UN NETWORKS ಕಣಚೂರು: ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಮುಖ್ಯ. ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ನಾನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಕಠಿಣ ಪರಿಶ್ರಮ ಅಗತ್ಯ ಎಂದರು. ಕಣಚೂರು ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಿಗಳಲ್ಲಿ ಸನ್ನಡತೆ ಹಾಗೂವಿತೃನ್ನು ಮೇಲಕ್ಕೆತ್ತುವ ಕ್ರೀಡಾ ಮನೋಭಾವ ಬೇಕು ಹೊರತು ಇತರ ಕ್ರೀಡಾಳುಗಳ ಮನಸ್ಸು ನೋಯದಂತೆ ಅನ್ಯೋನ್ಯತೆಯಿಂದ ಮುನ್ನಡೆಯಬೇಕು ಎಂದು ನುಡಿದರು. ಕ್ರೀಡೆಯಲ್ಲಿ ಶ್ರದ್ಧೆ ಹಾಗೂ ಉತ್ಸುಕತೆ ಬೇಕು. ಈ ದಿನ ಬದುಕಿನಲ್ಲಿ ಮರೆಯಲಾರದ ದಿನವಾಗಬೇಕು. ಮತ್ತೊಮ್ಮೆ ಇಂತಹ ಅವಕಾಶ ವಯಸ್ಸಿನ ಆಧಾರದಲ್ಲಿ ದೊರಕದು ಎಂಬ ಭಾವನೆ ಸದಾ ನಮ್ಮಲ್ಲಿರಬೇಕು ಎಂದರು. ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಚೇರ್ ಮೆನ್ ಯು.ಕೆ. ಮೋನು,ಟ್ರಸ್ಟಿ ಝೊಹ್ ರಾ ಮೋನು ಹಾಗೂ ಸಹದಾ ರಹಮಾನ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ.ಎಚ್. ಎಸ್. ಡಾ. ಎಚ್. ಎಸ್.…
Author: UllalaVani
UN NETWORKS ಕೊಲ್ಯ: ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜ (ರಿ), ಬ್ರಹ್ಮಶ್ರೀ ನಾರಾಯಣ ಗುರು ದ್ಯಾನ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವದ ಅಂಗವಾಗಿ ಗೋಕುಲ್ ರಾಜ್ ಮತ್ತು ಜ್ಯೋತಿರಾಜ್ ಅವರು ನಂದಾ ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು. ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಈಶ್ವರ ಸುವರ್ಣ ಕನೀರ್ ತೋಟ,ಉಪಾಧ್ಯಕ್ಷ ತಿಮ್ಮಪ್ಪ ಬೂಡುಮನೆ, ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್ ಕೊಲ್ಯ,ಜೊತೆ ಕಾರ್ಯ ದರ್ಶಿ ಗಣೇಶ್ ಎಸ್.ಜಿ.ಕೆ, ಕೋಶಾಧಿಕಾರಿ ಸೀತಾರಾಮ.ಎಸ್.ಕರ್ಕೇರ, ಸುರೇಶ್ ಮಾಡೂರು,ಯೋಗೀಶ್ ಕೊಂಡಾಣ,ಶಶಿಕಾಂತ್ ಪರಿಯತ್ತೂರು, ಡಿ.ಎನ್.ರಾಘವ, ತಿಮ್ಮಪ್ಪ ಅಂಚನ್, ಮಾದವ ಕುಂದರ್, ಜಯರಾಮ ಪಿಲಿಕೂರು,ಗೋಪಾಲ ಕೊಂಡಾಣ, ದೇವದಾಸ ಮಡ್ಯಾರ್,ಗೋಪಾಲ ಕೃಷ್ಣ ಸೋಮೇಶ್ವರ್,ಪುರುಷೋತ್ತಮ ಅಡ್ಕ,ರಮಾನಾಥ ಕೋಟೆಕಾರ್, ಯಶೋಧರ ಕನೀರ್ ತೋಟ, ರಾಮ ಪರಿಯತ್ತೂರು, ತುಕಾರಾಮ್ ಎನ್, ಆನಂದ ಎಸ್ ಕೊಂಡಾಣ, ಮಾದವ ಪರಿಯತ್ತೂರು, ಶೇಷಪ್ಪ ಬೈದ್ಯರ ಮನೆ, ಎಚ್.ಶ್ರೀಧರ್,ಜಯಂತ್ ಪರಿಯತ್ತೂರು ಮೊದಲಾದವರು ಉಪಸ್ಥಿತರಿದ್ದರು.
UN NETWORKS ಪಟ್ಟೋರಿ : ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ ಕೊಣಾಜೆ ಇದರ ಆಶ್ರಯದಲ್ಲಿ ಶನಿವಾರದಿಂದ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಅಸೈಗೋಳಿಯಿಂದ ಪಟ್ಟೋರಿಯವರೆಗೆ ಶನಿವಾರ ನಡೆಯಿತು.
UN NETWORKS ಕೊಣಾಜೆ: ರಂಗಭೂಮಿ ದೇಹ ಮತ್ತು ಆತ್ಮಗಳ ಸಮರಸದ ಸಂಯೋಗದಿಂದ ರೂಪುಗೊಳ್ಳುವ ಕಲೆ. ಕಲಾವಿದನ ಭಾವಾಭಿನಯ, ಪರಕಾಯ ಪ್ರವೇಶ ಹಾಗೂ ಪಾತ್ರ ತಾದಾತ್ಮ್ಯಗಳು ಮನರಂಜನೆಯ ಜೊತೆಗೆ ಮನೋವಿಕಾಸವನ್ನುಂಟು ಮಾಡುತ್ತದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಸದಾನಂದ ಸುವರ್ಣ ಹೇಳಿದರು. ಅವರು ಗುರುವಾರ ಮುಂಬಯಿ ವಿಶ್ವವಿದ್ಯಾನಿಲಯದಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಯೋಗದೊಂದಿಗೆ ಮುಂಬಯಿ ವಿಶ್ವವಿದ್ಯಾನಿಲಯದ ಜೆ.ಪಿ ನಾಯಕ್ ಸಭಾಭವನದಲ್ಲಿ ನಡೆದ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಮುಂಬಯಿ ಕನ್ನಡ ರಂಗಭೂಮಿಯ ಕುರಿತು ಮಾತನಾಡಿದರು. ಮುಂಬಯಿಯಲ್ಲಿ ಮರಾಠಿ ರಂಗಭೂಮಿ ಮತ್ತು ಕನ್ನಡ ರಂಗಭೂಮಿ ಕೊಡುಕೊಳ್ಳುವಿಕೆಯ ಮೂಲಕ ಬೆಳೆದಿದ್ದು ಆಧುನಿಕ ಮರಾಠಿ ಚಲನಚಿತ್ರ ರಂಗಕ್ಕೆ ಸಾಕಷ್ಟು ಪ್ರೇರಣೆಗಳನ್ನು ಒದಗಿಸಿದೆ. ವರ್ತಮಾನದಲ್ಲಿ ಸಂಘಟಕರ ಕೊರತೆ ರಂಗಭೂಮಿಯ ಚಟುವಟಿಕೆಗಳ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದರು. ಸಮಾರಂಭದಲ್ಲಿ ಮುಂಬಯಿ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಮತ್ತು ಮುಂಬಯಿಯ ನಡುವೆ ನಿಕಟ ಸಂಬಂಧವಿದ್ದು ಸಾಂಸ್ಕøತಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಂಪರ್ಕಗಳು…
UN NETWORKS ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಟಿಂಜ ಅಡ್ಕರೆ ಪಡ್ಪು ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಸಚಿವ ಯು.ಟಿ.ಖಾದರ್ ಅವರ ಅನುದಾನ ಬಿಡುಗಡೆಯಾಗಿದ್ದು ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕೊಣಾಜೆ ಗ್ರಾಮಕ್ಕೆ 4 ವರ್ಷದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗೆ 20ಕೋಟಿಗಿಂತಲೂ ಅಧಿಕ ಅನುದಾನವನ್ನು ಸಚಿವ ಯು.ಟಿ.ಖಾದರ್ ಒದಗಿಸಿ ಕೊಟ್ಟಿರುತ್ತಾರೆ,ಅವರನ್ನು ಈ ಕ್ಷೇತ್ರದಲ್ಲಿ ಪಡೆದದ್ದು ನಾವು ಭಾಗ್ಯವಂತರು ಎಂದು ಹೇಳಿದರು. ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ,ಪಂಚಾಯತ್ ಸದಸ್ಯ ಇಕ್ಬಾಲ್ ಬರುವ,ಕ್ಯಾಥಲಿನ್ ಡಿಸೋಜ,ಅಚ್ಚುತ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಬಂಗೇರ ಮುಟ್ಟಿಂಜ, ಮಜ್ಲಿಸ್ ಸಖಾಪತ್ ಸುನ್ನಿಯಾ ಪ್ರಾಂಶುಪಾಲ ಇಬ್ರಾಹಿಂ ಶೌಕತ್ ಕೊಪ್ಪ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಬೆನೆಟ್,ಕೊಣಾಜೆ ಗ್ರಾಮ ಸಮಿತಿಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಮ್ ಮೆಗಾ,ಇಕ್ಬಾಲ್ ಸಾಮಾನಿಗೆ,ಗುತ್ತಿಗೆದಾರ ಅಬ್ದುಲ್…
UN NETWORKS ಉಳ್ಳಾಲ: ಸರಕಳವು ನಡೆಸುತ್ತಿದ್ದ ಅಂತರಾಜ್ಯ ಕುಖ್ಯಾತಿ ಕಳ್ಳ ಕಾಸರಗೋಡಿನ ನಾಯಮ್ಮಾರಮೂಲೆಯ ಅಬ್ದುಲ್ ಹ್ಯಾರೀಸ್ (29) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ ಸಮೀಪ ಈತನನ್ನು ಬಂಧಿಸಲಾಗಿದೆ. ಆರೋಪಿ ಜ.12 ರಂದು ಪಾಣೆಮಂಗಳೂರಿನ ಡೋನಿ ನಾಬರ್ಟ್ ಫೆರ್ನಾಂಡಿಸ್ ಎಂಬವರು ಸೋಮೇಶ್ವರ ಬೀಚ್ ಗೆ ಸ್ನೇಹಿತೆ ಜತೆಗೆ ಬಂದಿದ್ದಾಗ , ಹ್ಯಾರೀಸ್ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಕೈಯಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಸರದ ಅಂದಾಜು ಮೌಲ್ಯ ರೂ. 60,000 ಆಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
UN NETWORKS ಮುನ್ನೂರು:ಮುನ್ನೂರು ಗ್ರಾ.ಪಂ ವ್ಯಾಪ್ತಿಯ ಸಂತೋಷ್ ನಗರದ 6ನೇ ಮತ್ತು 7ನೇ ವಾರ್ಡಿನ ಅಡ್ಡ ರಸ್ತೆಗೆ 25ಲಕ್ಷ ವೆಚ್ಚದಲ್ಲಿ ನಿಮಾರ್ಣವಾಗುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಾಸಕ ಯು.ಟಿ ಖಾದರ್ರವರು ಸಚಿವರಾಗಿ ಅಯ್ಕೆಯಾದ ನಂತರ ನಿರಂತರವಾಗಿ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಬಂದಿದೆ. ವಿಶೇಷವಾಗಿ ಸಚಿವ ಕ್ಷೇತ್ರದ ಪ್ರತಿಯೊಂದು ಹಳ್ಳಿಹಳ್ಳಿ ಅಭಿವೃದ್ಧಿಯಾಗಿದೆ.ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಒಂದೇ ಒಂದು ಕುಟುಂಬ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು. ತಾ.ಪಂ ಸದಸ್ಯೆ ವಿಲ್ಮ ಡಿ’ಸೋಜಾ, ಕಾಂಗ್ರೆಸ್ ಸಲೀಂ ಮೇಗಾ ಮುನ್ನೂರು ಗ್ರಾ.ಪಂ ಸದಸ್ಯರಾದ ಹಸೈನಾರ್, ಬಾಸ್ಕರ್ ಕುತ್ತಾರ್, ಪುಸ್ಬ, ವಿಲೀಂ ಡಿ’ಸೋಜಾ, ಸಂತೋಷ್ ನಗರ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್, ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎನ್, ಮೂನ್ನೂರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪೋಲ್ ಲೋಬೋ, ಸ್ಥಳಿಯರಾದ ಶುಕೂರು, ಮಜೀದ್,…
UN NETWORKS ಅಂಬ್ಲಮೊಗರು:ಕೇಂದ್ರ ಜುಮಾ ಮಸೀದಿ ಕುಂಡೂರು ಹಾಗೂ ನುಸ್ರತುಲ್ ಇಸ್ಲಾಂ ಸಮಿತಿ ಪರಿಯಕ್ಕಳ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಮತ್ತು 32ನೇ ವಾರ್ಷಿಕ ಕುತುಬಿಯತ್ ಕಾರ್ಯಕ್ರಮ ಫೆ.5ರಿಂದ7ವರೆಗೆ ಕುಂಡೂರು ಮಸೀದಿ ವಠಾರದಲ್ಲಿ ಸಂಜೆ 7ಗಂಟೆಯಿಂದ ನಡೆಯಲಿದೆ. ಫೆ,5ರಂದು ಮತ ಪ್ರಭಾಷಣ ಫೆ, 6ರಂದು ಬೃಹತ್ ಅಹ್ಲ್ ಬೈತ್ ಸಂಗಮ ಹಾಗೂ ಮಜ್ಲಿಸುನ್ನೂರು ಫೆ,7ರಂದು ವಾರ್ಷಿಕ ಖುತುಬಿಯ್ಯತ್ ನಡೆಯಲಿದೆ ಎಂದು ಅಬೂಬಕ್ಕರ್ ಸ್ವಾಗತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಉಳ್ಳಾಲ:ದೇವರು ಇಹಲೋಕಕ್ಕೆ ಮನುಷ್ಯ ಜೀವಿಯನ್ನು ಕಲಿಸಿದ್ದು ದೇವರಿಗೆ ಭಯಪಟ್ಟು ಜೀವಿಸಲು ಹೊರತು ದೇವರನ್ನು ಧಿಕ್ಕರಿಸಲ್ಲ ಎಂದು ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಹೇಳಿದರು. ಅವರು ಉಳ್ಳಾಲದ ಮಂಚಿಲ ಮಸ್ಜಿದುಲ್ ಜಾಮಿಅ ಅಲ್ ಮುನವ್ವರ್ ಮಸೀದಿ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ನ ನೇತ್ರತ್ವ ವಹಿಸಿ ಮಾತನಾಡಿದರು. ಇವತ್ತಿನ ಕಾಲದಲ್ಲಿ ದುಷ್ಟರ ಸಂಖ್ಯೆ ಹೆಚ್ಚುತ್ತಿದ್ದು ಪೋಷಕರು ತಮ್ಮ ಮಕ್ಕಳ ನ್ನು ಸರಿ ದಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಮಂಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಮಕ್ ಸೂದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಪಟ್ಲ ಜುಮಾ ಮಸೀದಿ ಖತೀಬ್ ಎಂ.ಸಿ ಮುಹಮ್ಮದ್ ಫೈಝಿ ಮೋಙಂ ಉದ್ಘಾಟಿಸಿದರು. ಎಸ್ ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಅಸ್ಸಯ್ಯಿದ್ ಜಲಾಲುದ್ದೀನ್ ತಂಙಳ್, ಅಸ್ಸಯ್ಯಿದ್ ಝಿಯಾದ್ ತಂಙಳ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಸ್ಸಯ್ಯಿದ್ ಖುಬೈದ್ ತಂಙಳ್, ಅಳೇಕಲ ಜುಮಾ ಮಸೀದಿ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ, ಎಸ್ ಎಂ ಓ ಉಳ್ಳಾಲ…
UN NETWORKS ಹರೇಕಳ: ದ.ಕ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ದ.ಕ, ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ವಿಷಯ ಬಗ್ಗೆ ಮಾಹಿತಿ ಕಾರ್ಯಾಗಾರವು ನಡೆಯಿತು. ಮಾಹಿತಿಯನ್ನು ನೀಡಿದ ಇಲಾಖೆಯ ಜಿಲ್ಲಾ ಸಲಹೆಗಾರರಾದ ಡಾ.ಪ್ರೀತ ಇವರು, ದೇಶದಲ್ಲಿ ಶೇಕಡ 14ರಷ್ಟು ಯುವಕರು ಅಂದರೆ 13 ರಿಂದ 15 ವರ್ಷದೊಳಗಿನವರು ಯಾವುದಾದರೊಂದು ರೀತಿಯ ತಂಬಾಕು ಉತ್ಪನ್ನಗಳ ಸೇವನೆಯನ್ನು ಮಾಡುತ್ತಾರೆ. ಇಲ್ಲಿ ತುಂಬಾ ಮಂದಿ ಯುವಕ, ಯುವತಿಯರು ತಮ್ಮ ಮನೆಯಲ್ಲೇ ಧೂಮಪಾನ ಮಾಡುವವರನ್ನು ನೋಡಿ ಅನುಕರಣೆ ಮಾಡುತ್ತಾರೆ. ಹಾಗಾಗಿ ಮೊದಲು ಮನೆಯನ್ನು ತಂಬಾಕು ಮುಕ್ತಗೊಳಿಸಲು ಪ್ರಯತ್ನಿಸಬೇಕು ಎಂದರು. ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯುವರು ವಹಿಸಿ ಯಾವುದೇ ರೋಗ ಬಂದ ಮೇಲೆ ಆಸ್ಪತ್ರೆಗೆ ಹೋಗುವುದಕ್ಕಿಂತ ರೋಗಗಳು ಬರುವ ಮುಂಚೆಯೇ ಜಾಗೃತೆ ವಹಿಸುವುದು ಒಳಿತು. ಉತ್ತಮ ಆರೋಗ್ಯದಿಂದ ಮಾತ್ರ…

