ಉಳ್ಳಾಲ್ನ್ಯೂಸ್ ನೆಟ್ವರ್ಕ್
ದೇರಳಕಟ್ಟೆ : ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮುಂಭಾಗದಲ್ಲಿ ಆಧುನಿಕ ಸೌಲಭ್ಯಗಳುಳ್ಳ, ಹವಾನಿಯಂತ್ರಿತ ` ದ ಕಂಫಟ್ರ್ಸ್ ಇನ್’ ವಸತಿಗೃಹ ಗುರುವಾರ ಶುಭಾರಂಭಗೊಂಡಿತು.
ವಸತಿಗೃಹ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ದೇವಿ ಎಜ್ಯುಕೇಷನ್ ಟ್ರಸ್ಟಿನ ಚೇರ್ ಮೆನ್ ಎ.ಸದಾನಂದ ಶೆಟ್ಟಿ ಮಾತನಾಡಿ ದೈವ ಬಲದೊಂದಿಗೆ ಮನಸ್ಥೈರ್ಯವೊಂದಿದ್ದರೆ ಉದ್ಯಮದಲ್ಲಿ ಯಶಸ್ಸು ಸಾಧ್ಯ. ವಸತಿಗೃಹಕ್ಕೆ ಬರುವ ಗ್ರಾಹಕರ ಸೇವೆ ಉತ್ತಮ ಜನಸಂಪರ್ಕ ನೀಡುವ ಮೂಲಕ ಈ ಸಂಸ್ಥೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.
ವಸತಿ ಗೃಹವನ್ನು ಉದ್ಘಾಟಿಸಿದ ನಿಟ್ಟೆ ವಿಶ್ವವಿದ್ಯಾಲಯದ ಎನ್.ವಿನಯ ಹೆಗ್ಡೆ ಮಾತನಾಡಿ ಯಶಸ್ಸಿನ ಹಿಂದೆ ದೇರಳಕಟ್ಟೆ ಪರಿಸರದ ಕೊಡುಗೆ ಅಪಾರವಿದ್ದು, ಅದಕ್ಕಾಗಿ ತನ್ನ ಯಶಸ್ಸನ್ನು ಪರಿಸರಕ್ಕೆ ಅರ್ಪಿಸುತ್ತೇನೆ. ಕಷ್ಟಪಟ್ಟಲ್ಲಿ ಪ್ರತಿ ಉದ್ಯಮದಲ್ಲಿ ಯಶಸ್ಸಿದೆ. ದೇರಳಕಟ್ಟೆ ಎಂಬ ಊರು ದೇವರ ಕಟ್ಟೆಯಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಬಂದವರು ಅವರವರ ಧರ್ಮದ ನಂಬಿಕೆಯಂತೆ ಯಶಸ್ಸು ಗಳಿಸಿದ್ದಾರೆ ಎಂದರು.
ದ ಕಂಫಟ್ಸ್ ್ ಇನ್ ವಸತಿಗೃಹದ ಮಾಲೀಕ ಚಂದ್ರಹಾಸ್ ಶೆಟ್ಟಿ ಮಾತನಾಡಿ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ ದೇರಳಕಟ್ಟೆಯಲ್ಲಿ ಉದ್ಯಮಕ್ಕೆ ಉತ್ತಮ ಅವಕಾಶವಿದ್ದು, ಇಲ್ಲಿ ಬರುವ ಜನರ ಅನುಕೂಲತೆಗೆ ತಕ್ಕಂತೆ ಕಂಫರ್ಟ್ ಇನ್ ವಸತಿಗೃಹವನ್ನು ಸುಸಜ್ಜಿತವಾಗಿ ವ್ಯವಸ್ಥೆ ಮಾಡಿ 800 ರಿಂದ 3,000 ರೂ.ವರೆಗಿನ ಹವಾನಿಯಂತ್ರಿತ , ಹವಾನಿಯಂತ್ರಣ ರಹಿತ ಸುಸಜ್ಜಿತ ವಸತಿ ವ್ಯವಸ್ಥೆಯಿದ್ದು, ಸುಮಾರು 45 ರೂಮ್ ಗಳಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಅಧ್ಯಕ್ಷ ಯು.ಕೆಮೋನು , ಲಯನ್ಸ್ ಜಿಲ್ಲಾ ಗವರ್ನರ್ ಎಂ.ಅರುಣ್ ಶೆಟ್ಟಿ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬೆಳ್ಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ, ಲಯನ್ಸ್ ಜಿಲ್ಲಾ ಉಪಗವರ್ನರ್ ದೇವದಾಸ್ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು. ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಉಪಸ್ಥಿತರಿದ್ದರು.
ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಶೆಟ್ಟಿ ವಂದಿಸಿದರು.
ಹೆಚ್ಚಿನ ಫೋಟೋಗಳು..









































