Author: UllalaVani

Kannada News From Coastal Karnataka

UN networks ಕುತ್ತಾರು: ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಅವರು ಕುತ್ತಾರು ಕೊರಗಜ್ಜ ಕಟ್ಟೆಗೆ ಮಂಗಳವಾರ ಭೇಟಿ ನೀಡಿದರು. ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಕೊರಗಜ್ಜನ ಬಳಿ ಹರಕೆ ಹೊತ್ತ ಹಿನ್ನೆಲೆಯಲ್ಲಿ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ ಅದರಲ್ಲಿ ಯಶಸ್ಸು ಕಂಡಿದ್ದರು. ಈ ಬಗ್ಗೆ ಮಂಗಳೂರಿನಲ್ಲಿರುವ ಕಲಾವಿದರಲ್ಲಿ ಹರಕೆ ಹೊತ್ತ ಕುರಿತು ತಿಳಿಸಿದ್ದು, ಅದರಂತೆ ಇಂದು ಎಲ್ಲರೂ ನಟಿ ರಕ್ಷಿತಾ ಜತೆಗೆ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ರಕ್ಷಿತಾ ಪ್ರೇಮ್, ಸದ್ಯ ಝೀ ಕನ್ನಡ ವಾಹಿನಿ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ರಕ್ಷಿತಾ ಅದರಲ್ಲಿ ಯಶಸ್ಸು ಕಂಡಿದ್ದರು. ಈ ಬಗ್ಗೆ…

Read More

UN networks ಮುನ್ನೂರು: ನಿವೇಶನಕ್ಕೆಂದು ಅರ್ಜಿ ನೀಡಲು ಬಂದಿದ್ದ ಮಹಿಳೆಗೆ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಪಂಚಾಯಿತಿಗೆ ಬಂದಿದ್ದು ಅಲ್ಲಿ ಇದ್ದ ಬಿ.ಜೆ.ಪಿ ಬೆಂಬಲಿತ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಆ ಮಹಿಳೆಯನ್ನು ನೇರ ಅಧ್ಯಕ್ಷರಾದ ವಿಲ್ಫ್ರೇಡ್ ಡಿ ಸೋಜರವರ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಅಧ್ಯಕ್ಷರು ಈ ಸಂದರ್ಭದಲ್ಲಿ ಹೊರ ಬಂದಿದ್ದರು. ಈ ಸಂದರ್ಭ ಮಹಿಳೆಯೊಂದಿಗೆ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಾಬು ಶೆಟ್ಟಿ ಅಧ್ಯಕ್ಷರು ಬರುವವರೆಗೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ‌. ಈ ಕುರಿತ ದೃಶ್ಯಾವಳಿ ಗ್ರಾ.ಪಂ ಸಿಸಿಟಿವಿಯಲ್ಲಿ ದಾಖಲಾಗಿದೆ. ತಪ್ಪಿತಸ್ಥನಿಗೆ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಡಿವೈಎಫ್ ಐ ನಿಯೋಗ ಮುನ್ನೂರು ಗ್ರಾಮದ ಅಧ್ಯಕ್ಷ ವಿಲ್ ಫ್ರೆಡ್ ಅವರಿಗೆ ಮನವಿ ಸಲ್ಲಿಸಿತ್ತು. ಇದೀಗ ಮಹಿಳೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿ‌ನಂತೆ…

Read More

UN netowrks ಕಿನ್ಯಾ: ಸಂಸ್ಥೆಗಳು ನಡೆಸಿದ ಶ್ರಮದಾನದ ಕಾಮಗಾರಿಗೂ ಗ್ರಾ.ಪಂ ಆಡಳಿತದಿಂದ ಬಿಲ್ ಪಾವತಿಸಲಾಗಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಕಿನ್ಯಾ ಗ್ರಾಮಸ್ಥರ ಆರೋಪಗಳ ನಡುವೆ ಗ್ರಾಮಸ್ಥರಿಲ್ಲದೆ ಅತಿ ಹೆಚ್ಚು ಖಾಲಿ ಖುರ್ಚಿಗಳ ಸಮ್ಮುಖದಲ್ಲೇ ಕಿನ್ಯಾ ಗ್ರಾಮ ಪಂಚಾಯತ್ 2021-22 ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಕಿನ್ಯಾ ವಾದಿತ್ತೈಬ ಸಭಾಂಗಣದಲ್ಲಿ ನಡೆಯಿತು. ಗ್ರಾಮಸ್ಥ ಸಿದ್ದೀಖ್ ಮಾತನಾಡಿ,ಶ್ರಮದಾನ ನಡೆಸಿ ವಾಟ್ಸ್ಯಾಪ್ ಮೂಲಕ ಪ್ರಚಾರವಾದ ಗ್ರಾ.ಪಂ ನಿಂದ ಕಾಮಗಾರಿಗಳಿಗೂ ಬಿಲ್ ಪಾವತಿಸಲಾಗಿದೆ. ಇದರಿಂದ ಗ್ರಾಮಸ್ಥರ ತೆರಿಗೆ ಹಣದಲ್ಲಿ ವಂಚನೆಗಳಾಗಿವೆ. ಗ್ರಾಮದಲ್ಲಿ ನಡೆದ ಬಹುತೇಕ ಶ್ರಮಾದಾನಗಳಿಗೆ , ಗ್ರಾ.ಪಂ ಬಿಲ್ ಪಾವತಿಸಿರುವುದು ಗೊಂದಲಕಾರಿ. ಈ ಬಗ್ಗೆ ಗ್ರಾ.ಪಂ ಆಡಳಿತ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಉತ್ತರಿಸಿದ ಗ್ರಾ.ಪಂ ಸದಸ್ಯ ತ್ವಾಹಾ, ದಾಖಲೆಗಳಿದ್ದರೆ ತೋರಿಸಿ, ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಸಂಘ ಸಂಸ್ಥೆಗಳು ಮಾಡಿರುವ ಶ್ರಮಾದಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ತಪ್ಪಲ್ಲ ಎಂದರು. ಪಿಡಿಓ ಉತ್ತರಿಸಿ, ಶ್ರಮಾದಾನಕ್ಕೆ ಗ್ರಾ.ಪಂನಿಂದ ಬಿಲ್ ಪಾವತಿ ಮಾಡಿರುವ…

Read More

UN networks ಹರೇಕಳ: ಹರೇಕಳದಲ್ಲಿ ಯೆನೆಪೋಯ ಸಂಸ್ಥೆ ಆರಂಭಿಸಿರುವ ಬೃಹತ್ ತ್ಯಾಜ್ಯ ನಿರ್ವಹಣೆ ಘಟಕ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಮಾದರಿ. ನಗರದಲ್ಲಿಯೂ ಇಂತಹ ನಿರ್ವಹಣೆ ಘಟಕವನ್ನು ಯಾವ ರೀತಿಯಾಗಿ ಸ್ಥಾಪಿಸಬಹುದಾದ ಚಿಂತನೆ ನಡೆಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಅಕ್ಷಿ ಶ್ರೀಧರ್ ಐಎಎಸ್ ಅಭಿಪ್ರಾಯಪಟ್ಟರು.ಅವರು ಹರೇಕಳ ಗ್ರಾಮದ ಎಲಿಯಾರುಪದವು ಮಲೆಕೆದು ಪರಿಸರದಲ್ಲಿ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕ `ಉವ್ರ್ವಿ’ ಯನ್ನು ಉದ್ಘಾಟಿಸಿ ಮಾತನಾಡಿದರು.ದಿನಕ್ಕೆ 10 ಟನ್ ನಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಘಟಕ ಜಿಲ್ಲೆಯಲ್ಲೇ ಪ್ರಥಮ . ಖಾಸಗಿಯವರು ಮುತುವರ್ಜಿ ವಹಿಸಿ ನಡೆಸಿದಂತಹ ಯೋಜನೆ ಸಮಾಜಕ್ಕೆ ಪೂರಕವಾಗಲಿ. ನಗರದಲ್ಲಿಯೂ ಇಂತಹ ತ್ಯಾಜ್ಯ ಸಂಸ್ಕರಣಾ ಘಟಕದ ಅಗತ್ಯತೆ ಇದ್ದು, ಅದನ್ನು ಸ್ಥಾಪಿಸುವ ಚಿಂತನೆ ನಡೆಸುತ್ತೇವೆ ಎಂದರು.ಪರಿಸರವಾದಿ ಜೀತ್ ಮಿಲನ್ ರೋಚ್ ಮಾತನಾಡಿ , ಖಾಸಗಿಯವರು ಇಷ್ಟು ದೊಡ್ಡ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಿರುವುದು ಶ್ಲಾಘನೀಯ. ತಾನು ರೂಪಿಸಿದ ಯೋಜನೆ ರೂಪುರೇಷೆಗೆ ಯೆನೆಪೋಯ ಸಂಸ್ಥೆ ಗೌರವ ನೀಡಿದೆ.…

Read More

UN networks ಕೊಣಾಜೆ: ದೇಶದೆಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151ನೇ  ಜಯಂತಿ ಆಚರಣೆ ಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಡಾನ್ಸ್ ಹೆಜ್ಜೆ ಹಾಕಿದ ವೀಡಿಯೊ‌ವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್ ಐ ದೂರು ನೀಡಿದೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ತನ್ನ ಮೊಬೈಲ್ ( 9686774897)ನಲ್ಲಿ ಗಾಂಧೀಜಿ ಪಾಶ್ಚಿಮಾತ್ಯ ರಾಷ್ಟ್ರದ ಯುವತಿಯೊಬ್ಬಳ ಜೊತೆ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿರುವ ಎಡಿಟೆಡ್ ವೀಡಿಯೋವನ್ನ ಹರಿಯ ಬಿಟ್ಟು ವಿಕೃತಿ ಮೆರೆದಿರುವುದಾಗಿ ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ. ಸಾಮ್ರಾಜ್ಯಶಾಹಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅವರ ಜನ್ಮ ದಿನದಂದೇ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಈ ಕೃತ್ಯದಿಂದ…

Read More

UN networks ಪಿಲಾರು: ಸಿಪಿಐಎಂ ಪಕ್ಷ ರೈತರ, ಕಾರ್ಮಿಕರ, ದುಡಿಯುವ ಜನರ ಪರ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಉಳ್ಳಾಲ ವಲಯದಲ್ಲಿ ಪಕ್ಷಕ್ಕೆ ಇತಿಹಾಸ , ಪರಂಪರೆ ಹಾಗೂ ಗೌರವ ಇರುವ ಪ್ರದೇಶ ಎಂದು ಉಳ್ಳಾಲ ವಲಯ ಸಿಪಿಐಎಂ ಕಾರ್ಯದರ್ಶಿ ಕೆ.ಕೃಷ್ಣಪ್ಪ ಸಾಲಿಯಾನ್ ಒತ್ತಾಯಿಸಿದರು.ಅವರು ಪಿಲಾರು ಬಳಿ ನಡೆದ ಸಿಪಿಐಎಂ ಪಿಲಾರು ವ್ಯಾಯಾಮ ಶಾಲೆಯಲ್ಲಿ ಜರಗಿದ ಶಾಖಾ ಸಮ್ಮೇಳನದಲ್ಲಿ ದಿ. ಕರಿಯಪ್ಪ ಗಟ್ಟಿ ಹಾಗೂ ದಿ. ಬಾವು ಮುಂಡೋಳಿ ವೇದಿಕೆಯಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಮ್ಮೇಳನದಲ್ಲಿ ಸೋಮೇಶ್ವರ ಪುರಸಭೆಯ ಮೂಲಭೂತ ಕೆಲಸ ಕಾರ್ಯಗಳನ್ನು ತ್ವರಿತಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕು ಅನ್ನುವ ಒತ್ತಾಯ ಮಾಡಲಾಯಿತು. ರಸ್ತೆ ಬದಿ ಚರಂಡಿಯಿಲ್ಲದೆ ನೀರು ಹರಿದು ರಸ್ತೆ ಹದಗೆಟ್ಟಿದೆ, ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮೋರಿ ರಚನೆ ಅಗತ್ಯ ಆಗಬೇಕಿದೆ ಎಂದರು.ಗಂಗಯ್ಯ ಗಟ್ಟಿ ಪಿಲಾರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಪುರಂದರ ದಾಸ್, ಬಾಬು ಶೆಟ್ಟಿ, ಧರ್ಮರಾಜ್, ಮನೋಜ್, ಬಾಲಕೃಷ್ಣ ಶೆಟ್ಟಿ, ಬಾಬು ಬೆಳ್ಚಾಡ, ಸುರೇಶ್ ಗಟ್ಟಿ, ಈಶ್ವರ್ ಶೆಟ್ಟಿ…

Read More

СодержаниеБезопасен ли TronTronГде хранить и как купить TRX?DeFi-экосистема TRON насчитывает $8.1 млрдTRON — самый популярный блокчейн по числу активных аккаунтовОдобренный проект в экосистеме Tron оказался мошенническимЧем Tron лучше Ethereum и его аналогов? Однако капитализация «стабильной монеты» относительно невысока — чуть более $600 млн. Для получения подробной информации, пожалуйста, обращайтесь к официальному дилеру Audi. Недостаток функционирующих приложений в сети, сравнимо с изначальными планами платформы. Спустя почти два месяца бан сняли и российские пользователи вновь получили возможность конвертировать криптовалюты без ограничений. Напомним, BestChange является агрегатором обменников преимущественно для цифровых активов. Эта новость — еще один пример того, что не стоит доверять кому-либо…

Read More

СодержаниеБезопасен ли TronTronГде хранить и как купить TRX?DeFi-экосистема TRON насчитывает $8.1 млрдTRON — самый популярный блокчейн по числу активных аккаунтовОдобренный проект в экосистеме Tron оказался мошенническимЧем Tron лучше Ethereum и его аналогов? Однако капитализация «стабильной монеты» относительно невысока — чуть более $600 млн. Для получения подробной информации, пожалуйста, обращайтесь к официальному дилеру Audi. Недостаток функционирующих приложений в сети, сравнимо с изначальными планами платформы. Спустя почти два месяца бан сняли и российские пользователи вновь получили возможность конвертировать криптовалюты без ограничений. Напомним, BestChange является агрегатором обменников преимущественно для цифровых активов. Эта новость — еще один пример того, что не стоит доверять кому-либо…

Read More

UN networks ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದಿದ್ದ ಸರಕಾರಿ ಕಾರ್ಯಕ್ರಮವಾದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯೇ ತನ್ನ ಮಗುವನ್ನು ಕುರ್ಚಿ ನೀಡಿ ವೇದಿಕೆಯಲ್ಲಿ ಕುಳ್ಳಿರಿಸಿ ಸಭೆಗೆ ಅಗೌರವ ತೋರಿರುವ ಫೋಟೋವೊಂದು ವೈರಲ್ ಆಗಿದೆ.ಕೋಟೆಕಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರು ಪಟ್ಟಣ ಪಂಚಾಯಿತಿ ಕಚೇರಿಯೊಳಗೆ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಅಗೌರವ ಪ್ರದರ್ಶಿಸಿದ್ದಾರೆ. ಸರಕಾರಿ ಕಾರ್ಯಕ್ರಮದಲ್ಲಿ ಅದರದ್ದೇ ಆದ ಶಿಸ್ತು ಇರುತ್ತದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ತನ್ನ ಪುತ್ರನಿಗೇ ಕುರ್ಚಿ ನೀಡಿರುವ ಫೋಟೊ ವೈರಲ್ ಆಗಿದೆ. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ವೇದಿಕೆಯ ಕೆಳಗಿದ್ದರೂ, ವೇದಿಕೆ ಮೇಲೆ ಬಾಲಕನನ್ನು ಕುರ್ಚಿಯಲ್ಲಿ ಕುಳ್ಳಿರಿಸಿರುವುದು ಹಲವರ ಅಸಮಧಾನಕ್ಕೆ ಕಾರಣವಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣಕ್ಕೆ ಮಕ್ಕಳನ್ನು ಪಟ್ಟಣ ಪಂಚಾಯಿತಿ ಬಳಿ ಕರೆದುಕೊಂಡು ಬಂದಿದ್ದೆನು. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಆಚೆ ಈಚೆ ಹೋಗುತ್ತಿದ್ದ ಪುತ್ರನನ್ನು ಕುರ್ಚಿ ನೀಡಿ ಕುಳ್ಳಿರಿಸಿರುವುದು ನಿಜ. ಯಾವುದೇ ದುರುದ್ದೇಶ ಇಟ್ಟುಕೊಂಡು ಮಾಡಿಲ್ಲ.…

Read More

ಉಳ್ಳಾಲ: ಬ್ಯಾರೀಸ್ ಗ್ರೂಪ್ ಆಯೋಜಿಸಿರುವ ‘ಗ್ರೀನ್ ವಾಕಥಾನ್ 2021’ಕ್ಕೆ ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಾ ಸಭಾಂಗಣದ ಮುಂದೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.ಬಿಐಟಿ ಮತ್ತು ಬೀಡ್ಸ್ ಹಮ್ಮಿಕೊಂಡ ‘ವಿಶ್ವ ಹಸಿರು ಸಪ್ತಾಹ’- ‘ಗ್ರೀನ್ ವಾಕಥಾನ್’ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಿಂದ ಆರಂಭಗೊಂಡು ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ (ಬಿಟಿಪಿ)ನತ್ತ ಸಾಗಿತು. ವಾಕಥಾನ್‍ಗೆ ಚಾಲನೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ ಸ್ವಚ್ಛ ಮನಸ್ಸು ಹೊಂದಿದರೆ ಮಾತ್ರ ಪರಿಸರವೂ ಸ್ವಚ್ಛವಾಗಲಿದೆ. ನಮಗೆ ಜೀವ ಮೊದಲು, ಜೀವನ ಆ ಬಳಿಕವಾಗಿದೆ. ಜೀವ ಉಳಿಯಲು ಪ್ರಕೃತಿ ಮುಖ್ಯವಾಗಿದೆ. ಹಾಗಾಗಿ ಪ್ರಕೃತಿ ಉಳಿಸುವ ಕೈಂಕರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಸಲುವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರಕೃತಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬುದೂ ಮುಖ್ಯವಾಗಿದೆ. ಒಂದು…

Read More