ಕೆ ಎಮ್ ಕೆ ಮಂಜನಾಡಿ ಉದಯಕುಮಾರ್ ಟಿ ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘಕ್ಕೆ ಕೆ ಎಮ್ ಕೆ ಮಂಜನಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಉದಯಕುಮಾರ್ ಟಿ ನಾಯಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Author: UllalaVani
ಕೋಟೆಕಾರು ಬೀರಿ ಜಂಕ್ಷನ್ನ ಹೊಸ ಆಕರ್ಷಣೆ! ಕೋಟೆಕಾರು ಬೀರಿ ಜಂಕ್ಷನ್ನ ಹೊಟೇಲ್ ಕಾರ್ತಿಕ್ ಸಮೀಪ, ಭಗವತಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ವಿವಿಧ ಶೈಲಿಯ ದೋಸೆ ಮತ್ತು ಕ್ರೀಮ್ಸ್ ಕೇಕ್ಗಳ ಉತ್ಪಾದನಾ ಘಟಕ ಶುಭಾರಂಭಗೊಂಡಿದೆ. ಈ ವಿಶೇಷ ಘಟಕವು ಸ್ವಾದಪ್ರಿಯರಿಗೆ ಹೊಸತನ್ನು ಅನುಭವಿಸಲು ಮತ್ತು ಆಕರ್ಷಕ ರೀತಿಯ ಆಹಾರವನ್ನು ಸವಿಯಲು ಅಪೂರ್ವ ಅವಕಾಶವನ್ನು ನೀಡುತ್ತದೆ. ದೋಸೆ ಪ್ರಿಯರಿಗಾಗಿ ವಿಭಿನ್ನ ಅನುಭವ ಇಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಮಸಾಲೆ ದೋಸೆ, ನೀರ್ ದೋಸೆ, ರಾಗಿ ದೋಸೆ, ಮೆಂತ್ಯೆ ದೋಸೆ, ಸಿಟ್ಟು ದೋಸೆ, ಗೋಧಿ ದೋಸೆ, ಪನೀರ್ ದೋಸೆ, ಗಾರ್ಲಿಕ್ ದೋಸೆ, ಚೀಸ್ ದೋಸೆ ಸೇರಿದಂತೆ ಹಲವು ವಿಧಗಳ ದೋಸೆಗಳನ್ನು ತಯಾರಿಸಲಾಗುತ್ತದೆ. ಪ್ರತಿ ದೋಸೆ ವಿಭಿನ್ನ ರುಚಿ, ಆರೋಗ್ಯ ಮತ್ತು ಗುಣಮಟ್ಟವನ್ನು ಒದಗಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗುವುದು. ಹುಬ್ಬೇರಿಸುವ ಕ್ರೀಮ್ಸ್ ಕೇಕ್ಗಳ ರುಚಿ ಕೇವಲ ದೋಸೆ ಮಾತ್ರವಲ್ಲದೆ, ವಿಶೇಷವಾಗಿ ತಯಾರಿಸಿದ ಫ್ರೆಶ್ ಕ್ರೀಮ್ ಕೇಕ್ಗಳು, ಪರಂಪರೆಯೊಂದಿಗೆ ಹೊಸತ್ತನ್ನು ಸಂಯೋಜಿಸುವ ಚಾಕೋಲೇಟ್ ಕೇಕ್, ಬ್ಲ್ಯಾಕ್ ಫಾರೆಸ್ಟ್, ವೆನಿಲ್ಲಾ ಡಿಲೈಟ್, ಫ್ರೂಟ್ ಕೇಕ್, ರೆಡ್ ವೆಲ್ವೆಟ್, ಬಟರ್ ಸ್ಕೋಚ್, ಸ್ಟ್ರಾಬೆರಿ ಕ್ರೀಮ್…
ಮಾಡೂರು ವಾಟರ್ ಟ್ಯಾಂಕ್ ಸಮೀಪ ಸುಸಜ್ಜಿತ ಮನೆಯೊಂದು ಮಾರಾಟಕ್ಕೆ ಲಭ್ಯವಿದೆ. 6.5 ಸೆಂಟ್ಸ್ ಜಾಗದಲ್ಲಿ ನಿರ್ಮಿತವಾಗಿರುವ ಈ ಮನೆ 1,100 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, 2 ಬೆಡ್ರೂಮ್, ಹಾಲ್, ಮತ್ತು ಕಿಚನ್ ಒಳಗೊಂಡಿದೆ. ಸ್ಥಳದ ಪ್ರಮುಖ ವಿಶೇಷತೆಗಳು: ಈ ಮನೆಯನ್ನು ಖರೀದಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.9900194697, 7338189131, 9741878666 ಸಂಪರ್ಕಿಸಬಹುದು. ReplyForwardAdd reaction
ತೊಕ್ಕೊಟ್ಟು ಕಾಪಿಕಾಡಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ, ಎಂಆರ್ಎಫ್ ಟಯರ್ ಷೋರೂಮ್ ಸಮೀಪ, ಹೊಸದಾಗಿ ಲಿಟ್ಲ್ ಬನ್ನೀಸ್ ಪ್ರೀ-ಪ್ರೈಮರಿ ಶಾಲೆ ಆರಂಭಗೊಳ್ಳುತ್ತಿದೆ. ಈ ಸಂಸ್ಥೆ ಪುಟ್ಟ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಅಗತ್ಯವಾದ ಸಮಗ್ರ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಾಪಿತವಾಗಿದೆ. ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣಈ ಶಾಲೆಯಲ್ಲಿ ಡೇ ಕೇರ್, ನರ್ಸರಿ, ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ಲಭ್ಯವಿದ್ದು, ಮಕ್ಕಳ ಉನ್ನತ ಅಭಿವೃದ್ದಿಗಾಗಿ ಆಧುನಿಕ ಪಾಠ್ಯಕ್ರಮವನ್ನು ಅನುಸರಿಸಲಾಗುತ್ತದೆ. ಮಾಂಟೆಸ್ಸರಿ ತರಬೇತಿ ಪದ್ಧತಿಅನುಸರಿಸಿ, ಮಕ್ಕಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿದಾರರನ್ನು ನೇಮಕ ಮಾಡಲಾಗಿದೆ. ಮಾಂಟೆಸ್ಸರಿ ಟೀಚರ್ ತರಬೇತಿ ಕೇಂದ್ರಇದರ ಜೊತೆಗೆ, ಭವಿಷ್ಯದ ಶಿಕ್ಷಣ ತಜ್ಞರನ್ನು ರೂಪಿಸುವ ಉದ್ದೇಶದಿಂದ ಮಾಂಟೆಸ್ಸರಿ ಟೀಚರ್ ಟ್ರೈನಿಂಗ್ (Montessori Teacher Training) ಕೋರ್ಸ್ ಕೂಡಾ ಪ್ರಾರಂಭಿಸಲಾಗಿದೆ. ಇದರಿಂದ, ಭವಿಷ್ಯದ ಶಿಕ್ಷಕರು ಮಕ್ಕಳ ಶಿಕ್ಷಣದಲ್ಲಿ ವೈಜ್ಞಾನಿಕ ಮತ್ತು ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನಮ್ಮ ನಿಟ್ಟಿನಲ್ಲಿ: ನಮ್ಮ ಪ್ರಯತ್ನ ನಿಮ್ಮ ಮಕ್ಕಳ ಭವಿಷ್ಯವನ್ನು ಹೆಚ್ಚು ಉಜ್ವಲಗೊಳಿಸಲು! ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. ReplyForwardAdd reaction
ಕೆ.ಸಿ.ರೋಡ್ನ ಒಲವಿನ ಹಳ್ಳಿ ಎದುರುಭಾಗದಲ್ಲಿ ವಿಶಾಲ 8 ಎಕರೆ ಭೂಮಿ ಮಾರಾಟಕ್ಕಿದೆ. ಈ ಸುಂದರ ಫಾರ್ಮ್ ಹೌಸ್ ಹೊಂದಿರುವ ಜಾಗ ಕೃಷಿ ಹಾಗೂ ಹಸಿರು ನಿಸರ್ಗ ಪ್ರೇಮಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಜಾಗದ ವೈಶಿಷ್ಟ್ಯಗಳು: ತೆಂಗಿನ ಮರಗಳು – 350 ಹಲಸಿನ ಮರಗಳು, ಮಾವಿನಕಾಯಿ, ಸಪೋಟಾ, ಕರಿಮೆಣಸು ಗಿಡಗಳು 3 ಬಾವಿಗಳು, ಪಂಪ್ಸೆಟ್ ವ್ಯವಸ್ಥೆ ಸಂಪೂರ್ಣ ಕೃಷಿಗೆ ಅನುಕೂಲಕರ ನೀರು ಮತ್ತು ಮೂಲಸೌಕರ್ಯಗಳು ಸುಗಮ ರಸ್ತೆ ಸಂಪರ್ಕ ಬೆಲೆ: 1 ಎಕರೆ ₹1.5 ಕೋಟಿ ಈ ಸುಂದರ ಕೃಷಿ ಜಾಗವನ್ನು ಖರೀದಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.9535603928
ನಡಾರು ದೇವರ ಅರಮನೆ ರಸ್ತೆಯ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ 8ನೇ ವರ್ಷದ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದ ವಾರ್ಷಿಕ ಸಾಮೂಹಿಕ ಅಗೆಲು ಸೇವೆ ಭಾನುವಾರ ಕ್ಷೇತ್ರದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಜರಗಿತು.ಬೆಳಿಗ್ಗೆ ನಡೆದ ಭಜನಾ ಸಂಕೀರ್ತನಾ ಕಾರ್ಯಕ್ರಮಕ್ಕೆ ವಿಶಾಲ ಅಡ್ಕರಾಜ್ ಮುದ್ಯ ಮಡ್ಯಾರು, ಸುಲೋಚನಾ ಜಗದೀಶ್ ದಾಸ್ ಮಡ್ಯಾರ್, ಅಶ್ವಿನಿ ಹರಿದಾಸ್ ಮಾಡೂರು, ಶ್ವೇತಾ ಸಂತೋಷ್ ಕುಮಾರ್ ಹೊಟೇಲ್ ಉಮಾ ಪ್ಯಾಲೇಸ್ ಬೀರಿ, ಕಾರ್ತಿಕ್ ಕುಲಾಲ್ ಕಾವ್ಯ ನಡಾರು, ಮಲ್ಲಿಕಾ ಕೃಷ್ಣ ಪೂಜಾರಿ ಮಡ್ಯಾರು, ಮೇಘಾ ಅಜಿತ್ ನಡಾರು ಒಟ್ಟು ಏಳು ದಂಪತಿ ದೀಪ ಬೆಳಗಿಸಿ ಚಾಲನೆ ನೀಡಿದರು. ಮಧ್ಯಾಹ್ನ ಜರಗಿದ ಮಹಾಪೂಜೆ ಬಳಿಕ ಕ್ಷೇತ್ರದ ಕುರಿತಾದ ಪ್ರಧಾನ ಅರ್ಚಕ ವಿಶ್ವನಾಥ್ ಕುಲಾಲ್ ನಿರ್ದೇಶಿಸಿದ, ಸುರೇಶ್ ಕುಮಾರ್ ಮಂಗಲ್ಪಾಡಿ ಸಾಹಿತ್ಯದ, ಗಣೇಶ್ ಉಪ್ಪಳ ಹಾಡುಗಾರಿಕೆ, ಶಿವು ಕುಲಾಲ್ ಹಾಗೂ ಮೋಹಿತ್ ಕುಲಾಲ್ ಚಿತ್ರೀಕರಿಸಿದ, ಸೃಜನ್ ಮಂಜೇಶ್ವರ ಸಂಕಲನಗೈದ, ಸಂತೋಷ್ ಕುಮಾರ್ ಶೆಟ್ಟಿ ನಡಾರ್, ಚಿದಾನಂದ ಪೂಜಾರಿ ಮಡ್ಯಾರು ಇವರ…
ಉಳ್ಳಾಲ: ಕಾಂಗ್ರೆಸ್ ಮುಖಂಡ, ಸ್ಪೀಕರ್ ಯು.ಟಿ.ಖಾದರ್ ಅವರ ಆಪ್ತ , ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಸುರೇಶ್ ಭಟ್ನಗರ ಇವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಭಟ್ನಗರ, ಕೆಲ ದಿನಗಳ ಹಿಂದೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆಂದು ಹೇಳಲಾಗಿದೆ. ತೀಯ ಸಮಾಜದಲ್ಲಿ ಮುಖಂಡರಾಗಿರುವ ಸುರೇಶ್ ಭಟ್ನಗರ ಇವರು ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸೋಮೇಶ್ವರ ಅಬ್ಬಕ್ಕಳಿಗೆ ಸಂಬಂಧಿಸಿದ ಕೆರೆಯ ಶಿಲನ್ಯಾಸ , ಭಗವತೀ ದೇವಸ್ಥಾನ ಕೊಲ್ಯ ಇಲ್ಲಿ ಮುಚ್ಚಳಿಗೆ ಅಳವಡಿಸುವ ಕಾರ್ಯಕ್ಕೆ ಸ್ಪೀಕರ್ ಯು.ಟಿ.ಖಾದರ್ ಶಿಲನ್ಯಾಸ ನೆರವೇರಿಸಿದ್ದರು. ಕಾರ್ಯಕ್ರಮದ ಕುರಿತು ಯಾವುದೇ ಮಾಹಿತಿಗಳನ್ನು ಧಾರ್ಮಿಕ ದತ್ತಿ ಇಲಾಖೆ ಸದಸ್ಯರಾದ ಸುರೇಶ್ ಅವರಿಗೆ ನೀಡಲಾಗಿಲ್ಲ. ಅಲ್ಲದೆ ಸೋಮೇಶ್ವರ ಪುರಸಭೆ ಸದಸ್ಯರೊಬ್ಬರ ನೇತೃತ್ವದಲ್ಲಿ ಕಾಮಗಾರಿಗಳ ಗುತ್ತಿಗೆಗಳನ್ನು ಬೇರೆಯವರಿಗೆ ನೀಡಲಾಗಿದೆ ಅನ್ನುವ ಅಸಮಾಧಾನವನ್ನು ಸುರೇಶ್ ಭಟ್ನಗರ ಹೊಂದಿದ್ದರು. ಇದರಿಂದ ಬೇಸತ್ತು ಕಳೆದ ನಾಲ್ಕು ದಿನಗಳ ಹಿಂದೆ ಸುರೇಶ್…
ಉಳ್ಳಾಲ : ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ದಶಮಾನೋತ್ಸವ ಪೂರೈಸುತ್ತಿರುವ ಸುಸಂದರ್ಭದಲ್ಲಿ ಮೈಲುಗಲ್ಲಾಗಿ ಫೆ.25 ರಂದು ಕಣಚೂರು ಆಯುರ್ವೇದ ಆಸ್ಪತ್ರೆ, ಕಣಚೂರು ಫಾರ್ಮಸಿ ಕಾಲೇಜು, 1000 ಆಸನವುಳ್ಳ ಸುಸಜ್ಜಿತ ಆಡಿಟೋರಿಯಂ, ಆಸ್ಪತ್ರೆ ಸ್ಥಾಪಕ ಯು.ಕಣಚೂರು ಮೋನು ಇವರ ಆತ್ಮಚರಿತ್ರೆ ಪುಸ್ತಕ ಅನಾವರಣ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗಾಗಿ ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್ ಸಹಿತ ಲೆವೆಲ್ 3 ಐಸಿಯು ಹಾಗೂ ಶಸ್ತ್ರಚಿಕಿತ್ಸಾ ಘಟಕಗಳ ಉದ್ಘಾಟನೆ ನಡೆಯಲಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ನಿರ್ದೇಶಕ ಕಣಚೂರು ಅಬ್ದುಲ್ ರೆಹಮಾನ್ ಹೇಳಿದರು.ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಫೆ.25 ರಂದು ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರು ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್, ಲೆವೆಲ್ 3 ಐಸಿಯು ಮತ್ತು ಶಸ್ತ್ರಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಕಣಚೂರು ಕಾನ್ಫರೆನ್ಸ್ ಸಭಾಂಗಣ ಹಾಗೂ ಕಣಚೂರು ಸ್ಥಾಪಕ ಯು.ಕಣಚೂರು…
ಉಳ್ಳಾಲ : ಬಿಹಾರ ಛಾಪ್ರದಲ್ಲಿ ಫೇಸ್ ಆಫ್ ಫ್ಯೂಚರ್ ಇಂಡಿಯಾ ವತಿಯಿಂದ ನಡೆದ 9ನೇ ವರ್ಷದ ಭವಿಷ್ಯದ ಭಾರತ ಮತ್ತು ರಾಷ್ಟ್ರೀಯ ಯುವವಿನಿಮಯ ಕಾರ್ಯಕ್ರಮದಲ್ಲಿ ಯೇನೆಪೊಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮೆನೇಜ್ಮೆಂಟ್ ವಿಭಾಗದ ವಿದ್ಯಾರ್ಥಿನಿ ಎಂ.ಎಸ್ ಅಝ್ವೀನಾ ಇವರು ‘ರಾಷ್ಟ್ರೀಯ ಪ್ರೇರಣಾ ಡೂಟ್-2024-25 ಪ್ರಶಸ್ತಿ ಪಡೆದಿದ್ದಾರೆ. ಇವರು ಹರೇಕಳ ಗ್ರಾಮದ ಕಿಸಾನ್ ನಗರ ನಿವಾಸಿಯಾಗಿರುವ ಮೈಮೂನ ಮತ್ತು ದಿ.ಅಬ್ದುಲ್ ಮಜೀದ್ ಇವರ ಪುತ್ರಿ.
ದೇರಳಕಟ್ಟೆ : ಪಾನೀರ್ ಮೆರ್ಸಿ ಅಮ್ಮನವರ ಚರ್ಚ್ ಅಧೀನದಲ್ಲಿರುವ ಕೆಥೋಲಿಕ್ ಸಭಾ (ರಿ) ಪಾನೀರ್ ಘಟಕದ ಅಧ್ಯಕ್ಷರಾಗಿ ಐವನ್ ಮೊಂತೆರೊ ಕುಂಪಲ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಫೆಬ್ರವರಿ 16, 2025ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಮೊಂತೆರೊ, ಭವಿಷ್ಯದಲ್ಲಿ ಘಟಕದ ಕ್ರಿಯಾಶೀಲತೆ ಹೆಚ್ಚಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

