Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಎಸ್ಸೆಸ್ಸೆಫ್ ರಾಷ್ಟ್ರೀಯ ಇದರ ಸುತ್ತೋಲೆಯಂತೆ “ಮಾದಕ ಮುಕ್ತ ಭಾರತ` ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಆ ಪ್ರಯುಕ್ತ ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಹಮ್ಮಿಕೊಂಡಂತಹ “ಮಾದಕ ಮುಕ್ತ ಭಾರತ” ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜಾಗೃತಿ ನಡಿಗೆಯು ನಾಟೆಕಲ್ ನಿಂದ ದೇರಳಕಟ್ಟೆಯವರಿಗೆ ನಡೆಯಿತು. ರಾಜ್ಯ ಆಹಾರ ಮತ್ತು ನಾಗರಿಕ ಪೋರೈಕೆ ಸಚಿವ  ಯುಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾದಕ ವಸ್ತು ನಿಯಂತ್ರಣಕ್ಕೆ ವಿಶೇಷ ತಂತ್ರಜ್ಞಾನಗಳನ್ನೊಳಗೊಂಡ ಸ್ವಾಫ್ಟ್ ವೇರ್ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆನೆ. ಈ ಮೂಲಕ ಮಾದಕ ವಸ್ತು ಬಳಕೆ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಉಚಿತ ಕರೆ (ಟೋಲ್ ಫ್ರೀ) ಸಂಖ್ಯೆ ಮೂಲಕ ದೂರು ನೀಡಬಹುದು. ಟೋಲ್ ಫ್ರೀ ಸಂಖ್ಯೆ ಮೂಲಕ ಕರೆ ಮಾಡುದರಿಂದ ದೂರು ನೀಡಿದವರ ಮಾಹಿತಿ ಲಭ್ಯವಾಗುದಿಲ್ಲ. ಸಾರ್ವಜನಿಕರು ಮಾದಕ ವಸ್ತು ಬಳಕೆ ಮಾರಾಟ ಕಂಡುಬಂದಲ್ಲಿ ನೇರವಾಗಿ ಕರೆ ಮಾಡಿ ದೂರು ನೀಡಬಹುದು ಈ ನೂತನ ಯೋಜನೆ ಶೀಘ್ರವೇ ಜಾರಿಗೆಯಗಲಿದೆ ಎಂದು ಹೇಳಿದರು. ಎಸ್ಸೆಸ್ಸೆಫ್…

Read More

UN NETWORKS ಉಳ್ಳಾಲ : ದಶಕಗಳ ಹಿಂದೆ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆಗಳಿಲ್ಲದೇ ವೈದ್ಯಕೀಯ ಪದವೀಧರರು ಉನ್ನತ ಶಿಕ್ಷಣ, ವೃತ್ತಿಯನ್ನು ಅರಸಿ ವಿದೇಶಗಳಿಗೆ ಹೋಗಿ ಅಲ್ಲಿಯೇ ನೆಲೆ ನಿಲ್ಲಲು ಹಾತೊರೆಯುತ್ತಿದ್ದರು. ಪ್ರಸ್ತುತ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ಯುವ ವೈದ್ಯರ ಮೇಲೆ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವುದರಿಂದ ಕ್ಲಿನಿಕಲ್ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ನವದೆಹಲಿಯ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಹಾಗೂ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ರೇಡಿಯೇಶನ್ ಆಂಕೋಲಾಜಿ ವಿಭಾಗ ಪ್ರಾಧ್ಯಾಪಕ ಡಾ. ಜಿ.ಕೆ. ರತ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಯೇನೆಪೋಯ ವಿವಿ ಕ್ಯಾಂಪಸ್‍ನಲ್ಲಿರುವ `ಯೆನ್‍ಡ್ಯೂರೆನ್ಸ್’ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ ನಡೆದ ಯೇನೆಪೋಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣಗೈದರು. ಭಾರತ ಸ್ವಾತಂತ್ರ್ಯ ಗಳಿಸಿದ ಸಂದರ್ಭ ದೇಶದೆಲ್ಲೆಡೆ ಪ್ಲೇಗ್, ಮಲೇರಿಯಾ, ಕಾಲರಾ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಜೀವ ಬಲಿತೆಗೆದುಕೊಂಡಿತ್ತು. ಸೂಕ್ತ ಚಿಕಿತ್ಸೆ ಸೂಕ್ತ ವ್ಯವಸ್ಥೆ ಇರದಿರುವುದರಿಂದ ಆ ದಿನಗಳಲ್ಲಿ…

Read More

UN NETWORKS ಪಜೀರು: ಗೋ ಮಾತೆ ಇಡೀ ವಿಶ್ವಕ್ಕೇ ತಾಯಿಯಾಗಿದ್ದಾಳೆ. ಗೋಸಂಪತ್ತನ್ನು, ಗೋ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸುವ ಕೆಲಸ ಮಾಡಬೇಕು ಎಂದು ಸುರತ್ಕಲ್‍ನ ವೇದಮೂರ್ತಿ ಶ್ರೀ ಮಹೇಶ್ ಮೂರ್ತಿ ಅವರು ಹೇಳಿದರು. ಅವರು ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಭಾನುವಾರ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಗೋ ಪಾವಿತ್ರ್ಯ, ಚಿಂತನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಬ್ರಿಟೀಷರು ಒಡೆದು ಆಳುವ ನೀತಿಯ ಪರಿಣಾಮ ಭಾರತದಲ್ಲಿ ವ್ಯವಸ್ಥಿತವಾಗಿ ನೂರಾರು ಕಸಾಯಿಖಾನೆಗಳನ್ನು ಆರಂಭಿಸಿ ಅದೆಷ್ಟೋ ಗೋ ಸಂಪತ್ತನ್ನು ನಾಶ ಮಾಡಿದ್ದಾರೆ. ಇಂದಿಗೂ ಕಸಾಯಿಖಾನೆಗಳ ಮೂಲಕ ಗೋ ಸಂಪತ್ತು ಅವನತಿಯತ್ತ ಸಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಂಡು ಗೋವಿನ ರಕ್ಷಣೆಯ ಮಹತ್ವದ ಕೆಲಸವನ್ನು ಮಾಡಬೇಕಿದೆ. ನಮ್ಮ ಹುಟ್ಟು ಹಬ್ಬ, ಮದುವೆ ದಿನ ಸಂಭ್ರಮಗಳನ್ನು ಇಂತಹ ಗೋಶಾಲೆಗಳ ಗೋವುಗಳೊಂದಿಗೆ ಆಚರಿಸಿದರೆ ನಿಜವಾದ ಅರ್ಥ ಬರುತ್ತದೆ ಮತ್ತು ಪುಣ್ಯವೂ ಬರುತ್ತದೆ ಎಂದರು. ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿಗಳಾದ…

Read More

UN NETWORKS ಉಳ್ಳಾಲ : ಕೆ.ಸಿ.ನಗರ ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ವತಿಯಿಂದ ಮಾದಕ ವ್ಯಸನಿಗಳ ವಿರುದ್ಧ ಜನಜಾಗೃತಿ ಸಭೆ ಶನಿವಾರ ಕೆ.ಸಿ.ರೋಡು ಕೈರಲಿ ಸಭಾಂಗಣದಲ್ಲಿ ಹಾಗೂ ಮನೆಮನೆಗೆ ಕಾಲ್ನಡಿ ಜಾಥಾ ಭಾನುವಾರ ಸೋಮೇಶ್ವರ, ಕಿನ್ಯ, ಕೋಟೆಕಾರ್ ಹಾಗೂ ತಲಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್ ಮಾತನಾಡಿ, ಮಾದಕ ದ್ರವ್ಯ ಎಂಬುದು ಅನಾದಿ ಕಾಲದಿಂದಲೂ ಮನುಷ್ಯನಿಗೆ ಶಾಪವಾಗಿ ಕಾಡುತ್ತಿದೆ, ಆದರೂ ಈ ಬಗ್ಗೆ ನಾವು ಎಚ್ಚೆತ್ತುಕೊಂಡಿಲ್ಲ. ಯುವಸಮುದಾಯ ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು. ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ಸಂಚಾಲಕ ಸಂಶುದ್ದೀನ್ ಉಚ್ಚಿಲ್ ಮಾತನಾಡಿ, ಸ್ನೇಹಿತರ ಒತ್ತಾಯಕ್ಕೆ ಕುತೂಹಲ ತಣಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಯುವಕರು ಕ್ರಮೇಣ ಅದನ್ನು ಬಿಡಲು ಸಾಧ್ಯವಾಗದೆ ಶಾಶ್ವತ ದಾಸರಾಗಿ ಬಿಡುತ್ತಾರೆ. ಈ ವ್ಯಸನದಿಂದ ಮಾನವೀಯತೆ ಎಂಬುದನ್ನೇ ಮರೆತುಬಿಟ್ಟು, ಮನೋ ಸಾಮಥ್ರ್ಯವನ್ನೂ ಕಳೆದುಕೊಳ್ಳುತ್ತಾರೆ ಎಂದರು. ಪ್ರತೀ ಮದರಸ, ಮಸೀದಿಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಬಗ್ಗೆ ಸಭೆಯಲ್ಲಿದ್ದ…

Read More

UN NETWORKS ಉಳ್ಳಾಲ: ಸುನ್ನೀ ಬಾಲ ಸಂಘ (ಎಸ್ ಬಿ ಎಸ್) ಅಳೇಕಲ ಶಾಖೆ ಯ ನೂತನ ಸಮಿತಿ ರಚನಾ ಸಭೆಯು ಆದಿತ್ಯವಾರ ಅಳೇಕಲದ ಸುನ್ನೀ ಸೆಂಟರ್ ನ ಲ್ಲಿ ನಡೆಯಿತು. ಸಯ್ಯಿದ್ ಫಹಾಝ್ ತಂಗಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಎಸ್ ಬಿ ಎಸ್ ಸಂಚಾಲಕ ಶಫೀಖ್ ಯು.ಎಸ್ ಸಭೆಯನ್ನು ಉದ್ಘಾಟಿಸಿದರು.2017-18ನೇ ಸಾಲಿಗೆ ಅಧ್ಯಕ್ಷರಾಗಿ ಅರ್ಮಾನ್ ಮುಹಮ್ಮದ್,ಉಪಾಧ್ಯಕ್ಷರಾಗಿ ಸಯ್ಯಿದ್ ಫಹಾಝ್ ತಂಗಳ್,ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್,ಜೊತೆ ಕಾರ್ಯದರ್ಶಿಗಳಾಗಿ,ಮುಹಮ್ಮದ್ ನಯೀಮ್, ಮುಖ್ತಾರ್ ಯು.ಎಸ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸುಹಾನ್ ಸೇರಿದಂತೆ 15 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಬಳಿಕ ಮುಂದಿನ ಕಾರ್ಯ ಯೋಜನೆಗಳ ಕುರಿತು ಚರ್ಚಿಸಲಾಯಿತು. ಅರ್ಮಾನ್ ಮುಹಮ್ಮದ್ ಸ್ವಾಗತಿಸಿ, ಮುಹಮ್ಮದ್ ಯಾಸಿರ್ ವಂದಿಸಿದರು.

Read More

UN NETWORKS ಮಂಗಳೂರು: ದಕ್ಷಿಣ ಭಾರತ ಮಟ್ಟದಲ್ಲಿ ನಡೆಯುವ ಅತಿ ದೊಡ್ಡ ಸ್ಪರ್ಧೆಯಾಗಿರುವ , ಮಂಗಳೂರಿನ ಆರ್ಟ್ ಬ್ಯಾಟಲ್ ಸಂಸ್ಥೆಯ ಮಿಸ್ಟರ್ ಆ್ಯಂಡ್ ಮಿಸ್ ಗ್ರೌಂಡ್ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಹಾಸನದ ಸ್ನೇಹ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾ ಆಗಿ ಬೆಂಗಳೂರಿನ ಕೌಶಲ್ ಚೌಧರಿ ವಿಜೇತರಾಗಿದ್ದಾರೆ. ಜೆಪ್ಪಿನಮೊಗರು ರಿವರ್ ಡೇಲ್ ನಲ್ಲಿ ಇತ್ತೀಚೆಗೆ ನಡೆದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಬೆಂಗಳೂರು, ತೆಲಂಗಾಣ, ಆಂಧ್ರ, ಗೋವಾ ಕೇರಳ ಹಾಗೂ ತಮಿಳುನಾಡಿನಿಂದ ಭಾಗವಹಿಸಿದ್ದ ಸ್ಪರ್ಧಿಗಳಲ್ಲಿ ಇವರು ಆಯ್ಕೆಯಾಗಿದ್ದಾರೆ. ಉಳಿದಂತೆ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಮಂಗಳೂರಿನ ಬಿಂದು ಶೆಟ್ಟಿ, ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ಆಶಿಕಾ, ಮೂರನೇ ರನ್ನರ್ ಅಪ್ ಆಗಿ ಹುಬ್ಬಳ್ಳಿಯ ಅಕ್ಷತಾ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಬೆಂಗಳೂರಿನ ಸ್ಟೀಫನ್ ಮತ್ತು ಚಂದ್ರು, ಬೆಂಗಳೂರಿನ ಕಾರ್ತಿಕ್…

Read More

UN NETWORKS ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಯೋಜಿಸುವ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ( ಗೂಡುದೀಪ ಸ್ಪರ್ಧೆ ) ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅ.21 ಮತ್ತು ಅ.22 ರಂದು ತೊಕ್ಕೊಟ್ಟು ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ ಎಂದು ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಅ. 21 ಶನಿವಾರ ಸಂಜೆ ಸಭಾ ಕಾರ್ಯಕ್ರಮ ಬಳಿಕ 6.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಟಾಪ್ ಸಿಂಪೋನಿ ತಂಡದಿಂದ `ನೃತ್ಯ ವೈಭವ’ ಕಾರ್ಯಕ್ರಮ, ಉದ್ಘಾಟನಾ ಸಮಾರಂಭವನ್ನು ಶೃಂಗೇರಿ ಶಾಖಾ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ನೆರವೇರಿಸಲಿದ್ದಾರೆ. ಶ್ರೀ ಭಗವತಿ ಕ್ಷೇತ್ರ ಉಳ್ಳಾಲ ಇದರ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್ ಹಾಗೂ ಗೌರವ ಉಪಸ್ಥಿತಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದು, 9 ಗಂಟೆಗೆ ಖುಷಿ ಮೆಲೋಡೀಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ…

Read More

UN NETWORKS ಉಳ್ಳಾಲ: ಜಗತ್ತಿನ ಮೂಲೆ ಮೂಲೆಗೂ ಸುನ್ನತ್ ಜಮಾತಿನ ಆಶಯ ಮುಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಹತ್ತಿರವಾಗುವ ರೀತಿಯಲ್ಲಿ ಅಲ್ಲಲ್ಲಿ ಮದರಸಗಳ ನಿರ್ಮಿಸಿ ಧಾರ್ಮಿಕ ವಿದ್ಯೆ ಜೊತೆಗೆ ಲೌಕಿಕ ವಿದ್ಯೆಯನ್ನು ನೀಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ಗ್ರಾಮದ ಹೊಸನಗರದಲ್ಲಿ ಎಸ್‍ವೈಎಸ್ ಕೆ.ಸಿ ರೋಡು ಸೆಂಟರ್ ಅಧೀನದ ತಾಜುಲ್ ಉಲಮಾ ಎಜ್ಯುಕೇಶನ್ ಸೆಂಟರ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮದರಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿರು. ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಪಡೆದಾಗ ಮಾತ್ರ ಸಂಪೂರ್ಣ ಮನುಷ್ಯನಾಗಲು ಸಾಧ್ಯ . ಈ ನಿಟ್ಟಿನಲ್ಲಿ ಮಕ್ಕಳಲ್ಲೇ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊತ್ತು ಮದರಸಗಳು ಕಾರ್ಯಾಚರಿಸುತ್ತಿವೆ ಎಂದರು. ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಾಜ್ಯ ಸರಕಾರ ಧಾರ್ಮಿಕ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ನೀಡುತ್ತಾ ಬಂದಿದೆ. ಮುಂದೆ ಸಂಸ್ಥೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು…

Read More

UN NETWORKS ತಲಪಾಡಿ: ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ಆಯೋಜಿಸಲಾದ ಡ್ರಗ್ ಫ್ರೀ ಇಂಡಿಯಾ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮ್ಮರಬ್ಬ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಾದಕ ಪದಾರ್ಥವು ಮಾನವೀಯತೆಯನ್ನಿ ನಶಿಸಿ ಕ್ರೂರತೆಯನ್ನು ಪ್ರದರ್ಶಿಸುವ ಸಾಧನವಾಗಿದೆ.ಸರ್ವ ಧರ್ಮದವರೂ ಜೊತೆಗೂಡಿ ಮಾದಕ ಪದಾರ್ಥಕಗಳ ಬಗ್ಗೆ ಎಚ್ಚೆತ್ತು ಸಾರ್ವಜನಿಕರಿಗೆ ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಡ್ರಗ್ಸ್ ಮುಕ್ತ ಭಾರತ ಬೈಕ್ ರ್ಯಾಲಿಯು ಕಿನ್ಯದಲ್ಲಿ ಪ್ರಾರಂಭಗೋಡು ಪಂಜಳ,ಪಿಲಿಕೂರು,ಕೆ.ಸಿ.ನಗರ,ಕೆ.ಸಿ.ರೋಡ್ ಮಾರ್ಗವಾಗಿ ತಲಪಾಡಿಯಲ್ಲಿ ಸಮಾರೋಪಗೊಂಡಿತು. ಸುನ್ನಿ ಜಮೀಯತುಲ್ ಉಲಮಾ ಮಂಗಳೂರು ವಲಯದ ಅಧ್ಯಕ್ಷರಾದ ಬಶೀರ್ ಮದನಿ ಕೂಳೂರು ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರು ಜಾಗ್ರತೆವಹಿಸಬೇಕು ಎಂದು ತಿಳಿಸಿದರು. ಎಸ್.ವೈ.ಎಸ್.ಕೆ.ಸಿ.ರೋಡ್ ಸೆಂಟ್ರಲ್ ಉಪಾಧ್ಯಕ್ಷ ಸಿರಾಜುದ್ಧೀನ್,ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹೀಂ ಝುಹರಿ, ಕೋಶಾಧಿಕಾರಿ ಅಲ್ತಾಫ್ ಕೆ.ಸಿ.ರೋಡ್, ಸದಸ್ಯರಾದ ಹಕೀಂ, ಇಬ್ರಾಹಿಂ ಕೆ.ಸಿ.ರೋಡ್, ಮುಸ್ತಫ ಕೆ.ಸಿ.ನಗರ, ಜಾಫರ್ ಪಿಲಿಕೂರು, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಕೋಶಾಧಿಕಾರಿ ಅಬ್ದುಲ್ ಹಮೀದ್,ತಲಪಾಡಿ ಂಚಾಯತ್…

Read More

UN NETWORKS ಉಳ್ಳಾಲ: ಪಿ.ಮೊಹಮ್ಮದ್ (58)ಉಳಾಯಿಬೆಟ್ಟು ನಿವಾಸಿ ಇಂದು ನಿಧನರಾದರು. ಇವರು ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಮತ್ತು ಉಳಾಯಿಬೆಟ್ಟು ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಹೆಂಡತಿ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಅಗಲಿದ್ದಾರೆ.

Read More