UN NETWORKS ಮಂಗಳೂರು: ದಕ್ಷಿಣ ಭಾರತ ಮಟ್ಟದಲ್ಲಿ ನಡೆಯುವ ಅತಿ ದೊಡ್ಡ ಸ್ಪರ್ಧೆಯಾಗಿರುವ , ಮಂಗಳೂರಿನ ಆರ್ಟ್ ಬ್ಯಾಟಲ್ ಸಂಸ್ಥೆಯ ಮಿಸ್ಟರ್ ಆ್ಯಂಡ್ ಮಿಸ್ ಗ್ರೌಂಡ್ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಹಾಸನದ ಸ್ನೇಹ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾ ಆಗಿ ಬೆಂಗಳೂರಿನ ಕೌಶಲ್ ಚೌಧರಿ ವಿಜೇತರಾಗಿದ್ದಾರೆ. ಜೆಪ್ಪಿನಮೊಗರು ರಿವರ್ ಡೇಲ್ ನಲ್ಲಿ ಇತ್ತೀಚೆಗೆ ನಡೆದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಬೆಂಗಳೂರು, ತೆಲಂಗಾಣ, ಆಂಧ್ರ, ಗೋವಾ ಕೇರಳ ಹಾಗೂ ತಮಿಳುನಾಡಿನಿಂದ ಭಾಗವಹಿಸಿದ್ದ ಸ್ಪರ್ಧಿಗಳಲ್ಲಿ ಇವರು ಆಯ್ಕೆಯಾಗಿದ್ದಾರೆ. ಉಳಿದಂತೆ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಮಂಗಳೂರಿನ ಬಿಂದು ಶೆಟ್ಟಿ, ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ಆಶಿಕಾ, ಮೂರನೇ ರನ್ನರ್ ಅಪ್ ಆಗಿ ಹುಬ್ಬಳ್ಳಿಯ ಅಕ್ಷತಾ ಹಾಗೂ ಮಿಸ್ಟರ್ ಗ್ರಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಬೆಂಗಳೂರಿನ ಸ್ಟೀಫನ್ ಮತ್ತು ಚಂದ್ರು, ಬೆಂಗಳೂರಿನ ಕಾರ್ತಿಕ್…
Author: UllalaVani
UN NETWORKS ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಯೋಜಿಸುವ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ( ಗೂಡುದೀಪ ಸ್ಪರ್ಧೆ ) ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅ.21 ಮತ್ತು ಅ.22 ರಂದು ತೊಕ್ಕೊಟ್ಟು ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ ಎಂದು ಭಗತ್ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಅ. 21 ಶನಿವಾರ ಸಂಜೆ ಸಭಾ ಕಾರ್ಯಕ್ರಮ ಬಳಿಕ 6.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಟಾಪ್ ಸಿಂಪೋನಿ ತಂಡದಿಂದ `ನೃತ್ಯ ವೈಭವ’ ಕಾರ್ಯಕ್ರಮ, ಉದ್ಘಾಟನಾ ಸಮಾರಂಭವನ್ನು ಶೃಂಗೇರಿ ಶಾಖಾ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ನೆರವೇರಿಸಲಿದ್ದಾರೆ. ಶ್ರೀ ಭಗವತಿ ಕ್ಷೇತ್ರ ಉಳ್ಳಾಲ ಇದರ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್ ಹಾಗೂ ಗೌರವ ಉಪಸ್ಥಿತಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದು, 9 ಗಂಟೆಗೆ ಖುಷಿ ಮೆಲೋಡೀಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ…
UN NETWORKS ಉಳ್ಳಾಲ: ಜಗತ್ತಿನ ಮೂಲೆ ಮೂಲೆಗೂ ಸುನ್ನತ್ ಜಮಾತಿನ ಆಶಯ ಮುಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಹತ್ತಿರವಾಗುವ ರೀತಿಯಲ್ಲಿ ಅಲ್ಲಲ್ಲಿ ಮದರಸಗಳ ನಿರ್ಮಿಸಿ ಧಾರ್ಮಿಕ ವಿದ್ಯೆ ಜೊತೆಗೆ ಲೌಕಿಕ ವಿದ್ಯೆಯನ್ನು ನೀಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ಗ್ರಾಮದ ಹೊಸನಗರದಲ್ಲಿ ಎಸ್ವೈಎಸ್ ಕೆ.ಸಿ ರೋಡು ಸೆಂಟರ್ ಅಧೀನದ ತಾಜುಲ್ ಉಲಮಾ ಎಜ್ಯುಕೇಶನ್ ಸೆಂಟರ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮದರಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿರು. ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಪಡೆದಾಗ ಮಾತ್ರ ಸಂಪೂರ್ಣ ಮನುಷ್ಯನಾಗಲು ಸಾಧ್ಯ . ಈ ನಿಟ್ಟಿನಲ್ಲಿ ಮಕ್ಕಳಲ್ಲೇ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊತ್ತು ಮದರಸಗಳು ಕಾರ್ಯಾಚರಿಸುತ್ತಿವೆ ಎಂದರು. ರಾಜ್ಯ ಅಹಾರ ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರಾಜ್ಯ ಸರಕಾರ ಧಾರ್ಮಿಕ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ನೀಡುತ್ತಾ ಬಂದಿದೆ. ಮುಂದೆ ಸಂಸ್ಥೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು…
UN NETWORKS ತಲಪಾಡಿ: ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ವತಿಯಿಂದ ಆಯೋಜಿಸಲಾದ ಡ್ರಗ್ ಫ್ರೀ ಇಂಡಿಯಾ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್.ಉಮ್ಮರಬ್ಬ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಾದಕ ಪದಾರ್ಥವು ಮಾನವೀಯತೆಯನ್ನಿ ನಶಿಸಿ ಕ್ರೂರತೆಯನ್ನು ಪ್ರದರ್ಶಿಸುವ ಸಾಧನವಾಗಿದೆ.ಸರ್ವ ಧರ್ಮದವರೂ ಜೊತೆಗೂಡಿ ಮಾದಕ ಪದಾರ್ಥಕಗಳ ಬಗ್ಗೆ ಎಚ್ಚೆತ್ತು ಸಾರ್ವಜನಿಕರಿಗೆ ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಡ್ರಗ್ಸ್ ಮುಕ್ತ ಭಾರತ ಬೈಕ್ ರ್ಯಾಲಿಯು ಕಿನ್ಯದಲ್ಲಿ ಪ್ರಾರಂಭಗೋಡು ಪಂಜಳ,ಪಿಲಿಕೂರು,ಕೆ.ಸಿ.ನಗರ,ಕೆ.ಸಿ.ರೋಡ್ ಮಾರ್ಗವಾಗಿ ತಲಪಾಡಿಯಲ್ಲಿ ಸಮಾರೋಪಗೊಂಡಿತು. ಸುನ್ನಿ ಜಮೀಯತುಲ್ ಉಲಮಾ ಮಂಗಳೂರು ವಲಯದ ಅಧ್ಯಕ್ಷರಾದ ಬಶೀರ್ ಮದನಿ ಕೂಳೂರು ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರು ಜಾಗ್ರತೆವಹಿಸಬೇಕು ಎಂದು ತಿಳಿಸಿದರು. ಎಸ್.ವೈ.ಎಸ್.ಕೆ.ಸಿ.ರೋಡ್ ಸೆಂಟ್ರಲ್ ಉಪಾಧ್ಯಕ್ಷ ಸಿರಾಜುದ್ಧೀನ್,ಎಸ್.ಎಸ್.ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹೀಂ ಝುಹರಿ, ಕೋಶಾಧಿಕಾರಿ ಅಲ್ತಾಫ್ ಕೆ.ಸಿ.ರೋಡ್, ಸದಸ್ಯರಾದ ಹಕೀಂ, ಇಬ್ರಾಹಿಂ ಕೆ.ಸಿ.ರೋಡ್, ಮುಸ್ತಫ ಕೆ.ಸಿ.ನಗರ, ಜಾಫರ್ ಪಿಲಿಕೂರು, ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್ ಕೋಶಾಧಿಕಾರಿ ಅಬ್ದುಲ್ ಹಮೀದ್,ತಲಪಾಡಿ ಂಚಾಯತ್…
UN NETWORKS ಉಳ್ಳಾಲ: ಪಿ.ಮೊಹಮ್ಮದ್ (58)ಉಳಾಯಿಬೆಟ್ಟು ನಿವಾಸಿ ಇಂದು ನಿಧನರಾದರು. ಇವರು ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಮತ್ತು ಉಳಾಯಿಬೆಟ್ಟು ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಹೆಂಡತಿ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಅಗಲಿದ್ದಾರೆ.
UN NETWORKS ಕಿನ್ಯಾ: ಕಿನ್ಯಾ ಮತ್ತು ಬೋಳಿಯಾರುಗೆ ಸರಕಾರಿ ಬಸ್ ಸಂಚಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದನ್ನು ವಿರೋಧಿಸಿ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ನಾಗರಿಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಒಂದು ತಿಂಗಳ ಹಿಂದೆ ಸರಕಾರ ಗ್ರಾಮೀಣ ಪ್ರದೇಶ ವಾದ ಕಿನ್ಯಾ ಗ್ರಾಮಕ್ಕೆ ಎರಡು ಬಸ್ ನೀಡಿದ್ದು ಸಾರ್ವಜನಿಕ ರಿಗ ಸಂಚಾರ ನಡೆಸಲು ಸುಲಭವಾಗುತ್ತಿತು. ಇಂದು ಹೈಕೋರ್ಟ್ ತಡೆಯುವ ಮೂಲಕ ಸಂಕಷ್ಟ ಉಂಟಾಗಿದೆ. ಖಾಸಗಿ ಬಸ್ ಗಳು ಬೇಕಾಬಿಟ್ಟಿ ಸಂಚಾರ ನಡೆಸುತ್ತಿದ್ದು ಸರಕಾರ ಮತ್ತೆ ಸರಕಾರಿ ಬಸ್ ನೀಡುವಂತೆ ಪ್ರತಿಭಟನೆ ಗಾರರು ಆಗ್ರಹಿಸಿದರು. ಪ್ರತಿಭಟನೆ ಯಲ್ಲಿ ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಸದಸ್ಯರಾದ ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಡಿವೈಎಫ್ಐ ಹಂಝ ಕಿನ್ಯಾ ಮುಂತಾದವರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ವಿನಲ್ಲಿ ಕಳೆದ 15 ವರ್ಷಗಳಿಂದ ಆಯುರ್ವೇದ ಔಷಧಿ ಅಂಗಡಿ ನಡೆಸುತ್ತಿದ್ದ ವಿಟ್ಲ ಕಾಡುಮಠ ನಿವಾಸಿ ರಾಜಶೇಖರ್ (35) ಮನೆ ಸಮೀಪ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ. ವಿಟ್ಲ ಕಾಡುಮಠದ ರಾಜಶೇಖರ್ ಮನೆ ಸಮೀಪ ಕೋಳಿಫಾರಂ ನಡೆಸುತ್ತಿದ್ದು, ನಿನ್ನೆ ಸಂಜೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಫಾರಂ ಗೆ ಹಾಕಲಾದ ವಿದ್ಯುತ್ ದೀಪದ ವೈರಿನಲ್ಲಿ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ ಪತ್ನಿ ಹಾಗೂ ಎಳೆಯ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗೆ ತೊಕ್ಕೊಟ್ಟು ಜೆ.ಜೆ ಕಾಂಪ್ಲೆಕ್ಸ್ ನಲ್ಲಿ ದ್ದ ಔಷಧ ಅಂಗಡಿ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಕೆಡವಲಾಗಿತ್ತು. ಇದೀಗ ನವೀಕೃತ ಗೊಂಡ ಕಟ್ಟಡದಲ್ಲಿ ಮತ್ತೆ ಔಷಧಿ ಅಂಗಡಿಯನ್ನು ತೆರೆಯುವ ವರಿದ್ದರು.
UN NETWORKS ಹರೇಕಳ : ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಸೌಂದರ್ಯ ಇವರು ಜಿಲ್ಲಾ ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ. ಇವಳು ಕೃಷ್ಣಪ್ಪ ಪೂಜಾರಿ ಮತ್ತು ಜಯಂತಿಯವರ ಪುತ್ರಿಯಾಗಿರುತ್ತಾಳೆ.
UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿಜೇತ ಶೆಟ್ಟಿ ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ರಾಜೇಶ್ ಶೆಟ್ಟಿ ಮತ್ತು ಸುನೀತ ಇವರ ಪುತ್ರಿಯಾಗಿರುತ್ತಾಳೆ.
UN NETWORKS ಪುತ್ತೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ನಡೆದ “ಎಸ್ಸೆಸ್ಸೆಫ್ ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್” ನ ಸಮಾರೋಪ ಸಮಾರಂಭವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ರವರ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್ ಮಿತ್ತೂರಿನಲ್ಲಿ ನಡೆಯಿತು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶನಿವಾರ ಸಂಜೆ 6.00ಗಂಟೆಯಿಂದ ಆದಿತ್ಯವಾರ ಬೆಳಿಗ್ಗೆ 11.00ಗಂಟೆ ತನಕ ನಡೆದ ದ್ವಿದಿನ ಕ್ಯಾಂಪಿನಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ರಫೀಕ್ ಸಖಾಫಿ ಚೆರಿಯಪರಂಬು ಹಾಗೂ ಮುಸ್ತಫ ನಹೀಮಿ ಸಂಘಟನಾ ತರಗತಿಗಳನ್ನು ನಡೆಸಿದರು. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿಗಳು 6 ತಿಂಗಳ ಯೋಜನೆಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಶಾಕಿರ್ ಹಾಜಿ ಮಿತ್ತೂರು, ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಇಹ್ಸಾನ್ ಸಮಿತಿ ಸದಸ್ಯ ಅಲ್ತಾಫ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.

