Author: UllalaVani

Kannada News From Coastal Karnataka

UN NETWORKS ಮಂಗಳೂರು : ನಗರದ ಗೋರಿಗುಡ್ಡ 4ನೆ ಅಡ್ಡ ರಸ್ತೆಯ ನಿವಾಸಿ ಮೆಲ್ರಿಕ್ ಅಂತೋನಿ ಡಿಸೋಜ (21) ಎಂಬಾತನನ್ನು ಡಿ. 25ರಂದು ಮಾರಕಾಸ್ತ್ರದಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು 6 ಮಂದಿ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಗೋರಿಗುಡ್ಡ ವೆಲೆನ್ಸಿಯಾದ ನಿಶಾಕ್ ಪೂಜಾರಿ ಯಾನೆ ನಿಶಾಕ್ (28), ಗೋರಿಗುಡ್ಡ ನೆಹರೂ ರಸ್ತೆಯ ವಿನೇಶ್ ಕುಮಾರ್ (30), ಮುಳಿಹಿತ್ಲು ಟೈಲರ್ ರೋಡ್‌ನ ಸಚಿನ್ ಶೆಟ್ಟಿ ಯಾನೆ ಸಚಿನ್ (22), ಜಪ್ಪಿನಮೊಗರು ತಂದೊಳಿಗೆಯ ಗಣೇಶ್ ಕುಲಾಲ್ ಯಾನೆ ಗಣೇಶ್ ಯಾನೆ ಗಂಟೆ (34), ಕಂಕನಾಡಿಯ ಗೋರಿಗುಡ್ಡೆ ನೆಕ್ಕರೆಮಾರ್‌ನ ಪ್ರವೀಣ್ ಪೂಜಾರಿ (42), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (33) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ ಮತ್ತು ಮೊಬೈಲ್ ಸಹಿತ 2 ಬೈಕ್ ವಶಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2016ರಲ್ಲಿ ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಮತ್ತಾತನ ಸಹಚರರು ಕೊಲೆಗೆ ಯತ್ನಿಸಿದ್ದರು. ಈ ಮಧ್ಯೆ ಆರೋಪಿ ನಿಶಾಕ್ ಪೂಜಾರಿ…

Read More

UN NETWORKS ಮುಡಿಪು: ಗಡಿಕಾಯುವ ಸೈನಿಕರು ಕೊರೆಯುವ ಚಳಿಗೂ ಎದೆಗುಂದದೆ ನಮ್ಮ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದಾಗಿಯೇ ನಾವು ನೆಮ್ಮದಿಯುತವಾದ ಜೀವನವನ್ನು ನಡೆಸುತ್ತಿದ್ದೇವೆ. ಆದ್ದರಿಂದ ನಾವು ಪ್ರತಿನಿತ್ಯ ದೇವರಲ್ಲಿ ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಇದರ ಜೊತೆ ದೇಶ ಪ್ರೇಮದೊಂದಿಗೆ ಗಡಿಕಾಯುವ ಸೈನಿಕರಿಗೂ ಪ್ರತಿದಿನ ಪ್ರಾರ್ಥನೆ ಸಲ್ಲಿಸಿ ಪುಣ್ಯ ಕಟ್ಟಿಕೊಳ್ಳೋಣ ಎಂದು ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಅವರು ಹೇಳಿದರು. ಅಸೈಗೋಳಿಯಲ್ಲಿರುವ ಅಭಯ ಆಶ್ರಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬುಧವಾರ ಅಭಯಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹಿರಿಯರು ಒಬ್ಬಂಟಿಗಳಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಆದ್ದರಿಂದ ಅನಾಥರಿಗೆ, ಅಥವಾ ಹಿರಿಯ ನಾಗರಿಕರಿಗೆ ವಾತ್ಸಲ್ಯದೊಂದಿಗೆ ಆಶ್ರಯವನ್ನು ಕೊಡುವ ಇಂತಹ ಅಭಯಾಶ್ರಗಳು ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ನಿಟ್ಟೆ ವಿವಿಯ ಎನ್. ವಿನಯ್ ಹೆಗ್ಡೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಅವರನ್ನು…

Read More

UN NETWORKS ಉಳ್ಳಾಲ: ದೇರಳಕಟ್ಟೆ ನೇತಾಜಿ ಸೂಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರಮೇಶ್ ಸಲ್ಯಾನ್, ಸಲಹೆಗಾರರಾಗಿ ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ, ಪಂಚಾಯತ್ ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಪಂಚಾಯತ್ ಸದಸ್ಯರಾದ ಯೂಸುಫ್ ಬಾವ, ಕಬೀರ್.ಡಿ, ನಿವೃತ್ತ ಅಧಿಕಾರಿ ನಾರಾಯಣ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾರು ಚಂಚಲಾಕ್ಷಿ, ನಯನರಾಜ್, ಇಸ್ಮಾಯಿಲ್ ಪಿ.ಐ, ಅಧ್ಯಕ್ಷರಾಗಿ ಶಿಹಾಬುದ್ದೀನ್.ಡಿ, ಉಪಾಧ್ಯಕ್ಷರುಗಳಾಗಿ ಶಿವಪ್ರಸಾದ್, ಅನಿಲ್ ಲೋಬೋ,ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್ ಟಿ.ಎಂ, ಕೋಶಾಧಿಕಾರಿಯಾಗಿ ಸಂದೀಪ್ ಅಚಾರ್ಯ, ಜೊತೆಕೋಶಾಧಿಕಾರಿಯಾಗಿ ಉಬೈದುಲ್ಲಾ.ಡಿ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್ ರಾಜ್.ಬಿ, ಜೊತೆ ಸಂಘಟನೆ ಕಾರ್ಯದರ್ಶಿಯಾಗಿ ನೌಫಲ್.ಬಿ, ಮಾಧ್ಯಮ ಕಾರ್ಯದರ್ಶಿಗಳಾಗಿ ಅರೀಫ್ ಕಲ್ಕಟ್ಟ, ಸಿದ್ದಾನಂದ, ಕ್ರೀಡಾ ಕಾರ್ಯದರ್ಶಿಗಳಾಗಿ ಅಕ್ರಂ ಯು.ಬಿ, ಬಾಲಕೃಷ್ಣ, ಸದಸ್ಯರಾದ ನಿತಿನ್ ಬಿ.ಎ, ಸಂದೇಶ್, ಮುಹಮ್ಮದ್ ರಫೀಕ್, ಮುಹಮ್ಮದ್ ಇಲ್ಯಾಸ್, ರಾಜೇಶ್, ಅತುಲ್ ಕುಮಾರ್, ಮಹಾಂತೇಶ್, ಅಬ್ದುಲ್ ನಾಸೀರ್ ಮುಂತಾದವರು ಈ ಸಂದರ್ಭ ಆಯ್ಕೆ ಮಾಡಲಾಯಿತು.

Read More

UN NETWORK ಮಂಗಳೂರು: ಹೊಸ ವರುಷದ ಹೆಸರಿನಲ್ಲಿ ಡಿ. 31 ನಗರದ ಹಲವು ಹೋಟೆಲ್, ಪಬ್ ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು ಮುಗ್ದ ಹೆಣ್ಣುಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ. ಆದುದರಿಂದ ಯಾವುದೇ ಹೋಟೆಲ್, ಪಬ್ ಗಳಿಗೆ ಯಾವುದೇ ಡಿ ಜೆ ಪಾರ್ಟಿ ನಡೆಸಲು ಅನುಮತಿ ಪೊಲೀಸ್ ಇಲಾಖೆ ನೀಡಬಾರದು . ಎಲ್ಲಾ ಬಾರ್ ಪಬ್ ಗಳು ರಾತ್ರಿ 11:00ಗಂಟೆ ಒಳಗೆ ಮುಚ್ಚಬೇಕು ಎಂದು ಪೊಲೀಸ್ ಕಮೀಷನರಿಗೆ ಬಜರಂಗದಳ ಮನವಿ ಮಾಡಿತು. ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Read More

UN NETWORKS ಧಾರವಾಡ : ಗ್ರಾಮೀಣ ಪ್ರದೇಶದ ಮಸೀದಿಗಳಲ್ಲಿ ಶೌಚಾಲಯ, ಕುಡಿವ ನೀರಿನ ಸೌಲಭ್ಯವಿಲ್ಲ ಎಂಬ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಕ್ಷಣ ಆ ಸೌಲಭ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಧಾರವಾಡ ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆ ಅಂಜುಮಾನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಎಚ್.ಎಂ. ಕೊಪ್ಪದ ಅವರು ಗ್ರಾಮೀಣ ಭಾಗದ ಮಸೀದಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಗ್ಗೆ ಪತ್ರ ಬರೆದು ಸಮಸ್ಯೆ ನಿವೇದಿಸಿ ಕೊಂಡಿದ್ದರು. ಮುಸ್ಲಿಮರು ನಿತ್ಯ ನಮಾಜು ಮಾಡುವ ಬಹುತೇಕ ಮಸೀದಿಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಅಷ್ಟಕಷ್ಟೆ. ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬರುವವರಿಗೆ ಈ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲೂ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿ, ನೀರಿನ ವ್ಯವಸ್ಥೆ ಕಲ್ಪಿಸಿದರೆ ಉತ್ತಮವಾಗುತ್ತದೆ ಎಂದು ಎಚ್.ಎಂ. ಕೊಪ್ಪದ ಅವರು ಪ್ರಧಾನಿಗೆ ಪತ್ರದಲ್ಲಿ ತಿಳಿಸಿದ್ದರು. ಈ ಮನವಿಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎರಡೇ ದಿನಗಳಲ್ಲಿ…

Read More

UN NETWORKS ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ 14ನೇ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರು ಹಾಗು ಠಾಕೂರ್ ಅವರಿಗೆ ರಾಜ್ಯಪಾಲ ಆಚಾರ್ಯ ದೇವ್ರತ್ ಪ್ರಮಾಣ ವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕ ಅಮಿತ್ ಶಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಿತರ ಕೇಂದ್ರ ಸಚಿವರು ಉಪಸ್ಥಿತರಿದ್ದರು. ಮಂಡ್ಯ ಜಿಲ್ಲೆಯಿಂದ ಮೊದಲ ಮುಖ್ಯಮಂತ್ರಿಯಾಗಿರುವ ಠಾಕೂರ್ ಹಿಮಾಚಲ ಪ್ರದೇಶದ 14ನೇ ಸಿಎಂ ಆಗಿದ್ದಾರೆ. ಮೊಹಿಂದರ್ ಸಿಂಗ್, ಕೃಷ್ಣನ್ ಕಪೂರ್, ಸುರೇಶ್ ಭಾರದ್ವಾಜ್, ಅನಿಲ್ ಶರ್ಮಾ, ಸರ್ವೀನ್ ಚೌಧರಿ, ರಾಮ್ ಲಾಲ್ ಮರ್ಕಂಡ, ವಿಪಿನ್ ಪರ್ಮಾರ್, ವಿರೇಂದರ್ ಕನ್ವಾರ್, ಗೋವಿಂದ್ ಠಾಕೂರ್, ರಾಜೀವ್ ಸೈಜಲ್ ಹಾಗು ವಿಕ್ರಮ್ ಸಿಂಗ್ ಹಿಮಾಚಲ ಪ್ರದೇಶದ ನೂತನ ಸಚಿವರುಗಳಾಗಿದ್ದಾರೆ.

Read More

UN NETWORKS ಕಲ್ಲಡ್ಕ : ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ಕೊಲೆ ಆರೋಪಿಯೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.ಕಲ್ಲಡ್ಕದ ನಿವಾಸಿ ಖಲೀಲ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಅರೋಪಿಗಳ ಪೈಕಿ ಓರ್ವನಾದ ವೀರ ಕಂಬದ ಕೇಶವ ಮಂಗಳವಾರ ರಾತ್ರಿ ಮನೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಕಲ್ಲಡ್ಕಕ್ಕೆ ಆಗಮಿಸಿ ಅಂಗಡಿಯೊಂದರ ಸಮೀಪ ನಿಂತಿದ್ದ ಸಂದರ್ಭ ಹೆಲ್ಮೆಟ್ ಧರಿಸಿದ್ದ ತಂಡವೊಂದು ಈತನ ಮೇಲೆ ದಾಳಿ ನಡೆಸಿ, ಚೂರಿಯಿಂದ ಇರಿದಿತ್ತು. ಗಾಯಾಳು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚೂರಿ ಇರಿತ ಘಟನೆಯಿಂದ ಸ್ಥಳದಲ್ಲಿ ಆತಂಕದ ಸ್ಥಿತಿ ಉಂಟಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಕರೆಸಿ, ಕಲ್ಲಡ್ಕ, ವಿಟ್ಲದಾದ್ಯಂತ ಬಿಗು ಬಂದೋಬಸ್ತು ಏರ್ಪಡಿಸಲಾಗಿತ್ತು. ಇದೀಗ ಕಲ್ಲಡ್ಕ ಪೊಲೀಸರ ನಿಯಂತ್ರಣದಲ್ಲಿದ್ದು, ಶಾಂತವಾಗಿದೆ ಎಂದು ಅಧಿಕಾರಿಗಳು…

Read More

UN NETWORKS ಮಂಗಳೂರು: ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡದ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಅಣಕು ಶವ ಯಾತ್ರೆಯನ್ನು ಬೈಕಂಪಾಡಿ ಬಳಿ ನಡೆಸಲಾಯಿತು. ಬೈಕಂಪಾಡಿ ಎ ಪಿ ಎಂ ಸಿ ಮಾರುಕಟ್ಟೆಯ ಬಳಿಯಿಂದ ದೀಪಕ್ ಪೆಟ್ರೊಲ್ ಪಂಪ್ ವರಗೆ ಶವಯಾತ್ರೆ ಕೊಡೊಯ್ಯಲಾಯಿತು. ಬಳಿಕ ಬೃಹತ್ ಹೆದ್ದಾರಿ ಗುಂಡಿಯಲ್ಲಿ ಅಣಕು ಶವವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟು ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರುಗಳು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹೊಂಡಮಯವಾಗಿದೆ. ಅನೇಕ ಬೃಹತ್ ಹೊಂಡಗಳಿಂದ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಹತ್ತಾರು ಅಪಘಾತಗಳು ನಿರಂತವಾಗಿ ನಡೆಯುತ್ತಿವೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ. ಹೆದ್ದಾರಿ ದುರುಸ್ಥಿ ಮಾಡದೇ ಟಾಲ್ ಸಂಗ್ರಹ ಕೂಡ ಮಾಡಲಾಗುತ್ತಿದೆ. ಈ ಕೂಡಲೇ ಕ್ರಮ ಕಯಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನಾರ್ಥವಾಗಿ ಪ್ತತಿಟನಕಾರರು ಅದೇ ಹೆದ್ದಾರಿ ಗುಂಡಿಯಲ್ಲಿ ಶವ ದಹನ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮುನೀರ್ ಕಾಟಿಪಳ್ಳ, ಬಿ…

Read More

UN NETWORKS ಮಂಗಳೂರು : ಕಾಂಗ್ರೇಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಬಿಲ್ಲವ ಸಮಾಜದ ಕಾರ್ಯಕ್ರಮವೊಂದರಲ್ಲಿ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪೂಜಾರಿ ಕಣ್ಣೀರು ಹಾಕುತ್ತಿರುವುದು ಕಂಡು ಬಂದಿದೆ. ಅರಣ್ಯ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪೂಜಾರಿಯವರನ್ನು ಹೀನಾಯವಾಗಿ ನಿಂದಿಸಿರುವ ವಿಚಾರವನ್ನು ಹೇಳುತ್ತಿರುವ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಕಣ್ಣೀರು ಹಾಕಿದ್ದಾರೆ.

Read More

UN NETWORKS ಉಳ್ಳಾಲ: ರಸ್ತೆ ಡಾಮರೀಕರಣಕ್ಕೆ ಅನುದಾನ ಒದಗಿಸಿದ ಸಚಿವ ಖಾದರ್ ಅವರಿಗೆ ಅಭಿನಂಧಿಸಿ ಹಾಕಲಾದ ಬ್ಯಾನರನ್ನು ಹರಿದ ಕಿಡಿಗೇಡಿಗಳಿಗೆ ದೇವರು ಒಳ್ಳೆಯ ಬುದ್ದಿ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರು ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ಕೊಲ್ಯ ಕನೀರುತೋಟದಲ್ಲಿ ನಡೆದಿದೆ. ಕೊಲ್ಯ ಕನೀರುತೋಟ ಲೋಕಯ್ಯಪಾಲು ರಸ್ತೆಗೆ ಸಚಿವ ಯು.ಟಿ.ಖಾದರ್ ಅವರ 20 ಲಕ್ಷ ಅನುದಾನದಲ್ಲಿ ಡಾಮರೀಕರಣ ನಡೆಸಲಾಗಿತ್ತು. ಇದಕ್ಕೆ ಕೃತಜ್ಞತಾಪೂರ್ವಕವಾಗಿ ಅಭಿಮಾನಿಗಳು ಅಭಿನಂಧನೆ ಸಲ್ಲಿಸಿದ ಬ್ಯಾನರನ್ನು ಈ ಭಾಗದಲ್ಲಿ ಅಳವಡಿಸಿದ್ದರು. ಆದರೆ ಕಿಡಿಗೇಡಿಗಳು ಎರಡು ಬಾರಿ ಬ್ಯಾನರ್ ಹರಿದು ದುಷ್ಕøತ್ಯ ಎಸಗಿದ್ದಾರೆ ಎಂದು ಆರೋಪಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಬುಧವಾರ ಕೊಲ್ಯ ಕನೀರುತೋಟದ ಲೋಕಯ್ಯಪಾಲು ಬಳಿಯಿರುವ ಶ್ರೀ ನಾಗಬ್ರಹ್ಮ ಮಹಾಕಾಳಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಬ್ಯಾನರ್ ಹಾನಿಗೊಳಿಸಿದವರಿಗೆ ದೇವರು ಬುದ್ಧಿ ಕೊಡುವಂತೆ ಬೇಡಿಕೆ ಮುಂದಿರಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಮಾತನಾಡಿ ಕೊಲ್ಯ…

Read More