Author: UllalaVani

Kannada News From Coastal Karnataka

UN NETWORKS ಮಂಗಳೂರು: ಇತಿಹಾಸ ಪ್ರಸಿದ್ಧ ಅಡ್ಯಾರ್ ಕಣ್ಣೂರು ಹಝ್ರತ್ ಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿ(ಖ.ಸ)ರವರ ದರ್ಗಾ ಶರೀಫ್ ಉರೂಸ್ ಮುಬಾರಕ್ ಭಾನುವಾರ ಸಮಾಪ್ತಿಗೊಂಡಿತು.ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕಂಪ್ಯೂಟರ್ ಮೊಬೈಲ್ ತಂದ ವಿಪತ್ತು ಮತ್ತು ಅಧುನಿಕ ಯುವ ಜನಾಂಗ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣಗೈದರು. ಕಣ್ಣೂರು ಬದ್ರಿಯ ಜುಮಾ ಮಸೀದಿ ಖತೀಬ್ ಅನ್ಸಾರ್ ಪೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು‌. ಅಸೈಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದರು. ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಉರೂಸ್ ಗೆ ಶುಭಹಾರೈಸಿದರು.ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಪ್ರೊಫೆಸರ್ ಅಲಿಕುಟ್ಟಿ ಉಸ್ತಾದ್, ಆತ್ರಾಡಿ ಖಾಝಿ ವಿ.ಕೆ ಅಬೂಬಕ್ಕರ್ ಮುಸ್ಲಿಯಾರ್, ಪೊಸೋಟ್ ಮುದರ್ರಿಸ್ ಅಸೈಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್, ಮುಹಮ್ಮದ್ ಫೈಝಿ, ಅಕ್ಕರಂಗಡಿ ಖತೀಬ್ ಕೆ.ಎಸ್ ಹೈದರ್ ದಾರಿಮಿ, ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅಶ್ರದಿ, ಕಣ್ಣೂರು ಶರೀಯತ್ ಕಾಲೇಜ್ ಪ್ರಿನ್ಸಿಪಾಲ್ ಇಸ್ಮಾಯಿಲ್ ಮದನಿ,…

Read More

UN NETWORKS ಸೋಮೇಶ್ವರ: ಸೋಮೇಶ್ವರದಲ್ಲಿ ರೈಲು ಬರುವ ಹಿನ್ನೆಲೆಯಲ್ಲಿ ಗೇಟು ಹಾಕುತ್ತಿದ್ದಾಗಲೇ ಬಂದ ಮಿನಿಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗೇಟು ತುಂಡಾಗಿದೆ, ಇದರ ಪರಿಣಾಮ ವಾಹನ ಸವಾರರು ಎದುರಿಸಬೇಕಾಯಿತು. ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕೇರಳದಿಂದ ರೈಲು ಬರುವ ಹಿನ್ನೆಲೆಯಲ್ಲಿ ಗೇಟ್ ಕೀಪರ್ ವಾಹನ ತಡೆಯುವ ನಿಟ್ಟಿನಲ್ಲಿ ಗೇಟು ಹಾಕುತ್ತಿದ್ದರು. ಈ ಸಂದರ್ಭ ಉಚ್ಚಿಲದಿಂದ ಉಳ್ಳಾಲದತ್ತ ಹೋಗುತ್ತಿದ್ದ ಮಿನಿಲಾರಿ ತಾಗಿದ್ದರಿಂದ ತುಕ್ಕು ಹಿಡಿದಿದ್ದ ಗೇಟು ತುಂಡಾಗಿ ಬಿದ್ದಿದೆ. ಈ ಸಂದರ್ಭ ಇನ್ನೊಂದು ಬದಿಯ ಗೇಟು ಅರ್ಧದಲ್ಲೇ ನಿಂತಿತು. ಈ ಸಂದರ್ಭ ಗೇಟ್ ಕೀಪರ್ ಎರಡೂ ಕಡೆ ಸಂಕಲೆಗಳನ್ನು ಅಳವಡಿಸಿದರು. ಗೇಟು ತುಂಡಾಗಿದ್ದರಿಂದ ಬೇರೆ ದಾರಿ ಕಾಣದೆ ಹಾಕಿದ ಸಂಕಲೆ ತೆಗೆಯಲು ಗೇಟ್ ಕೀಪರ್ ಮುಂದಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಒಂದಿಬ್ಬರು ಬೈಕ್ ಚಾಲಕರು ಸಂಕಲೆ ದಾಟಿ ತಮ್ಮ ಪ್ರಯಾಣ ಮುಂದುವರಿಸಿದರು. ಇದನ್ನು ಗಮನಿಸಿದ ಇನ್ನೂ ಕೆಲವು ಮಂದಿ ಸಂಕಲೆಯನ್ನೇ ಮುರಿಯಲು ಮುಂದಾದರು. ಅದರಿಂದ ಗಲಿಬಿಗೊಂಡ ಗೇಟ್ ಕೀಪರ್, ರೈಲು ಬರುವ ಹೊತ್ತಾಯಿತು…

Read More

UN NETWORKS ಮುಡಿಪು: ಜಾತಿಯ ಆಧಾರದಲ್ಲಿ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸುವ ಮೂಲಕ ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸಮಾಜದಲ್ಲಿ ಧರ್ಮಜಾಗೃತಿಯನ್ನು ಮೂಡಿಸಿ ಹಿಂದೂ ಸಮಾಜವನ್ನು ಸದೃಡವಾಗಿ ಬೆಳೆಸುವ ಕೆಲಸ ಎಲ್ಲೆಡೆಯಲ್ಲೂ ನಡೆಯಬೇಕಿದೆ ಎಂದು ಧಾರ್ಮಿಕ ಚಿಂತಕಿ ಕುಮಾರಿ ಚೈತ್ರಾ ಕುಂದಾಪುರ ಅವರು ಹೇಳಿದರು. ಅವರು ಮುಡಿಪು ಧರ್ಮಜಾಗೃತಿ ವೇದಿಕೆಯ ವತಿಯಿಂದ ಮುಡಿಪುವಿನಲ್ಲಿ ಭಾನುವಾರ ನಡೆದ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ, ಶಿವಪೂಜೆ, ಸರಳ ಆದರ್ಶ ವಿವಾಹ, ಭಜನಾ ಕಮ್ಮಟ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅರಿವಿಲ್ಲದ ಮಕ್ಕಳಲ್ಲಿಯೇ ಜಾತಿಯೆಂಬ ವಿಷಬೀಜವನ್ನು ಬಿತ್ತುವಂತಹ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಮೊಟ್ಟೆ, ಟೂರ್, ಅಹಿಂದದ ಹೆಸರಿನಲ್ಲಿ ವಿದ್ಯಾರ್ಥಿಗಳ ನಡುವೆ ಕಂದಕವನ್ನು ಮೂಡಿಸುತ್ತಿದೆ. ಆದ್ದರಿಂದ ಧರ್ಮ ಜಾಗೃತಿಯ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಇಂದು ಹೆತ್ತವರೇ ದಾರ್ಮಿಕ ಚಿಂತನೆಗಳಿಂದ ಮಕ್ಕಳನ್ನು ದೂರವಿಡುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳು, ಚಿಂತನೆ, ಕುಟುಂಬದ ಮೌಲ್ಯ, ಸಂಬಂಧಗಳ ಮಹತ್ವವನ್ನು ತಿಳಿಸುವ…

Read More

UN NETWORKS ಉಳ್ಳಾಲ: ಪಡಿತರ ಚೀಟಿ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ವಿತರಿಸುವ ಯೋಜನೆ ದೇಶದಲ್ಲೇ ಪ್ರಥಮವಾಗಿ ಉಳ್ಳಾಲದಲ್ಲಿ ಜಾರಿಗೊಳಿಸಲಾಗಿದೆ, ಮುಂದೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಸ್ಥಳದಲ್ಲೇ ಪಡಿತರ ಚೀಟಿ ವಿತರಣಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು. ಮನೆಯಿಲ್ಲದವರಿಗೂ ಪಡಿತರ ಚೀಟಿ ಇರಬೇಕು ಎನ್ನುವುದು ಸರ್ಕಾರದ ಅಭಿಲಾಷೆ, ಈ ನಿಟ್ಟಿನಲ್ಲಿ ಹಿಂದೆ ಪಡಿತರ ಚೀಟಿ ಪಡೆಯಲು ನೀಡಬೇಕಾದಂತಹ ವಿದ್ಯುತ್ ಬಿಲ್, ಮತದಾನ ಚೀಟಿ, ಮನೆ ದಾಖಲೆಗಳನ್ನು ರದ್ದುಗೊಳಿಸಿ ಆಧಾರ್ ನಂಬರ್‍ಗೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಮನೆ ಇಲ್ಲವರು, ಚಿಂದಿ ಆಯುವವರಿಗೂ ಪಡಿತರ ಚೀಟಿ ಸಿಗುವಂತಾಗಿದೆ. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗುತ್ತಿಗೆ ಆಧಾರದಲ್ಲಿ ದುಡಿಯುವವರ ಅನುಕೂಲಕ್ಕಾಗಿ ಬಿಪಿಎಲ್ ಪಡಿತರಕ್ಕೆ ಇದ್ದಂತಹ ಮಾನದಂಡವನ್ನೂ 1.20 ಲಕ್ಷ ಆದಾಯಮಿತಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು. ಮಧ್ಯವರ್ತಿಗಳ ಹಾವಳಿ, ತಾಲೂಕು ಕಚೇರಿ ಅಲೆದಾಟ ತಡೆಯುವ ಹಾಗೂ ಪಾಸ್‍ಪೋರ್ಟ್‍ಗಿಂತಲೂ ವೇಗವಾಗಿ ಪಡಿತರ ಚೀಟಿ ತಲುಪಿಸುವ…

Read More

UN NETWORKS ದೇರಳಕಟ್ಟೆ: ವಿಶ್ವದಲ್ಲಿ ಮಲೇರಿಯಾ ಪೀಡಿತ 15 ದೇಶಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ಮಲೇರಿಯಾ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಲೇರಿಯಾ ಸಂಶೋಧನೆಗಳಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಮಲೇರಿಯಾ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ನಿಟ್ಟೆ (ಸ್ವಾಯತ್ತ ಪರಿಗಣಿಸಲಾಗಿರುವ)ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕ್ಷೇಮ ಮೆಡಿಕಲ್ ಅಕಾಡೆಮಿಯ ಸೆಮಿನಾರ್ ಹಾಲ್ ನಲ್ಲಿ ಶನಿವಾರ ನಡೆದ ಮಲೇರಿಯಾ ಸಂಶೋಧನೆಯಲ್ಲಿ ಪ್ರಸ್ತುತ ಬೆಳವಣಿಗೆಗಳು ವಿಚಾರದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಅತ್ಯಂತ ಪ್ರಾಚೀನ ರೋಗವಾಗಿರುವ ಮಲೇರಿಯಾ ಸಂಶೋಧನೆಗೆ ಅತ್ಯಂತ ಹೆಚ್ಚು ವೆಚ್ಚ ತಗಲುವುದರಿಂದ ಭಾರತದಲ್ಲಿ ಸಂಶೋಧನೆ ಹಿಂದೆ ಬಿದ್ದಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿದ್ದು, ನಿಟ್ಟೆ ವಿಶ್ವವಿದ್ಯಾನಿಲಯವೂ ಯುಎಸ್‍ಎ ಪೆನ್‍ಸ್ಟೇಟ್ ವಿಶ್ವವಿದ್ಯಾನಿಲಯದಂತ ವಿವಿಗಳೊಂದಿಗೆ ಸಂಶೋಧನೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದರು. ಯುಎಸ್‍ಎ ಪೆನ್‍ಸ್ಟೇಟ್ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಡಾ| ಚನ್ನೇ ಗೌಡ…

Read More

UN NETWORKS ಉಳ್ಳಾಲ: ಮಧ್ಯವಯಸ್ಕರೇ ಸ್ಪರ್ಧಿಸಲಿರುವ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ, ಅವರನ್ನು ಎದುರಿಸಲು ಸಿಪಿಎಂ ವಿಭಿನ್ನ ಕಸರತ್ತು ನಡೆಸಿದೆ. 25ರ ಹರೆಯದ ಯುವ ವಕೀಲ , ಕಾಲೇಜು ಜೀವನದಲ್ಲಿ ಎಸ್ ಎಫ್ ಐ ಮುಖಂಡನಾಗಿ ಹಲವು ಹೋರಾಟಗಳ ನೇತೃತ್ವ ವಹಿಸಿ, ಇದೀಗ ಡಿವೈಎಫ್ ಐ ನ ಜಿಲ್ಲಾ ಕಾರ್ಯದರ್ಶಿಯಾಗಿರುವ ನಿತಿನ್ ಕುತ್ತಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಬಿ.ಕಾಂ ನಡೆಸಿ ಎಲ್ ಎಲ್ ಬಿ ಪದವೀಧರರಾಗಿರುವ ನಿತಿನ್, 2006 ರಲ್ಲಿ 8 ನೇ ತರಗತಿಯಿಂದಲೇ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾದವರು. 2010 ರಲ್ಲಿ ಎಸ್ ಎಫ್ ಐ ನ ಉಳ್ಳಾಲ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬಳಿಕ ಸಿಪಿಎಂ ಸದಸ್ಯತ್ವ ಹೊಂದಿದ ಅವರು 2011 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತರಗತಿ ಪ್ರತಿನಿಧಿಯಾಗಿ ಚುನಾವಣೆ ಮೂಲಕ ಆಯ್ಕೆಗೊಂಡವರು. ಎಸ್ ಎಫ್ ಐ ಜಿಲ್ಲಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿರುವ ನಿತಿನ್ ವಿ.ವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ…

Read More

UN NETWORKS ಉಳ್ಳಾಲ: ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಇದ್ದ ಸ್ನೇಹಿತನಿಗೆ ಊಟ ಕೊಂಡೊಯ್ಯುತ್ತಿದ್ದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇರಳಕಟ್ಟೆ ಮೀಡಿಯಾ ಮಾರ್ಕ್ ಕಚೇರಿ ಎದುರುಗಡೆ ಸಂಭವಿಸಿದೆ. ಅಂಬ್ಲಮೊಗರು ಖಂಡಿಲ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಮಹಮ್ಮದ್ ಸಂಶೀರ್ (21) ಮೃತ ಯುವಕ. ಬೈಕಿನಲ್ಲಿ ದೇರಳಕಟ್ಟೆಯಿಂದ ನಾಟೆಕಲ್ ಕಣಚೂರು ಆಸ್ಪತ್ರೆಗೆ ಊಟ ಕೊಂಡೊಯ್ಯುವ ದಾರಿಮಧ್ಯೆ ಎದುರಿನಿಂದ ಬರುತ್ತಿದ್ದ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಸಂಶೀರ್ ತೀವ್ರ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ದೇರಳಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಂಶೀರ್ ಅವಿವಾಹಿತರು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN NETWORKS ತೊಕ್ಕೊಟ್ಟು : ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಹಾಗು ಇಹ್ಸಾನ್ ಕರ್ನಾಟಕ ಸದಸ್ಯ ಅಲ್ತಾಪ್ ಕುಂಪಲ ರವರ ಅಧ್ಯಕ್ಷತೆಯಲ್ಲಿ ಹಾಪಿಲ್ ಅಬ್ದುಲ್ ಮಜೀದ್ ಗಾಣೆಮಾರ್ ರವರು ವಾದೀ ರೈಹಾನ್ ನಲ್ಲಿ ಬಡ ಕುಟುಂಬದ ಮದುವೆಗೆ 50,000 ರೂಪಾಯಿಯ ಚೆಕ್ ವಿತರಿಸಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲ್ ತಂಙಲ್ ದುಆ ನೆರವೇರಿಸಿದರು. ಈ ಸಂದರ್ಭ ಉಳ್ಳಾಲ ಡಿವಿಷನ್ ಸದಸ್ಯ ಸಯ್ಯದ್ ಖುಬೈಬ್ ತಂಙಲ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಖಜಾಂಚಿ ಶರೀಪ್ ಮುಡಿಪು ಉಪಾಧ್ಯಕ್ಷೆ ತೌಸೀಪ್ ಹರೇಕಳ ಉಪಾಧ್ಯಕ್ಷ ಇಬ್ರಾಹಿಂ ಅಹ್ಸನಿ ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟ ಅಧ್ಯಕ್ಷ ಸಿಹಾಬುದ್ದೀನ್ ಸಖಾಪಿ ಉಪಸ್ತಿತಿ ಇದ್ದರು

Read More

UN NETWORKS ಉಳ್ಳಾಲ: ಅಲ್ಲಿ ವಿದ್ಯಾರ್ಥಿಗಳಿಗೆ ಹಾಡುವ ಅವಕಾಶವಿತ್ತು. ದೃಶ್ಯ ಮಾಧ್ಯಮಗಳಲ್ಲಿ ನಡೆಯುವ ರಿಯಾಲಿಟಿ ಷೋ ನಂತೆ ನಡೆದ ಕಾರ್ಯಕ್ರಮದಲ್ಲಿ, ಪ್ರತಿಭೆಯಿದ್ದು ಲಾಭಿಯಿಲ್ಲದ ವೇದಿಕೆಯನ್ನು ಕಡ್ಡಾಯವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಂಘಟಕರು ಕಲ್ಪಿಸಿದ್ದರು. ಅವಕಾಶ ವಂಚಿತ, ಆರ್ಥಿಕವಾಗಿ ಹಿಂದುಳಿದ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಕೊಲ್ಯ ದ್ವಾರಕಾನಗರದ ಸಾಮಗಾನ ಸಾಂಸ್ಕೃತಿಕ ಕಲಾಕೇಂದ್ರ ವತಿಯಿಂದ ಶ್ರೀ ಕೃಷ್ಣ ಭಜನಾ ಮಂದಿರ ಆಶ್ರಯದಲ್ಲಿ ದ್ವಾರಕಾನಗರದಲ್ಲಿ ಗುರುವಾರ ನಡೆದ ವಿಭಿನ್ನ ರೀತಿಯ ಹಾಡುವ ಸ್ಪರ್ಧೆಗೆ ರಿಯಾಲಿಟಿ ಷೋ ನ ಮೆರುಗು ನೀಡಲಾಯಿತು. ಒಂದು ವಾರದಿಂದ ನಡೆದ ಸ್ಪರ್ಧಾಳುಗಳ ಆಯ್ಕೆಗೆ ಸಾಮಗಾನ ಕಲಾಕೇಂದ್ರದ ಮುಖ್ಯಸ್ಥ ಹಾಗೂ ಗೋರಿಗುಡ್ಡೆ ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಪ್ರಾಂಶುಪಾಲ ವಿಠಲ್ ಅಬೂರ ಅವರ ಮನೆಯಲ್ಲಿ ಆಡಿಷನ್ ನಡೆದಿತ್ತು. 35 ಮಂದಿ ಮೂರು ಬಾರಿ ನಡೆದ ಆಡಿಷನ್ನಿನಲ್ಲಿ ತೀರ್ಪುಗಾರರ ತೀರ್ಪಿನಂತೆ ಕೊನೆಯ ಸುತ್ತಿಗೆ ಏಳು ಮಂದಿ ಪ್ರತಿಭೆಗಳನ್ನು ಆಯ್ಕೆ ನಡೆಸಿದ್ದರು. ಆಯ್ಕೆಯಾದ ಏಳು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ…

Read More

UN NETWORKS ತಲಪಾಡಿ: ತಲಪಾಡಿ ಗ್ರಾಮದ ಅಲಂಕಾರಗುಡ್ಡೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಸ್ಥಾನದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸತ್ಕರ್ಮ ಫೆ. 21ರಿಂದ ಆರಂಭಗೊಂಡಿದ್ದು ಫೆ. 25ರ ತನಕ ನಡೆಯಲಿದ್ದು ಆ ಪ್ರಯುಕ್ತ ಶುಕ್ರವಾರ ಹೊರಟ ಹೊರೆಕಾಣಿಕೆ ಮೆರವಣಿಗೆ ಶೋಭಾಯಾತ್ರೆಗೆ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಚಾಲನೆ ನೀಡಿದರು. ಕೋಟೆಕಾರು ಬೀರಿ ಶ್ರೀ ಗಣೇಶ ಮಂದಿರದ ಬಳಿಯಿಂದ ಆರಂಭಗೊಂಡ ಹಸಿರುಹೊರೆ ಕಾಣಿಕೆ ಮೆರವಣಿಗೆ ಬೀರಿ-ಕೆ.ಸಿ. ರೋಡ್-ಪಿಲಿಕೂರು ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಿತು. ಬಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಸಚ್ಚಿದಾನಂದ ಶೆಟ್ಟಿ ಹೊಸಮನೆ, ಜೀರ್ಣೋದ್ಧಾರ ಸಮಿತಿಯ…

Read More