Author: UllalaVani

Kannada News From Coastal Karnataka

UN NETWORKS ನರಿಂಗಾನ: ನರಿಂಗಾನ ಗ್ರಾಮದ ಕಲ್ಲರಕೋಡಿಯ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮವು ಭಾನುವಾರ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೆತ್ತಿಲ ಪದವುನಿಂದ ಮುರತಗುಂಡಿಯವರೆಗಿನ ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್, ಗೌರವಾಧ್ಯಕ್ಷ ಸಿದ್ದೀಕ್ ಪಾರೆ, ಉಪಾಧ್ಯಕ್ಷ ವಿವೇಕಾನಂದ ರೈ, ಗೌರವ ಸಲಹೆಗಾರ ಪ್ರೇಮಾನಂದ ರೈ, ನರಿಂಗಾನ ಪಂಚಾಯಿತಿ ಅಧ್ಯಕ್ಷರಾದ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷೆ ನಳಿನಾಕ್ಷಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಸುಜಾತ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ತೊಕ್ಕೊಟ್ಟು : ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಮಾತನಾಡಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಹೊಸ ಚಿಂತನೆಗಳೊಂದಿಗೆ ಯುವ ಸಮುದಾಯವನ್ನು ಪ್ರೇರೆಪಿಸುವ ಕಾರ್ಯ ಮಾಡುತ್ತಿದ್ದು, ದೇಶದ ಉಜ್ವಲ ಭವಿಷ್ಯದ ನಿಟ್ಟಿನಲ್ಲಿ ಅವರ ಕನಸನ್ನು ಸಾಕಾರ ಮಾಡಲು ಭಗತ್‍ಸಿಂಗ್‍ನಂತಹ ಸರಕಾರೇತರ ಸಂಘ ಸಂಸ್ಥೆಗಳು ಕಟಿಬದ್ಧರಾಗಿ ಮುಂದುವರೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದಲ್ಲಿ ಯುವಕರೇ ಸದಸ್ಯರಾಗಿದ್ದು ಅತ್ಯುತ್ಸಾಹದಿಂದ ಜವಾಬ್ದಾರಿ ನಿರ್ವಹಿಸುತ್ತಿರುವುದರ ಫಲವಾಗಿ ಸಂಘ ದಶಮ ಸಂಭ್ರಮ ಕಾಣುವಂತಾಗಿದೆ. ಆಂಬ್ಯುಲೆನ್ಸ್ ಮುಖಾಂತರ ಆರೋಗ್ಯ ಸೇವೆ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಂಘದ ಜೊತೆ ಪ್ರತಿಯೊಬ್ಬರು ಕೈಜೋಡಿಸಿ ಇನ್ನಷ್ಟು ಬಲತುಂಬಬೇಕು…

Read More

UN NETWORKS ಬೋಳಿಯಾರು : ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡೇ ಸರಕಾರಿ ಬಸ್ಸನ್ನು ಕಾಟಾಚಾರಕ್ಕೆ ಹಾಕಿರುವ ಸರಕಾರ, ಇದೀಗ ನ್ಯಾಯಾಲಯದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂಬ ಕಾರಣ ನೀಡಿ ತಡೆಯಾಜ್ಞೆ ತಂದಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಮುಡಿಪು-ಬೋಳಿಯಾರಿನ ಕೆಎಸ್ ಆರ್ ಟಿಸಿ ಬಸ್ಸು ಹೋರಾಟ ಸಮಿತಿ ಹಾಗೂ ಸಾರ್ವಜನಿಕರ ವತಿಯಿಂದ ಅಮ್ಮೆಂಬಳ ದರ್ಗಾದಿಂದ ಮಂಗಳೂರಿಗೆ ಹೋಗಲು ಪರ್ಯಾಯ ಸರಕಾರಿ ಬಸ್ಸು ವ್ಯವಸ್ಥೆಯನ್ನು ಮಾಡಲು ಒತ್ತಾಯಿಸಿ ಬೋಳಿಯಾರು ಗ್ರಾಮ ಪಂಚಾಯತ್ ಎದುರು ಸೋಮವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕರ ದೂರಿಗೆ ಸ್ಪಂಧಿಸಿ ಕಾಟಾಚಾರಕ್ಕೆ ಬೋಳಿಯಾರು ಕಡೆಗೆ ಸರಕಾರಿ ಬಸ್ಸು ಹಾಕಲಾಗಿತ್ತು. ಆದರೆ ಮೊದಲಿಗೆ ಬಸ್ಸು ಮಾಲೀಕರ ಜತೆಗೆ ಒಪ್ಪಂದ ಮಾಡಿಕೊಂಡ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 72 ಗಂಟೆಗಳಲ್ಲಿ ಸರಕಾರಿ ಬಸ್ಸು ಬಾರದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಅವರು ಈವರೆಗೆ…

Read More

UN NETWORKS ಉಳ್ಳಾಲ‌: ರಾಷ್ಟ್ರೀಯ ‌ಹೆದ್ದಾರಿ ಬದಿ ನಿಂತು ವಾಹನ ಸವಾರ ರನ್ನು ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದ ಅಲ್ಲದೆ ಯುವಕನೋರ್ವನ ಕೊಲೆಗೆ ಯತ್ನಿಸಿದ ಐದು ಮಂದಿಯ ತಂಡವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ದರ್ಬೆಯ ರವಿಕುಮಾರ್ ಯಾನೆ ಅಣ್ಣು (24), ಕುಂಜತ್ತೂರಿನ ನಿವಾಸಿಗಳಾದ ಖಲೀಲ್ .ಕೆ. ಯಾನೆ ಕಲ್ಲು(27), ರಾಜೇಶ್ .ಕೆ (30), ಅಜೀಮ್ ಯಾನೆ ಮಹಮ್ಮದ್ ಅಜೀಮ್ (23), ಜಾಬೀರ್ ಅಬ್ಬಾಸ್ (24) ಬಂಧಿತರು. ಐವರ ತಂಡ ರಾ.ಹೆ.66 ರಲ್ಲಿ ರಾತ್ರಿ ಸಮಯ ನಿಂತು ಕೇರಳ ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ ಮತ್ತು ಮಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಕಾರುಗಳನ್ನು ತಡೆದು ದರೋಡೆ ನಡೆಸಲು, ಮಹಿಳೆಯರನ್ನು ನಿರ್ಜನ ಪ್ರದೇಶದಲ್ಲಿ ತಡೆದು ಚಿನ್ನಾಭರಣ ಲೂಟಿಗೈಯ್ಯುವ ಸಂಚು ರೂಪಿಸಿದ್ದರೆನ್ನಲಾಗಿದೆ. ಬಂಧಿತರಿಂದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ, ಚೂರಿ ಹಾಗೂ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಪೈಕಿ ರಾಜೇಶ್, ಜಾವಿದ್, ಖಲೀಲ್ ಎಂಬವರುಗಳು ಕುಂಜತ್ತೂರು ಸಮೀಪ ಅ.19 ರಂದು ಪ್ರಜ್ವಲ್…

Read More

UN NETWORKS ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನವೂ ಎಲ್ಲರಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಕ್ಷೇಮವನ್ನು ತರುವ ಪ್ರಯತ್ನ ಮಾಡಬೇಕಿದೆ ಎಂದು ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹೇಳಿದ್ದಾರೆ. ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದಶಮ ಸಂಭ್ರಮಾಚರಣೆ, ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹುತಾತ್ಮರಾದ ಭಗತ್‍ಸಿಂಗ್ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ನಿರಂತರವಾಗಿ ಹತ್ತು ವರ್ಷಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಪ್ರತಿಷ್ಠಾನದ ಕಾರ್ಯ ಎಲ್ಲರಿಗೂ ಮಾದರಿ.ಪ್ರಸ್ತುತ ಸಮಾಜದಲ್ಲಿ ಯಾವುದು ಧರ್ಮವಲ್ಲ, ಅದನ್ನು ಆಚರಿಸಲಾಗುತ್ತಿದೆ. ಸಮಾನತೆ ಇಲ್ಲವೆಂದಾದಲ್ಲಿ ಅಂತಹ ವ್ಯವಸ್ಥೆಯಿಂದ ಹೊರಬರುವ ಮನಸ್ಥಿತಿ ಬೆಳೆಯಬೇಕಿದೆ. ಸಮಾಜದ ಮುಖಂಡರು ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದರು. ಈ ಸಂದರ್ಭ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚ್ ನ ಧರ್ಮಗುರು ಫಾ.ಜೆ.ಬಿ ಸಲ್ದಾನ್ಹ, ಇಂದಿನ ಯುವಪೀಳಿಗೆಗೆ ದೀಪಾವಳಿ ಆಚರಣೆಯ…

Read More

UN NETWORKS ಉಳ್ಳಾಲ: ಎಸ್ಸೆಸ್ಸೆಫ್ ರಾಷ್ಟ್ರೀಯ ಇದರ ಸುತ್ತೋಲೆಯಂತೆ “ಮಾದಕ ಮುಕ್ತ ಭಾರತ` ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಆ ಪ್ರಯುಕ್ತ ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ಹಮ್ಮಿಕೊಂಡಂತಹ “ಮಾದಕ ಮುಕ್ತ ಭಾರತ” ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜಾಗೃತಿ ನಡಿಗೆಯು ನಾಟೆಕಲ್ ನಿಂದ ದೇರಳಕಟ್ಟೆಯವರಿಗೆ ನಡೆಯಿತು. ರಾಜ್ಯ ಆಹಾರ ಮತ್ತು ನಾಗರಿಕ ಪೋರೈಕೆ ಸಚಿವ  ಯುಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾದಕ ವಸ್ತು ನಿಯಂತ್ರಣಕ್ಕೆ ವಿಶೇಷ ತಂತ್ರಜ್ಞಾನಗಳನ್ನೊಳಗೊಂಡ ಸ್ವಾಫ್ಟ್ ವೇರ್ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆನೆ. ಈ ಮೂಲಕ ಮಾದಕ ವಸ್ತು ಬಳಕೆ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಉಚಿತ ಕರೆ (ಟೋಲ್ ಫ್ರೀ) ಸಂಖ್ಯೆ ಮೂಲಕ ದೂರು ನೀಡಬಹುದು. ಟೋಲ್ ಫ್ರೀ ಸಂಖ್ಯೆ ಮೂಲಕ ಕರೆ ಮಾಡುದರಿಂದ ದೂರು ನೀಡಿದವರ ಮಾಹಿತಿ ಲಭ್ಯವಾಗುದಿಲ್ಲ. ಸಾರ್ವಜನಿಕರು ಮಾದಕ ವಸ್ತು ಬಳಕೆ ಮಾರಾಟ ಕಂಡುಬಂದಲ್ಲಿ ನೇರವಾಗಿ ಕರೆ ಮಾಡಿ ದೂರು ನೀಡಬಹುದು ಈ ನೂತನ ಯೋಜನೆ ಶೀಘ್ರವೇ ಜಾರಿಗೆಯಗಲಿದೆ ಎಂದು ಹೇಳಿದರು. ಎಸ್ಸೆಸ್ಸೆಫ್…

Read More

UN NETWORKS ಉಳ್ಳಾಲ : ದಶಕಗಳ ಹಿಂದೆ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆಗಳಿಲ್ಲದೇ ವೈದ್ಯಕೀಯ ಪದವೀಧರರು ಉನ್ನತ ಶಿಕ್ಷಣ, ವೃತ್ತಿಯನ್ನು ಅರಸಿ ವಿದೇಶಗಳಿಗೆ ಹೋಗಿ ಅಲ್ಲಿಯೇ ನೆಲೆ ನಿಲ್ಲಲು ಹಾತೊರೆಯುತ್ತಿದ್ದರು. ಪ್ರಸ್ತುತ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ಯುವ ವೈದ್ಯರ ಮೇಲೆ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವುದರಿಂದ ಕ್ಲಿನಿಕಲ್ ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ನವದೆಹಲಿಯ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಹಾಗೂ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ ರೇಡಿಯೇಶನ್ ಆಂಕೋಲಾಜಿ ವಿಭಾಗ ಪ್ರಾಧ್ಯಾಪಕ ಡಾ. ಜಿ.ಕೆ. ರತ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಯೇನೆಪೋಯ ವಿವಿ ಕ್ಯಾಂಪಸ್‍ನಲ್ಲಿರುವ `ಯೆನ್‍ಡ್ಯೂರೆನ್ಸ್’ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ ನಡೆದ ಯೇನೆಪೋಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣಗೈದರು. ಭಾರತ ಸ್ವಾತಂತ್ರ್ಯ ಗಳಿಸಿದ ಸಂದರ್ಭ ದೇಶದೆಲ್ಲೆಡೆ ಪ್ಲೇಗ್, ಮಲೇರಿಯಾ, ಕಾಲರಾ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಜೀವ ಬಲಿತೆಗೆದುಕೊಂಡಿತ್ತು. ಸೂಕ್ತ ಚಿಕಿತ್ಸೆ ಸೂಕ್ತ ವ್ಯವಸ್ಥೆ ಇರದಿರುವುದರಿಂದ ಆ ದಿನಗಳಲ್ಲಿ…

Read More

UN NETWORKS ಪಜೀರು: ಗೋ ಮಾತೆ ಇಡೀ ವಿಶ್ವಕ್ಕೇ ತಾಯಿಯಾಗಿದ್ದಾಳೆ. ಗೋಸಂಪತ್ತನ್ನು, ಗೋ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸುವ ಕೆಲಸ ಮಾಡಬೇಕು ಎಂದು ಸುರತ್ಕಲ್‍ನ ವೇದಮೂರ್ತಿ ಶ್ರೀ ಮಹೇಶ್ ಮೂರ್ತಿ ಅವರು ಹೇಳಿದರು. ಅವರು ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಭಾನುವಾರ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಗೋ ಪಾವಿತ್ರ್ಯ, ಚಿಂತನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಬ್ರಿಟೀಷರು ಒಡೆದು ಆಳುವ ನೀತಿಯ ಪರಿಣಾಮ ಭಾರತದಲ್ಲಿ ವ್ಯವಸ್ಥಿತವಾಗಿ ನೂರಾರು ಕಸಾಯಿಖಾನೆಗಳನ್ನು ಆರಂಭಿಸಿ ಅದೆಷ್ಟೋ ಗೋ ಸಂಪತ್ತನ್ನು ನಾಶ ಮಾಡಿದ್ದಾರೆ. ಇಂದಿಗೂ ಕಸಾಯಿಖಾನೆಗಳ ಮೂಲಕ ಗೋ ಸಂಪತ್ತು ಅವನತಿಯತ್ತ ಸಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಂಡು ಗೋವಿನ ರಕ್ಷಣೆಯ ಮಹತ್ವದ ಕೆಲಸವನ್ನು ಮಾಡಬೇಕಿದೆ. ನಮ್ಮ ಹುಟ್ಟು ಹಬ್ಬ, ಮದುವೆ ದಿನ ಸಂಭ್ರಮಗಳನ್ನು ಇಂತಹ ಗೋಶಾಲೆಗಳ ಗೋವುಗಳೊಂದಿಗೆ ಆಚರಿಸಿದರೆ ನಿಜವಾದ ಅರ್ಥ ಬರುತ್ತದೆ ಮತ್ತು ಪುಣ್ಯವೂ ಬರುತ್ತದೆ ಎಂದರು. ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿಗಳಾದ…

Read More

UN NETWORKS ಉಳ್ಳಾಲ : ಕೆ.ಸಿ.ನಗರ ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ವತಿಯಿಂದ ಮಾದಕ ವ್ಯಸನಿಗಳ ವಿರುದ್ಧ ಜನಜಾಗೃತಿ ಸಭೆ ಶನಿವಾರ ಕೆ.ಸಿ.ರೋಡು ಕೈರಲಿ ಸಭಾಂಗಣದಲ್ಲಿ ಹಾಗೂ ಮನೆಮನೆಗೆ ಕಾಲ್ನಡಿ ಜಾಥಾ ಭಾನುವಾರ ಸೋಮೇಶ್ವರ, ಕಿನ್ಯ, ಕೋಟೆಕಾರ್ ಹಾಗೂ ತಲಪಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್ ಮಾತನಾಡಿ, ಮಾದಕ ದ್ರವ್ಯ ಎಂಬುದು ಅನಾದಿ ಕಾಲದಿಂದಲೂ ಮನುಷ್ಯನಿಗೆ ಶಾಪವಾಗಿ ಕಾಡುತ್ತಿದೆ, ಆದರೂ ಈ ಬಗ್ಗೆ ನಾವು ಎಚ್ಚೆತ್ತುಕೊಂಡಿಲ್ಲ. ಯುವಸಮುದಾಯ ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು. ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ಸಂಚಾಲಕ ಸಂಶುದ್ದೀನ್ ಉಚ್ಚಿಲ್ ಮಾತನಾಡಿ, ಸ್ನೇಹಿತರ ಒತ್ತಾಯಕ್ಕೆ ಕುತೂಹಲ ತಣಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಯುವಕರು ಕ್ರಮೇಣ ಅದನ್ನು ಬಿಡಲು ಸಾಧ್ಯವಾಗದೆ ಶಾಶ್ವತ ದಾಸರಾಗಿ ಬಿಡುತ್ತಾರೆ. ಈ ವ್ಯಸನದಿಂದ ಮಾನವೀಯತೆ ಎಂಬುದನ್ನೇ ಮರೆತುಬಿಟ್ಟು, ಮನೋ ಸಾಮಥ್ರ್ಯವನ್ನೂ ಕಳೆದುಕೊಳ್ಳುತ್ತಾರೆ ಎಂದರು. ಪ್ರತೀ ಮದರಸ, ಮಸೀದಿಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಬಗ್ಗೆ ಸಭೆಯಲ್ಲಿದ್ದ…

Read More

UN NETWORKS ಉಳ್ಳಾಲ: ಸುನ್ನೀ ಬಾಲ ಸಂಘ (ಎಸ್ ಬಿ ಎಸ್) ಅಳೇಕಲ ಶಾಖೆ ಯ ನೂತನ ಸಮಿತಿ ರಚನಾ ಸಭೆಯು ಆದಿತ್ಯವಾರ ಅಳೇಕಲದ ಸುನ್ನೀ ಸೆಂಟರ್ ನ ಲ್ಲಿ ನಡೆಯಿತು. ಸಯ್ಯಿದ್ ಫಹಾಝ್ ತಂಗಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಎಸ್ ಬಿ ಎಸ್ ಸಂಚಾಲಕ ಶಫೀಖ್ ಯು.ಎಸ್ ಸಭೆಯನ್ನು ಉದ್ಘಾಟಿಸಿದರು.2017-18ನೇ ಸಾಲಿಗೆ ಅಧ್ಯಕ್ಷರಾಗಿ ಅರ್ಮಾನ್ ಮುಹಮ್ಮದ್,ಉಪಾಧ್ಯಕ್ಷರಾಗಿ ಸಯ್ಯಿದ್ ಫಹಾಝ್ ತಂಗಳ್,ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್,ಜೊತೆ ಕಾರ್ಯದರ್ಶಿಗಳಾಗಿ,ಮುಹಮ್ಮದ್ ನಯೀಮ್, ಮುಖ್ತಾರ್ ಯು.ಎಸ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸುಹಾನ್ ಸೇರಿದಂತೆ 15 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಬಳಿಕ ಮುಂದಿನ ಕಾರ್ಯ ಯೋಜನೆಗಳ ಕುರಿತು ಚರ್ಚಿಸಲಾಯಿತು. ಅರ್ಮಾನ್ ಮುಹಮ್ಮದ್ ಸ್ವಾಗತಿಸಿ, ಮುಹಮ್ಮದ್ ಯಾಸಿರ್ ವಂದಿಸಿದರು.

Read More