Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಾರ್ಜ್ ದುರಂತ ನಡೆದು ಒಂಭತ್ತು ದಿನಗಳಾಗುತ್ತಾ ಬಂದಿದೆ. ಬಿರುಸಿನ ಅಲೆಗಳ ನಡುವೆ ಸಿಲುಕಿರುವ ಬಾರ್ಜ್ ಸಂಪೂರ್ಣ ಸಮುದ್ರಪಾಲಾಗಲು ಕ್ಷಣಗಣನೆಯನ್ನು ಎಣಿಸುತ್ತಿದ್ದು, ಸ್ಥಳೀಯರು ತೇಲಿಬಂದ ಸೊತ್ತುಗಳ ಶೋಧ ದಲ್ಲಿ ನಿರತರಾಗಿದ್ದಾರೆ. ಜೂ. 3 ರಂದು ಕಡಲ್ಕೊರೆತ ಕಾಮಗಾರಿ ನಿರತ ಬಾಜ್ ್ ಅಲೆಗಳ ಅಬ್ಬರಕ್ಕೆ ರೀಫ್ ಮೇಲೆ ಹಾಕಲಾಗಿದ್ದ ಕಲ್ಲುಗಳಿಗೆ ಸಿಲುಕಿ ಹಾನಿಗೀಡಾಗಿತ್ತು. ಈ ಸಂದರ್ಭ ಅಪಾಯದಲ್ಲಿ ಸಿಲುಕಿದ್ದ 27 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಆದರೆ ಸಮುದ್ರದ ಅಲೆಗಳ ರಭಸಕ್ಕೆ ಬಾರ್ಜ್  ಮೇಲೆತ್ತಲು ಅಸಾಧ್ಯವಾಗಿತ್ತು. ಸೋಮವಾರ ಬಾರ್ಜ್ ನಿಂದ ತೇಲಿಬಂದ ರೆಫ್ರಿಜರೇಟರ್ ಸೀಗ್ರೌಂಡ್ ಸಮುದ್ರ ತೀರವನ್ನು ತಲುಪಿದೆ. ಸ್ಥಳೀಯರು ಅದನ್ನು ಮುರಿದು ಅದರೊಳಗೆ ಸೊತ್ತುಗಳಿರುವ ಬಗ್ಗೆ ಶೋಧ ನಡೆಸಿದರು. ಅಪಾಯದಲ್ಲಿ ರೀಫ್: ಬಾರ್ಜ್  ಶೇ.90 ರಷ್ಟು ಮುಳುಗಿದೆ. ಇದರಿಂದಾಗಿ ಕಡಲ್ಕೊರೆತ ತಡೆಗಾಗಿ ಹಾಕಲಾದ ಶಾಶ್ವತ ತಡೆಗೋಡೆಯ ರೀಫ್ ಗಳು ಅಪಾಯದಂಚಿನಲ್ಲಿವೆ. ಸದ್ಯ ಬಾರ್ಜ್ ಮೇಲಿರುವ ಕ್ರೇನ್ ಮಾತ್ರ ಸಮುದ್ರದ ಮೇಲೆ ಗೋಚರಿಸುತ್ತಿದ್ದು, ಸಂಪೂರ್ಣವಾಗಿ ಮುಳುಗಿದಲ್ಲಿ ರೀಫ್ ಸಾಲಿನಲ್ಲೂ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತಲಪಾಡಿ: ವಾಟಾಳ್ ನಾಗರಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ವಿವಿಧ ಬೇಡಿಕೆಗಳ ಜೊತೆಗೆ ಪ್ರಮುಖವಾಗಿ ಗಡಿನಾಡು ಕನ್ನಡಿಗರ ಮೇಲಿನ ದೌರ್ಜನ್ಯ ಹಾಗೂ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯ ನೀತಿಯನ್ನು ಖಂಡಿಸಿ ಸೋಮವಾರದಂದು ಕರೆ ನೀಡಿದ ಕರ್ನಾಟಕ ಬಂದ್ ಕೇರಳ ಹಾಗೂ ಕರ್ನಾಟಕದ ಗಡಿನಾಡು ತಲಪಾಡಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಕೇರಳ ಕರ್ನಾಟಕ ಗಡಿಪ್ರದೇಶವಾಗಿರುವ ತಲಪಾಡಿಯಲ್ಲಿ ಬಂದ್ ಗೆ ಯಾವುದೇ ರೀತಿಯ ಬೆಂಬಲ ಸಿಗದೇ ಎಂದಿನಂತೆ ಜನಜೀವನ ಹಾಗೂ ಬಸ್ಸು ಸಂಚಾರ ಯಥಾಸ್ಥಿತಿಯಲ್ಲಿ ಇದ್ದುದರಿಂದ ಗಡಿನಾಡಿನಲ್ಲಿ ಬಂದ್ ಸಂಪೂರ್ಣ ವಿಫಲವಾಗಿದೆ. ಜೂ.8ರಂದು ಗಡಿನಾಡಿನ ಜನರಿಗೆ ವಾಟಾಳ್ ನಾಗರಾಜ್ ಹಾಗೂ ಪ್ರವೀಣ್ ಶೆಟ್ಟಿ ಬಣ ಗಡುನಾಡು ತಲಪಾಡಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿತ್ತು. ಇದೇ ವೇಳೆ ಪ್ರಮುಖ ಬೇಡಿಕೆಯಾಗಿ ಕೇರಳ ಸರಕಾರದ ಗಡಿನಾಡು ಕಾಸರಗೋಡಿನಲ್ಲಿ ಕಡ್ಡಾಯ ಮಲಯಾಳಂ ಭಾಷಾ ನೀತಿಯನ್ನು ಖಂಡಿಸಿ ಜೂ. 12 ರಂದು ಬಂದ್ ಗೆ ಘೋಷಣೆಯನ್ನು ನೀಡಿದ್ದರು. ಆದರೆ ಪ್ರತಿಭಟನೆಯ ವೇಳೆ ಗಡಿನಾಡಿನ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕುರ್ನಾಡು: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿರುವ ಘಟನೆ ಕುರ್ನಾಡು ಅಂಗಣೆಮಾರ್ ಎಂಬಲ್ಲಿ ನಿನ್ನೆ ಸಂಭವಿಸಿದೆ. ಮಾರ್ಷಲ್ ಡಿಸೋಜಾ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯೊಳಗೆ ಕಪಾಟಿನಲ್ಲಿರಿಸಲಾಗಿದ್ದ ರೂ.30,000 ನಗದು ಹಾಗೂ 15 ಪವನ್ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ. ಹಿಂದಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹಾಡಹಗಲೇ ಸೊತ್ತುಗಳನ್ನು ಕಳವುಗೈದಿದ್ದಾರೆ. ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಕೃತ್ಯ ನಡೆದಿದೆ. ಮನೆಮಂದಿ ಸಂಜೆ ವೇಳೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಪ್ರದಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಯತ್ತ ಭಾರತ ದಾಪುಗಾಲಿಡುತ್ತಿದ್ದು, ವಿಶ್ವದಾದ್ಯಂತ ಅಭಿವೃದ್ಧಿ ಶೀಲ ದೇಶಗಳುಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ ವಿಶ್ವಮಾನ್ಯತೆಯನ್ನು ಪಡೆಯುವಂತಾಗಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕೇಂದ್ರ ಸರಕಾರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತದ ಪ್ರಗತಿಯ ಬಗ್ಗೆ ಏರ್ಪಡಿಸಲಾಗಿದ್ದ ಎಲ್‍ಇಡಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು ಎಂದು ಬಯಸಿದ್ದರು. ಅಂದು ಅವರು ಭಾರತೀಯ ಜನತಾ ಪಾರ್ಟಿಗೆ ಹಾಕಿಕೊಟ್ಟ ರಾಜಕೀಯ ಸಿದ್ಧಾಂತವನ್ನು ಇಂದು ಕೇಂದ್ರದ ನರೇಂದ್ರ ಮೋದಿ ಸರಕಾರ ಈಡೇರಿಸುತ್ತಿದೆ. ದೇಶದಲ್ಲಿರುವ ಯುವಕರನ್ನು ಸದೃಡರನ್ನಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ಪ್ರಾರಂಬಿಸಿದ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಯೇನೆಪೋಯ ವಿಶ್ವವಿದ್ಯಾನಿಲಯವು ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಅಧ್ಯಯನ ಕೇಂದ್ರ, ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಪರಿಸರ ದಿನದ ಘೋಷಣೆಯಾದ ನಿಸರ್ಗದೊಂದಿಗೆ ಜನ ಜೋಡಣೆ ಈ ವಿಷಯದ ಮೇಲೆ ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕ ಡಾ| ಭಾಗ್ಯ ಬಿ. ಶರ್ಮ ಇವರು ಮಂಗಳೂರು ಆಕಾಶವಣಿಯ ವನಿತಾವಾಣಿಯಲ್ಲಿ ನೇರ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪರಿಸರವನ್ನು ರಕ್ಷಿಸಲು ಎದುರಾಗುವ ಸವಾಲುಗಳು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮಹತ್ವ, ಪರಿಸರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ, ಸ್ಥಳೀಯ ಆಹಾರ ಉತ್ಪನ್ನಗಳ ಬಳಕೆಯಿಂದ ಪರಿಸರ ಸಂರಕ್ಷಣೆ ಈ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅವರು ಈ ಕಾರ್ಯಕ್ರಮದಲ್ಲಿ ನೀಡಿದರು. ಪರಿಸರ ಶಿಕ್ಷಣದ ಪ್ರಾಮುಖ್ಯತೆ, ತೋಟಗಾರಿಕೆ ಮತ್ತು ಪಕ್ಷಿ ವೀಕ್ಷಣೆಯಂತಹ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು ಪರಿಸರದಲ್ಲಿ ಒಂದಾಗಿ ಸುಸ್ಥಿರತೆಗೆ ಪೂರಕವಾಗಲಿದೆ. ವಿದ್ಯಾರ್ಥಿಗಳಿಂದ ವಿಶ್ವವಿದ್ಯಾನಿಲಯದ ಆವರಣ ಸ್ವಚ್ಚತಾ ಅಭಿಯಾನ ಹಾಗೂ ಗಿಡನೆಡುವ ಕಾರ್ಯಕ್ರಮವು ರಾಷ್ಟ್ರಿಯ ಸೇವಾ ಯೋಜನಾ ಘಟಕದೊಂದಿಗೆ ಜಂಟಿಯಾಗಿ ನಡೆಸಲಾಯಿತು. ನಿಸರ್ಗದೊಂದಿಗೆ ಜನ ಜೋಡಣೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2017-18 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ್ ಹರೇಕಳ ರವರು ಪುನರಾಯ್ಕೆಯಾಗಿದ್ದಾರೆ. ರಂಜನ್ ನಾಯ್ಕ್ ಮಣ್ಣಗುಡ್ಡೆ (ಉಪಾಧ್ಯಕ್ಷ),ಕೋಡಿ ಜಯನಾಯ್ಕ್ (ಪ್ರಧಾನ ಕಾರ್ಯದರ್ಶಿ),ಮುರಳೀಧರ ನಾಯ್ಕ್ ಬಬ್ಬುಕಟ್ಟೆ,ಆಶಾ ಎಸ್.ನಾಯ್ಕ್ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ ಬಪ್ಪಾಲ್ (ಕೋಶಾಧಿಕಾರಿ),ಇಂದುಶೇಖರ ನಾಯ್ಕ್ ಭಂಡಾರಬೈಲ್,ಜಯಶೀಲ ಯು.ನಾಯ್ಕ್ ಬಜಾಲ್, ಮಂಜುನಾಥ ನಾಯ್ಕ್ ಸುಭಾಸ್ ನಗರ,ವೆಂಕಟೇಶ್ ಬಂಟ್ವಾಳ,ಪ್ರವೀಣ ನಾಯ್ಕ್ (ಸಂಘಟನಾ ಕಾರ್ಯದರ್ಶಿಗಳು)ಹಾಗೂ 23 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಯು.ದಯಾನಂದ ನಾಯ್ಕ್ ರವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ಜರಗಿತು. ಸಂಘದ ಹಿರಿಯ ಸದಸ್ಯ ಯು ಕೃಷ್ಣೋಜಿ ಕೆ. ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಸದಸ್ಯರಾದ ಗೋಪಾಲ್ ಯು ಕೆ ಮಾತನಾಡಿ ಸಂಘದಲ್ಲಿ ಸದಸ್ಯರು ತನ್ನ ಅವಶ್ಯಕತೆಗೆ ತಕ್ಕಂತೆ ಸಾಲವನ್ನು ಮರುಪಾವತಿಸಿದರೆ ಸಂಘದ ಬೆಳವಣಿಗೆ ಜತೆ ಸದಸ್ಯರು ಕೂಡ ತನ್ನ ಅವಶ್ಯಕತೆಯನ್ನು ಪೂರೈಸಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಸಂಘದ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಮಾತನಾಡಿ, ಉಳ್ಳಾಲ ಶಾಖೆಯು ಎರಡು ವರ್ಷದ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಯಶಸ್ಸು ಅಭಿವೃದ್ದಿಗೆ ಕಾರಣಿಭೂತರಾದ ಎಲ್ಲರನ್ನು ಸ್ಮರಿಸಿ, ಗ್ರಾಹಕರು ಪಡೆದ ಸೇವೆಯೆ ಈ ಬೆಳವಣಿಗೆಗೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ವಿದೇಶಿ ಉಡುಗರೆ ನೀಡುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಐಟಿ ಕಾಯ್ದೆಯಡಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಿಜೋರಂ ಮೂಲದ, ನವದೆಹಲಿ ಬುದೆಲಾ ವಿಕಾಸಪುರಿಯ ಲಾಲ್ ತಾನ್ ಮಾವಿಯಾ (34), ಮಣಿಪುರ ಚುರಚಾಂದ್ ಪುರದ ಕೂಫ್ ಬೊಯಿ ಯಾನೆ ಲಿಯಾನ್ ಕೂಪ್ (32) ಎಂದು ಹೆಸರಿಸಲಾಗಿದೆ. ಬಂಧಿತ ಆರೋಪಿಗಳು ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ನಿವಾಸಿ ವಾೈಲೆಟ್ ಎಂಬವರಿಗೆ ನಕಲಿ ಈ-ಮೇಲ್ ಕಳುಹಿಸಿ, ಮೊಬೈಲ್ ಮೂಲಕ ಸಂಪರ್ಕಿಸಿ ವಿದೇಶಿ ಉಡುಗರೆ ನೀಡುವುದಾಗಿ ನಂಬಿಸಿ ಅವರಿಂದ 21,58,200 ರೂ. ಪಡೆದು ವಂಚಿಸಿದ್ದರು. ಈ ಬಗ್ಗೆ ವಾೈಲೆಟ್ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರಫಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು. ಇದೀಗ ಖಚಿತ ಮಾಹಿತಿ ಮೇರೆಗೆ ಪೊಲೀಸರ ಅತಿಥಿಯಾಗಿರುವ ಆರೋಪಿಗಳು ದೆಹಲಿಯ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‍ಲ್ಯಾಂಡ್ ಹೆಸರಿನಲ್ಲಿ ನಕಲಿ ಮೈಲ್ ಅನ್ನು ವಾೈಲೆಟ್ ಅವರಿಗೆ ಕಳುಹಿಸಿದ್ದರು. ಸ್ನೇಹಿತರ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎಸ್ ಎಸ್ ಎಫ್ ತೊಕ್ಕೋಟು ಸೆಕ್ಟರ್‌ ವತಿಯಿಂದ ಉತ್ತರ ಕರ್ನಾಟಕದಲ್ಲಿ ಕಾರ್ಯನಿರತರಾಗಿರುವ ಇಹ್ಸಾನ್ ದಾಈಗೆ ದ್ವಿಚಕ್ರ ವಾಹನ ವಿತರಣೆ, ಬದ್ರ್ ಮೌಲಿದ್ ಮಜ್ಲಿಸ್‌ ಹಾಗೂ ಕ್ಯಾಂಪಸ್ ಇಫ್ತಾರ್ ಮೀಟ್‌ ತೊಕ್ಕೊಟ್ಟು ಹಿದಾಯ ಪ್ಯಾಲೇಸ್‌ನಲ್ಲಿ ನಡೆಯಿತು. ಸೆಕ್ಟರ್‌ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಡಿವಿಶನ್ ಅಧ್ಯಕ್ಷ ಯಾಕೂಬ್ ನಈಮಿ ಅಲ್-ಅಫ್ಳಲಿ ಉದ್ಘಾಟಿಸಿದರು. ಮುಬಾರಕ್ ಸಖಾಫಿ ಮಂಚಿಲ ಮೌಲಿದ್ ಮಜ್ಲಿಸ್‌‌ಗೆ ನೇತೃತ್ವ ನೀಡಿದರು.ಮುತ್ತಲಿಬ್ ಝುಹ್ರಿ, ಹಾಜಿ ಖಾದರ್ ಸ್ವದೇಶಿ, ಅಬ್ದುಲ್ ನಾಸಿರ್ ಕಲ್ಕಟ್ಟ, ರಿಯಾಝ್ ಮಾರಿಪಳ್ಳ, ಸೆಕ್ಟರ್‌ ಉಪಾಧ್ಯಕ್ಷ ಶಮೀರ್ ಸೇವಂತಿಗುಡ್ಡೆ, ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ, ಕೋಶಾಧಿಕಾರಿ ಜುನೈದ್ ಮದನಿ ನಗರ, ರಿಲೀಫ್ ಸರ್ವಿಸ್ ಕೋಶಾಧಿಕಾರಿ ಶಮೀರ್ ಹಿದಾಯತ್ ನಗರ, ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ, ಮಾಧ್ಯಮ ಕಾರ್ಯದರ್ಶಿ ಬಿ.ಎಸ್. ಇಸ್ಮಾಈಲ್, ಎಸ್‌ಬಿ‌ಎಸ್ ಕನ್ವೀನರ್ ಸಾಲಿಂ ಪಟ್ಲ ಉಪಸ್ಥಿತರಿದ್ದರು. ರಿಲೀಫ್ ಸರ್ವಿಸ್ ಚೇರ್‌ಮ್ಯಾನ್ ಅಲ್ತಾಫ್ ಕುಂಪಲ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಜಾಫರ್…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಸುನ್ನೀ ಸೆಂಟರ್ ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ವಿ ಎಸ್ ವತಿಯಿಂದ ಪ್ರಪ್ರಥಮ ಬಾರಿಗೆ ಅಳೇಕಲ ಕರಿಯ ಮಟ್ಟದ ಕುರ್ಆನ್ ತಜ್ವೀದ್ ಸ್ಪರ್ಧೆಯು ಅಳೇಕಲ ಜುಮಾ ಮಸೀದಿಯಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸೆಯ್ಯದ್ ಜಲಾಲ್ ತಂಙಳ್ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಳೇಕಲ ಜುಮಾ ಮಸೀದಿಯ ಖತೀಬರಾದ ಅಲ್ಹಾಜ್ ಅಬೂಝಿಯಾದ್ ಪಟ್ಟಾಂಬಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಳೇಕಲ, ಮಂಚಿಲ, ಮಾರ್ಗತ್ತಲೆ ಮತ್ತು ಹಲೆಕೋಟೆಯ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಹನೀಫ್ ಸಅದಿ ಉಸ್ತಾದರು ಮತ್ತು ಹಫೀಝ್ ಅಲ್ ಫಾಳಿಲಿ ಉಸ್ತಾದ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸೆಯ್ಯದ್ ಝಾಹಿರ್ ತಂಙಳ್, ದ್ವಿತೀಯ ಸ್ಥಾನ ನಿಹಾಲ್ ಮತ್ತು ತ್ರತೀಯ ಸ್ಥಾನವನ್ನು ಮುಹಮ್ಮದ್ ಕೈಸ್ ಪಡೆದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶರೀಫ್ ಸಾದುಹಿತ್ಲು ಮತ್ತು…

Read More