Author: UllalaVani

Kannada News From Coastal Karnataka

ನಾಟೆಕಲ್: ಕೇರಳ ರಾಜ್ಯಕ್ಕೆ ಆಕ್ರಮವಾಗಿ ಮರುಳು ಸಾಗಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳ ಸಹಿತ ಆರು ಟಿಪ್ಪರ್ ಲಾರಿಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಾಟೆಕಲ್ ಎಂಬಲ್ಲಿ ನಡೆದಿದೆ. ಮುಡಿಪುವಿನ ಆಶ್ರಫ್(30), ದೇರಳಕಟ್ಟೆಯ ನಾಸೀರ್(28), ಮೊಹಮ್ಮದ್ ಆಶ್ರಫ್(33), ನಿಸಾಮುದ್ಧೀನ್(27) ಬೋಳಿಯಾರ್ ಸಂಶುದ್ದೀನ್(29), ಎಂಬವರನ್ನು ಬಂಧನವಾಗಿದ್ದು, ಇತರ ಮೂವರು ಉಸ್ಮಾನ್, ಇಬ್ರಾಹಿಂ, ಶರೀಫ್ ಎಂಬವರು ಪರಾರಿಯಾಗಿದ್ದಾರೆ. ಸಾಂದರ್ಭಿಕ ಚಿತ್ರ ಕಲ್ಲಾಪು ನೇತ್ರಾವತಿ ನದಿ ತೀರದಿಂದ ಮರುಳನ್ನು ಕಳವುಗೈದು ಸರಿಯಾದ ದಾಖಲಾತಿ ಇಲ್ಲದೆ, ಪರವಾನಿಗೆ ಇಲ್ಲದೆ ಆಕ್ರಮವಾಗಿ ಆರು ಲಾರಿಗಳಲ್ಲಿ ಮರುಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಠಾಣಾಧಿಕಾರಿ ಆಶೋಕ್ ನೇತೃತ್ವದ ತಂಡ ನಾಟೆಕಲ್ ಸಮೀಪ ತಪಾಸಣೆ ನಡೆಸಿ ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟೆಕಾರಿನ ಬೀರಿಯಲ್ಲಿರುವ ವಾಣಿಜ್ಯ ತಪಾಸಣಾ ಕೇಂದ್ರಕ್ಕೆ ಘನ ಸರಕು ಮತ್ತು ಅನಧಿಕೄತ ಮರಳು ಸಾಗಾಟ ಬೃಹತ್ ಟ್ರಕ್‍ಗಳು ಕರ್ನಾಟಕದ ತಪಾಸಣಾ ಕೇಂದ್ರವೊಂದರ ನಕಲಿ ಮೊಹರನ್ನು ಹಾಕಿ ರಾಜ್ಯ ಸರಕಾರಕ್ಕೆ ರಾಯಲ್ಟಿ ಹಾಗೂ ಅಪಾರ ತೆರಿಗೆ ವಂಚಿಸುವ ಮೂಲಕ ಅಪಾರ ನಷ್ಟವೆಸಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದ್ದು ಅದಕ್ಕೆ ಪೂರಕವಾಗಿ ಒರಿಸ್ಸಾದ ಪರವಾನಗಿ ಹೊಂದಿರುವ ಮಂಗಳೂರಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಅ„ಕಾರಿಗಳು ಹಿಡಿದ ಬಳಿಕ ಪ್ರಕರಣಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಿದೆ. ನಂಬಲರ್ಹ ಮೂಲಗಳ ಪ್ರಕಾರ ಕಳೆದ ಜ. 7ರಂದು ಒರಿಸ್ಸಾದಿಂದ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿರುವುದಾಗಿ ದಾಖಲಾತಿ ಇರುವ ವಾಹನವೊಂದನ್ನು ಮಂಗಳೂರಿನ ವಾಣಿಜ್ಯ ಇಲಾಖೆ ತಪಾಸಣೆ ಆ„ಕಾರಿಗಳ ತಂಡ ಬೀರಿಯಲ್ಲಿ ತಪಾಸಣೆ ನಡೆಸಿದಾಗ ನಕಲಿ ಮೊಹರು ಸೃಷ್ಟಿಸಿ ಮರಳು ಸಾಗಾಟ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋಟೆಕಾರು ವಾಣಿಜ್ಯ ಇಲಾಖೆ ತಪಾಸಣಾ„ಕಾರಿಗಳು ಕಣ್ಣು ಮುಚ್ಚಿ ಕುಳಿತರೇ ಅಥವಾ ಬೀರಿಯಲ್ಲಿ ಇರುವ ವಾಣಿಜ್ಯ ತೆರಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವೀರರಾಣಿ ಅಬ್ಬಕ್ಕಳ ಪ್ರತಿಮೆ ಒಂದೆಡೆ ಧೂಳಿನಿಂದ ಮುಳುಗಿದ್ದರೆ, ಇನ್ನೊಂದೆಡೆ ಕಾಗೆ ಮಾಡಿದ ಗಲೀಜಿನಿಂದ ನೋಡಲಾಗದ ಸ್ಥಿತಿಯಲ್ಲಿದ್ದು, ಕೇವಲ ಅಬ್ಬಕ್ಕ ಉತ್ಸವ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ರಾಣಿ ಅಬ್ಬಕ್ಕಳ ಪ್ರತಿಮೆಗೆ ಗೌರವ ಸೀಮಿತವಾಗಿದೆ. ಉಳ್ಳಾಲ ಜಂಕ್ಷನ್ನಿಗೆ ಪ್ರಯಾಣಿಸುವಾಗ ಮೊದಲಿಗೆ ಸಿಗುವುದೇ ಅಬ್ಬಕ್ಕರಾಣಿ ವೃತ್ತ. ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ವನಿತೆಯ ಪ್ರತಿಮೆ ಧೂಳು ಹಿಡಿದರೂ ಜನಪ್ರತಿನಿಧಿಗಳಾಗಲಿ, ಅಬ್ಬಕ್ಕ ಉತ್ಸವ ಸಮಿತಿಯಾಗಲಿ ಕೇವಲ ಉತ್ಸವಗಳ ಸಂದರ್ಭ ಹಾರ ಹಾಕಿ, ಗುಣಗಾನ ಮಾಡುತ್ತಿದ್ದಾರೆಯೇ ಹೊರತು, ದಿನದಲ್ಲಿ ಲಕ್ಷಾಂತರ ಮಂದಿ ನೋಡುವಂತಹ ಪ್ರತಿಮೆಯ ಕನಿಷ್ಟ ಶುಚಿಗೊಳಿಸುವ ಪ್ರಜ್ಞೆಗೆ ಮುಂದಾಗಿಲ್ಲ. ತೊಕ್ಕೊಟ್ಟು-ಉಳ್ಳಾಲ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ತೊಕ್ಕೊಟ್ಟುವಿನಲ್ಲಿ ಅಬ್ಬಕ್ಕ ಭವನ ಶೀಘ್ರದಲ್ಲೇ ನಡೆಯಲಿದೆ. ಆದರೆ ಅಪ್ರತಿಮ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಸ್ಥಾಪಿಸಿರುವ ಪ್ರತಿಮೆಗಳಿಗೆ ಕನಿಷ್ಟ ಪಕ್ಷ ಶುಚಿಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುವ ಮೂಲಕ ನೈಜ ಗೌರವವನ್ನು ವ್ಯಕ್ತಪಡಿಸಬೇಕಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಾಸನ :ನ್ಯಾನೋ ಕಾರು ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಡಣ ತಾಲೂಕು ಚಿಕ್ಕಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ. ಅದೃಷ್ಟವಷಾತ್‌ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪಾರಾಗಿದ್ದಾರೆ. ಮೃತರು ಉಡುಪಿ ಮೂಲದ ಮುಂಬೈ ನಿವಾಸಿಗಳಾದ ಅಶೋಕ್‌ ಪ್ರಭು(45) ಮತ್ತು ಅಶ್ವಿ‌ನಿ ಪ್ರಭು(35) ಎಂದು ತಿಳಿದು ಬಂದಿದ್ದು, ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಅಶೋಕ್‌ ಅವರು ಬೆಂಗಳೂರಿನ ಕಾನ್ಯೆಂಟ್ರಿಕ್ಸ್‌ ಕಂಪೆನಿಯಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದು,ಉಡುಪಿಯ ಪೆರ್ಣಂಕಿಲದ ನಿವಾಸದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು:ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಯವಾಗಿ ಧರಿಸಬೇಕೆಂಬ ನಿಯಮ ಇಂದಿನಿಂದ ಜಾರಿಗೆ ಬಂದಿದೆ. ಆದರೆ, ನಿಯಮ ಉಲ್ಲಂಘಿಸಿದ ಸವಾರರ ಮೇಲೆ “ದಂಡ ಪ್ರಯೋಗ ‘ ಮಾತ್ರ ತಿಂಗಳಾಂತ್ಯದಿಂದ ಆರಂಭವಾಗುವ ಸಾಧ್ಯತೆಯಿದೆ. ಬೈಕ್ ಸವಾರರ ಜತೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಿಂಬದಿ ಸವಾರರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.ಇಲ್ಲವಾದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ಅವರಿಗೆ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿ ನಿಯಮ ಕಡ್ಡಾಯದ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗುತ್ತದೆ. ಮಂಗಳವಾರದಿಂದ ರಾಜ್ಯಾದ್ಯಂತ ಹೆಲ್ಮೆಟ್ ಕಡ್ಡಾಯಗೊಳಿಸುವ ಹಿನ್ನಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅವರ ಶಿರಕ್ಕೆ ತಕ್ಕಂತಹ ಹೆಲ್ಮೆಟ್ ಬಳಸಬೇಕಾಗುತ್ತದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್ ಕಡ್ಡಾಯಗೊಳಿಸುವ ಸಂಬಂಧ ಹಿಂದೆಯೇ ಆಕ್ಷೇಪಣೆಗಳನ್ನು ಆಹ್ವಾನಿಸಿ ಬಳಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅಂತಿಮ ಅಧಿಸೂಚನೆ ಹೊರಡಿಸಿದ ನಂತರವೂ ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿತ್ತು. ಮಾರುಕಟ್ಟೆಯಲ್ಲಿ ಈ ಹೆಲ್ಮೆಟ್ಗಳ ಕೊರತೆ ಇರುವುದರಿಂದ ಪೊಲೀಸರು ಇನ್ನಷ್ಟು ಸಮಯವಾಕಾಶ ನೀಡುವ ಸಾಧ್ಯತೆಗಳಿವೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ನೀಡುವ ಕೇಂದ್ರಗಳು ಬೆಳೆಯತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕು ಕಟ್ಟಿಕೊಳ್ಳುವ ಅವಕಾಶವಾಗುತ್ತಿದೆ. ಜಾತಿಧರ್ಮದ ಎಲ್ಲೆ ಮೀರಿ ಸೌಹಾರ್ದತೆ ಸಾರುವ ಶಿಕ್ಷಣ ಸಂಸ್ಥೆಗಳಿಗೆ ಜನತೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಕರಾವಳಿ ಕಾಲೇಜಿನ ಅಧ್ಯಕ್ಷರಾದ ಎಸ್.ಗಣೇಶ್ ರಾವ್ ಹೇಳಿದ್ದಾರೆ.ಅವರು ಹರೇಕಳದ ನಿಶಾರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ನಿಶಾರ ಪದವಿ ಪೂರ್ವಕಾಲೇಜಿನ ನೂತನ ಕಟ್ಟಡವನ್ನು ವಾರ್ತಾಭಾರತಿಯ ಚೇರ್‍ಮೇನ್ ಜ|ಸೈಯದ್ ಖಲೀಲ್ ಸಾಹೇಬ್ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಪತ್ರಕರ್ತರಾದ ಶÀಶಿಧರ್ ಪೊಯ್ಯತ್ತಬೈಲ್ ಮತ್ತು ಉದ್ಯಮಿ ಮನ್ಸೂರ್ ಅಹ್ಮದ್ ಅವರನ್ನು ಗೌರವಿಸಲಾಯಿತು. ಸಂದೇಶ ಪ್ರತಿಷ್ಟಾನದ ಫಾ|ವಿಕ್ಟರ್ ವಿಜಯ್ ಲೋಬೋ ಅತಿಥಿಯಾಗಿದ್ದರು. ಸಭಾದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚÉೀರ್ ಮೇನ್ ಹಾಜಿ| ಅಬ್ದುಲ್ ರಜಾಕ್ ಮಾತನಾಡಿ ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯ ಇರಾದೆ ಹೈದ್ರೋಸ್ ಹಾಜಿ ಟ್ರಸ್ಟಿಗೆ ಇದೆ ಎಂದರು. ಶಾಲಾ ಸಂಚಾಲಕಿ ಶ್ರೀಮತಿ ಶೆಹನಾಜ್ ಎ. ರಝಾಕ್, ಪ್ರಾಂಶುಪಾಲರಾದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ವಿಟ್ಲ: ಕರೋಪಾಡಿ ಗ್ರಾಮದ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಮುಕ್ತಾಯದ ಹಂತದಲ್ಲಿದೆ. ಜ.24ರಿಂದ 31ರ ವರೆಗೆ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯ ದೇವರ ಬಿಂಬಗಳ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು. ಅವರು ದೇಗುಲದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ನೀಡಿ, 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ಇದೀಗ ಮತ್ತೆ 750 ವರ್ಷಗಳಿಗೂ ಪುರಾತನವಾದುದು. 23 ವರ್ಷಗಳ ಹಿಂದೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಜರುಗಿದೆ. ತುಳುನಾಡಿನ ಮಣ್ಣಿನಲ್ಲಿ ವಿಶೇಷ ಸತ್ವಗುಣವಿದೆ. ಕೃಷಿಕನಿಗೂ ಮಣ್ಣಿಗೂ ಉತ್ತಮ ಸಂಬಂಧವಿದೆ. ಈ ದೇಗುಲದಲ್ಲಿ ಆಳುಪ ವಂಶದ ರಾಜನು ಡೊಂಬ ಹೆಗ್ಗಡೆ ಸಹಿತವಾಗಿ ಸಭೆ ನಡೆಸಿದ ಶಿಲಾ ಶಾಸನವಿದೆ. ಎಂದು ಅವರು ವಿಶ್ಲೇಷಿಸಿದರು. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಅವರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ಎಟ್ಟಿಕ್ಕುಳಂನಲ್ಲಿ ನಡೆಯುವ ತಾಜುಲ್ ಉಲಮಾ (ಖ.ಸಿ.) ಉರೂಸ್ ಪ್ರಚಾರಾರ್ಥ ಅಂಗವಾಗಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ 60 ಫಲಾನುಭವಿಗರಿಗೆ ಅಕ್ಕಿ ವಿತರಣಾ ಕಾರ್ಯಕ್ರಮವು ಸೇವಂತಿಗುಡ್ಡೆಯ ವಿಕಾಯತುಲ್ ಇಸ್ಲಾಂ ಮದ್ರಸಾ ಹಾಲ್‍ನಲ್ಲಿ ನಡೆಯಿತು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಾಯತುಲ್ ಇಸ್ಲಾಂ ಮದ್ರಸ ಉಪಾಧ್ಯಕ್ಷರಾದ ನೌಶಾದ್ ಸೇವಂತಿಗುಡ್ಡೆ ವಿತರಿಸಿದರು. ಮನ್ಸೂರ್ ಮದನಿ ವಳವೂರು ಮಾತನಾಡಿ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ನಡೆಸುತ್ತಿರುವ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು. ಇನ್ನು ಹಲವಾರು ಸಾಮಾಜಿಕ ಸೇವೆಗೈಯಲು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಲ್ತಾಫ್ ಕುಂಪಲ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕೋಶಾಧಿಕಾರಿ ಫಾರೂಕ್ ಸೇವಂತಿಗುಡ್ಡೆ, ಆಶ್ರಫ್ ಸೇವಂತಿಗುಡ್ಡೆ, ಇಸ್ಮಾಯಿಲ್ ಸೇವಂತಿಗುಡ್ಡೆ, ಬದ್ರುದ್ದೀನ್ ಸೇವಂತಿಗುಡ್ಡೆ, ಶಮೀರ್ ಸೇವಂತಿಗುಡ್ಡೆ, ವಿಕಾಯತುಲ್ ಇಸ್ಲಾಂ ಮದ್ರಸದ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಪಸ್ಥಿತರಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿದರು ಜಾಫರ್ ಯು.ಎಸ್. ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಖಾಝಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿ ಉಳ್ಳಾಲ ಕ್ಷೇತ್ರದಲ್ಲಿ ಅರೆಬಿಕ್ ಕಾಲೇಜು ಸ್ಥಾಪನೆಗೆ ಮೂಲ ಕಾರಣಕರ್ತರಾರ ತಾಜುಲ್ ಉಲಮಾ ದರ್ಗಾ ಉರೂಸ್ ಸಂದಲ್ ಮೆರವಣಿಗೆ ಕಾರ್ಯಕ್ರಮ ಆರಂಭಿಸುವ ಮೂಲಕ ಉಳ್ಳಾಲದಲ್ಲಿ ಚಾಲನೆ ನೀಡಲಾಯಿತು. ಕೇರಳ ಎಟ್ಟಿಕುಳಂನಲ್ಲಿ ಜ.11ರಿಂದ ಮೂರು ದಿನಗಳ ಕಾಲ ನಡೆಯಲಿರುವ ಉರೂಸ್ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿದ್ದ ಸಂದಲ್ ಮೆರವಣಿಗೆಯನ್ನು ಸಯ್ಯಿದ್ ಆಟಕೋಯ ತಂಙಳ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ತಾಜುಲ್ ಉಲಮಾ ಶಿಕ್ಷಣ ಬೆಳವಣಿಗೆಗೆ ಶ್ರಮವಹಿಸಿದ್ದವರು. ಅವರು ಮಾಡಿದ ಸೇವೆಯಿಂದ ಇಂದು ಬಹಳಷ್ಟು ಮಂದಿ ಧನ್ಯರಾಗಿದ್ದಾರೆ ಎಂದರು. ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಮುಸ್ಲಿಯಾರ್ ತಾಜುಲ್ ಉಲಮಾ ಅವರ ಸಾಧನೆಗಳ ಬಗ್ಗೆ ವಿವರಿಸಿದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಶೀದ್ , ಮಾಣಿ ಉಸ್ತಾದ್, ಏಷ್ಯನ್ ಬಾವಾ, ಉಂಞÂ , ಹೈದರ್ ಪರ್ತಿಪ್ಪಾಡಿ, ಉಳ್ಳಾಲ ದರ್ಗಾ ಕಾರ್ಯದರ್ಶಿ ಯಿ.ಟಿ. ಇಲ್ಯಾಸ್, ಉಳ್ಳಾಲ ದರ್ಗಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಗೃಹವೈದ್ಯರ ಮಾಹಿತಿ ಕಾರ್ಯಗಾರ ಇತ್ತೀಚೆಗೆ ಜರುಗಿತು. ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಪೂರ್ಣ ವೈದ್ಯರಾಗಲು ಗೃಹವೈದ್ಯಕೀಯ ಅವಧಿಯು ಪೂರಕವಾಗಿರುತ್ತದೆ. ಇದರ ಸಮರ್ಪಕ ಪ್ರಯೋಜನ ಪಡೆದು, ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಎಂದರು. ಕಾಲೇಜಿನ ವೈದ್ಯಕೀಯ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ| ಕರುಣಾ ರಮೇಶ್, ಕುಲಸಚಿವೆ ಡಾ| ಜಯಪ್ರಕಾಶ್ ಶೆಟ್ಟಿ ಕೆ. , ಸಹ ಪ್ರಾಚಾರ್ಯರಾದ ಡಾ| ಪಿ.ಎಸ್. ಪ್ರಕಾಶ್ ಹಾಗೂ ಡಾ| ಅಮೃತ್ ಮೀರಜ್‍ಕರ್ ಉಪಸ್ಥಿತರಿದ್ದರು.

Read More