ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕೆಲಸ ಬಿಟ್ಟು ನಿವೇಶನಕ್ಕಾಗಿ ಹೋರಾಡುವುದು ವಿಪರ್ಯಾಸ. ಮಧ್ಯಮ ವರ್ಗದವರು ದುಡಿದ ಆದಾಯದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿರುವ ಸಮಯದಲ್ಲಿ ಸರಕಾರ ನಿವೇಶನ ನೀಡದೇ ಇದ್ದಲ್ಲಿ ನಿರಂತರ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಉಳ್ಳಾಲ ವಲಯ ಸಿಪಿಐಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು. ಅವರು ನಿವೇಶನರಹಿತ ಅರ್ಜಿದಾರರಿಗೆ ಮನೆ ನಿವೇಶನ ನೀಡಲು ಒತ್ತಾಯಿಸಿ ಸಿಪಿಐಎಂ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ನಗರಸಭೆ ಎದುರು ನಡೆದ ಉಳ್ಳಾಲ ಪುರಸಭೆ ಚಲೋ ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ಪ್ರದೇಶದಲ್ಲಿ ಜಾಗವನ್ನು ಹಣವಂತರಿಗೆ ನೀಡಲಾಗಿದೆ. ಸಮುದ್ರ ತೀರದ ಜಾಗದಲ್ಲಿ ಸಿಆರ್ ಝೆಡ್ ಕಾನೂನು ಹೇರಿ ಬಡ ವರ್ಗದವರಿಗೆ ಜೀವನ ನಡೆಸಲು ಅಸಾಧ್ಯವಾಗಿದೆ. ದುಬಾರಿ ಬೆಲೆ ಯುಗದಲ್ಲಿ ಜೀವನ ನಡೆಸಲು ಕಷ್ಟಕರವಾಗಿದೆ. ಇನ್ನು ಮನೆ ಖರೀದಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಕೂಡಲೇ ಸರಕಾರ ಎಚ್ಚೆತ್ತು ಬಂದ ಅರ್ಜಿಗಳನ್ನು ತಿರಸ್ಕರಿಸದೆ ನಿವೇಶನ ಒದಗಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟಗಳು ಮುಂದುವರಿಯಲಿದೆ ಎಂದು ಎಚ್ಚರಿಸಿದರು.…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಸ್ವ ಉದ್ಯೋಗಕ್ಕಾಗಿ ಸುಮಾರು 70 ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮವು ಸೋಮವಾರ ಪಜೀರು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಮುಡಿಪು ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು, ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬೀ ಜೀವನ ನಡೆಸಲು ಇಂದು ಸರಕಾರದಿಂದ ಹಲವಾರು ಯೋಜನೆಗಳಿದ್ದು ಇದನ್ನು ಜನ ಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳಿರುತ್ತದೆ. ಇಂತಹ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಮಾಡಬಕಾಗಿದೆ. ಇಂತಹ ಸಾಧನೆಯಿಂದ ಅಭಿವೃದ್ದಿ ಪರ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಹೇಳಿದರು. ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಂ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿ ಉತ್ತಮ ಮೌಲ್ಯಯುತ ಜೀವನವನ್ನು ನಾವು ಸಾಧಿಸಬೇಕು. ಇಂತಹ ಸೌಲಭ್ಯಗಳ ದುರುಪಯೋಗವಾಗದೆ ಅದರ ಸಧ್ವಿನಿಯೋಗ ಆದರೆ ಮಾತ್ರ ಉತ್ತಮ ಫಲವನ್ನು ನಾವು ಪಡೆಯಲು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿಗಾಗಿ ನಡೆಯುವ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಪ್ರಕ್ರಿಯೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡಿದ್ದು, ಆ.1 ರವರೆಗೆ ನಡೆಯಲಿದೆ. ಸೋಮವಾರ ವಿಜ್ಞಾನ ನಿಕಾಯದ ರಸಾಯನ ಶಾಸ್ತ್ರ, ಕೈಗಾರಿಕ ರಸಾಯನ ಶಾಸ್ತ್ರ, ಸಾವಯವ ರಸಾಯನ ಶಾಸ್ತ್ರ, ಅನ್ವಯಿಕ ರಸಾಯನ ಶಾಸ್ತ್ರ, ಬೌತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಇಲೆಕ್ಟ್ರಾನಿಕ್ಸ್ ವಿಭಾಗ, ಸಾಗರ ಭೂವಿಜ್ಞಾನ ವಿಭಾಗ,ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಪ್ರಾಣಿಶಾಸ್ತ್ರ, ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಸೂಕ್ಷಾಣು ಜೀವಶಾಸ್ತ್ರ, ಜೀವ ರಸಾಯನಶಾಸ್ತ್ರ, ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವಸ್ತು ವಿಜ್ಞಾನ, ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗಗಳಿಗೆ ವಿದ್ಯಾರ್ಥಿಗಳ ಕೌನ್ಸಲಿಂಗ್ ನಡೆಯಿತು. ಸೋಮವಾರ ಮತ್ತು ಮಂಗಳವಾರ ವಿಜ್ಞಾನ ನಿಕಾಯದ ವಿವಿಧ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿ ನಡೆಯಲಿದ್ದು ಆರಂಭದ ದಿನದಂದು ಮೆರಿಟ್ ಸೀಟ್ನಲ್ಲಿ ಆಯ್ಕೆಯಾದವರ ಕೌನ್ಸ್ಲಿಂಗ್ ನಡೆಯಿತು. ಮಂಗಳವಾರ ವಿಜ್ಞಾನ ವಿಭಾಗದಲ್ಲಿ ಸ್ವ ವಿತ್ತೀಯ ಕೋಟ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಬಂಟ ಸಮಾಜದವರು ಯಾವುದೇ ಕೆಲಸವನ್ನು ಕೊಟ್ಟರೆ ಆ ಕೆಲಸವನ್ನು ನಿಯತ್ತಿನಿಂದ ನಿಸ್ವಾರ್ಥದಿಂದ ಹಾಗೂ ಬದ್ಧತೆಯಿಂದ ಮಾಡುವುದರಿಂದಾಗಿ ಬಂಟರು ಪ್ರತಿ ಕ್ಷೇತ್ರದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬಂಟರ ಮಾತೃಸಂಘದ ಮಾಜಿ ಉಪಾಧ್ಯಕ್ಷ ಕೆ. ಬಲರಾಜ್ ರೈ ಅಭಿಪ್ರಾಯಪಟ್ಟರು. ಅವರು ಬಂಟರ ಸಂಘ ಉಳ್ಳಾಲ ವಲಯ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸಿರಿ ಸ್ವ ಸಹಾಯ ಗುಂಪುಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತೊಕ್ಕೊಟ್ಟು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಭಾನುವಾರ ನಡೆದ ವಲಯ ಸಂಘದ ಮಹಾಸಭೆಯ ಬಹಿರಂಗ ಅಧಿವೇಶನ, ಆಟಿದ ಪೆÇರ್ಲು-2015 ಹಾಗೂ ಪಂಚಾಯತ್ ಚುನಾವಣೆಯಲ್ಲಿ ವಿಜಯಿಗಳಾದ ಸಮಾಜ ಬಾಂಧವರಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟರು ದೈವ ದೇವರ ನಡೆ ನುಡಿಗಳಿಗೆ ಅಪಾರ ಗೌರವ ಕೊಡುತ್ತಾ ಪಾಲಿಸಿಕೊಂಡು ಬಂದವರು. ಕೆಲವೊಂದು ಕಟ್ಟು ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಬಂಟರು ವಿನಯ ಹಾಗೂ ಸಮಾಜಕ್ಕೆ ಮಾದರಿಯಾಗಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಫ್ಯಾಶನ್ ಯುಗದಲ್ಲಿ ಸಂಸ್ಕøತಿಯನ್ನು ಪರಿಚಯಿಸುವ ಪ್ರಯತ್ನ ಮಾಡಿದ ಟೈಲರ್ ಎಸೋಸಿಯೇಶನ್ ನಡೆಸಿರುವುದು ಶ್ಲಾಘನೀಯ ಎಂದು ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಸೋಮೇಶ್ವರ ವಲಯ ಸಮಿತಿ ಇದರ ವತಿಯಿಂದ ತೊಕ್ಕೊಟ್ಟು ಒಳಪೇಟೆ ಕ್ಲಿಕ್ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ದಿನ ಮತ್ತು ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವೈಭವ ಮತ್ತು ಆಡಂಭರವಾಗಿ ಆಷಾಡ ಮಾಸಗಳನ್ನು ಪರಿಚಯಿಸುವುದು ಸಂಸ್ಕøತಿಯಲ್ಲ. ಆ ಸಮಯದ ಹಸಿವು ಈಗಿನ ಕಾಲದಲಿಲ್ಲ. ಔಷದಯುಕ್ತ ಆಹಾರ ಸೇವನೆಗೆ ಕಾರ್ಯಕ್ರಮ ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ನ ರಾಜ್ಯಾಧ್ಯಕ್ಷ ಬಿ. ವಸಂತ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ನ ವಲಯಾಧ್ಯಕ್ಷ ಬಾಲಕೃಷ್ಣ ಪೂಜಾರಿ ಕುಂಪಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸದಸ್ಯ ಪ್ರವೀಣ್ ಸಾಲ್ಯಾನ್, ಕರ್ನಾಟಕ ಸ್ಟೇಟ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಯುವಜನತೆ ಆಧುನಿಕ ಅಬ್ಬರಕ್ಕೆ ಮಾರುಹೋಗಿ ವಿದೇಶಿ ಆಹಾರ ಪದ್ಧತಿಯಿಂದ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ತುಳುನಾಡಿನ ಆಹಾರ ಪದ್ಧತಿ, ಸಂಸ್ಕಾರದ ಬಗ್ಗೆ ವಿವಿಧ ಹಬ್ಬಗಳ ಆಚರಣೆ ಮೂಲಕ ಅರಿವು ಮೂಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಆವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ, ದ.ಕ.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವಠಾರದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಮತ್ತು ಆಟಿಡೊಂಜಿ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟಕರ ದಿನವಾಗಿತ್ತು ಆದರೆ ಇಂದು ಆಟಿ ಆಚರಣೆ ಗಮನಿಸಿದಾಗ ಸುಖಕರ ದಿನದಂತೆ ಭಾಸವಾಗುತ್ತಿದೆ. ತುಳುನಾಡಿನ ಜನಪ್ರಿಯ ಕಾರ್ಯಕ್ರಮಗಳನ್ನು ಆಯಾಯ ಕಾಲಕ್ಕೆ ಅನುಗುಣವಾಗಿ ಪರಿಚಯಿಸುವುದರಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಂಡಿತ್ಹೌಸ್ : ಇಲ್ಲಿನ ನಗರಸಭಾ ವ್ಯಾಪ್ತಿಯ ಪಂಡಿತ್ಹೌಸ್ ಬಳಿಯ ರಾಜರಾಜೇಶ್ವರೀ ಒಂದನೇ ಅಡ್ಡ ರಸ್ತೆಗೆ ಮಂಜೂರುಗೊಂಡ ಅನುದಾನದಲ್ಲಿ ಪಕ್ಕದ ಸಣ್ಣ ರಸ್ತೆಗೆ ಕಾಂಕ್ರೀಟಿಕರಣಗೊಳಿಸಿರುವ ಪ್ರಸಂಗ ಬೆಳಕಿಗೆ ಬಂದಿದ್ದು, ಮತಬ್ಯಾಂಕಿನ ಮತ್ತು ಅನುದಾನದ ಹಣವನ್ನು ತಿನ್ನುವ ಉದ್ದೇಶದಿಂದ ಈ ರೀತಿಯ ತಾರತಮ್ಯ ಎಸಗಲಾಗಿದೆ ಅನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ರಸ್ತೆಗೊಂದು ಕಾಂಕ್ರಿಟೀಕರಣ ನಡೆಸಲು ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದ ಇಲ್ಲಿನ ಜನರು, ಹಲವು ವರ್ಷದ ಪರಿಶ್ರಮದ ಫಲವಾಗಿ ಅಂದಿನ ಉಳ್ಳಾಲ ಪುರಸಭೆಯ ಯೋಜನೆಯನ್ವಯ 5 ಲಕ್ಷ ರೂ. ಕಾಂಕ್ರಟೀಕರಣಕ್ಕೆ ಮಂಜೂರಾಗಿತ್ತು. ಈ ವಿಚಾರ ಉಳ್ಳಾಲ ನಗರಸಭೆಯಿಂದ ನೀಡಲಾದ ಟೆಂಡರ್ ಪ್ರಕಟಣೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಈ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮಾತ್ರ ನಡೆದಿದ್ದು, ಕಾಂಕ್ರಟೀಕರಣ ನಡೆದದ್ದು, ಪಕ್ಕದ ಸಣ್ಣ ರಸ್ತೆಗೆ ಎನ್ನುವ ವಿಚಾರ ಇಲ್ಲಿನ ನಿವಾಸಿಗಳಿಗೆ ತಡವಾಗಿ ತಿಳಿದಿದ್ದು, ಅಷ್ಟೊತ್ತಿಗೆ ಬೇರೆ ರಸ್ತೆಯ ಕಾಂಕ್ರಿಟೀಕರಣ ನಡೆದಿತ್ತು. ಈ ರಸ್ತೆಗೆ ಕಾಂಕ್ರಟೀಕರಣ ಮಾಡಿದರೆ ಹೆಚ್ಚಿನ ಲಾಭ ಮಾಡಲು ಸಾಧ್ಯವಿಲ್ಲ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಚ್ಚಿಲದ ನ್ಯೂ ಉಚ್ಚಿಲ ಸಮುದ್ರ ತೀರದಲ್ಲಿ ಕಡಲ್ಕೊರೆತ ಮತ್ತೆ ಆರಂಭಗೊಂಡು ಎರಡು ಮನೆಗಳ ಜಾಗ ಹಾಗೂ ತೆಂಗಿನಮರಗಳು ಸಮುದ್ರಪಾಲಾಗಿವೆ. ನ್ಯೂಉಚ್ಚಿಲ ಎಂಬಲ್ಲಿರುವ ವಸಂತ ಮತ್ತು ಯಮುನಾ ಎಂಬವರಿಗೆ ಸೇರಿದ ಜಾಗ ಹಾಗೂ 10 ರಷ್ಟು ತೆಂಗಿನ ಮರಗಳು ಸಮುದ್ರ ಕೊರೆತಕ್ಕೆ ಕೊಚ್ಚಿ ಹೋಗಿವೆ. ಗುರುವಾರ ತಡರಾತ್ರಿಯಿಂದ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡು ವಸಂತ್ ಅವರಿಗೆ ಸೇರಿದ ಆರು ಮತ್ತು ಯಮುನಾ ಎಂಬವರಿಗೆ ಸೇರಿದ 4 ರಷ್ಟು ತೆಂಗಿನ ಮರಗಳು ನೀರಿನಲ್ಲಿ ಹೋಗಿವೆ. ಜನಪ್ರತಿನಿಧಿಗಳು ಭೇಟಿಗೆ ಮಾತ್ರ ಸೀಮಿತ : 2013 ರಲ್ಲಿ ನ್ಯೂಉಚ್ಚಿಲ ಮತ್ತು ಉಚ್ಚಿಲ ಸಮುದ್ರ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಈ ವೇಳೆ ಸಮುದ್ರ ತೀರದಲ್ಲಿದ್ದ ರೆಸಾರ್ಟ್ ಹಾಗೂ ಹಲವು ಮನೆಗಳು ಸಮುದ್ರ ಪಾಲಾಗಿತ್ತು. ಆದರೆ ಜನಪ್ರತಿನಿಧಿಗಳು ಭೇಟಿ ನೀಡದೇ ಇದ್ದ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಸಂಸದ, ಜಿಲ್ಲಾ ಉಸ್ತುವಾರಿ, ಶಾಸಕರು ಭೇಟಿ ನೀಡಿ ತಾತ್ಕಾಲಿಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮೊಗವೀರಪಟ್ನ: ಬೃಹತ್ ಗಾತ್ರದ ಸತ್ತು ಬಿದ್ದ ತಿಮಿಂಗಿಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ಶುಕ್ರವಾರ ಮುಂಜಾನೆ ವೇಳೆ ಪತ್ತೆಯಾಗಿದೆ. 15 ಅಡಿ ಉದ್ದವಿರುವ ತಿಮಿಂಗಿಲ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ನಸುಕಿನ ಜಾವ ನಾಯಿ ಬೊಗಳುವುದನ್ನು ಕಂಡು ಸ್ಥಳದಲ್ಲೇ ಇರುವ ಜೀವರಕ್ಷಕ ಈಜುಗಾರರ ಸಂಘದ ಪ್ರವೀಣ್ ಕೋಟ್ಯಾನ್ ಅವರು ಗಮನಿಸಿದಾಗ ಸಮುದ್ರದ ದಡದಲ್ಲಿ ತಿಮಿಂಗಲ ಪತ್ತೆಯಾಗಿದೆ. ಈ ಬಗ್ಗೆ ಉಳ್ಳಾಲ ನಗರಸಭೆ, ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಉಳ್ಳಾಲ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದರು. ಅಲ್ಲದೆ ಸಾರ್ವಜನಿಕರು ತಿಮಿಂಗಿಲ ನೋಡಲು ಜಮಾಯಿಸಿದ್ದರಿಂದಾಗಿ ಸ್ಥಳದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣ ಆಯಿತು. ಉಳ್ಳಾಲ ನಗರಸಭೆ ವತಿಯಿಂದ ಜೆಸಿಬಿ ಮೂಲಕ ಮರಳು ಅಗೆದು ಅಲ್ಲೇ ಹೂತು ಹಾಕಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ ಇದೇ ಗಾತ್ರದ ತಿಮಿಂಗಿಲವೊಂದು ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಅದನ್ನು ಜೀವರಕ್ಷಕ ಸಂಘದ ಸದಸ್ಯರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಇಲ್ಲಿನ ನಗರಸಭಾ ವ್ಯಾಪ್ತಿಗೆ ಒಳಪಟ್ಟ ಸೇವಂತಿಗುಡ್ಡೆ ರಾಜೇಶ್ ಪಾಯಸ್ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಘಟನೆ ವೇಳೆ ಮನೆಯೊಳಗೆ ರಾಜೇಶ್, ಪತ್ನಿ ಪೆಟ್ರೋಲಿಯಾ ಹಾಗೂ ಎರಡು ವರ್ಷದ ಮಗುವಿದ್ದು, ಸದ್ದು ಕೇಳಿ ಹೊರಬಂದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ರಾಜೇಶ್ ಅವರಿಗೆ ಘಟನೆಯಿಂದ ಲಕ್ಷಾಂತರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಗ್ರಾಮಕರಣಿಕ ಮನು, ಪೆರ್ಮನ್ನೂರು ಸಂತ ಸಬೆಸ್ತಿಯನ್ನರ ಚರ್ಚಿನ ಧರ್ಮಗುರು ರೂಪೇಶ್ ಮಾಡ್ತಾ, ನಗರಸಭೆ ಸದಸ್ಯ ಉಸ್ಮಾನ್ ಕಲ್ಲಾಪು ಭೇಟಿ ನೀಡಿ ಪರಿಹಾರ ಒದಗಿಸುವ ಬಗ್ಗೆ ವಿಶ್ವಾಸ ನೀಡಿದರು.

