ಉಳ್ಳಾಲ ನ್ಯೂಸ್ ನೆಟ್ ವರ್ಕ್ ಮುಡಿಪು:ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿ, ಯುವಜನರ ಪಾತ್ರ ಅತ್ಯಂತ ಮಹತ್ವಾಗಿದ್ದು, ದೇಶದ ಜವಾಬ್ದಾರಿಯ ಜತೆಗೆ ಪರಿಸರದ ಹೊಣೆಗಾರಿಯನ್ನು ವಿದ್ಯಾರ್ಥಿ ಯುವಜನರು ಸಮರ್ಥವಾಗಿ ನಿರ್ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಝೆನಿತ್ ಎಜುಕೇಶನಲ್ ಮತ್ತು ಚಾರಿಟೇಬಲ್ ಅಧ್ಯಕ್ಷರಾದ ಮಜೀದ್ ಎನ್ ಅಭಿಪ್ರಾಯಪಟ್ಟರು. ಅವರು ಮುಡಿಪುವಿನ ಝೆನಿತ್ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಮೂಲಕ ಆಚರಿಸಲಾಯಿತು. ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಶಾಲಾ ಸಂಚಾಲಕರಾದ ನಹಾದ ಎಂ, ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ, ಸದಸ್ಯರಾದ ಬಶೀರ್ ಹಾಗೂ ಹನೀಫ್, ಮುಖ್ಯ ಶಿಕ್ಷಕರಾದ ಕ್ಯಾಥರೀನ್ ಡಿ ಸೋಜ, ಸಹಶಿಕ್ಷಕರಾದ ಮುಹಮ್ಮದ್ ಮನಾಝಿರ್ ಎಂ.ಎ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸುನ್ನೀ ಸೆಂಟರ್ ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್,ಎಸ್ಎಸ್ಎಫ್,ಎಸ್ ವಿ ಎಸ್ ವತಿಯಿಂದ ಕಿಟ್ ವಿತರಣೆ ಮಗ್ರಿಬ್ ನಮಾಝಿನ ಬಳಿಕ ಅಳೇಕಲದ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷ ರಿಯಾಝ್ ಅಳೇಕಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ಇಮಾಮ್ ನವವಿ ಮದ್ರಸ ಸೌದಿ ಅರಬಿಯಾ ಇದರ ಮುದರ್ರಿಸ್ ಹನೀಫ್ ಸಅದಿ ಉಸ್ತಾದರು ರಂಝಾನ್ ಪೂರ್ವ ಸಿದ್ಧತೆ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹಲವು ಬಡ ಕುಟುಂಬಕ್ಕೆ ರಂಝಾನ್ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಜಾಫರ್ ಮದನಿ ಉಸ್ತಾದ್, ಅಳೇಕಲ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು.ಡಿ, ಎಸ್ ಎಸ್ ಎಫ್ ಅಳೇಕಲ ಶಾಖೆಯ ಅಧ್ಯಕ್ಷರಾದ ಶಂಸುದ್ದೀನ್, ಪ್ರಧಾನ ಕಾರ್ಯದರ್ಶಿ ಆರಿಫ್, ಎಸ್ ವಿ ಎಸ್ ಅಧ್ಯಕ್ಷ ಝಾಹಿರ್ ತಂಙಳ್, ಪ್ರಧಾನ ಕಾರ್ಯದರ್ಶಿ ಶಫೀಖ್, ಫಾರುಕ್ ಯುಡಿ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಶಂಸುದ್ದೀನ್ ಸ್ವಾಗತಿಸಿ ಫಾಝಿಲ್…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಉಳ್ಳಾಲ ಕೈಕೋ ಪ್ರದೇಶದಲ್ಲಿ ಸಮುದ್ರ ಪ್ರಕ್ಷುಬ್ದ ಗೊಂಡಿದ್ದು, ಅಲೆಗಳ ರಭಸಕ್ಕೆ ಮನೆಯೊಂದು ಸಂಪೂರ್ಣ ಸಮುದ್ರ ಪಾಲಾಗಿದ್ದು ಉಳಿದಂತೆ 10ಕ್ಕೂ ಹೆಚ್ಚು ಮನೆಗಳು ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಮಂಗಳವಾರ ಮುಂಜಾನೆ ಕಡಲ್ಕೊರೆತೆ ತಾತ್ಕಾಲಿಕ ಪರಿಹಾರಕ್ಕಾಗಿ ಕಲ್ಲುಗಳನ್ನು ಹಾಕಿದ ಪರಿಣಾಮವಾಗಿ ಮನೆ ಭಾಗಶಃ ಸಮುದ್ರ ಪಾಲಾಗಿದ್ದು, ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ. ಉಳ್ಳಾಲದ ಕೈಕೋ ನಿವಾಸಿ ಖೈರುನ್ನೀಸಾ ಎಂಬವರ ಮನೆ ಭಾಗಶಃ ಸಮುದ್ರ ಪಾಲಾಗಿದ್ದು, ಮನೆಯೊಳಗಿದ್ದ ಸೊತ್ತುಗಳನ್ನು ಸ್ಥಳೀಯರು ಸೇರಿಕೊಂಡು ಬೇರೆ ಮನೆಗಳಿಗೆ ಸ್ಥಳಾಂತರಿಸಿದ್ದಾರೆ. ಎರಡು ವಾರಗಳಿಂದ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಆದರೂ ಜಿಲ್ಲಾಡಳಿತ ಕೈಕೋ ಪ್ರದೇಶದ ಖಯರುನ್ನೀಸಾ ಅವರ ಮನೆ ಹಿಂಬದಿಯಲ್ಲಿ ಕಲ್ಲು ಹಾಕುವ ಮನಸ್ಸು ಮಾಡಿರಲಿಲ್ಲ. ಮಂಗಳವಾರ ಬೆಳಗ್ಗಿನಿಂದ ಕಲ್ಲುಗಳನ್ನು ಹಾಕುವ ಪ್ರಯತ್ನ ನಡೆಯಿತ್ತಾದರೂ ಮಧ್ಯಾಹ್ನದ ವೇಳೆಗೆ ಖೈರುನ್ನೀಸಾ ಅವರ ಕಣ್ಣೆದುರಲ್ಲೇ ಮನೆ ಕಡಲಿನ ಅಲೆಗಳ ಪಾಲಾಯಿತು. ಉದ್ಯಮಿ ರಾಜಕಾರಣಿಯ ಬಂಗಲೆ ರಕ್ಷಣೆ: ಉದ್ಯಮಿ ಹಾಗೂ ಜೆಡಿಎಸ್ ಮುಖಂಡರೋರ್ವರು…
ಉಳ್ಳಾಲ ನ್ಯೂಸ ನೆಟ್ ವರ್ಕ್ ಉಳ್ಳಾಲ: ದುರಂತಕ್ಕೀಡಾದ ಬಾರ್ಜ್ನ ಡಿಸೀಲ್ ಸೋರಿಕೆಯಾಗಿದ್ದು, ಸಂಜೆ ವೇಳೆ ಟ್ಯಾಂಕ್ ಕಲ್ಲಿಗೆ ಬಡಿದು ಸ್ಫೋಟಗೊಂಡಿದೆ ಎಂದು ಸ್ಥಳೀಯರು ಆರೋಪಿಸಿರುವ ಸ್ಥಳೀಯರು ಇದರಿಂದಾಗಿ ಮೊಗವೀರಪಟ್ನ ತೀರದಲ್ಲಿ ಸಮುದ್ರದ ನೀರು ತೈಲದಿಂದ ಕೂಡಿದೆ ಎನ್ನಲಾಗುತ್ತಿದೆ. ಮಂಗಳವಾರ ಸಂಜೆ ವೇಳೆ ಸಮುದ್ರದ ನೀರಿನಲ್ಲಿ ತೈಲಾಂಶ ಪತ್ತೆಯಾಗಿದೆ. ಡಿಸೀಲ್ ಘಾಟು ಸ್ಥಳೀಯವಾಗಿ ವ್ಯಾಪಿಸಿರುವುದರಿಂದ ಬಾರ್ಜ್ನ ಡಿಸೀಲ್ ಟ್ಯಾಂಕಿನಲ್ಲಿ ಸೋರಿಕೆ ಉಂಟಾಗಿದೆ ಅನ್ನುವ ಸಂಶಯಗಳು ವ್ಯಕ್ತವಾಗಿದೆ. ಬಾರದ ತಜ್ಞರ ತಂಡ : ಬಾರ್ಜ್ ದುರಂತ ಸಂಭವಿಸಿ ಮೂರು ದಿನಗಳು ಕಳೆದರೂ ಮುಂಬೈನಿಂದ ಬರಬೇಕಾದ ತಜ್ಞರ ತಂಡ ಇನ್ನೂ ಘಟನಾ ಸ್ಥಳವನ್ನು ತಲುಪಿಲ್ಲ. ಸೋಮವಾರ ಭೇಟಿ ನೀಡುವವರಿದ್ದು, ಇಂದು ಕೂಡಾ ತಲುಪಿಲ್ಲ. ಆದರೆ ಸುರತ್ಕಲ್ ತಲುಪಿರುವ ತಂಡ ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸಿ ಬುಧವಾರದಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಎನ್ ಎಂ ಪಿಟಿ ಮೂಲಕವೇ ಸ್ಥಳ ತಲುಪಲಿರುವ ತಂಡದ ಜತೆಗೆ ಎಡಿಬಿ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಎಡಿಬಿ ಅಧಿಕಾರಿಗಳ ನಿಯೋಗವೂ ಉಳ್ಳಾಲಕ್ಕೆ ಭೇಟಿ ನೀಡಿ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಅತ್ತಾವರ: ಅತ್ತಾವರದಲ್ಲಿ ಮೇ 20ರಂದು ನಡೆದ ಜಿಲ್ಲಾಮಟ್ಟದ ದೇಹಧಾಡ್ಯ ಸ್ವರ್ಧೆಯಲ್ಲಿ ಮಿ.ಅತ್ತಾವರ ಆಗಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಸಾದ್ ಎಂಬವರು ಪಡೆದುಕೊಂಡಿದ್ದಾರೆ. ಇವರು ಹೆಲ್ತ್ ಝೋನ್ ಮಲ್ಟಿ ಜಿಮ್ ಕೆ.ಸಿರೋಡ್ ಶಕೀಲ್ ಇವರಿಂದ ತರಭೇತಿಯನ್ನು ಪಡೆಯುತ್ತಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ತೊಕ್ಕೊಟು: ರಂಜಾನ್ ತಿಂಗಳ ಅವಧಿಯಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನೂಕೂಲವಾಗುವ ದೃಷ್ಟಿಯಲ್ಲಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿರುವ ಎಲ್ಲಾ ಮಳಿಗೆಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಜೂನ್ ತಿಂಗಳಿನಲ್ಲಿ ಗ್ರಾಹಕರ ಅನೂಕೂಲಕ್ಕಾಗಿ ಅಂಗಡಿ, ಮಳಿಗೆಗಳನ್ನು ಆದಷ್ಟು ತಡರಾತ್ರಿಯವರೆಗೆ ತೆರೆದಿಟ್ಟು ವ್ಯಾಪಾರ ವಹಿವಾಟುಗಳನ್ನು ನಡೆಸುವಂತೆ ಅನುಮತಿಯನ್ನು ನೀಡುವಂತೆ ತೊಕ್ಕೊಟ್ಟಿನ ಸ್ಮಾಟ್ ಸಿಟಿ ಟ್ರೇಡ್ ಅಸೋಶಿಯೇಶನ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವರ್ತಕರ ಸಂಘದ ಅಧ್ಯಕ್ಷ ನಾಸೀರ್ ಅಹಮ್ಮದ್ ಸಾಮಣಿಗೆ, ಕಾರ್ಯದರ್ಶಿ, ಜೈನುಧಿನ್ ಉದ್ಯಮಿಗಳಾದ ಯು,ಎಚ್, ತೌಫೀಕ್, ಸುಹೇಬ್, ಆಲಿಜಾ ಖಲೀಲ್ ಯಾಸೀರ್, ಝಿರಾರ್, ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ ನ್ಯೂಸ್ ನೆಟವರ್ಕ್ ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿದ್ದ ತ್ಯಾಜ್ಯವನ್ನು ಪಂಚಾಯತ್ ಪ್ರತಿನಿಧಿಗಳು ಸೇರಿದಂತೆ ಸ್ಥಳಿಯರ ಸಹಕಾರದೊಂದಿಗೆ ಸ್ವಚ್ಛ ಮಾಡಿ ಆ ಸ್ಥಳದಲ್ಲಿ ಮರಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚಾರಣೆಯ ಆಚರಿಸಲಾಯಿತು. ಕೆ.ಸಿ.ರೋಡು ರಸ್ತೆಯ ಬದಿಯಿಂದ ಪ್ರಾರಂಭಗೊಂಡು ಕೋಟೆಕಾರು, ಬೀರಿ, ಮಾಡೂರು, ಮಾಡ್ಯಾರ್, ಪನೀರ್, ಕನೀರ್ ತೋಟ, ದೇರಳಕಟ್ಟೆ ಜಲಾಲ್ ಭಾಗ್, ಹಾಗೂ ನಿಟ್ಟೆ ಆಸ್ವತ್ರೆಯ ರಸ್ತೆ ಮೊದಲಾದ ಕಡೆಗಳಿಂದ ನಾಗರಿಕರು ವಾಹನಗಳಲ್ಲಿ ತಂದು ಗಂಟು ಮೂಟೆಗಳ ತ್ಯಾಜ್ಯವನು ರಸ್ತೆಯ ಪಕ್ಕದ ಚರಂಡಿಗಳಿಗೆ ಎಸೆದು ಹೋಗಿದ್ದವುಗಳನ್ನು ಹೆಕ್ಕಿ ಶುಚಿಗೊಳಿಸಿ ಅವುಗಳನ್ನು ರಾಶಿಮಾಡಿಕೊಂಡು ಟಿಪ್ಪರ್ಗಳಿಗೆ ಜೆ.ಸಿ.ಬಿ ಯಿಂದ ತುಂಬಿಸಿಕೊಂಡು ಎಲ್ಲಾ ಪ್ರದೇಶಗಳನ್ನು ಸ್ವಚ್ಛಮಾಡಲಾಯಿತು. ಈ ವೇಳೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ಪೂರ್ಣಕಲಾ ಮಾತಾನಾಡಿ ಪರಿಸರವು ನಮಗೆ ಪ್ರಕೃತಿದತ್ತವಾದ ಕೊಡುಗೆಯಾಗಿದ್ದು ಅದನ್ನು ಅಂದ ಚೆಂದ ಮತ್ತು ಸ್ವಚ್ಚವಾಗಿಡುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಹೇಗೆ ಸಮಾಜದ ಮುಂದೆ ಅಂದವಾಗಿ ಸ್ವಚ್ಚವಾಗಿರುತ್ತೇವೆಯೊ, ಅದೇ ರೀತಿಯಲಿ ನಮ್ಮ ಪರಿಸರವನ್ನು ಸ್ವಚ್ಚವಾಗಿಡುವ…
ಉಳ್ಳಾಲ ನ್ಯೂಸ್ ನೆಟವರ್ಕ್ ಉಳ್ಳಾಲ: ವಿಶ್ವಹಿಂದು ಪರಿಷತ್ ಬಜರಂಗದಳ ಸ್ವಾಮಿ ಕೊರಗಜ್ಜ ಶಾಖೆ ನಾರ್ಲ ಪಡೀಲ್ ಇದರ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಬಿಜೆಪಿಯ ವಿಜಯ ಪಂಡಿತ್ ಹೌಸ್, ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಳ್ಳಾಲ ಪ್ರಖಂಡದ ಸಂಚಾಲಕ ಪವಿತ್ರ ಕೆರೆಬೈಲ್, ವಿಶ್ವ ಹಿಂದೂ ಪರಿಷತ್ ಬಜರಂದಳ ಪ್ರಮುಖ್ ಪ್ರೇಮ್ ಪಾವೂರು, ತಲಪಾಡಿ ಪಂಚಾಯತ್ ಉಪಾಧ್ಯಕ್ಷ ವೈಭವ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಸ್ವಾಮಿ ಕೊರಗಜ್ಜ ಶಾಖೆ ಇದರ ಕಾರ್ಯದರ್ಶಿ ಚಂದ್ರಶೇಖರ್, ಪಂಚಾಯತ್ ಸದಸ್ಯೆ ಭಾಗ್ಯಲಕ್ಷ್ಮಿ ರೈ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಸ್ವಾಮಿ ಕೊರಗಜ್ಜ ಶಾಖೆ ಇದರ ಸಂಚಾಲಕ ಪ್ರೇಮ್ ತಲಪಾಡಿ, ದ.ಕ. ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನಾರ್ಲ ಪಡೀಲ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ್ನ್ಯೂಸ್ ನೆಟವರ್ಕ್ ಉಳ್ಳಾಲ: ಬಡವರೆಂದು ಎಲ್ಲೆಡೆಯೂ ಕೈಚಾಚುವ ಪ್ರಯತ್ನ ಮಾಡದಿರಿ, ಇಸ್ಲಾಂ ನ ಚೌಕಟ್ಟಿನೊಳಗೆ ಇದ್ದುಕೊಂಡು ಪ್ರವಾದಿಯವರ ಸಂದೇಶದಂತೆ ಜೀವನ ನಡೆಸುಕೊಂಡು ಬಾಳಬೇಕಿದೆ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಉಳ್ಳಾಲ ಮಾಸ್ತಿಕಟ್ಟೆ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಂಝಾನ್ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಾಲ್ಕು ಜನರ ಒಕ್ಕೂಟ ಸೇರಿಕೊಂಡು ಸಂಸ್ಥೆಯಾಗಿದೆ. ಜನರ ಸಹಕಾರದ ಜತೆಗೆ ಸ್ಥಳೀಯವಾಗಿ ವಿಶ್ವಾಸ ಪಡೆದುಕೊಂಡು ಟ್ರಸ್ಟ್ ಎಲ್ಲಾ ವರ್ಗದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಉಪಾಧ್ಯಕ್ಷ ಮೊಹಮ್ಮದ್ ತ್ವಾಹ ಮಾತನಾಡಿ ಕಳೆದ ಆರು ವರ್ಷಗಳಿಂದ ಟ್ರಸ್ಟ್ ಯಶಸ್ವಿಯಾಗಿ ಜನರ ಕಷ್ಟಗಳಿಗೆ ಸ್ಪಂಧಿಸುತ್ತಾ ಬಂದಿದೆ. ಮುಂದೆಯೂ ಜನರ ಸಹಕಾರದೊಂದಿಗೆ ಇನ್ನಷ್ಟು ಜನರಿಗೆ ಸಹಕರಿಸಲಿದೆ ಎಂದರು.ಮುಖ್ಯ ಅತಿಥಿಯಾಗಿ ಅಹಮ್ಮದ್ ಬಾವ ಕುಂಬ್ಳೆ ಭಾಗವಹಿಸಿದ್ದರು.ಯು.ಎಂ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಎ.ಎ.ಖಾದರ್,…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ ಸಮೀಪದ ಮೊಗವೀರಪಟ್ಣದಲ್ಲಿ ಶನಿವಾರ ನಡೆದ ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು ಹಾಗೂ ರಾಜ್ಯ ಆಹಾರ ಸಚಿವರಾದ ಯು.ಟಿ.ಖಾದರ್ ಬೆಳ್ಳಂಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ತೆರಳಿ ಅಧಿಕಾರಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಿದ್ದಾರೆ. ಸಚಿವರು ಬೆಳಗ್ಗೆ ಪಣಂಬೂರು ಕೋಸ್ಟ್ ಗಾರ್ಡ್ ಗೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಇನ್ನಷ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಕೋಸ್ಟ್ ಗಾರ್ಡ್ ಡಿಐಜಿ ಎಸ್.ಎಸ್. ದಾಸಿಲ, ಕಮಾಂಡೆಂಟ್ ಜಸ್ವಾಲ್ ಅವರಲ್ಲಿ ಕಾರ್ಯಾಚರಣೆಯ ರೂಪುರೇಷೆಯ ಬಗ್ಗೆ ಸಚಿವರು ಚರ್ಚಿಸಿದರು. ಬ್ರಿಟಿಷ್ ಕಂಪೆನಿಯ ದುಬಾರಿ ಎ.ಸಿ.ವಿ. (ಂiಡಿ ಅuಣಠಿoಟಿ ಗಿeseಟ) ಓವರ್ ಕ್ರಾಫ್ಟ್ ಬೋಟನ್ನು ಇದೀಗ ಬೆಳಗ್ಗಿನಿಂದ ಕಾರ್ಯಾಚರಣೆಗೆ ಇಳಿಸಲಾಗಿದೆ. ಈ ವಿಶೇಷ ಬೋಟ್ ನೀರು ಹಾಗೂ ಹೊಯ್ಗೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. (ನಿನ್ನೆ ಈ ಬೋಟ್ ದೂರ ಇತ್ತೆನ್ನಲಾಗಿದೆ.) 50 ಮಂದಿ ಕೋಸ್ಟ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದರ ಜೊತೆ ಅಮರಿಯಾ ಶಿಪ್, ರಾಜಧೂತ್ ಸ್ಟಾಂಡ್ ಶಿಪ್ ಸಜ್ಜುಗೊಂಡಿದೆ.…

