Author: UllalaVani

Kannada News From Coastal Karnataka

ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ `ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಕರಾವಳಿಯಾದ್ಯಂತ ತೆರೆಕಂಡಿದ್ದು, 3 ನೇ ವಾರವೂ ಅದ್ಧೂರಿ ಪ್ರದರ್ಶನ ನೀಡುತಿದ್ದು, ಎಲ್ಲಾ ಥಿಯೇಟರುಗಳಲ್ಲಿ ಪ್ರೇಕ್ಷಕರು ಹೌಸ್ ಫುಲ್ ಆಗಿರುವುದರಿಂದಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಒಬ್ಬ ಯುವಕ ತನ್ನದೇ ಆದ ಮನೆ ಕಟ್ಟಬೇಕು, ಕುಟುಂಬದವರೊಂದಿಗೆ ಸಂತೋಷವಾಗಿ ಬದುಕಬೇಕು, ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಖ ಜೀವನ ನಡೆಸಬೇಕು. ಇವು ಸಾಮಾನ್ಯವಾಗಿ ಎಲ್ಲಾ ಯುವಕರ ಕನಸುಗಳು. ಆದರೆ ಈ ಕನಸುಗಳನ್ನು ಈಡೇರಿಸಲು ಅವರು ಎದುರಿಸಬೇಕಾದ ಸವಾಲುಗಳು ಅಪಾರ. ವಿಶೇಷವಾಗಿ, ಮಧ್ಯಮ ವರ್ಗದ ಕುಟುಂಬದ ಯುವಕರಿಗೆ ಇದು ಸುಲಭವಾದ ದಾರಿ ಅಲ್ಲ.ಈ ಅದ್ಧೂರಿ ಕನಸುಗಳ ನಡುವೆ ಎದುರಾಗುವ ಸವಾಲುಗಳು, ಹಾಸ್ಯಭರಿತ ಸನ್ನಿವೇಶಗಳ ಮೂಲಕ ಹೇಳಲು “ಮಿಡಲ್ ಕ್ಲಾಸ್ ಫ್ಯಾಮಿಲಿ” ಸಿನಿಮಾ ಅಸ್ತಿತ್ವಕ್ಕೆ ಬಂದಿದೆ. ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಮೂಲಕ ತುಳು ಪ್ರೇಕ್ಷಕರ ಮನಗೆದ್ದ ನಿರ್ದೇಶಕ…

Read More

ತಲಪಾಡಿ: ತಲಪಾಡಿಯ ಆರ್.ಟಿ.ಒ ಚೆಕ್‌ಪೋಸ್ಟ್ ಸಮೀಪದಲ್ಲಿರುವ ಪೆಟ್ರೋಲ್ ಬಂಕ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಫೆಬ್ರವರಿ 1ರಿಂದ ಮಾರ್ಚ್ 31ರವರೆಗೆ, ಈ ಪೆಟ್ರೋಲ್ ಬಂಕ್‌ನಲ್ಲಿ ಪ್ರತಿ ಲೀಟರ್ ಡಿಸೇಲ್ ಮತ್ತು ಪೆಟ್ರೋಲ್‌ಗಾಗಿ ರೂ.3 ರಿಯಾಯಿತಿ ನೀಡಲಾಗುತ್ತದೆ. ಇದು ದೀರ್ಘ ಪ್ರಯಾಣಿಕರು, ಡ್ರೈವರ್‌ಗಳು, ಹಾಗೂ ದೈನಂದಿನ ವಾಹನ ಸವಾರರಿಗೆ ಆರ್ಥಿಕವಾಗಿ ಉಪಯೋಗವಾಗುವ ಅವಕಾಶವಾಗಿದೆ. ತಲಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಈ ವಿಶೇಷ ಕೊಡುಗೆಯನ್ನು ಬಳಕೆ ಮಾಡಿಕೊಂಡು ಅತ್ಯುತ್ತಮ ದರದಲ್ಲಿ ತೈಲವನ್ನು ಪಡೆಯಬಹುದಾಗಿದೆ. ಇಂತಹ ವಿಶೇಷ ಆಫರ್ ತುಂಬಾ ಅಪರೂಪವಾಗಿದ್ದು, ವಾಹನ ಸವಾರರು ಈ ಸಮಯದಲ್ಲಿ ತಮಗೆ ಸಾಧ್ಯವಾದಷ್ಟು ತೈಲ ಸಂಗ್ರಹಿಸಿಕೊಳ್ಳಲು ಉತ್ತಮ ಅವಕಾಶ. ಆದುದರಿಂದ, ಈ ಲಾಭದಾಯಕ ಸಮಯವನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್, ಪೆಟ್ರೋಲ್ ಪಡೆಯಲು ತಲಪಾಡಿಯ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ!

Read More

ಕೋಟೆಕಾರು: ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಭೇಟಿಯಾಗಲು ಆಸಕ್ತಿಯುಳ್ಳ ಪ್ರವಾಸಿಗರಿಗೆ ಶುಭಸುದ್ದಿ, ಶ್ರೀ ಗಜಾನನ ಟೂರ್ಸ್ ಆಂಡ್ ಟ್ರಾವೆಲ್ಸ್ ಆಯೋಜಿಸಿರುವ 10 ದಿನಗಳ ವಿಶೇಷ ಪ್ರವಾಸ ಮೇ 10ರಿಂದ ಆರಂಭವಾಗಿ, ಮೇ 20ರಂದು ಸಮಾಪ್ತಿಯಾಗಲಿದೆ. ಈ ಪ್ರಯಾಣದಲ್ಲಿ ಪೌರಾಣಿಕ, ಸಾಂಸ್ಕೃತಿಕ ಹಾಗೂ ಪ್ರವಾಸಿ ತಾಣಗಳ ವೈಭವವನ್ನು ಅನುಭವಿಸಲು ಸುಂದರ ಅವಕಾಶ ಸಿಗಲಿದೆ.ಈ ಪ್ರವಾಸದಲ್ಲಿ ನೀವು ಭೇಟಿಯಾಗುವ ಪ್ರಮುಖ ತಾಣಗಳು: ಕೊನಾರ್ಕ್ ಸೂರ್ಯ ದೇವಾಲಯ , ವಿಶ್ವಪ್ರಸಿದ್ಧ ಶಿಲ್ಪಕಲೆ ಮತ್ತು ಇತಿಹಾಸವನ್ನು ಹೊತ್ತ ಪುರಾತನ ಸ್ಮಾರಕ, ಭುವನೇಶ್ವರ ಆಧ್ಯಾತ್ಮಿಕ ತಾಣಗಳ ಕೇಂದ್ರ ಹಾಗೂ ಅತಿಪ್ರಾಚೀನ ದೇವಾಲಯಗಳ ನಗರ.

Read More

ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆ, ಮಂಗಳೂರು ಇದರ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಪ್ರದೀಪ್ ಕಾಪಿಕಾಡ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘಟನೆಯ ಪ್ರಗತಿಗಾಗಿ ಅವರು ನೀಡಿದ ಸೇವೆ ಹಾಗೂ ನಾಯಕತ್ವವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ. ಪ್ರದೀಪ್ ಕಾಪಿಕಾಡ್ ಅವರು ಮುಂಡಾಲ ಸಮುದಾಯದ ಸಬಲೀಕರಣ, ಯುವಕರ ಒಗ್ಗಟ್ಟಿನ ಬೆಳವಣಿಗೆ, ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಮುಂದುವರಿಸುವ ದಿಟ್ಟ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸಂಘಟನೆಯು ಹೊಸ ಎತ್ತರಗಳನ್ನು ತಲುಪುವ ನಿರೀಕ್ಷೆಯಿದೆ. ಈ ಆಯ್ಕೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಕಾಪಿಕಾಡ್, “ಈ ಜವಾಬ್ದಾರಿ ನನಗೆ ಸಂತೋಷ ಹಾಗೂ ಹೆಮ್ಮೆ ಉಂಟುಮಾಡಿದೆ. ಸಂಘಟನೆಯ ಬೆಳವಣಿಗೆ, ಯುವ ಸಮುದಾಯದ ಸಬಲೀಕರಣ, ಮತ್ತು ಆರ್ಥಿಕ-ಸಾಮಾಜಿಕವಾಗಿ ಸಮುದಾಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ನಾನು ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ. ಅಖಿಲ ಭಾರತ ಮುಂಡಾಲ ಯುವ ವೇದಿಕೆಯು ಯುವ ಜನತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವೃತ್ತಿ ತರಬೇತಿಗೆ…

Read More

ಕೋಟೆಕಾರು: ನಡಾರು ದೇವರ ಅರಮನೆ ರಸ್ತೆಯ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ 8ನೇ ವರ್ಷದ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದ ವಾರ್ಷಿಕ ಸಾಮೂಹಿಕ ಅಗೆಲು ಸೇವೆ ಫೆಬ್ರವರಿ 23, ಭಾನುವಾರ ಭಕ್ತಿಭಾವದಿಂದ ನಡೆಯಲಿದೆ.ಈ ಪಾವನ ಸಂದರ್ಭದಲ್ಲಿ, ಶ್ರೀ ಸ್ವಾಮಿ ಕೊರಗಜ್ಜನ ಭಕ್ತಾದಿಗಳು ಭಕ್ತಿ ಹಾಗೂ ಸಮರ್ಪಣಾಭಾವದಿಂದ ಭಾಗವಹಿಸಲು ಸಿದ್ಧತೆಗಳು ನಡೆದಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ಣ ಕಾರ್ಯಕ್ರಮಗಳ ಮೂಲಕ ಈ ಅಗೆಲು ಸೇವೆ ಜರುಗಲಿದೆ.ಬೆಳಿಗ್ಗೆ 6.30 ದಂಪತಿಗಳಿಂದ ದೀಪ ಪ್ರಜ್ವಲನೆ ,7.00ರಿಂದ ಮಧ್ಯಾಹ್ನ 12.೦೦ ರವರೆಗೆ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಗಣಹೋಮ, ನವಕಲಶ, ಮಹಾಪೂಜೆಸಂಜೆ 6.00 ರಿಂದ 7.00 ರವರೆಗೆ ಸ್ಥಳೀಯ ಮಕ್ಕಳಿಂದ ಜನಪದ ನೃತ್ಯ ಪ್ರದರ್ಶನ, ರಾತ್ರಿ 7.30 ಭಕ್ತಾದಿಗಳ ಸಾಮೂಹಿಕ ಅಗೆಲು ಸೇವೆ, ರಾತ್ರಿ 7.00ರಿಂದ 8.30 ಪ್ರಸಾದ್ ಮಡ್ಯಾರು ಪ್ರಾಯೋಜಿತ “ಕಲಾಂಜಲಿ ಮೆಲೋಡೀಸ್, ಮಂಗಳೂರು” ತಂಡದಿಂದ ಭಕ್ತಿ ರಸಮಂಜರಿ, ರಾತ್ರಿ 8.30 ರಿಂದ 9.30 ಶ್ರೀಕಾಂತ್ ಕೊಂಡಾಣ ಅವರ ನೇತೃತ್ವದಲ್ಲಿ ಜನಪದ ನೃತ್ಯರಾತ್ರಿ 9.30…

Read More

ಉಳ್ಳಾಲ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಸಂಘಟನೆಯಿಂದ ಬಲಯುತರಾಗಿರಿ ಅನ್ನುವ ವಿಚಾರ ಕೊಲ್ಯ ಸಂಘದ ಸದಸ್ಯರಿಂದ ನಿರಂತರವಾಗಿ ಪಾಲನೆಯಾಗಿದೆ. ಈ ಮೂಲಕ ಸಂದೇಶವನ್ನು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯ ಸಮಾಜದ ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕಾರ್ಯ ಕೊಲ್ಯ ಬಿಲ್ಲವ ಸೇವಾ ಸಮಾಜದಿಂದ ಆಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.ಸೋಮೇಶ್ವರ ಕೊಲ್ಯದ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಹಾಗೂ ಬಿಲ್ಲವ ಸೇವಾ ಸಮಾಜ ಆಶ್ರಯದಲ್ಲಿ 47ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದ ವಾರ್ಷಿಕ ಭಜನಾ ಮಂಗಳೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯ ಬಾಬು ಪಂಡಿತ್ ಅವರ ಅಧ್ಯಕ್ಷತೆಯೊಂದಿಗೆ ಆರಂಭವಾದ ಸಂಘಟನೆ ಡಾ. ರಾಮಾನುಜಂ, ರಮಾನಾಥ ಕೋಟೆಕಾರು ಅವರಂತಹ ಬಲಾಢ್ಯರನ್ನು ಹೊಂದುವ ಮುಖೇನ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ದೊಡ್ಡ ಜಾಗವನ್ನು ಖರೀದಿಸಿರುವುದು ದೊಡ್ಡ ವಿಷಯ.…

Read More

ವರದಿ: ಅಭಿಷೇಕ್ ಅಸೈಗೋಳಿ ಅಸೈಗೋಳಿ: ಇಲ್ಲಿನ ಕೊಣಾಜೆ ಪಟ್ಟೋರಿಯ ಶ್ರೀ ನಾಗಬ್ರಹ್ಮ ಅರಸು ಉಳ್ಳಾಲ್ತಿ  ಮಾಡ ಇಲ್ಲಿ 490 ವರ್ಷಗಳ ಬಳಿಕ ಪಟ್ಟೋರಿ ಧರ್ಮ ನಡಾವಳಿ  ಮಾ. 16 ರಿಂದ 18 ರವರೆಗೆ ಜರಗಲಿದೆ.ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಉಳ್ಳಾಲ್ತಿ ಅಮ್ಮನ ಮುಗ ಮತ್ತು  ಧರ್ಮ ಅರಸರ ಕಿರುವಾಳ್ ಭಂಡಾರದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಉಳ್ಳಾಲ್ತಿ  ಧರ್ಮ ಅರಸರ  ಪಟ್ಟೋರಿ ಧರ್ಮ ನಡಾವಳಿ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದೆ.800 ವರ್ಷಗಳ ಇತಿಹಾಸವನ್ನು ಪಟ್ಟೋರಿಯ ಮಣ್ಣು ಹೊಂದಿದ್ದು, 490 ವರ್ಷಗಳ ಬಳಿಕ ಶ್ರೀ ಉಳ್ಳಾಲ್ತಿ ಧರ್ಮ ಅರಸರ  ಧರ್ಮ ನಡಾವಳಿ ನಡೆಯುತ್ತಿದೆ . ಬೆಳಿಗ್ಗೆ 8 ಗಂಟೆಯಿಂದ ಶ್ರೀ ಉಳ್ಳಾಲ್ತಿ ಅಮ್ಮನ ನೂತನ ಮುಗ- ಧರ್ಮರಸರ ಕಿರುವಾಳ್ ಪ್ರತಿಷ್ಠಾ ಕಲಶಾಭಿಷೇಕ, ಭೂತ ನಾಗ ಪ್ರತಿಷ್ಠೆ, ಸಂಜೆ 4 ಕ್ಕೆ ಚಪ್ಪರ ಮುಹೂರ್ತ, ಮಾ.18 ರಂದು ಬೆಳಿಗ್ಗೆ 5 ಕ್ಕೆ ಉಳ್ಳಾಲ್ತಿ ಮಾಡಕ್ಕೆ ಕಿರುವಾಳ್ ಆಗಮನ, ಶುದ್ಧಿ ಕಲಶ, ತಂಬಿಲ ನಂತರ ಕಿರುವಾಳ್ ರಾಜಾಂಗಣಕ್ಕೆ ಇಳಿಯಲಿದೆ.ಬೆಳಿಗ್ಗೆ 10.30…

Read More

ಗ್ರಾಮದ ಬಡವರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ 9 ಎಕರೆ ಜಮೀನು ಮೀಸಲಿಡಲಾಗಿದ್ದು ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ, ಈಗಾಗಲೇ ಹಲವು ಅರ್ಜಿಗಳು ಬಂದಿದ್ದು ಲೇಔಟ್ ಮಾದರಿಯ ನಿವೇಶನ ನಿರ್ಮಾಣ ಪ್ರಕ್ರಿಯೆ ನಡೆದಿದೆ.‌ ಮೈದಾನ, ಅಂಗನವಾಡಿ, ಪಾರ್ಕ್, ಆಸ್ಪತ್ರೆಗೂ ಜಾಗ ಮೀಸಲಿಡಲಾಗಿದ್ದು ನಾಲ್ಕು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್ ಹೇಳಿದರು.ಹರೇಕಳ ಗ್ರಾಮದ 5ನೇ ವಾರ್ಡ್ ನ್ಯೂಪಡ್ಪು ತ್ವಾಹಾ ಜುಮಾ ಮಸೀದಿ ಬಳಿ ರಸ್ತೆ ತಡೆಗೋಡೆ ಕೆಲಸಕ್ಕೆ ಗುರುವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಮಲಾರ್ ಕೋಡಿಯಲ್ಲಿ ಆಯುಶ್ಮಾನ್ ಆಸ್ಪತ್ರೆ ನಿರ್ಮಾಣ ಆಗಲಿದ್ದು ಅನುದಾನ ಬಿಡುಗಡೆಯಾಗಿದೆ. ನಿವೇಶನ ಪ್ರಕ್ರಿಯೆ ಪ್ರಯುಕ್ತ ಗ್ರಾಮದ ನಿಯೋಗ ಸ್ಪೀಕರ್ ಖಾದರ್ ಅವರನ್ನು ಭೇಟಿಯಾಗಿದ್ದು ಅನುದಾನ ನೀಡುವ ಭರವಸೆ ದೊರೆತಿದೆ. ಈ ಕಾರ್ಯ ಯಶಸ್ಸಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರವಲ್ಲದೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು.ತ್ವಾಹಾ ಜುಮಾ ಮಸೀದಿಯ ಖತೀಬ್ ಝೈನುದ್ದೀನ್ ಸಖಾಫಿ…

Read More

ಉಳ್ಳಾಲ: ದೆಹಲಿ ಚುನಾವಣೆಯಲ್ಲಿ ಬಿ.ಜೆ.ಪಿ. ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ   ಮಂಗಳೂರು ಮಂಡಲ ಬಿ.ಜೆ.ಪಿ.  ವತಿಯಿಂದತೊಕ್ಕೊಟ್ಟು ಜಂಕ್ಷನ್ ಬಳಿ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಹೇಮಂತ್ ಶೆಟ್ಟಿ, ಕಾರ್ಯದರ್ಶಿ ಗಳಾದ ಜೀವನ್ ಕುಮಾರ್ ತೊಕ್ಕೊಟ್ಟು, ಮನೋಜ್ ಕಟ್ಟೆಮನೆ, ಕಾರ್ಯಾಲಯ ಕಾರ್ಯದರ್ಶಿ ದಯಾನಂದ ಕೋಣಾಜೆ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಾಧವಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ  ಸುಮಲತಾ, ರೈತ ಮೋರ್ಚಾದ ಅಧ್ಯಕ್ಷರಾದ ಪದ್ಮನಾಭ ಗಟ್ಟಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಕಾಪಿಕಾಡ್, ಉಳ್ಳಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕೋಟೆಕಾರ್ ಮಹಾಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಶೆಟ್ಟಿ, ಬೂತ್ ಅಧ್ಯಕ್ಷರಾದ ದೀಕ್ಷಿತ್ ನಿಸರ್ಗ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Read More

ಮಂಗಳೂರು : ಕರ್ನಾಟಕ ಪವರ್ ಲಿಫ್ಟಿಂಗ್ ಅಂಗ ಸಂಸ್ಥೆಯಾಗಿರುವ ದಕ್ಷಿಣ ಕನ್ನಡ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಎ.ಉಮೇಶ್ ಗಟ್ಟಿ ಜೆಪ್ಪು ಆಯ್ಕೆಯಾಗಿದ್ದಾರೆ. ಮಂಗಳೂರು ಹಂಪನಕಟ್ಟೆಯ ಸರಕಾರಿ ನೌಕರರ ಸಭಾಂಗಣದಲ್ಲಿ ಪವರ್‌ಲಿಫ್ಟಿಂಗ್ ಇಂಡಿಯಾ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಷನ್‌ನ ಕಾರ್ಯಕಾರಿ ಅಧ್ಯಕ್ಷರಾಗಿ ದೇವದಾಸ್ ಕೂಳೂರು, ಉಪಾಧ್ಯಕ್ಷರಾಗಿ ಕಮಲಾಕ್ಷ ಬಿ. ಕಾಪಿಕಾಡು, ಹೇಮಚಂದ್ರ ಬಬ್ಬುಕಟ್ಟೆ, ಕಾರ್ತಿಕ್ ರಾಜ್ ಮೋರ್ಗನ್ಸ್ ಗೇಟ್, ಭಾಸ್ಕರ ಕುದ್ರೋಳಿ, ಗೌರವ ಕಾರ್ಯದರ್ಶಿಯಾಗಿ ಮಧುಚಂದ್ರ ಗುರು ನಗರ, ಜತೆ ಕಾರ್ಯದರ್ಶಿಗಳಾಗಿ ವಿನ್ಸೆಂಟ್ ಪ್ರಕಾಶ್ ಕಾರ್ಲೊ ತಾರೆ ತೋಟ, ಪ್ರದೀಪ್ ಕುಮಾರ್ ಅಚಾರ್ಯ, ಖಜಾಂಚಿಯಾಗಿ ಮೋಹನ್‌ರಾಜ್ ಕಾರ್‌ ಸ್ಟ್ರೀಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ್.ಜಿ ಪೂಜಾರಿ ಬಿಕರ್ನಕಟ್ಟೆ, ಕೇಶವ ಕರ್ಕೇರಾ ಕಿನ್ನಿಗೋಳಿ, ಅರುಣ್ ಗಟ್ಟಿ, ಕೋಟೆಕಾರು, ಕಮಲಾಕ್ಷ ಬೋಂದೆಲ್, ಹರ್ಷಿತ. ವಿ.ಸಾಲ್ಯಾನ್ ಸುರತ್ಕಲ್, ದೀಪಾ ಕೆ.ಎಸ್,…

Read More