Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ 2015-16ರ ಸಾಲಿನಲ್ಲಿ ಸೇರ್ಪಡೆಗೊಂಡ ಎಂ.ಬಿ.ಬಿ.ಎಸ್ ಪ್ರಥಮ ವರುಷ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿ ಪೋಷಕರನ್ನು ಕಾಲೇಜಿಗೆ ಸ್ವಾಗತಿಸುವ ಕಾರ್ಯಕ್ರಮ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಕುಲಪತಿ ಪ್ರೋ.ಡಾ.ಎಸ್. ರಮಾನಂದ ಶೆಟ್ಟಿ ಅವರು ನೂತನ ವಿದ್ಯಾರ್ಥಿಗಳಿಗೆ ಕ್ಷೇಮ ಮೆಡಿಕಲ್ ಅಕಾಡೆಮಿಯ ಕಿರು ಪರಿಚಯ ಮಾಡಿಕೊಟ್ಟರು. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಪೋಷಕರ ಕನಸನ್ನು ನನಸು ಮಾಡುವ ಉದ್ದೇಶದಿಂದ ಬಂದಿದ್ದು ಅದನ್ನು ಈಡೇರಿಸಬೇಕು. ಹಾಗೆಯೇ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ, ಶಿಸ್ತು, ಕರ್ತವ್ಯದ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ನಿಟ್ಟೆ ವಿವಿ ಕುಲಸಚಿವ ಪ್ರೊ.ಎಂ.ಎಸ್.ಮೂಡಿತ್ತಾಯ, ಕ್ಷೇಮ ಕುಲಸಚಿವ ಡಾ. ಜಯಪ್ರಕಾಶ್ ಶೆಟ್ಟಿ, ಕ್ಷೇಮ ವೈಸ್ ಡೀನ್ ಡಾ.ಪಿ.ಎಸ್.ಪ್ರಕಾಶ್ ಉಪಸ್ಥಿತರಿದ್ದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ ಅವರು ವಿದ್ಯಾರ್ಥಿ ಹಾಗೂ ಪೋಷಕರನ್ನು ಸ್ವಾಗತಿಸಿದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ವೈಸ್ ಡೀನ್ ಡಾ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ : ಉಳ್ಳಾಲದ ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ಮುಂದಿನ ವರುಷ ಜ. 30ರಂದು ಅಷ್ಟ ಪವಿತ್ರ ನಾಗ ಮಂಡಲೋತ್ಸವ ನಡೆಯಲಿದ್ದು ಆ ಪ್ರಯುಕ್ತ ವಿವಿಧ ಸಮಿತಿಗಳ ರಚನೆಯ ಪೂರ್ವಭಾವಿ ಸಭೆ ರವಿವಾರ ಶ್ರೀ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರದ, ಧಾರ್ಮಿಕ, ಸಾಮಾಜಿಕ ನಾಯಕರ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭ ನಾಗಮಂಡಲೋತ್ಸವ ಸಮಿತಿಗೆ ಸಂಬಂಧಿಸಿದ ಉಪ ಸಮಿತಿಯನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಘೋಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಶಿವಣ್ಣ ಶೆಟ್ಟಿ ವಹಿಸಿದ್ದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ , ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ರಾಜಕೀಯ ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಕ್ಷೇತ್ರದ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಪ್ರಮುಖರಾದ ಪ್ರವೀಣ್ ಬಗಂಬಿಲ, ರಮೇಶ್ ಶಿವಭಾಗ್, ರಾಜೀವಿ ಕೆಂಪುಮಣ್ಣು, ಸುರೇಖ ಚಂದ್ರಹಾಸ, ಲಲಿತಾ ಸುಂದರ್, ದೀಪಕ್ ಪಿಲಾರ್, ಸುಷ್ಮಾ ಜನಾರ್ಧನ್, ಸುರೇಶ್ ಭಟ್ನಗರ, ದಿನೇಶ್ ಕುಂಪಲ, ದಿವಾಕರ ಉಪಸ್ಥಿತರಿದ್ದರು. ಧರ್ಮದರ್ಶಿಗಳಾದ ಭಾಸ್ಕರ್ ಐತಾಳ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ರಾಷ್ಟ್ರೀಯ ಸೇವಾ ಯೋಜನೆಯ ಕನಸು ಈ ಸಮಾಜದ ಸುಧಾರಣೆ ಆಗಿದೆ. ಯುವಶಕ್ತಿ ನಮ್ಮ ದೇಶದ ನಿಜವಾದ ಸಂಪನ್ಮೂಲ. ಈ ದೇಶದ ಶಕ್ತಿ. ಯುವಶಕ್ತಿ ಮನಸ್ಸು ಮಾಡಿದರೆ ಈ ದೇಶದ ಚಿತ್ರಣವನ್ನೇ ಬದಲಿಸಬಹುದು ಎಂದು ಮಂಗಳೂರಿನ ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಇಗ್ನೇಶಿಯಸ್ ನೇವಿಲ್ ನೊರೊನ್ಹಾ ಅಭಿಪ್ರಾಯಪಟ್ಟರು. ಅವರು ಸೋಮವಾರ ಉಳ್ಳಾಲದ ಕೆ. ಪಾಂಡ್ಯರಾಜ್ ಬಲ್ಲಾಳ್ ಆಡಿಟೋರಿಯಂನಲ್ಲಿ ಕೆ. ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಇನ್‍ಸ್ಟಿಟ್ಯೂಟ್ ಹಾಗೂ ಕಾಲೇಜ್ ಆಫ್ ನರ್ಸಿಂಗ್‍ನ ಜಂಟಿ ಆಶ್ರಯದಲ್ಲಿ ಆರು ದಿನಗಳ ಕಾಲ ನಡೆಯಲಿರುವ ಎನ್‍ಎಸ್‍ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯು ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಅದೆಷ್ಟೋ ಧನಾತ್ಮಕ ವಿಚಾರಗಳು ಹೊರಬರಲು ಸಾಧ್ಯವಾಗಿದೆ. ಸಮಾಜದಲ್ಲಿನ ತಪ್ಪುಗಳನ್ನು ತಿದ್ದಲು ಸಹಕಾರಿಯಾಗಿದೆ. ಹಾಗಾಗಿ ಶಿಬಿರಾರ್ಥಿಗಳು ಯಾವುದೇ ವಿಚಾರದ ಕುರಿತಾಗಿ ಜನಜಾಗೃತಿ ಮೂಡಿಸುವತ್ತ ಹಾಗೂ ಜನರಲ್ಲಿ ಅರಿವು ಮೂಡಿಸಿ ಅದರಿಂದಾದ ಬದಲಾವಣೆಯ ಬಗ್ಗೆಯೂ ಗಮನಹರಿಸಬೇಕು ಎಂದ ಅವರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ತಾಂತ್ರಿಕ ಶಿಕ್ಷಣದಲ್ಲಿ ಪ್ರತಿಭೆಯೊಂದಿಗೆ ನಿರಂತರ ಕಲಿಕೆ, ಕೌಶಲ್ಯವೃದ್ಧಿಸಿಕೊಂಡರೆ ಮಾತ್ರ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗವನ್ನು ಗಳಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿ ಡಾ. ಮಹೇಶಪ್ಪ ಅಭಿಪ್ರಾಯಪಟ್ಟರು. ಅವರು ಕೊಣಾಜೆ ನಡುಪದವಿನ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾರಂಬೋತ್ಸವ `ಫ್ರೆಶರ್ಸ್ ಡೇ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದಶಕಗಳ ಹಿಂದೆ ಶೈಕ್ಷಣಿಕವಾಗಿ ಬಹಳಷ್ಟು ಪ್ರತಿಭಾವಂತರಾಗಿದ್ದರೂ ಉದ್ಯೋಗ ಅರಸುತ್ತಾ ದೇಶ ವಿದೇಶಗಳೀಗೆ ಹೋಗುವ ಅನಿವಾರ್ಯತೆ ಇತ್ತು. ಆದರೆ ಬದಲಾದ ದಿನಗಳಲ್ಲಿ ಬೃಹತ್ ಸಂಸ್ಥೆಗಳು ಕಾಲೇಜಿನ ಕ್ಯಾಂಪಸ್‍ಗೆ ಬಂದು ಉದ್ಯೋಗವಕಾಶ ಕೊಡುತ್ತಿದೆ. ಆದರೆ ಪ್ರತಿಭಾವಂತರಾಗಿದ್ದರೆ ಮಾತ್ರ ತಕ್ಷಣವೇ ಉದ್ಯೋಗ ತಮ್ಮದಾಗಿಸಿಕೊಳ್ಳಲು ಸಾಧ್ಯ ಎಂದ ಅವರು ಪಿ.ಎ.ಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಮೂಲಭೂತ ಸೌಕರ್ಯ, ಉನ್ನತ ಬೋಧಕ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಉನ್ನತ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪಿ.ಎ.ಇಂಜಿಯರಿಂಗ್ ಕಾಲೇಜು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಹಳೆ ಸ್ಟೇಟ್‍ಬ್ಯಾಂಕ್ ಬಳಿ ಬಾರ್‍ಎಂಡ್ ರೆಸ್ಟಾರೆಂಟೊಂದನ್ನು ಬಲವಂತಾಗಿ ಕಟ್ಟಡದ ಮಾಲಕರು ತೆರವು ಮಾಡಿದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದ್ದು, ತೆರವಿಗೆ ಸಂಬಂ„ಸಿದಂತೆ ಒಂದು ಜೆಸಿಬಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದು 15 ಮಂದಿಯನ್ನು ಉಳ್ಳಾಲ  ಪೊಲೀಸರು  ಬಂಧಿಸಿದ್ದಾರೆ. ಬಾರ್ ತೆರವಿನಿಂದ ಸುಮಾರು ಎಂಟು ಲಕ್ಷ ರೂ. ನಷ್ಟವಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ. ರವೀಂದ್ರ ಉಳ್ಳಾಲ್ ಎಂಬವರಿಗೆ ಸೇರಿದ ಅಶೋಕ್ ಬಾರ್ ಎಂಡ್ ರೆಸ್ಟಾರೆಂಟನ್ನು ನಸುಕಿನ ವೇಳೆ ತೆರವು ನಡೆಸಿದ್ದು, ಕಟ್ಟಡ ಮಾಲಕಿ ಲಲಿತಾ ರವಿ ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ತೆರವು ನಡೆಸುತ್ತಿದ್ದ ಜೆಸಿಬಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡರೆ, ಜೆಸಿಬಿ ಚಾಲಕ ಸಹಿತ ತೆರವು ನಡೆಸುತ್ತಿದ್ದ 15 ಜನರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಚೋಟಾ ಮಂಗಳೂರು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಉಳ್ಳಾಲದ ಹಳೆ ಸ್ಟೇಟ್ ಬ್ಯಾಂಕ್ ಬಳಿ ರವೀಂದ್ರ ಎಂಬವರು ಸುಮಾರು 22…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಸ್ಕೂಟರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಯುವಕನನ್ನು ಬಜರಂಗದಳದ ಕಾರ್‍ಯಕರ್ತರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಂಡಿತ್ ಹೌಸ್ ಬಳಿ ಶನಿವಾರ ನಡೆದಿದೆ.  ಉಳ್ಳಾಲದ ಮೇಲಂಗಡಿ ನಿವಾಸಿ ಮಲಿಕ್(೨೩)  ಬಂಧನಕ್ಕೊಳಗಾದವ.  ಮದನಿನಗರದಿಂದ ಉಳ್ಳಾಲದ ಕಡೆಗೆ ಅಕ್ರಮವಾಗಿ  ಸ್ಕೂಟರಿನಲ್ಲಿ ಮಾಂಸವನ್ನು  ಸಾಗಾಟ ನಡೆಸುತ್ತಿರುವ  ಮಾಹಿತಿಯನ್ನು ಬಜರಂಗದಳದ ಕಾರ್‍ಯಕರ್ತರು ಪಡೆದಿದ್ದರು.  ಎಂದಿನಂತೆ ಇಂದು ಮಲಿಕ್  ಉಳ್ಳಾಲದಿಂದ ಮದನಿನಗರಕ್ಕೆ ಆಕ್ಟಿವಾ  ಸ್ಕೂಟರಿನಲ್ಲಿ ತೆರಳಿ  ಕಾದು ಕುಳಿತ ಬಜರಂಗದಳದ ಕಾರ್‍ಯಕರ್ತರು  ಬಳಿಕ ವಾಪಸ್ಸಾಗುವ ಸಂದರ್ಭ ಪಂಡಿತ್ ಹೌಸ್  ಸಮೀಪ  ಅಡ್ಡ ಹಾಕಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ  ಆರೋಪಿಯನ್ನು ಸ್ಕೂಟರ್ ಸಮೇತ ವಶಕ್ಕೊಪ್ಪಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ವರದಿ: ಪ್ರವೀಣ್.ಯಸ್.ಕುಂಪಲ ತೊಕ್ಕೊಟ್ಟು: ಸಮಾಜದಲ್ಲಿ ಫಲಾಪೇಕ್ಷೆಯಿಲ್ಲದೆ ದುಡಿಯುತ್ತಿರುವವರು ಹಲವು ಮಂದಿ ಇದ್ದು, ಅವರನ್ನು ಗುರುಪೂರ್ಣಿಮೆಯಂದು ಗುರುತಿಸುವುದು ಒಳ್ಳೆಯ ಕಾರ್‍ಯ ಎಂದು ಧಾರ್ಮಿಕ ಪರಿಷತ್ ಸದಸ್ಯ ಕೆ.ಟಿ.ಸುವರ್ಣ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ವ್ಯಾಸ ಪೂರ್ಣಿಮೆಯ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಹಾಗೂ ಧಾರ್ಮಿಕ, ಸಾಮಾಜಿಕ ಮುಂದಾಳು ಸದಾನಂದ ಬಂಗೇರ ಇವರಿಗೆ ಗುರುವಂದನೆ ನೆರವೇರಿಸಿ ಮಾತನಾಡಿದರು. ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಸಹೆಗಾರ ಆನಂದ್ .ಕೆ.ಅಸೈಗೋಳಿ, ಅಧ್ಯಕ್ಷ ಹರೀಶ್ ಅಂಬ್ಲಮೊಗರು, ಕಾರ್‍ಯದರ್ಶಿ ಕಿರಣ್ ಕೊಲ್ಯ, ಸದಸ್ಯರುಗಳಾದ ರಾಕೇಶ್ ಬೈಪಾಸ್, ವಿಶ್ವನಾಥ್ ಶೆಟ್ಟಿ, ಪ್ರಕಾಶ್ ಸಿಂಫೋನಿ, ಶಿವಾಜಿ ತೊಕ್ಕೊಟ್ಟು, ಗಣೇಶ್ ಕಾಪಿಕಾಡು, ನವೀನ್ ಬೈಪಾಸ್, ನಾರಾಯಣ ಕೆರೆಬೈಲ್, ಪುರುಷೋತ್ತಮ ರಾವ್, ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು. ಜೀವನ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್. ಯಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ತೊಕ್ಕೊಟ್ಟು ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಬಂಟ್ವಾಳ ತಾಲೂಕಿನ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಮುಡಿಪಿನ ಜಂಟಿ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಸಾಂಸ್ಕ ೃತಿಕ ಭವನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರ ಸಮಾರೋಪ ಭಾನುವಾರ ನಡೆಯಿತು. ಸಮಾರೋಪದಲ್ಲಿ ಮಾತನಾಡಿದ ಆಯುರ್ವೇದ ತಜ್ಞ ಮಂಗಳೂರಿನ ಡಾ. e್ಞÁನೇಶ್ ನಾಯಕ್ ಮನುಷ್ಯನಿಗೆ ಬದುಕುವುದಕ್ಕಾಗಿ ಆಹಾರ ಅನಿವಾರ್ಯ. ಬದುಕುವುದಕ್ಕಾಗಿ ಮಾತ್ರ ಆಹಾರ ಸೇವನೆ ಮಾಡಬೇಕು ಹಾಗೂ ಆಹಾರ ಮಿತ ಪ್ರಮಾಣದಲ್ಲಿದ್ದದರೆ ಮಾತ್ರ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂಬ ಅರಿವು ನಮ್ಮಲ್ಲಿರಬೇಕು ಎಂದು ನುಡಿದರು. ಪ್ರತಿಯೊಬ್ಬರು ಬದುಕಿನ ಬಗ್ಗೆ ಕೆಲವೊಂದು ನಿರೀಕ್ಷೆ ಇಟ್ಟುಕೊಮಡಿರುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾದರೆ ನಮಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಯೋಗ ಉತ್ತಮ ಬದುಕಿನ ದಾರಿಯನ್ನು ಹೇಳಿಕೊಡುತ್ತದೆ ಎಂದರು. ಆರೋಗ್ಯವನ್ನು ಕಾಪಡಿಕೊಳ್ಳುವಲ್ಲಿ ಯೋಗ ಯಾವ ರೀತಿಯ ಪಾತ್ರ ವಹಿಸಿದೆ ಎಂಬುವುದು ಇಡೀ ವಿಶ್ವವೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೈರಂಗಳ, ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ, ಸಾರ್ಥಕ ಬದುಕಿನ ಯಾತ್ರೆ ಮುಗಿಸಿದ ಮಹಾನ್ ಚೇತನ ಮಾಜಿ ರಾಷ್ಟ್ರಪತಿ ಭಾರತರತ್ನ ಡಾ|ಎ.ಪಿ.ಜೆ.ಅಬ್ದುಲ್‍ಕಲಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಥೆಯ ಮಾರ್ಗದರ್ಶಕರಾದ ಪಿ.ಶಂಕರಭಟ್ ಕಲಾಂ ಅವರ ಜೀವನ ಸಾಧನೆ ಕುರಿತಾಗಿ ನುಡಿನಮನ ಸಲ್ಲಿಸಿ, ಎರಡು ದಶಕಗಳ ಹಿಂದೆ ಶ್ರೀಹರಿಕೋಟದ ಉಪಗ್ರಹ ಉಡ್ಡಯನ ಕ್ಷೇತ್ರದಲ್ಲಿ ಕಲಾಂ ಅವರ ಜೊತೆಯಾಗಿ ಕೆಲಸ ನಿರ್ವಹಿಸಿದ ಸಂದರ್ಭವನ್ನು ಸ್ಮರಿಸಿಕೊಂಡರು ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು. ಈ ಸಂದರ್ಭ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್.ಎನ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಕುಮಾರಿ ಯೋಗಿತಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಕುಮಾರಿ ಸಂಧ್ಯಾ ಹಾಗೂ ಮೂರೂ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳೊಡನೆ ಕಲಾಂ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸಿ ಗೌರವಿಸಿದರು. ಕಲಾಂ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನವಾಗಿ ಸಾಮೂಹಿಕ ಪ್ರಾರ್ಥನೆ ಗೈಯಲಾಯಿತು.

Read More

2008ರಂದು ದೆಹಲಿಯ ನೋಯ್ಡಾದಲ್ಲಿ ಹೆತ್ತವರೇ ತಮ್ಮ 14 ವರ್ಷದ ಮಗಳು ಆರೋಷಿ ಹಾಗೂ ಮನೆಯ ಕೆಲಸಗಾರ ಹೇಮರಾಜ್ ಕೊಲೆ ಮಾಡಿದ ಘಟನೆ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ ವಿಷಯ ತಿಳಿದೆ ಇದೆ. ಅದಕ್ಕೆ ವ್ಯತಿರಿಕ್ತ ಎಂಬಂತೆ ಆರುಷಿ ಪ್ರಕರಣದ ಕಥೆಯಾಧಾರಿತ ತಲ್ವಾರ್ ಚಿತ್ರವು ಅಕ್ಟೋಬರ್ ನಲ್ಲಿ ತೆರೆಗೆ ಬರಲಿದ್ದು ಇನ್ನು ಸೆಪ್ಟಂಬರ್’ನಲ್ಲಿ ನಡೆಯಲಿರುವ ಟೊರಾಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಕ್ರೈಂ ಥ್ರಿಲ್ಲರ್ ವಿಭಾಗದಲ್ಲಿ ಆಯ್ಕೆ ಪಡೆದುಕೊಂಡಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ ಆರೋಷಿ ತಂದೆಯ ಪಾತ್ರದಲ್ಲಿ ಬಾಲಿವುಡ್ ನಟ ಇರ್ಫಾನ್ ಖಾನ್ ಹಾಗೂ ತಾಯಿಯ ಪಾತ್ರದಲ್ಲಿ ತಬು ಕಾಣಿಸಿಕೊಂಡಿದ್ದಾರೆ. ಮೆಘನಾ ಗುಲ್ಜರ್ ನಿರ್ದೇಶನದ ಈ ಚಿತ್ರಕ್ಕೆ ಮೊದಲ ಸಕ್ಸಸ್ ಎಂಬಂತೆ ಚಿತ್ರವು ಟೊರಾಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ 35 ಚಿತ್ರಗಳಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೊಂದು ಸಂತಸದ ವಿಷಯವೆಂದರೆ ಈ ಚಿತ್ರವು ಇಂಗ್ಲಿಷ್’ನಲ್ಲಿ ಗಿಲ್ಟಿ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಲಿದ್ದು ತಲ್ವಾರ್’ನ್ನು ಜಂಗ್ಲಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್, ತಬುರೊಂದಿಗೆ…

Read More