Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ತೊಕ್ಕೊಟ್ಟುವಿನಲ್ಲಿ ನಡೆದ ಗೇರು ಬೆಳೆ ಕ್ಷೇತ್ರೋತ್ಸವ-2018

UllalaVaniBy UllalaVaniFebruary 7, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತೊಕ್ಕೊಟ್ಟು: ಬೇಡಿಕೆ, ಬೆಲೆ ಹೆಚ್ಚಿರುವ ಗೋಡಂಬಿ ಬೆಳೆ ಬೆಳೆಸುವಲ್ಲಿ ರೈತರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ವಿದೇಶಗಳಿಗೆ ಕಳುಹಿಸುವ ವಿಪುಲ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳೆ ಬೆಳೆಯುವಲ್ಲಿ ಇನ್ನಷ್ಟು ಪ್ರಬಲವಾಗಬೇಕಿದೆ ಎಂದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ನಾರಾಯಣ ಸ್ವಾಮಿ ಹೇಳಿದರು.

ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತೊಕ್ಕೊಟ್ಟುವಿನ ಸಂಶೋಧನಾ ಕೇಂದ್ರದ ವಠಾರದಲ್ಲಿ `ಗೇರು ಬೆಳೆ ಕ್ಷೇತ್ರೋತ್ಸವ-2018′ ನ್ನು ಉದ್ಘಾಟಿಸಿ ಮಾತನಾಡಿದರು.

ವಿಭಿನ್ನ ಬೆಳೆಯಾಗಿರುವ ಗೋಡಂಬಿ ಬೆಲೆ ಎಂದಿಗೂ ಕಡಿಮೆಯಾಗಿಲ್ಲ. ಏಲಕ್ಕಿ ಬೆಲೆಯಲ್ಲಿ ವ್ಯತ್ಯಾಸಗಳಾಗಿವೆ, ಮೆಣಸಿನ ಬೆಳೆ ಸದ್ಯ ಬೀಳುತ್ತಿದೆ. ದೇಶದಿಂದ 28 ದೇಶಗಳಿಗೆ ಗೋಡಂಬಿ ರಫ್ತಾಗುತ್ತಿದೆ. ಇದರಿಂದ ವಾರ್ಷಿಕ 5,169 ಕೋಟಿ ರೂಗಳ ವರಮಾನ ಬರುತ್ತಿದೆ. ಆದರೆ 5,000 ಕೋಟಿ ರೂ.ಗಳಲ್ಲಿ ಕಚ್ಚಾ ವಸ್ತುಗಳನ್ನು ವಾಪಸ್ಸು ಪಡೆಯಲಾಗುತ್ತಿದೆ. ಇದರಿಂದ ಕೇವಲ 169 ಕೋಟಿ ರೂ.ಗಳು ಮಾತ್ರ ಉಳಿಯುತ್ತಿದೆ. ದೇಶದ ಸಂಸ್ಕರಣಾ ಘಟಕಗಳಿಗೆ ಕಚ್ಚಾ ವಸ್ತುಗಳು ಸಾಕಾಗುತ್ತಿಲ್ಲ. ಗೋಡಂಬಿ ಬೆಳೆಯಲ್ಲಿ ವರಮಾನ, ಇಳವರಿಯಿದ್ದರೂ ಬೆಳೆ ಬೆಳೆಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. 2020ನ ಇಸವಿಯಲ್ಲಿ 15 ಲಕ್ಷ ಟನ್ ಬೇಡಿಕೆ ಯಿದೆ. ಇದೀಗ ಕೇವಲ 8 ಲಕ್ಷ ಟನ್ ಬೆಳೆಯಲಾಗುತ್ತಿದೆ. ಬೆಳೆಯಬೆಕಾಗಿರುವುದು ದೇಶದ ರೈತರ ಕರ್ತವ್ಯ . ಈ ನಿಟ್ಟಿನಲ್ಲಿ ಗೋಡಂಬಿ ಬೆಳೆಯುವಲ್ಲಿ ಪ್ರಬಲವಾಗಬೇಕಿದ್ದು, ಅವಕಾಶವನ್ನು ಉಪಯೋಗಿಸಬೇಕಿದೆ. ಸುಲಭವಾದ ಬೆಳೆಯನ್ನು ನಿರ್ಲಕ್ಷ್ಸಿಸಿದರೆ ತೊಂದರೆಗೀಡಾಗಲಿದ್ದೇವೆ ಎಂದ ಅವರು ಟೀ ಸೊಳ್ಳೆ, ಕಾಂಡಾ ಕೊರೆಯುವ ಹುಳು ತೊಂದರೆಯಿದ್ದರೂ ದೊಡ್ಡ ಪ್ರಮಾಣದಲ್ಲಿ ರೋಗಗಳಿಲ್ಲ. ಹೂವು ಬಿಟ್ಟಾಗ ಮಾತ್ರ ಕಾರ್ಯಗಳಿರುತ್ತವೆ ಮಳೆಗಾಲ ಆರಂಭವಾದಾಗ ಹನಿ ನೀರಾವರಿ ಅಳವಡಿಸಿದಲ್ಲಿ ಅನುಕೂಲದ ಜತೆಗೆ ಇಳವರಿಯೂ ಜಾಸ್ತಿಯಾಗುವುದು ಎಂದರು.

ಕೃಷಿ ವಸ್ತುಪ್ರದರ್ಶನವನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ಯಜ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕ್ ವಹಿಸಿದ್ದರು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಗೇರು ಬೆಳೆ ಮತ್ತು ಗೇರು ತೋಟದಲ್ಲಿ ಅಂತರ್ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಎಂಬ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿದರು.

ಉಳ್ಳಾಲ ನಗರ ಸಭೆ ಅಧ್ಯಕ್ಷ ಕೆ.ಹುಸೇನ್ ಕುಂಞಮೋನು, ಪುತ್ತೂರು ಗೇರು ನಿರ್ದೇಶನಾಲಯದ ನಿರ್ದೇಶಕ ಡಾ.ಎಂ,ಗಂಗಾಧರ ನಾಯಕ್, ಬ್ರಹ್ಮಾವರ ಕೃಷಿ ಡಿಪ್ಲೋಮ ಕಾಲೇಜಿನ ಪಾಂಶುಪಾಲ ಡಾ.ಸುಧೀರ ಕಾಮತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆಂಪೇಗೌಡ, ವಲಯ ಕೃಷಿ ಮತ್ತು ತೋಟಗಾರಿಕಾ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್, ಉಳ್ಳಾಲ ನಗರ ಸಭೆ ಸದಸ್ಯ ಸುಕುಮಾರ ಉಳ್ಳಾಲ ಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೃಷಿ ಸಾಧಕರಾದ ರಾಷ್ಟ್ರಪ್ರಶಸ್ತಿ ವಿಜೇತ ಚಂದ್ರಶೇಖರ್ ಗಟ್ಟಿ ಕೊಂಡಾಣ, ರಾಜ್ಯ ಪ್ರಶಸ್ತಿ ವಿಜೇತ ಮೂಡಬಿದ್ರೆಯ ಎಡ್ವರ್ಡ್ ರೆಬೆಲ್ಲೊ, ಸಮಗ್ರ ಕೃಷಿ ಪ್ರಶಸ್ತಿ ಪುರಸ್ಕೃತ ಸುಳ್ಯ ಪೇರಾಜೆಯ ಪಿ.ಬಿ.ಪ್ರಭಾಕರ ರೈ, ನೀರುಮಾರ್ಗ ಪೆಡಮಲೆಯ ಹೆನ್ರಿ ಕ್ರಾಸ್ತ, ಕುಂದಾಪುರದ ಕಿಶನ್ ಕುಮಾರ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ವಂದಿಸಿದರು.ಈ ಸಂದರ್ಭ ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ಗೇರು ಬೆಳೆಗಳ ಪ್ರದರ್ಶನ ನಡೆಯಿತು.

ಸಂಶೋಧನಾ ಕೇಂದ್ರ ನಡೆದುಬಂದ ದಾರಿ
ಉಳ್ಳಾಲ ಕೃಷಿ ಸಂಶೋಧನಾ ಕೇಂದ್ರ 14 ಹೆಕ್ಟೆರ್ ಪ್ರದೇಶವನ್ನು ಹೊಂದಿದೆ. ತೊಕ್ಕೊಟ್ಟುವಿನಂತಹ ನಗರದ ಮಧ್ಯಭಾಗದಲ್ಲಿ 1950 ರಲ್ಲಿ ಸ್ಥಾಪನೆ . ಕರಾವಳಿ ವಲಯಕ್ಕೆ ಸೇರಿದ ಬಹುಮುಖ್ಯ ಸಂಶೋಧನಾ ಕೇಂದ್ರ. ಗೇರುಕೃಷಿಯನ್ನು ಉತ್ತಮ ಸಾಧನೆ ಮಾಡಿದೆ. ಮುಖ್ಯ ಗುರಿ ಹೆಚ್ಚಿನ ಇಳುವಳರಿ, ಗುಣಮಟ್ಟದ ಗೇರು ಬೆಳೆ , ಸಸ್ಯ ಸಂರಕ್ಷಣೆಯಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಗಿಡ ಪೂರೈಸುವುದು,
ಮಾಹಿತಿಯನ್ನು ಒದಗಿಸುವುದು , ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಉಳ್ಳಾಲ1,2,3,4 ಯುಎನ್ -50 ತಳಿ ಅಭಿವೃದ್ಧಿ ಯನ್ನು ನಡೆಸಿದೆ. ಈ ಪೈಕಿ ಉಳ್ಳಾಲ1 ಮತ್ತು 2 ರಾಜ್ಯದ ಎಲ್ಲಾ ಭಾಗಗಳಲ್ಲಿ ತಳಿಗಳು ಹರಡಿವೆ. ಇದು ಇಲ್ಲಿ ಶ್ರಮವಹಿಸಿ ದುಡಿದ ವಿಜ್ಞಾನಿಗಳ ಹೆಮ್ಮೆಯ ಸಂಗತಿ. 2010 ರಲ್ಲಿ ಇಂಡಿಯಾ 2-1, 2016 ರಲ್ಲಿ ಪ್ರಿಯಾಂಕ ತಳಿಯನ್ನು ಕರಾವಳಿ ಭಾಗಕ್ಕೆ ಶಿಫಾರಸ್ಸನ್ನೂ ನಡೆಸಿದೆ. ಕಸಿ ಗಿಡಗಳು, ಬೀಜಗಳನ್ನು ಇತರೆ ರಾಜ್ಯಗಳಿಗೆ ಪೂರೈಸುವ ಕಾರ್ಯವೂ ಕೇಂದ್ರದಿಂದ ಆಗಿದೆ. ಅಂತರಬೆಳೆಯಾಗಿ ಪೊದೆ ಮೆಣಸು, ಸುವರ್ಣ ಗೆಡ್ಡೆ, ಅರಶಿನ ಗಿಡ 2016ರಿಂದ ಬೆಳೆಸುತ್ತಾ ಬಂದು, ಜನರಿಗೆ ಶಿಫಾರಸ್ಸು ನಡೆಸಿದೆ. ಪ್ರತಿವರ್ಷವೂ 80,000 ದಿಂದ 1 ಲಕ್ಷದವರೆಗಿನ ಗುಣಮಟ್ಟದ ಕಸಿಗಿಡಗಳನ್ನು ರೈತರಿಗೆ ವಿತರಿಸಿದೆ. ಕಾಳುಮೆಣಸು, ಜೀಗುಜ್ಜೆ, ಕಸಿ ಮಾವಿನಗಿಡ, ತೆಂಗಿನ ಗಿಡ, ನುಗ್ಗೆ ಗಿಡ, ಪಪ್ಪಾಯಿ ಗಿಡ ಹೆಚ್ಚಿನ ಇಳವರಿ ನೀಡುವ ಗಿಡಗಳನ್ನು ವಿತರಿಸಲಾಗಿದೆ. ಬೇರೆ ರಾಜ್ಯಗಳಿಂದ 65 ಜಾತಿಯ ಗೇರು ಮತ್ತು ಗೋಡಂಬಿ ಗಿಡಗಳ ಸಂಶೋಧನೆಗಳನ್ನು ನಡೆಸಲಾಗಿದೆ. ಬಾಳೆಪುಣಿ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಪಡೆದುಕೊಂಡಿರುವ ಕೇಂದ್ರ ಅಲ್ಲಿನ ರೈತರಿಗೆ ಹೊಸ ತಂತ್ರಜ್ಞಾನದ ಅರಿವು ಮೂಡಿಸಿದೆ.

ಜಾಹೀರಾತು

ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಆಫರ್ ಬಂದರೂ ಹೋಗದೆ, ತಂದೆಯ ಎರಡು ಎಕರೆ ಜಮೀನಿನಲ್ಲಿ ಗೆಂದಾಳಿ ಸೀಯಾಳದ ತೋಟವನ್ನು ವೈಜ್ಞಾನಿಕ ತಳಹದಿಯ ಮೇಲೆ ಬೆಳೆಸಿದೆ. ಗಿಡ ನಾಟಿ ಮಾಡುವ ಸಂದರ್ಭ ಮೊದಲು ಅಗೆದ ಮಣ್ಣನ್ನು ಬೇರೆಯಿಟ್ಟು, ಅದನ್ನು ಹಾಕಿದಲ್ಲಿ ಪೋಷಕಾಂಶ ಲಭಿಸಲು ಸಾಧ್ಯ. ಹಾಗೆಯೇ ಮಾಡಿದ್ದರಿಂದ ಯಶಸ್ಸು ಲಭಿಸಿದೆ. ನಡುವೆ ತೆಂಗಿಗೆ ಕಾಡಿದ ಕುರುವಾಯಿ ಕಾಟ ಆರಂಭವಾಗಿದ್ದು, ಅದಕ್ಕೆ ನ್ಯಾಫ್ತಲೀನ್ ಬಾಲ್ ನ್ನು ಇಟ್ಟು ನಿವಾರಿಸಿ ತೋಟವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇನೆ,. ಅಲ್ಲದೆ ರೈತರಿಗೂ ವೈಜ್ಞಾನಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇನೆ.
ಕೃಷಿ ಸಾಧಕ
ಚಂದ್ರಶೇಖರ್ ಗಟ್ಟಿ ಕೊಂಡಾಣ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯೋತ್ಸವ

August 15, 2026

ನೂರುಲ್ ಇಸ್ಲಾಂ ಮದ್ರಸ ಬಾಳೆಪುಣಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

August 15, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

80ನೇ ವರ್ಷದ ಸ್ವಾತಂತ್ರ್ಯ ಆಚರಣೆ ನಮ್ಮ ಹೆಮ್ಮೆ,ನಮ್ಮ ಜವಾಬ್ದಾರಿ

By UllalaVaniAugust 15, 20260

ಪಜೀರು: ಸರ್ವೋದಯ ಯುವಕ ಮಂಡಲದಲ್ಲಿ ಲೋಹಿತ್ ಪಜೀರು ಅವರ ಅಧ್ಯಕ್ಷತೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮದ ಹಿರಿಯರಾದ 94 ವರ್ಷದ…

ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಪೆರ್ಮನ್ನೂರಿನ ಸಾಂ ಸೆಬೆಸ್ತ್ಯಾಂವ್ ಫಿರ್ಗಜ್‌ನಲ್ಲಿ 80ನೇ ಸ್ವಾತಂತ್ರ್ಯೋತ್ಸವ

August 15, 2026

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026
1 2 3 … 2,061 Next
Automatic YouTube Gallery

ಆ.23ರಂದು ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ

ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ; ಆಗಸ್ಟ್ 23ರಂದು ಭಾನುವಾರ ನಡೆಯಲಿರುವ ಶಿಬಿರ

ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಪ್ರವಚನ ಮತ್ತು ಮಾರ್ಗದರ್ಶನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆ.23ರಂದು ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ
Now Playing
ಆ.23ರಂದು ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ
ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ; ಆಗಸ್ಟ್ ...
ಕಟೀಲಿನಲ್ಲಿ `ಆತ್ಮ-ಪರಮಾತ್ಮ' ಜೀವನದ ಸತ್ಯ ದರ್ಶನ ಒಳ ಚಿಂತನ ಶಿಬಿರ; ಆಗಸ್ಟ್ 23ರಂದು ಭಾನುವಾರ ನಡೆಯಲಿರುವ ಶಿಬಿರ

ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಪ್ರವಚನ ಮತ್ತು ಮಾರ್ಗದರ್ಶನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ  ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
Now Playing
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ...
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version