Author: UllalaVani

Kannada News From Coastal Karnataka

UN NETWORKS ಮಂಗಳೂರು : ಸುನ್ನೀ ಸಂದೇಶ ಮಾಸ ಪತ್ರಿಕೆಯ 16ನೇ ವಾರ್ಷಿಕ ಮಹಾ ಸಂಭ್ರಮ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಬೆಳ್ಮ ರೆಂಜಾಡಿ ಶಾಖೆಯ 18ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ  ಮಾರ್ಚ್ 15ರಿಂದ 25ರ ತನಕ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ 10 ದಿವಸಗಳ ಪ್ರಚಾರ ಕಾರ್ಯಕ್ರಮದ ಮಾದಕ ದ್ರವ್ಯದ ವಿರುದ್ಧ ಲಹರಿ ಮುಕ್ತ ಸಮಾಜ ಎಂಬ ಘೋಷಣೆಯೊಂದಿಗೆ ನಡೆಯುವ ಜನಾಂದೋಲನವನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಸುನ್ನೀಸಂದೇಶ ಮಾಸ ಪತ್ರಿಕೆಯ ನಿರ್ದೇಶಕರು, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರು, ಕಾರ್ಯಕ್ರಮದ ಕೋಶಾಧಿಕಾರಿಯು ಆದ ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರುರವರು ಶಿಕಾರಿಪುರದ ರುದ್ರಭೂಮಿಗಳ ಸಮಿತಿ ಅಧ್ಯಕ್ಷರೂ ಝುಲೈಕ ಚಾರಿಟೇಬಲ್ ಟ್ರಸ್ಟಿ ಮಾಜಿ ಅಧ್ಯಕ್ಷರು ಆದ ಹನೀಫ್ ಹಾಜಿ ಶಿಕಾರಿಪುರ ಹಾಗೂ ಶಿಕಾರಿಪುರ ಮುಸ್ಲಿಂ ಜಮಾಅತಿನ ಅಧ್ಯಕ್ಷರಾದ ಫಾರೂಕ್ ಶಿಕಾರಿಪುರರವರಿಗೆ ಮಾದಕ ದ್ರವ್ಯದ ವಿರುದ್ಧ ಹೊರತಂದ ಕಿರುಹೊತ್ತಿಗೆಯನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್…

Read More

UN NETWORKS ಉಳ್ಳಾಲ: ಮೂಲಭೂತ ಹಕ್ಕುಗಳಲ್ಲಿ ಮತದಾನದ ಹಕ್ಕು ಕೂಡಾ ಒಂದು. ವಿದ್ಯಾರ್ಥಿನಿಯರು ಮತದಾನ ಹಕ್ಕಿನ ಬಗ್ಗೆ ನಿರ್ಲಕ್ಷಿಸದೆ, 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿನಿಯರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ನ್ಯಾಯವಾದಿ ಮತ್ತು ನೋಟರಿ ಚಂದ್ರಹಾಸ್ ಕೆ. ತಿಳಿಸಿದರು. ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಪದವಿ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಮತದಾನ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮದ್ ಯು.ಟಿ., ನ್ಯಾಯವಾದಿ ಮಧುಸೂದನ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯವಿಭಾಗದ ಉಪನ್ಯಾಸಕಿ ಜಯಶ್ರೀ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಸಂಧ್ಯಾ ವಂದಿಸಿದರು.

Read More

UN NETWORKS ಉಳ್ಳಾಲ: ಪ್ರತೀ ನಾಗರಿಕರಲ್ಲಿ ತುರ್ತು ಚಿಕಿತ್ಸೆಯ ಬಗ್ಗೆ ಅರಿವು ಮೂಡಿದಲ್ಲಿ ಎಷ್ಟೋ ಪ್ರಾಣಗಳನ್ನು ಉಳಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ಸಾಮಾನ್ಯ ಜ್ಞಾನ ಮೂಡಬೇಕು ಎಂದು ಕಣಚೂರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ತಜ್ಞ ವೈದ್ಯ ಡಾ| ಸಯ್ಯದ್ ಹನನ್ ಅಭಿಪ್ರಾಯಪಟ್ಟರು. ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಸಯನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ಭಾಗವಾಗಿ ಜ್ವರ, ಹಾವು ಕಚ್ಚಿದಾಗ, ತಲೆಸುತ್ತು ಬಂದಾಗ, ಹೃದಯಾಘಾತವಾದಾಗ, ವಿಷಜಂತು ಕಚ್ಚಿದಾಗ, ಮಕ್ಕಳಿಗೆ ವಾಂತಿ ಆದಾಗ, ಮಕ್ಕಳು ಮತ್ತು ದೊಡ್ಡವರ ಗಂಟಲಲ್ಲಿ ಘನವಸ್ತು ಸಿಕ್ಕಿಹಾಕಿಕೊಂಡಾಗ ಜೀವರಕ್ಷಿಸಲು ಮಾಡಬೇಕಾದ ಪ್ರಥಮ ಚಿಕಿತ್ಸಾ ವಿಧಾನವನ್ನು ಪ್ರಯೋಗಾತ್ಮಕವಾಗಿ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಕಲಿಸಿಕೊಟ್ಟರು. ಸಮಾಜಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು. ಕಣಚೂರು ಆಸ್ಪತ್ರೆಯ ನರ್ಸಿಂಗ್ ವಿಭಾಗದ ಸ್ವಾತಿ ಮತ್ತು ಆರ್ಯ ಕಾರ್ಯಕ್ರಮ ಸಂಯೋಜಿಸಿದ್ದರು. ಅರ್ಥಶಾಸ್ತ್ರ ವಿಭಾಗದ…

Read More

UN NETWORKS ಕುಂಪಲ: ಡಾಮರೀಕರಣದ ಜನರ ಬಹಳ ವರ್ಷದ ಬೇಡಿಕೆ ಈಡೇರಿದೆ, ಮುಂದಿನ ದಿನಗಳಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು,ಹೆಚ್ಚುವರಿ ಅನುದಾನ ಸಿಗುವುದರಿಂದ ಈ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ದೊರಕಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಕುಂಪಲ ವಿಜಯ ನಗರ ಲಕ್ಷ್ಮಿಗುಡ್ಡೆ ಸಂಪರ್ಕಿಸುವ ರಸ್ತೆಗೆ ಡಾಮರೀಕರಣಕ್ಕೆ ಚಾಲನೆ ಮಾತನಾಡಿ ಈಗಾಗಲೇ ಆಶ್ರಯ ಕಾಲನಿಯಲ್ಲಿ 25 ಲಕ್ಷ ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ. ಯೇನೆಪೊಯದಿಂದ ಆಶ್ರಯ ಕಾಲನಿ ರಸ್ತೆ ಅಭಿವೃದ್ಧಿ, ವಿದ್ಯಾನಗರ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಿದ್ದು, ಮುಂದಿನ ದಿನಗಳಲ್ಲಿ ಅಡ್ಡ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ಊರಿನ ಹಿರಿಯರಾದ ನಾರಾಯಣ್ ಶಿಲಾನ್ಯಾಸ ನೆವೇರಿಸಿದರು. ಈ ಸಂದರ್ಭದಲ್ಲಿ ಕಿಶೋರ್, ಅರುಣ್ ಆಚಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸದಾಶಿವ ಉಳ್ಳಾಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಹಿಂದುಳಿದ ವರ್ಗಗಳ ಅಧ್ಯಕ್ಷ ದಿನೇಶ್ ಕುಂಪಲ, ಪಂಚಾಯತ್ ಸದಸ್ಯ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ,…

Read More

UN NETWORKS ಉಳ್ಳಾಲ: ಸ್ಥಳೀಯ ಸ್ಥಳದಾನಿಗಳು ರಸ್ತೆ ನಿರ್ಮಾಣಕ್ಕೆ ಸ್ಥಳ ನೀಡಿದ್ದರಿಂದ ಉಳಿಯ ಪಡ್ಡಾಯಿ ಪ್ರದೇಶದ ಜನರಿಗೆ ರಸ್ತೆ ಸಂಪರ್ಕ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಉಳಿಯದಲ್ಲಿ ಪಡ್ಡಾಯಿ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಉಳ್ಳಾಲ ನಗರಸಭೆಗೆ ಶಾಸಕರ ನಿಧಿಯಿಂದ ಮತ್ತು ನಗರೊತ್ಥಾನ ಅನುದಾನದಲ್ಲಿ ಹಣ ಬಿಡುಗಡೆಯಾಗಿದ್ದು, ಉಳಿಯಕ್ಕೆ ಸುಮಾರು ಒಂದು ಕೋಟಿ ರೂ, ಅನುದಾನ ಇದಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಡ್ಡ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ಈ ಸಂಧರ್ಭದಲ್ಲಿ ಉಳ್ಳಾಲ ನಗರಸಭೆ ಸದಸ್ಯ ಸುಂದರ್ ಉಳಿಯ, ರಾಜೇಶ್ ಗುರಿಕಾರ, ಮಧು ಜೀವನ್, ಪ್ರೇಮ್ ಪ್ರಕಾಶ್ ಡಿ.ಸೋಜ, ವೀಣಾ ಡಿ.ಸೋಜ, ಶೈನಿ ಡಿ.ಸೋಜಾ, ಪಿಯೂಷ್ ಮೊಂತೇರೋ, ಸಮದ್ ಬೋಳಾರ, ಲೂಯಿಸ್ ಡಿಸೋಜ, ಹೆರಾಲ್ಡ್ ಡಿ.ಸೋಜ, ಜಾನ್ ಡಿ,ಸೋಜ, ಲ್ಯಾನ್ಸಿ ಡಿ.ಸೋಜ, ರೊನಾಲ್ಡ್ ಡಿ.ಸೋಜ, ರಾಜೇಶ್ ಬಂಡಸಾಲೆ, ಜೋಯ್ಸ್…

Read More

UN NETWORKS ಉಳ್ಳಾಲ: ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಧಾರ್ಮಿಕ ನಂಬಿಕೆಗೆ ಹೆಚ್ಚಿನ ಒತ್ತನ್ನು ನಗರಭಜನೆ ಕಾರ್ಯಕ್ರಮದ ಮೂಲಕ ನೀಡುವ ಕೆಲಸವಾಗುತ್ತಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಕುಂಪಲ ಶ್ರೀ ಬಾಲಕೃಷ್ಣ ಭಜನಾ ಮಂದಿರದಲ್ಲಿ ಮಾ.24 ಹಾಗೂ 25ರವರೆಗೆ ನಡೆಯಲಿರುವ ಏಕಾಹ ಭಜನೋತ್ಸವ, ಪ್ರತಿಷ್ಠಾ ಮಹೋತ್ಸವ, ಸಾಮೂಹಿಕ ತುಳಸಿ ಅರ್ಚನೆ ಹಾಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಮತ್ತು ನಗರಭಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುಂಪಲದ ಶ್ರೀ ಬಾಲಕೃಷ್ಣ ಭಜನಾ ಮಂದಿರ ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಏಕಾಹ ಭಜನಾ ಕಾರ್ಯಕ್ರಮದ ನಿಮಿತ್ತ ಒಂಭತ್ತು ದಿನಗಳ ಕಾಲ ಕುಂಪಲ ವ್ಯಾಪ್ತಿಯಲ್ಲಿ ನಗರಭಜನೆ ನಡೆಯಲಿದೆ. 1,200 ಮನೆಗಳಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ.24 ರಂದು ಏಕಾಹ ಭಜನಾ ಹಾಗೂ ಮಾ.25 ರಂದು ಮಹಾಪೂಜೆ ಹಾಗೂ ಮಂದಿರದ…

Read More

UN NETWORKS ಮುಡಿಪು : ಮುಡಿಪು ಪೇಟೆಯಲ್ಲಿ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ನೇತೃತ್ವ ವಹಿಸಿದರು.

Read More

UN NETWORKS ಉಳ್ಳಾಲ: ಭಯಮುಕ್ತ ಮತ್ತು ಹಸಿವುಮುಕ್ತ ಭಾರತ ಕಟ್ಟಬೇಕಾಗಿದೆ. ಮಾನವೀಯತೆಯ ಸೇವೆ ಒದಗಿಸಬೇಕಿದೆ . ಭಾರತದ ಸಂಸ್ಕೃತಿಯಾದ ಗಂಗಾ, ಜಮುನಾ, ತಹಬೀಝ್ ಒಡೆಯಲು ಯಾವುದೇ ಚಡ್ಡಿ ಪ್ಯಾಂಟಿನವರು ಬಂದರೂ ಬಿಡಬಾರದು ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದ್ದಾರೆ. ಅವರು ಎಸ್‍ಡಿಪಿಐ ತಲಪಾಡಿ ವಲಯದ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. 70 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರಕಾರಗಳು ದಲಿತರನ್ನು, ಮುಸ್ಲಿಮರನ್ನು ಗುಲಾಮರಂತೆ ನೋಡುತ್ತಿದೆ. ಆದರೆ ಗುಲಾಮಗಿರಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅನ್ನುವುದನ್ನು ಮನವರಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಪಡೆದಲ್ಲಿ ಯಾರಿಗೂ ತಲೆಬಾಗದೆ ತಮ್ಮ ಹಕ್ಕನ್ನು ತಾವು ಕೇಳಬಹುದು. ಇದಕ್ಕಾಗಿ ಎಸ್ ಡಿಪಿಐ ವೇದಿಕೆಯನ್ನು ಕಲ್ಪಿಸುತ್ತಿದೆ. ಸರಕಾರಗಳು ವೋಟಿಗಾಗಿ ಜಯಂತಿಯನ್ನು ಆಚರಣೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಜನ ಟಿಪ್ಪು ಕುರಿತ ಆದರ್ಶಗಳನ್ನು ಸ್ಮರಿಸಬೇಕಿದೆ. ಕಚೇರಿಯಲ್ಲಿ ಯಾವುದೇ ಪಕ್ಷದವರಿಗೆ, ಜಾತಿಯವರಿಗೂ ಸೇವೆಯನ್ನು ಒದಗಿಸಬೇಕಾಗಿರುವುದು ಕರ್ತವ್ಯ. ಮೋದಿ, ಸಿದ್ಧರಾಮಯ್ಯ, ರಾಹುಲ್ ಗಾಂಧಿ ಮೂಲಕ ಪಕ್ಷದ ನೋಂದಾವಣೆಯನ್ನು ಮಾಡಿಕೊಂಡಿಲ್ಲ.…

Read More

UN NETWORKS ಉಳ್ಳಾಲ: ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆ ನಾಯ್ಕಾಪಿನ ಮೂವರು ಮತ್ತು ಮಧೂರಿನ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡ ಘಟನೆ ರವಿವಾರ ನಸುಕಿನ ಜಾವ ನಡೆದಿದೆ. ಮೃತ ದುದ್ರೈವಿಗಳನ್ನು ಪಲ್ಲಂಗೋಡು ಗಟ್ಟಿ ಸಮಾಜದ ಕುಟುಂಬದ ಯಜಮಾನ ಕುಂಬಳೆ ನಾಯ್ಕಾಪು ನಿವಾಸಿ ಪಕೀರ ಗಟ್ಟಿ ( 72) ಸಹೋದರ ಮಂಜಪ್ಪ ಗಟ್ಟಿ (68), ಇವರ ಪತ್ನಿ ಸುಂದರಿ (55), ಮಧೂರು ಮನ್ನಿಪ್ಪಾಡಿ ನಿವಾಸಿ ಸದಾಶಿವ ಗಟ್ಟಿ (55), ಗಾಯಾಳುಗಳಾದ ಮಧೂರು ನಿವಾಸಿ ಬೋಜ ಗಟ್ಟಿ (70), ಕುಂಬಳೆ ದೇವಿನಗರ ಹರೀಶ್ ಗಟ್ಟಿ (35), ಕುಂಬಳೆ ಎನ್.ಕೆ. ಹೌಸ್ ನಿವಾಸಿ ಲಕ್ಷ್ಮೀ ಗಟ್ಟಿ(65), ಕುಂಟೇಂಗರಡ್ಕ ನಿವಾಸಿ ಮಾಧವ ಗಟ್ಟಿ (48),ಮತ್ತು ವಾಹನ ಚಾಲಕ ಕುಂಟೇಂಗರಡ್ಕ ನಿವಾಸಿ ಉಮೇಶ್ ಗಟ್ಟಿ (45) ಇವರಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ತಿರುಪತಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಹರಕೆ(ಮುಡಿಪು) ತೀರಿಸಲು ತಿರುಪತಿಗೆ : ಗಟ್ಟಿ ಸಮಾಜದ ಮಧೂರು ಪಲ್ಲಂಗೋಡು…

Read More

UN NETWORKS ಉಳ್ಳಾಲ: ಸತತ ಪ್ರಯತ್ನದೊಂದಿಗೆ ಎಲ್ಲರ ಸಹಕಾರ ಇದ್ದರೆ ಯಾವುದೇ ಕಾರ್ಯ ನಿರ್ವಿಘ್ನವಾಗಿ ನಡೆಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಅನ್ನದಾನಂದಹ ಮಹಾತ್ಕಾರ್ಯಕ್ಕೆ ಅನ್ನಛತ್ರ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಳ್ಳಾಲ ವಲಯ ಮೇಲ್ವಿಚಾರಕಿ ಲತಾ ಅಭಿಪ್ರಾಯಪಟ್ಟರು. ಉಳ್ಳಾಲ ಮೊಗವೀರಪಟ್ಣದ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅನ್ನಛತ್ರವನ್ನು ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶ್ರೀ ಕ್ಷೇತ್ರದ ಅನ್ನಛತ್ರಕ್ಕೆ ಪೂಜ್ಯ ಖಾವಂದರು 2ಲಕ್ಷ ರೂ. ನೀಡಿದ್ದಾರೆ ಎಂದ ಅವರು ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಬಿವೃದ್ಧಿಪರ ಕಾರ್ಯಗಳು ಈ ವ್ಯಾಪ್ತಿಯಲ್ಲಿ ನಡೆದಿದೆ ಎಂದರು. ಉಳ್ಳಾಲ ಫಿಶ್‍ಮಿಲ್ ಅಸೋಸಿಯೆಸನ್‍ನ ಅಧ್ಯಕ್ಷ ಖಾದರ್ ಎಚ್.ಕೆ. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ದಯಾನಂದ್ ಚಂದನ್ ಗುರಿಕಾರ. ಉಪಾಧ್ಯಕ್ಷ ಸುರೇಂದ್ರ…

Read More