Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಲು ಜನ ಹಿಂಜರಿಯುತ್ತಿದ್ದು, ಆತಂಕಗಳನ್ನು ದೂರವಿರಿಸಿ ತಪಾಸಣೆಗಳನ್ನು ನಡೆಸಿದಲ್ಲಿ ಉಲ್ಬಣಗೊಳ್ಳುವ ರೋಗಗಳನ್ನು ತಪ್ಪಿಸಬಹುದು ಎಂದು 317ಡಿ ಇಂಟರ್ ನ್ಯಾಶನಲ್ ಲಯನ್ಸ್ ಕ್ಲಬ್‍ನ ಜಿಲ್ಲಾ ಉಪ ಗವರ್ನರ್ ಲಯನ್ ಎಂ.ಅರುಣ್ ಶೆಟ್ಟಿ ಹೇಳಿದರು. ಅಶೋಕನಗರದ ಲಯನ್ಸ್ ಕ್ಲಬ್, ಉಳ್ಳಾಲದ ಧರ್ಮರಕ್ಷಣ ಮೊಗವೀರ ವೇದಿಕೆ ಹಾಗೂ ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಳ್ಳಾಲದ ಮೊಗವೀರಪಟ್ಣ ಅನುದಾನಿತ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆ ಜನುಪಯೋಗಿಯಾಗಿ ಆಸ್ಪತ್ರೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ. ಇದರ ಪ್ರಯೋಜನವನ್ನು ಜನ ಆತಂಕವಿಲ್ಲದೆ ಪಡೆದುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮಾಧವ್ ಉಳ್ಳಾಲ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ .66ರ 14 ಕಿ.ಮೀ ಉದ್ದದಲ್ಲಿ ಗಿಡ ನೆಡುವ ಯೋಜನೆಯನ್ನು ರೂಪಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮರಕ್ಷಣ ಮೊಗವೀರ ವೇದಿಕೆಯ ಗೌರವ ಸಲಹೆಗಾರ ಉಮೇಶ್.ಟಿ.ಕರ್ಕೇರ ಹೊಸಬೆಟ್ಟು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಡಸ್ಟರ್ ಕಾರೊಂದು ಚರಂಡಿಗಾಗಿ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದಿರುವ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಕೇರಳ ಮೂಲದ ಹೆಲ್ಫಿನ್ (34)ಗಂಭೀರ ಗಾಯಗೊಂಡಿದ್ದು, ಸಹಸವಾರನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲದಿಂದ ಕೇರಳದ ಕಡೆಗೆ ತೆರಳುತ್ತಿದ್ದ ಕಾರು ಚಾಲಕ ರಾತ್ರಿ ವೇಳೆ ಚರಂಡಿಗಾಗಿ ಅಗೆಯಲಾಗಿದ್ದ ಹೊಂಡವನ್ನು ಗಮನಿಸದೇ ಕಾರು ಚಲಾಯಿಸಿದ್ದೇ ಅಪಘಡ ಸಂಭವಿಸಲು ಕಾರಣವಾಗಿದೆ. ಕಾಮಗಾರಿಯ ವೇಳೆ ಇಂತಹ ಅಪಘಢಗಳು ಸಂಭವಿಸದಂತೆ ಗುತ್ತಿಗೆದಾರರು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಜಗದ್ಗುರುಗಳಾದ ಫೋಪ್ ಪ್ರಾನ್ಸಿಸ್ ಅವರು ಈ ವರ್ಷವನ್ನು ಕರುಣಾಮಯ ವರ್ಷವೆಂದು ಘೋಷಿಸಿದ್ದು, ಆ ಪ್ರಕಾರ ಜನರು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ರೆ| ಡಾ| ಎಲೋಷಿಯಸ್ ಪಾವ್ಲ್ ಡಿ.ಸೋಜ ಅಭಿಪ್ರಾಯಪಟ್ಟರು. ಅವರು ಮುಡಿಪುವಿನ ಸಂತ ಮುಕ್ತಿಧರ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಪ್ರಮುಖ ಕೃತಜ್ಞತಾ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂತ ಜೋಸೆಫ್ ವಾಝರ ಕ್ಷೇತ್ರವನ್ನು ಅ„ಕೃತ ಪುಣ್ಯ ಕ್ಷೇತ್ರವಾಗಿ ಘೋಷಣೆ ಮಾಡಿದ ಅವರು ಇಲ್ಲಿಗೆ ಬರುವ ಭಕ್ತರಿಗೆ ವಿಶೇಷ ಆಶಿರ್ವಾದ ಕೃಪೆ ಲಭಿಸಲಿದೆ ಎಂದರು. ಮಹೋತ್ಸವದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಭಕ್ತಾ„ಗಳು ಭಾಗವಹಿಸಿ ಅನ್ನ ಪ್ರಸಾದವನ್ನನು ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಮಂಗಳೂರು ದಕ್ಷಿಣ ವಲಯದ ಪ್ರದಾನ ಧರ್ಮ ಗುರುಗಳಾದ ವಂದನೀಯ ಫಾ| ಜೆ.ಬಿ. ಸಲ್ದಾನ, ಮುಕ್ತಿಧರ ಸಂತ ಜೋಸೆಫ್ ವಾಝರ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ| ಬೆಂಜಮೀನ್ ಪಿಂಟೋ, ಚರ್ಚ್ ಪಾಲನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿನ ಕೆಲ ಮನೆಗಳ ಮೇಲೆ ಪ್ರೈಂ ಟೈಂನಲ್ಲಿ ಬೀಳುತ್ತಿದ್ದ ಜಲ್ಲಿಕಲ್ಲುಗಳ ಎಸೆತ ನಿನ್ನೆ ಇದ್ದಕ್ಕಿದ್ದಂತೆ ನಿಂತುಬಿಟ್ಟಿದೆ. ಇಲ್ಲಿನ ಕೆಲ ಮನೆಗಳ ಮೇಲೆ 6-30ರಿಂದ 7-30ರ ಅವಧಿಯಲ್ಲಿ ಬೀಳುತ್ತಿದ್ದ ಜಲ್ಲಿ ಕಲ್ಲುಗಳು ಸ್ಥಳೀಯ ಜನರಲ್ಲಿ ಅವ್ಯಕ್ತ ಭಯವೊಂದನ್ನು ಹುಟ್ಟಿಸಿದ್ದವು. ನಾಲ್ಕು ದಿಕ್ಕುಗಳಿಂದ ತೂರಿಬರುತ್ತಿದ್ದ ಸಾಧಾ ರಣ ಗಾತ್ರದ ಜಲ್ಲಿಕಲ್ಲಿನಿಂದಾಗಿ ಸ್ಥಳೀಯರು ನೆಮ್ಮದಿ ಕೆಡಿಸಿಕೊಂಡಿ ದ್ದರೆ, ಇನ್ನೂ ಕೆಲ `ಪೀಡೆ’ಗಳು ಮನಸ್ಸಲ್ಲಿಯೇ ಮಂಡಿಗೆ ಮೆಲ್ಲುವಂತೆ ಮಾಡಿದ್ದವು. ಈ ನಡುವೆ ಮಾಧ್ಯಮ ಗಳಲ್ಲಿ ಈ ಬಗ್ಗೆ ಸುದ್ದಿ ಬಂದ ನಂತರ ನಿನ್ನೆ ಯಾವಾಗಲೂ ಕಲ್ಲುಬೀಳುವ ಸಮಯದಲ್ಲಿ ಯಾವುದೇ ಜಲ್ಲಿಕಲ್ಲು ತೂರಿ ಬರಲಿಲ್ಲ. ನಿರ್ದಿಷ್ಟ ಸಮಯದ ಅಂತರದಲ್ಲಿ ಕೆಲ ಮನೆಗಳ ಮೇಲೆ ಬೀಳುವ ಕಲ್ಲುಗಳ ಹಿಂದೆ ಸಾಕಷ್ಟು ಅಂತೆ-ಕಂತೆಗಳ ಕಥೆಗಳೂ ಹುಟ್ಟಿಕೊಂಡಿತ್ತು. ಕೆಲವರು ಈ ಜಲ್ಲಿಕಲ್ಲಿನ ವಾರಸುದಾರರನ್ನು ಪತ್ತೆಹಚ್ಚಲು ಪ್ರಯತ್ನ ಪಟ್ಟರೂ ಯಾರೆಂದು ಸಿಗದೆ ತಲೆಬಿಸಿ ಮಾಡಿಕೊಂಡಿದ್ದರು. ಯಾರೂ ವಾರೀಸುದಾರರು ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಪಂಜುರ್ಲಿ ದೈವದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಕೇಂದ್ರ ಕಾರಾಗೃಹಕ್ಕೆ ಡಿಸಿಪಿ ನೇತೃತ್ವದಲ್ಲಿ ನೂತನ ಕಮೀಷನರ್ ಚಂದ್ರಶೇಖರ್ ಹಾಗೂ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ 12 ಮೊಬೈಲ್ ಹಾಗೂ ಚಾರ್ಜರ್, 3 ಸಿಮ್ ಕಾರ್ಡ್‍ಗಳು ಮತ್ತು 5 ಗಾಂಜಾ ಪ್ಯಾಕೆಟ್ ಮತ್ತು ಚಾರ್ಜರ್ ಪತ್ತೆಯಾಗಿದೆ. ಫೈಲ್ ಫೋಟೋ ಜೈಲಿನಲ್ಲಿ ಡಬಲ್ ಮರ್ಡರ್ ನಡೆದ ನಂತರ ಭದ್ರತೆ ಹೆಚ್ಚಿಸಲಾಗಿತ್ತು. ಭದ್ರತೆ ಹೆಚ್ಚಿಸಿದ್ದರೂ ಜೈಲಿನೊಳಗೆ ಮಾದಕ ವಸ್ತುಗಳು ಮತ್ತು ಮಾರಕಾಯುಧಗಳ ಪೂರೈಕೆ ನಿಂತಿರಲಿಲ್ಲ. ಈ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಡಿಸಿಪಿ ಸಂಜೀವ ಪಟೇಲ್ ನೇತೃತ್ವದಲ್ಲಿ ನಡೆದ ದಾಳಿ ನಡೆಸಿದ್ದಾರೆ. ಇಂದು ನಡೆದ ದಾಳಿಯಲ್ಲಿ ಬರ್ಕೆ ಠಾಣೆ ಸಿಸಿಬಿ, ಮತ್ತು ಡಿಸಿಪಿ ತಂಡದ ಪೊಲೀಸರು ಭಾಗಿಯಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಯೇನೆಪೋಯ:ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಯೊಂದಿಗೆ ಸಮಾಜದ ಪೈಪೋಟಿಯಲ್ಲಿ ಭಾಗವಹಿಸಲು ಸಾಧ್ಯ ಎಂದು ಮಂಗಳೂರು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು. ಯೇನೆಪೋಯ ಮೊಯಿದ್ದೀನ್ ಕುಂಞÂ ಮೆಮೋರಿಯಲ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಘಟಕ ಸಂಸ್ಥೆ ಯೇನೆಪೋಯ ಫೌಂಡೇಶನ್ ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಯೇನೆಪೊಯ ವಿವಿಯ ಯೆಂಡ್ಯೂರೆನ್ಸ್ ಝೋನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಸ್‍ಎಸ್‍ಎಲ್‍ಸಿ, ಪಿಯುಸಿ, ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಅತ್ಯುನ್ನತ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಮಾತನಾಡಿದರು. ಗೌರವ ಕೊಟ್ಟು ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಒಳ್ಳೆಯ ದಾರಿ ಮಾಡಿ ಕೊಡುತ್ತಿರುವ ಯೆನೆಪೋಯ ವಿಶ್ವವಿದ್ಯಾನಿಲಯದ ಕಾರ್ಯವೈಖರಿ ಶ್ಲಾಘನೀಯ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊರಗಿನ ಸಮಾಜವನ್ನು ಎದುರಿಸಲು ಉತ್ಕøಷ್ಟ ಪೈಪೋಟಿಗಳಲ್ಲಿ ಭಾಗವಹಿಸಬೇಕು. ಶಿಕ್ಷಣ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಂತ ಚಿಕಿತ್ಸೆಯ ಬಗ್ಗೆ ಸಂಶೋಧನೆಗಳು ನಿರಂತರ ಆಗಬೇಕಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳ ಕುರಿತು ಜ್ಞಾನ ವೃದ್ಧಿಸುವ ಸಲುವಾಗಿ ಇಂತಹ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳು ಪೂರಕ ಎಂದು ಅಂತಾರಾಷ್ಟ್ರೀಯ ದಂತ ಕಾಲೇಜುಗಳ ಅಧ್ಯಕ್ಷ ಪ್ರೊ.ಎಸ್.ಎಂ.ಬಾಲಾಜಿ ಅಭಿಪ್ರಾಯಪಟ್ಟರು. ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ, ಎ.ಬಿ.ಶೆಟ್ಟಿ ಇಂಟರ್ನಿಗಳ ಅಕಾಡೆಮಿಕ್ ಕ್ಲಬ್ ಹಾಗೂ ಅಂತಾರಾಷ್ಟ್ರೀಯ ದಂತ ಕಾಲೇಜಿನ ಆಶ್ರಯದಲಿಗುರುವಾರ ಎ.ಬಿ.ಶೆಟ್ಟಿ ಕಾಲೇಜಿನ ವಿಂಶತಿ ಭವನದಲ್ಲಿ ಗುರುವಾರ ನಡೆದ `ಯುವಜನಾಂಗಕ್ಕೆ ದಂತವಿಜ್ಞಾನ ಭವಿಷ್ಯದ ಮಾರ್ಗಸೂಚಿ’ ಕುರಿತ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎ.ಬಿ.ಶೆಟ್ಟಿ ಕಾಲೇಜಿನಲ್ಲಿ ವಿದ್ಯಾರ್ಜನೆ ನಡೆಸಿದವರು ಸದ್ಯ ಉನ್ನತ ಕ್ಷೇತ್ರದಲ್ಲಿ ಇದ್ದಾರೆ. ಆದರೆ ದಂತ ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನೆಗಳಿಗೆ ಹಿನ್ನೆಡೆಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಗಾರಗಳು, ಸಮಾವೇಶಗಳು ನಿರಂತರ ಆಗಬೇಕಿದೆ ಎಂದರು. ಎ.ಬಿ.ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್ ಡಾ.ಯನ್.ಶ್ರೀಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ದಂತ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇತಿಹಾಸ ಪ್ರಸಿದ್ದ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ದರ್ಗಾಕ್ಕೆ ರಾಜ್ಯದ ವಾರ್ತಾ ಸಚಿವರಾದ ರೋಶನ್ ಬೇಗ್‍ರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್ ಹಂಝ ಸಚಿವರನ್ನು ಸ್ವಾಗತಿಸಿದರು. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ದಿನವಿಡೀ ಶಾಂತವಾಗಿರೋ ಆ ಊರಲ್ಲಿ ಸಂಜೆಯಾಗುತ್ತಲೇ ಆತಂಕ ಮನೆ ಮಾಡುತ್ತೆ. ಸಂಜೆ ಆರು ಘಂಟೆ ಕಳೆದರೆ ಸಾಕು ಜನ ಮನೆಬಿಟ್ಟು ಹೊರಗೆ ಬರೋದಕ್ಕೆ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗುತ್ತೆ. ಪ್ರತೀನಿತ್ಯ ಒಂದು ಘಂಟೆಗಳ ಕಾಲ ಆ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆಯುತ್ತೆ. ಅಷ್ಟಕ್ಕೂ ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿರೋದು ಅಲ್ಲಿನ ಮನೆಗಳ ಮೇಲೆ ಬೀಳ್ತಾ ಇರೋ ಕಲ್ಲುಗಳು! ಕಾಟಿಪಳ್ಳದ ಎರಡನೇ ಅಡ್ಡರಸ್ತೆಯಲ್ಲಿ ಸಂಜೆ ಆರು ಘಂಟೆಯ ನಂತರ ಜನ ಮನೆ ಬಿಟ್ಟು ಹೊರಗಡೆ ಬರೋದಕ್ಕೆ ಭಯ ಪಡ್ತಾರೆ. ಸಮಯ ಸರಿಯಾಗಿ ಸಂಜೆ 6.30ರಿಂದ 7.30ರ ಅವಧಿಯಲ್ಲಿ ಇಲ್ಲಿನ ನಾಲ್ಕೈದು ಮನೆಗಳ ಮೇಲೆ ಕಲ್ಲುಗಳು ಬೀಳೋದಕ್ಕೆ ಆರಂಭವಾಗುತ್ತೆ. ಕೇವಲ ಒಂದು ಘಂಟೆಯ ಅವಧಿಯಲ್ಲಿ ಹತ್ತಾರು ಜಲ್ಲಿ ಕಲ್ಲುಗಳು ಮನೆಗಳ ಮಾಡಿನ ಮೇಲೆ ಬೀಳುತ್ತಿವೆ. ಹೀಗೆ ಕಳೆದ ಒಂದು ವಾರದಿಂದ ಮನೆಗಳ ಮಾಡಿನ ಮೇಲೆ, ಅಂಗಳಕ್ಕೆ ಅಳವಡಿಸಲಾಗಿರುವ ತಗಡಿನ ಶೀಟುಗಳ ಮೇಲೆ ಕಲ್ಲುಗಳು ಬೀಳುತ್ತಿವೆ. ಒಂದೊಂದು ದಿಕ್ಕಿನಿಂದ…

Read More

ಜಕಾರ್ತಾ:ಇಲ್ಲಿನ ವಿಶ್ವಸಂಸ್ಥೆಯ ಕಚೇರಿ ಮತ್ತು ಮಾಲ್ ವೊಂದರ ಹತ್ತಿರ ಉಗ್ರರು ನಡೆಸಿದ ಬಾಂಬ್ ಸ್ಪೋಟದಲ್ಲಿ ಕನಿಷ್ಟ 6 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ನಗರದ ಜನ ನಿಬಿಡ ಪ್ರದೇಶಗಳಲ್ಲಿ ಶಸ್ತ್ರಧಾರಿ ಉಗ್ರರು 6 ಕಡೆಗಳಲ್ಲಿ ಬಾಂಬ್‌ ಸ್ಫೋಟಿಸಿದ್ದಾರೆ. ಕಫೆಯೊಂದರ ಬಳಿ ಬಾಂಬ್‌ ಸಿಡಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ.ಮತ್ತು ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಭಾಗಿಯಾದ 14 ಕ್ಕೂ ಹೆಚ್ಚು ಮಂದಿ ಉಗ್ರರು ಕಫೆಯೊಂದರಲ್ಲಿ ಅಡಗಿರುವುದಾಗಿ ಹೇಳಲಾಗಿದ್ದು ,ಪೊಲೀಸರು ಮತ್ತು ಭದ್ರತಾ ಪಡೆಗಳು ಉಗ್ರರ ದಮನಕ್ಕಾಗಿ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ದಾಳಿಯನ್ನು ಯಾವ ಉಗ್ರ ಸಂಘಟನೆ ನಡೆಸಿದೆ ಎನ್ನುವ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More