UN NETWORKS ಉಳ್ಳಾಲ: ಉಳ್ಳಾಲ ವಿಧಾನ ಸಭೆಯ ಅಧಿವೇಶನದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಣಿ ಅಬ್ಬಕ್ಕಳನ್ನು ಅವಮಾನಿಸಿದಾಗ ಈ ಭಾಗದ ಶಾಸಕರು ಮೌನವಾಗಿದ್ದು ಅವರನ್ನು ಸಮರ್ಥಿಸಿ ಮಾತನಾಡಿದ್ದು ರಾಣಿ ಅಬ್ಬಕ್ಕಳಿಗೆ ಮಾತ್ರವಲ್ಲ, ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ ಆರೋಪಿಸಿದರು. ತೊಕ್ಕೊಟ್ಟಿನ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿರುವ ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣ ಮುಂದೆ ನಡೆದ ಘಟನೆಗಳು ಸಚಿವ ಖಾದರ್ ಅವರ ಅಸಲು ಬಂಡವಾಳ ತೆರೆದಿಟ್ಟದೆ. ಅಪರಾಧಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೂ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗದಂತೆ ಮಾಡಿದ ಕಾಣ ಕೈ ಯಾವುದೆಂದು ಸಚಿವರು ತಿಳಿಸಬೇಕು. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕಾದ ಸಚಿವರು ಆರೋಪಿಗಳ ಬೆನ್ನ ಹಿಂದೆ ನಿಂತಿರುವುದು ಹಾಗೂ ಬಳಿಕ ತನ್ನ ಪಕ್ಷದಲ್ಲಿ ಪದಾಧಿಕಾರಿ ಮಾಡಿರುವುದು ದುರಂತ. ಅಂತಹ ಶಾಸಕರಿಂದ ಮಹಿಳೆಯರ ರಕ್ಷಣೆ…
Author: UllalaVani
UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಚರಿತ್ರೆಯನ್ನೇ ನಿರ್ಮಿಸಬೇಕಿದೆ ಎಂದು ಕಾಸರಗೋಡು ಬಿಜೆಪಿ ಮುಖಂಡ ಸುರೇಂದ್ರನ್ ಹೇಳಿದ್ದಾರೆ. ಅವರು ಮುಡಿಪು ಗರಡಿಪಳ್ಳದಿಂದ , ಮುಡಿಪು ಮುಡಿಪಿನ್ನಾರ್ ದೈವಸ್ಥಾನದವರೆಗೆ ಜರಗಿದ ಬೃಹತ್ ರೋಡ್ ಶೋ ಮತ್ತು ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ಜರಗಿದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಪ್ರಧಾನಿಯವರು ಹೇಳಿದಂತೆ ಕಾಂಗ್ರೆಸ್ಸಿನ ಸ್ಥಿತಿ ಪಿಪಿಪಿ ಆಗಲಿದ್ದು, ಪಂಜಾಬ್ , ಪಾಂಡಿಚ್ಚೇರಿ, ಮತ್ತೊಂದು ರಾಜ್ಯದಲ್ಲಿ ಪಾರ್ಟಿ ಮಾತ್ರ ಉಳಿದಿದೆ.ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿರಮಾನಾಥ ರೈ ಅಲ್ಲ ಹಣಾನಾಥ ರೈ, ಇನ್ನೊಂದು ಖಾದರ್ ಅಲ್ಲ ಲೂಟಿ ಖಾದರ್ ಕಾಂಗ್ರೆಸ್ ಅಂದರೆ ಕರ್ನಾಟಕದ ಖಜಾನೆಯನ್ನೇ ಕೊಳ್ಳೆ ಹೊಡೆಯುವ ಪಾರ್ಟಿಯಾಗಿದೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿ ಸರೀತಾ ವೇಣುಗೋಪಾಲ ಅನ್ನುವ ಖ್ಯಾತಿ ಇದೆ.ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಅರೆಬ್ಬಿ ಕಡಲಲ್ಲಿ ಧೂಳೀಪಟವಾಗಲಿದೆ. ಮೇ.14 ರ ಬೆಳಿಗ್ಗೆ ಸೂರ್ಯೋದಯಕ್ಕೆ…
UN NETWORKS ಉಳ್ಳಾಲ: ಕಾಂಗ್ರೆಸ್ ಜಯಶಾಲಿಯಾದರೆ ಭಾರತ ವಿಜಯಿಯಾದಂತೆ , ರಾಜ್ಯದಲ್ಲಿ ಸಾಮರಸ್ಯ, ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಕರ್ನಾಟಕ ಚುನಾವಣೆಯಾಗಿದೆ ಎಂದು ಕಣ್ಣೂರು ಮಾಜಿ ಸಂಸದ ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಬೆಳ್ಮ ಪಂ. ವ್ಯಾಪ್ತಿಯ ದೇರಳಕಟ್ಟೆ ಭಾಗದಲ್ಲಿ ಮತಯಾಚನೆ ನಡೆಸಿ ಮಾತನಾಡಿದರು. ರಾಹುಲ್ ಗಾಂಧಿಯನ್ನು ಕರೆಯೋಣ ರಾಷ್ಟ್ರವನ್ನು ರಕ್ಷಿಸೋಣ ಅನ್ನುವ ಮಾತಿನೊಂದಿಗೆ ಮುಂಬರುವ ಚುನಾವಣೆಯನ್ನು ಎಲ್ಲರೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್ ಅವರನ್ನು ಬೆಂಬಲಿಸಬೇಕಿದೆ. ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಉಳ್ಳಾಲ ಭಾಗದಲ್ಲಿ ಬಹಳ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೋಟ್ಯಂತರ ಅನುದಾನದ ಆಸ್ಪತ್ರೆಯ ನಿರ್ಮಾಣವೂ ಕ್ಷೇತ್ರದಲ್ಲಿ ಆಗಿದೆ ಎಂದರು. ಈ ವೇಳೆ ಝುಲ್ಫೀಕಾರ್ ಆಲಿ, ಕಾಸರಗೋಡು ಜಿ.ಪಂ ಸದಸ್ಯ ಹರ್ಷಾದ್ ವರ್ಕಾಡಿ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸಿ.ಎಂ ರವೂಫ್, ಟಿ.ಎಸ್.ನಾಸೀರ್, ಬೆಳ್ಮ ಗ್ರಾ.ಪಂ ಸದಸ್ಯ ಯೂಸುಫ್ ಬಾವಾ , ಮುಖಂಡ ರವಿರಾಜ್ ಶೆಟ್ಟಿ,…
UN NETWORKS ಸಜಿಪನಡು: ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ಸಜಿಪ ರೇಂಜ್, ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಸಜಿಪ ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸಜಿಪನಡು ಪರಿಸರದಲ್ಲಿ ನಡೆಯಿತು. ಸಜಿಪ ರೇಂಜ್ಗೊಳಪಟ್ಟ ವಿವಿಧ ಮದ್ರಸಗಳ ಅಧ್ಯಾಪಕರು ಮತ್ತು ಟ್ಯಾಲೆಂಟ್ ಕಾರ್ಯಕರ್ತರು ಸಜಿಪನಡು ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿ ಹಾಗೂ 2 ಬಸ್ ನಿಲ್ದಾಣಗಳನ್ನು ಗುಡಿಸಿ ತೊಳೆದು ಶುಚಿಗೊಳಿಸಿದರು. ಮದ್ರಸ ಅಧ್ಯಾಪಕರ ಈ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ನ ಅಧ್ಯಕ್ಷ ಅಬ್ದುಲ್ ರಹ್ಮಾನ್ ಫೈಝಿ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಜೊತೆ ಕಾರ್ಯದರ್ಶಿ ಇಲ್ಯಾಸ್ ಅರ್ಶದಿ ಬೈಲಗುತ್ತು, ಪರೀಕ್ಷಾ ಬೋರ್ಡು ಚಯರ್ಮೆನ್ ಪಿ.ಎ.ಎಂ ಶರೀಫ್ ಮೌಲವಿ, ಸಜಿಪ ಖತೀಬ್ ಅಬ್ದುಲ್ಲಾ ಬಾಖವಿ, ಖಾಸಿಂ ದಾರಿಮಿ ಆಲಂಪಾಡಿ, ಮುನೀರ್ ಮೌಲವಿ ಕಜೆ, ಇಬ್ರಾಹಿಂ ಮುಸ್ಲಿಯಾರ್ ಆಲಂಪಾಡಿ, ಹಸೈನಾರ್ ಮುಸ್ಲಿಯಾರ್ ಸಜಿಪ, ಸಿದ್ದೀಖ್ ದಾರಿಮಿ ಅಸೈಗೋಳಿ,…
UN NETWORKS ಕೋಟೆಕಾರು: ಸಮಾಜ ಸಂಘಟನೆಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಯುವಜನರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಇಲ್ಲಿನ ಪ್ರಾಧ್ಯಾಪಕ ಉದಯ ಕುಮಾರ್ ಎಸ್. ಅಭಿಪ್ರಾಯಪಟ್ಟರು. ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ, ಕೋಟೆಕಾರು, ಇದರ ಆಶ್ರಯದಲ್ಲಿ ಕೋಟೆಕಾರಿನ ಶ್ರೀ ಶೃಂಗೇರಿ ಮಠದ ಆವರಣದಲ್ಲಿ `ಯುವ ಕ್ಷಾತ್ರ ಉಳ್ಳಾಲ ” ನೂತನ ಸಂಘಟನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಅಧ್ಯಕ್ಷ ಸೀತಾರಾಮ ಕೊಪ್ಪಲು ನೂತನ ಸಂಘಟನೆಯನ್ನು ಉದ್ಘಾಟಿಸಿ ಹಿರಿಯ ಮಾರ್ಗದರ್ಶನದಲ್ಲಿ ಯುವ ಜನರು ಸಮಾಜದ ಕಾರ್ಯದಲ್ಲಿ ಕೆಲ ಸಮಯವನ್ನು ಮೀಸಲಿಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಉದ್ಯಮಿ ಪಮ್ಮಿ ಯಾನೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲು, ಬಿ.ಕೆ. ಮೂರ್ತಿ ಪಾರೆಮನೆ, ಹಿರಿಯ ನ್ಯಾಯವಾದಿ ರಾಘವೇಂದ್ರ ರಾವ್ ,ಪ್ರಶೀಲ್ ಇನ್ಪ್ರಾಟೆಕ್ನ ಅನಿಲ್ ರಾವ್, ಮಿಸ್ಟ್ರಸ್ ಇಂಡಿಯಾ ವಲ್ಡ್ ಪ್ರಶಸ್ತಿ ವಿಜೇತೆ ತೃಪ್ತಿ…
UN NETWORKS ತಲಪಾಡಿ: ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಟೈಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ತಲಪಾಡಿಯ ಶಾರದಾ ವಿದ್ಯಾನಿಕೇತನದ ವಿದ್ಯಾರ್ಥಿಗಳು 8 ಪದಕಗಳನ್ನು ಗಳಿಸಿದ್ದಾರೆ. ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ರೀಪು ದಮನ್ ಸಿಂಗ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಪಡೆದರೆ, ಪ್ರೌಢಶಾಲಾ ವಿದ್ಯಾರ್ಥಿ ಯಶಸ್ ಆರ್. ಗೌಡ ಒಂದು ಬೆಳ್ಳಿ ಮತ್ತು ಒಂದು ಕಂಚು, ಸಾತ್ವಿಕ್ ಜಿ. ನವೀನ್ ಒಂದು ಬೆಳ್ಳಿ ಮತ್ತು ಒಂದು ಕಂಚು, ಕೀರ್ತನ್ ವಿ. ಒಂದು ಕಂಚು, ಶ್ರೀಚರಣ್ ರೆಡ್ಡಿ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ.
UN NETWORKS ಹರೇಕಳ : ಕ್ಷೇತ್ರದ ಉದ್ದಗಲಕ್ಕೂ ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಹಗಲಿರುಳು ಕಾಂಗ್ರೆಸ್ ಪಕ್ಷ ಮತ್ತು ಯು.ಟಿ.ಖಾದರ್ ಅವರ ಪರವಾಗಿ ದುಡಿಯುತ್ತಿರುವುದು ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಗೊಳಿಸಿದೆ ಎಂದು ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಅಭಿಪ್ರಾಯಪಟ್ಟರು. ಹರೇಕಳ ಗ್ರಾಮ ವ್ಯಾಪ್ತಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೀವಾಲ ಅವರ ನೇತೃತ್ವದಲ್ಲಿ ಮಂಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರ ಪರವಾಗಿ ಮತಯಾಚನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು. ಕಳೆದ ಆವಧಿಯಲ್ಲಿ ಶಾಸಕರಾಗಿ ಮತ್ತು ರಾಜ್ಯದ ಸಚಿವರಾಗಿ ಆರೋಗ್ಯ ಮತ್ತು ಆಹಾರ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಹಲವಾರು ಜನೋಪಯೋಗಿ ವಿನೂತನವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದು, ರಾಜ್ಯದ ಉದ್ದಗಲಕ್ಕೂ ತಮ್ಮ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ. ರಾಷ್ಟ್ರಮಟ್ಟದ ಗಮನಸೆಳೆದ ಖಾತೆ : ಆರೋಗ್ಯ ಸಚಿವರಾಗಿದ್ದಾಗ ಎಂಡೋಸಂತ್ರಸ್ಥರಿಗೆ ಪ್ಯಾಕೇಜ್,…
UN NETWORKS ಪೆರ್ಮನ್ನೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಪರಿಸರದಲ್ಲಿ ಮನೆ ಮನೆ ಬೇಟಿ ನೀಡಿ ಮತಯಾಚಿಸಿದರು. ಈ ಸಂಧರ್ಭದಲ್ಲಿ ಮಹಾರಾಷ್ಟ್ರ ಸಂಸದರಾದ ಗೋಪಾಲ್ ಶೆಟ್ಟಿ, ಬಿ.ಜೆ.ಪಿ. ಮುಂಬಯಿ ವಕ್ತಾರರಾದ ನಿರಂಜನ್ ಶೆಟ್ಟಿ, ಹರೀಶ್ ಶೆಟ್ಟಿ, ನಗರ ಸಭೆ ಸದಸ್ಯೆ ಸರಿತಾ ಜೀವನ್, ಕ್ಷೇತ್ರ ಉಪಾಧ್ಯಕ್ಷರಾದ ಯಶವಂತ್ ಅಮೀನ್, ಹರಿಯಪ್ಪ ಸಾಲ್ಯಾನ್, ಮಾಧ್ಯಮ ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೋಟು, ಬಾಲಕೃಷ್ಣ ಶೆಟ್ಟಿ ಉಳ್ಳಾಲ ಗುತ್ತು, ನಾರಾಯಣ ಬಿ.,ಲೋಕೇಶ್ ಶೆಟ್ಟಿ, ರೋಹಿತಾಕ್ಷ,ರಾಜೇಶ್ ಯು.ಬಿ., ಪ್ರದೀಪ್, ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
UN NETWORKS ಕುತ್ತಾರ್: ಮಾಜಿ ಕೇಂದ್ರ ಸಚಿವರು,ರಾಜ್ಯಸಭಾ ಸದಸ್ಯರಾದ ಸೆಲ್ಜಾ ಕುಮಾರಿ ಹರಿಯಾಣ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಪರ ದೇರಳಕಟ್ಟೆಯ ಕುತ್ತಾರ್ ಜಂಕ್ಷನ್ ನಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.ಈ ಸಂಧರ್ಭ ಯು.ಟಿ.ಖಾದರ್ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದರು.
UN NETWORKS ಜೆದ್ದಾ: ಸೌದಿ ಅರೇಬಿಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್ ನ ಪತಾಕೆ ಹಾರಿಸಿದ ಕೀರ್ತಿ ಸೌದಿ ಅರೇಬಿಯದ ವಾಣಿಜ್ಯ ನಗರ ಜಿದ್ದಾಕ್ಕೆ ಸಲ್ಲುತ್ತದೆ. ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ಮಾಡಲು ತಾಯ್ನಾಡಿಗೆ ತೆರಳುತ್ತಿದ್ದು ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಊರಿಗೆ ತಲುಪಿದ್ದು ಚುನವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜೆದ್ದಾದಿಂದ ಶಕೀಲ್ ದೇರಳಕಟ್ಟೆ ನೇತ್ರತ್ವದ ಮೊದಲ ತಂಡವು ಇಂದು ತಾಯ್ನಾಡಿಗೆ ತಲುಪಲಿದ್ದು ಇನ್ನೂ ಇಂತಹ ಅನೇಕ ತಂಡಗಳು ಸೌದಿ ಅರೇಬಿಯದಿಂದ ಅತೀ ಶೀಘ್ರದಲ್ಲಿ ಭಾರತಕ್ಕೆ ಬಂದಿಳಿಯಳಿದೆ.

