Author: UllalaVani

Kannada News From Coastal Karnataka

UN NETWORKS ಉಳ್ಳಾಲ: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆರನೇ ವರ್ಷದ ನಾಡು ನುಡಿ ವೈಭವದ ರತ್ನೋತ್ಸವ -2017 ಡಿ.29ರ ಶುಕ್ರವಾರ ಸಂಜೆ 3 ಗಂಟೆಯಿಂದ ರಾತ್ರಿ 10ರ ವರೆಗೆ ದೇರಳಕಟ್ಟೆಯ ಗ್ರೀನ್ ಗ್ರೌಂಡಿನಲ್ಲಿ ಜರಗಲಿದೆ ಎಂದು ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ದೇರಳಕಟ್ಟೆ ಶಾಲೆಯಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಸಾಹಿತಿ ಮಲಾರು ಜಯರಾಮ ರೈ ಆಯ್ಕೆಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಬೆಳ್ಮ ಗ್ರಾಮ ಪಂಚಾಯತ್ ವಠಾರದಿಂದ ಸಮ್ಮೇಳನದ ಅಧ್ಯಕ್ಷರ ಭವ್ಯ ಮೆರವಣಿಗೆ ವೀರಗಾಸೆ, ಚೆಂಡೆ ವಾದನ, ಗೊಂಬೆ ಕುಣಿತದ ಜತೆಗೆ ನಡೆಯಲಿದೆ. ಧ್ವಜಾರೋಹಣವನ್ನು ಟ್ರಸ್ಟ್ ಕೋಶಾಧಿಕಾರಿ ರತ್ನಾವತಿ ಕೆ.ಶೆಟ್ಟಿ ವಹಿಸಲಿದ್ದಾರೆ. ರತ್ನೋತ್ಸವದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೃಂಗೇರಿ ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ…

Read More

UN NETWORKS ಮಂಗಳೂರು: ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಇದೀಗ ಭಿನ್ನ ಕೋಮಿನ ಪ್ರೇಮಿಗಳ ಮೇಲೆ ಕಣ್ಣು ಇಡಲು ಕರಾವಳಿಯಲ್ಲಿ ಹೊಸ ಕಾರ್ಯಪಡೆಯೊಂದು ಸಜ್ಜಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಮೂಡಬಿದ್ರೆ ನಿವಾಸಿ ಪ್ರಿಯಾಂಕ ಪ್ರಕರಣ. ಈ ಪ್ರಕರಣದಿಂದ ಹಿಡಿದು ಇಲ್ಲಿ ಅನೇಕ ಭಿನ್ನ ಕೋಮಿನ ಪ್ರೇಮಿಗಳ ನಡುವೆ ಹಲವು ಪ್ರಕರಣಗಳು ವರದಿಯಾಗಿದೆ. ಸದ್ಯ ಇಂತಹ ಲವ್ ಜಿಹಾದ್ ನಿಂದ ಹಿಂದು ಯುವತಿಯರು ಮೋಸ ಹೋಗದಂತೆ ತಡೆಯುವುದಕ್ಕೆ ಕರಾವಳಿಯಲ್ಲಿ ಟಾಸ್ಕ್ ಫೋರ್ಸ್ ನಿರ್ಮಾಣವಾಗುತ್ತಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ಮಾಡುತ್ತಿದ್ದಾರೆ ಅನ್ನುವುದು ಹಿಂದೂ ಪರ ಸಂಘಟನೆಗಳ ವಾದ. ಈ ಕಾರಣಕ್ಕಾಗಿ ಲವ್ ಜಿಹಾದ್ ತಡೆಗೆ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಹಿಂದೂ ಟಾಸ್ಕ್ ಫೋರ್ಸ್ ರಚನೆಯಾಗಲಿದೆ. ಈ ಟಾಸ್ಕ್ ಫೋರ್ಸ್ ನಲ್ಲಿ ವಕೀಲರು, ಮನಶಾಸ್ತ್ರಜ್ಷರು, ಸಾಮಾಜಿಕ ಕಾರ್ಯಕರ್ತರು…

Read More

UN NETWORKS ಪೆರ್ಮನ್ನೂರು: ಶಾಂತಿದೂತ ಯೇಸು ಕ್ರಿಸ್ತ ಜಯಂತಿಯ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಪೆರ್ಮನ್ನೂರು ಇಗರ್ಜಿಯ ಧರ್ಮಗುರುಗಳಾದ ಜೆ.ಬಿ‌.ಸಲ್ದಾಣ ಮತ್ತು ಕಿರಿಯ ಗುರುಗಳನ್ನು ಜಿಲ್ಲಾ ಪಂ.ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ನೇತೃತ್ವದಲ್ಲಿ ಬೇಟಿ ಮಾಡಿ ಶುಭ ಕೋರಲಾಯಿತು. ಈ ಸಂಧರ್ಭದಲ್ಲಿ ಭಗತ್‌‌ ಸಿಂಗ್‌‌ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟು, ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛದ ಅಧ್ಯಕ್ಷರಾದ ಅಶ್ರಫ್ ಹರೇಕಳ, ಬಿ.ಜೆ.ಪಿ‌.ಪ್ರಮುಖರಾದ ರಾಜೇಶ್ ಪಿಲಾರ್ ಉಪಸ್ಥಿತರಿದ್ದರು.

Read More

UN NETWORKS ಹೊಸದಿಲ್ಲಿ : ಭಾರತದ ಭದ್ರತಾ ಪಡೆಗಳು ಸೋಮವಾರ ತಡರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್‍ನ ಮೂವರು ಸೈನಿಕರನ್ನು ಹೊಡೆದುರುಳಿಸಿದೆ. ಕಳೆದ ವರ್ಷದ ಸರ್ಜಿಕಲ್ ಸ್ಟ್ರೈಕ್‍ನ್ನು ನೆನಪಿಸುವ ರೀತಿಯಲ್ಲಿ ಮಂಗಳವಾರ ಮುಂಜಾನೆ ಪಿಒಕೆಯನ್ನು ದಾಟಿದ ಭಾರತೀಯ ಸೇನೆ ಮೂವರು ಪಾಕ್ ಸೈನಿಕರನ್ನು ಹತ್ಯೆಗೈದಿದೆ ಎಂದು ಮೂಲಗಳ ತಿಳಿಸಿವೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಪುಲ್ವಾಮಾ ಜಿಲ್ಲೆಯ ಸಂಬೂರಾ ಪ್ರದೇಶದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಎನ್‍ಕೌಂಟರ್ ನಡೆಸಿ ಸಾಯಿಸಿದ್ದಾರೆ. ಎನ್‍ಕೌಂಟರ್‍ಗೆ ಬಲಿಯಾದ ಓರ್ವ ಉಗ್ರ ಈ ವರ್ಷಾರಂಭದಲ್ಲಿ ಶ್ರೀನಗರದ ಏರ್‍ಪೋರ್ಟ್‍ಗೆ ಆತ್ಮಹತ್ಯಾ ದಾಳಿ ನಡೆಸಿದ ಮಾಸ್ಟರ್‍ಮೈಂಡ್ ಆಗಿದ್ದ ಎನ್ನಲಾಗಿದೆ.

Read More

UN NETWORKS ಉಳ್ಳಾಲ: ಕೊಲ್ಯ ಮಲಯಾಳಕೋಡಿ ನೇಮೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಭಂಡಾರ ಆಗಮನದ ನಂತರ ಬಂಟ ದೈವದ ನೇಮೋತ್ಸವದಲ್ಲಿ ಜಾತ್ರೋತ್ಸವ ಆರಂಭಗೊಂಡಿತು. ಈ ಬಾರಿ ಪ್ರಥಮವಾಗಿ ಮಲಯಾಳ ಚಾಮುಂಡಿ ನೇಮೋತ್ಸವ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಭಾಗವಹಿಸುವಿಕೆಯಿಂದ ನಡೆದಿರುವುದು ವಿಶೇಷವಾಗಿತ್ತು. ರಾತ್ರಿ ಶ್ರೀ ವೈದ್ಯನಾಥ ದೈವದ ವಾಳಸ್ಸರಿ ಉತ್ಸವದ ಮೂಲಕ ಜಾತ್ರೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಮಾಪನಗೊಂಡಿತು. ಕೇರಳದ ದೈವ ದೈವದ ನುಡಿ (ಪರಪು) ವಿನಂತೆ ಕೇರಳದಿಂದ ಬಂದಿರುವ ದೈವವಾಗಿದ್ದು, ನಂದಿನಿ ಗಟ್ಟಿದಿ ಅನ್ನುವ ಸಾತ್ವಿಕ ಮಹಿಳೆಯ ಪ್ರಾರ್ಥನೆಗೆ ಒಲಿದು ಬಂದ ದೈವ . ಕನೀರುತೋಟದ ಕೆರೆಯಲ್ಲಿ ಬಟ್ಟೆ ಒಗೆಯುವ ಸಂದರ್ಭದಲ್ಲಿ ದೈವದ ಮೂರ್ತಿ ಸಿಕ್ಕಿದ್ದು, ಆನಂತರ ಪ್ರತಿಷ್ಠಾಪನೆಗೊಂಡು ಇದೀಗ ಪ್ರತಿವರ್ಷವೂ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಿದೆ. ಸೋಮೇಶ್ವರ, ಕೊಲ್ಯ, ಕೋಟೆಕಾರು, ಬೀರಿ, ಮಾಡೂರು, ಕುಂಪಲ, ಬಗಂಬಿಲ ಭಾಗದ ಜನ ಜಾತ್ರೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.

Read More

UN NETWORKS ಕೊಣಾಜೆ: ಯಕ್ಷಗಾನ ಕಲಾವಿದ ಕೊಣಾಜೆಯ ದೇವಪ್ಪ ಗೌಡ ಅವರ ಮನೆಯು ಕಳೆದ ಕೆಳತಿಂಗಳ ಹಿಂದೆ ಮಳೆಗಾಳಿಗೆ ಕುಸಿದು ಬಿದ್ದು ಅವರ ಬದುಕೇ ಅತಂತ್ರವಾಗಿತ್ತು. ಆ ಸಂದರ್ಭದಲ್ಲಿ ಬಡಕಲಾವಿದನ ನೆರವಿಗೆ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್, ಪಟ್ಲ ಯಕ್ಷ ಆಶ್ರಯ ಯೋಜನೆ ಮಂಗಳೂರು ಇದರ ವತಿಯಿಂದ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಸುಮಾರು ಐದು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಹಾಗೂ ಗೃಹ ಪ್ರವೇಶ ಕಾರ್ಯಕ್ರಮವು ಸೋಮವಾರ ನಡೆಯಿತು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಸತೀಶ್ ಶೆಟ್ಟಿ ಪಟ್ಲ ಅವರು ನೂತನ ಮನೆಯ ಕೀಲಿ ಕೈಯನ್ನು ಬಡ ಕಲಾವಿದ ದೇವಪ್ಪ ಗೌಡರಿಗೆ ಹಸ್ತಾಂತರಿಸಿದರು. ನೆರಳು ಕೊಡುವ ಮರವಾಗಬೇಕು: ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಬದುಕು ಎಂಬುದು ಮತ್ತೊಬ್ಬರಿಗೆ ನೆರಳು ಆಶ್ರಯ ನೆರಳು ಕೊಡುವ ಮರದಂತೆ ಆಗಬೇಕು. ಆಗ ನೆಮ್ಮದಿಯೊಂದಿಗೆ ಪುಣ್ಯವೂ ಸಿಗುತ್ತದೆ. ಅಲ್ಲದೆ ಓರ್ವ ಕಲಾವಿದನ ಕಷ್ಟ ನಷ್ಟಗಳನ್ನು…

Read More

UN NETWORKS ಗುಜರಾತ್: 2ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ನಿತಿನ್ ಪಟೀಲ್ ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತ್ ರಾಜ್ಯಪಾಲ ಓಂ. ಪ್ರಕಾಶ್ ಕೊಹ್ಲಿ ಪ್ರತಿಜ್ಞಾನಿಧಿಯನ್ನು ಭೋದನೆ ಮಾಡಿದರು. ವಿಶೇಷವಾಗಿ ಪ್ರಮಾಣ ವಚನ ಕಾರ್ಯಕ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ 18 ರಾಜ್ಯಗಳ ಮುಖ್ಯಮಂತ್ರಿಗಳು ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಇನ್ನು ಬಿಜೆಪಿಯ ಹಿರಿಯ ಎಲ್ ಕೆ. ಕೆ. ಅಡ್ವಾನಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗುಜರಾತ್ ನಲ್ಲಿ 6ನೇ ಭಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿ ಅಧಿಕಾರಕ್ಕೆ ಬಂದಿದೆ.

Read More

UN NETWORKS ಮಂಗಳೂರು : ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು. ಈ ಹಿನ್ನಲೆಯಲ್ಲಿ ಬಸ್ ನ ಚಾಲಕ ಮತ್ತು ಅಯ್ಯಪ್ಪ ವೃತಧಾರಿಗೆ ಮಾತುಕತೆ ನಡೆದು ಬಸ್ ಚಾಲಕ ಅಯ್ಯಪ್ಪ ವೃತಧಾರಿಗೆ ನಿಂದನೆ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಅಯ್ಯಪ್ಪ ವೃತಧಾರಿಗಳು ಬಸ್ ಚಾಲಕ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಸೇರಿದಂತೆ ಹತ್ತು ವರ್ಷದ ಮಗುವಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸರ ಲಾಠಿ ಚಾರ್ಜ್ ವಿರುದ್ದ ಅಯ್ಯಪ್ಪ ವೃತಧಾರಿಗಳು ಪ್ರತಿಭಟನೆ ನಡೆಸಿದ್ದಾರೆ. `ಯಾರ ಮೇಲೂ ಹಲ್ಲೆ ನಡೆಸಿಲ್ಲ’ ಘಟನೆಯ ಬೆನ್ನಲ್ಲೇ “ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ” ಎಂಬ…

Read More

UN NETWORKS ಉಳ್ಳಾಲ: ಬಿ.ಜೆ.ಪಿ. ಮಂಗಳೂರು ಮಂಡಲದ ವತಿಯಿಂದ ಭಾರತ ರತ್ನ ,ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯನ್ನು ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್,ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ ಉಚ್ಚಿಲ , ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಪ್ರಮುಖರಾದ ಸಂಜೀವ ಶೆಟ್ಟಿ, ಸೀತಾರಾಮ ಬಂಗೇರ, ಮುನೀರ್ ಭಾವ ಮನೊಜ್ ಆಚಾರ್ಯ, ಮೋಹನ್ ದಾಸ್ ಶೆಟ್ಟಿ, ಯಶವಂತ ಅಮೀನ್,ಪ್ರಕಾಶ್ ಸಿಂಫೋನಿ, ಹೇಮಂತ್ ಶೆಟ್ಟಿ, ಜೀವನ್ ಕುಮಾರ್ ತೊಕ್ಕೊಟು, ಅಶ್ರಪ್ ಹರೇಕಳ, ಹರಿಯಪ್ಪ ಸಾಲ್ಯಾನ್, ರವಿಶಂಕರ್ ,ಪ್ರೇಮನಾಥ ಪುತ್ರನ್, ಗಣೇಶ್ ಕಾಪಿಕಾಡ್,ಸುರೇಶ್ ಶೆಟ್ಟಿ,ಆನಂದ ಶೆಟ್ಟಿ, ಜೀತೆಂದ್ರ ಶೆಟ್ಟಿ, ದಯಾನಂದ ತೊಕ್ಕೊಟು,ಹರೀಶ್ ಅಂಬ್ಲಮೊಗರು,ರಾಜೇಶ್ ಪಿಲಾರ್,ರಂಜಿತ್,ತಾರನಾಥ, ನವೀನ್ ಮುಂತಾದವರು ಉಪಸ್ಥಿತರಿದ್ದರು . ಬಳಿಕ ಮಕ್ಕಳಿಗೆ ಸಿಹಿತಿಂಡಿ ಮತ್ತು ಉಪಹಾರ ವಿತರಿಸಲಾಯಿತು.

Read More

UN NETWORKS ಮಂಗಳೂರು : ಕುಖ್ಯಾತಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಗೋರಿಗುಡ್ಡೆಯ ರೌಡಿಶೀಟರ್ ಮೆರ್ಲಿಕ್ ಡಿಸೋಜಾ (21) ಎಂಬಾತನನ್ನು ತಂಡವೊಂದು ಬರ್ಬರವಾಗಿ ತಲವಾರಿನಿಂದ ಕಡಿದು ಕ್ರಿಸ್‍ಮಸ್ ದಿನದಂದೇ ಹತ್ಯೆ ನಡೆಸಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್‍ನಲ್ಲಿರುವ ಅಜ್ಜಿ ಮನೆಯಲ್ಲಿ ಕ್ರಿಸ್ ಮಸ್ ಆಚರಣೆಗೆಂದು ತಲುಪಿದ್ದ ಮೆಲ್ರಿಕ್ ಡಿಸೋಜಾ ನನ್ನು ಐದು ಮಂದಿಯ ತಂಡ ಹತ್ಯೆ ನಡೆಸಿದೆ. ಸಮೀಪದಲ್ಲಿನ ತನ್ನ ಅಜ್ಜಿ ಮನೆಯ ಎದುರುಗಡೆಯ ಸ್ಥಳವೊಂದರಲ್ಲಿ ಮೆರ್ಲಿಕ್ ಡಿಸೋಜಾ ಕುಲಿತುಕೊಂಡಿದ್ದ ಸಮಯದಲ್ಲಿ ಅಲ್ಲಿಗೆ ಬಂದ ತಂಡವೊಂದು ಏಕಾಏಕಿ ಈತನ ಮೇಲೆ ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆಯೂ ಪೂರ್ವ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾಗಿದೆ. 2016 ರಲ್ಲಿ ಹಿಂ.ಜಾ.ವೇ ಮುಖಂಡ ಸಂದೀಪ್ ಶೆಟ್ಟಿ ಹತ್ಯೆಗೆ ಮಂಕಿ ಸ್ಟ್ಯಾಂಡ್ ವಿಜಯ್ ನೇತೃತ್ವದ ತಂಡದಲ್ಲಿ ಮೆಲರಿಕ್ ಡಿಸೋಜಾ ಸಹಿತ 6 ಮಂದಿಯ ತಂಡ ಯತ್ನಿಸಿತ್ತು. ಇದೇ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮೆಲ್ರಿಕ್ 8…

Read More