Author: UllalaVani

Kannada News From Coastal Karnataka

UN NETWORKS ದೇರಳಕಟ್ಟೆ: ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿನ ವುಮೆನ್ ಸೆಲ್ ಉದ್ಘಾಟನೆ ನಡೆಯಿತು. ಕಣಚೂರು ಮ್ಯಾನೆಜ್‍ಮೆಂಟ್ ಆಂಡ್ ಸೈನ್ಸ್‍ನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಸತ್ಯನಾರಾಯಣ ಎಂ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಮಹಿಳಾ ಸಬಳೀಕರಣದ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ, ವುಮೆನ್ ಸೆಲ್ ನ ಸಂಯೋಜಕಿ ರಾಧಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಸ್‍ನಾ ಫಜೀಲ್ ಸ್ವಾಗತಿಸಿದರು. ಕಾರ್ಯದರ್ಶಿ ನಾಜ್ ಮರಿಯಂ ವಂದಿಸಿದರು. ಝುಲೈಕಾ ಸಪಾನ ಕಾರ್ಯಕ್ರಮ ನಿರೂಪಿಸಿದರು

Read More

UN NETWORKS ದೇರಳಕಟ್ಟೆ: ಮಂಗಳೂರಿನ ಕುದ್ರೋಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್ ನ 15ನೇ ದೇರಳಕಟ್ಟೆ ಶಾಖೆ ದೇರಳಕಟ್ಟೆ ಜಂಕ್ಷನ್ ನ ಮೋರ್ ಸೂಪರ್ ಮಾರ್ಕೆಟ್ ಬಳಿ ಇರುವ ಸಿಟಿ ಸೆಂಟರ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ದೇರಳಕಟ್ಟೆಯ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಅಧ್ಯಕ್ಷ ಯು.ಕೆ.ಮೋನು ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿ ದೇರಳಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹಿಂದೆ ಬಡವರಿಗೆ, ಹಣವಂತರಿಗೆ ಬ್ಯಾಂಕ್ ನ ಅವಶ್ಯಕತೆ ಇರಲಿಲ್ಲ. ಆದರೆ ಇಂದಿನ ಯುಗದಲ್ಲಿ ಬ್ಯಾಂಕ್ ಎಲ್ಲಾ ವರ್ಗದವರಿಗೆ ಅತೀ ಅವಶ್ಯಕ. ಆದರೆ ಸಾಲ ನೀಡುವಾಗ ಅವಶ್ಯಕತೆಗೆ ಅನುಗುಣವಾಗಿ ನೀಡಿ ಅದರ ಹಿನ್ನಲೆಯನ್ನು ಗಮನಿಸಿ ಸಾಲ ನೀಡಬೇಕಾಗಿದೆ. ಒಂದು ಹಂತದಲ್ಲಿ ಸರಿಯಾಗಿ ಸಾಲ ಪಾವತಿಯಾಗದ ಸಂದರ್ಭದಲ್ಲಿ ಚಕ್ರ ಬಡ್ಡಿ ಹಾಕದೆ ಬ್ಯಾಂಕ್‍ನ ಗ್ರಾಹಕರ ಹಿತ ಕಾಪಾಡುವ ಮನೋಭಾವ ಬ್ಯಾಂಕ್ ಆಡಳಿತ ಮಂಡಳಿಗೆ ಇರಬೇಕಿದೆ ಎಂದರು. ಭದ್ರತಾ ಕೊಠಡಿ ಉದ್ಘಾಟಿಸಿದ ದೇರಳಕಟ್ಟೆ ಪಾನೀರಿನ…

Read More

UN NETWORKS ಯೆನೆಪೋಯ: ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪೆರಿಯೋಡೊಂಟಿಕ್ಸ್ ವಿಭಾಗದಲ್ಲಿ ಬಾಯಿ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ದ.ಕ.ಜಿಲ್ಲಾ ಪಂ, ಹಿರಿಯ ಪ್ರಾಥಮಿಕ ಶಾಲೆ ಕುತ್ತಾರು, ಮುನ್ನೂರು, ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಾಯಿ ಆರೋಗ್ಯದ ಮತ್ತು ಸ್ವಚತೆಯ ಬಗ್ಗೆ ಅರಿವು ಮತ್ತು ಮಾಹಿತಿ ನೀಡಿ ದಂತ ಪೇಸ್ಟ್ ಮತ್ತು ದಂತ ಬ್ರಶ್ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ| ಬಿ.ಎಚ್. ಶ್ರೀಪತಿ ರಾವ್ ಅವರು ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಕೊಲಾಜ್ ಮತ್ತು ಪೋಸ್ಟರ್ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಣೆ ಮಾಡಿದರು. ಪೆರಿಯೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ| ಶಶಿಕಾಂತ್ ಹೆಗ್ಡೆಯವರು ಹೋರ ರೋಗಿಗಳಾಗಿ ಬಂದವರಿಗೆ ಬಾಯಿಯ ಆರೋಗ್ಯ ಮತ್ತು ಸ್ವಚತೆಯ ಬಗ್ಗೆ ಅರಿವು ಮತ್ತು ಮಾಹಿತಿ ನೀಡಿ ಅವರಿಗೆ ದಂತ ಪೇಸ್ಟ್ ಮತ್ತು ದಂತ ಬ್ರಶ್ ವಿತರಿಸಿದರು. ಸಹೋದ್ಯೋಗಿಗಳಾದ ಡಾ| ರಾಜೇಶ್ ಕೆ. ಎಸ್., ಡಾ| ಅರುಣ್ ಕುಮಾರ್, ಡಾ| ವಿನಿತಾ ಬೊಳೂರು, ಡಾ| ಶ್ರುತಿ ಪ್ರತಾಪ್, ಡಾ|…

Read More

UN NETWORKS ಕೊಲ್ಯ: ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಕೊಲ್ಯದಲ್ಲಿ ಶಾರಾದಾ ಬಸ್ಸು ತಂಗುದಾಣ ನಿರ್ಮಾಣ ಮಾಡಿದ್ದು ಸಾರ್ವಜನಿಕ ಪ್ರಯಾಣಿಕರ ಸಮಸ್ಯೆಯನ್ನು ಗಮನಿಸಿ ಈ ಕೊಡುಗೆ ನೀಡಲಾಗಿದೆ. ಇದರ ಸದುಪಯೋಗ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ ಎಂದು ಉದ್ಯಮಿ ಸೌಂದರ್ಯ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ನಾಗಬ್ರಹ್ಮಸ್ಥಾನ ಧರ್ಮದರ್ಶಿ ಭಾಸ್ಕರ ಐತಾಳ, ಬ್ಯಾಂಕ್ ನಿರ್ದೇಶಕ ಸದಾಶಿವ ಉಳ್ಳಾಲ, ಸೋಮೇಶ್ವರ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜಿ.ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕ್ ಪಂಚಾಯತ್ ಸದಸ್ಯ ರಾಮಚಂದ್ರ ಕುಂಪಲ ಉಪಸ್ಥಿತರಿದ್ದರು. ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಅಧ್ಯಕ್ಷ ಯಶೋಧರ ಕೊಲ್ಯ, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ರಮೇಶ್ ಕೊಲ್ಯ, ಎಡ್ವರ್ಡ್ ಲೋಬೋ, ಪ್ರಕಾಶ್ ಎಚ್. ಚಂದ್ರಶೇಖರ್ ಉಚ್ಚಿಲ್, ದೇವದಾಸ್ ಕೊಲ್ಯ, ಆದರ್ಶ ಮಿತ್ರಮಂಡಳಿಯ ಅಧ್ಯಕ್ಷ ಸಂತೋಷ್ ಕೊಲ್ಯ, ಶಾರದಾ ಮಹಿಳಾ ಮಂಡಳಿಯ ಅಧ್ಯಕ್ಷೆ ತುಳಸಿ ವಿಶ್ವನಾಥ್, ಸೌಂದರ್ಯ ಸಹಕಾರಿ ಸಂಘದ…

Read More

UN NETWORKS ಉಳ್ಳಾಲ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ರಾಷ್ಟ್ರೀಯ ಬಾಯಿ ಸ್ವಚ್ಛಾತಾ ದಿನದ ಅಂಗವಾಗಿ ಸೈಂಟ್ ಸೆಬಾಸ್ಟಿನ್ ಅನುದಾನಿತ ಹಿರಿಯ ಪ್ರಾಥಾಮಿಕ ಶಾಲೆ ಅಡಂಕುದ್ರು, ಪೆರ್ಮನ್ನೂರು ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯ ಮತ್ತು ಬಾಯಿ ಸ್ವಚ್ಛತೆಯ ಅಗತ್ಯತೆ ಬಗ್ಗೆ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಇವರು ಮಾತನಾಡುತ್ತಾ ಬಾಯಿಯ ಆರೋಗ್ಯ ದೇಹದ ಆರೋಗ್ಯಕ್ಕೆ ಅತೀ ಅಗತ್ಯ. ಬಾಯಿ ನಮ್ಮ ದೇಹದ ಹೆಬ್ಬಾಗಿಲು ಇದ್ದಂತೆ. ನಾವು ತಿನ್ನುವ ಆಹಾರ ಪಚನವಾಗಲು, ಮಾತನಾಡಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸುಂದರ ಸುದೃಡ ಹಲ್ಲುಗಳು ಅತೀ ಅಗತ್ಯ ಎಂದು ಅಭಿಪ್ರಾಯಪಟ್ಟರು. ಬಾಯಿಯ ಶುಚಿತ್ವ ಮತ್ತು ಸ್ವಚ್ಚತೆ ಕಾಪಾಡಿಕೊಂಡಲ್ಲಿ ಆರೋಗ್ಯವಂತರಾಗಿ ದೇಶದ ಪ್ರಗತಿಗೆ ವಿದ್ಯಾರ್ಥಿಗಳು ಸಹಾಯ ಮಾಡಬಲ್ಲರು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಲಿಡಿಯ ಡಿಸೋಜ, ಶಿಕ್ಷಕಿಯರಾದ ಕವಿತ, ಸುಮ, ಐರಿನ್…

Read More

UN NETWORKS ಉಳ್ಳಾಲ: ಬಡ ವಿದ್ಯಾರ್ಥಿಗಳು ಅವಿಧ್ಯಾವಂತರಾಗಬರದು ಎಂಬ ಉದ್ಯೇಶದಿಂದ ಸರಕಾರ ಹಲವಾರು ಸೌಕರ್ಯಗಳನ್ನು ಉಚಿತವಾಗಿ ನೀಡಿದ್ದು ವಿದ್ಯಾರ್ಥಿಗಳು ಸದುಪಯೋಗಗೊಳಿಸಬೇಕು ಎಂದು ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ ಹೇಳಿದರು. ಅವರು ದೇರಳಕಟ್ಟೆಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಶೂ ಭಾಗ್ಯ ಯೋಜನೆಯ ಶೂ ವಿತರಿಸಿ ಮಾತನಾಡಿದರು.ಶಾಲಾ ಕೊಠಡಿ ಇಲ್ಲದ ಕಾಲವಿತ್ತು ಎಂದು ಎಲ್ಲಾ ಕೊರತೆಗಳು ದೂರವಾಗಿದೆ ಸೌಕರ್ಯಗಳು ಹೆಚ್ಚಾಗಿದೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿ ಎಂದು ಹೆಳಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮಂಗಳೂರು ತಾ.ಪಂ ಸದಸ್ಯೆ ನೂರಜಾಹನ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಸದಸ್ಯ ಕಬೀರ್.ಡಿ, ಉಪಾಧ್ಯಕ್ಷೆ ಜಯಂತಿ, ಉದ್ಯಮಿ ಪಿ.ಎಂ ಇಬ್ರಾಹೀಂ ಕತ್ತಾರ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಐ.ಖಾದರ್ ಉಪಸ್ಥಿತರಿದರು. ಶಾಲಾ ಮುಖ್ಯ ಶಿಕ್ಷಕಿ ಸಿಲ್ಲಿಯಿಯ ಬಿ.ಎಂ ಮೆನೆಜೇಸ್ ಸ್ವಾಗತಿಸಿದರು.ಶಿಕ್ಷಕಿ ಮಮತ…

Read More

UN NETWORKS ಉಳ್ಳಾಲ: ಉಚ್ಚಿಲದ ಬೋವಿ ಶಾಲೆ 100 ವರ್ಷಗಳ ಇತಿಹಾಸವನ್ನು ಪೂರೈಸುವ ಮೂಲಕ ಬೋವಿ ಸಮುದಾಯದ ಹಿರಿಮೆಗೆ ಪಾತ್ರವಾಗಿದೆ ಎಂದು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅಭಿಪ್ರಾಯಪಟ್ಟರು.ಅವರು ಸೋಮೇಶ್ವರದ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಟುಂಬದ ಸದಸ್ಯರ ಬದ್ಧತೆ, ಹಿರಿಯ ಸಹಧರ್ಮೀಯ ಪಾಲ್ಗೊಳ್ಳುವಿಕೆ ಯಿಂದ ಯಶಸ್ವಿ ಶತವರ್ಷವನ್ನು ಪೂರೈಸಲು ಸಾಧ್ಯವಾಗಿದೆ. ಶತಮಾನೋತ್ಸವದ ಪ್ರಯುಕ್ತ ಒಂದು ವರ್ಷಗಳ ನಿರಂತರ ಚಟುವಟಿಕೆಯನ್ನು ಹಮ್ಮಿಕೊಂಡಿರುವ ಸಮಿತಿಯ ಕಾರ್ಯ ಶ್ಲಾಘನೀಯ. ಮಕ್ಕಳಲ್ಲಿ ಜವಾಬ್ದಾರಿಯ ಮನಸ್ಸಿನ ಬೀಜ ಹಾಕಿದಲ್ಲಿ ಅದು ಮರವಾಗಿ ಬೆಳೆಯಲು ಸಾಧ್ಯ. ಹಿಂದೆ ಶಾಲೆಯಲ್ಲಿ ಆಡಳಿತ ಶೂನ್ಯತೆ, ಬದ್ಧತೆ ಕಡಿಮೆಯಿತ್ತು ಅನಿಸಿತ್ತು. ಆದರೆ 2004 ರ ನಂತರ ಹಿಂದಿನ ಭಾವೈಕ್ಯದ ಭಾವನೆಗಳನ್ನು ಬೆಳೆಸುವುದರ ಜೊತೆಗೆ ಶಾಲೆಯನ್ನು ಹಂತಹಂತವಾಗಿ ಬೆಳೆಸಲು ಸಾಧ್ಯವಾಗಿದೆ ಎಂದರು. ಶತಾಯುಷಿ ನಾರಾಯಣ ಉಚ್ಚಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ರಾಘವ.ಆರ್.ಉಚ್ಚಿಲ್, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎನ್.ಜಿ.ಮೋಹನ್, ಮೂರೂರ ಬೋವಿ ಮಹಾಸಭಾ ಅಧ್ಯಕ್ಷ…

Read More

UN NETWORKS ಉಳ್ಳಾಲ: ವೆಬ್‍ಸೈಟ್‍ನಂತಹ ಅಂತರ್‍ಜಾಲ ಬಳಕೆಯಿಂದ ಕಾಲೇಜಿನೊಂದಿಗೆ ಹಳೆ ವಿದ್ಯಾರ್ಥಿಗಳ ಸಂಬಂಧ ಇನ್ನಷ್ಟು ನಿಕಟವಾಗಲಿದ್ದು, ಹಳೆ ವಿದ್ಯಾರ್ಥಿ ಸಂಘವೂ ಇನ್ನಷ್ಟು ಸದೃಢವಾಗಿ ಬೆಳೆಯಲು ಸಹಕಾರಿ ಎಂದು ಯೇನೆಪೊಯ ವಿಶ್ವವಿದ್ಯಾಲಯದ ಕುಲಪತಿ ಯೇನೆಪೊಯ ಅಬ್ದುಲ್ಲ ಕುಂಞ ಅಭಿಪ್ರಾಯಪಟ್ಟರು. ಅವರು ಯೇನೆಪೊಯ ದಂತ ಕಾಲೇಜಿನ ಅಡಿಟೋರಿಯಂನಲ್ಲಿ ಯೇನೆಪೊಯ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿ ಅಸೋಸಿಯೇಶನ್‍ನ ವೆಬ್‍ಸೈಟ್ ಮತ್ತು ಮೊಬೈಲ್ ಆ್ಯಪ್ ಮತ್ತು ಮಲೇಷಿಯಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಣ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದು ವೃತ್ತಿ ಜೀವನದಲ್ಲಿದ್ದಾರೆ. ಅಂತಹ ಸಂದರ್ಭದಲ್ಲಿ ಕಾಲೇಜಿನ ವಿಚಾರಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮದ ಮಾಹಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸುವಲ್ಲಿ ಇಂತಹ ವೆಬ್‍ಸೈಟ್‍ಗಳು ಸಹಕಾರಿಯಾಗಿದ್ದು ಹೆಚ್ಚಿನ ಹಳೆ ವಿದ್ಯಾರ್ಥಿಗಳು ಈ ವೆಬ್‍ಸೈಟ್ ಮೂಲಕ ಸಂಪರ್ಕವನ್ನು ಪಡೆದುಕೊಳ್ಳಬಹುದು ಎಂದರು. ಯೇನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಎಂ. ವಿಜಯಕುಮಾರ್ ಮಾತನಾಡಿ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯ ಮಹತ್ವದ್ದು, ಹಳೆ…

Read More

UN NETWORKS ಉಳ್ಳಾಲ: ಆಡಳಿತ ಪಕ್ಷದ ಕೌನ್ಸಿಲರುಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರ, ವಾರ್ಡುಗಳ ಅಭಿವೃದ್ಧಿಯಲ್ಲಿ ತಾರತಮ್ಯದಿಂದ ಉಳ್ಳಾಲ ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಉಳ್ಳಾಲ ನಗರಸಭೆಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕರ್ನಾಟಕ ಪ್ರದೇಶ ಜನತಾದಳದ (ಜಾತ್ಯತೀತ) ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಉಳ್ಳಾಲ್ ಖೇದ ವ್ಯಕ್ತಪಡಿಸಿದರು. ಉಳ್ಳಾಲ ನಗರಸಭೆಯ ದುರಾಡಳಿತದ ವಿರುದ್ಧ ಉಳ್ಳಾಲ ನಗರ ಜಾತ್ಯತೀತ ಜನತಾದಳದ ವತಿಯಿಂದ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಉಳ್ಳಾಲ ನಗರ ಸಭೆಯು ನಾಗರೀಕರಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ, ವಸತಿ, ಖಾತೆ ಬದಲಾವಣೆ, ಸಿಂಗಲ್ ಸೈಟ್, ಕಸ ವಿಲೇವಾರಿ ವಿಳಂಬ, ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಉಳ್ಳಾಲಕ್ಕೆ ಬೇಡಿಕೆಯಾಗಿರುವ ಉದ್ಯಾನವನ, ಕ್ರೀಡಾ ಮೈದಾನ, ಈಜುಕೊಳ ನಿರ್ಮಾಣಕ್ಕೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಭ್ರಷ್ಟಾಚಾರದಲ್ಲಿ ಇಲ್ಲಿನ ಆಡಳಿತ ಪಕ್ಷದ ಕೌನ್ಸಿಲರ್‍ಗಳು ಮುಂದಿದ್ದಾರೆ ಎಂದ ಅವರು ಈ ಆಡಳಿತ ಪಕ್ಷವನ್ನು ಕಿತ್ತೊಗೆದು ಈ ಬಾರಿ…

Read More

UN NETWORKS ಉಳ್ಳಾಲ: ಯಾವುದೇ  ಸ್ಪರ್ಧೆಗಳಲ್ಲಿ ಪ್ರಶಸ್ತಿಗಿಂತ ಪಾಲ್ಗೊಳ್ಳುವಿಕೆ ಅತೀ ಅಗತ್ಯ. ಸೋಲು ಗೆಲುವನ್ನು ಒಂದೇ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಇಂದಿನ ಸೋಲು ಮುಂದಿನ ಗೆಲುವಿಗೆ ಹಾದಿಯಾಗಲಿದೆ ಎಂದು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಜೇಶ್ವರೀ ಅಭಿಪ್ರಾಯಪಟ್ಟರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಮಂಗಳೂರು ದಕ್ಷಿಣ, ಸಮೂಹ ಸಂಪನ್ಮೂಲ ಕೇಂದ್ರ ದೇರಳಕಟ್ಟೆ ಹಾಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಲ್ಲೇಕಾರುಗುತ್ತು ರತ್ನಾವತಿ ಕೊರಗಪ್ಪ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಉಪಸ್ಥಿತರಿದ್ದರು.ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಶಿಕ್ಷಕ ರವಿ ಕುಮಾರ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಸಂಚಾಲಕಿ ಸೌಮ್ಯ ಆರ್ ಶೆಟ್ಟಿ ವಂದಿಸಿದರು.

Read More