UN NETWORKS ಮಂಗಳೂರು: ವಿದ್ಯುತ್ ಇಲಾಖೆಯಲ್ಲಿ ಡಿಪ್ಲೊಮಾ ಇಂಜಿನಿಯರ್ಸ್ ಉನ್ನತ ಮಟ್ಟದ ಕೆಲಸ ಮಾಡುತ್ತಿದ್ದರೂ ಕೀಳುಮಟ್ಟದ ಭಾವನೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ, ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಭಡ್ತಿಗಳು ಸಾಕಷ್ಟಿದ್ದರೂ, ಡಿಪ್ಲೊಮಾ ಇಂಜಿನಿಯರ್ ಗಳಿಗೆ ಕೇವಲ ಮೂರೇ ಭಡ್ತಿ ಇರುವುದು ಬಹಳಷ್ಟು ಬೇಸರದ ವಿಚಾರ ಎಂದು ಬೆಂಗಳೂರಿನ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿ.ನ (ಕೆಪಿಟಿಸಿಎಲ್) ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಜೆ.ಲೋಕೇಶ್ ಹೇಳಿದ್ದಾರೆ. ಅವರು ಕೆ.ಪಿ.ಟಿ.ಸಿ.ಎಲ್ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಶನ್ ಇದರ ಮಂಗಳೂರು ವೃತ್ತ ಸಮಿತಿ ವತಿಯಿಂದ ನಡೆದ ಅತ್ತಾವರ ಮೆಸ್ಕಾಂ ನ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಆವರಣದಲ್ಲಿ ಸ್ಥಳೀಯ ಕಚೇರಿ ಉದ್ಘಾಟನೆ ಹಾಗೂ ಮಂಗಳೂರಿನ ಪುರಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮ ಹಾಗೂ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯುತ್ ಕಂಪೆನಿಯ ಹಲವು ಸಂಘ, ಸಂಘಟನೆಗಳಿದ್ದರೂ 30-40 ವರ್ಷಗಳಿಂದ ಡಿಪ್ಲೊಮಾ ಇಂಜಿನಿರ್ಗಳಿಗೆ ಇರುವ ಸಮಸ್ಯೆಗಳ ಬಗೆಹರಿಸಲು ಅಸಾಧ್ಯವಾಗಿದೆ. ಇಡೀ ಜೀವನದಲ್ಲಿ ಬರೀ ಎರಡು ಭಡ್ತಿಯನ್ನು ಪಡೆದುಕೊಂಡು 25 ರಿಂದ 28…
Author: UllalaVani
UN NETWORKS ಮಂಗಳೂರು: ವಿದೇಶದಿಂದ ವಿದಾಯ ಹೇಳಿ ತಾಯ್ನಾಡಿಗೆ ಮರಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್) ದುಬೈ ಅಧ್ಯಕ್ಷ ಮೆಹ್ ಬೂಬ್ ಸಖಾಫಿ ಕಿನ್ಯ ರವರನ್ನು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡೆರೇಶನ್ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಂಬ್ಲಮೊಗರು, ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ, ಪ್ರ.ಕಾರ್ಯದರ್ಶಿ ಜಾಫರ್ ಯು.ಎಸ್ ಅಳೇಕಲ, ಕಿನ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಕಿನ್ಯ, ಉಳ್ಳಾಲ ಡಿವಿಶನ್ ಕಾರ್ಯಕಾರಿ ಸಮಿತಿ ಸದಸ್ಯ ಫಯಾಜ್ ಕಿನ್ಯಉಪಸ್ತಿತಿಯಲ್ಲಿ ಹಾರ್ದಿಕವಾಗಿ ಸ್ವಾಗತಿಸಲಾಯಿತು.
UN NETWORKS ಉಳ್ಳಾಲ: ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ಮತ್ತು ಗೌರವವಿದ್ದು, ಸಹಕಾರಿ ಚಳವಳಿ ಮೂಲಕ ಆರಂಭವಾದ ಕ್ಷೇತ್ರ ಹಿರಿಯರ ಮಾರ್ಗದರ್ಶನದ ಮೂಲಕ ಬೆಳೆದು ನಿಂತು ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿಯನ್ನು ನೀಡುತ್ತಿದೆ ಎಂದು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರು ಹೇಳಿದರು. ಅವರು ಕೋಟೆಕಾರ್ ಬೀರಿಯಲ್ಲಿ ಭಾನುವಾರ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರದಾನ ಕಚೇರಿಯ ನವೀಕೃತ ಕಟ್ಟಡ ಹಾಗೂ ರೈತಸದನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯವನ್ನು ಹೋಲಿಸಿದಾಗ ಜಿಲ್ಲೆಯ ಜನರು ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವವರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ 298 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂ.3 ಲಕ್ಷ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ. ರೂ.10 ಲಕ್ಷ ಸಾಲಕ್ಕೆ ಶೇ. 3 ಬಡ್ಡಿಯಲ್ಲಿ ಸಾಲದ ವ್ಯವಸ್ಥೆಯಿದೆ. ಹೈನುಗಾರಿಕೆ ನಡೆಸುವವರಿಗೆ ಶೇ.2-3 ರವರೆಗೆ ಇದ್ದಂತಹ ಗೌರವಧನವನ್ನು ಶೇ.5 ಕ್ಕೆ ಏರಿಕೆ…
UN NETWORKS ಉಳ್ಳಾಲ: ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಾಂಜಾ ಮಾಫಿಯಾ ವಿರುದ್ಧ ಹೋರಾಡಿದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಯಾಗಿದ್ದು, ಸಾರ್ವಜನಿಕರೆದುರೇ ಬೀದಯಲ್ಲೇ ಹತ್ಯೆ ನಡೆಸಿರುವುದು ಪೊಲೀಸ್ ಇಲಾಖೆ ವಿಫಲತೆಯನ್ನು ತೋರಿಸುತ್ತದೆ ಎಂದು ಡಿ ವೈ ಎಫ್ ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಡಿ ವೈ ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಭಾನುವಾರ ಜುಬೈರ್ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಗಾಂಜಾ ಮಾರಾಟ ಜಾಲದ ವಿರುದ್ಧ ಮುಕ್ಕಚ್ಚೇರಿ ಜಂಕ್ಷನ್ನಿನಿಂದ ಉಳ್ಳಾಲ ನಗರದ ಮೈದಾನದವರೆಗೆ ಹಮ್ಮಿಕೊಂಡ ಪ್ರತಿರೋಧ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲದಲ್ಲಿ ಯುವಜನತೆಯ ಬಾಳನ್ನೇ ಗಾಂಜಾ ಜಾಲ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಡಿದ ಜುಬೈರ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಉದ್ದಟತನದಿಂದ ವರ್ತಿಸುತ್ತಿದ್ದಾರೆ. `ಎಲ್ಲಿದೆ ಗಾಂಜಾ’ ಎಂದು ಪ್ರತಿಭಟನಾಕಾರರಲ್ಲಿ ಪ್ರಶ್ನಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತರು ಇಲಾಖೆಯ ಸುತ್ತಮುತ್ತಲೂ ತಿರುಗಾಡುತ್ತಾ, ಪೊಲೀಸ್ ಅಧಿಕಾರಿಯ ಛೇಂಬರಿನೊಳಗಡೆ ಬಂದು …
UN NETWORKS ಉಳ್ಳಾಲ: ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಬಾಝಿಲ್ ಡಿಸೋಜ ಅವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ನೇಮಕ ಮಾಡಿದ್ದಾರೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದುಕೊಂಡು, ಉಳ್ಳಾಲ ಬ್ಲಾಕ್ ಯುವಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ, ಉಳ್ಳಾಲ ಪುರಸಭೆಗೆ ಎರಡು ಬಾರಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಚೆಂಬುಗುಡ್ಡೆ ವಾರ್ಡಿನಿಂದ ಸ್ಪರ್ಧಿಸಿ ಮೂರು ಬಾರಿ ಸದಸ್ಯರಾಗಿ ಆಯ್ಕೆಗೊಂಡ ಅವರು ಉಳ್ಳಾಲ ಪುರಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಉಳ್ಳಾಲ ಪುರಸಭೆಯ ಅಧ್ಯಕ್ಷರೂ ಆಗಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಇವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.
UN NETWORKS ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಲ್ಯದ ಎಸ್ ಸಿ ಕಾಲನಿಯಲ್ಲಿ ರೂ 7.94 ಲಕ್ಷ ವೆಚ್ಚದ ಅನುದಾನದಲ್ಲಿ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿಯವರು ನೆರವೇರಿಸಿದರು. ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ,ರಾಜ್ಯ ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು,ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಕುಮಾರ್ ಬಗಂಬಿಲ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾರತಿ ರಾಘವ ಗಟ್ಟಿ,ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯರಾದ ಮೋಹನ್ ಬಲ್ಯ,ಉಮೇಶ್ ಗಾಂಭೀರ್,ಅಜಿತ್,ಸುಂದರ ಆಚಾರಿ ಕೋಟೆಕಾರು, ಬಾಬು ಮುಗೇರ,ಮಾಧವ ರಾವ್,ಶಂಕರ ಬಲ್ಯ,ಕೃಷ್ಣಪ ಬಲ್ಯ,ಪುರುಷೋತ್ತಮ,ರಾಮಣ್ಣ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
UN NETWORKS ಬೋಳಿಯಾರ್: ಅಹಾರ ಸಚಿವ ಯು.ಟಿ ಖಾದರ್ 48ನೇ ಹುಟ್ಟುಹಬ್ಬವನ್ನು ಬೋಳಿಯಾರು ಜೆ.ಎಂ.ಜೆ ಹಾಲ್ ನಲ್ಲಿ ಯು.ಟಿ ಖಾದರ್ ಅಭಿಮಾನಿಗಳ ಬಳಗ ಬೋಳಿಯಾರು ವತಿಯಿಂದ ಆಚರಿಸಲಾಯಿತು. ಕೆಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.ಮಂಗಳೂರು ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಬಿ.ಕೆ ಅಬ್ದುಲ್ ಜಬ್ಬಾರ್, ರಮೇಶ್ ಶೆಟ್ಟಿ, ಪಾವೂರು ಗ್ರಾ.ಪಂ ಅಧ್ಯಕ್ಷ ಫೀರೋಝ್ ಮುಂತಾದ ವರು ಭಾಗಿ.
UN NETWORKS ಉಳ್ಳಾಲ : ಕೂಲಿ ಕಾರ್ಮಿಕರು, ಬಡವರು, ದುಡಿಯುವ ಜನರ ಪರವಾಗಿ ಇಂದಿರಾ ಗಾಂಧಿ ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಮುಖಾಂತರ ಅನ್ನಾಹಾರ ನೀಡುವ ಯೋಜನೆ ಜಾರಿಗೆ ತಂದಿದೆ, ಜನವರಿ ಮೊದಲ ವಾರದಿಂದ ಉಳ್ಳಾಲದ ವಿವಿಧೆಡೆ ಕ್ಯಾಂಟೀನ್ ಆರಂಭಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು. ಮಂಗಳೂರು ಕ್ಷೇತ್ರ ಯುವಕಾಂಗ್ರೆಸ್ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯಲ್ಲಿ ಯು.ಟಿ.ಖಾದರ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಅಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿಯೇ ವಿನೂತನ ಯೋಜನೆಗಳನ್ನು ಜಾರಿ ತಂದ ಕೀರ್ತಿ ಕರ್ನಾಟಕ ಸರಕಾರಕಿದೆ. ಈ ಯೋಜನೆಯನ್ನುಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಸ್ಥಳಿಯಾಡಳಿತ ಸಂಸ್ಥೆಗಳೊಂದಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ರಾಜಕೀಯ ಜೀವನದಲ್ಲಿ ಕಷ್ಟ, ಪ್ರತಿಭಟನೆ, ಟೀಕೆ, ಸಮಸ್ಯೆ ಎಲ್ಲವನ್ನೂ ಎದುರಿಸಿ ಮುಂದೆ ಹೋಗಬೇಕಾಗುತ್ತದೆ. ನಮ್ಮ ವಿರುದ್ಧ ಯಾರೇ ಆದರೂ ಷಡ್ಯಂತ್ರ ರೂಪಿಸಿದರೆ ಅವರ ವಿರುದ್ಧ…
UN NETWORKS ಮುಡಿಪು: ರಾಜ್ಯದಲ್ಲಿ ಸ್ವಯಂಘೋಷಿತ ಪ್ರಗತಿಪರರು, ವಿಚಾರಧಾರಿಗಳು ಎಂದು ಹೇಳಿಕೊಳ್ಳುತ್ತಿರುವವರು ಹಿಂದೂ ಧರ್ಮದ ವಿಚಾರಧಾರೆಗಳನ್ನು ವಿರೋಧಿಸಿ, ನಿಂಧಿಸಿ ದಾರಿತಪ್ಪಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಪೂಜ್ಯನೀಯ ಭಾವದಿಂದ ಆರಾಧಿಸುತ್ತಿರುವ ಕೊರಗಜ್ಜ, ದೇಯಿಬೈದೆತಿಗೆ ಅವಮಾನ ಮಾಡುವಂತಹ ಹೀನ ಕೃತ್ಯ ಮಾಡುತಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಣಿ ಮಂಡಲದ ಕಾರ್ಯವಾಹಕ ಪ್ರಥ್ವಿರಾಜ್ ಕಲ್ಲಡ್ಕ ಅವರು ಹೇಳಿದರು. ಅವರು ಮುಡಿಪುವಿನಲ್ಲಿ ಬುಧವಾರ ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಾತ್ಯಾತೀತ ನೆಲೆಯಲ್ಲಿ ಒಂದಾಗಿರುವ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗುತ್ತಿರುವುದರ ಜೊತೆಗೆ ಹಿಂದೂ ಧಾರ್ಮಿಕ ಮುಖಂಡರನ್ನು, ನಾಯಕರನ್ನು ಬಂಧಿಸುವ ಮೂಲಕ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೆ ಗೌರಿ ಹತ್ಯೆಯ…
UN NETWORKS ಉಳ್ಳಾಲ: ಸಮಕಾಲೀನ ಜಗತ್ತಿನ ಆಧ್ಯಾತ್ಮಿಕ ನಾಯಕ ಸಾತ್ವಿಕ ವಿದ್ವಾಂಸ ಮರ್ಹೂಂ ಪೊಸೋಟ್ ತಙಳ್ ಹಾಗೂ ಇತ್ತೀಚೆಗೆ ನಿಧನರಾದ ಕೆಸಿಎಫ್ ಸಂಸ್ಥಾಪಕ ಸದಸ್ಯ,ಉದಾರಿ,ಸಂಘಟನಾ ಚತುರ ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳ ರವರ ಅನುಸ್ಮರಣಾ ಕಾರ್ಯಕ್ರಮವು ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಉಸ್ತಾದ್ (ಅಲ್ ಮದೀನ) ಇವರ ಅಧ್ಯಕ್ಷತೆಯಲ್ಲಿ ರಿಫಾಯಿ ಮಸ್ಜಿದ್ ಗುಂಡುಕಟ್ಟೆ ವಿದ್ಯಾನಗರದಲ್ಲಿ ನಡೆಯಿತು. ಪ್ರಸ್ತುತ ಕಾರ್ಯಕ್ರಮವನ್ನು ಮೋಯದ್ದೀನ್ ಸಹದಿ ಉದ್ಘಾಟನ ಗೈದರು.ಅಬೂಬಕ್ಕರ್ ಮದನಿ ತೋಟಾಲ್ ಪ್ರಾಸ್ತಾವಿಕ ಭಾಷಣ ಮಾಡಿ ಸಂಘಟನೆ ಪ್ರಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅನುಸ್ಮರಣಾ ಸಂದೇಶನಗೈದ ಯುವ ವಿದ್ವಾಂಸ ಅಬ್ದುಲ್ಲತೀಫ್ ಸಹದಿ ಅಲ್ ಹಸ್ಸಾ ಅಬ್ದುರ್ರಹ್ಮಾನ್ ಕೈರಂಗಳ ನಡೆದು ಬಂದ ಹಾದಿಯನ್ನು ಕೇಳುಗರ ಮನ ಮುಟ್ಟುವಂತೆ ವಿವರಿಸಿದರು. ದುಃಅ ಅಶೀರ್ವಚನ ಗೈದ ಸಹ್ಯಿದ್ ಶಹೀರ್ ತಙಳ್ ಅಲ್ ಬುಖಾರಿ ಪೊಸೋಟ್ ಮಾತನಾಡಿ ಅಬ್ದುರ್ರಹ್ಮಾನ್ ಕೈರಂಗಳ ಇಂದು ಜಗತ್ತಿನ ವಿವಿಧ ಕಡೆ ಗುರುತಿಸಿ ಕೊಳ್ಳಲು ಅವರನ್ನು ಸ್ಮರಿಸಲು ಅವರಿಗೆ ಖತಮುಲ್ ಖುರ್’ಹಾನ್ ತಹ್ಲೀಲ್ ಸಮರ್ಪಿಸಲು ಅವರ ಸಂಘಟನಾ ಸೇವೆಯೇ ಕಾರಣ ಎಂದರು.…

