UN NETWORKS ಕೊಂಡಾಣ: ಅದು ದೈವತ್ವ ತುಂಬಿದ ತುಳುನಾಡ ಮಣ್ಣಿನ ಕಡೆಯ ಜಾತ್ರಾ ಮಹೋತ್ಸವ. ಇಲ್ಲಿನ ಕಾರ್ಣಿಕದ ದೈವಗಳ ಜಾತ್ರೆ ಮುಗಿದ ಬಳಿಕ ತುಳುನಾಡಿನ ಮತ್ತೆಲ್ಲೂ ಜಾತ್ರಾ ಮಹೋತ್ಸವ ನಡೆಯುವುದೇ ಇಲ್ಲ. ಹೀಗಾಗಿಯೇ ಇತಿಹಾಸ ಪ್ರಸಿದ್ದ ದೈವಿಕ ಪುಣ್ಯ ಕ್ಷೇತ್ರವಾದ ಆ ಮಣ್ಣಿನಲ್ಲಿ ಸದ್ಯ ಜಾತ್ರಾಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಅದುವೇ ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕೊಂಡಾಣ ಶ್ರೀಪಿಲಿಚಾಮುಂಡಿ,ಬಂಟ, ಮುಂಡತ್ತಾಯ (ವೈದ್ಯನಾಥ)ದೈವಸ್ಥಾನ ಕ್ಷೇತ್ರ. ಶ್ರೀಕ್ಷೇತ್ರ ಕೊಂಡಾಣದಲ್ಲಿ ಮೇ.22 ಮತ್ತು 23ರಂದು ವಾರ್ಷಿಕ ಜಾತ್ರೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತದೆ. ಕ್ಷೇತ್ರದ ಕಾರ್ಣಿಕ ದೈವಗಳಾದ ಪಿಲಿಚಾಮುಂಡಿ, ಬಂಟ ಮತ್ತು ವೈದ್ಯನಾಥನಿಗೆ ನೇಮೋತ್ಸವಗಳು ನಡೆದು ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಬೀಳುತ್ತದೆ. ಇದಾದ ಬಳಿಕ ತುಳುನಾಡು ಎಂದು ಕರೆಸಿಕೊಳ್ಳುವ ಉಡುಪಿ-ದ.ಕ ಜಿಲ್ಲೆಯ ಯಾವುದೇ ಭಾಗದಲ್ಲಿ ದೈವಸ್ಥಾನಗಳು ಜಾತ್ರೋತ್ಸವಗಳು ನಡೆಯುವುದಿಲ್ಲ ಎನ್ನುವುದು ವಾಡಿಕೆ. ಹೀಗಾಗಿ ತುಳುನಾಡಿನ ಮಟ್ಟಿಗೆ ಶ್ರೀಕ್ಷೇತ್ರ ಕೊಂಡಾಣದ ಬಂಡಿ ಉತ್ಸವ ಕಡೆಯ ಜಾತ್ರಾ ಸಂಭ್ರಮ ಎನ್ನುವುದು ಉಲ್ಲೇಖನಿಯ. ಈ ಮಧ್ಯೆ…
Author: UllalaVani
UN NETWORKS ಉಳ್ಳಾಲ: ಬೈಕಿಗೆ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ , ಎಂಸಿಎಫ್ ಉದ್ಯೋಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರು ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುಡಿಪು ಕೊಡಕ್ಕಲ್ ನಿವಾಸಿ ಮಹೇಶ್ ಭಟ್ ಕೊಡಕ್ಕಲ್ (32) ಮೃತರು. ಮಂಗಳೂರಿನ ಕೊಟ್ಟಾರದಲ್ಲಿ ಮೇ.19 ರಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ವಿವಾಹಿತರಾಗಿರುವ ಇವರು ಪತ್ನಿ ಹಾಗೂ ಒಂದೂವರೆ ಹರೆಯದ ಮಗುವಿನ ಜೊತೆಗೆ ಶಕ್ತಿನಗರ ಸಮೀಪ ರೂಮಿನಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಬೈಕಿನಲ್ಲಿ ಕೆಲಸಕ್ಕೆ ಹೊರಟಿದ್ದವರು ಪತ್ನಿ ಸಂಗೀತಾ ಅವರನ್ನು ನಂತೂರು ಸಮೀಪ ಬಿ.ಎಡ್ ಕಾಲೇಜಿಗೆ ಬಿಟ್ಟು, ಬೈಕಂಪಾಡಿ ಎಂಸಿಎಫ್ ಕಡೆಗೆ ಪ್ರಯಾಣ ಬೆಳೆಸಿದ್ದರು. ದಾರಿಮಧ್ಯೆ ಕೊಟ್ಟಾರ ಫ್ಲೈಓವರ್ ತಲುಪುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಲಾರಿ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಿಂದ ರಸ್ತೆಗೆ ಬಿದ್ದ ಮಹೇಶ್ ಅವರ ತಲೆಯ ಭಾಗಕ್ಕೆ ಗಾಯವಾಗಿತ್ತು. ಅಪಘಾತಕ್ಕೆ ಕಾರಣವಾದ ಲಾರಿ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಇದನ್ನು ಮಹೇಶ್ ಅವರ ಬೈಕಿನ…
UN NETWORKS ಉಳ್ಳಾಲ: ಹೆತ್ತವರು ಮಕ್ಕಳನ್ನು ಸಮಾಜದೊಂದಿಗೆ ಬೆರೆಯಲು ಬಿಡದ ಕಾರಣ ಮಕ್ಕಳಿಗೆ ಸಮಾಜದ ಮೇಲೆ ಅಭಿಮಾನ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳನ್ನು ಸಮಾಜದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅವರಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ಸರಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇಲ್ಲಿನ ನಿವೃತ್ತ ವ್ಯವಸ್ಥಾಪಕ ಹಾಗೂ ಬೆಂಗಳೂರು ಬಿಲ್ಲವ ಅಸೋಸಿಯೇಷನ್ನ ಖಜಾಂಚಿ ಮಾಚ ಬಿಲ್ಲವ ಅಭಿಪ್ರಾಯಪಟ್ಟರು. ಅವರು ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯ ಇಲ್ಲಿ ಏರ್ಪಡಿಸಿದ್ದ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಪುಸ್ತಕ ವಿದ್ಯಾರ್ಥಿವೇತನ ಪಡೆದರೆ ಸಾಲದು ತಾವು ಸಮಾಜದಿಂದ ಪಡೆದ ಈ ಶೈಕ್ಷಣಿಕ ಕೊಡುಗೆಯನ್ನು ಜ್ಞಾಪಕದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸದೃಡರಾದಾಗ ಉಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂಘಕ್ಕೆ ಸಹಕಾರ ನೀಡುವ ಕಾರ್ಯ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ…
UN NETWORKS ಕೊಣಾಜೆ: ಮಕ್ಕಳಿಗೆ ಶಾಲಾ ಪರಿಕರಗಳನ್ನು ನೀಡುವ ಸಂದರ್ಭ ಅದರ ಮೇಲಿನ ಜವಾಬ್ದಾರಿಯನ್ನೂ ತಿಳಿಸುವ ಕಾರ್ಯ ಆದಾಗ ಮಕ್ಕಳಿಗೆ ಅದರ ಮೌಲ್ಯದ ಅರಿವಾಗುತ್ತದೆ ಎಂದು ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ಬೋಜ ಪೂಜಾರಿ ಅಭಿಪ್ರಾಯಪಟ್ಟರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಿಂದ ರವಿವಾರ ನಡೆದ ಉಚಿತ ಪುಸ್ತಕ ವಿತರಣೆ ಹಾಗೂ ಭವಿಷ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಅಪರೂಪಕ್ಕೆ ಒಂದರಂತೆ ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳನ್ನು ನೀಡುತ್ತಿದ್ದರು. ಆದರೆ ಇಂದು ದಿನಕ್ಕೊಂದು ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳ ಮೇಲೆ ಮಕ್ಕಳಿಗೆ ಜವಾಬ್ದಾರಿ ಮತ್ತು ಮೌಲ್ಯದ ಅರಿವಿರುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವುದೇ ವಸ್ತು ನೀಡಿದಾಗ ಅದರ ಮೌಲ್ಯವನ್ನು ತಿಳಿಸುವ ಕಾರ್ಯ ಆಗಬೇಕು ಎಂದ ಅವರು ಇಂದಿನ ವಿದ್ಯಾರ್ಥಿಗಳು ಚುರುಕಾಗಿದ್ದು, ಎಸ್ಎಸ್ಎಲ್ಸಿ ಮತ್ತು ಪಿಯುಸಿಯ ಬಳಿಕ ಯಾವ ಕೋರ್ಸು ಆಯ್ಕೆ ಮಾಡಬೇಕು ಎನ್ನುವ ಗೊಂದಲ ನಿವಾರಣೆಗೆ ಇಂತಹ ಕಾರ್ಯಾಗಾರಗಳು ಪೂರಕ…
UN NETWORKS ಉಳ್ಳಾಲ: ತುಳುನಾಡಿನ ಜನರಲ್ಲಿ ನಾವೆಲ್ಲ ತುಳುವೆರ್ ಎನ್ನುವ ಭಾವನೆ ಮೂಡಿದಾಗ ಎಲ್ಲಾ ಜಾತಿ ಧರ್ಮದ ಜನರು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯ ಎಂದು ಉಳ್ಳಾಲ ವಲಯ, ಬಂಟರ ಸಂಘ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯದ ಆಶ್ರಯದಲ್ಲಿ ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ನಡೆದ ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಮಾಗಮ ತುಳುವೆರೆ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾರಾಷ್ಟ್ರದ ಮುಂಬಯಿಯಂತಹ ಮಹಾನಗರದಲ್ಲಿ ತುಳುನಾಡು ಸೇರಿದಂತೆ ದೇಶ ವಿದೇಶದ ಜನರು ಉತ್ತಮ ಸಹಬಾಳ್ವೆ ನಡೆಸುತ್ತಿದ್ದಾರೆ. ಇದ್ಕೆ ಮುಖ್ಯ ಕಾರಣ ಅಲ್ಲಿ ಮರಾಠಿ ಭಾಷೆಯನ್ನಾಡುವ ಮೂಲ ನಿವಾಸಿಗರು ಮತ್ತು ಹೊರಗಿನಿಂದ ಬಂದಂತಹ ಜನರು ಹಾಲು ಸೆಕ್ಕರೆಯಂತೆ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಮುಂಬಯಿಯಲ್ಲಿ ವಾಸಿಸುವ ತುಳುವರು ನಾವು ಬಂಟರು, ಬಿಲ್ಲವರು, ಮೊಗವೀರರು ಎನ್ನದೇ ನಾವೆಲ್ಲ ತುಳುವರು ಎನ್ನುವ ಕಲ್ಪನೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನರಲ್ಲೂ ಜಾತಿ ಧರ್ಮದ ತಾರತಮ್ಯ ಬಾರದೆ…
UN NETWORKS ಉಳ್ಳಾಲ: ಬಂಟರ ಭವನ ನಿರ್ಮಾಣವಾದರೆ ಸಾಲದು ಆರ್ಥಿಕವಾಗಿ ಹಿಂದುಳಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅದರ ಪ್ರಯೋಜನ ಮುಟ್ಟಿದರೆ ಮಾತ್ರ ನಾವು ನಿರ್ಮಿಸಿದ ಈ ಭವನ ಸಾರ್ಥಕವಾಗಲು ಸಾಧ್ಯ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಮುಂಬೈಯ ಉದ್ಯಮಿ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು. ಅವರು ಬಂಟರ ಸಂಘ ಉಳ್ಳಾಲ ವಲಯದ ಆಶ್ರಯದಲ್ಲಿ ರವಿವಾರ ನಡೆದ ಉಳ್ಳಾಲ ಬಂಟೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಅನೇಕ ಮಂದಿ ಆರ್ಥಿಕವಾಗಿ ನೊಂದವರು ಇದ್ದಾರೆ. ಆದರೆ ಅವರು ಸಮಾಜದ ಬಳಿ ಸಹಾಯ ಕೇಳಿಕೊಂಡು ಬರುವುದಿಲ್ಲ. ನಾವು ಅಂತವರನ್ನು ಗುರುತಿಸಿ ಅವರ ಆರೋಗ್ಯ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದರೆ ಮಾತ್ರ ಇಂತಹ ಸಮಾಜಕ್ಕೆ ನೀಡಿದ ಕೊಡುಗೆ ಸಾರ್ಥಕ್ಯವನ್ನು ಪಡೆಯಲು ಸಾಧ್ಯ ಎಂದ ಅವರು ಜೀವನದಲ್ಲಿ ನಿವೃತ್ತಿ ಎಂಬುದು ಇರಬಾರದು. ಅದೇ ರೀತಿ ಬಂಟರ ಭವನದ ಈ ಕಾರ್ಯಕ್ರಮ ಸಮಾರೋಪವಾಗದೆ ಇದು ಪ್ರಾರಂಭವಾಗಿದ್ದು, ಈ…
UN NETWORKS ಅಸೈಗೋಳಿ: ಬಂಟರು ಮೂಲತಃ ಕೃಷಿಕ ಮನೆತನವಾಗಿದ್ದರೂ ಹಂತ ಹಂತವಾಗಿ ಎಲ್ಲ ರಂಗದಲ್ಲಿ ಸಾಧನೆಗೈಯುತ್ತಾ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಬಂಟ ಸಮಾಜಕ್ಕೆ ದೇಶ ವಿದೇಶದಲ್ಲಿ ಉತ್ತಮ ಹೆಸರು ಪ್ರಾಪ್ತವಾಗಿದೆ. ಅದು ಶಾಶ್ವತವಾಗಿ ಉಳಿಯಬೇಕಾದರೆ ಬಂಟ ಸಮಾಜದ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು.ಹಾಗೆಯೇ ತಲೆತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಉತ್ತಮ ಸಂಪ್ರದಾಯ ಮುರಿಯದೆ ಮುಂದುವರಿಸಬೇಕು. ನಾವು ಎಷ್ಟೇ ಶ್ರೀಮಂತಿಕೆ ಹೊಂದಿದರೂ ನಮ್ಮ ಭವಿಷ್ಯವನ್ನು ರೂಪಿಸಿದ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ನಮ್ಮದಾದ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಶಾಶ್ವತವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯ ಕೊಣಾಜೆ ಅಸೈಗೋಳಿಯಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ “ಬಂಟರ ಭವನ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ನೂತನ ಬಂಟರ ಭವನದ ಮೂಲಕ ಬಂಟರ ಸಂಘ ಉಳ್ಳಾಲ ವಲಯ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗಿದೆ. ಈ ಕನಸಿನ ಕಟ್ಟಡದಲ್ಲಿ ಬಹಳಷ್ಟು ಕಾರ್ಯಕ್ರಮಗಳು…
UN NETWORKS ಮಂಗಳೂರು :ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅಭಿವೃಧ್ಧಿಗೆ ಅಥವಾ ವಿದ್ಯಾಭ್ಯಾಸಕ್ಕೆ ಸಮುದಾಯದ ಸಹಕಾರ ಪ್ರೋತ್ಸಾಹ ಅತೀ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯಾದ್ಯಂತ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯನ್ನು ಮಾತ್ರ ತನ್ನ ಧ್ಯೇಯವಾಗಿಸಿರುವ ಜಮೀಯ್ಯತ್ತುಲ್ ಫಲಾಹ್ ಸಂಸ್ಥೆಯು ಸಮುದಾಯದ ಶೈಕ್ಷಣಿಕಾಭಿವೃದ್ಧಿಗೆ ಸಹಕರಿಸುತ್ತದೆ ಎಂದು ಜಿಲ್ಲಾ ಜಮೀಯ್ಯತ್ತುಲ್ ಫಲಾಹ್ನ ಅಧ್ಯಕ್ಷರು ಹಾಗೂ ದ.ಕ.ಜಿ.ಪಂ ಸದಸ್ಯರು ಆದ ಹಾಜಿ. ಶಾಹುಲ್ ಹಮೀದ್ರವರು ಹೇಳಿದರು. ಅವರು ಇತ್ತೀಚಿಗೆ ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ವತಿಯಿಂದ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಮಾತನಾಡಿದ ಅವರು ಪ್ರಸಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ತೆರ್ಗಡೆಯ ಶೇಕಡಾವಾರು ಹೆಚ್ಚಾಗಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಜಮೀಯತ್ತುಲ್ ಫಲಾಹ್ ಸಂಸ್ಥೆಯು ಶ್ಲಾಘನೀಯ ಕಾರ್ಯವೆಸಗಿದೆ ಎಂದರು . ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ರವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಾದ ಮಹಮ್ಮದ್…
UN NETWORKS ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಎಂಬಲ್ಲಿರುವ ಮದ್ರಸವೊಂದಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಭರತ್ ಮತ್ತು ಮಿಥುನ್ ಎಂದು ಗುರುತಿಸಲಾಗಿದೆ. ಕೊಲ್ಲರಕೋಡಿಯ ನೂರುಲ್ ಉಲೂಮ್ ಮದ್ರಸಕ್ಕೆ ಕಿಡಿಗೇಡಿಗಳು ಶುಕ್ರವಾರ ಬೈಕ್ನಲ್ಲಿ ಆರೋಪಿಗಳು ಕಲ್ಲೆಸಿದ್ದರು. ಈ ಸಂದರ್ಭದಲ್ಲಿ ಮದ್ರಸದ ಬಳಿ ಇದ್ದ ಅಬ್ದುಲ್ ಮಜೀದ್ ಎಂಬವರು ಗೊಬ್ಬೆ ಹೊಡೆದಾಗ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ಒಟ್ಟು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಮಂಜನಾಡಿ ಜಾತ್ರಾ ಉತ್ಸವಕ್ಕೆ ಬಂದು ಇದೇ ದಾರಿಯಲ್ಲಿ ಹಿಂದಿರುವಾಗ ಮದ್ರಸಕ್ಕೆ ಕಲ್ಲೆಸೆದು ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಉಳ್ಳಾಲ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ) ವತಿಯಿಂದ ದೇರಳಕಟ್ಟೆ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ) ಅಧ್ಯಕ್ಷ ಹಾಜಿ ಇಲ್ಯಾಸ್ ಡಿ, ಪ್ರ.ಕಾರ್ಯದರ್ಶಿ ಅಮೀರ್ ಹುಸೈನ್, ಜೊತೆ ಕಾರ್ಯದರ್ಶಿ ಅಬ್ದುಲ್ ಮುತ್ತಲಿಬ್, ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಅಬೂಬಕ್ಕರ್ ನಾಟೆಕಲ್, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ಬಾಸ್ ಡಿ, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎನ್. ಕಾರ್ಯದರ್ಶಿ ಅಬ್ದುಲ್ ಆರ್ ಅಹ್ಮದ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ನೌಫಲ್. ಬಿ, ಮುಂತಾದವರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದವರು.

