Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುನ್ನೂರು: ಅಲ್ಲಿ ಎಲ್ಲರೂ ಮನೆಗಳನ್ನು ತೊರೆಯುತ್ತಿದ್ದಾರೆ. ಮುಂದೊಂದು ದಿನ ಅಲ್ಲಿ ಯಾರೂ ಇರುವುದಿಲ್ಲ. ಆ ವೇಳೆ ಅದು ನಿರ್ವಸತಿ ದ್ವೀಪ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ಇದು ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುತ್ತಾರುಗುತ್ತು , ತೇವುಲ, ಬಟ್ಟೆದಡಿ ಪ್ರದೇಶಗಳು ಸುತ್ತುವರಿದ ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶದ ಕತೆ. ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿರುವ ಪಾಂಡ್ಯ ಮತ್ತು ನಡೋಡಿ ಪ್ರದೇಶದಲ್ಲಿ 10ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳಿದ್ದವು. ಆದರೆ ಮಳೆಗಾಲದಲ್ಲಿ ಅವರ ಸ್ಥಿತಿ ಶೋಚನೀಯವಾಗಿರುವುದರಿಂದ ಐದು ಕುಟುಂಬಗಳು ಈಗಾಗಲೇ ಊರು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡಿದೆ. ಪಾಂಡ್ಯಾರ್ ಮತ್ತು ನಡೋಡಿ ಪ್ರದೇಶಗಳ ಸುತ್ತಲೂ ತಗ್ಗು ಪ್ರದೇಶಗಳಿದ್ದು, ಹೆಚ್ಚಿನ ಗದ್ದೆಗಳು ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಗದ್ದೆಯ ಬದಿಗಳೆ ಇವರಿಗೆ ಸಂಪರ್ಕ ರಸ್ತೆಯಾದರೆ ಮಳೆಗಾಲದಲ್ಲಿ ನೀರು ತುಂಬಿದ ಗದ್ದೆಗಳೇ ಇವರಿಗೆ ಸಂಪರ್ಕ ರಸ್ತೆ. ಈಗಾಗಲೇ ಪಾಂಡ್ಯಾರ್‍ನ ಒಂದು ಕುಟುಂಬ ಸ್ವಂತ ಮನೆ ಬಿಟ್ಟು ಉಳ್ಳಾಲಕ್ಕೆ ವಲಸೆ ಹೋಗಿದ್ದು, ನಡೋಡಿಯಲ್ಲಿ ನಾಲ್ಕು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯ ಇದರ ವಾರ್ಷಿಕ ಮಹಾಸಭೆ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಮೊಕ್ತೇಸರ ದಾಮೋದರ್ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ ನಮ್ಮ ಸಮಾಜದ ಎಲ್ಲಾ ಬಾಂಧವರು ಸುಸಂಘಟಿತರಾಗಬೇಕು. ಸಂಘಟನೆ ಸಂದರ್ಭದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರದಂತೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಗೌರವಯುತ ಸಮಾಜದ ಸದಸ್ಯರಾಗಬೇಕೆಂದು ಪ್ರೇರೇಪಿಸಿದರು. ಈ ಸಂದರ್ಭ ಕೇಂದ್ರ ಸಮಿತಿ ಸದಸ್ಯ ಮಾಧವ ಸುವರ್ಣ ಒಂಭತ್ತುಕೆರೆ, ವಲಯ ಉಪಾಧ್ಯಕ್ಷ ರಾಜ್‍ಕುಮಾರ್ ಒಂಭತ್ತುಕೆರೆ, ಪ್ರಧಾನ ಕಾರ್ಯದರ್ಶಿ ಸಬಿತಾ ಉಮೇಶ್, ಸುಷ್ಮಾ ಜನಾರ್ಧನ್, ಪ್ರಕಾಶ್ ಗುರಿಕಾರ, ಗಣೇಶ್ ಕೊಲ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಅಭಿಷೇಕ್ ಉಳ್ಳಾಲ್‍ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಉಳ್ಳಾಲ ವಲಯಾಧ್ಯಕ್ಷ ದಿನೇಶ್ ಕುಂಪಲ ಸ್ವಾಗತಿಸಿದರು. ತೀಯಾ ಗ್ರಾಮಾಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ಜಗದೀಶ್ ಆರ್.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸ್ನೇಹಿತರ ಜತೆಗೆ ವಿಹಾರಕ್ಕೆಂದು ಬಂದಿದ್ದ ಬ್ರಹ್ಮಾವರ ಬಾರಕೂರು ನಿವಾಸಿ ಸುರೇಶ್ ಶೆಟ್ಟಿ (40) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದ ಕೆರೆಯಲ್ಲಿ ಸಂಭವಿಸಿದೆ. ಕೊಲ್ಯ ಕನೀರುತೋಟದ ತನ್ನ ಐದು ಮಂದಿ ಸ್ನೇಹಿತರ ಜತೆಗೆ ವಿಹಾರಕ್ಕೆಂದು ಬಂದ ಸಂದರ್ಭ ಘಟನೆ ಸಂಭವಿಸಿದೆ. ಸುರೇಶ್ ಅವರು ಏಳು ತಿಂಗಳ ಹಿಂದೆ ಅಯ್ಯಪ್ಪ ವೃತಧಾರಿಯಾಗಿ ಕನೀರುತೋಟದ ಯುವಕರ ಜತೆಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಇದೇ ಪರಿಚಯದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜತೆಯಾಗಿದ್ದ ಎಲ್ಲರೂ ಊಟ ಮುಗಿಸಿ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದರು. ಅಲ್ಲಿ ಕೆರೆಯಲ್ಲಿ ಸುರೇಶ್ ಅವರು ಈಜಲು ಆರಂಭಿಸಿದ್ದು, ಆಯತಪ್ಪಿ ಮುಳುಗಿದರೆನ್ನಲಾಗಿದೆ. ಸ್ಥಳೀಯ ಈಜುಗಾರರನ್ನು ಕರೆಯುವಷ್ಟರಲ್ಲಿ ಸುರೇಶ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಆ್ಯಕ್ಸಿಲ್ ತುಂಡಾಗಿ ಬಸ್ಸೊಂದು ಕಮರಿಗೆ ವಾಲಿ ಮನೆಯೊಂದರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿರುವ ಘಟನೆ ಕುಂಪಲದ ಚಿತ್ರಾಂಜಲಿನಗರ ಸಮೀಪದ ವಿಜಯನಗರ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಬಗಂಬಿಲ ಕಡೆಗೆ ತೆರಳುತ್ತಿದ್ದ 44 ನಂಬರಿನ ಖಾಸಗಿ ಗಣೇಶ್ ಬಸ್ಸ್ ವಿಜಯನಗರದ ಏರುವ ಪ್ರದೇಶದಲ್ಲಿ ಆ್ಯಕ್ಸಿಲ್ ತುಂಡಾಗಿದ್ದು, ಪರಿಣಾಮ ಬಸ್ಸು ಹಿಂದುಗಡೆ ಚಲಿಸಿದೆ. ಏಕಾಏಕಿ ಹಿಂದುಗಡೆ ಚಲಿಸಿದ ಬಸ್ಸು ಕಮರಿಗೆ ಉರುಳಿ ಸಮೀಪದಲ್ಲಿದ್ದ ನಾರಾಯಣ ಎಂಬವರ ಕಂಪೌಂಡಿಗೆ ಡಿಕ್ಕಿ ಹೊಡೆದು ನಿಂತಿತು. ಬೆಳಗ್ಗಿನ ಸಮಯವಾಗಿದ್ದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಆದರೆ ಪವಾಡಸದೃಶವಾಗಿ ಮೂವರು ಮಹಿಳೆಯರು ಮತ್ತು ಒಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತಪ್ಪಿದ ಅಪಾಯ: ಬಸ್ಸು ಕಮರಿಗೆ ಉರುಳದೇ ಇದ್ದಲ್ಲಿ ಹಿಂದೆ ಸೇತುವೆಯೊಂದಿದ್ದು, ಅದರ ಕೆಳಗಡೆ ಬೀಳುವ ಸಾಧ್ಯತೆ ಇತ್ತು. ಇತ್ತ ಕಡೆ ಹೈಟೆನ್ಶನ್ ಟ್ರಾನ್ಸ್ ಫಾರ್ಮರ್ ಕೂಡಾ ಇದ್ದು, ಇದರಿಂದ ಸಂಭವಿಸುತ್ತಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಕಟ್ಟ :ವಕ್ಪ್ ಬೋರ್ಡ್ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾಗಿ ಅಯ್ಕೆಗೊಂಡ ಮಂಜನಾಡಿಯ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅವರನ್ನು ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯಲ್ಲಿ ಎಸ್ಸೆಸ್ಸೆಫ್, ತಕ್ವುವತುಲ್ ಇಸ್ಲಾಂ ಮತ್ತು ಕಲ್ಕಟ್ಟ ನಾಗರೀಕರು ಸೇರಿ ಸನ್ಮಾನಿಸಿದರು. ಸರ್ಫುದ್ದೀನ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಖತೀಬ್ ಮುಹಮ್ಮದ್ ಹನೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಿನಾನ್ ಹನೀಫಿ, ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಕಂಡಿಕ, ಮೊೈದಿನ್ ಕುಂಞ ಕಲ್ಕಟ್ಟ, ಎಸ್‍ವೈಎಸ್ ಅಧ್ಯಕ್ಷ ಮೋನು ಕಲ್ಕಟ್ಟ, ಅಬ್ಬಾಸ್ ಮದನಿ, ಮುಹಮ್ಮದ್ ಮದನಿ, ಹಸೈನಾರ್ ತಟ್ಲ, ಎಸ್ಸೆಸ್ಸೆಫ್ ಅಧ್ಯಕ್ಷ ಕೆ.ಐ. ಅಬ್ದುಲ್ ರಝಾಕ್, ನಿಸಾರ್ ಸಖಾಫಿ, ಹಬೀಬ್ ಅಹ್ಸನಿ ಉಪಸ್ಥಿತರಿದರು. ಎಸ್‍ವೈಎಸ್ ಮುಖಂಡ ಕೆ.ಎಚ್.ಇಬ್ರಾಹಿಂ ಮದನಿ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಸೂರಜ್ ಇಂಟರ್ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜ್ಞಾನದೀಪ ಪ್ರೌಢಶಾಲೆ ಮುಡಿಪು ಇದರ ಸಹಯೋಗದಲ್ಲಿ ಶಿಕ್ಷಕರಿಗಾಗಿ ಯೋಗ ತರಬೇತಿ ಜ್ಞಾನದೀಪ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾಗಿ ಅಮೃತಾನಂದಮಯಿ ಮಠ ಅಮೃತಪುರಿ ಕೊಲ್ಲಂನ ಬ್ರಹ್ಮಚಾರಿ ಯೋಗಾಮೃತ ಚೈತನ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರೋಟೆರಿಯನ್ ಡಾ. ಮಂಜುನಾಥ್ ಎಸ್ ರೇವಣ್‍ಕರ್, ಶಾಲಾ ಆಡಳಿತಾ„ಕಾರಿ ಸಂಧ್ಯಾ ವಿ.ಜೆ , ಶಾಲಾ ಮುಖ್ಯ ಶಿಕ್ಷಕಿ ಸುರೇಖಾರಾಜ್ ಸಂಸ್ಥೆಯ ಶಿಕ್ಷಕ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು:ಗ್ರಾಮ ಪಂಚಾಯತ್ ಸದಸ್ಯರು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಭ್ರಷ್ಟಾಚಾರ ತೊಡೆದು ಹಾಕಲು ಪ್ರಯತ್ನಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು. ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಾರ್ಡ್ ಸಮಿತಿಯಿಂದ ಭಾನುವಾರ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ಸಭಾಂಗಣದಲ್ಲಿ ಕೆಥೊಲಿಕ್ ಸಮುದಾಯದ ಜನಪ್ರತಿನಿಧಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಆಯಾ ವಾರ್ಡಿನ ಮತದಾರರು ಅಪಾರ ನಂಬಿಕೆಗಳನ್ನು ಇಟ್ಟುಕೊಂಡು ಚುನಾಯಿಸುವ ಮೂಲಕ ಜವಾಬ್ದಾರಿ ನೀಡುತ್ತಾರೆ. ಐದು ವರ್ಷ ತನಗಿರುವ ಅವಧಿಯಲ್ಲಿ ವಾರ್ಡ್‍ಗೆ ಅಗತ್ಯವಿರುವ ಕೆಲಸಗಳನ್ನು ಇಲಾಖೆಗಳು, ರಾಜಕಾರಣಿಗಳ ಸಹಕಾರದಿಂದ ನಿರ್ವಹಿಸಿ ಮತದಾರರ ವಿಶ್ವಾಸ ಗಳಿಸಬೇಕು. ದೊಡ್ಡ ಕೆಲಸಗಳ ನಿರ್ವಹಣೆ ಗ್ರಾಮ ಪಂಚಾಯತ್ ಸದಸ್ಯರಿಂದ ಆಗದ ಮಾತು. ಈ ನಿಟ್ಟಿನಲ್ಲಿ ಅಂತಹ ಯೋಚನೆಗಳನ್ನು ಇಟ್ಟುಕೊಂಡು ಗ್ರಾಮಸ್ಥರಿಗೆ ಭರವಸೆ ಕೊಡುವ ಮುನ್ನ ಯೋಚಿಸುವುದು ಒಳಿತು ಎಂದರು. ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ರಾಜಕೀಯ ಸಂಚಾಲಕ ಜೆರಾಲ್ಡ್ ಡಿಕೋಸ್ತ, ಕೆಥೊಲಿಕ್ ಸಭಾ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಹಿಂದೂ ಸಂಘಟನೆಗಳು ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಮೊದಲು ದೂರು ನೀಡಲಿ. ಚುನಾವಣಾ ಅಜೆಂಡಾವನ್ನು ಮುಂದಿಟ್ಟುಕೊಂಡು ಯಾವುದೇ ಮತಕ್ಕೆ ಸೀಮಿತವಾಗಿರದ ಸಚಿವ ಖಾದರ್ ವಿರುದ್ಧ ಪ್ರತಿಭಟನೆ ನಡೆಸುವುದರಿಂದ ಹಿಂದೂ ಸಮಾಜಕ್ಕೆ ಏನನ್ನು ಕೊಡಲು ಸಾಧ್ಯವಿಲ್ಲ ಎಂದು  ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದ್ದಾರೆ. ಅವರು ಹಿಂದೂ ಸಂಘಟನೆಗಳ ಪ್ರತಿಭಟನೆ ವಿರೋಧಿಸಿ ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ಠಾಣಾ ವ್ಯಾಫ್ತಿಯಲ್ಲಿ ಹಿಂದುಗಳಿಗೆ ಆದ ಅನ್ಯಾಯದ ವಿರುದ್ಧ ದೂರು ನೀಡಲು ಮುಂದಾಗುತ್ತಿಲ್ಲ. ಆರೋಪಿಗಳ ಜತೆಗೆ ಅವರೂ ಶಾಮೀಲಾಗಿರುವುದು ಈ ಮೂಲಕ ತಿಳಿಯಬೇಕಾಗಿದೆ. ಟಾಗರ್ೆಟ್ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯೆನೆಪೋಯ ವೈದ್ಯರು ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಹಿಂದೂ ಸಂಘಟನೆಯವರೇ ಹಣ ಪಡೆದುಕೊಂಡು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ. ಖಾದರ್ ಯಾವುದೇ ಮತಕ್ಕೆ ಸೀಮಿತವಾದ ಜನ ಅಲ್ಲ. ಅವರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೂಲಕ ಹಿಂದು ಮುಸ್ಲಿಂ ಸಾಮರಸ್ಯಕ್ಕೆ ಕುಂದು…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮುಸಲ್ಮಾನರ ಕಣ್ಣಿಗೆ ಬೆಣ್ಣೆ, ಹಿಂದೂಗಳಿಗೆ ಕಣ್ಣಿಗೆ ಸುಣ್ಣ ಅನ್ನುವ ದ್ವಿಮುಖ ನೀತಿಯಲ್ಲಿ ಸಚಿವ ಖಾದರ್ ಆಡಳಿತ ನಡೆಸುತ್ತಿದ್ದು, ಹಿಂದುಗಳು ದುರ್ಬಲರೆಂದು ಮೆಟ್ಟಿ ನಿಲ್ಲುವ ಪ್ರಯತ್ನ ಮುಂದುವರಿದರೆ ಉಗ್ರ ಹೋರಾಟವನ್ನು ನಡೆಸಲಿದ್ದೇವೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನ ಬಸ್ ನಿಲ್ದಾಣದ ಬಳಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಪ್ರಖಂಡ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಕ್ಷೇತ್ರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಸಚಿವ ಯು.ಟಿ.ಖಾದರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು. ದುರ್ನಡತೆಯ ಪರವಾಗಿರುವ ರಾಜ್ಯ ಸರಕಾರದಲ್ಲಿ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತೊಕ್ಕೊಟ್ಟು, ತಲಪಾಡಿ ಭಾಗದಲ್ಲಿಯೇ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಜನಪ್ರತಿನಿಧಿಗಳು ಸಮಸ್ಯೆಯನ್ನು ನಿಭಾಯಿಸಬೇಕೇ ಹೊರತು, ಜನರಿಗೆ ಸಮಸ್ಯೆಯಾಗಬಾರದು. ಬೋರ್ವೆಲ್ ನಿಮರ್ಿಸಿದಕ್ಕೆ ಸಚಿವರಿಗೆ ಅಭಿನಂದನೆ ಬ್ಯಾನರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ನಡುಪದವು ಬಳಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಚೂರಿ ಇರಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇದು ಮೂರನೇ ದಿನದಲ್ಲಿ ಎರಡನೇ ಪ್ರಕರಣವಾಗಿದೆ. ನಡುಪದವು ನಿವಾಸಿ ಸಿರಾಜುದ್ದೀನ್ (24) ಚೂರಿ ಇರಿತಕ್ಕೊಳಗಾದವರಾಗಿದ್ದು, ಇವರು ಮಂಗಳೂರಿನ ಕನರ್ಾಟಕ ಏಜನ್ಸೀಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರಿನಲ್ಲಿ ಬರುತ್ತಿದ್ದಾಗ ನಡುಪದವು ಇಂಜಿನಿಯರಿಂಗ್ ಕಾಲೇಜಿನ ಕ್ರಾಸ್ ಬಳಿ ಹಿಂದಿನಿಂದ ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಸಿರಾಜುದ್ದೀನ್ ಅವರು ತನ್ನ ಸ್ಕೂಟರಿನಲ್ಲಿ ಸ್ವಲ್ಪ ದೂರ ಚಲಿಸಿ ಬಳಿಕ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮೂರನೇ ಪ್ರಕರಣ: ಇನ್ಫೋಸಿಸ್ ಬಳಿ ಸತೀಶ್ ಎಂಬವರಿಗೆ ಕೆಲ ತಿಂಗಳ ಹಿಂದೆ ಇಂತಹದ್ದೇ ಕಪ್ಪು ಪಲ್ಸಾರ್ ಬೈಕಿನಲ್ಲಿ ಬಂದ ಆಗಂತುಕರು ಚೂರಿ ಇರಿದು ಪರಾರಿಯಾಗಿದ್ದರು.…

Read More