Author: UllalaVani

Kannada News From Coastal Karnataka

ಉಳ್ಳಾಲ: ಕೆ.ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಕಾಲೇಜು ಉಳ್ಳಾಲ‌ ಇದರ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮವು ಮಂಗಳವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರ ಬೊಳಿಯಾರ್ ನ ವೈದ್ಯಾಧಿಕಾರಿ ಡಾ. ಸುನೀತಾ ಮಾತನಾಡಿ, ಮಹಿಳೆಯರು ಶಕ್ತಿಶಾಲಿಗಳಾಗಬೇಕು. ಈ ಮೂಲಕ ಎಲ್ಲವನ್ನು ಮೆಟ್ಟಿ ನಿಂತು ಸ್ವತಂತ್ರರಾಗಿ ಬದುಕಬೇಕು. ಪ್ರತಿಯೊಂದು ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಈ ಮೂಲಕ ಸಮಾಜದ ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ವಿದ್ಯೆಯ ಮಹತ್ವವನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಬೇಕು ಈ ಮೂಲಕ ಮುಂದಿನ‌ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು‌ ಎಂದರು.ಕಾರ್ಯಕ್ರಮ ಪ್ರಯುಕ್ತ ಸಮಾಜಸೇವಕಿ ಸುವಾಸಿನಿ ದಾಮೋದರ್ ಬಬ್ಬುಕಟ್ಟೆ , ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಧನ್ಯಶ್ರೀ , ಕೃಷಿ ಮತ್ತು ಹೈನುಗಾರಿಕೆ ಯ ರೇವತಿ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆಕಾರು ಇದರ ವೈದ್ಯಾಧಿಕಾರಿ ಡಾ. ಮದನ್ ಕುಮಾರ್ ಜಿ, ಕೆ.ಪಿ.ಬಿ.ಎನ್.ಐ ನರ್ಸಿಂಗ್…

Read More

ಉಳ್ಳಾಲ: ಶ್ರೀ ಕೊರಗ ತನಿಯ ಸೇವಾ ಸಮಿತಿ ಕೆರೆಬೈಲ್ ಗುಡ್ಡೆ , ಚೆಂಬುಗುಡ್ಡೆ ಇದರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,48ನೇ ವರ್ಷದ ವಾರ್ಷಿಕ ಕೋಲ ಹಾಗೂ ಶ್ರೀ ನಾಗ ರಕೇಶ್ವರಿ ಸಾನಿಧ್ಯ ಪ್ರತಿಷ್ಠಾ ಮಹೋತ್ಸವವು ಮಾ.20-22ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.‌ಮಾ. 20ರ ಗುರುವಾರದಂದು ಶ್ರೀ ನಾಗರಕೇಶ್ವರಿ ಸಾನಿಧ್ಯ ಕೆರೆಬೈಲ್‌ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ದೇವತಾ ಪ್ರಾರ್ಥನೆ, ನವಕಳಶ ಪ್ರತಿಷ್ಠೆ, ಅಧಿವಾಸ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತಂಬಿಲ ಸೇವೆ, ಸಾರ್ವಜನಿಕ ಅಶ್ಲೇಷಾ ಬಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.‌ ಮಾ. 21ರ ಶುಕ್ರವಾರದಂದು ಗಣಹೋಮ ಹಾಗೂ ಬೆಳಿಗ್ಗೆ 10ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ನಾಗರಕೇಶ್ವರಿ ಧರ್ಮಶಿಕ್ಷಣ ಕೇಂದ್ರ ಮಕ್ಕಳಿಂದ ಕುಣಿತ ಭಜನೆ , ಸ್ಥಳೀಯ ಯುವ ಪ್ರತಿಭೆಗಳಿಂದ ಜಾನಪದ ನೃತ್ಯ ನಡೆಯಲಿದೆ‌ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ. ರಾತ್ರಿ 10.30 ಗಂಟೆಗೆ…

Read More

ತೊಕ್ಕೊಟ್ಟು : ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬಹುಕಾಲದ ಕನಸು ಈಗ ಸಾಕಾರಗೊಳ್ಳುತ್ತಿರುವುದಕ್ಕೆ ಹೆಮ್ಮೆಪಡುವ ಕ್ಷಣ. ಈ ವರ್ಷಗಳಿಂದಲೂ ನಿರಂತರವಾಗಿ ಪ್ರತಿಧ್ವನಿಸುತ್ತಿದ್ದ ಬೇಡಿಕೆಯಾದ ಸರಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರು ತಾಲೂಕಿಗೆ ಮಂಜೂರು ಮಾಡಿಸಿರುವ ಅಹಿಂದ ಪರ ನಾಯಕರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅಹಿಂದ ದಕ್ಷಿಣ ಕನ್ನಡ ಜಿಲ್ಲಾಅಧ್ಯಕ್ಷ ಬಾದ್ ಷಾ ಸಾಂಬಾರತೋಟ ಸಲ್ಲಿಸಿದ್ದಾರೆ.. ದಕ್ಷಿಣ ಕನ್ನಡ ಅಹಿಂದ ಸಂಘಟನೆ, ಜಿಲ್ಲೆಯ ಜನತೆಗೆ ಉತ್ತಮ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ, ದಕ್ಷಿಣ ಕನ್ನಡದಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಅಗತ್ಯವನ್ನು ಹಲವು ಹಂತಗಳಲ್ಲಿ ಸರ್ಕಾರದ ಗಮನಕ್ಕೆ ತಂದಿತ್ತು. ಸಂಘಟನೆಯ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಈ ಸಂಬಂಧ ಅನೇಕ ಬಾರಿ ಮನವಿಯನ್ನು ಸಲ್ಲಿಸಿತ್ತು.ಇದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ದೊಡ್ಡ ಆಶಾಕಿರಣ. ಈ ಮೆಡಿಕಲ್ ಕಾಲೇಜು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲ, ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಮಾನ್ಯ…

Read More

ಕುಂಪಲ : ಆಸರೆ ಬಳಗ ಕುಂಪಲ ಆಶ್ರಯದಲ್ಲಿ ತನ್ನ 84 ನೇ ಸೇವಾ ಯೋಜನೆ ಪ್ರಯುಕ್ತ ಕುಂಪಲದ ತಾರೇಶ್ ಎಂಬವರ ಡಯಾಲಿಸಿಸ್ ಖರ್ಚಿಗೆ ಸಹಾಯಧನ ಹಾಗೂ 85 ನೇ ಕಾರ್ಯಕ್ರಮವಾಗಿ ಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ತೊಕ್ಕೊಟ್ಟು ನಿವಾಸಿ ಜಯ ಎಂಬವರಿಗೆ ಫೋಲ್ಡಿಂಗ್‌ ಕಾಟ್‌ & ಬೆಡ್‌ ಅನ್ನು ವಿತರಿಸಲಾಯಿತು.ಈ ಸಂದರ್ಭ ಆಸರೆ ಬಳಗ ಸ್ಥಾಪಕಾಧ್ಯಕ್ಷ ಸೂರಜ್ ಸಾಗರ್ ಕುಂಪಲ. ಆಸರೆ ಬಳಗದ ಅಧ್ಯಕ್ಷರಾದ ಹರಿಪ್ರಸಾದ್, ಪ್ರಮುಖರಾದ ಹರೀಶ್ ಮೂರುಕಟ್ಟೆ, ಬಿಜೆಪಿ ಮಂಗಳೂರು ಮಂಡಲ ಯುವಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಮಂಗಳೂರು ಮಂಡಲ ಸಾಮಾಜಿಕ ಜಾಲತಾಣ ಪ್ರಮುಖ್ ಪ್ರಹ್ಲಾದ್ ಇಂದಾಜೆ, ಆರ್ ಎಸ್ ಎಸ್ ನ ನಾಗೇಶ್ ಕುಂಪಲ, ನಿಕೇಶ್ ಕುಂಪಲ, ಚಂದ್ರ ಅನುಷ್ ಗಟ್ಟಿ, ಅನುಷ್ ಸರಳಾಯಕಾಲನಿ, ರಾಹುಲ್, ವಿಕಾಸ್, ಚೇತನ್ ಶೆಟ್ಟಿ ಕುಂಪಲ ಉಪಸ್ಥಿತರಿದ್ದರು.

Read More

ಕುಂಪಲ: 360 ಸಿಸಿ ಡ್ಯೂಕ್ ಬೈಕ್ ಅಪಘಾತಕ್ಕೀಡಾಗಿ ಕುಂಪಲ ನಿವಾಸಿ ಯುವಕ 21 ದಿನಗಳ ನಂತರ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಮಾ.7 ಕ್ಕೆ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಕುಂಪಲ ವಿದ್ಯಾನಗರ ನಿವಾಸಿ ಪ್ರಶಾಂತ್ ಎಂಬವರ ಪುತ್ರ ಪವಿತ್ (19) ಸಾವನ್ನಪ್ಪಿದವರು. ಫೆ.21 ರಂದು ಕಾರ್ಕಳ ಸಮೀಪ ನಡೆದಿದ್ದ ಕೋಲದಲ್ಲಿ ಭಾಗವಹಿಸಿದ್ದ ಪವಿತ್ ತನ್ನ ಸ್ನೇಹಿತನ ಜೊತೆಗೆ ಮಂಗಳೂರಿಗೆ ವಾಪಸ್ಸಾಗುವ ಸಂದರ್ಭ ಬೆಳ್ಮಣ್ ಸಮೀಪ ರಾ.ಹೆ.ಯಲ್ಲಿರುವ ಉಬ್ಬುಗಳನ್ನು ಗಮನಿಸದೇ ಬೈಕ್ ಚಲಾಯಿಸಿದ ಪರಿಣಾಮವಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಪೌAಡಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಲಿವರ್ ಭಾಗಕ್ಕೆ ಗಂಭೀರ ಗಾಯವಾಗಿ , ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 21 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಿತ್ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳೂರಿನ ಖಾಸಗಿ ಕಂಪೆನಿ ಷೋರೂಂನಲ್ಲಿ ಉದ್ಯೋಗಿಯಾಗಿದ್ದ ಅವರು, ಐದು ತಿಂಗಳ ಹಿಂದೆಯಷ್ಟೇ ಡ್ಯೂಕ್ ಬೈಕ್ ಖರೀದಿಸಿದ್ದರು. ಆದರೆ ಮರಣ ಬಂಡಿಯೆAದೇ ಖ್ಯಾತಿ ಪಡೆದಿರುವ…

Read More

ಉಳ್ಳಾಲ : ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಜನಾಡಿ ಇದರ 25ನೇ ವರ್ಷದ ಪುನರ್ ಪ್ರತಿಷ್ಠಾ ದಿನಾಚರಣೆ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಇವರಿಂದ ಮಾ.10ರಂದು ಸೋಮವಾರ ಸೂರ್ಯೋದಯಕ್ಕೆ ಏಕಾಹ ಭಜನೆ ನಡೆಯಲಿದೆ‌. ಮಾ. 11ರ ಮಂಗಳವಾರದಂದು ಬೆಳಿಗ್ಗೆ 11.00ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದುಮಧ್ಯಾಹ್ನ 12.00 ಮಹಾಪೂಜೆಯ ನಂತರ ಅನ್ನಸಂತರ್ಪಣೆ ಅನ್ನದಾನ ನಡೆಯಲಿದೆ‌. ಸಂಜೆ 7.00ಕ್ಕೆ ರಂಗಪೂಜೆ ನಡೆಯಲಿದೆ. ಸಂಜೆ 6.00 ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಗಾಯತ್ರಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದ್ದು . ರಾತ್ರಿ 8.00ಕ್ಕೆ ಅನ್ನಸಂತರ್ಪಣೆ ಜರಗಲಿರುವುದು. ಸಂಜೆ 5.45ಕ್ಕೆಸರಿಯಾಗಿ ಯಕ್ಷಗಾನ ಚೌಕಿ ಪೂಜೆಯು ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Read More

ಉಳ್ಳಾಲ : ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ- ಉಳ್ಳಾಲ ಇದರ ವರ್ಷಾವಧಿ ಉತ್ಸವವು ಮಾ. 12ರ ಬುಧವಾರದಿಂದ ಮಾ.19ರ ಬುಧವಾರದವರೆಗೂ ಬಹಳ ವಿಜೃಂಭಣೆಯಿಂದ ಜರುಗಲಿರುವುದು.ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಮಾ. 12ರಂದು ಗಣಪತಿ ಹೋಮ, ರಾತ್ರಿ 10.30 ಗಂಟೆಗೆ ಪಟ್ಟ ಸಿಂಹಾಸನದಿಂದ ಮೂಡಮಾಡಕ್ಕೆ ‘ಕಿರೋಳ್ ಉತ್ಸವ’ ರಾತ್ರಿ 2.00 ಗಂಟೆಗೆ ಶ್ರೀ ಧರ್ಮಅರಸರ ಉತ್ಸವ, ಮುಂಜಾನೆ 6.30ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಕಂಚಿನ ಪಟ್ಟದ ಮೊಗದಲ್ಲಿ ಉತ್ಸವ ನಡೆಯಲಿರುವುದು ಮಾ‌13ರಂದು ರಾತ್ರಿ ಗಂಟೆ 9.00ಕ್ಕೆ ಮೂಡುಮಾಡದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಚಿನ್ನದ ಮೊಗದಲ್ಲಿ ಉತ್ಸವ ನಡೆಯಲಿದೆ. ಮಾ 14ರಂದು ರಾತ್ರಿ ಗಂಟೆ 9.00ಕ್ಕೆ ಮೂಡಮಾಡದಲ್ಲಿ ಶ್ರಿ ಧರ್ಮಅರಸರ ವಲಸರಿ ಉತ್ಸವ ನಡೆಯಲಿದೆ. ಮಾ. 15 ರಂದುನಡು ಉತ್ಸವ, ರಾತ್ರಿ ಗಂಟೆ 8.00ಕ್ಕೆ ಶ್ರಿ ಧೂಮಾವತಿ, ಬಂಟ ದೈವದ ಕಟ್ಟುಕಟ್ಟಲೆ ನೇಮ ಸೇವೆ ನಡೆಯಲಿದೆ. ರಾತ್ರಿ 9ರಿಂದ ಶ್ರೀ ರಕೇಶ್ವರೀ ಬಳಗ ಸೋಮೇಶ್ವರ ಇವರಿಂದ ಭಜನಾ ಸಂಕೀರ್ತನೆ. ರಾತ್ರಿ…

Read More

ಮಂಗಳೂರು : ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ ‘ಭಾರ್ಗವಿ ಎಲ್‌ ಎಲ್‌ ಬಿ ’ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಈ ಬಹು ನಿರೀಕ್ಷಿತ ಧಾರಾವಾಹಿ ಮಾ.3 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ. ಈ ಕಥೆ, ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆ.ಪಿ. ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಇಂಥ ಸನ್ನಿವೇಶದಲ್ಲಿ ತನ್ನ ತಂದೆಯ ಗೌರವವನ್ನು ಮರಳಿ ಗಳಿಸಲು ಮತ್ತು ಅನ್ಯಾಯದ ವಿರುದ್ಧ…

Read More

ಉಳ್ಳಾಲ : ಮಕ್ಕಳಲ್ಲಿ ಶಾಸ್ತ್ರೀಯ ನೃತ್ಯಕಲೆಗಳ ಅಭಿರುಚಿ ಮೂಡಿಸಬೇಕಾದ ಅಗತ್ಯ ಇದೆ. ಯಕ್ಷಗಾನದಂತೆ ಕರಾವಳಿಯಲ್ಲಿ ಭರತನಾಟ್ಯ ಕಲೆಯೂ ವಿಜೃಂಭಿಸಿ ಎಲ್ಲ ಆದರ, ಗೌರವಕ್ಕೆ ಪಾತ್ರವಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಆಶಿಸಿದರು. ಇಲ್ಲಿನ ಸೋಮೇಶ್ವರ ಕೊಲ್ಯದ ನಾಟ್ಯನಿಕೇತನ (ರಿ.) ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ, ನಾಟ್ಯಾಚಾರ್ಯ ಉಳ್ಳಾಲಮೋಹನ್‌ ಕುಮಾರ್‌ ಇವರ 90ನೇ ವರ್ಷಾಚರಣೆ ಪ್ರಯುಕ್ತ ನಾಟ್ಯ ನಿಕೇತನದ ನೃತ್ಯಾಂಗಣದಲ್ಲಿ ಶುಕ್ರವಾರ ನಡೆದ ‘ನಾಟ್ಯ ಮೋಹನ ನವತ್ಯುತ್ಸವ’ ನೃತ್ಯಶ್ರೀ ಸರಣಿ ಮಾಲಿಕೆ-14ರ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸುಮಾರು 1930ರ ದಶಕದಿಂದೀಚೆಗೆ ಕರಾವಳಿಯಲ್ಲಿ ಭರತನಾಟ್ಯ ಬೆಳಗುವುದಕ್ಕೆ ಆರಂಭವಾಯಿತು. ಈ ಅವಧಿಯಲ್ಲಿ ಭರತನಾಟ್ಯ ಪರಂಪರೆ ಮತ್ತು ಬೆಳವಣಿಗೆಗೆ ಅಚ್ಚರಿ ಹುಟ್ಟಿಸುವಂತೆ ಮಾಡಿದೆ. ತಮಿಳುನಾಡಿನ ಪಂದನಲ್ಲೂರು ಶೈಲಿಯನ್ನು ಇಲ್ಲಿ ಪರಿಚಯಿಸಿ ಜನಪ್ರಿಯಗೊಳಿಸುವಲ್ಲಿ ಉಳ್ಳಾಲ ಮೋಹನ್‌ ಕುಮಾರ್‌ರ ಪಾತ್ರ ಹಿರಿದು. ಅವರ ಬದುಕು,ವ್ಯಕ್ತಿತ್ವ, ನಾಟ್ಯವನ್ನೇ ಉಸಿರಾಗಿಸಿದ ಜೀವನ ಎಲ್ಲರಿಗೆ ಮೇಲ್ಪಂಕ್ತಿಯಾಗಿದೆ. ಇಂತಹ ಸರಣಿ ಕಾರ್ಯಕ್ರಮ…

Read More

ಉಳ್ಳಾಲ ತಾಲೂಕು ಆಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಉಳ್ಳಾಲ ಸಮಿತಿ ಸಹಭಾಗಿತ್ವದಲ್ಲಿ ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಇಲ್ಲಿ ಗುರುವಾರ ಸಂತ ಕವಿ ಸರ್ವಜ್ಞ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವೆಂಕಪ್ಪ ಮಾಸ್ತರ್ ಅಸೈಗೋಳಿ ದೀಪ ಬೆಳಗಿಸಿ ಸರ್ವಜ್ಞ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯ ವಿಕ್ರಮ್ (ಉಪ ತಹಶೀಲ್ದಾರ್ ) ವಹಿಸಿದರು.ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ.ಲೋಕೇಶ್ ಕುಲಾಲ್ ನಾರ್ಶ ಸರ್ವಜ್ಞನ ಕುರಿತು ಉಪನ್ಯಾಸವಿತ್ತರು. ಆಕಾಶವಾಣಿ ಮಂಗಳೂರು ಕೇಂದ್ರದ ಉದ್ಘೋಷಕರಾದ ಶ್ರೀ ಪ್ರವೀಣ್ ಅಮ್ಮೆಂಬಳ ಸರ್ವಜ್ಞನ ವಚನಗಳನ್ನು ವಾಚಿಸಿದರು.‌ ಶ್ರೀ ಲಯನ್ ಅನಿಲ್ ದಾಸ್ ಅಂಬಿಕಾರೋಡ್, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಶ್ರೀ ಭಾಸ್ಕರ ಕುತ್ತಾರ್,ಪ್ರಾಥಮಿಕ‌ ಆರೋಗ್ಯ ಕೇಂದ್ರ…

Read More