Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಮೇಲ್ಸೇತುವೆಯಿಂದ ಅಬ್ಬಕ್ಕ ಸರ್ಕಲ್ ತನಕದ 10ಕೋಟಿ ರೂ. ಮೊತ್ತದ ಯೋಜನೆಯ ಮೊದಲ ಹಂತದ ಕಾಮಗಾರಿಯ ರಸ್ತೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ರಸ್ತೆ ನಿರ್ಮಾಣ ಕಾಲದಲ್ಲಿ ಎಲ್ಲರ ಸಹಕಾರ ಲಭ್ಯವಾಗಿದೆ. ಈ ರಸ್ತೆಯನ್ನು ಜಿಲ್ಲೆಯಲ್ಲಿಯೇ ಮಾದರಿ ರಸ್ತೆಯನ್ನಾಗಿ ಮಾಡುವ ಯೋಜನೆ ಇದೆ. ಅಬ್ಬಕ್ಕ ಸರ್ಕಲ್‍ನಿಂದ ಮುಕ್ಕಚ್ಚೇರಿಯಾಗಿ ಸೋಮೇಶ್ವರ ಸಂಪರ್ಕಿಸುವ ಹಾಗೂ ಅಬ್ಬಕ್ಕ ಸರ್ಕಲ್‍ನಿಂದ ಕೋಡಿಗೆ ಸಂಪರ್ಕಿಸುವ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಡಾಮರೀಕರಣ ಮಾಡಲಿದ್ದೇವೆ ಎಂದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರ ಸಭೆ ಅಧ್ಯಕ್ಷೆ ಗಿರಿಜಾ ಎಂ.ಬಾೈ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಕ್ಕಚ್ಚೇರಿ, ನಗರ ಸಭೆ ಸದಸ್ಯ ಫಾರೂಕ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ಮೊಹಮ್ಮದ್ ಮುಸ್ತಫಾ, ಸಲೀಂ, ಆಸಿಫ್ ಉಳ್ಳಾಲ, ಅಬ್ದುಲ್ ಅಜೀಝ್ ಹಕ್, ಅಹ್ಮದ್ ಬಾವಾ ಕೊಟ್ಟಾರ, ತಾಲೂಕು ಪಂಚಾಯತ್ ಸದಸ್ಯ ಮೊಹಮ್ಮದ್ ಮೋನು, ಗುತ್ತಿಗೆದಾರ ಸುಧಾಕರ್ ಪೂಂಜಾ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದೇ ಇರುವುದರಿಂದ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಕೂಡ ವ್ಯಾಪಕವಾಗಿ ನಡೆಯಬೇಕಾಗಿದೆ. ಅಪಘಾತ, ಹೆರಿಗೆಯ ಸಂದರ್ಭದಲ್ಲಿ ಬ್ಲಡ್ ಕ್ಯಾನ್ಸರ್, ಡೆಂಗ್ಯೂ ಮತ್ತು ಇನ್ನಿತರ ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ ಎಂದು ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಸದಸ್ಯ ಹಾರೀಸ್ ಮಲಾರ್ ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಂiÀi ಹಾಗೂ ಕೆ. ಎಂ. ಸಿ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಹಳೆಕೋಟೆಯ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ರಕ್ತದಾನದ ಶಿಬಿರದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಸ್ಜೀದುಲ್ ಅಲ್ ಕರೀಂ ಹಳೆಕೋಟೆ ಖತೀಬರಾದ ಉಸ್ಮಾನ್ ಸಅದಿ ದು:ಆ ನೆರವೇರಿಸಿದರು. ಪಿಎಫ್‍ಐ ಹಳೆಕೋಟೆ ಘಟಕಾಧ್ಯಕ್ಷ ಪೈರೋಝ್ ಉಳ್ಳಾಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಅಕ್ಷಯ್ ಕಾಂiÀರ್iಕ್ರಮ ಉದ್ಘಾಟಿಸಿದರು. ಎಸ್.ಐ.ಓ. ಉಳ್ಳಾ¯ ಸೆಕ್ಟರ್ ಅಧ್ಯಕ್ಷ ಡಾ. ಝೈನುದೀನ್ ಅಳೇಕಲ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಅನುದಾನಿತ ಮದನಿ ಪ್ರೌಢಶಾಲೆ ಅಳೇಕಲ ಉಳ್ಳಾಲ ಇಲ್ಲಿಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹಿಂ ಕಾಸಿಂ, ಉಳ್ಳಾಲ ಪುರಸಭಾ ಅಧ್ಯಕ್ಷೆ ಗಿರಿಜಾ ಬಾೈ ಸೈಕಲ್ ವಿತರಿಸಿದರು. ಶಾಲೆಯ ಸಂಚಾಲಕ ಯು.ಕೆ. ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಉಪಾಧ್ಯಕ್ಷೆ ರಜಿಯಾ ಇಬ್ರಾಹಿಂ, ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ ಜೊತೆ ಕಾರ್ಯದರ್ಶಿ ಎ.ಎ. ಖಾದರ್, ಸಮಿತಿ ಸದಸ್ಯರಾದ ಯು.ಎ. ಇಸ್ಮಾಯಿಲ್, ಮದನಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಬಿ. ಮೂಸಾ, ಪ್ರಾಥಮಿಕ ಶಾಲೆಯ ಸಂಚಾಲಕ ಇಬ್ರಾಹಿಂ ಅಲಿಯಬ್ಬ, ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಮೀರಾ ಜೆ. ಉಪಸ್ಥಿತರಿದ್ದರು. ಸಹ ಶಿಕ್ಷಕ ಇಬ್ರಾಹಿಂ ಪಿ. ಸ್ವಾಗತಿಸಿದರು. ದೈಹಿಕ ಶಿಕ್ಷಕ ಲೋಕನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದೇವಪ್ಪ ಶೆಟ್ಟಿ ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಎಲಿಮಲೆ: ದೇರಳಕಟ್ಟೆಯ ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಕಾರದೊಂದಿಗೆ ಮುಳ್ಳೇರಿಯಾ ಹವ್ಯಕ ಮಂಡಲ ಗುತ್ತಿಗಾರು ವಲಯ ಪರಿಷತ್ ನೆಲ್ಲೂರು ಕೆಮ್ರಾಜೆ ಫ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಮಿತ್ತ ಮಂಡಳಿ ಎಲಿಮಲೆ, ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಎಲಿಮಲೆಯ ಜ್ಞಾನದೀಪ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಞಾನದೀಪ ಶಾಲೆಯ ಅಧ್ಯಕ್ಷ ಚಂದ್ರಶೇಖರ ತಳೂರು ಉದ್ಘಾಟಿಸಿದರು. ಈ ಸಂದರ್ಭ ನೆಲ್ಲೂರು ಕೆಮ್ರಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗುಡ್ಡದ ಮನೆ, ಗುತ್ತಿಗಾರು ವಲಯ ಹವ್ಯಕ ಪರಿಷತ್ ಇದರ ಆರೋಗ್ಯ ಸಂಚಾಲಕ ರಮೇಶ್ ದೇಲಂಪಾಡಿ ಮತ್ತು ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿ ಡಾ. ಮುರಲೀ ಮೋಹನ್ ಚೂಂತಾರು ಉಪಸ್ಥಿತಿರಿದ್ದರು. ಸುಮಾರು 50 ಮಂದಿ ರಕ್ತದಾನ ಮಾಡಿದರು. ಸುಬ್ರಮ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಂಟ್ವಾಳ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕತ್ತಿಯಿಂದ ಕಡಿದು ಮಂಚಿ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಗೈದಿರುವ ಹೃದಯಾ ವಿದ್ರಾವಕ ಘಟನೆ ಇರಾ ಸಮೀಪದ ಮಂಚಿ ಎಂಬಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮಂಚಿ ಪಂಚಾಯತ್ ಸದಸ್ಯ ಪದ್ಮನಾಭ ಆತನ ಪತ್ನಿ ಹಾಗೂ ಮಕ್ಕಳಾದ ಪೂರ್ವಿ ಮತ್ತು ಪೃಥ್ವಿ ಇವರನ್ನು ಕತ್ತಿಯಿಂದ ಕಡಿದು ತಾನು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಇವರ ಮನೆ ಸಮೀಪ ಪಿಕಪ್ ವಾಹನದಲ್ಲಿ ಬಂದವರು ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಮಧ್ಯರಾತ್ರಿಯಲ್ಲಿ ಪದ್ಮನಾಭ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದೆ. ಮಾಟ ಮಂತ್ರದ ಅಭ್ಯಾಸ: ಎಂದಿನಂತೆ ಮನೆಯಲ್ಲಿ ಪದ್ಮನಾಭ ಅವರ ತಾಯಿ ಹಾಗೂ ಪಕ್ಕದ ಮನೆಯ ಹುಡುಗಿಯೋರ್ವಳು ಇರುತ್ತಿದ್ದರು. ಮಂಗಳವಾರ ಸಂಜೆ ಮನೆಯಲ್ಲಿ ಸಮಸ್ಯೆಯಿದ್ದು ಅದಕ್ಕಾಗಿ ಮೂಳಿಗೆಯೊಂದನ್ನು ಮಾಡಲಿದ್ದೇನೆ ನೀವಿಬ್ಬರು ಇಂದು ಸಹೋದರನ ಮನೆಗೆ ಹೋಗಿ ಎಂದು ತಿಳಿಸಿದ್ದನು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಪದ್ಮನಾಭ ಮನೆಯಲ್ಲಿ ಸಮಸ್ಯೆ ಇರುವುದಾಗಿ ಹಲವರಲ್ಲಿ ಹೇಳಿಕೊಂಡಿದ್ದನು ಎಂದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎತ್ತಿನಹೊಳೆ ಯೋಜನೆ ಮೂಲಕ ನೇತ್ರಾವತಿ ನದಿ ತಿರುವು ಯೋಜನೆಯನ್ನು ಕಾರ್ಯಗತಗೊಳಿಸುವ ಈ ಯೋಜನೆ ಭ್ರಷ್ಠಾಚಾರದ ಯೋಜನೆಯಾಗಿದ್ದು, ಪರಿಸರಕ್ಕೆ ವಿರುದ್ಧವಾಗಿರುವ ಈ ಯೋಜನೆಯ ವಿರುದ್ಧ ಜನರು ಜಾಗೃತರಾಗಿ ಹೋರಾಟ ನಡೆಸಬೇಕು ಎಂದು ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅಬಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಜಂಕ್ಷನ್‍ನಲ್ಲಿ ತುಳುನಾಡು ರಕ್ಷಣಾ ವೇದಿಕೆ ಇದರ ಆಶ್ರಯದಲ್ಲಿ ನೇತ್ರಾವತಿ ನದಿ ಉಳಿಸಿ ಅಭಿಯಾನದ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಯೋಜನೆಯಿಂದ ಸಾವಿರಾರು ಕೋಟಿ ರೂಪಾಯಿ ಹಣ ಪೋಲು ಆಗುತ್ತಿದ್ದು, ಇದು ಜನಪ್ರತಿನಿಧಿಗಳ ಕಿಸೆ ತುಂಬಿಸಲು ಮಾಡುವ ಯೋಜನೆಯಾಗಿದ್ದು, ಸರಿಯಾಗಿ ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಿದರೆ ಭ್ರಷ್ಟಾಚಾರದ ಎಲ್ಲಾ ವಿಚಾರಗಳು ಬಯಲಾಗಲಿದ್ದು, ಈ ಯೋಜನೆಯ ವಿರುದ್ಧ ತುಳುನಾಡು ರಕ್ಷಣಾ ವೇದಿಕೆಯಂತಹ ಸಂಘಟನೆಗಳು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು. ರಥಯಾತ್ರೆಯ ರುವಾರಿ ಮತ್ತು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಮಾತನಾಡಿ ಕಳೆದ ನಾಲ್ಕು ದಿನಗಳಿಂದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸಂಕೊಳಿಗೆ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಬೈಕ್‍ನಲ್ಲಿ ಬಂದ ಆಗಂತುಕರಿಬ್ಬರು ಸರ ಎಳೆದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೊಳಿಗೆ ಬಳಿ ನಡೆದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಗನವಾಡಿ ಶಿಕ್ಷಕಿಯಾಗಿರುವ ಉಚ್ಚಿಲ ಸಂಕೊಳಿಗೆ ನಿವಾಸಿ ಪುಷ್ಪಲತಾ ಎಂಬವರ ಸರವನ್ನು ಸೆಳೆದು ಪರಾರಿಯಾಗಿದ್ದು, ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಆಗಂತುಕರು ಈ ಕೃತ್ಯವನ್ನು ನಡೆದಿದೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಜಿಲ್ಲಾ ಪಂಚಾಯಿತಿಯ ವಿಕಲಚೇತನರ ನಿಧಿಯಿಂದ ಮಂಜೂರಾದ ತಲಪಾಡಿ ಗ್ರಾಮ ಪಂಚಾಯಿತಿನ ರಾಮನಗರ 1 ನೇ ಅಡ್ಡರಸ್ತೆಯ ಕಾಂಕ್ರೀಟಿಕರಣಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಶಿಲಾನ್ಯಾಸಗೈದರು. ರಾಮನಗರ ಪ್ರದೇಶದಲ್ಲಿರುವ ಅಂಗವಿಕಲೆ ವಿಜಯಭಾರತಿ ಎಂಬವರಿಗೆ ರಸ್ತೆಯಿಲ್ಲದೆ ಹೋಗಿ ಬರಲು ಅಸಾಧ್ಯವಾಗುತಿತ್ತು. ಈ ಬಗ್ಗೆ ಅವರು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಜಿ.ಪಂ ಅಧ್ಯಕ್ಷರ ಜತೆಗೆ ಸಮಾಲೋಚಿಸಿ ರೂ. 3 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ತಲಪಾಡಿ ಪಂ. ವ್ಯಾಪ್ತಿಗಳಲ್ಲಿ ಬೇಧಭಾವವಿಲ್ಲದೆ ಸಂಸದರು, ಜಿಲ್ಲಾ ಪಂಚಾಯಿತಿ, ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದೆ . ಮುಂದೆ ತಲಪಾಡಿಯಿಂದ ದೇವಿಪುರಕ್ಕೆ ಹೋಗುವ ರಸ್ತೆಯ ಕಾಂಕ್ರೀಟಿಕರಣಕ್ಕೆ 3.25 ಕೋಟಿ ಹಣ ಮಂಜೂರಾಗಿದೆ. ಶೀಘ್ರದಲ್ಲಿ ಅದರ ಕಾಮಗಾರಿಯನ್ನು ಪೂರ್ತಿಗೊಳಿಸಿ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. ಈ ಸಂದರ್ಭ ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್, ತಲಪಾಡಿ ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ .ಟಿ, ಬಿಜೆಪಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಾಯಿ ಮತ್ತು ಮಗಳಿಗೆ ತೆಂಗಿನಕಾಯಿ ಕೀಳುವ ಯುವಕನೋರ್ವ ಹಲ್ಲೆ ನಡೆಸಿರುವ ಘಟನೆ ಸೋಮವಾರ ಸಂಜೆ ನಾರ್ಲ ಪಡೀಲು ಎಂಬಲ್ಲಿ ನಡೆದಿದೆ. ತಲಪಾಡಿ ನಾರ್ಲ ಪಡೀಲ್ ನಿವಾಸಿ ಮೈಕಲ್ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆತನ ನೆರೆಮನೆಯ ನಿವಾಸಿಗಳಾದ ನೆಬಿಸಾ(62) ಮತ್ತು ಆಕೆಯ ಪುತ್ರಿ ಆಸ್ಮಾ(38) ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು. ಘಟನೆಯ ವಿವರ : ಮೈಕಲ್ ತನ್ನ ನೆರೆಮನೆಯೊಬ್ಬರ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿದ್ದಾಗ ತೆಂಗಿನ ಗರಿ ತಾಗಿ ಕೇಬಲ್ ವಯರ್ ಕೆಳಗೆ ಬಿದ್ದಿತ್ತು. ಈ ವಿಚಾರದಲ್ಲಿ ಪಕ್ಕದ ಮನೆಯ ನೆಬಿಸಾ ಅವರು ಕೇಬಲನ್ನು ಮೇಲಕ್ಕೆ ಕಟ್ಟಿಕೊಡುವಂತೆ ಕೇಳಿದಾಗ ಅವ್ಯಾಚ ಶಬ್ದಗಳಿಂದ ನೆಬಿಸಾರನ್ನು ನಿಂದಿಸಿದ್ದು, ಈ ಸಂದರ್ಭದಲ್ಲಿ ನೆಬಿಸಾ ಅವರ ಮಗಳು ಆಸ್ಮಾ ಬಂದು ಯಾಕೆ ತಾಯಿಯನ್ನು ನಿಂದಿಸುತ್ತಿಯಾ ಎಂದು ಕೇಳಿದಾಗ ಕೈಯಲ್ಲಿದ್ದ ತೆಂಗಿನ ಕಾಯಿಯಿಂದ ಅಸ್ಮಾಳ ತಲೆಗೆ ಹೊಡೆದಿದ್ದು, ಪ್ರಜ್ಞÉ ತಪ್ಪಿ ಬಿದ್ದ ಆಸ್ಮಾಳ ಬಳಿ ನೆಬಿಸಾ ಬಂದಾಗ ಮೈಕಲ್ ಕಲ್ಲಿನಿಂದ ನೆಬಿಸಾ ಅವರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಚ್ಚಿಲ: ಸೋಮೇಶ್ವರ ನ್ಯೂ ಉಚ್ಚಿಲದಲ್ಲಿರುವ ವೃಂದಾವನದಲ್ಲಿ ಕೋಟಿ ಚೆನ್ನಯರಿಗೆ `ಪನಿಯರ ಪರ್ವ ಸೇವೆ’ ಸೆ. 22ರಂದು ರಾತ್ರಿ 8.30ಕ್ಕೆ ನಡೆಯಲಿದೆ. ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಶ್ರೀ ಜೀವನ್ ಗುರೂಜಿ ಅವರು ಇಟ್ಟ ದೃಶ್ಯಾಂಜನ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಕೋಟಿ ಚೆನ್ನಯರ ಹುಟ್ಟು 22-9-1556ರಂದು ಆಗಿದ್ದು, ಈ ಹಿನ್ನಲೆಯಲ್ಲಿ ಸ್ವರ್ಣ ಕೇದಗೆ ಕೋಟಿ-ಚೆನ್ನಯ ಪ್ರತಿಷ್ಠಾನ ನ್ಯೂ ಉಚ್ಚಿಲದಲ್ಲಿ ಪನಿಯಾರ ಪರ್ವ ಸೇವೆಯನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ

Read More