UN NETWORKS ಉಳ್ಳಾಲ: ಕರಾವಳಿ ಜಿಲ್ಲೆಯಲ್ಲಿ ಸಮನ್ವಯತೆಯನ್ನು ಕಾಪಾಡದೇ ಇದ್ದಲ್ಲಿ, ಮುಂದೆ ಎಲ್ಲರೂ ಸಮುದ್ರದಲ್ಲಿ ಕೊಚ್ಚಿ ಹೋಗುವುದು ಖಂಡಿತ. ರಾಣಿ ಅಬ್ಬಕ್ಕ ದೇವಿ ಉತ್ಸವ ವೈಭವಕ್ಕಾಗಿ ಅಲ್ಲ, ಆಕೆಯ ಆದರ್ಶಗಳನ್ನು ರಕ್ತಗತವಾಗಿ ಮೈಗೂಡಿಸಿಕೊಳ್ಳುವಂತೆ ಮಾಡಲು ಜಿಲ್ಲೆಯ ಜನರಲ್ಲಿ ಆಕೆಯ ಚರಿತ್ರೆಯನ್ನು ಅಧ್ಯಯನ ನಡೆಸುವಂತೆ ಪ್ರೇರೇಪಿಸಿ ಎಲ್ಲಾ ಬೇಧಗಳನ್ನು ಮರೆತು ದೇಶಕ್ಕೆ ಮಾದರಿ ಜಿಲ್ಲೆಯಾಗಿ ಮಾಡುವ ಉದ್ದೇಶ ಉತ್ಸವದ ಮೂಲಕ ಆಗಬೇಕಿದೆ ಖ್ಯಾತ ಸಾಹಿತಿ ವೈದೇಹಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಸೋಮೇಶ್ವರ ಗ್ರಾಮದ ಕೊಲ್ಯ ನಾಗಮಂಡಲ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಅನ್ಯಾಯ ಎದುರಿಸುವ ಶಕ್ತಿ ಯಾರಲ್ಲೂ ಇಲ್ಲದ ಸ್ಥಿತಿಯಿದೆ. ವೀರರಾಣಿ ಅಬ್ಬಕ್ಕಳ ಸ್ಮರಣೆಯನ್ನು ಇಡೀ ದೇಶ ಮಾಡಬೇಕಾದ ಕೆಲಸ, ಆದರೆ ದೇಶದ ಇತರೆಡೆ ವೀರರಾಣಿಯರನ್ನು ಸ್ಮರಿಸುವ ರೀತಿಯಲ್ಲಿ ಅಬ್ಬಕ್ಕಳ ಸ್ಮರಣೆಯಾಗುತ್ತಿಲ್ಲ. ಚರಿತ್ರೆಯಲ್ಲಿ ಪತಿಯೇ ಶತ್ರುವಾಗಿ ಹೋರಾಡಿದ…
Author: UllalaVani
UN NETWORKS ಉಳ್ಳಾಲ : ಅಬ್ಬಕ್ಕ ಉತ್ಸವದೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳಿಂದ ಹೊಸ ಪ್ರತಿಭಾನ್ವಿತರಿಗೆ ಒಮದು ವೇದಿಕೆಯಾಗಿದ್ದು, ಉತ್ಸವದ ಮೂಲಕ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಬಿನಂದನೀಯ ಎಂದು ನೃತ್ಯ ವಿಧುಷಿ ಆರತಿ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕೊಲ್ಯ ನಾಗಮಂಡಲದ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಕ್ಕ ಉಸ್ತವ ಸಮಿತಿಯ ಉಸ್ತುವಾರಿ ಸಮಿತಿಯ ಪ್ರಮುಖರಾದ ದಿನಕರ ಉಳ್ಳಾಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ , ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯ ಬಾಝಿಲ್ ಡಿಸೋಜ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರನಾಥ್ ,ದೇವಕಿ ಉಳ್ಳಾಲ್,ತೋನ್ಸೆ ಪುಷ್ಕಳ್ ಕುಮಾರ್, ರಾಘವ ಮಾಸ್ಟರ್, ಲಕ್ಷ್ಮಿನಾರಾಯಣ್, ವಾಸುದೇವ ರಾವ್, ರತ್ನಾವತಿ ಬೈಕಾಡಿ, ವಾಣಿ…
UN NETWORKS ಉಳ್ಳಾಲ : ರಾಜ್ಯದ ವಿವಿದೆಡೆಗಳಿಂದ ಆಗಮಿಸಿರುವ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಆಂತರಾಷ್ಟ್ರೀಯ ಕುಸ್ತಿಪಟುಗಳಾಗಿ ರಾಜ್ಯಕ್ಕೆ ಹೆಸರು ತರುವ ಕಾರ್ಯ ಆಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಕೊಲ್ಯ ಸೋಮೆಶ್ವರದ ನಾಗಮಂಡಲ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಕುಸ್ತಿಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಕುಸ್ತಿ ಪಂದ್ಯಾಟದ ಸ್ಪರ್ಧೆಗೆ ಚಾಲನೆ ನೀಡಿದರು. ಉತಸ್ವ ಸಮಿತಿ ಉಸ್ತುವಾರಿ ದಿನಕರ ಉಳ್ಳಾಲ್ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯ ಬಾಝಿಲ್ ಡಿಸೋಜ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರನಾಥ್ ರೈ ,ದೇವಕಿ ಉಳ್ಳಾಲ್,ತೋನ್ಸೆ ಪುಷ್ಕಳ್ ಕುಮಾರ್, ತ್ಯಾಗಂ ಹರೇಕಳ, ಮೋಹನ್…
UN NETWORKS ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವ-2018ರ ಪ್ರಯುಕ್ತ ಕೋಟೆಕಾರು ಸಂಕೊಳಿಗೆ ಬೋವಿ ಶಾಲೆಯಿಂದ ಉತ್ಸವ ನಡೆಯಲಿರುವ ಕೊಲ್ಯ ನಾಗಮಂಡಲದ ಮೈದಾನದ ತನಕ ಅಕರ್ಷಕ ಮೆರವಣಿಗೆ ನಡೆಯಿತು. ಆಕರ್ಷಕ ಕೊಡೆ, ಕೀಲುಕುದುರೆ, ಯಕ್ಷಗಾನ ವೇಷಧಾರಿಗಳು, ಮರದ ಕಾಲಲ್ಲಿ ನಡಿಗೆ, ಹಾಲಕ್ಕಿ ಕುಣಿತ, ಸ್ತಬ್ಧ ಚಿತ್ರ, ನೃತ್ಯ ಕುಣಿತ, ಡೊಳ್ಳುಕುಣಿತ, ನೈಜ ಕುದುರೆಯ ಮೇಲೆ ಅಬ್ಬಕ್ಕ ಪಾತ್ರಧಾರಿ ಸವಾರಿ ನಡೆಯಿತು.
UN NETWORKS ಕೊಣಾಜೆ: ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ಸಮಾಜ ಸೇವೆಯೊಂದಿಗೆ ನಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಕೃಷ್ಣ ಗಟ್ಟಿ ಅಡ್ಕ ಹೇಳಿದರು. ಅವರು ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಜನೆಯಿಂದ ಐಕ್ಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದ್ದು, ಭಜನೆಯಿಂದ ಯಾವತ್ತೂ ವಿಭಜನೆ ಸಾಧ್ಯವಿಲ್ಲ. ಯುವ ಪೀಳಿಗೆಯು ಇಂತಹ ಭಜನಾ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಹೇಳಿದರು. ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು, ಸಮಾಜಸೇವಾ ಮನೋಭಾವನೆಯೊಂದಿಗೆ ನಾವು ಧಾರ್ಮಿಕತೆಯ ಬಗ್ಗೆಯೂ ನಾವು ಅರಿತುಕೊಳ್ಳಬೇಕು. ಇಂತಹ ಭಜನಾ ಸಂಕಿರ್ತನೆಯಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ…
UN NETWORKS ಕೊಣಾಜೆ: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ, ಕೊಣಾಜೆ ಇದರ ಆಶ್ರಯದಲ್ಲಿ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯುವ ಅಖಂಡ ಭಜನಾ ಸಪ್ತಾಹಕ್ಕೆ ಶನಿವಾರದಂದು ಬೆಳಿಗ್ಗೆ ಬ್ರಹ್ಮಶ್ರೀ ಬಡಾಜೆಬೀಡು ಶ್ರೀ ಗೋಪಾಲಕೃಷ್ಣ ತಂತ್ರಿ ಅವರು ದ್ವೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಒಂದು ವಾರಗಳ ಕಾಲ ನಡೆಯುವ ಅಖಂಡ ಭಜನಾ ಸಪ್ತಾಹವು ಯಾವುದೇ ವಿಘ್ನಗಳಾಗದಂತೆ ಯಶಸ್ವಿಯಾಗಿ ನಡೆಯಲಿ ಹಾಗೂ ಈ ಸೇವೆಯಿಂದ ನಾಡಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೊಣಾಜೆ ಬೀಡಿನ ತಿರುಮಮಲೇಶ್ವರ್ ಭಟ್ ಕೊಣಾಜೆ, ಅಖಂಡ ಭಜನಾ ಸಪ್ತಾಹದ ಅಧ್ಯಕ್ಷರಾದ ರಘುರಾಮ ಕಾಜವ, ಪ್ರಮುಖರಾದ ಶ್ರೀನಿವಾಸ ಕಾಜವ, ದಿವಾಕರ ಭಂಡಾರಿ, ಉಪಾಧ್ಯಕ್ಷರಾದ ಕರುಣಾಕರ ಕಾನ, ರಾಮಕೃಷ್ಣ ಪಟ್ಟೋರಿ, ಸತ್ಯನಾರಾಯಣ ಭಟ್, ಸುಬ್ಬಣ್ಣ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಟ್ಟೋರಿ ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
UN NETWORKS ಕಣಚೂರು: ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಮುಖ್ಯ. ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ನಾನು ತೊಡಗಿಸಿಕೊಳ್ಳುವ ಕಾರ್ಯದಲ್ಲಿ ಕಠಿಣ ಪರಿಶ್ರಮ ಅಗತ್ಯ ಎಂದರು. ಕಣಚೂರು ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಸೈನ್ಸಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಿಗಳಲ್ಲಿ ಸನ್ನಡತೆ ಹಾಗೂವಿತೃನ್ನು ಮೇಲಕ್ಕೆತ್ತುವ ಕ್ರೀಡಾ ಮನೋಭಾವ ಬೇಕು ಹೊರತು ಇತರ ಕ್ರೀಡಾಳುಗಳ ಮನಸ್ಸು ನೋಯದಂತೆ ಅನ್ಯೋನ್ಯತೆಯಿಂದ ಮುನ್ನಡೆಯಬೇಕು ಎಂದು ನುಡಿದರು. ಕ್ರೀಡೆಯಲ್ಲಿ ಶ್ರದ್ಧೆ ಹಾಗೂ ಉತ್ಸುಕತೆ ಬೇಕು. ಈ ದಿನ ಬದುಕಿನಲ್ಲಿ ಮರೆಯಲಾರದ ದಿನವಾಗಬೇಕು. ಮತ್ತೊಮ್ಮೆ ಇಂತಹ ಅವಕಾಶ ವಯಸ್ಸಿನ ಆಧಾರದಲ್ಲಿ ದೊರಕದು ಎಂಬ ಭಾವನೆ ಸದಾ ನಮ್ಮಲ್ಲಿರಬೇಕು ಎಂದರು. ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ಚೇರ್ ಮೆನ್ ಯು.ಕೆ. ಮೋನು,ಟ್ರಸ್ಟಿ ಝೊಹ್ ರಾ ಮೋನು ಹಾಗೂ ಸಹದಾ ರಹಮಾನ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ.ಎಚ್. ಎಸ್. ಡಾ. ಎಚ್. ಎಸ್.…
UN NETWORKS ಕೊಲ್ಯ: ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜ (ರಿ), ಬ್ರಹ್ಮಶ್ರೀ ನಾರಾಯಣ ಗುರು ದ್ಯಾನ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವದ ಅಂಗವಾಗಿ ಗೋಕುಲ್ ರಾಜ್ ಮತ್ತು ಜ್ಯೋತಿರಾಜ್ ಅವರು ನಂದಾ ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು. ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಈಶ್ವರ ಸುವರ್ಣ ಕನೀರ್ ತೋಟ,ಉಪಾಧ್ಯಕ್ಷ ತಿಮ್ಮಪ್ಪ ಬೂಡುಮನೆ, ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್ ಕೊಲ್ಯ,ಜೊತೆ ಕಾರ್ಯ ದರ್ಶಿ ಗಣೇಶ್ ಎಸ್.ಜಿ.ಕೆ, ಕೋಶಾಧಿಕಾರಿ ಸೀತಾರಾಮ.ಎಸ್.ಕರ್ಕೇರ, ಸುರೇಶ್ ಮಾಡೂರು,ಯೋಗೀಶ್ ಕೊಂಡಾಣ,ಶಶಿಕಾಂತ್ ಪರಿಯತ್ತೂರು, ಡಿ.ಎನ್.ರಾಘವ, ತಿಮ್ಮಪ್ಪ ಅಂಚನ್, ಮಾದವ ಕುಂದರ್, ಜಯರಾಮ ಪಿಲಿಕೂರು,ಗೋಪಾಲ ಕೊಂಡಾಣ, ದೇವದಾಸ ಮಡ್ಯಾರ್,ಗೋಪಾಲ ಕೃಷ್ಣ ಸೋಮೇಶ್ವರ್,ಪುರುಷೋತ್ತಮ ಅಡ್ಕ,ರಮಾನಾಥ ಕೋಟೆಕಾರ್, ಯಶೋಧರ ಕನೀರ್ ತೋಟ, ರಾಮ ಪರಿಯತ್ತೂರು, ತುಕಾರಾಮ್ ಎನ್, ಆನಂದ ಎಸ್ ಕೊಂಡಾಣ, ಮಾದವ ಪರಿಯತ್ತೂರು, ಶೇಷಪ್ಪ ಬೈದ್ಯರ ಮನೆ, ಎಚ್.ಶ್ರೀಧರ್,ಜಯಂತ್ ಪರಿಯತ್ತೂರು ಮೊದಲಾದವರು ಉಪಸ್ಥಿತರಿದ್ದರು.
UN NETWORKS ಪಟ್ಟೋರಿ : ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ ಕೊಣಾಜೆ ಇದರ ಆಶ್ರಯದಲ್ಲಿ ಶನಿವಾರದಿಂದ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಅಸೈಗೋಳಿಯಿಂದ ಪಟ್ಟೋರಿಯವರೆಗೆ ಶನಿವಾರ ನಡೆಯಿತು.
UN NETWORKS ಕೊಣಾಜೆ: ರಂಗಭೂಮಿ ದೇಹ ಮತ್ತು ಆತ್ಮಗಳ ಸಮರಸದ ಸಂಯೋಗದಿಂದ ರೂಪುಗೊಳ್ಳುವ ಕಲೆ. ಕಲಾವಿದನ ಭಾವಾಭಿನಯ, ಪರಕಾಯ ಪ್ರವೇಶ ಹಾಗೂ ಪಾತ್ರ ತಾದಾತ್ಮ್ಯಗಳು ಮನರಂಜನೆಯ ಜೊತೆಗೆ ಮನೋವಿಕಾಸವನ್ನುಂಟು ಮಾಡುತ್ತದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಸದಾನಂದ ಸುವರ್ಣ ಹೇಳಿದರು. ಅವರು ಗುರುವಾರ ಮುಂಬಯಿ ವಿಶ್ವವಿದ್ಯಾನಿಲಯದಕನ್ನಡ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಯೋಗದೊಂದಿಗೆ ಮುಂಬಯಿ ವಿಶ್ವವಿದ್ಯಾನಿಲಯದ ಜೆ.ಪಿ ನಾಯಕ್ ಸಭಾಭವನದಲ್ಲಿ ನಡೆದ ಪ್ರಚಾರೋಪನ್ಯಾಸ ಮಾಲಿಕೆಯಲ್ಲಿ ಮುಂಬಯಿ ಕನ್ನಡ ರಂಗಭೂಮಿಯ ಕುರಿತು ಮಾತನಾಡಿದರು. ಮುಂಬಯಿಯಲ್ಲಿ ಮರಾಠಿ ರಂಗಭೂಮಿ ಮತ್ತು ಕನ್ನಡ ರಂಗಭೂಮಿ ಕೊಡುಕೊಳ್ಳುವಿಕೆಯ ಮೂಲಕ ಬೆಳೆದಿದ್ದು ಆಧುನಿಕ ಮರಾಠಿ ಚಲನಚಿತ್ರ ರಂಗಕ್ಕೆ ಸಾಕಷ್ಟು ಪ್ರೇರಣೆಗಳನ್ನು ಒದಗಿಸಿದೆ. ವರ್ತಮಾನದಲ್ಲಿ ಸಂಘಟಕರ ಕೊರತೆ ರಂಗಭೂಮಿಯ ಚಟುವಟಿಕೆಗಳ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದರು. ಸಮಾರಂಭದಲ್ಲಿ ಮುಂಬಯಿ ಕನ್ನಡ ವಿಭಾಗದ ಅಧ್ಯಕ್ಷರಾದ ಡಾ. ಜಿ. ಎನ್ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಮತ್ತು ಮುಂಬಯಿಯ ನಡುವೆ ನಿಕಟ ಸಂಬಂಧವಿದ್ದು ಸಾಂಸ್ಕøತಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಂಪರ್ಕಗಳು…

