Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟಿನ ಅಧೀನದ ದೇರಳಕಟ್ಟೆಯ ಮಸ್ಜಿದ್ ಉಮರ್ ಬಿನ್ ಖುತ್ತುಬ್‍ನಲ್ಲಿ ಸಂಭ್ರಮದಲ್ಲಿ ಈದ್-ಉಲ್- ಫಿತ್ರ್ ಆಚರಿಸಲಾಯಿತು. ಯುವ ಪಂಡಿತ ನವಲ್ ರಹ್ಮಾನ್ ಈದ್ ನಮಾಜಿನ ನೇತೃತ್ವ ವಹಿಸಿ ಕುತುಬ್ ನೆರವೇರಿಸಿದರು. ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನ ಕೇಂದ್ರ ಸಮಿತಿಯ ಹಿರಿಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ, ಮಸೀದಿ ಅಧ್ಯಕ್ಷ ಮಹಮ್ಮದ್ ಯಾಸೀನ್ ಮತ್ತು ಕಾರ್ಯದರ್ಶಿ ಅಹ್ಮದ್ ಮಾಸ್ತರ್ ಮೊದಲಾದವರು ಭಾಗವಹಿಸಿದ್ದರು. ಮಹಿಳೆಯರ ಸಹಿತ ನೂರಾರು ಮಂದಿ ಈದ್ ನಮಾಜಿನಲ್ಲಿ ಭಾಗವಹಿಸಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದಲ್ಲಿ ರಂಜಾನ್ ಉಪವಾಸ ಮತ್ತು ಈದ್ ಹಬ್ಬವು ಸಂಭ್ರಮ ಶಾಂತಿ ಸುವ್ಯವಸ್ಥೆಯಿಂದ ನಡೆದಿದೆ. ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆಗಳು ನಡೆಯದೇ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿರುವುದು ಸ್ವಾಗತಾರ್ಹ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಉಳ್ಳಾಲದಲ್ಲಿ ಶನಿವಾರ ನಡೆದ ಈದ್ ನಮಾಜ್ ಮುಗಿದ ಬಳಿಕ ಮಾತನಾಡಿದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಮಾತನಾಡಿ ರಂಜಾನ್ ಉಪವಾಸ ಮತ್ತು ಈದ್ ಬಹಳಷ್ಟು ಶಾಂತಿ ಸೌಹಾರ್ದತೆಯಿಂದ ಉಳ್ಳಾಲದಲ್ಲಿ ನಡೆದಿದೆ. ಒಂದು ತಿಂಗಳ ಉಪವಾಸದ ಅಮಯದಲ್ಲಿ ಶಾಂತಿ ಹದಗೆಡದಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಎಲ್ಲಾ ಇಲಾಖೆಗಳು ಮತ್ತು ತುಂಬು ಹೃದಯದಿಂದ ಸಹಕರಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು ಎಸ್. ಹಂಝ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‍ವೇ, ಪ್ರ. ಕಾರ್ಯದರ್ಶಿ ಯು.ಟಿ. ಇಲ್ಯಾಸ್ ತೋಟ, ಜತೆ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಅಶ್ರಫ್, ಫಾರೂಕ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉಳ್ಳಾಲ ಹಾಗೂ ಕೊಣಾಜೆ ವ್ಯಾಪ್ತಿಯಲ್ಲಿ ಹಲವು ಚೂರಿ ಇರಿತ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಆರೋಪಿಸಿದ್ದಾರೆ. ಅವರು ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು. ಮಾದಕ ದ್ರವ್ಯಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಅಪರಾಧಿ ಚಟುವಟಿಕೆಗಳು ಮುಂದುವರಿಯುತ್ತಲೇ ಇದೆ. ಕೃತ್ಯ ಸಂದರ್ಭದಲ್ಲಿ ಸಿ.ಸಿ.ಟಿವಿ ನೋಡಿ ವಾಹನಗಳನ್ನು ಪತ್ತೆಹಚ್ಚುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿಲ್ಲ. ಉಳ್ಳಾಲ ವ್ಯಾಪ್ತಿಯಲ್ಲಿ ಹಲವೆಡೆ ಸಿ.ಸಿ.ಟಿವಿಗಳಿದ್ದರೂ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಪರಾಧ ತಡೆಗಟ್ಟಲು ನೇತ್ರಾವತಿಯಿಂದ ತಲಪಾಡಿವರೆಗೂ ಸಿ.ಸಿ ಟಿವಿಯನ್ನು ಅಳವಡಿಸಬೇಕಿದೆ. ರಾತ್ರಿ 8 ರಿಂದ 10 ಗಂಟೆಯೊಳಗೆ ಚೂರಿ ಇರಿತ ಪ್ರಕರಣಗಳು ನಡೆಯುತ್ತಿದೆ. ಒಂದೇ ರೀತಿಯಲ್ಲಿ ಹಿಂಬದಿಯಿಂದ ಸೊಂಟದ ಭಾಗಕ್ಕೆ ಚೂರಿ ಹಾಕುವುದು ನೋಡಿದಾಗ ಪರಿಣತ ಒಂದೇ ತಂಡದ ಕೃತ್ಯ ಎಂದು ಮನವರಿಕೆಯಾಗುತ್ತದೆ. ಈ ಮೂಲಕ ಶಾಂತಿಯುತವಾಗಿರುವ ಪ್ರದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಸಮಾಜಘಾತುಕ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಕರ್ನಾಟಕದಲ್ಲಿ ಪ್ರತೀ ವರ್ಷ ಕೃಷಿ ಇಳುವರಿ ಕಡಿಮೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಕೃಷಿ ಚಟುವಟಿಕೆ ನಿಲ್ಲುವ ಸಾಧ್ಯತೆ ಇದ್ದು, ಯುವ ಜನತೆ ಅದರಲ್ಲೂ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಿ ಕೃಷಿ ಉಳಿಸುವ ನಿಟ್ಟಿನಲ್ಲಿ ಪಣ ತೊಡುವ ಕಾರ್ಯ ಮಾಡಬೇಕು ಎಂದು ಯೇನೆಪೋಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಮಂಜುನಾಥ್ ಅಭಿಪ್ರಾಯಪಟ್ಟರು. ಅವರು ಕೊಣಾಜೆ ಗ್ರಾಮದ ಪರಂಡೆಯ ರೈತರೊಬ್ಬರ ಗದ್ದೆಯಲ್ಲಿ ಕಿಟ್ಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನೇಜಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನೇಜಿ ನಾಟಿ ಕಾರ್ಯಕ್ರಮಕ್ಕೆ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಚಾಲನೆ ನೀಡಿ ಕೃಷಿ ಜೀವನ ಉತ್ತಮವಾಗಿದ್ದು, ಕೃಷಿಯ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಕೃಷಿಯನ್ನು ಉಳಿಸಲು ಸಾಧ್ಯ ಎಂದರು. ಕಾರ್ಯಕ್ರಮದ ಸಂಘಟಕ ಕಿಟ್ಟೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ ಎ. ಮಾತನಾಡಿ ನೇಜಿ ನಾಟಿ ಕಾರ್ಯ ಮಾಡುವ ಮೂಲಕ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ವ್ಯಾವಹಾರಿಕ ಕ್ಷೇತ್ರವಾಗಿ ಮಾರ್ಪಾಡಾಗಿದ್ದು, ಪ್ರತಿಷ್ಠೆಗಾಗಿ ಅನುಕರಣೆಯ ಸಂಶೋಧನೆಗಳಿಂದ ವಾಸ್ತವ ಅರಿಯದೆ ಕ್ಷೇತ್ರದಲ್ಲಿನ ಉತ್ಸಾಹ ಕುಗ್ಗಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪದ್ಮಭೂಷನ ಪುರಸ್ಕøತ ಪ್ರೊ.ಬಿ.ಎಂ .ಹೆಗ್ಡೆ ಹೇಳಿದ್ದಾರೆ. ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಪ್ರೊ.ಡಾ. ಎನ್ ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಸಮಿತಿ ಆಶ್ರಯದಲ್ಲಿ ವಿಂಶತಿ ಭವನದಲ್ಲಿ ಆಯೋಜಿಸಿದ್ದ ` `ಆರೋಗ್ಯ ಎಂದರೇನು’ ಕುರಿತ ದತ್ತಿ ಉಪನ್ಯಾಸವನ್ನು ನೆರವೇರಿಸಿ ಮಾತನಾಡಿದರು. ಚಿಕಿತ್ಸೆ ಹೆಸರಿನಲ್ಲಿ ರೋಗಿಗಳಿಗೆ ಲೇಬಲ್ ಮಾಡುವ ಕೆಲಸ ಆಗುತ್ತಿದೆ. ಇದರಿಂದ ವಿಶ್ವದಲ್ಲಿ ಶೇ.95 ರಷ್ಟು ಮಂದಿ ಹಲವು ಕಾಯಿಲೆಗಳನ್ನು ಹೊಂದಿರುತ್ತಾರೆ. ವಿವೇಚನಾರಹಿತ ವಿಜ್ಞಾನದ ಪ್ರಯೋಗಗಳು ವಿಭಿನ್ನ ಉತ್ತರಗಳನ್ನು ನೀಡುತ್ತದೆ. ಅನುಕರಣೆಯ ಮೂಲಕ ಸಂಶೋಧನೆಗಳು ಮುಂದುವರಿಯುವುದರಿಂದ ಸಂಶೋಧಕರಲ್ಲಿ ಉತ್ಸಾಹವೂ ಇಲ್ಲದಾಗಿದೆ. ವಾಸ್ತವ ತಿಳಿದು ಚಿಂತಕರ ಮಾರ್ಗದರ್ಶನದಿಂದ ನಡೆಸುವ ಸಂಶೋಧನೆಗಳು ಉಪಯುಕ್ತವಾಗುವುದು ಎಂದರು. ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಥಾಪಕ ಡೀನ್ ಪ್ರೊ.ಡಾ.ಯನ್ ಶ್ರೀಧರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿ ಬಳಿ ಚೂರಿ ಇರಿತದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಬೈಕ್‍ನಲ್ಲಿ ಬಂದಿದ್ದ ಆಗಂತುಕರಿಬ್ಬರು ತಲಪಾಡಿ ತೂಮಿನಾಡು ನಿವಾಸಿ ಪ್ರದೀಪ್ ಎಂಬಾತನಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ಕಾರ್ಪೋರೇಶನ್ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಎಂದಿನಂತೆ ಬಸ್ಸಿನಿಂದ ಇಳಿದು ತನ್ನ ಸಹೋದರನಿಗೆ ಬೈಕ್ ತರಲು ಹೇಳಿ ತಲಪಾಡಿ ಜಂಕ್ಷನ್‍ನಿಂದ ದೇವಿಪುರ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ಆಗಂತುಕರಿಬ್ಬರು ಚೂರಿಯಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಬಂದ ಪ್ರದೀಪ್ ಸಹೋದರ ಲಕ್ಷ್ಮಿಕಾಂತ್ ಗಾಯಗೊಂಡಿದ್ದ ಪ್ರದೀಪ್‍ನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರದೀಪ್ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ತನ್ನ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ  ಎನ್ನಲಾಗುತ್ತಿದೆ. ಮೂರನೇ ಘಟನೆ : ತಲಪಾಡಿಯಲ್ಲಿ ಸೋಮವಾರ ಕಾರು ಧ್ವಂಸ ನಡೆದಿದ್ದು, ಇದರಲ್ಲಿ 6 ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇದಾದ ಬಳಿಕ ಮಂಗಳವಾರ ತೊಕ್ಕೊಟ್ಟಿನ ಒಳಪೇಟೆಯಲ್ಲಿ ಗುಂಪೊಂದು ಯುವಕನಿಗೆ ಥಳಿಸಿ ಸುಮಾರು ಒಂದು ಲಕ್ಷ ರೂ ಮೌಲ್ಯದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕಾರುಗಳನ್ನು ತಡೆದು ಗಾಜು ಪುಡಿಗೈದು, ಆರು ಜನರ ಮೇಲೆ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜೇಶ್ವರ ನಿವಾಸಿಗಳಾದ ಅಝರ್, ರಶೀದ್, ನಿಝಾಂ, ನಿಯಾಝ್, ಯಾಸೀರ್, ಅನೀದ್ ಹಲ್ಲೆಗೊಳಗಾದವರು. ಸ್ವಿಫ್ಟ್ ಕಾರಿನಲ್ಲಿ ಮಂಜೇಶ್ವರದಿಂದ ಮಂಗಳೂರಿನತ್ತ ತೆರಳುತ್ತಿದ್ದ ಇವರನ್ನು ಮಂಜೇಶ್ವರದಿಂದ ಬೆನ್ನಟ್ಟಿದ ಸ್ಕೂಟರ್ ಹಾಗೂ ಬೈಕ್ ಗಳಲ್ಲಿ ಬಂದಿದ್ದ 10 ಮಂದಿಯ ತಂಡ ತಲಪಾಡಿ ಸಮೀಪ ಕಾರನ್ನು ಅಡ್ಡಗಟ್ಟಿ ತಡೆಹಿಡಿದಿದ್ದರು. ಕಾರಿನಲ್ಲಿದ್ದವರು ಕಾರನ್ನು ಬಾಡಿಗೆಗೆ ಪಡೆದಿರುವ ವಿಚಾರವನ್ನು ತಿಳಿಸಿದಾಗ, ಕಾರಿನ ಮಾಲೀಕರನ್ನು ತಂಡ ಸ್ಥಳಕ್ಕೆ ಕರೆಸಿತ್ತು. ಅಲ್ಲಿಗೆ ಆಲ್ಟೋ ಕಾರಿನಲ್ಲಿ ಬಂದ ಕಾರಿನ ಮಾಲೀಕನನ್ನು ತಡೆದ ತಂಡ ಎರಡು ಕಾರುಗಳ ಗಾಜನ್ನು ಪುಡಿಗೈದು ಎರಡು ಕಾರಿನಲ್ಲಿದ್ದ ಆರು ಮಂದಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದನ್ನು ಲೂಟಿಗೈದಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಿನಲ್ಲಿ ಭಾಗಿಯಾಗಿತ್ತು !: ಇತ್ತೀಚೆಗೆ ತಲಪಾಡಿಯ ಪಂಜಾಳ ಸಮೀಪ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಕಳವು ನಡೆಸಿ ಕಳವುಗೈದ ಮಾಲನ್ನೇ ಬಿಟ್ಟು ಕಳ್ಳರು ಪರಾರಿಯಾದ ಘಟನೆ ಕೊಣಾಜೆಯಲ್ಲಿ ನಡೆದಿದ್ದರೆ, ಇಲ್ಲೊಂದು ಕಳ್ಳರ ತಂಡ ಒಂದು ಲಕ್ಷ ಬೆಲೆಬಾಳುವ ಬೈಕನ್ನು ಕಳವಿಗೆ ಯತ್ನಿಸಿ ಕೇವಲ ಅದರ ಟಯರನ್ನೇ ಕಳವು ನಡೆಸಿ ಪರಾರಿಯಾಗಿರುವ ಪ್ರಸಂಗ ಕುತ್ತಾರು ಸಮೀಪದ ಮುಂಡೋಳಿ ಎಂಬಲ್ಲಿ ನಡೆದಿದೆ. ಮೂಲತ: ಕೇರಳ ನಿವಾಸಿ ಝಿರಾರ್ ಎಂಬವರ ಪಲ್ಸಾರ್ ಬೈಕಿನ ಹಿಂಬದಿ ಟಯರನ್ನು ಕಳಚಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮುಂಡೋಳಿ ಸಮೀಪ ಬಾಡಿಗೆ ಮನೆಯಲ್ಲಿರುವ ಝಿರಾರ್ ಅವರು ಮನೆ ಕಂಪೌಂಡಿನ ಒಳಗೆ ಬೈಕ್ ನಿಲ್ಲಿಸಿದ್ದರು. ಮಂಗಳವಾರ ತಡರಾತ್ರಿ ಬೈಕನ್ನು ಕಳವುಗೈದ ಕಳ್ಳರು ಮನೆಯಿಂದ ಅರ್ಧ ಕಿ.ಮೀ ದೂರದವೆರೆಗೆ ಬೈಕನ್ನು ಕೊಂಡೊಯ್ದು , ಅಲ್ಲಿಯೇ ಬೈಕಿನ ಹಿಂಬದಿ ಟಯರನ್ನು ಟೂಲ್ಸ್ ಮುಖೇನ ಕಳಚಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ. ಝಿರಾರ್ ಬೆಳಿಗ್ಗೆ ತಮ್ಮ ಮಳಿಗೆಗೆ ಹೋಗಲು ಬಾಗಿಲು ತೆಗೆಯುತ್ತಿದ್ದಂತೆ ಬೈಕ್ ನಾಪತ್ತೆಯಾಗಿತ್ತು. ಬೈಕ್ ಕಳವಾಗಿದೆ ಎಂದು ಭಾವಿಸಿದ ಅವರು ಉಳ್ಳಾಲ ಪೊಲೀಸರಿಗೆ ದೂರವಾಣಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಆತ ಕ್ಲಾಸಿನಲ್ಲಿ 3 ನೇ ರ್ಯಾಂಕ್ ಗಳಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ. ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದ. ಆದರೆ ದುರಂತವೆಂದರೆ ಒಂದು ಸೈಕಲ್ ಅಪಘಾತ ಆತನನ್ನು ಮೂರು ವರ್ಷಗಳಿಂದ ಜೀವಚ್ಛವವಾಗಿ ಮಲಗಿಸಿದೆ. ಆರ್ಥಿಕವಾಗಿ ಬಳಲಿರುವ ಕುಟುಂಬಕ್ಕೆ ಸಹಾಯ ಹಸ್ತ ಬೇಕಾಗಿದೆ. ಕುತ್ತಾರು ಸುಭಾಷ್‍ನಗರ ನಿವಾಸಿ ಜಯಂತಿ ಅವರಿಗೆ ಆಘಾತಗಳ ಮೇಲೊಂದು ಆಘಾತ. ಹತ್ತು ವರ್ಷಗಳ ಹಿಂದೆ ಮನೆಗೆ ಆಧಾರ ಸ್ತಂಭವಾಗಿದ್ದ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡರು. ಅದರ ದು:ಖ ಹಾಗೂ ಜೀವನ ನಿರ್ವಹಣೆಯನ್ನು ಸರಿದೂಗಿಸುವ ಸಂದರ್ಭದಲ್ಲಿ ಮಗ ಎಸ್‍ಎಸ್‍ಎಲ್‍ಸಿ ವಿದ್ಯಾಭ್ಯಾಸ ಮಾಡುತ್ತಿದ್ದ 15ರ ಹರೆಯದ ಪುನೀತ್ ಸೈಕಲ್ ಅಪಘಾತಕ್ಕೀಡಾಗಿ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾನೆ. ಪುನೀತ್ ಸಂತ ಆಲೋಷಿಯಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. 2011ರ ಡಿಸೆಂಬರ್‍ನಲ್ಲಿ ಮನೆಯ ಪಕ್ಕದ ರಸ್ತೆಯಲ್ಲಿ ಇತರ ಸ್ನೇಹಿತರೊಂದಿಗೆ ಸೈಕಲ್‍ನಲ್ಲಿ ತೆರಳುತ್ತಿದ್ದಾಗ ಇಳಿಜಾರಿನ ಪ್ರದೇಶದಲ್ಲಿ ಅಪಘಾತವಾಗಿದ್ದು, ಕುತ್ತಿಗೆಯ ಹಿಂಬಾಗಕ್ಕೆ ಕಲ್ಲು ಬಡಿದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಸೈಗೋಳಿ: ನೈಸರ್ಗಿಕ ಸಂಪತ್ತನ್ನು ಮನುಷ್ಯ ಸ್ವಾರ್ಥಕ್ಕಾಗಿ ಬಳಸುವುದರ ಪರಿಣಾಮ ಮಳೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಗೆ ಮಹತ್ವ ನೀಡುವಂತಹ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಶ್ರೀ ನಾಗಬ್ರಹ್ಮ ಭಜನಾ ಮಂಡಲಿ ಪಟ್ಟೋರಿ ಹಾಗೂ ನಿಟ್ಟೆ ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಪಟ್ಟೋರಿಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಸ್ಯ ಸಂಪತ್ತುಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಪರಿಸರದ ಸಂರಕ್ಷಣೆ ಸಾಧ್ಯ. ಇಂತಹ ಪರಿಸರಪೂರಕ ಕಾರ್ಯಗಳಿಗೆ ಸಂಘ ಸಂಸ್ಥೆಗಳು ಸೇರಿಕೊಂಡು ಭಾಗವಹಿಸಿದಾಗ ಸರಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದರು. ಗೃಹ ರಕ್ಷಕ ದಳದ ಕಮಾಡೆಂಟ್ ಡಾ.ಮುರಲೀ ಮೋಹನ ಚೂಂತಾರು ಮಾತನಾಡಿ ಇತ್ತೀಚೆಗೆ ಕಾಡುಗಳನ್ನು ನಾಶ ಮಾಡಿ ಕಾಂಕ್ರೀಟು ಕಟ್ಟಡಗಳೇ ಹೆಚ್ಚುತ್ತಿವೆ. ಅಲ್ಲದೆ ಪರಿಸರದ ಮೇಲೆ ನಾವು ಒಂದಲ್ಲ ಒಂದು ರೀತಿಯಲ್ಲಿ ಹಾನಿಯನ್ನು ಮಾಡುತ್ತಿದ್ದೇವೆ. ಇನ್ನಾದರೂ…

Read More