Author: UllalaVani

Kannada News From Coastal Karnataka

UN NETWORKS ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿಗೆ ಅನುದಾನಗಳನ್ನು ಯೋಚನೆ ಮಾಡಿ ಬಿಡುಗಡೆಗೊಳಿಸುತ್ತಿದೆ. ಇದರಿಂದ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಠಿತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿದ್ದಾರೆ. ಅವರು ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರದ ನವೀಕರಣಗೊಂಡ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಎರಡು ವರ್ಷದಿಂದ ಜನ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀರಿಗೆ ಅನುದಾನವೇ ಒದಗಿಸಿಲ್ಲ. ಆದರೂ ಕ್ಷೇತ್ರವ್ಯಾಪಿ ನೀರಿನ ಸಮಸ್ಯೆ ಈಡೇರಿದೆ ಎಂದು ಅಪಪ್ರಚಾರ ನಡೆಸುತ್ತಾ ಬರಲಾಗುತ್ತಿದೆ. ಪಂಚಾಯಿತಿನ ಯಾವುದೇ ಸದಸ್ಯರಿಗೂ ಅನುದಾನ ಬಾರದಿರುವುದು ಖೇದಕರ. ಉಪಕೇಂದ್ರದಲ್ಲಿ ಹಂಚಿನ ಮಹಡಿ ಇದ್ದಂತಹ ಸಂದರ್ಭ ಮಳೆಗಾಲದಲ್ಲಿ ಸೋರಿಕೆ ಉಂಟಾಗಿ ಸಿಬ್ಬಂದಿ ಬಹಳಷ್ಟು ಕಷ್ಟಪಟ್ಟಿದ್ದರು. ಇದನ್ನು ಮನಗಂಡು ಜಿಲ್ಲಾ ಪಂಚಾಯಿತಿನಿಂದ ಹೆಚ್ಚಿನ ಮುತುವರ್ಜಿ ವಹಿಸಿ ನವೀಕರಣಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದೇಶ್…

Read More

UN NETWORKS ಉಳ್ಳಾಲ: ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ, ಅಧಿಕಾರ ವಹಿಸಿಕೊಂಡ ತಕ್ಷಣ ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸುವುದಾಗಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಮುನ್ನೂರು ಗ್ರಾಮ ಪಂಚಾಯಿತಿನ ಕಾಂಕ್ರೀಟಿಕರಣಗೊಂಡ ಭಂಡಾರಬೈಲಿನ ಶ್ರೀ ಪಂಜಂದಾಯ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮೂಲಭೂತ ಸೌಕರ್ಯದ ಕೊರತೆಯ ಲಿಸ್ಟ್ ತಯಾರಿಸಿ ಅದಕ್ಕೆ ಅನುದಾನ ಮೀಸಲಿರಿಸಿ ಕಾಂಕ್ರೀಟಿಕರಣ ನಡೆಸಲಾಗಿದೆ. ಸೋಮೇಶ್ವರ ಜಿಲ್ಲಾ ಪಂಚಾಯಿತಿ ಬಹುದೊಡ್ಡ ವ್ಯಾಪ್ತಿಯನ್ನು ಪಡೆದುಕೊಂಡಿರುವುದರಿಂದ ವಿವಿದೆಡೆ ಅನುದಾನಗಳನ್ನು ಪೂರೈಸಲು ಅಸಾಧ್ಯವಾಗಿದೆ. ಆದರೂ ಸರಕಾರ ಕೈಂiÀiಲ್ಲಿ ಇಲ್ಲದಿದ್ದರೂ ವಿವಿಧ ಇಲಾಖೆಗಳಿಗೆ ಅಲೆದಾಡಿ ಗ್ರಾಮೀಣ ಪ್ರದೇಶಗಳ ಒಳರಸ್ತೆ ಕಾಂಕ್ರೀಟಿಕರಣ ನಡೆಸಿರುವ ಜಿಲ್ಲಾ ಪಂಚಾಯಿತಿ ಸದಸ್ಯೆ ಕಾರ್ಯ ಶ್ಲಾಘನೀಯ ಎಂದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಗ್ರಾಮದ ಅವ್ಯವಸ್ಥೆಯನ್ನು ಮನಗಂಡು ಪಂಚಾಯಿತಿ ಸದಸ್ಯರು ಸುಸಜ್ಜಿತ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ತಮ್ಮ ಕಾರ್ಯವೈಖರಿಯಿಂದ ಜಿಲ್ಲಾ…

Read More

UN NETWORKS ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಮುಂದಿರಿಸಿ ವೋಟು ಪಡೆಯುವ ಷಡ್ಯಂತ್ರ ನಡೆಯುತ್ತಿದೆ . ಆದರೆ ಅಧಿಕಾರ ಬಂದ ತಕ್ಷಣ ಮುಖ್ಯಮಂತ್ರಿ ಪಟ್ಟವನ್ನು ಬೇರೆಯವರಿಗೆ ಕಾಂಗ್ರೆಸ್ ನೀಡಲಿದೆ. ಅದಕ್ಕಾಗಿ ರಾಜ್ಯದ 6 ಕ್ಷೇತ್ರಗಳಲ್ಲಿ ಎಸ್ ಡಿಪಿಐ ಬೆಂಬಲಿತರು ಗೆದ್ದಲ್ಲಿ ಅಹಿಂದ ಹೋರಾಟಗಾರ ಹಾಗೂ ಸಂಘಪರಿವಾರವನ್ನು ಕಟುವಾಗಿ ವಿರೋಧಿಸಿರುವ ಸಿದ್ಧರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿಸಲು ಎಸ್ ಡಿಪಿಐ ಬೆಂಬಲಿಸಲಿದೆ ಎಂದು ಎಸ್‍ಡಿಪಿಐ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಹೇಳಿದ್ದು, ಇದೀಗ ಹೆಸರಾಂತ ವೀವ್‍ಲೈವ್. ಟಿವಿ ಪ್ರಸಾರ ಮಾಡಿದ ವೀಡಿಯೋ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ವೀಡಿಯೋ ಕುತೂಹಲ ಕೆರಳಿಸಿದೆ. ಕರ್ನಾಟಕ ಕೇರಳ ಗಡಿಭಾಗ ತಲಪಾಡಿಯಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಚೇರಿ ಮತ್ತು ಮಾಹಿತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದರು. ಎರಡನೇ ಬಾರಿಗೆ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವಿದೆ. ಸಿದ್ಧರಾಮಯ್ಯ ಅವರು ಕಾಂಗ್ರೆಸ್ಸಿಗರು ಅನ್ನುವ ಗೌರವವಿಲ್ಲ,…

Read More

UN NETWORKS ಉಳ್ಳಾಲ: ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರನ್ನು ಉಗ್ರಗಾಮಿಗಳೆಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವಕಾಂಗ್ರೆಸ್ ವತಿಯಿಂದ ಸಹಾಯಕ ಪೊಲೀಸ್ ಆಯುಕ್ತರಲ್ಲಿ ದೂರು ಸಲ್ಲಿಸಲಾಯಿತು. ತೊಕ್ಕೊಟ್ಟು ಕಲ್ಲಾಪುವಿನಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಅವರಲ್ಲಿ ದೂರು ಸಲ್ಲಿಸಿದ ಕಾರ್ಯಕರ್ತರು ಸಂಪುಟ ದರ್ಜೆಯ ಮಂತ್ರಿಗಳನ್ನು ಉಗ್ರಗಾಮಿಗಳು ಎಂದು ಹೇಳುತ್ತಾ, ಯಾವ ಭಯೋತ್ಪಾದಕರಿಗೂ ಕಡಿಮೆಯಿಲ್ಲ ಅನ್ನುವ ಹೇಳಿಕೆ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರುವುದರ ಮೂಲಕ ಸರಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದರಿಂದ ಧರ್ಮಗಳ ನಡುವೆ ದ್ವೇಷ ಭಾವನೆ ಕೆರಳಿಸುವ ಕೆಲಸವಾಗಿದೆ. ಇದು ಸಮಾಜದ ಸಾಮರಸ್ಯಕ್ಕೆ ಭಂಗ ಹಾಗೂ ಮಂತ್ರಿಗಳ ವ್ಯಕ್ತಿತ್ವ , ಹೆಸರಿಗೆ ಹಾಗೂ ಘನತೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಯಾಗಿದೆ. ದೇಶದ್ರೋಹಿ ಹೇಳಿಕೆ ನೀಡಿರುವ ರವಿ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ…

Read More

UN NETWORKS ಉಳ್ಳಾಲ: ಅಲ್ಲಿರುವ 25 ಮನೆಗಳ ಮಂದಿ ಮಣ್ಣು ಮಿಶ್ರಿತ ಕೆಂಪು ಬಣ್ಣ ತಾಳಿರುವ ನೀರನ್ನೇ ಕುಡಿಯಬೇಕಿದೆ. ಕಳೆದ 12 ವರ್ಷಗಳ ಸಮಸ್ಯೆಗೆ ಈವರೆಗೂ ಸಂಬಂಧಪಟ್ಟ ಉಳ್ಳಾಲ ನಗರಸಭೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ, ವಾರದೊಳಗೆ ಕಲುಷಿತ ನೀರು ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ನಗರಸಭೆ ಎದುರುಗಡೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಉಳ್ಳಾಲ ನಗರಸಭೆ ವ್ಯಾಪ್ತಿಯ ಅಬ್ಬಂಜರದ ದಲಿತ ಕಾಲನಿ ನಿವಾಸಿಗಳು ಹಾಕಿದ್ದಾರೆ. ಹಳೇಯ ಟ್ಯಾಂಕಿನಿಂದ 25 ಮನೆಮಂದಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. 20 ವರ್ಷಕ್ಕಿಂತಲೂ ಹಳೇಯದಾದ ಟ್ಯಾಂಕ್ ಹಾಗೂ ಪೈಪ್‍ಲೈನ್ ನಾದುರಸ್ತಿಯಿಂದ ಕಲುಷಿತ ನೀರು ಬರುತ್ತಿದೆ . ಕೆಸರಿನಿಂದ ಕೂಡಿದ ನೀರು ಕುಡಿಯಲು ಬಟ್ಟೆ ಒಗೆಯಲು ಉಪಯೋಗಿಸಬೇಕಿದೆ. ಪಾತ್ರೆಗಳಲ್ಲಿ ನೀರು ಹಾಕಿದಲ್ಲಿ ಪಾತ್ರೆಯ ಬಣ್ಣವೇ ಬದಲಾಗುವ ಸ್ಥಿತಿಯಿದೆ. ಬಟ್ಟೆ ಒಗೆದರೂ ಬಿಳಿ ಬಣ್ಣದ ಬಟ್ಟೆ ಕೆಂಪು ಬಣ್ಣ ಪಡೆಯುತ್ತಿದೆ. ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ 2007ರಿಂದ ದಲಿತ ಕಾಲನಿ ನಿವಾಸಿಗಳು ಮನವಿ ಮಾಡುತ್ತಲೇ ಬಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಅನುದಾನದ ಕೊರತೆಯಿದೆ…

Read More

UN NETWORKS ಉಳ್ಳಾಲ: ಯುನಾೈಟೆಡ್ ಸೋಶಿಯಲ್ ಮೂವ್‍ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಆಶ್ರಯದಲ್ಲಿ ಸಚಿವ ಯು.ಟಿ. ಖಾದರ್, ಉಳ್ಳಾಲ ನಗರಸಬಾ ಅಧ್ಯಕ್ಷ ಹುಸೈನ್ ಕುಂಇಮೋನು, ಮತ್ತು ಉಳ್ಳಾಲ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುನಾೈಟೆಡ್ ಸೋಶಿಯಲ್ ಮೂವ್‍ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಗೌರವಾಧ್ಯಕ್ಷ ಎಚ್. ಎಚ್. ಖಾದರ್, ಅಧ್ಯಕ್ಷ ಯು.ಕೆ. ಆಹ್ಮದ್ ಬಾವ ಕೊಟ್ಟಾರ, ಕೋಶಾಧಿಕಾರಿ ನೌಷಾದ್ ಅಬೂಬಕ್ಕಾರ್ , ಟ್ರಸ್ಟಿಗಳಾದ ಹನೀಫ್ ಸೋಲಾರ್, ಅಬ್ದುಲ್ಲಾ ಬಸ್ತಿಪಡ್ಪು, ರಫೀಕ್ ಮೇಲಂಗಡಿ, ರಫೀಕ್ ಸುಂದರಿಭಾಗ್, ಅಬ್ದುಲ್ ರಹ್ಮಾನ್, ಇಬ್ರಾಹಿಂ ಬಿಎಫ್‍ಸಿ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಜೀವನದಲ್ಲಿ ದೂರದೃಷ್ಟಿ , ಭಾವನಾತ್ಮಕ, ಆಧ್ಯಾತ್ಮಿಕ , ಬೌತಿಕ ಗುಣಗಳನ್ನು ಸ್ಥಾಪಿಸುವುದರ ಜತೆಗೆ ತಾಂತ್ರಿಕವಾಗಿ ಮುಂದುವರಿದಲ್ಲಿ ಯಶಸ್ಸು ಖಂಡಿತ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ| ಎಂ.ಯಸ್.ಮೂಡಿತ್ತಾಯ ಹೇಳಿದ್ದಾರೆ. ಅವರು ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಾದ ಬಿಎಸ್ಸಿ. ಎಂಎಲ್ ಟಿ, ಬಿಎಸ್ಸಿ ಎಂಐಟಿ ಮತ್ತು ಬಿಎಸ್ಸಿ. ಎ ವಿಭಾಗಗಳ ಕಾಲೇಜು ದಿನಾಚರಣೆಯನ್ನು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಜೀವನದಲ್ಲಿ ಕಾಲೇಜು ದಿನ ಅನ್ನುವುದು ಜೀವನದುದ್ದಕ್ಕೂ ನೆನಪಿರುವ ವಿಚಾರ. ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ಪ್ರತಿಭೆಗಳ ಪ್ರದರ್ಶನಗಳಿಗೆ ಕಾರ್ಯಕ್ರಮ ವೇದಿಕೆಯಾಗಿರುತ್ತದೆ, ಜೀವನದಲ್ಲಿ ಮೌಲ್ಯ ಸ್ಥಾಪನೆಗೆ ವಿಭಿನ್ನವಾಗಿ ಚಿಂತಿಸುವ ಮನೋಭಾವ ಬೆಳೆಸಿ, ವಿಫಲತೆಗಳು ಎದುರಾಗುವುದು ಸಾಮಾನ್ಯ ಆದರೆ ಯಶಸ್ಸಿನ ದೂರದೃಷ್ಟಿ ಎಂದಿಗೂ ಇರಬೇಕಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗುವ ಮೂಲಕ ಇತರರನ್ನು ಆರೋಗ್ಯವಂತರಾಗಿಸಬಹುದು. ಆಯ್ಕೆಗಳು ಜೀವನದಲ್ಲಿ ಬೆನ್ನಟ್ಟುತ್ತಲೇ ಇರುತ್ತವೆ. ಉತ್ತಮ ಆಯ್ಕೆಗಳನ್ನು ನಡೆಸಿದಲ್ಲಿ ಯಶಸ್ಸಿನ ಹಾದಿ ಬೆನ್ನಟ್ಟಿದರೆ, ಕೆಟ್ಟ ಆಯ್ಕೆಗಳನ್ನು…

Read More

UN NETWORKS ಉಳ್ಳಾಲ: ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ವಾಸವಿರುವ ಬಡವರಿಗೆ ಹಕ್ಕುಪತ್ರ ವಿತರಿಸಲು ಹಣದ ಅವಶ್ಯಕತೆಯಿಲ್ಲ, ಅದರ ಬದಲು ಸರ್ಕಾರಕ್ಕೇ ಆದಾಯ ಬರುವಂತಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭಾ ಮಹತ್ಮಾ ಗಾಂಧಿ ರಂಗಮಂದಿಯಲ್ಲಿ ಬುಧವಾರ ನಡೆದ ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ, ಶೇ.24.10, 3 ಮತ್ತು 7.25ರಡಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳು ಹಾಗೂ 94ಸಿಸಿಯಡಿ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲೇ ಬಡವರ ಮನೆಗಳಿಗೆ ಭದ್ರತೆ ನೀಡುವ ಹಕ್ಕುಪತ್ರ ವಿತರಿಸುವಂತೆ ವಿದಾನಸಭೆಯಲ್ಲಿ ಮನವಿ ಮಾಡಲಾಗುತ್ತಿತ್ತು. ಆದರೆ ಆ ಸಂದರ್ಭ ಆಡಳಿತ ನಡೆಸುತ್ತಿದ್ದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ನಮ್ಮ ಮನವಿ ಕೇಳುವ ಪುರುಸೊತ್ತೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ನಗರ ಸಭಾಧ್ಯಕ್ಷ ಹುಸೈನ್ ಕುಂಞಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಕಲಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಜೇನ್ ಶಾಂತಿ ಡಿಸೋಜ, ಸದಸ್ಯರಾದ ಫಾರೂಕ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ಮುಸ್ತಫಾ ಅಬ್ದುಲ್ಲಾ, ದಿನೇಶ್…

Read More

UN NETWORKS ದೇರಳಕಟ್ಟೆ: ನಿಟ್ಟೆ ಔಷಧೀಯ ಮಹಾವಿದ್ಯಾಲಯದಲ್ಲಿ ಕೆರಿಯರ್ ಅಡ್ವಾಂಸ್ ಮೆಂಟ್ ಪ್ರೊಫೆಷನಲ್ ಡೆವಲಪ್‍ಮೆಂಟ್ ಆಂಡ್ ಪರ್ಸನಲ್ ಎಕ್ಸ್‍ಲೆಂಸ್ ಒಂದು ದಿನದ ವಿಚಾರ ಸಂಕೀರ್ಣ ನಡೆಯಿತು. ನಿಟ್ಟೆ ವಾಸ್ತುಶಿಲ್ಪಿ ವಿಭಾಗದ ಮುಖ್ಯಸ್ಥ ವಿನೋದ್ ಅರನ್ಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎಮ್.ಎಸ್. ಮೂಡಿತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಶಾಸ್ತ್ರಿ, ಉಪಪ್ರಾಂಶುಪಾಲ ನಾರಾಯಣ ಚಾರ್ಯುಲು, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಧನೇಶ್ ಕುಮಾರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರಘನಾಥ್ ರಾವ್, ಶ್ರೀಧರ್ ಡಿ., ಎಲ್.ಎಸ್. ಗಣೇಶ್ ಭಾಗವಹಿಸಿದ್ದರು. ಸಹ ಪ್ರಾಧ್ಯಾಪಕ ವಿಜಯ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸೋನಾಲ್ ಡಿ’ಸೋಜಾ ನಿರೂಪಿಸಿದರು.

Read More

UN NETWORKS ಉಳ್ಳಾಲ: ಉಳ್ಳಾಲ ಸಮುದ್ರತೀರದಲ್ಲಿ ಅಲೆಗಳ ರಭಸ ಶುಕ್ರವಾರ ಮಧ್ಯಾಹ್ನದಿಂದ ಹೆಚ್ಚಾಗಿದ್ದು, ಮೀನುಗಾರಿಕೆಗೆ ತೆರಳಿರುವ ದೋಣಿಗಳು ವಾಪಸ್ಸಾಗುತ್ತಿದ್ದಾರೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮುಳುಗಡೆಯಾಗಿರುವ ಬಾರ್ಜ್ ಮೇಲೆತ್ತುವ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮಧ್ಯಾಹ್ನದಿಂದಲೇ ದೋಣಿ ಮೂಲಕ ವಾಪಸ್ಸಾಗಿದೆ. ಉಳ್ಳಾಲದ ಮೊಗವೀರಪಟ್ನ, ಸುಭಾಷನಗರ, ಕೋಟೆಪುರ, ಮುಕ್ಕಚ್ಚೇರಿ, ಕೈಕೋ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮೀನುಗಾರಿಕೆಗೆ ತೆರಳಿರುವ ಮೀನುಗಾರ ದೋಣಿಗಳು ಸಂಜೆ ವೇಳೆ ವಾಪಸ್ಸಾಗಿದೆ. ಆಳಸಮುದ್ರದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಪಾಯದ ಮುನ್ಸೂಚನೆ ಅರಿತು ವಾಪಸ್ಸಾಗುತ್ತಿದ್ದಾರೆ. 2017ರ ಜೂ. 4 ರಂದು ಕಡಲ್ಕೊರೆತ ಶಾಶ್ವತ ತಡೆಗೋಡೆಯ ಕಾಮಗಾರಿ ನಡೆಸುತ್ತಿದ್ದ ಬಾರ್ಜ್ ಮುಳುಗಡೆಯಾಗಿತ್ತು. ಅದರಲ್ಲಿದ್ದ 27 ಮಂದಿ ಕಾರ್ಮಿಕರನ್ನು ಕರಾವಳಿ ಕಾವಲು ಪಡೆ ರಕ್ಷಿಸಿತ್ತು. ಸಮುದ್ರದ ಅಲೆಗಳ ಅಬ್ಬರಕ್ಕೆ ತಡೆಗೋಡೆಯ ಕಲ್ಲುಗಳ ಮೇಲೆ ಸಿಲುಕಿದ್ದ ಬಾರ್ಜ್ ಮೇಲೆತ್ತುವ ಕಾರ್ಯ ಅಸಾಧ್ಯವಾಗಿತ್ತು. 2018ರ ಮಾರ್ಚ್ ತಿಂಗಳಿನಿಂದ ಬಾರ್ಜ್ ಒಳಗಡೆಯಿರುವ ಸೊತ್ತುಗಳನ್ನು ಖಾಲಿ ಮಾಡುವ ಕೆಲಸ ಆರಂಭವಾಗಿದೆ. ಶುಕ್ರವಾರ ಮತ್ತೆ ಸಮುದ್ರದಲ್ಲಿ…

Read More