UN NETWORKS ಬೆಳ್ತಂಗಡಿ:ಸಮಾಜದ ಸಾಂತ್ವನ ಕೇಂದ್ರ ಮಲ್ಜಹ್ ಉಜಿರೆ ಇಲ್ಲಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ಕಾರ್ಯಕರ್ತರು 23/12/017 ನಿನ್ನೆ ಬೇಟಿ ಕೊಟ್ಟರು. ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶ ಹಾಗೂ ಕರ್ನಾಟಕ,ಕೇರಳದ ಅಸಹಾಯಕ,ಬಡ,ನಿರ್ಗತಿಕ,ರೋಗಿಗಳ ಸಮೀಕ್ಷೆ ನಡೆಸಿ ಮಲ್ಜಹ್ ಸಂಸ್ಥೆಯ ರೂವಾರಿ ಸೆಯ್ಯಿದ್ ಅಲವಿ ಜಲಾಲುದ್ದೀನ್ ತಙಳ್ ಮದನಿ ಅಲ್ ಹಾದಿ ರವರು ಹಣ,ವಸತಿಗಳನ್ನು ನೀಡಿ ಪೋಷಿಸುತ್ತಾ ಬಂದಿರುತ್ತಾರೆ. ಈ ಕುರಿತು ಸಮಲೋಚನೆ ಸಭೆ ಕೆಸಿಎಫ್ ನಾಯಕರುಗಳಿಂದ ನಡೆಯಿತು.ಮಲ್ಜಹ್ ಸಂಸ್ಥೆ ಈ ವರೆಗೆ ಮಾಡಿದ ಅದ್ವಿತೀಯ ಸೇವೆಯ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಕೃತಿ ರಚಿಸುವುದಾಗಿ ಯುವ ಬರಹಗಾರ ಸಿ.ಐ.ಇಸ್ಹಾಕ್ ಫಜೀರ್ ತಿಳಿಸಿದರು. ಇದನ್ನು ಸ್ವಲಾತ್ ಕಾರ್ಯಕ್ರಮದಲ್ಲಿ ಸೈಯ್ಯಿದ್ ಜಲಾಲುದ್ದೀನ್ ತಙಳ್ ಉಜಿರೆ ಸಭಾ ಕಾರ್ಯಕ್ರಮದಲ್ಲಿ ಘೋಷಿಸಿದರು. ಮಲ್ಜಹ್ ಸಂಸ್ಥೆಯ ಮ್ಯಾನೇಜರ್ ಮೆಹಬೂಬ್ ಸಖಾಫಿ ಕಿನ್ಯ ಅವರೊಂದಿಗೆ ಕೆಸಿಎಫ್ ನಾಯಕರುಗಳದ ಸಲೀಂ ಕನ್ಯಾಡಿ,ಮೆಹಮೂದ್ ಉಳ್ಳಾಲ್,ಸಿ.ಐ.ಇಸ್ಹಾಕ್ ಫಜೀರ್, ಇಬ್ರಾಹಿಂ ಕಲ್ಕಟ್ಟ ಮತ್ತು ಅಶ್ರಫ್ ಸರಳಿಕಟ್ಟೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು.
Author: UllalaVani
UN NETWORKS ತಲಪಾಡಿ : ತಲಪಾಡಿ ಕೆ.ಸಿರೋಡ್ ನ ಸ್ಕೂಲ್ ಆಫ್ ಕುರಾನಿಕ್ ಸ್ಟಡೀಸ್ ಹಾಗು ಝೀನತ್ ಎಜ್ಯುಕೇಶನಲ್ ಟ್ರಸ್ಟ್( ರಿ) ಇದರ ಆಶ್ರಯದಲ್ಲಿ ವಿಶ್ವ ಅರಭಿ ಭಾಷಾ ದಿನದ ಪ್ರಯುಕ್ತ ಅರಭಿ ಬಾಷಾ ಮತ್ತು ಸಾಹಿತ್ಯ ವಿಚಾರ ಸಂಕಿರಣವು ಕೆ.ಸಿ.ರೋಡ್ನಲ್ಲಿ ಗುರುವಾರ ನಡೆಯಿತು. ವಿಚಾರಸಂಕಿರಣದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅರಭಿ ಭಾಷೆಯು ವಿಶ್ವದ ಪ್ರಮುಖ ಸುಂದರ ಸುಲಲಿತ ಭಾಷೆಗಳಲ್ಲಿ ಒಂದಾಗಿದೆ. ಭಾಷೆಗಳಿಗೆ ಧಾರ್ಮಿಕತೆಯ ಬಣ್ಣವನ್ನು ಯಾವತ್ತೂ ಬಲಿಯಬಾರದು. ಅರಭಿ ಭಾಷೆಯು ಇಸ್ಲಾಂ ಧರ್ಮದ ಭಾಷೆ ಮುಸ್ಲಿಮರ ಭಾಷೆಯೂ ಅಲ್ಲ. ಸೃಷ್ಟಿಕರ್ತನು ಅರಭೀ ಬಾಷೆಯಲ್ಲಿ ಕುರಾನನ್ನು ಅವತೀರ್ಣಗೊಳಿಸಿದನು. ಹಾಗೂ ಆ ಕುರಾನ್ನಿಂದಾಗಿ ಲೋಕಕ್ಕೆ ಪ್ರಕಾಶ ಲಭಿಸಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಮೊಯ್ದಿನ್ ಬಾವಾ ಅವರು, ನಮ್ಮ ಜೀವನಕ್ಕೆ ಒಂದು ಸ್ಪಷ್ಟವಾದ ಗುರಿಯಿರಬೇಕು. ನಮ್ಮನ್ನು ವ್ಯರ್ಥವಾಗಿ ಇಲ್ಲಿ ಸೃಷ್ಟಿಸಲಾಗಿಲ್ಲ. ಬದಲಾವಣೆಯ ಮಾರ್ಗ ಪವಿತ್ರ ಕುರಾನ್ನಲ್ಲಿ…
UN NETWORKS ಉಳ್ಳಾಲ:ದೇರಳಕಟ್ಟೆ ನಿಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ “ಕ್ಷೇಮ ಸ್ಟೆಮ್ಕಾನ್ -2017″ರಾಷ್ಟ್ರೀಯ ಕಾರ್ಯಾಗಾರವನ್ನು ನಿಟ್ಟೆ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಶುಕ್ರವಾರದಂದು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಇಂದು ಸಂಶೋಧನಾ ಕ್ಷೇತ್ರವು ವಿಸ್ತಾರವಾಗಿ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಸರಕಾರವು ಕೂಡಾ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು. ನಿಟ್ಟೆ ವಿವಿಯು ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿಟ್ಟೆಯ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ, ಯು.ಕೆ.ಯ ಕ್ಯಾಂಟ್ಬರ್ರಿ ಕ್ರಿಸ್ಟ್ಚರ್ಚ್ ವಿ.ವಿಯ ಮುಖ್ಯಸ್ಥರಾದ ಪ್ರೊ.ಡಾ.ಎ.ಅನಂತರಾಮ್ ಶೆಟ್ಟಿ, ಸೌತ್ ಕೊರಿಯಾದ ಸೆಲ್ ಥೆರಫಿ ಸೆಂಟರ್ನ ದಿ ಕೆಥೋಲಿಕ್ ವಿ.ವಿಯ ನಿರ್ದೇಶಕ ಸಿಯೊಕ್ ಜಂಗ್ ಕಿಮ್, ಕ್ಷೇಮದ ಡೀನ್ ಪ್ರೊ..ಪಿ.ಎಸ್.ಪ್ರಕಾಶ್, ವೈಸ್ ಡೀನ್ ಡಾ.ಕೆ.ಜಯಪ್ರಕಾಶ್ ಶೆಟ್ಟಿ, ಡಾ.ಅಲ್ಕ ಕುಲಕರ್ಣಿ, ಡಾ.ಲಾರೆನ್ಸ್ ಮ್ಯಾಥ್ಯೂಸ್, ಡಾ.ಜಿ.ಕೆ.ಸ್ವಾಮಿ, ಡಾ.ಶೇಷಾದ್ರಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಪಿ.ಎಸ್. ಪ್ರಕಾಶ್ ಸ್ವಾಗತಿಸಿ, ಡಾ.ಲಾರೆನ್ಸ್…
UN NETWORKS ಕೊಣಾಜೆ: ವಿಜಾಪುರದ ಧಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಎಲ್ಲಾ ಸಮಾನ ಮನಸ್ಕರು ಸೇರಿಕೊಂಡು ಕರ್ನಾಟಕ ಬಂದ್ ನಡೆಸುವ ಅನಿವಾರ್ಯ ಎದುರಾಗಬಹುದು, ಈ ನಡುವೆ ಸಂಭವಿಸುವ ದುರತಂತಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ /ಪಂಗಡದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ ಮುಖದ್ವಾರದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೂ ಗಳ ಬೇರೆ ಜಾತಿಯವರಾಗುತ್ತಿದ್ದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಮಾನವೀಯತೆ ದೃಷ್ಟಿಯಿರದೆ ಸಾಮಾಜಿಕ ಕಳಕಳಿಯೇ ಇಲ್ಲದ ಹಿಂದು ಮುಖಂಡರು ದಲಿತರ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡಿ ಮರುಳು ಮಾಡುತ್ತಿದ್ದೀರಿ. ದಲಿತರನ್ನು ಕೇವಲ ಮತಕ್ಕಾಗಿ ಬಳಸುವ ಪಕ್ಷಗಳು ಅಮಾಯಕ ಯುವತಿ ಹತ್ಯೆ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದರ ಹಿಂದಿನ ಸಂಚು ಏನೆಂಬುದು…
UN NETWORKS ಉಳ್ಳಾಲ: ಇನ್ಸ್ಟಿಟ್ಯೂಟ್ ಅಫ್ ಕರಾಟೆ ಆಂಡ್ ಅಲೈಡ್ ಆಟ್ರ್ಸ್ ಬುಡೋಕಾನ್ ಕರಾಟೆ ದೋ ಇಂಡಿಯಾ ಇದರ ವತಿಯಿಂದ ಕೋರಮಂಗಳದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 35ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್, ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಹಾಗೂ ಪಡುಬಿದ್ರೆಯಲ್ಲಿ ನಡೆದ 28ನೇ ರಾಜ್ಯ ಮಟ್ಟದ ಅಂತರ್ ಶಾಖಾ ಕರಾಟೆ ಚಾಂಪಿಯನ್ ಶಿಪ್ನಲ್ಲಿ ದಿಶಾ ಜಿ. ಉಳ್ಳಾಲ್ ಇವರು 3 ಚಿನ್ನ, 1 ಬೆಳ್ಳಿ, ಹಾಗೂ 1 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಅನಿಲ್ ರಾಜ್ ಉಳ್ಳಾಲ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಗಿರೀಶ್ ಉಳ್ಳಾಲ್ ಹಾಗೂ ಶ್ರೀದೇವಿ ದಂಪತಿಯ ಪುತ್ರಿ.
UN NETWORKS ಉಳ್ಳಾಲ: ಭಾರತ ದೇಶದಾದ್ಯಂತ ಆಟೊ ರಿಕ್ಷಾ ಚಾಲಕರ ಸಮಸ್ಯೆ ಅದನ್ನ ಬಗೆಹರಿಸಲು ಮತ್ತು ನ್ಯಾಯಯುತವಾಗಿ ಅವರಿಗೆ ಸಿಗುವಂತಹ ಸವಲತ್ತುಗಳನ್ನು ಎಲ್ಲಾ ಅಟೋ ರಿಕ್ಷಾ ಚಾಲಕರು ಪಡೆಯಬೇಕೆಂಬ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ದೇಶದಾದ್ಯಂತ ಕಾರ್ಯಚರಿಸುತ್ತಾ ಇದ್ದು ಈ ನಿಟ್ಟಿನಲ್ಲಿ ಉಳ್ಳಾಲದಲ್ಲಿಯೂ ಆಟೋ ರಿಕ್ಷಾ ಚಾಲಕರ ಯೂನಿಯನ್ ಬಲಪಡಿಸುವ ಅಗತ್ಯ ಇದೆ ಎಂದು ಮಂಗಳೂರು ಕ್ಷೇತ್ರದ ಅಟೋ ರಿಕ್ಷಾ ಚಾಲಕರ ಅಧ್ಯಕ್ಷ ಅಬ್ಬಾಸ್ ಕಿನ್ಯ ಅಭಿಪ್ರಾಯಪಟ್ಟರು. ಉಳ್ಳಾಲ ನಗರ ಸಭೆಯ ಸಮುದಾಯ ಭವನದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯಿಂದ ನಡೆದಂತಹ ಅಟೋ ರಿಕ್ಷಾ ಚಾಲಕರ ಸ್ನೇಹ ಕೂಟದಲ್ಲಿ ನೂತನವಾಗಿ ಉಳ್ಳಾಲನಗರ ಸಭಾ ಸಮಿತಿಯ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಇದರ ಜಿಲ್ಲಾ ಮುಖಂಡ ಅಶ್ರಫ್ ಮಂಚಿ ಚಾಲಕರಿಗೆ ಯೂನಿಯನ್ ನ ಅಗತ್ಯತೆಯನ್ನು ಸಭೆಯಲ್ಲಿ ತಿಳಿಸಿಕೊಟ್ಟರು ಚುನಾವಣಾ ಪ್ರಕ್ರಿಯೆಯ ಮೂಲಕ ಉಳ್ಳಾಲ ನಗರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು, ಖಲೀಲ್ ಮೇಲಂಗಡಿ ಅಧ್ಯಕ್ಷರಾಗಿ, ಹೈದರ್ ತೊಕ್ಕೋಟು…
UN NETWORKS ಉಳ್ಳಾಲ: ಮುಂದೆ ಬರಲಿರುವ ಕರ್ಣಾಟಕ ರಾಜ್ಯ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರ ಬರವುದು ಖಚಿತ ಇದರೊಂದಿಗೆ ಮಂಗಳೂರು ಕ್ಷೇತ್ರದಲ್ಲಿಯೂ ಕಮಲ ಅರಳಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಆಭಿಪ್ರಾಯಪಟ್ಟರು. ಮಂಗಳೂರು ಕ್ಷೇತ್ರ ಕಛೇರಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ, ಜಿಲ್ಲೆಯ, ಕ್ಷೇತ್ರದ ಜ್ವಲಂತ ಸಮಸ್ಯೆ, ಬೇಡಿಕೆಗಳನ್ನು ಸಾರ್ವಜನಿಕರ ಅಭಿಪ್ರಾಯ ಕ್ರೋಡಿಕರಿಸಿ ರಚಿಸಲಾಗುವುದು. ಈ ಬಗ್ಗೆ ಪ್ರತಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ವೈದ್ಯರು, ಇಂಜೀನಿಯರ್, ಶಿಕ್ಷಕರು, ಕೃಷಿಕರು, ಕಾರ್ಮಿಕರು, ಧಾರ್ಮಿಕ, ಸಾಮಾಜಿಕ ಕ್ಷೇತ್ರದ, ಯುವ ಸಮುದಾಯದ ಪ್ರಮುಖರನ್ನು ಅಹ್ವಾನಿಸಿ ಸಭೆ ನಡೆಯಲಿದ್ದು. ಪ್ರಣಾಳಿಕೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಬಹುದು ಎಂದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಿದ್ದರು. ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್, ಸಹ ಸಂಚಾಲಕ ಶಂಕರ್ ಭಟ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಕ್ಷೇತ್ರ ಪ್ರಭಾರಿ…
UN NETWORKS ಉಳ್ಳಾಲ: ಶಿಕ್ಷಕ ವೃತ್ತಿಯೆಂಬುದು ಶ್ರೇಷ್ಠವಾದದು, ಒಂದು ಮಗುವಿನಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಸರಿಯಾದ ತರಬೇತಿಯನ್ನು ನೀಡುವುದರೊಂದಿಗೆ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಅವರ ಪಾತ್ರ ಹಿರಿದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲ ವಲಯದ ದೈಹಿಕ ಶಿಕ್ಷಣ ಶಿಕ್ಷಕ ವೃಂದದವರ ವತಿಯಿಂದ ಇತ್ತೀಚೆಗೆ ತೊಕ್ಕೊಟ್ಟು ಅಂಬಿಕಾರೋಡ್ನಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲೋಕನಾಥ ರೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ನೆರವೇರಿಸಿ ಮಾತನಾಡಿದರು. ದೈಹಿಕ ಶಿಕ್ಷಣವೆಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದದ್ದು. ಹಾಗಾಗಿ ಇಂತಹ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವವರನ್ನು ಗುರುತಿಸಿ, ಗೌರವಿಸುವುದು ಅತ್ಯುತ್ತಮ ಕಾರ್ಯವೆಂದರು. ಮುಖ್ಯ ಅತಿಥಿಯಾಗಿ ಹಝರತ್ ಸೈಯದ್ ಮದನಿ ದರ್ಗಾ ಉಳ್ಳಾಲ ಇದರ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಪುರಸಭೆ ಅಧ್ಯಕ್ಷ ಕುಂಞಮೋನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಮೊಗವೀರ…
UN NETWORKS ಉಳ್ಳಾಲ: ಅಪಘಾತ ಸಂದರ್ಭದಲ್ಲಿ ಘಟನೆಯ ಸ್ಥಳದಿಂದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಗಾಯಾಳುವನ್ನು ಸಾಗಿಸುವಾಗ ಸರಿಯಾದ ಆರೋಗ್ಯ ಕ್ರಮಗಳನ್ನು ಪಾಲನೆ ಮಾಡದಿದ್ದರೆ ತೊಂದರೆಗಳು ಜಾಸ್ತಿ ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ (ಕ್ಷೇಮ) ಡೀನ್ ಡಾ| ಪ್ರಕಾಶ್ ಪಿ.ಎಸ್. ಅಭಿಪ್ರಾಯಪಟ್ಟರು. ನಿಟ್ಟೆ ಸಿಮ್ಯುಲೇಶನ್ ಸೆಂಟರ್ನಲ್ಲಿ ಅಪಘಾತದ ಗಾಯಾಳುವಿನ ನಿರ್ವಹಣೆಯಲ್ಲಿ ತರಬೇತಿ – ಇಂಟರ್ನ್ಯಾಷನಲ್ ಟ್ರಾಮಾ ಲೈಫ್ ಸಪೋ ರ್ಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ರೋಗಿಗಳು ಮತ್ತು ಗಾಯಾಳುಗಳನ್ನು ಸಾಗಿಸುವಾಗ ಅತ್ಯಂತ ಜಾಗರೂಕತೆ ವಹಿಸುವ ಅಗತ್ಯ ಇದೆ. ಇದರ ಕುರಿತು ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಅಗತ್ಯ ಇದೆ. ರೋಗಿಗಳ ಅಸಮರ್ಪಕ ನಿರ್ವಹಣೆಯಿಂದ ಫಲಿತಾಂಶ ಕೆಟ್ಟದಾಗುವ ಸಾಧ್ಯತೆಗಳಿವೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇಮದ ಕುಲಸಚಿವ ಡಾ| ಜಯಪ್ರಕಾಶ ಶೆಟ್ಟಿ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ್, ನಿಟ್ಟೆ ಸಿಮ್ಯುಲೇಶನ್ ಕೇಂದ್ರದ ಸಂಯೋಜಕ ಡಾ| ರವೀಂದ್ರ ಯು. ಎಸ್. ಮತ್ತಿತರರು ಉಪಸ್ಥಿತರಿದ್ದರು. ಎಲುಬು ಮತ್ತು ಕೀಲು ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ|…
UN NETWORKS ಉಳ್ಳಾಲ : ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಸಹಕಾರದೊಂದಿಗೆ ಎಸ್ವಿವಿಎಸ್ ಟ್ರೋಫಿ-2017 ಕಬಡ್ಡಿ ಪಂದ್ಯಾಟ ಡಿಸೆಂಬರ್ 24ರಂದು ಉಳ್ಳಾಲದಲ್ಲಿ ಜರಗಲಿದೆ. ದಕ್ಷಿಣ ಕನ್ನಡಜಿಲ್ಲೆ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ 70ಕೆ.ಜಿ.ವಿಭಾಗದ ಪ್ರೊ ಮಾದರಿಯ ಮ್ಯಾಚ್ ಇದಾಗಿದ್ದು ಡಿ.24 ಆದಿತ್ಯವಾರ ಮಧ್ಯಾಹ್ನ 2ರಿಂದ ಉಳ್ಳಾಲ ನಗರ ಸಭಾ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಮೊದಲು ಬಂದ 20ತಂಡಗಳಿಗೆ ಮಾತ್ರ ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ

