UN NETWORKS ಕಿನ್ಯಾ: ಕಿನ್ಯಾ ಮತ್ತು ಬೋಳಿಯಾರುಗೆ ಸರಕಾರಿ ಬಸ್ ಸಂಚಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದನ್ನು ವಿರೋಧಿಸಿ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ನಾಗರಿಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಒಂದು ತಿಂಗಳ ಹಿಂದೆ ಸರಕಾರ ಗ್ರಾಮೀಣ ಪ್ರದೇಶ ವಾದ ಕಿನ್ಯಾ ಗ್ರಾಮಕ್ಕೆ ಎರಡು ಬಸ್ ನೀಡಿದ್ದು ಸಾರ್ವಜನಿಕ ರಿಗ ಸಂಚಾರ ನಡೆಸಲು ಸುಲಭವಾಗುತ್ತಿತು. ಇಂದು ಹೈಕೋರ್ಟ್ ತಡೆಯುವ ಮೂಲಕ ಸಂಕಷ್ಟ ಉಂಟಾಗಿದೆ. ಖಾಸಗಿ ಬಸ್ ಗಳು ಬೇಕಾಬಿಟ್ಟಿ ಸಂಚಾರ ನಡೆಸುತ್ತಿದ್ದು ಸರಕಾರ ಮತ್ತೆ ಸರಕಾರಿ ಬಸ್ ನೀಡುವಂತೆ ಪ್ರತಿಭಟನೆ ಗಾರರು ಆಗ್ರಹಿಸಿದರು. ಪ್ರತಿಭಟನೆ ಯಲ್ಲಿ ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಸದಸ್ಯರಾದ ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಡಿವೈಎಫ್ಐ ಹಂಝ ಕಿನ್ಯಾ ಮುಂತಾದವರು ಉಪಸ್ಥಿತರಿದ್ದರು.
Author: UllalaVani
UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ವಿನಲ್ಲಿ ಕಳೆದ 15 ವರ್ಷಗಳಿಂದ ಆಯುರ್ವೇದ ಔಷಧಿ ಅಂಗಡಿ ನಡೆಸುತ್ತಿದ್ದ ವಿಟ್ಲ ಕಾಡುಮಠ ನಿವಾಸಿ ರಾಜಶೇಖರ್ (35) ಮನೆ ಸಮೀಪ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ವಿಟ್ಲ ಕಾಡುಮಠದ ರಾಜಶೇಖರ್ ಮನೆ ಸಮೀಪ ಕೋಳಿಫಾರಂ ನಡೆಸುತ್ತಿದ್ದು, ನಿನ್ನೆ ಸಂಜೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಫಾರಂ ಗೆ ಹಾಕಲಾದ ವಿದ್ಯುತ್ ದೀಪದ ವೈರಿನಲ್ಲಿ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ ಪತ್ನಿ ಹಾಗೂ ಎಳೆಯ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗೆ ತೊಕ್ಕೊಟ್ಟು ಜೆ.ಜೆ ಕಾಂಪ್ಲೆಕ್ಸ್ ನಲ್ಲಿ ದ್ದ ಔಷಧ ಅಂಗಡಿ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಕೆಡವಲಾಗಿತ್ತು. ಇದೀಗ ನವೀಕೃತ ಗೊಂಡ ಕಟ್ಟಡದಲ್ಲಿ ಮತ್ತೆ ಔಷಧಿ ಅಂಗಡಿಯನ್ನು ತೆರೆಯುವ ವರಿದ್ದರು.
UN NETWORKS ಹರೇಕಳ : ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಸೌಂದರ್ಯ ಇವರು ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ. ಇವಳು ಕೃಷ್ಣಪ್ಪ ಪೂಜಾರಿ ಮತ್ತು ಜಯಂತಿಯವರ ಪುತ್ರಿಯಾಗಿರುತ್ತಾಳೆ.
UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿಜೇತ ಶೆಟ್ಟಿ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ರಾಜೇಶ್ ಶೆಟ್ಟಿ ಮತ್ತು ಸುನೀತ ಇವರ ಪುತ್ರಿಯಾಗಿರುತ್ತಾಳೆ.
UN NETWORKS ಪುತ್ತೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ “ಎಸ್ಸೆಸ್ಸೆಫ್ ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್” ನ ಸಮಾರೋಪ ಸಮಾರಂಭವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ರವರ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್ ಮಿತ್ತೂರಿನಲ್ಲಿ ನಡೆಯಿತು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶನಿವಾರ ಸಂಜೆ 6.00ಗಂಟೆಯಿಂದ ಆದಿತ್ಯವಾರ ಬೆಳಿಗ್ಗೆ 11.00ಗಂಟೆ ತನಕ ನಡೆದ ದ್ವಿದಿನ ಕ್ಯಾಂಪಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ರಫೀಕ್ ಸಖಾಫಿ ಚೆರಿಯಪರಂಬು ಹಾಗೂ ಮುಸ್ತಫ ನಹೀಮಿ ಸಂಘಟನಾ ತರಗತಿಗಳನ್ನು ನಡೆಸಿದರು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿಗಳು 6 ತಿಂಗಳ ಯೋಜನೆಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಶಾಕಿರ್ ಹಾಜಿ ಮಿತ್ತೂರು, ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಇಹ್ಸಾನ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.
UN NETWORKS ಮಂಗಳೂರು: ವಿದ್ಯುತ್ ಇಲಾಖೆಯಲ್ಲಿ ಡಿಪ್ಲೊಮಾ ಇಂಜಿನಿಯರ್ಸ್ ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದರೂ ಕೀಳುಮಟ್ಟದ ಭಾವನೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ, ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಭಡ್ತಿಗಳು ಸಾಕಷ್ಟಿದ್ದರೂ, ಡಿಪ್ಲೊಮಾ ಇಂಜಿನಿಯರ್ ಗಳಿಗೆ ಕೇವಲ ಮೂರೇ ಭಡ್ತಿ ಇರುವುದು ಬಹಳಷ್ಟು ಬೇಸರದ ವಿಚಾರ ಎಂದು ಬೆಂಗಳೂರಿನ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿ.ನ (ಕೆಪಿಟಿಸಿಎಲ್) ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಜೆ.ಲೋಕೇಶ್ ಹೇಳಿದ್ದಾರೆ. ಅವರು ಕೆ.ಪಿ.ಟಿ.ಸಿ.ಎಲ್ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಶನ್ ಇದರ ಮಂಗಳೂರು ವೃತ್ತ ಸಮಿತಿ ವತಿಯಿಂದ ನಡೆದ ಅತ್ತಾವರ ಮೆಸ್ಕಾಂ ನ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಆವರಣದಲ್ಲಿ ಸ್ಥಳೀಯ ಕಚೇರಿ ಉದ್ಘಾಟನೆ ಹಾಗೂ ಮಂಗಳೂರಿನ ಪುರಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮ ಹಾಗೂ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯುತ್ ಕಂಪೆನಿಯ ಹಲವು ಸಂಘ, ಸಂಘಟನೆಗಳಿದ್ದರೂ 30-40 ವರ್ಷಗಳಿಂದ ಡಿಪ್ಲೊಮಾ ಇಂಜಿನಿರ್ಗಳಿಗೆ ಇರುವ ಸಮಸ್ಯೆಗಳ ಬಗೆಹರಿಸಲು ಅಸಾಧ್ಯವಾಗಿದೆ. ಇಡೀ ಜೀವನದಲ್ಲಿ ಬರೀ ಎರಡು ಭಡ್ತಿಯನ್ನು ಪಡೆದುಕೊಂಡು 25 ರಿಂದ 28…
UN NETWORKS ಮಂಗಳೂರು: ವಿದೇಶದಿಂದ ವಿದಾಯ ಹೇಳಿ ತಾಯ್ನಾಡಿಗೆ ಮರಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ದುಬೈ ಅಧ್ಯಕ್ಷ ಮೆಹ್ ಬೂಬ್ ಸಖಾಫಿ ಕಿನ್ಯ ರವರನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡೆರೇಶನ್ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಂಬ್ಲಮೊಗರು, ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ, ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಅಳೇಕಲ, ಕಿನ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಕಿನ್ಯ, ಉಳ್ಳಾಲ ಡಿವಿಶನ್ ಕಾರ್ಯಕಾರಿ ಸಮಿತಿ ಸದಸ್ಯ ಫಯಾಜ್ ಕಿನ್ಯಉಪಸ್ತಿತಿಯಲ್ಲಿ ಹಾರ್ದಿಕವಾಗಿ ಸ್ವಾಗತಿಸಲಾಯಿತು.
UN NETWORKS ಉಳ್ಳಾಲ: ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ಮತ್ತು ಗೌರವವಿದ್ದು, ಸಹಕಾರಿ ಚಳವಳಿ ಮೂಲಕ ಆರಂಭವಾದ ಕ್ಷೇತ್ರ ಹಿರಿಯರ ಮಾರ್ಗದರ್ಶನದ ಮೂಲಕ ಬೆಳೆದು ನಿಂತು ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿಯನ್ನು ನೀಡುತ್ತಿದೆ ಎಂದು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರು ಹೇಳಿದರು. ಅವರು ಕೋಟೆಕಾರ್ ಬೀರಿಯಲ್ಲಿ ಭಾನುವಾರ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರದಾನ ಕಚೇರಿಯ ನವೀಕೃತ ಕಟ್ಟಡ ಹಾಗೂ ರೈತಸದನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯವನ್ನು ಹೋಲಿಸಿದಾಗ ಜಿಲ್ಲೆಯ ಜನರು ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವವರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ 298 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂ.3 ಲಕ್ಷ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ. ರೂ.10 ಲಕ್ಷ ಸಾಲಕ್ಕೆ ಶೇ. 3 ಬಡ್ಡಿಯಲ್ಲಿ ಸಾಲದ ವ್ಯವಸ್ಥೆಯಿದೆ. ಹೈನುಗಾರಿಕೆ ನಡೆಸುವವರಿಗೆ ಶೇ.2-3 ರವರೆಗೆ ಇದ್ದಂತಹ ಗೌರವಧನವನ್ನು ಶೇ.5 ಕ್ಕೆ ಏರಿಕೆ…
UN NETWORKS ಉಳ್ಳಾಲ: ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಾಂಜಾ ಮಾಫಿಯಾ ವಿರುದ್ಧ ಹೋರಾಡಿದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಯಾಗಿದ್ದು, ಸಾರ್ವಜನಿಕರೆದುರೇ ಬೀದಯಲ್ಲೇ ಹತ್ಯೆ ನಡೆಸಿರುವುದು ಪೊಲೀಸ್ ಇಲಾಖೆ ವಿಫಲತೆಯನ್ನು ತೋರಿಸುತ್ತದೆ ಎಂದು ಡಿ ವೈ ಎಫ್ ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಡಿ ವೈ ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಭಾನುವಾರ ಜುಬೈರ್ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಗಾಂಜಾ ಮಾರಾಟ ಜಾಲದ ವಿರುದ್ಧ ಮುಕ್ಕಚ್ಚೇರಿ ಜಂಕ್ಷನ್ನಿನಿಂದ ಉಳ್ಳಾಲ ನಗರದ ಮೈದಾನದವರೆಗೆ ಹಮ್ಮಿಕೊಂಡ ಪ್ರತಿರೋಧ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲದಲ್ಲಿ ಯುವಜನತೆಯ ಬಾಳನ್ನೇ ಗಾಂಜಾ ಜಾಲ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಡಿದ ಜುಬೈರ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಉದ್ದಟತನದಿಂದ ವರ್ತಿಸುತ್ತಿದ್ದಾರೆ. `ಎಲ್ಲಿದೆ ಗಾಂಜಾ’ ಎಂದು ಪ್ರತಿಭಟನಾಕಾರರಲ್ಲಿ ಪ್ರಶ್ನಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತರು ಇಲಾಖೆಯ ಸುತ್ತಮುತ್ತಲೂ ತಿರುಗಾಡುತ್ತಾ, ಪೊಲೀಸ್ ಅಧಿಕಾರಿಯ ಛೇಂಬರಿನೊಳಗಡೆ ಬಂದು …
UN NETWORKS ಉಳ್ಳಾಲ: ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಬಾಝಿಲ್ ಡಿಸೋಜ ಅವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೇಮಕ ಮಾಡಿದ್ದಾರೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದುಕೊಂಡು, ಉಳ್ಳಾಲ ಬ್ಲಾಕ್ ಯುವಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ, ಉಳ್ಳಾಲ ಪುರಸಭೆಗೆ ಎರಡು ಬಾರಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಚೆಂಬುಗುಡ್ಡೆ ವಾರ್ಡಿನಿಂದ ಸ್ಪರ್ಧಿಸಿ ಮೂರು ಬಾರಿ ಸದಸ್ಯರಾಗಿ ಆಯ್ಕೆಗೊಂಡ ಅವರು ಉಳ್ಳಾಲ ಪುರಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಉಳ್ಳಾಲ ಪುರಸಭೆಯ ಅಧ್ಯಕ್ಷರೂ ಆಗಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಇವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.

