ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿ ಬಳಿ ಚೂರಿ ಇರಿತದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಬೈಕ್ನಲ್ಲಿ ಬಂದಿದ್ದ ಆಗಂತುಕರಿಬ್ಬರು ತಲಪಾಡಿ ತೂಮಿನಾಡು ನಿವಾಸಿ ಪ್ರದೀಪ್ ಎಂಬಾತನಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ಕಾರ್ಪೋರೇಶನ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿರುವ ಪ್ರದೀಪ್ ಎಂದಿನಂತೆ ಬಸ್ಸಿನಿಂದ ಇಳಿದು ತನ್ನ ಸಹೋದರನಿಗೆ ಬೈಕ್ ತರಲು ಹೇಳಿ ತಲಪಾಡಿ ಜಂಕ್ಷನ್ನಿಂದ ದೇವಿಪುರ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಆಗಂತುಕರಿಬ್ಬರು ಚೂರಿಯಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಬಂದ ಪ್ರದೀಪ್ ಸಹೋದರ ಲಕ್ಷ್ಮಿಕಾಂತ್ ಗಾಯಗೊಂಡಿದ್ದ ಪ್ರದೀಪ್ನನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರದೀಪ್ ಯಾವುದೇ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ತನ್ನ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಎನ್ನಲಾಗುತ್ತಿದೆ. ಮೂರನೇ ಘಟನೆ : ತಲಪಾಡಿಯಲ್ಲಿ ಸೋಮವಾರ ಕಾರು ಧ್ವಂಸ ನಡೆದಿದ್ದು, ಇದರಲ್ಲಿ 6 ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇದಾದ ಬಳಿಕ ಮಂಗಳವಾರ ತೊಕ್ಕೊಟ್ಟಿನ ಒಳಪೇಟೆಯಲ್ಲಿ ಗುಂಪೊಂದು ಯುವಕನಿಗೆ ಥಳಿಸಿ ಸುಮಾರು ಒಂದು ಲಕ್ಷ ರೂ ಮೌಲ್ಯದ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕಾರುಗಳನ್ನು ತಡೆದು ಗಾಜು ಪುಡಿಗೈದು, ಆರು ಜನರ ಮೇಲೆ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜೇಶ್ವರ ನಿವಾಸಿಗಳಾದ ಅಝರ್, ರಶೀದ್, ನಿಝಾಂ, ನಿಯಾಝ್, ಯಾಸೀರ್, ಅನೀದ್ ಹಲ್ಲೆಗೊಳಗಾದವರು. ಸ್ವಿಫ್ಟ್ ಕಾರಿನಲ್ಲಿ ಮಂಜೇಶ್ವರದಿಂದ ಮಂಗಳೂರಿನತ್ತ ತೆರಳುತ್ತಿದ್ದ ಇವರನ್ನು ಮಂಜೇಶ್ವರದಿಂದ ಬೆನ್ನಟ್ಟಿದ ಸ್ಕೂಟರ್ ಹಾಗೂ ಬೈಕ್ ಗಳಲ್ಲಿ ಬಂದಿದ್ದ 10 ಮಂದಿಯ ತಂಡ ತಲಪಾಡಿ ಸಮೀಪ ಕಾರನ್ನು ಅಡ್ಡಗಟ್ಟಿ ತಡೆಹಿಡಿದಿದ್ದರು. ಕಾರಿನಲ್ಲಿದ್ದವರು ಕಾರನ್ನು ಬಾಡಿಗೆಗೆ ಪಡೆದಿರುವ ವಿಚಾರವನ್ನು ತಿಳಿಸಿದಾಗ, ಕಾರಿನ ಮಾಲೀಕರನ್ನು ತಂಡ ಸ್ಥಳಕ್ಕೆ ಕರೆಸಿತ್ತು. ಅಲ್ಲಿಗೆ ಆಲ್ಟೋ ಕಾರಿನಲ್ಲಿ ಬಂದ ಕಾರಿನ ಮಾಲೀಕನನ್ನು ತಡೆದ ತಂಡ ಎರಡು ಕಾರುಗಳ ಗಾಜನ್ನು ಪುಡಿಗೈದು ಎರಡು ಕಾರಿನಲ್ಲಿದ್ದ ಆರು ಮಂದಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಬಳಿಯಿದ್ದ ಮೊಬೈಲ್ ಹಾಗೂ ನಗದನ್ನು ಲೂಟಿಗೈದಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಿನಲ್ಲಿ ಭಾಗಿಯಾಗಿತ್ತು !: ಇತ್ತೀಚೆಗೆ ತಲಪಾಡಿಯ ಪಂಜಾಳ ಸಮೀಪ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಕಳವು ನಡೆಸಿ ಕಳವುಗೈದ ಮಾಲನ್ನೇ ಬಿಟ್ಟು ಕಳ್ಳರು ಪರಾರಿಯಾದ ಘಟನೆ ಕೊಣಾಜೆಯಲ್ಲಿ ನಡೆದಿದ್ದರೆ, ಇಲ್ಲೊಂದು ಕಳ್ಳರ ತಂಡ ಒಂದು ಲಕ್ಷ ಬೆಲೆಬಾಳುವ ಬೈಕನ್ನು ಕಳವಿಗೆ ಯತ್ನಿಸಿ ಕೇವಲ ಅದರ ಟಯರನ್ನೇ ಕಳವು ನಡೆಸಿ ಪರಾರಿಯಾಗಿರುವ ಪ್ರಸಂಗ ಕುತ್ತಾರು ಸಮೀಪದ ಮುಂಡೋಳಿ ಎಂಬಲ್ಲಿ ನಡೆದಿದೆ. ಮೂಲತ: ಕೇರಳ ನಿವಾಸಿ ಝಿರಾರ್ ಎಂಬವರ ಪಲ್ಸಾರ್ ಬೈಕಿನ ಹಿಂಬದಿ ಟಯರನ್ನು ಕಳಚಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮುಂಡೋಳಿ ಸಮೀಪ ಬಾಡಿಗೆ ಮನೆಯಲ್ಲಿರುವ ಝಿರಾರ್ ಅವರು ಮನೆ ಕಂಪೌಂಡಿನ ಒಳಗೆ ಬೈಕ್ ನಿಲ್ಲಿಸಿದ್ದರು. ಮಂಗಳವಾರ ತಡರಾತ್ರಿ ಬೈಕನ್ನು ಕಳವುಗೈದ ಕಳ್ಳರು ಮನೆಯಿಂದ ಅರ್ಧ ಕಿ.ಮೀ ದೂರದವೆರೆಗೆ ಬೈಕನ್ನು ಕೊಂಡೊಯ್ದು , ಅಲ್ಲಿಯೇ ಬೈಕಿನ ಹಿಂಬದಿ ಟಯರನ್ನು ಟೂಲ್ಸ್ ಮುಖೇನ ಕಳಚಿ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ. ಝಿರಾರ್ ಬೆಳಿಗ್ಗೆ ತಮ್ಮ ಮಳಿಗೆಗೆ ಹೋಗಲು ಬಾಗಿಲು ತೆಗೆಯುತ್ತಿದ್ದಂತೆ ಬೈಕ್ ನಾಪತ್ತೆಯಾಗಿತ್ತು. ಬೈಕ್ ಕಳವಾಗಿದೆ ಎಂದು ಭಾವಿಸಿದ ಅವರು ಉಳ್ಳಾಲ ಪೊಲೀಸರಿಗೆ ದೂರವಾಣಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಆತ ಕ್ಲಾಸಿನಲ್ಲಿ 3 ನೇ ರ್ಯಾಂಕ್ ಗಳಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ. ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದ. ಆದರೆ ದುರಂತವೆಂದರೆ ಒಂದು ಸೈಕಲ್ ಅಪಘಾತ ಆತನನ್ನು ಮೂರು ವರ್ಷಗಳಿಂದ ಜೀವಚ್ಛವವಾಗಿ ಮಲಗಿಸಿದೆ. ಆರ್ಥಿಕವಾಗಿ ಬಳಲಿರುವ ಕುಟುಂಬಕ್ಕೆ ಸಹಾಯ ಹಸ್ತ ಬೇಕಾಗಿದೆ. ಕುತ್ತಾರು ಸುಭಾಷ್ನಗರ ನಿವಾಸಿ ಜಯಂತಿ ಅವರಿಗೆ ಆಘಾತಗಳ ಮೇಲೊಂದು ಆಘಾತ. ಹತ್ತು ವರ್ಷಗಳ ಹಿಂದೆ ಮನೆಗೆ ಆಧಾರ ಸ್ತಂಭವಾಗಿದ್ದ ಪತಿಯನ್ನು ಅಪಘಾತದಲ್ಲಿ ಕಳೆದುಕೊಂಡರು. ಅದರ ದು:ಖ ಹಾಗೂ ಜೀವನ ನಿರ್ವಹಣೆಯನ್ನು ಸರಿದೂಗಿಸುವ ಸಂದರ್ಭದಲ್ಲಿ ಮಗ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ 15ರ ಹರೆಯದ ಪುನೀತ್ ಸೈಕಲ್ ಅಪಘಾತಕ್ಕೀಡಾಗಿ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾನೆ. ಪುನೀತ್ ಸಂತ ಆಲೋಷಿಯಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. 2011ರ ಡಿಸೆಂಬರ್ನಲ್ಲಿ ಮನೆಯ ಪಕ್ಕದ ರಸ್ತೆಯಲ್ಲಿ ಇತರ ಸ್ನೇಹಿತರೊಂದಿಗೆ ಸೈಕಲ್ನಲ್ಲಿ ತೆರಳುತ್ತಿದ್ದಾಗ ಇಳಿಜಾರಿನ ಪ್ರದೇಶದಲ್ಲಿ ಅಪಘಾತವಾಗಿದ್ದು, ಕುತ್ತಿಗೆಯ ಹಿಂಬಾಗಕ್ಕೆ ಕಲ್ಲು ಬಡಿದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಸೈಗೋಳಿ: ನೈಸರ್ಗಿಕ ಸಂಪತ್ತನ್ನು ಮನುಷ್ಯ ಸ್ವಾರ್ಥಕ್ಕಾಗಿ ಬಳಸುವುದರ ಪರಿಣಾಮ ಮಳೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಗೆ ಮಹತ್ವ ನೀಡುವಂತಹ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಶ್ರೀ ನಾಗಬ್ರಹ್ಮ ಭಜನಾ ಮಂಡಲಿ ಪಟ್ಟೋರಿ ಹಾಗೂ ನಿಟ್ಟೆ ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಗ್ರಾಮದ ಪಟ್ಟೋರಿಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಸ್ಯ ಸಂಪತ್ತುಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಪರಿಸರದ ಸಂರಕ್ಷಣೆ ಸಾಧ್ಯ. ಇಂತಹ ಪರಿಸರಪೂರಕ ಕಾರ್ಯಗಳಿಗೆ ಸಂಘ ಸಂಸ್ಥೆಗಳು ಸೇರಿಕೊಂಡು ಭಾಗವಹಿಸಿದಾಗ ಸರಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದರು. ಗೃಹ ರಕ್ಷಕ ದಳದ ಕಮಾಡೆಂಟ್ ಡಾ.ಮುರಲೀ ಮೋಹನ ಚೂಂತಾರು ಮಾತನಾಡಿ ಇತ್ತೀಚೆಗೆ ಕಾಡುಗಳನ್ನು ನಾಶ ಮಾಡಿ ಕಾಂಕ್ರೀಟು ಕಟ್ಟಡಗಳೇ ಹೆಚ್ಚುತ್ತಿವೆ. ಅಲ್ಲದೆ ಪರಿಸರದ ಮೇಲೆ ನಾವು ಒಂದಲ್ಲ ಒಂದು ರೀತಿಯಲ್ಲಿ ಹಾನಿಯನ್ನು ಮಾಡುತ್ತಿದ್ದೇವೆ. ಇನ್ನಾದರೂ…
ತೊಕ್ಕೊಟ್ಟು: ಬಸ್ಸುಗಳೆರಡರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಾಲಕಿಯರು ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣದ ಸಮೀಪ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ಉಳ್ಳಾಲ ಕಡೆಗೆ ತೆರಳುತ್ತಿದ್ದ ಚೈತನ್ಯಾ ಮತ್ತು ರಿಹಾನಾ ಎಂಬವರು ಗಾಯಗೊಂಡಿದ್ದಾರೆ. ಘಟನೆಯ ವಿವರ ಮಂಗಳೂರಿನಿಂದ ಉಳ್ಳಾಲ ಕಡೆಗೆ ತೆರಳುತ್ತಿದ್ದ ಸಿಟಿ ಬಸ್ ಹಾಗೂ ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ವಿಸ್ ಬಸ್ಸುಗಳೆರಡರ ಮಧ್ಯೆ ಅಪಘಾತ ಸಂಭವಿಸಿದೆ. ಟೈಮಿಂಗ್ ವಿಚಾರದಲ್ಲಿ ಮಂಗಳೂರಿನಿಂದಲೇ ಅಡ್ಡಾದಿಡ್ಡಿಯಾಗಿ ಬಸ್ಸನ್ನು ಚಲಾಯಿಸಿದ ಉಳ್ಳಾಲದ ಸಿಟಿ ಬಸ್ಸಿನ ಚಾಲಕ ಏಕಾಏಕಿ ತೊಕ್ಕೊಟ್ಟು ಕೇಂದ್ರ ಬಸ್ಸ್ ನಿಲ್ದಾಣದಿಂದ ರಸ್ತೆಗೆ ತರುವ ಸಂದರ್ಭದಲ್ಲಿ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಜಿಲ್ಲಾಡಳಿತ ಮರಳು ಮಾಫಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾನೂನು ಬದ್ಧವಾಗಿ ಸಾಂಪ್ರದಾಯಿಕ ಮರಳು ತೆಗೆಯಲು ಅನುಮತಿ ನೀಡಿ ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ. ಅವರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ನ ಉಳ್ಳಾಲ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಒಂದು ತಿಂಗಳಿನಿಂದ ಮರಳು ತೆಗೆಯಲು ತಾತ್ಕಾಲಿಕ ನಿಷೇಧ ಹೇರಿದ ಜಿಲ್ಲಾಡಳಿತದ ಕ್ರಮದಿಂದ ಮರಳಿನ ಅಭಾವ ಉಂಟಾಗಿದ. ಇದರಿಂದ ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿ ಅಭದ್ರತೆಯಲ್ಲಿದ್ದಾರೆ. ಇದರಿಂದ ಅವರ ಮಕ್ಕಳ ವಿದ್ಯಾಭ್ಯಾಸ , ಕುಟುಂಬ ನಿರ್ವಹಣೆಯೂ ಅಸಾಧ್ಯವಾಗಿದೆ. ಕೂಡಲೇ ಜಿಲ್ಲಾಡಳಿತ ಮರಳು ಮಾಫಿಯಾ ವಿರುದ್ಧ ಕ್ರಮಕೈಗೊಂಡು ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ ಕಲ್ಪಿಸದೇ ಇದ್ದಲ್ಲಿ, ಕೂಲಿ ಕಾರ್ಮಿಕರ ಕುಟುಂಬ ಹಸಿವಿನಿಂದ ಸಾಯುವ ಸ್ಥಿತಿ ಎದುರಾಗಬಹುದು ಎಂದರು. ಸಿಐಟಿಯು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಕೀರ್ತಿಯನ್ನು ಗಳಿಸಿದಂತಹ ಕಣಚೂರು ಸಂಸ್ಥೆಯ ಸ್ಥಾಪಕರ ಕಾರ್ಯ ಶ್ಲಾಘನೀಯ ಎಂದು ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಡಾ.ಎಂ.ಅಬ್ದುಲ್ ರೆಹಮಾನ್ ಹೇಳಿದ್ದಾರೆ. ಅವರು ದೇರಳಕಟ್ಟೆಯ ಕಣಚೂರು ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕಣಚೂರು ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಇದರ ಜಂಟಿ ಆಶ್ರಯದಲ್ಲಿ ಸೋಮವಾರ ಕಣಚೂರು ಅಕಾಡೆಮಿಕ್ ಹಾಲ್ ನಲ್ಲಿ ಜರಗಿದ ಸ್ಥಾಪಕರ ದಿನಾಚರಣೆಯ ಪ್ರಯುಕ್ತ ಸ್ಥಾಪಕ ಯು.ಕಣಚೂರು ಮೋನು ಅವರನ್ನು ಸನ್ಮಾನಿಸಿ ಮಾತನಾಡಿದರು. ಉದ್ಯಮಿಗಳು ಶಿಕ್ಷಣ ಕ್ಷೇತ್ರದಲ್ಲಿ ಅಪರೂಪವಾಗಿ ತೊಡಗಿಸಿಕೊಳ್ಳುತ್ತಾರೆ. ಆದರೆ ಕಣಚೂರು ಮೋನು ಅವರು ಉದ್ಯಮ ಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿಶೇಷವಾಗಿ ಹೆಣ್ಮಕ್ಕಳನ್ನು ಶಿಕ್ಷಿತರನ್ನಾಗಿಸುವ ಕಾರ್ಯ ಕೈಗೊಂಡಿರುವುದು ಉತ್ತಮ ಸಾಧನೆ ಎಂದರು. ಕಣಚೂರು ಆಸ್ಪತ್ರೆಯ ಅನಾಟೆಮಿ ವಿಭಾಗ ಮುಖ್ಯಸ್ಥ ಡಾ.ಅರುಣಾಚಲಂ ಕುಮಾರ್, ಮಂಗಳೂರಿನ ಫಿಸಿಷಿಯನ್ ಡಾ.ಮಹಮ್ಮದ್ ಇಸ್ಮಾಯಿಲ್, ಕಣಚೂರು ಸಂಸ್ಥೆಗಳ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ವಿಶ್ವ ಹಿಂದು ಪರಿಷತ್ ಗೋ ಸಂರಕ್ಷಣಾ ಸಮಿತಿ ವತಿಯಿಂದ ಇಂದು ಮಂಗಳೂರಿನಲ್ಲಿ ನಡೆಯಲಿರುವ `ಗೋ ಸಂರಕ್ಷಣೆಯ ಬಗ್ಗೆ ಜಾಗೃತಿ ಜಾಥಾ’ ದಲ್ಲಿ ಪಾಲ್ಗೊಳ್ಳಲು ಉಳ್ಳಾಲ, ತಲಪಾಡಿ, ಕೋಟೆಕಾರು, ಕೊಣಾಜೆ, ಮುಡಿಪು ಭಾಗದ ಹಿಂದು ಸಂಘಟನೆ ಕಾರ್ಯಕರ್ತರು ತಲಪಾಡಿಯಿಂದ ಮಂಗಳೂರಿಗೆ ಸಹಸ್ರ ಸಂಖ್ಯೆಯಲ್ಲಿ ರ್ಯಾಲಿ ಮುಖೇನ ತೆರಳಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಪ್ರವಾಸಿ ದೇರಳಕಟ್ಟೆ ಇದರ ಆಶ್ರಯದಲ್ಲಿ ರಂಜಾನ್ ಪ್ರಯುಕ್ತ ನಾಟೆಕಲಿನಲ್ಲಿ ಕಾರ್ಯಾಚರಿಸುತ್ತಿರುವ ಮುಸ್ಲಿಂ ವಸತಿ ಶಾಲೆಯ ಮಕ್ಕಳೊಂದಿಗೆ ಇಫ್ತಾರ್ ಕೂಟವನ್ನು ಶನಿವಾರ ಸಂಜೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಸನಬ್ಬ ಮಾತನಾಡಿ ಆಥಿ೯ಕವಾಗಿ ಹಿಂದುಳಿದವರನ್ನು ಹುಡುಕಿ ಅವರಿಗೆ ನೆರವು ನೀಡುವ ಈ ಸಂಘಟನೆಯ ಆಸೆಗಳೆಲ್ಲವೂ ನೆರವೇರಲಿ ಇನ್ನು ಹೆಚ್ಚು ಒಳ್ಳೆಯ ಕೆಲಸ ಮಾಡಲು ಅನುಗ್ರಹಿಸಲಿ ಎಂದು ಪ್ರಾಥಿ೯ಸಿದರು. ಅಶ್ರಫ್ ದೇರಳಕಟ್ಟೆ ರಂಜಾನ್ ಸಂದೇಶ ನೀಡಿ ಈ ಕೇಂದ್ರದಲ್ಲಿ ನಾವು ಈವರೆಗೆ ಕಾಣದ ಸಂತೋಷವನ್ನು ಕಂಡಿದ್ದೇವೆ. ಇವರ ಸಹಾಯಕ್ಕೆ ಕೈಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿ ಮನುಷ್ಯ ಹುಟ್ಟಿ ಬೆಳೆವ ಸಂದರ್ಭದಲ್ಲಿ ತನಗಾಗಿ ಗಳಿಸಿದ ಒಂದು ಅಂಶವನ್ನು ಇಂತಹ ಬಡವರಿಗೆ ನೀಡಿದರೆ ದೇವರ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಆಗ ಅವನ ಜೀವನ ಸಾರ್ಥಕವಾಗುತ್ತದೆ ಎಂದರು. ಮಗ್ರಿಬ್ ನಮಾಜಿನ ಬಳಿಕ ವಿಶೇಷ ಬೋಜನದ ವ್ಯೆವಸ್ಥೆ ಮಾಡಲಾಗಿತ್ತು ಕಾಯ೯ಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಹಂಝ ದೇರಳಕಟ್ಟೆ, ಕಬೀರ್ ದೇರಳಕಟ್ಟೆ, ಮುತ್ತಲಿಬ್ ದೇರಳಕಟ್ಟೆ, ಅನ್ವರ್ ಮತ್ತು ಶಾಹುಲ್ ಹಮೀದ್…

