವರೂಪ ಶೆಟ್ಟಿ, ದಯಾನಂದ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಮೋಹನ್ ದಾಸ್ ಕಿಲ್ಲೆ, ನಿತ್ಯಾನಂದ ಶೆಟ್ಟಿ, ಸತೀಶ್ ಶೆಟ್ಟಿ, ಸುನಿಲ್ ಶೆಟ್ಟಿ ರೇಷ್ಮಾ, ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಅಶ್ವಿನ್ ಮತ್ತು ರೋಹನ್ ಭಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 60 ಮಂದಿ ಉಪಸ್ಥಿತರಿದ್ದರು.

Read More

UN networks ಉಳ್ಳಾಲ: ಹೆತ್ತವರು ಮಕ್ಕಳಿಗೆ ನೀಡುವ ಶಿಕ್ಷಣದಿಂದ ಮಕ್ಕಳ ಭವಿಷ್ಯ ನೆಲೆಯೂರುವುದು. ಹಾಡಲು ಗುಣಮಟ್ಟದ ಸ್ವರ ಇರುವಂತಹ ಪ್ರತಿಭೆ ಶ್ರೀ ರಕ್ಷಾ, ಸಂಗೀತ ಕ್ಷೇತ್ರದಲ್ಲಿ ಇರುವಂತಹ ಆಕೆಯ ಪ್ರತಿಭೆಗೆ ಹೆತ್ತವರು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಆಕೆ ಬೆಳೆಯಲು ಸಾಧ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ನಿರ್ದೇಶಕ ಕೆ.ಟಿ ಸುವರ್ಣ ಅಭಿಪ್ರಾಯಪಟ್ಟರು. ಅವರು ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಭಾನುವಾರ ನಡೆದ ಶ್ರೀರಕ್ಷಾ ಹೆಚ್.ಎಸ್ ಪೂಜಾರಿ ಕೊಣಾಜೆ ಇವರು ಹಾಡಿರುವ ‘ರಘುವೀರ ಗದ್ಯಂ ವೀಡಿಯೋ ಆಲ್ಬಂ ಬಿಡುಗಡೆ ಸಮಾರಂಭ ಹಾಗೂ ಶಿಕ್ಷಕರ ದಿನಾಚರಣೆ ಯಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗಂಗಾಧರ್ ಪೂಜಾರಿ ಮಾತನಾಡಿಬಾಲಕಿ ರಕ್ಷಾ ರಾಗದ ಮೂಲಕ ವಿಶ್ವಮನ್ನಣೆಯನ್ನು ಪಡೆಯಬೇಕಿದೆ. ಎಲ್ಲರ ಹಾರೈಕೆ ಆಕೆಗೆ ಶ್ರೀರಕ್ಷೆಯಾಗಲಿ, ಹಲವಾರು ಧ್ವನಿಸುರುಳಿ ಬಿಡುಗಡೆಯಾಗುವ ಮೂಲಕ ಖ್ಯಾತಿಯನ್ನು ಪಡೆಯಬೇಕು ಎಂದರು ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಕೊಣಾಜೆ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ…

Read More

UN networks ತೊಕ್ಕೊಟ್ಟು: ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆ ವಿರೋಧಿಸಿ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಗುರುವಾರ ನಡೆಯಿತು. ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ಈ ಜಿಲ್ಲೆಯಲ್ಲಿ ವಿವಿಧ ಜಾತ್ಯಾತೀತ ಪಕ್ಷ ಹಾಗೂ ಸಂಘಟನೆಗಳು ಒಟ್ಟಾಗಿ ಬಸ್ ದರ ಏರಿಕೆಯ ವಿರುದ್ದ ಜಿಲ್ಲಾಧಿಕಾರಿಗಳಿಗೆ ಮನವಿಯ ಜೊತೆಗೆ ಏರಿಸಿದ ಬಸ್ ಪ್ರಯಾಣ ದರವನ್ನು ತಡೆ ಹಿಡಿಯಬೇಕು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದೇವು. ಆದರೆ ಇದುವರೆಗೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.ಬಸ್ಸು ದರ ಏರಿಕೆಯಿಂದ ಬಹು ಸಂಖ್ಯಾತ ಪ್ರಯಾಣಿಕರು ಇಂದು ಆಕ್ರೋಶಿತರಾಗಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿದ ಅವರು ಬಸ್ಸು ಮಾಲಕರು 25 % ದರ ಜಾಸ್ತಿ ಮಾಡಲು ಹೇಳಿದ್ದರು,…

Read More