Author: UllalaVani

Kannada News From Coastal Karnataka

UN networks ಉಳ್ಳಾಲ: ಇಲ್ಲಿನ ಸೋಮೇಶ್ವರ ದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾದ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಇಂದು ನಡೆದಿದ್ದು, ಘಟನೆ ಸಂಬಂಧ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಬೆಳಿಗ್ಗೆ ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15 ರಷ್ಟು ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ವಿಚಾರಗಳ ಕುರಿತ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಮನೆಗಳ ಗೇಟಿನಲ್ಲಿರಿಸಿದ್ದಾನೆ. ಈ ಸಂದರ್ಭ ವೃದ್ಧೆಯೊಬ್ಬರು ವ್ಯಕ್ತಿಯನ್ನು ಗಮನಿಸಿ ಸೇಲ್ಸ್ ಮೆನ್ ಅಂದುಕೊಂಡು ತಮಗೇ ಯಾವುದೇ ಸೊತ್ತುಗಳು ಬೇಡ ಅಂದಿದ್ದಾರೆ. ಆದರೂ ಆತ ಅವರ ಗೇಟಿನಲ್ಲಿ ಪುಸ್ತಕ, ಭಿತ್ತಿಪತ್ರ , ಸ್ಟಿಕ್ಕರ್ ಇರಿಸಿ ಪರಾರಿಯಾಗಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಗೊಂದಲದ…

Read More

UN networks ಕೊಣಾಜೆ: ಲವ್ ಸೆಕ್ಸ್ ದೋಖಾ ಹಾಗೂ ಲಕ್ಷಾಂತರ ಹಣ ಪಡೆದ ಮುಡಿಪು ನಿವಾಸಿ ಯುವಕನ ಮನೆಗೆ ಬಂದಿದ್ದ ಯುವತಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಮೈಸೂರಿನಲ್ಲಿರುವುದರಿಂದ ಅಲ್ಲೇ ಪ್ರಕರಣ ದಾಖಲಿಸುವಂತೆಯೂ, ಅಲ್ಲದೆ ಯುವತಿಯೇ ಮೈಸೂರಿಗೆ ತೆರಳುವುದಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣಕ್ಕೆ ತಲುಪಿಸಿ, ಬಸ್ ಟಿಕೇಟ್ ದರವನ್ನು ಪೊಲೀಸರೇ ನೀಡಿ ಬಸ್ಸು ನಿರ್ವಾಹಕರಲ್ಲಿ ಯುವತಿಯನ್ನು ಸುರಕ್ಷಿತವಾಗಿ ಮೈಸೂರು ತಲುಪಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ಕೊಣಾಜೆ ಠಾಣಾ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಕೊಣಾಜೆ ಠಾಣಾ ಪೆÇಲೀಸರ ಮೇಲೆ ತೇಜಸ್ವಿನಿ ಗೌಡ ಸಂತ್ರಸ್ತ ಮಹಿಳೆಯಿಂದ ಕೊಣಾಜೆ ಠಾಣಾ ಪೊಲೀಸರು ದೂರು ಸ್ವೀಕರಿಸಿಲ್ಲ ಅನ್ನುವ ಆರೋಪ ಮಾಡಿದ್ದರು. ಆದರೆ ಸೆ.21 ರಂದು ಮುಡಿಪು ಸಾಂಬಾರುತೋಟ ನಿವಾಸಿ ಮಹಮ್ಮದ್ ಅಜ್ವಿನ್ ಮನೆಗೆ ಬಂದಿದ್ದ ಯುವತಿಯನ್ನು ಆತನ ಸಹೋದರಿಯರು ಹಲ್ಲೆ ನಡೆಸಿ ವಾಪಸ್ಸು ಕಳುಹಿಸಿದ್ದರು. ಈ ವೇಳೆ ರಸ್ತೆಯಲ್ಲಿ ಯುವತಿ ಅಳುತ್ತಿರುವುದನ್ನು ಕಂಡ ಸಾರ್ವಜನಿಕರು 112 ಗೆ ಮಾಹಿತಿ ನೀಡಿದ್ದರು. ಅದರಂತೆ…

Read More

UN networks ಮುನ್ನೂರು: ಸರಕಾರದ ಆದೇಶದಂತೆ ಗ್ರಾಮದ ಆಡಳಿತ ಸೇರಿದಂತೆ  ಗ್ರಾಮಮಟ್ಟದಲ್ಲಿ ಮನೆಯನ್ನು  ಭೇಟಿ ನೀಡುವ ಕಾರ್ಯಕರ್ತರಿಗೆ   ಕಾರ್ಯಗಾರಗಳ ಮೂಲಕ  ಸರಕಾರಿ ವ್ಯವಸ್ಥೆಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದನ್ನು ತಮ್ಮ ಸೇವಾ ಕಾರ್ಯದಲ್ಲಿ  ವಿನಿಯೋಗಿಸಿಕೊಂಡು ಗ್ರಾಮಸ್ಥರಿಗೆ ಸಹಕಾರಿಯಾಗಬೇಕು  ಎಂದು ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ್ ನಾಯಕ್   ಅಭಿಪ್ರಾಯಪಟ್ಟರು. ಅವರು ಮುನ್ನೂರು ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ  ಪಂಚಾಯತ್ ಮುನ್ನೂರು  ಸಹಭಾಗಿತ್ವದಲ್ಲಿ   ಇತ್ತೀಚೆಗೆ ಆಯೋಜಿಸಲಾದ ಸ್ವಚ್ಛತಾ ಮಿಷನ್ ಇದರ ಬಯಲು ಬಹಿರ್ದೆಸೆ ಮುಕ್ತ ಗ್ರಾಮ  ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಮುನ್ನೂರು ಗ್ರಾ. ಪಂ ಅಧ್ಯಕ್ಷ  ವಿಲ್ಫ್ರೆಡ್ ಡಿಸೋಜ,  ಉಪಾಧ್ಯಕ್ಷೆ ರಾಜೇಶ್ವರಿ, ವಲಯ ಮೇಲ್ವಿಚಾರಕಿ  ಸೀತಾ .ಕೆ ,  ಪ್ರಾಥಮಿಕ ಆರೋಗ್ಯ ಇಲಾಖೆಯ   ಜಯಂತಿ,   ಪಂಚಾಯತ್ ಲೆಕ್ಕ ಪರಿಶೋದಕಿ ರಾಧ ಉಪಸ್ಥಿತರಿದ್ದರು. ಸ್ವಚ್ಛತ ಮಿಷನ್  ಜಿಲ್ಲಾ ಸಂಯೋಜಕ  ದೊಂಬಯ್ಯ , ಮಕ್ಕಳ ರಕ್ಷಣಾ ಘಟಕದ…

Read More

UN networks ಉಳ್ಳಾಲ: ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಯುವಕರಿಗೆ ಭಾವನಾತ್ಮಕ ವಿಚಾರಗಳನ್ನು ತಲೆಗೆ ತುಂಬಿಸಿ ದಾರಿ ತಪ್ಪಿಸುತ್ತಿದ್ದಾರೆ. ಯುವ ಸಮುದಾಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗರ ಅದರ್ಶವನ್ನು ಮೈಗೂಡಿಸಿ ಜನರ ಬದುಕಿನ ಬಗ್ಗೆ ಮಾತನಾಡಬೇಕು , ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಕು , ಈ ನಿಟ್ಟಿನಲ್ಲಿ ಡಿವೈಎಫ್‍ಐ ನಡೆಸುವ ಉದ್ಯೋಗದ ಹಕ್ಕಿನ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಡಿವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.ಅವರು   ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ    ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ  ಮುಕಚ್ಚೇರಿಯಲ್ಲಿ ಡಿವೈಎಫ್‍ಐ  ಉಳ್ಳಾಲ ಘಟಕ ಆಶ್ರಯದಲ್ಲಿ ಜರಗಿದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು , ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ,  ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ , ವಕೀಲ…

Read More

UN network ಉಳ್ಳಾಲ : ಕಾರಿನಡಿಗೆ ಬಿದ್ದ ಬಾಲಕನೋರ್ವ ಪವಾಡಸದೃಶವಾಗಿ ಪಾರಾದ ಘಟನೆ ಬಂಟ್ವಾಳದ ಇರಾ ಬಳಿ ನಡೆದಿದೆ. ಘಟನೆ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ. ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ಕಾರು ಆತನ ಮೇಲೆ ಹರಿದಿದೆ. ಕಾರಿನಡಿಗೆ ಬಾಲಕ ಬಿದ್ದು ಎಡಕಾಲು ಮುರಿತಕ್ಕೊಳಗಾಗಿದ್ದು, ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ‌‌.

Read More

UN networks ಉಳ್ಳಾಲ: ಅಲ್-ಮಸ್ಜಿದುಲ್ ಜಾಮಿಉಲ್ ಅಮೀನ್ (401), ಹಝ್ರತ್ ಅಸ್ಸಯ್ಯಿದ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ, ಹಾಗೂ ನಜಾತುಸ್ವಿಬ್ಯಾನ್ ಮದ್ರಸ ಅಳೇಕಲ, ಉಳ್ಳಾಲ ಇದರ 2021-23ನೇ ಸಾಲಿನ ಅಧ್ಯಕ್ಷರಾಗಿ ಯು. ಎಸ್. ಹಂಝ ಹಾಜಿ ಆಯ್ಕೆಯಾದರು.ನೂತನ ಪಧಾದಿಕಾರಿಗಳ ಸಭೆ ಅ.29ರಂದು ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದರ ದುಆದೊಂದಿಗೆ ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ ಝಿಯಾರತ್ ಬಳಿಕ ನಡೆಯಿತು.ಹಂಗಾಮಿ ಅಧ್ಯಕ್ಷರಾದ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.ಪ್ರಧಾನ ಕಾರ್ಯದರ್ಶಿಯಾಗಿ ಯು.ಎ. ಅಬ್ದುಲ್ ರವೂಫ್ ಹಾಜಿ, ಕೋಶಾಧಿಕಾರಿಯಾಗಿ ಯು.ಎಸ್. ಅಬ್ದುರ್ರಹ್ಮತ್, ಉಪಾಧ್ಯಕ್ಷರಾಗಿ ಪುತ್ತು ಬಾವಾ ಹಾಜಿ, ಕಾರ್ಯದರ್ಶಿಯಾಗಿ ಮುಹಮ್ಮದ್ ತಾಜುದ್ದೀನ್, ಗೌರವ ನಿರ್ದೇಶಕರಾಗಿ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ, ಮಸ್ಜಿದ್ ಸಂಚಾಲಕರಾಗಿ ಯು.ಫಾರೂಕ್ , ಮದ್ರಸ ಸಂಚಾಲಕರಾಗಿ ಕೆ. ಮುಹಮ್ಮದ್ ಅಶ್ರಫ್ ಫ್ಲಾಟ್ ಸಂಚಾಲಕರಾಗಿ ಆಸಿಫ್ ಅಬೂಬಕ್ಕರ್ ಕಕ್ಕೆತೋಟ ಮತ್ತು ಮಸ್ಜಿದ್ ಉಪಸಮಿತಿ ಸದಸ್ಯರುಗಳಾಗಿ ಯು.ಸಿ. ಇಬ್ರಾಹೀಂ, ಯು.ಡಿ. ಅಶ್ರಫ್, ನವಾಝ್, ನಝೀರ್…

Read More

UN networks ಕೊಣಾಜೆ: ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಮರಿಕ್ಕಳ ಜಮಾಅತ್ ನಲ್ಲಿ 38 ವರ್ಷಗಳ ಕಾಲ ಅಧ್ಯಕ್ಷರಾಗಿಯೂ, ಖಾಝಿಯೂ ಆಗಿದ್ದ ತಾಜುಲ್ ಪುಖಹಾಅ ಬೇಕಲ್ ಉಸ್ತಾದರ ಪ್ರಥಮ ಆಂಡ್ ನೇರ್ಚೆಯು ಸೆಪ್ಟಂಬರ್ 19 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಮರಿಕ್ಕಳದಲ್ಲಿ ನಡೆಯಲಿದೆ.ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಕೊಡಂಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಖುನಾ ಖಾಝಿ ಮಾಣಿ ಉಸ್ತಾದ್,ಸಯ್ಯಿದ್ ಝೈನುಲ್ ಅಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಹುಸೈನ್ ಸಅದಿ ಕೆ.ಸಿ.ರೋಡ್,ಎಸ್.ಪಿ ಹಂಝ ಸಖಾಫಿ,ಅನಸ್ ಸಿದ್ದೀಕ್ ಸಖಾಫಿ ಬೆಂಗಳೂರು,ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ,ಮೌಲಾನಾ ಶಾಫಿ ಸಅದಿ ಬೆಂಗಳೂರು,ಎಸ್ ವೈ.ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ,ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗ, ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ,ಪಿ.ಪಿ ಮಹಮ್ಮದ್ ಸಖಾಫಿ,ಕೆ.ಕೆ.ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ,ಮಹಮ್ಮದಲಿ ಸಖಾಫಿ ಸುರಿಬೈಲ್,ಅಲ್ ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ,ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ,ಸ್ಥಳೀಯ ಶಾಸಕ ಯು.ಟಿ ಖಾದರ್ ಹಾಗೂ ಸಾಮಾಜಿಕ, ಸಂಘಟನಾ ನಾಯಕರು…

Read More

UN networks ತಲಪಾಡಿ: ತಲಪಾಡಿ ವಿಜಯಬ್ಯಾಂಕ್ ಬಳಿಯಿರುವ ರೇಷನ್ ಅಂಗಡಿಯಲ್ಲಿ ರೇಷನ್ ಪಡೆಯಲು ಮಹಿಳೆಯರು ಸಾಲುಗಟ್ಟಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುಡುಬಿಸಿಲಿನಲ್ಲಿ ಕಾಯಬೇಕಾದ ಸ್ಥಿತಿ ಎದುರಾಗಿದೆ. ಬೆಳಿಗ್ಗೆ 9.30 ಕ್ಕೆ ಬಂದು ರೇಷನ್ ಅಂಗಡಿಯೆದುರು ನಿಂತಿರುವ ಮಹಿಳೆಯರಿಗೆ ಮಧ್ಯಾಹ್ನ 12.30 ಆದರೂ ರೇಷನ್ ದೊರೆತಿಲ್ಲ. 1.ಕಿ.ಮೀ ಉದ್ದ ಸಾಲು ಇದ್ದು ಸುಡುಬಿಸಿಲು, ಮಳೆಯ ನಡುವೆ ಎಲ್ಲರೂ ಚೀಲ ಹಿಡಿದು ನಿಲ್ಲುವಂತಾಗಿದೆ. ರೇಷನ್ ನೀಡುವವರಲ್ಲಿ ಕೇಳಿದಾಗ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಬೆಳಿಗ್ಗೆ ಅರ್ಧ ಗಂಟೆ ವೇಳೆ ಸರ್ವರ್ ಇತ್ತು, ಆನಂತರ ಹೋಗಿರುವ ಸರ್ವರ್ ವಾಪಸ್ಸು ಬಂದಿಲ್ಲ ಅನ್ನುತ್ತಾರೆ. ಅಲ್ಲದೆ ಗ್ರಾಹಕರು ಹೇಳುವ ಪ್ರಕಾರ ಹಿಂದಿನಿಂದಲೂ ಇದೇ ರೀತಿಯ ಸಮಸ್ಯೆ ರೇಷನ್ ಅಂಗಡಿಯಲ್ಲಿ ನಿರ್ಮಾಣವಾಗಿದೆ. ಎರಡು ದಿನಗಳಿಂದ ರೇಷನ್ನೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ವರ್ ಇಲ್ಲವೆಂದಾದಲ್ಲಿ ಅಂಗಡಿಗೆ ಶಟರ್ ಹಾಕಬಹುದಲ್ಲ. ಸುಮ್ಮನೆ ಕಾಯಿಸುವುದು ಏಕೆ? ಅನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಆಹಾರ ನಾಗರಿಕ ಸರಬರಾಜು ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಸರಿಪಡಿಸುವವರೆಗೇ ಶಟರ್ ಹಾಕಿ ಎಂದಿದ್ದಾರೆ.…

Read More

UN networks ಸೋಮೇಶ್ವರ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ 71 ನೇ ವರ್ಷದ ಜನ್ಮದಿನದ ಪ್ರಯುಕ್ತ ದೇ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಶಕ್ತಿಯನ್ನು ದೇವರು ತುಂಬಲಿ ಹಾಗೂ ಅವರಿಗೆ ದೀರ್ಘಾಯುಷ್ಯ ವನ್ನು ಕರುಣಲಿಸಲೆಂದು ಮಂಗಳೂರು ಮಂಡಲ ಮತ್ತು ಸೋಮೇಶ್ವರ ಮಹಾ ಶಕ್ತಿ ಕೇಂದ್ರ ದ ಪರವಾಗಿ ಶುಕ್ರವಾರದಂದು ಶ್ರೀ ಸೋಮನಾಥೇಶ್ವರ ದೇವಸ್ಥಾನ ಸೋಮೇಶ್ವರ ದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಪ್ರಧಾನ ಕಾರ್ಯದಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಡಿ ,ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಂಡಲ ಉಪಾಧ್ಯಕ್ಷ ಯಶವಂತ್ ಅಮೀನ್ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ರವಿಶಂಕರ್ ಸೋಮೇಶ್ವರ್, ಜೇತೇದ್ರ ಶೆಟ್ಟಿ ತಲಪಾಡಿ, ಆನಂದ್ ಶೆಟ್ಟಿ, ನವೀನ್ ಕುರ್ನಾಡು, ಪಕ್ಷದ ಮುಖಂಡರುಗಳಾದ ಸೀತಾರಾಮ್ ಬಂಗೇರ, ಚಂದ್ರಶೇಖರ್ ಉಚ್ಚಿಲ್,ಮೋಹನ್ ರಾಜ್ ಕೆ.ರ್, ಸ್ವಪ್ನ ಶೆಟ್ಟಿ, ಪುರುಷೋತ್ತಮ್ ಗಟ್ಟಿ, ರಮಣಿ…

Read More

UN networks ಉಳ್ಳಾಲ: ಬಿಜೆಪಿ ಆಡಳಿತದಲ್ಲಿರುವ ಸಂದರ್ಭ ಕಾಂಗ್ರೆಸ್ ನವರಿಗೆ ಪ್ರತಿಭಟನೆ ನಡೆಸಲು ಎತ್ತು ಆದರೂ ಸಿಕ್ಕಿದೆ. ಅದೇ ಕಾಂಗ್ರೆಸ್ ಆಡಳಿತದಲ್ಲಿರುತ್ತಿದ್ದರೆ ಎತ್ತುಗಳೆಲ್ಲ ಕಸಾಯಿಖಾನೆಯಲ್ಲಿರುತ್ತಿದ್ದವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.ಮಂಗಳೂರು ಮಂಡಲ ಮಂಜನಾಡಿ ಮಹಾಶಕ್ತಿಕೇಂದ್ರದ ನರಿಂಗಾನ ಶಕ್ತಿಕೇಂದ್ರದ ತೌಡುಗೋಳಿ ಬೂತ್ ಸಮಿತಿ ಅಧ್ಯಕ್ಷರ ಮನೆಯಲ್ಲಿ ನಡೆದ ನಾಮಫಲಕ ಅನಾವರಣ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ, ಬಳಿಕ ತೌಡುಗೋಳಿ ಅಂಗನವಾಡಿ ಕೇಂದ್ರದ ಬಳಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಎತ್ತಿನಗಾಡಿಯಲ್ಲಿ ನಿಂತು ಪ್ರತಿಭಟಿಸಿರುವ ಮೂಲಕ ಕಾಂಗ್ರೆಸ್ ನ ಕೊಂಡಿ ಸಿದ್ಧರಾಮಯ್ಯನ ಕೈಯಲ್ಲಿರುವುದು ಸಾಬೀತಾಗಿದೆ. ಎತ್ತಿನಗಾಡಿಯ ಹಗ್ಗವನ್ನು ಸಿದ್ಧರಾಮಯ್ಯ ಹಿಡಿದುಕೊಂಡಿದ್ದರೆ, ಡಿಕೆಶಿ ಬೆತ್ತವನ್ನು ಹಿಡಿಯಲು ಮಾತ್ರ ಸೀಮಿತವಾಗಿದ್ದಾರೆ ಎಂದ ಅವರು ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಇದೇ ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗೆದ್ದುಕೊಂಡಿದೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಮಹಾನಗರಪಾಲಿಕೆ ಫಲಿತಾಂಶಗಳು ಬಿಜೆಪಿ ಮುಂದಿನ ಇಪ್ಪತ್ತು ವರ್ಷ ಆಡಳಿತ ನಡೆಸಲಿದೆ ಎಂಬುದನ್ನು ಸೂಚಿಸಿದ್ದು ಸಿದ್ಧರಾಮಯ್ಯ…

Read More