ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಪತಂಜಲಿಯ ಅಲೊ ವೀರಾ ಕಾಂತಿ ಸಾಬೂನಿನಲ್ಲಿ ರಬ್ಬರ್ ತುಂಡೊಂದು ಪತ್ತೆಯಾಗಿದೆ. ಸಮಾಜಸೇವಕ ಚಂದ್ರಹಾಸ್ ಮಾಡೂರು ಅವರು ಉಡುಪಿಯಿಂದ ಏಜೆಂಟರೋರ್ವರ ಮುಖೇನ ತರಿಸಿದ ಸಾಬೂನಿನಲ್ಲಿ ರಬ್ಬರ್ ತುಂಡು ಪತ್ತೆಯಾಗಿದೆ. ಈ ಬಗ್ಗೆ ಪತಂಜಲಿ ಕಂಪೆನಿಗೆ ಸಂಬಂಧಿಸಿದ ಮಂಗಳೂರಿನ ಅಧಿಕೃತರುಗಳಲ್ಲಿ ವಿಚಾರಿಸಿದಾಗ ಉಡಾಫೆಯಿಂದ ವರ್ತಿಸಿದ್ದಾರೆ. ಇದು ಕಂಪೆನಿಯಿಂದ ಆಗಿರುವ ತಪ್ಪು. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ಅನ್ನುವ ರೀತಿಯಲ್ಲಿ ಪ್ರಚಾರ ಮಾಡಿಕೊಂಡು, ಜನರನ್ನು ಮೋಸದ ದಾರಿಗೆ ಎಳೆದು ಕಂಪೆನಿಯನ್ನು ಬೆಳೆಸುತ್ತಿದ್ದಾರೆ. ಇದರ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಚಂದ್ರಹಾಸ್ ಮಾಡೂರು ತಿಳಿಸಿದ್ದಾರೆ.
Author: UllalaVani
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಉಳ್ಳಾಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿದ್ದು, ಮೊಗವೀರಪಟ್ನ,ಕೈಕೋ, ಸುಭಾಷನಗರ , ಸೋಮೇಶ್ವರ, ಉಚ್ಚಿಲ ಭಾಗದಲ್ಲಿರುವ ಸುಮಾರು 50 ಮನೆಗಳಿಗೆ ಅಲೆಗಳು ಬಡಿಯಲು ಆರಂಭಿಸಿದೆ. ಕೆಲ ದಿನಗಳಿಂದ ಶಾಂತಗೊಂಡಿದ್ದ ಸಮುದ್ರ ತೀರ ಕಳೆದೆರಡು ದಿನಗಳಿಂದ ಬೀಸಿದ ಗಾಳಿಯಿಂದಾಗಿ ಅಬ್ಬರ ಹೆಚ್ಚಾಗಿದೆ. ಪರಿಣಾಮ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಲು ಆರಂಭವಾಗಿದೆ. ಸುಭಾಷನಗರ ಮತ್ತು ಕೈಕೋ ಭಾಗದಲ್ಲಿನ ಜನ ಸ್ಥಳಾಂತರಗೊಂಡು ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ. ಮೊಗವೀರಪಟ್ನ ಸಮೀಪ ಶಾಶ್ವತ ತಡೆಗೋಡೆ ಕಾಮಗಾರಿ ಭಾಗಶ: ಪೂರ್ಣಗೊಂಡಿದ್ದರೂ ಅಲೆಗಳು ಕಡಿಮೆಯಾಗದಿರುವುದು ಸ್ಥಳೀಯರಲ್ಲಿ ಕುತೂಹಲ ಕೆರಳಿಸಿದೆ. ಭಾಗಶ: ಮುಳುಗಡೆಯಾಗಿ ಕಲ್ಲುಗಳೆಡೆಯಲ್ಲಿ ಸಿಲುಕಿರುವ ಬಾರ್ಜ್ನ ಕ್ರೇನ್ ಹೊರತುಪಡಿಸಿ , ಉಳಿದ ಭಾಗಗಳಿಂದ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಸ್ಥಳಕ್ಕೆ ಸಚಿವರ ಭೇಟಿ: ಕಡಲ್ಕೊರೆತ ಬಾಧಿತ ಪ್ರದೇಶಗಳಿಗೆ ಸಚಿವ ಖಾದರ್ ತಮ್ಮ ಮೂರನೇ ಭೇಟಿಯನ್ನು ಸೋಮವಾರ ನಡೆಸಿದರು. ಈ ವೇಳೆ ಮೊಗವೀರಪಟ್ನದಿಂದ ಉಚ್ಚಿಲವರೆಗೂ ಅಲೆಗಳು ಹೆಚ್ಚಿರುವ ಪ್ರದೇಶಕ್ಕೆ ಶೀಘ್ರವೇ ಕಲ್ಲುಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮುಡಿಪು: ಈದ್ ಹಬ್ಬದ ಚಂದ್ರದರ್ಶನ ಆದ ಬಗ್ಗೆ ಖಾಝಿಗಳ ನಿರ್ಧಾರದಲ್ಲಿ ಭಿನ್ನ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ರವರು ಸೋಮವಾರ ಹಬ್ಬ ಆಚರಿಸುವಂತೆ ನಿರ್ದೇಶನದ ಮೇರೆಗೆ ಮುಡಿಪು ಸಂಯುಕ್ತ ಜಮಾಅತ್ಗೊಳಪಟ್ಟ ಸಾಂಬಾರ್ತೋಟ ಮಸೀದಿಯಲ್ಲಿ ಸೋಮವಾರ ಈದ್ ಹಬ್ಬ ಆಚರಿಸಲಾಯಿತು. ಸಾಂಬಾರ್ತೋಟ ಮಸೀದಿ ಖತೀಬ್ ಪಿ.ಕೆ. ಮಹಮ್ಮದ್ ಮದನಿ ಖುತುಬಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,ಶಾಂತಿ, ಸೌಹಾರ್ದತೆಯ ನೆಲೆಬೀಡು ನಮ್ಮದಾಗಿದ್ದು, ಎಲ್ಲರೂ ಒಗ್ಗಟ್ಟಿನಿದ್ದುಕೊಂಡು ಸಡಗರದಿಂದ ಹಬ್ಬ ಆಚರಿಸಬೇಕೆಂದು ಕರೆ ನೀಡಿದರು. ಜಮಾಅತ್ ಸಮಿತಿ ಅಧ್ಯಕ್ಷ ಎಸ್ .ಕೆ.ಖಾದರ್ ಹಾಜಿ, ಸದಸ್ಯರಾದ ಇಬ್ರಾಹಿಂ ಸಾಂಬಾರ್ ತೋಟ, ಹಸನ್ ಹಾಜಿ ಸಾಂಬಾರ್ ತೋಟ ಸೇರಿದಂತೆ ಜಮಾಅತ್ ಸದಸ್ಯರು ಸಂಭ್ರಮದಿಂದ ಈದ್ ಆಚರಣೆ ಮಾಡಿದರು. ಮುಡಿಪು ಸಂಯುಕ್ತ ಜಮಾಅತ್ಗೊಳಪಟ್ಟ ತೋಟಾಲ್, ಪಡಿಕಲ್, ಮುದುಂಗಾರುಕಟ್ಟೆ, ಮದ್ದಡ್ಕ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ಸೋಮವಾರ ಸಂಭ್ರಮದಿಂಧ ಈದ್ ಆಚರಣೆ ನಡೆದಿದೆ.ಯಾವುದೇ ಅಹಿತಕರ ಘಟನೆ ಮುಡಿಪುವಿನಲ್ಲಿ ನಡೆದಿಲ್ಲ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮಂಗಳೂರು: “ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿಧ್ಯಾರ್ಥಿಗಳ ಕಲಿಕೆಯ ಒತ್ತಡ ನಿರ್ವಹಣೆಯಲ್ಲಿ ಚಿತ್ರಕಲೆ ಪ್ರಧಾನ ಪಾತ್ರವಹಿಸುತ್ತದೆ. ಚಿತ್ರಕಲಾ ಶಿಕ್ಷಣವು ವಿಧ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಹಾಗೂ ಚಿತ್ರಕಲಾ ಶಿಕ್ಷಕರು ಪಾಠ ಪ್ರವಚನಗಳಿಗೆ ಸೀಮಿತವಾಗದೆ ಶಿಕ್ಷಣ ಸಂಸ್ಥೆಗಳ, ಶಿಕ್ಷಣ ಸಂಬಂಧಿ ಕಛೇರಿಗಳ ಸೌಂಧರೀಕರಣದ ಜಾಗೃತಿಯಲ್ಲೂ ತೊಡಗಿಸಿಕೊಂಡಿದ್ದಾರೆ.”ಎಂದು ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಆಯೋಜಿಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪ ನಿರ್ದೇಶಕರಾದ ವಾಲ್ಟರ್ ಎಚ್.ಡಿ ಮೆಲ್ಲೋ ಮಾತನಾಡಿದರು. ಕೆನರಾ ಫ್ರೌಡಶಾಲೆ ಉರ್ವ ಇಲ್ಲಿ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ಅವಧಿಯಲ್ಲಿ ನಡೆದ ಹತ್ತನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಜಿಲ್ಲೆಯನ್ನು ಎರಡನೇ ಸ್ಥಾನಕ್ಕೆ ಏರಿಸಲು ಸಫಲರಾದ ವಾಲ್ಟರ್ ಎಚ್.ಡಿ ಮೆಲ್ಲೋ ಅವರ ಸಾಧನೆಯನ್ನು ಪರಿಗಣಿಸಿ ಸಂಘದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಸಂಘದ ಜಿಲ್ಲಾಧ್ಯಕ್ಷರಾದ ಮಹಾಬಲ ಕುಳ ಮಾತನಾಡಿ “ಜಿಲ್ಲಾ ಸಂಘವು ನಿಂತ ನೀರಾಗದೆ-ಸದಾ ಹೊಸ ಯೋಜನೆ-ಯೋಚನೆಗಳೊಂದಿಗೆ ಸಾಗುತ್ತಾ ಇದೆ. ಜಿಲ್ಲೆಯ ಎಲ್ಲಾ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಉಳ್ಳಾಲದಲ್ಲಿ ರಂಝಾನ್ ಆಚರಣೆಯ ದಿನದ ವಿವಾದಕ್ಕೆ ಸಂಬಂಧಿಸಿ ಸೋಮವಾರ ಸೈಯ್ಯಿದ್ ಮದನಿ ದರ್ಗಾ ದಲ್ಲಿ ಮತ್ತೆ ಈದ್ ನಮಾಜಿಗೆ ಆಡಳಿತ ಮಂಡಳಿ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ತಂಡವೊಂದು ಆಡಳಿತ ಸಮಿತಿ ಸದಸ್ಯ ಸೇರಿದಂತೆ ದರ್ಶನಕ್ಕೆ ಬಂದಿದ್ದ ಯುವಕನ ಮೇಲೆ ಹಲ್ಲೆಗೈದಿರುವ ಘಟನೆ ನಡೆದಿದ್ದು, ಗಲಾಟೆಯನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ ಹಾಗೂ ಒಂದು ಅಕ್ರಮ ಪ್ರವೇಶ ಸೊತ್ತುಗಳಿಗೆ ಹಾನಿ ಕುರಿತು ಪ್ರಕರಣ ದಾಖಲಾಗಿದೆ. \ ಭಟ್ಕಳದಲ್ಲಿ ಚಂದ್ರದರ್ಶನ ಆದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಂಗಳೂರು ಖಾಝಿ ಹಾಗೂ ಉಳ್ಳಾಲದ ಸಹಾಯಕ ಖಾಝಿವರ ನಿರ್ಣಯದಂತೆ ಭಾನುವಾರದಂದು ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಲಾಗಿತ್ತು. ಆದರೆ ಉಳ್ಳಾಲದ ಖಾಝಿ ಕೂರತ್ ತಂಙಳ್ ಅವರ ಸಂದೇಶದಂತೆ ಭಾನುವಾರ ಉಪವಾಸ ಕೈಗೊಂಡು (ಸೋಮವಾರ) ಇಂದು ಈದ್ ಉಲ್ ಫಿತರ್ ಆಚರಿಸಬೇಕಿತ್ತು. ಆದ್ದರಿಂದ ಉಳ್ಳಾಲದ 34 ಮಸೀದಿಗಳ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕೊಣಾಜೆ :ಮಾನವ ಸಮುದಾಯಕ್ಕೆ ಶಾಂತಿಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವು ಕೊಣಾಜೆ ಮಸ್ಜಿದುಸ್ಸಲಾಂ ನಲ್ಲಿ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು. ಈದ್ ಖುತುಬವನ್ನು ಶಿಹಾಬ್ ಸ್ವಲಾಹಿ ಕಣ್ಣೂರುರವರು ನಿರ್ವಹಿಸಿದರು. ರಮಝಾನ್ ತಿಂಗಳ ಉಪವಾಸ ಮತ್ತು ಇತರ ಕರ್ಮಗಳನ್ನು ಅನರ್ಹಗೊಳಿಸುವ ದರೋಡೆ,ಕಳ್ಳತನ, ಸಮಾಜದ್ರೋಹಿ ಕೆಲಸಗಳಿಂದ ದೂರವಿರಲು ಕರೆನೀಡಿದರು.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ:ಶೈಖುನಾ ಬೇಕಲ್ ಉಸ್ತಾದ್ ಅವರು ಭಾನುವಾರ ತಮ್ಮ ಹುಟ್ಟೂರು ಮರಿಕ್ಕಳ ಜುಮ್ಮಾ ಮಸ್ಜಿದ್ನಲ್ಲಿ ಈದ್ ನಮಾಝ್ಗೆ ನೇತೃತ್ವ ನೀಡಿ ಖುತ್ಬಾ ಪ್ರವಚನ ನಡೆಸಿದರು. ಪ್ರತಿಯೊಬ್ಬರೂ ಶಾಂತಿ ಸೌಹಾರ್ದತೆಯೊಂದಿಗೆ ಬಾಳಲು ಪ್ರಯತ್ನಿಸಬೇಕೆಂದು ಕರೆ ನೀಡಿದ ಅವರು ಯುವಕರು ಸಮಾಜಮುಖಿ ಹೆಚ್ಚೆಚ್ಚು ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ಸೇವಾ ಟ್ರಸ್ಟ್ , ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸಮರ್ಥ ಭಾರತ ಸಂಸ್ಥೆಯು ಕರ್ನಾಟಕ ರಾಜ್ಯದ್ಯಾಂತ ಕೋಟಿ ವೃಕ್ಷಾರೋಪಣದ ಕಾರ್ಯಕ್ರಮದ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮ ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು. ದೇವಸ್ಥಾನದ ಹಿರಿಯ ಸದಸ್ಯ ಮಾರಪ್ಪ ಪೂಜಾರಿ, ದಕ್ಷಿಣ ಭಾರತ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ವಿಶ್ವಹಿಂದೂ ಪರಿಷತ್ನ ಮುಖಂಡ ಗಟ್ಟಿ, ವೇದಾ ಪವಿತ್ರ ಗಟ್ಟಿ, ಸುನಿತಾ, ಸುರೇಶ್ ಆಚಾರ್ಯ, ರಾಜೇಶ್ ಮುಂಡೋಳಿ, ಪದ್ಮನಾಭ ಮರ್ಕೆದು, ರವಿ ಕುಕ್ಕುದಕಟ್ಟೆ, ರವೀಂದ್ರ ಕೊಟ್ಟಾರಿ ದೇವಸ್ಥಾನದ ಸೇವಾ ಟ್ರಸ್ಟ್ನ ಅಧ್ಯಕ್ಷ ಯಾದವ ಗಟ್ಟಿ ಮುಂಡೋಳಿ, ಪ್ರ. ಕಾರ್ಯದರ್ಶಿ,ವಾಸು ಪೂಜಾರಿ ಕುತ್ತಾರು, ಉಪಾಧ್ಯಕ್ಷ ರಮೇಶ್ ಪದ್ಮಸಾಲಿ , ಕೋಶಾ„ಕಾರಿ ಪುಷ್ಪರಾಜ್, ಸಂಗಟನಾ ಕಾರ್ಯದರ್ಶಿ ಜೆ.ಕೆ. ರೈ, ಕಾರ್ಯದರ್ಶಿ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕುತ್ತಾರು : ಸೇವೆ ಎನ್ನುವುದು ಅತ್ಯಂತ ಶ್ರೇಷ್ಠವಾಗಿದ್ದು, ಮೌಲ್ಯಾಧಾರಿತ ಮತ್ತು ಅಂತರ್ಗತವಾಗಿ ಬರುವಂತಹುದು ಇದು ನಿರಂತರವಾಗುವುದರೊಂದಿಗೆ ಬದ್ಧತೆಯೂ ಅಗತ್ಯ ಈ ನಿಟ್ಟಿನಲ್ಲಿ ಬಾಲಸಂರಕ್ಷಣಾ ಕೇಂದ್ರ ಕಳೆದ 37 ವರ್ಷಗಳಲ್ಲಿ ನಡೆಸುತ್ತಿರುವ ಸೇವೆ ನಿಜವಾದ ಸೇವೆಯಾಗಿದ್ದು, ಎಲ್ಲಾ ಸಂಸ್ಥೆಗಳಿಗೆ ಮಾದರಿ ಎಂದು ದ.ಕ. ಜಿಲ್ಲಾ ಪಂಚಾಯತ್ ಕಾಯೃನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ಮಂಗಳಾ ಸೇವಾ ಟ್ರಸ್ಟ್ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದ ಬಳಿಕ `ಸೇವೆ ಸುಂದರ ಬದುಕಿನ ಅವಿಭಾಜ್ಯ ಅಂಗ’ ಈ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರೂ ಕಲಿಯಲು ಅಸಾಧ್ಯವಾದುದದನ್ನು ಸಮಾಜದಿಂದ ಕಲಿಯಲು ಸಾಧ್ಯ. ನಾವು ಸಮಾಜದೊಂದಿಗೆ ಸೇರಿಕೊಂಡಾಗ ನಮ್ಮ ಕರ್ತವ್ಯದೊಂದಿಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕಾರ್ಯ ಆಗಬೇಕು. ಇಂತಹ ಕಾರ್ಯ ಶುದ್ಧವಾದ ಮನಸ್ಸು ಇದ್ದಾಗ ಮಾತ್ರ ಸಾಧ್ಯವಿದ್ದು, ಅಂತರ್ಗತ ಪ್ರೇರಣೆಯಾಗಬೇಕು ಹೊರತು ಕೇವಲ ಪ್ರಚಾರಕ್ಕಾಗಿ, ಉದ್ಯೋಗದ ದೃಷ್ಠಿಯಲ್ಲಿ ನಡೆದರೆ ಅದು ಶಾಶ್ವತವಾಗಿರುವುದಿಲ್ಲ ಎಂದ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ದೇರಳಕಟ್ಟೆ: ಬೈಕ್ ಮತ್ತು ಕಾರು ಪರಸ್ಪರ ಡಿಕ್ಕಿಯಾದ ಘಟನೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮುಂಭಾಗದಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯವಾಗಿದ್ದು, ಕಾರು ಮತ್ತು ಬೈಕ್ಗೆ ಹಾನಿಯಾಗಿದೆ.

