Author: UllalaVani

Kannada News From Coastal Karnataka

UN NETWORKS ಹರೇಕಳ: ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ದ.ಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ವಿಷಯ ಬಗ್ಗೆ ಮಾಹಿತಿ ಕಾರ್ಯಾಗಾರವು ನಡೆಯಿತು. ಮಾಹಿತಿಯನ್ನು ನೀಡಿದ ಇಲಾಖೆಯ ಜಿಲ್ಲಾ ಸಲಹೆಗಾರರಾದ ಡಾ.ಪ್ರೀತ ಇವರು, ದೇಶದಲ್ಲಿ ಶೇಕಡ 14ರಷ್ಟು ಯುವಕರು ಅಂದರೆ 13 ರಿಂದ 15 ವರ್ಷದೊಳಗಿನವರು ಯಾವುದಾದರೊಂದು ರೀತಿಯ ತಂಬಾಕು ಉತ್ಪನ್ನಗಳ ಸೇವನೆಯನ್ನು ಮಾಡುತ್ತಾರೆ. ಇಲ್ಲಿ ತುಂಬಾ ಮಂದಿ ಯುವಕ, ಯುವತಿಯರು ತಮ್ಮ ಮನೆಯಲ್ಲೇ ಧೂಮಪಾನ ಮಾಡುವವರನ್ನು ನೋಡಿ ಅನುಕರಣೆ ಮಾಡುತ್ತಾರೆ. ಹಾಗಾಗಿ ಮೊದಲು ಮನೆಯನ್ನು ತಂಬಾಕು ಮುಕ್ತಗೊಳಿಸಲು ಪ್ರಯತ್ನಿಸಬೇಕು ಎಂದರು. ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯುವರು ವಹಿಸಿ ಯಾವುದೇ ರೋಗ ಬಂದ ಮೇಲೆ ಆಸ್ಪತ್ರೆಗೆ ಹೋಗುವುದಕ್ಕಿಂತ ರೋಗಗಳು ಬರುವ ಮುಂಚೆಯೇ ಜಾಗೃತೆ ವಹಿಸುವುದು ಒಳಿತು. ಉತ್ತಮ ಆರೋಗ್ಯದಿಂದ ಮಾತ್ರ…

Read More

UN NETWORKS ಉಳ್ಳಾಲ: ಮಹಿಳೆಯೊಬ್ಬರಿಗೆ ಜೀವಬೆದರಿಕೆಯೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದಳದ ಪೊಲೀಸರು ಕುಖ್ಯಾತ ಮೂರು ಕೊಲೆ ಪ್ರಕರಣಗಳ ಆರೋಪಿ ಉಪ್ಪಳ ನಿವಾಸಿ ಮಹಮ್ಮದ್ ರಫೀಕ್ ಯಾನೆ ನಪ್ಪಾಟೆ ರಫೀಕ್ (29)ಎಂಬಾತನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೆ.ಸಿ.ರೋಡು ಸಮೀಪ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ. ಕುತ್ತಾರು ಸಿಲಿಕೋನಿಯ ಅಪಾರ್ಟ್‍ಮೆಂಟಿನಲ್ಲಿದ್ದ ಮಹಿಳೆಯೊಬ್ಬರ ಮನೆಗೆ ತನ್ನ ಸಹಚರರೊಂದಿಗೆ ನುಗ್ಗಿದ್ದ ರಫೀಕ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಪ್ಪಾಟೆ ರಫೀಕ್ ಕುಖ್ಯಾತ ರೌಡಿಯಾಗಿದ್ದು , ಈತನ ವಿರುದ್ಧ ಮೂರು ಕೊಲೆ ಮತ್ತು ಕೊಲೆಯತ್ನ, ಕಿಡ್ನಾಪ್ ಸೇರಿದಂತೆ 13 ಪ್ರಕರಣಗಳಿವೆ. ಈತನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದನು.

Read More

UN NETWORKS ದೇರಳಕಟ್ಟೆ : ಎಸ್.ಎಸ್.ಎಲ್.ಸಿ ಶಿಕ್ಷಣ ಎಂಬುದು ಮಾನವನ ಜೀವನದ ಯಶ್ವಸಿನ ಅತೀ ಪ್ರಾಮುಖ್ಯ ಹಂತ ಶಿಕ್ಷಣವು ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿ ನಿರೂಪಿಸುತ್ತದೆ. ಇಂದಿನ ಔಪಚಾರಿಕ ಶಿಕ್ಷಣದಲ್ಲಿ ,ಪ್ರತಿ ಮನುಷ್ಯನು ಕನಿಷ್ಠ ಪ್ರೌಢ ಶಿಕ್ಷಣವನ್ನದಾರು ಪಡೆಯಲೇಬೇಕು ಪ್ರೌಢ ಶಿಕ್ಷಣದ ಹಂತ ಎಸ್.ಎಸ್.ಎಲ್.ಸಿ ಆಗಿರುತ್ತದೆ . ಎಸ್.ಎಸ್.ಎಲ್.ಸಿ ವರೇಗಿನ ಶಿಕ್ಷಣ ಮತ್ತು ಎಸ್.ಎಸ್.ಎಲ್.ಸಿ ತೇರ್ಗಡೆ ಮನುಷ್ಯ ಜೀವನದ ಅತೀ ಪ್ರಮುಖ್ಯವಾದ ಹಂತ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾಬ್ ಶಾಹುಲ್ ಹಮೀದ್ ಹೇಳಿದರು .ಅವರು ಇತ್ತೀಚೆಗೆ ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯವು ದೇರಳಕಟ್ಟೆಯ ಕಣಚೂರು ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಗೆಲುವಿಗೊಂದು ಸುಗಮ ದಾರಿ ಎಂಬ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತ ಶಿಕ್ಷಣವು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ಸಮಾಜದಲ್ಲಿ ನಮಗೆ ಗೌರವ ಘನತೆಯನ್ನು ತಂದು…

Read More

UN NETWORKS ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿಯ ಜಾತ್ಯತೀತ ದೇಗುಲಕ್ಕೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಬಂದಿದ್ದು ನಾರಾಯಣ ಗುರುಗಳಿಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. ಅವರು ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಮಂಗಳವಾರ ನೆಹರೂ ಮೈದಾನದ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಬಿಲ್ಲವ ಯುವಕರ ಸಾವಿಗೆ ಹಾಗೂ ಅವರು ಜೈಲು ಸೇರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾಗಿರುವ ಪ್ರಭಾಕರ ಭಟ್ ಜತೆ ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕೈ ಜೋಡಿಸಿದ್ದಾರೆ. ಇವರು ಸ್ವಾರ್ಥ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಸೈದ್ಧಾಂತಿಕವಾಗಿ ಅವರು ಜತೆ ರಾಜಿ ಆಗಿದ್ದಾರೆ ಎಂದರು. ಪ್ರಭಾಕರ ಭಟ್ ವಿರುದ್ಧ ಮಾತನಾಡಲು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಿಂದೆಟು ಹಾಕುತ್ತಾರೆ. ಯಾಕೆ ಎಂಬುದು ಗೊತ್ತಿಲ್ಲ. ಭಟ್ ಏನು ಪ್ರಧಾನಿಯಾ? ರಾಷ್ಟ್ರಪತಿಯಾ? ಎಂದ ಅವರು ಪ್ರಭಾಕರ ಭಟ್ ಯಾರು…

Read More

UN NETWORKS ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟ (ರಿ) ಸಾದರ ಪಡಿಸುವ “ವಿಕಾಶ್ cpl-season-2 ಫೆಬ್ರವರಿ 2.3.ಮತ್ತು 4 2018ರಂದು ನಡೆಯಲಿದೆ. ಇದರ ಪ್ರಚಾರ ರ್ಯಾಲಿ ಕಾರ್ಯಕ್ರಮ ನೆಹರು ಮೈದಾನದಿಂದ ಹೊರಟು ಜ್ಯೋತಿ. .ಕದ್ರಿ. . ಪಾರ್ಕ್ನ. ಲಾಲ್ ಭಾಗ್ ಸಿಟಿ ಸೆಂಟರ್ ಮಾರ್ಗವಾಗಿ. ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಯನ್ನು ಜಿತೇಂದ್ರ ಕೊಟ್ಟಾರಿ ಮತ್ತು ಕಿಶೋರ್ ಡಿ ಶೆಟ್ಟಿ ಯವರು ನೆರವೇರಿಸಿದರು ಕಾರ್ಯಕ್ರಮದಲ್ಲಿ 8ತಂಡದ ಓಪನ್ ಜೀಪ್ ನಲ್ಲಿ ತಂಡದ ಸ್ಟಾರ್ ಪ್ಲೇಯರ್ಸ್ ಗಳು ಹಾಗೂ ಕಲಾವಿದರಿಂದ ಅಬ್ಬರದ ಪ್ರಚಾರ ನಡೆಯಿತು ಕಾರ್ಯಕ್ರಮದಲ್ಲಿ ಒಕ್ಕೂಟದ ಅದ್ಯಕ್ಷ ಪಮ್ಮಿ ಕೊಡಿಯಲಬೈಲ್ .ಕಾನೂನು ಸಲಹೆಗಾರ ಮೋಹನ ದಾಸ್ ರೈ ವಕೀಲರು, ಮಾಜಿ ಅದ್ಯಕ್ಷರಾದ ಅಶ್ವಿನಿ ಜೆ ಕೋಟ್ಯಾನ್. ಪ್ರದಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್. ಸಂಘಟನಾ ಕಾರ್ಯದರ್ಶಿ ಅಸ್ಗರ್ ಮುಡಿಪು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕಂಕನಾಡಿ ಕ್ರೀಡಾಕಾರ್ಯದರ್ಶಿಗಳಾದ ಅರುಣ್ ಶೆಟ್ಟಿ ಕಡಂದಳೆ . ರಾಕೇಶ್ ದಿಲ್ ಶೆ ಮತ್ತು ಪವನ್…

Read More

UN NETWORKS ಉಳ್ಳಾಲ: ರಾಜಕೀಯ, ಧಾರ್ಮಿಕ ವಿಚಾರಗಳಿಗೆ ಮಡಿದವರ ನಡುವೆ ದೇಶಕ್ಕಾಗಿ ಪ್ರಾಣ ಅರ್ಪಿಸಿದವರು ಶ್ರೇಷ್ಟರಾಗಿದ್ದು, ಅವರ ಹೆಸರಿನಲ್ಲಿ ಆಚರಿಸುವ ಹುತಾತ್ಮ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಆಚರಣೆಗಳಿಂದ ಯುವಸಮುದಾಯ ಸೈನ್ಯಕ್ಕೆ ಸೇರಲು ಸ್ಫೂರ್ತಿದಾಯಕ ಬೆಳವಣಿಗೆಯಾಗಲಿ ಎಂದು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ)ಯ ಉಪಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ. ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸೆಮಿನಾಡರ್ ಹಾಲ್‍ನಲ್ಲಿ ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ಎನ್‍ಎಸ್‍ಎಎಸ್ ಘಟಕದ ಆಶ್ರಯದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು. ಸೈನ್ಯದಲ್ಲಿರುವವರ ಮನೆಮಂದಿಗೆ ಬರುವ ಒಂದು ದೂರವಾಣಿ ಕರೆಯೂ ಭೀತಿಯನ್ನು ಹುಟ್ಟಿಸುವಂತಹದ್ದಾಗಿರುತ್ತದೆ. ಹಿಂದೆ ದಕ್ಷಿಣ ಭಾರತದ ಮದ್ರಾಸ್ ರೆಜಿಮೆಂಟ್ ಭಾರತೀಯ ಸೇನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಂಡಿತ್ತು. ಈ ಮುಖೇನ ದಕ್ಷಿಣ ಭಾರತದ ಮಂದಿಯ ದೇಶಕ್ಕಾಗಿ ನಡೆಸಿದ ಸೇವೆ ನಗಣ್ಯ ಎಂದ ಅವರು ನರ್ಸಿಂಗ್ ಪದವಿ ಪಡೆದವರಿಗೆ ಸೈನ್ಯದಲ್ಲಿ ಸೇವೆ ನಡೆಸಲು ಉತ್ತಮ ಅವಕಾಶಗಳಿದ್ದು, ಭವಿಷ್ಯದಲ್ಲಿ…

Read More

UN NETWORKS ತಲಪಾಡಿ: ತಲಪಾಡಿ ಟೋಲ್ ಗೇಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಲಪಾಡಿ ಗ್ರಾಮಸ್ಥರು, ಟೋಲ್ ಸಂಸ್ಥೆ ಅಧಿಕಾರಿಯನ್ನು ತರಾಟೆಗೆ ತೆಗೆದು ಸ್ಥಳೀಯ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ, ಈ ಬಗ್ಗೆ ಗುರುತು ಚೀಟಿ ತೋರಿಸಿದರೂ ಸಿಬ್ಬಂದಿ ನೂರೆಂಟ್ ದಾಖಲೆ ಕೇಳುವುದು, ವಿಚಿತ್ರ ರೀತಿಯಲ್ಲಿ ನೋಡುವುದು ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ ಘಟನೆ ತಲಪಾಡಿ ಗ್ರಾಮಸಭೆಯಲ್ಲಿ ನಡೆಯಿತು. ಮಂಗಳವಾರ ತಲಪಾಡಿ ಶಾಲಾ ಮೈದಾನದಲ್ಲಿ ಜರಗಿದ 2018 ನೇ ಸಾಲಿನ ಎರಡನೇ ಸುತ್ತಿನ ತಲಪಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಟೋಲ್ ಸುಂಕದಲ್ಲಿ ರಿಯಾಯಿತಿ ನೀಡಬೇಕೆನ್ನುವು ನಿಯಮ ಹೆದ್ದಾರಿ ಪ್ರಾಧಿಕಾರ ಮಾಡಿಲ್ಲ, ಅಲ್ಲದೆ ನಿಮಗೆ ಉಚಿತವಾಗಿ ಬಿಡಬೇಕು ಎಂದೇನೂ ಇಲ್ಲ ಎಂದು ಶಿವಪ್ರಸಾದ್ ಹೇಳಿದ್ದು ಗ್ರಾಮಸ್ಥರನ್ನು ಕೆರಳಿಸಿತು. ನಮ್ಮ ಮನೆಗೇ ನಾವು ಸುಂಕ ಕಟ್ಟಬೇಕೇ, ನಾವೇನು ನಿಮ್ಮಲ್ಲಿ ಭಿಕ್ಷೆ ಬೇಡುತ್ತಿಲ್ಲ. ನಿಮ್ಮ ಔದಾರ್ಯವೂ ನಮಗೆ ಬೇಡ. ಸುರತ್ಕಲ್‍ನಲ್ಲಿ ಕೆ.ಎ-19 ಇರುವ ಎಲ್ಲಾ ವಾಹನಗಳಿಗೆ ಟೋಲ್ ಸುಂಕ ರಿಯಾಯಿತಿ ಇದೆ. ಇಲ್ಲೂ…

Read More

UN NETWORKS ಮಂಜನಾಡಿ : ಮಂಜನಾಡಿ ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ, ಎಸ್‍ವೈಎಸ್, ಎಸ್ಸೆಸ್ಸೆಫ್ ಹಾಗೂ ಟಿ.ಐ.ವೈ.ಎ ವತಿಯಿಂದ ಜ.31ರಿಂದ ಫೆ.4ರವರೆಗೆ ಪ್ರತೀದಿನ ಸಂಜೆ 7ರ ಬಳಿಕ ಕಲ್ಕಟ್ಟ ಮಸೀದಿಯಲ್ಲಿ ದ್ಸಿಕ್ರ್, ಜಲಾಲಿಯ್ಯ, ಸ್ವಲಾತ್ ಮಜ್ಲಿಸ್‍ಗಳ ವಾರ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಖತೀಬ್ ಇಝ್ಝುದ್ದೀನ್ ಅಹ್ಸನಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಮಾಧ್ಯಮ ಕಾರ್ಯದರ್ಶಿ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸೋಮವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜ.31ರಂದು ಅಲ್ ಮದೀನ ಸಂಸ್ಥೆಯ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ದುಆಗೈಯಲಿದ್ದು, ಮಂಜನಾಡಿ ಕೇಂದ್ರ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಬಳಿಕ ಬುರ್ದಾ ಆಲಾಪನೆ ನಡೆಯಲಿದೆ. ಫೆ.1ರಂದು ಅಸ್ಸೈಯದ್ ಅಶ್ರಫ್ ತಂಙಳ್ ಆದೂರು ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್ ನಡೆಯಲಿದ್ದು, ರಾಫಿ ಅಹ್ಸನಿ ಕಾಂತಪುರಂ ಪ್ರವಚನ ನೀಡುವರು. ಫೆ.2ರಂದು ಅಸ್ಸೈಯದ್ ಶಿಹಾಬುದ್ದೀನ್ ಕಿಲ್ಲೂರು ತಂಙಳ್ ಉಸ್ಥಿತಿಯಲ್ಲಿ ಹಂಝ ಮಿಸ್ಬಾಹಿ ಓಟಪದವು ಪ್ರವಚನ ನೀಡುವರು. ಫೆ.3ರಂದು ಅಸ್ಸೈಯದ್ ಕೆ.ಎಸ್. ಜಾಫರ್ ಸ್ವಾದಿಕ್…

Read More

UN NETWORKS ಕೊಣಾಜೆ: ಸಪ್ತಸ್ವರ ಕಲಾ ತಂಡ(ರಿ) ಕೊಣಾಜೆ ಇದರ 25ನೇ gಜತ ವರ್ಷಾಚರಣೆಯ ಪ್ರಯುಕ್ತ ಕೊಣಾಜೆ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಹಾಗೂ ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಪಾತ್ರೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಪ್ತಸ್ವರ ಕಲಾ ತಂಡದ ಅಧ್ಯಕ್ಷರಾದ ಸುರೇಂದ್ರ ಬೊಳ್ಳೆಕುಮೇರು, ಉಪಾಧ್ಯಕ್ಷರಾದ ಮಾಧವ ಗಟ್ಟಿ. ಕಾರ್ಯದರ್ಶಿ ಗೋಪಾಲ, ಹಿರಿಯ ಸದಸ್ಯರಾದ ನಾರಾಯಣ ಮೂರ್ತಿ, ಅಂಗನವಾಡಿ ಶಿಕ್ಷಕಿ ಉಷಾ, ಸಪ್ತಸ್ವರ ಕಲಾತಂಡದ ವರದರಾಜ್, ಗಂಗಾಧರ್ ದೇವಿನಗರ, ಶೇಖರ ಕೊಪ್ಪಳ, ಪ್ರಶಾಂತ್ ಹಾಗೂ ಪಂಚಾಯಿತಿ ಸದಸ್ಯರಾದ ರಾಮಚಂದ್ರ ಎಂ. ಅವರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ಯಕ್ಷಗಾನವು ಒಂದು ತೂಕದ ಕಲೆ. ಹಾಗಾಗಿ ಈ ರಂಗಭೂಮಿಯಲ್ಲಿ ತೂಕದ ಬಣ್ಣಗಳನ್ನು, ವೇಷಭೂಷಣಗಳನ್ನು, ಮಾತುಗಳನ್ನು ಕಲಾವಿದರು ಪ್ರಸ್ತುತಪಡಿಸುತ್ತಾರೆ. ತೂಕ ಎಂಬುದು ವಿಶಿಷ್ಟವಾದ ಅರ್ಥವಿರುವ ಒಂದು ಪರಿಭಾಷೆ. ಯಕ್ಷಗಾನ ಹೊಂದಿರುವ ತೂಕದ ಪರಿಕರಗಳ ಸ್ವರೂಪ ಮತ್ತು ಬಳಕೆಯ ಕುರಿತಂತೆ ಪ್ರಕಟವಾಗಿರುವ ಸಾಹಿತ್ಯವನ್ನು ಶಿಬಿರಾರ್ಥಿಗಳು ಅಧ್ಯಯನ ಮಾಡಬೇಕು ಮತ್ತು ಕಲಿತ ಯಕ್ಷಗಾನವನ್ನು ಪ್ರದರ್ಶನ ಮಾಡುವಾಗ ಅದನ್ನು ಅನುಭವಿಸುವ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು. ಅವರು ಮಂಗಳೂರು ವಿವಿಯ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ `ಯಕ್ಷ ವರ್ಣ ವೈಭವ’ ಒಂದು ದಿನದ ಬಣ್ಣಗಾರಿಕೆ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು. ಯಕ್ಷಗಾನದಲ್ಲಿ ಬೆಳೆಸುವ ಬಣ್ಣಗಾರಿಕೆಗೂ ಪಾತ್ರಗಳ ಮನೋಧರ್ಮಕ್ಕೂ ನಿಕಟವಾದ…

Read More