Author: UllalaVani

Kannada News From Coastal Karnataka

ಕೊಣಾಜೆ : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇದರ ವತಿಯಿಂದ. ಫೆ.21, 22ರಂದು ಮಂಗಳೂರು ವಿವಿ ಆವರಣದಲ್ಲಿ ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಪಂಚಾಯತ್, ಸಾರ್ವಜನಿಕರಿಂದ ಸಂಗ್ರಹಿಸಿದ ಹಸಿರು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ ಅವರು ಮಾತನಾಡಿ, ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿವಿಯಲ್ಲಿ ನಡೆಯಲಿರುವ ಊರ ಹಬ್ಬವಾಗಿ‌, ಉತ್ಸವ ರೂಪದಲ್ಲಿ ನಡೆಯಲಿದ್ದು ಇದಕ್ಕೆ ಪೂರಕವಾಗಿ ಎಲ್ಲಾ ಪಂಚಾಯತ್, ಊರಿನ ನಾಗರಿಂದ ಸಂಪೂರ್ಣ ಸಹಕಾರ ದೊರೆಯಲಿದೆ. ಕಾರ್ಯಕ್ರವು ಎಲ್ಲರ ಸಮನ್ವಯತೆಯ ಪ್ರಯತ್ನಗಳೊಂದಿಗೆ ಯಶಸ್ವಿಯಾಗಿ ನಡೆಯಲಿ ಹಾರೈಸಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಕುಂಬ್ಳೆ ಅವರು, ಸಮ್ಮೆಳನವು ಈ ಊರಿನ ಎಲ್ಲರ ಒಳಗೊಳ್ಳುವಿಕೆಯ ಮೂಲಕ ಆಗಬೇಕು ಎನ್ನುವುದು ನಮ್ಮೆಲ್ಲರ ಕನಸು. ಈ ದೃಷ್ಟಿಯಿಂದ ಗ್ರಾಮ ಎಲ್ಲಾ ಪಂಚಾಯತಿ ವ್ಯಾಪ್ತಿಯಿಂದ ಸಮ್ಮೇಳನಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಫೆ. 21 ಮತ್ತು 22 ರಂದು ನಡೆಸುವ 27 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ಶಿಶಿಲ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದ್ದು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ನಾಡಿನ 13 ಮಂದಿಯನ್ನು ಮತ್ತು ಒಂದು ಸಂಸ್ಥೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಗುವುದು. ಉಡುಪಿಯ ಜಿಲ್ಲಾಧಿಕಾರಿಗಳಾದ ಡಾ. ವಿದ್ಯಾಕುಮಾರಿ ಪಾವೂರು, ಕಾದಂಬರಿಕಾರ ಡಾ. ಪ್ರಭಾಕರ ನೀರುಮಾರ್ಗ, ಮಂಗಳೂರು; ಸಾಮಾಜಿಕ ಮುಖಂಡ ವೆಂಕಪ್ಪ ಕಾಜವ ಮಿತ್ತಕೋಡಿ, ಮುಡಿಪು; ಕಲಾವಿದರಾದ ಎಂ.ಜಿ.ಕಜೆ, ಸುಳ್ಯ; ಲೇಖಕ ಪರಮಾನಂದ ಸಾಲಿಯಾನ್, ಮೂಲ್ಕಿ; ಪತ್ರಕರ್ತ ಧನಂಜಯ ಮೂಡಬಿದಿರೆ; ವರ್ಣಚಿತ್ರ ಕಲಾವಿದ ಮೋನಪ್ಪ, ಪುತ್ತೂರು; ಶಿಕ್ಷಕರು ಮತ್ತು ಕ್ರೀಡಾಪಟುಗಳಾಗಿರುವ ಪ್ರೇಮಾಗೌಡ, ಕಡಬ; ಕರಾವಳಿಯ ಪಾರಂಪರಿಕ ವಸ್ತುಸಂಗ್ರಹಕಾರರಾಗಿರುವ ಶಶಿಕುಮಾರ್ ಭಟ್ ಪಡಾರು, ವಿಟ್ಲ; ಜಲ ಸಂವರ್ಧನ ತಜ್ಞ ಡಾ. ಜೋಸೆಫ್ ಎನ್ ಎಮ್, ಬೆಳ್ತಂಗಡಿ;…

Read More

ಉಳ್ಳಾಲ : ಫೆ-12 ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಅತ್ಯಂತ ಸುಂದರವಾದ ಭಾಷೆಯಾಗಿದೆ.ತುಳು ಭಾಷೆಯ ಲಿಪಿಯೂ ಕೂಡ ದೊರಕಿದೆ. ಸರಕಾರವೂ ಕೂಡ ಸಾಹಿತ್ಯ ಅಕಾಡೆಮಿಯ ಮೂಲಕ ತುಳು ಭಾಷೆಗೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಮಂಗಳೂರು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ರಾಧಾಕೃಷ್ಣ ಕೆ. ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರು ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪಿಲಾರುವಿನ ಪಂಜಂದಾಯ ದೈವದ ಸನ್ನಿಧಿಯ ಮೈದಾನದಲ್ಲಿ ಭಾನುವಾರದಂದು ನಡೆದ ‘ತುಳು ಪರ್ಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನ ಮರೆತ ಪರಿಣಾಮವಾಗಿ ಪೃಕೃತಿಯು ‌ವಿಕೃತಿಯಾಗಿ ಪರಿಣಮಿಸುತ್ತಿದೆ. ನಮ್ಮ ಮೂಲ ಸಂಸ್ಕೃತಿ ,ಸಂಸ್ಕಾರಗಳಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಆಟಗಳು ಇವತ್ತು ಸಂಪೂರ್ಣ ಮರೆಯಾಗಿವೆ. ನಮ್ಮ ಸಾಂಪ್ರದಾಯಿಕ ಆಟಗಳನ್ನ ಇಂದಿನ‌ ಮಕ್ಕಳಿಗೆ ಪರಿಚಯಿಸಬೇಕಿದೆ. ನಾವೆಲ್ಲರೂ ಸಾಧ್ಯವಾದಷ್ಟು ತುಳುವಲ್ಲೇ ಮಾತನಾಡಿ ಮಾತೃ ಭಾಷೆಯನ್ನ ಪ್ರೋತ್ಸಾಹಿಸಿ ಮುಂದಿನ‌ ಪೀಳಿಗೆಗೂ ಪರಿಚಯಿಸಬೇಕು. ತುಳು ಭಾಷೆ, ಜನಪದ ಸಂಸ್ಕೃತಿಯ…

Read More

ಕೊಣಾಜೆ: ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸರ ಮಾಡ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಉಳ್ಳಾಲ್ತಿ ಅಮ್ಮನ ಮುಗ ಹಾಗೂ ಧರ್ಮ ಅರಸರ ಕಿರುವಾಳ್ ಭಂಡಾರದ ಪ್ರತಿಷ್ಠಾ ಕಲಾಷಾಭಿಷೇಕ ಮತ್ತು ಉಳ್ಳಾಲ್ತಿ ಧರ್ಮ ಅರಸರ ‘ಧರ್ಮ‌ನಡಾವಳಿ’ ಮಹೋತ್ಸವ ಮಾರ್ಚ್ ನಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಭಾನುವಾರ ಪಟ್ಟೋರಿ ಉಳ್ಳಾಲ್ತಿ‌ ಕ್ಷೇತ್ರದ ಕೆರೆಯ ಸಮೀಪ ನಡೆಯಿತು.ಕೊಣಾಜೆ ಬೀಡುವಿನ ತಿರುಮಲೇಶ್ವರ ಭಟ್ ಹಾಗೂ ಧರ್ಮ ನಡಾವಳಿ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಮಾತನಾಡಿ, ಈ ಪಟ್ಟೋರಿಯ ನೆಲದಲ್ಲಿ 490 ವರ್ಷಗಳ ಹಿಂದೆ ನಡೆಯುತ್ತಿದ್ದ ಧರ್ಮ ನಡಾವಳಿಯು ಈಗ ಮತ್ತೆ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ, ಭಾಗ್ಯವಾಗಿದೆ. ಸಾನಿಧ್ಯ ಶಕ್ತಿಯಿಂದ ಮಾರ್ಚ್ ನಲ್ಲಿ ನಡೆಯಲಿರುವ ಧರ್ಮ ನಡಾವಳಿಯ ಧಾರ್ಮಿಕ ಕಾರ್ಯವು ದೈವ ದೇವರ ಕೃಪೆಯಿಂದ ಯಶಸ್ವಿಯಾಗಿ ನಡೆಯಲಿದೆ ಜೊತೆಗೆ ಕ್ಷೇತ್ರವೂ ಅಭಿವೃದ್ಧಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಗಡಿಪ್ರಧಾನರಾದ ತಿಮ್ಮಯ್ಯ ಕಾಜವ…

Read More

ಸುರತ್ಕಲ್ : ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್ ನ ನವೀಕರಿಸಿದ ಮಸೀದಿಉದ್ಘಾಟನಾ ಕಾರ್ಯಕ್ರಮ ನಡೆಯಿತು. ನವೀಕರಿಸಿದ ಮೊಹಿಯುದ್ದೀನ್ ಜುಮಾ ಮಸೀದಿಯನ್ನು ಡಾ.ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಅಹ್ದಲ್ ಮುತ್ತನ್ನೂರು ತಂಙಳ್ ಉದ್ಘಾಟಿಸಿದರು. ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ವಕ್ಫ್ ಬೋಡ್೯ ಮಾಜಿ ಅಧ್ಯಕ್ಷ ಮೊಹಮ್ಮದ್ ಶಾಫಿ ಸ ಅದಿ , ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್‌.ಎಂಆರ್ ರಶೀದ್ ಹಾಜಿ, ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಎನ್.ಎಚ್ ಯಾಕೂಬ್ ಮದನಿ ಅಲ್-ಪುರ್ಕಾನಿ, ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಖಿಲ ಭಾರತ ಬಂದರು ಮತ್ತು ದಕ್ಕೆ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಅಬೂಬಕ್ಕರ್, ಡೆಕ್ಕನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ನ ಮಾಲಕ ಹಾಜಿ ಬಿ.ಎಚ್ ಅಸ್ಗರ್ ಅಲಿ, ಸಮಾಜಿಕ ಕಾರ್ಯಕರ್ತ ಇಬ್ರಾಹಿಂ ಗೊಳಿಕಟ್ಟೆ ಅತಿಥಿಯಾಗಿ ಭಾಗವಹಿಸಿದರು.…

Read More

ಉಳ್ಳಾಲ : ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ತೊಕ್ಕೊಟ್ಟು ಪ್ರದೇಶದಲ್ಲಿನ ಬಟ್ಟೆ ಮಳಿಗೆಗಳಲ್ಲಿ ಮುಕುಟ ಕಿರೀಟ ಅನಿಸಿಕೊಂಡಿರುವ ಸಾಗರ್ ಸಿಲ್ಕ್ಸ್ ಆಂಡ್ ಸಾರೀಸ್ ಸಂಪೂರ್ಣ ಮದುವೆ ವಸ್ತ್ರಗಳ ಮಳಿಗೆ ನೂತನ ಕಟ್ಟಡಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು, ನೂತನ ಮಳಿಗೆಯ ಉದ್ಘಾಟನೆ ಫೆ.17 ಕ್ಕೆ ತೊಕ್ಕೊಟ್ಟುವಿನಲ್ಲಿ ನಡೆಯಲಿದೆ .1985 ರಿಂದ ಮದುವೆ ವಸ್ತ್ರಗಳು ಸೇರಿದಂತೆ ಆಕರ್ಷಕ, ನಾವೀನ್ಯತೆಯುಳ್ಳ ಬಟ್ಟೆಗಳನ್ನು ಗ್ರಾಹಕರಿಗೆ ಪೂರೈಸುತ್ತಾ ಬಂದಿರುವ ಸಾಗರ್ ಸಿಲ್ಕ್ಸ್ ಆಂಡ್ ಸಾರೀಸ್ 4Oನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ನೂತನ ಮಳಿಗೆಯನ್ನು ಸ್ಥಾಪಿಸಿ ಅಲ್ಲಿಗೆ ಸ್ಥಳಾಂತರಗೊಳ್ಳುತ್ತಿದೆ. ಹೊಸ ಕಟ್ಟಡ ದಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಎಲ್ಲ ರೀತಿಯ ಸವಲತ್ತುಗಳನ್ನು ಪೂರೈಸಲಾಗುತ್ತಿದ್ದು,. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಘಾಟನೆಯ ದಿನದಿಂದ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ. 10,000 ಮೇಲ್ಪಟ್ಟು ಸಿಂಗಲ್ ಬಿಲ್ ಮಾಡಿದವರಿಗೆ ಆಕರ್ಷಕ ಬಹುಮಾನಉದ್ಘಾಟನೆ ಸುಸಂದರ್ಭದಲ್ಲಿ ಗ್ರಾಹಕರಿಗೆ ಸಂಸ್ಥೆ ಆಕರ್ಷಕ ಬಹುಮಾನವನ್ನು ಘೋಷಿಸಿದೆ. 10000 ಒಂದೇ ಬಿಲ್ ಮಾಡಿದಲ್ಲಿ ಆಕರ್ಷಕ ಬಹುಮಾನವನ್ನು ನೀಡಲಿದೆ.

Read More

ಉಳ್ಳಾಲ : ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬೈಕ್ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮೃತ ಯುವಕ ವರ್ಕಾಡಿ ಗ್ರಾಮದ ನಲೆಂಗಿ ನಿವಾಸಿ ರೋಷನ್ ಮೋರಸ್ (34) ಮೃತ ಯುವಕ.ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ರೋಷನ್ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಬೈಕ್ ಡಿವೈಡರ್ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ತಕ್ಷಣ ಮಂಗಳೂರಿನ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳದೆ ಗುರುವಾರ ಸಂಜೆ ಸಾವನ್ನಪ್ಪಿದ್ದಾರೆ.ಮೃತ ರೋಷನ್ ರವರು ಆಂಡ್ರಿ ಡಿಸೋಜ ಹಾಗೂ ಲಿಲ್ಲಿ ಅವರ ಎರಡನೇ ಪುತ್ರ. ರೋಷನ್ ಅವರಿಗೆ ಮದುವೆ ಆಗಿ ಕೇವಲ ನಾಲ್ಕು ವರ್ಷಗಳಾಗಿದ್ದು ಐದು ತಿಂಗಳ ಹೆಣ್ಣು ಮಗುವಿದೆ.ಪತ್ನಿಯನ್ನು, ಮಗು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತಿಮ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುತ್ತಾರು: ಕುತ್ತಾರ್ ಮದಕ ಇಲ್ಲಿನ  ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ 22ನೇ  ವಾರ್ಷಿಕ ಮಹೋತ್ಸವ ಫೆ.23 ರವಿವಾರ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜರಗಲಿದೆ.ಫೆ.22 ಶನಿವಾರ ಸಂಜೆ 5 ಗಂಟೆಯಿಂದ ಭಜನೆ, ಸಂಜೆ 6 ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಿಂದ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಫೆ.23 ರಂದು ಬೆಳಿಗ್ಗೆ 8 ರಿಂದ ಗಣಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ  ಜರಗಲಿದೆ.  ಸರ್ವರಿಗೂ ಕ್ಷೇತ್ರದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ್ವಾಗತ ಬಯಸಿದ್ದಾರೆ. 

Read More

ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಹತ್ತಿರ ಮಹೇಶ್ ಕಾಂಪ್ಲೆಕ್ಸ್‌ನಲ್ಲಿ ಅತೀ ಹೆಚ್ಚಿನ  ವಿಶ್ವಾಸ ಮತ್ತು ಖ್ಯಾತಿಯನ್ನು ಗಳಿಸಿರುವ ಅನು ಮೊಬೈಲ್, ತನ್ನ ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ 1ರಿಂದ 28ರವರೆಗೆ “ಆನಿವರ್ಸರಿ ಮೆಗಾ ಸೇಲ್” ಅನ್ನು ಹಮ್ಮಿಕೊಂಡಿದೆ. ಗ್ರಾಹಕರಿಗಾಗಿ ಐದು ಜಿ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು ಹಾಗೂ ವಿವಿಧ ಆಕ್ಸೆಸರೀಸ್‌ಗಳ ಮೇಲೆ ವಿಶಿಷ್ಟ ಡಿಸ್ಕೌಂಟ್ ಮತ್ತು ಆಫರ್‌ಗಳನ್ನು ನೀಡಲಾಗುತ್ತಿದೆ. ಇಎಂಐ ಮೇಳ – ನಿಮ್ಮ ಬಜೆಟ್‌ಗೆ ತಕ್ಕಂತೆ ಸುಲಭ ಕಂತುಗಳ ಮೂಲಕ ಖರೀದಿ ಮಾಡಿ! ಜೀರೋ ಡೌನ್ ಪೇಮೆಂಟ್ – ಮೊದಲ ಮೊತ್ತ ಇಲ್ಲದೆ ಖರೀದಿ ಮಾಡಲು ಅವಕಾಶ ಕ್ಯಾಶ್‌ಬ್ಯಾಕ್ ಆಫರ್ – ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಸುಲಭ ಇಎಂಐ ಯೋಜನೆ – ಹತ್ತಿರದ ಫೈನಾನ್ಸ್ ಪಾರ್ಟ್ನರ್‌ಗಳೊಂದಿಗೆ ಕೈಜೋಡಿಸಿ ಬಜೆಟ್‌ ಸ್ನೇಹಿ ಕಂತು ವ್ಯವಸ್ಥೆ ಉಚಿತ ಆಕ್ಸೆಸರೀಸ್ – ಸ್ಮಾರ್ಟ್‌ಫೋನ್ ಖರೀದಿಸಿದಲ್ಲಿ ಪವರ್ ಬ್ಯಾಂಕ್, ಇಯರ್ ಬಡ್ಸ್, ಸ್ಮಾರ್ಟ್ ವಾಚ್ ಉಚಿತಹೈ-ಟೆಕ್ 5G ಸ್ಮಾರ್ಟ್‌ಫೋನ್‌ಗಳು ₹7,999 ರಿಂದ ಆರಂಭ! ಮಾರುಕಟ್ಟೆಯಲ್ಲಿ ಮುಂಚೂಣಿಯ ಬ್ರಾಂಡ್‌ಗಳ ವಿಶೇಷ…

Read More

ತೊಕ್ಕೊಟ್ಟು : ಐಸ್ ಕ್ರೀಂ ಪ್ರಿಯರಿಗೆ ಹಾಗೂ ಫಿಜ್ಜಾ, ಬರ್ಗರ್‌ ಸ್ಯಾಂಡ್‌ವಿಚ್‌ ರುಚಿ ಆಸ್ವಾದಿಸಲು ಬಯಸುವ ಗ್ರಾಹಕರಿಗೆ ಸಂತಸದ ಸುದ್ದಿಯಾಗಿದೆ.  ಅಮುಲ್ ಐಸ್ ಕ್ರೀಂ ಬಳಸಿ ವಿಶೇಷ ಐಸ್ ಕ್ರೀಮ್ ತಯಾರಿಸುವ ‘ದಿ ಸಂಡೇಸ್ ಹಬ್’ ಐಸ್ ಕ್ರೀಮ್ ಪಾರ್ಲರ್ ಈಗ ತೊಕ್ಕೊಟ್ಟು ಕಲ್ಲಾಪುವಿನ ಯು.ಕೆ. ಡ್ರೀಮ್ ಸೆಂಟರ್ ಬಳಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ.ಈ ಪಾರ್ಲರ್ ತನ್ನ ವಿಶೇಷ ಹಾಗೂ ನಯನಮನೋಹರ ಐಸ್ ಕ್ರೀಮ್ ವೆರೈಟಿಗಳಿಂದ ಪ್ರಖ್ಯಾತವಾಗಿದ್ದು, ಗ್ರಾಹಕರಿಗೆ ಸುಸ್ತು ಮರೆಯುವಂತಹ ರುಚಿಕರ ಅನುಭವ ನೀಡಲು ತೊಡಗಿಸಿಕೊಂಡಿದೆ. ಆಯ್ಕೆಯ ವಿಶಾಲ ಪರಿಧಿಯೊಂದಿಗೆ, ಸಾಂಪ್ರದಾಯಿಕ ಐಸ್ ಕ್ರೀಮ್ ಗಳು ಮಾತ್ರವಲ್ಲದೆ, ವಿವಿಧ ಬಗೆಗಿನ ಸಂಡೇಸ್, ಸ್ಪೆಷಲ್ ಡೆಸರ್ಟ್ಸ್, ಹಾಗೂ ಶೀತಲ ಪಾನೀಯಗಳ ಜಗತ್ತಿಗೆ ಗ್ರಾಹಕರನ್ನು ಆಮಂತ್ರಿಸಲಿದೆ.ಐಸ್ ಕ್ರೀಮ್ ಮಾತ್ರವಲ್ಲ, ಪಾರ್ಲರ್‌ನಲ್ಲಿ ವಿವಿಧ ಆಕರ್ಷಕ ಆಹಾರಗಳೂ ಲಭ್ಯ:  ಪಿಜ್ಜಾ: ಹಾಟ್ & ಚೀಸ್‌ಭರಿತ ಸ್ಪೆಷಲ್ ಪಿಜ್ಜಾಗಳು,  ಬರ್ಗರ್: ಹೊಸತು ಹಾಗೂ ಜ್ಯೂಸಿಯಿಂಗ್ ಬರ್ಗರ್ ವೆರೈಟಿಗಳುಸ್ಯಾಂಡ್‌ವಿಚ್: ಆರೋಗ್ಯಕರ ಹಾಗೂ ರುಚಿಕರ ಆಯ್ಕೆಗಳು,  ಮಿಲ್ಕ್ ಶೇಕ್: ತಂಪಾದ, ಕ್ರಿಮಿ…

Read More