Author: UllalaVani

Kannada News From Coastal Karnataka

UN NETWORKS ಕೊಣಾಜೆ: ಕೇಸರಿಮಿತ್ರ ವೃಂದ, ಕೇಸರಿ ಮಾತೃ ಮಂಡಳಿ ಕುಂಪಲ ಹಾಗೂ ರೋಟರಿ ಕ್ಲಬ್ ಮಂಗಳೂರು ಇವರ ಸಹಭಾಗಿತ್ವದಲ್ಲಿ “ಆಟಿಡೊಂಜಿ ದಿನ” ಆಟಿಯ ವಿಶೇಷ ಕಾರ್ಯಕ್ರಮ ಅಸೈಗೋಳಿಯ ಅಭಯ ಆಶ್ರಯ ಆತ್ಮ ದೇಗುಲದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಸರಿ ಮಿತ್ರ ವೃಂದದ ಅಧ್ಯಕ್ಷ ನವೀನ್ ಕುಜುಮಗದ್ದೆ ವಹಿಸಿದ್ದರು. ಕಾರ್ಯಕ್ರಮವನ್ನು ಯೋಧ ಸುದೀನ್ ಬೇಕಲ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಪೈ,ಅಬಕಾರಿ ಇಲಾಖೆ ಮಂಗಳೂರು ವೃತ್ತ ನಿರೀಕ್ಷಕ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುಮಾರ್ ಕುದ್ರೋಳಿ, ತುಳುನಾಡು ಚಿಟ್ಸ್ ಪ್ರೈ. ಲಿ. ಮಾಲಕ ಸಂದೇಶ್ ಶೆಟ್ಟಿ , ಉಳ್ಳಾಲ ಅವಿನಾಶ್ ಎಂಟಪ್ರೈಸಸ್ ಮಾಲಕ ಬಿ. ಡಿ. ಗೋಪಾಲ್, ತೊಕ್ಕೊಟ್ಟು ಶಿವಾಜಿ ಪ್ರೆಂಡ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಿರಿಲ್ ರೊಬರ್ಟ್ ಡಿಸೋಜ್, ಮಾತೃ ಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮೀ ಕುಂಪಲ, ಆತ್ಮ ದೇಗುಲ ಅಭಯಾಶ್ರಯ ಮೇಲ್ವಿಚಾರಕಿ ನಳಿನಿ ಉಪಸ್ಥಿತರಿದ್ದರು. ಆಕಾಶವಾಣಿ ಮಂಗಳೂರು ತುಳು ವಾರ್ತಾ ವಾಚಕ ರಘುನಾಥ್…

Read More

UN NETWORKS ಪಜೀರು: ಹಿರಿಯರ ಪರಿಶ್ರಮದ ಫಲವಾಗಿ ಗ್ರಾಮಚಾವಡಿ – ಬೋಳಿಯಾರ್ ರಸ್ತೆ ಆಭಿವೃದ್ಧಿಯಾಗಿದ್ದು, ಇದೀಗ ಸಂಪೂರ್ಣ ಡಾಮರೀಕರಣಗೊಂಡ ರಸ್ತೆ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು ಶಾಸಕರ ಆನುದಾನದಿಂದ ಗ್ರಾಮದ ಅಭಿರ್ವದ್ಧಿ ಕಾರ್ಯ ನಡೆದಿದೆ ಎಂದು ಪಜೀರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭರತ್‍ರಾಜ್ ಶೆಟ್ಟಿ ಪಜೀರುಗುತ್ತು ಅಭಿಪ್ರಾಯಪಟ್ಟರು. ಪಜೀರು ಗ್ರಾಮದ ಅಗರಿಮಾರ್ ಎಂಬಲ್ಲಿ ನೂತನ ಟ್ರಾನ್ಸ್ ಫಾರ್ಮರ್ ಹಾಗೂ ಗಿರಿಜಾ ಪೂಜಾರಿ ಎಂಬವರ ಮನೆಗೆ ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ವ್ಯವಸ್ಥೆಗೆ ಚಾಲನೆ ನೀಡಿ ಮಾತಾಡಿದ ಆವರು ಬಂಟ್ವಾಳ ಅಥವಾ ಮಂಗಳೂರು ತಾಲೂಕು ನಡುವೆ ತೀರಾ ಕುಗ್ರಾಮವಾಗಿದ್ದ ಪಜೀರು ವೆಂಕಪ್ಪ ಕಾಜವ ಹಾಗೂ ತಾನು ಅಧ್ಯಕ್ಷತೆ ಅವಧಿಯಲ್ಲಿ ಗ್ರಾಮಚಾವಡಿ-ಬೋಳಿಯಾರ್ ರಸ್ತೆ ಸಂಪರ್ಕಿಸಲಾಗಿತ್ತು. ಈಗಾಗಲೇ ಸಚಿವ ಯು.ಟಿ.ಖಾದರ್ ಅವರು ಬಿ.ಸಿ.ರೋಡು-ಗ್ರಾಮಚಾವಡಿ ರಸ್ತೆ, ಸೇತುವೆ ನಿರ್ಮಾಣಕ್ಕೆ 3.40 ಕೋಟಿ ಅನುದಾನ ನೀಡಿದ್ದು ಸೇತುವೆ ಶೀಘ್ರ ಉದ್ಘಾಟನೆ ನಡೆಯಲಿದೆ. ರಸ್ತೆ ನಿರ್ಮಾಣಕ್ಕೆ ನಿರ್ಮಲ್ ಶೆಟ್ಟಿ ಅವರು ಬೆಲೆ ಬಾಳುವ ಜಮೀನು ಬಿಟ್ಟುಕೊಟ್ಟಿದ್ದಾರೆ ಎಂದರು. ಪಜೀರ್ ಗ್ರಾಮ ಪಂಚಾಯತ್…

Read More

UN NETWORKS ಉಳ್ಳಾಲ: ಕೆಸರು ಗದ್ದೆ ಕ್ರೀಡಾಕೂಟದಿಂದ ಆರೋಗ್ಯವೃದ್ಧಿಯೊಂದಿಗೆ ಗದ್ದೆಯ ಕೃಷಿಯ ಮಹತ್ವದ ಅರಿವು ಮೂಡಲು ಸಾಧ್ಯ ಎಂದು ಪಾನೀರು ಚರ್ಚ್‍ನ ಧರ್ಮಗುರು ರೆ| ಫಾ| ಡೆನ್ನಿಸ್ ಸುವಾರಿಸ್ ಅಭಿಪ್ರಾಯಪಟ್ಟರು. ಪಾನೀರು ಚರ್ಚ್‍ನ ಕಥೊಲಿಕ್ ಸಭಾ ಘಟಕದ ವತಿಯಿಂದ ಪಾನೀರು ಚರ್ಚ್‍ನಲ್ಲಿ ಪ್ರಥಮ ಬಾರಿಗೆ ಡೆನ್ಸಿಲ್ ಡೆಸ್ಸಾ ಇವರ ಗದ್ದೆಯಲ್ಲಿ ಪಾನೀರು ಚರ್ಚ್ ವ್ಯಾಪ್ತಿಯ ವಾರ್ಡ್‍ಗಳ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಸಂದೇಶ ನೀಡಿದರು. ಕಾರ್ಯಕ್ರಮಕ್ಕೆ ಮೊಗರ್ನಾಡು ಚರ್ಚಿನ ಧರ್ಮಗುರು ರೆ| ಫಾ| ದೀಪಕ್ ಡೆಸ್ಸಾ ಪಾನೀರು ಚರ್ಚ್‍ನ ಬ್ರದರ್ ಜೋನ್ಸನ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಲಿಯಾಸ್ ಡಿ’ಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್ ಕಥೊಲಿಕ್ ಸಭಾ ಮಂಗಳೂರು ದಕ್ಷಿಣ್ ವಾರಾಡೊ ಅಧ್ಯಕ್ಷ ಅರುಣ್ ಡಿ’ಸೋಜ, ಕಾರ್ಯಕ್ರಮ ಮಹಾಪೋಷಕ ಜ್ಯೋತಿ ರೆಮ್ಮಿ ಗದ್ದೆಯ ಮಾಲಕ ಡೆನ್ಸಿಲ್ ಡೆಸ್ಸಾ ಕಥೊಲಿಕ್ ಸಭಾ ಪಾನೀರು ಘಟಕದ ಅಧ್ಯಕ್ಷ ಸ್ಟ್ಯಾನಿ ರೊಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯಕ್ರಮ ಅಶ್ವಿನ್ ಮೊಂತೆರೊ ನಿರೂಪಿಸಿದರು. ರುವಿತಾ ಮಿನೇಜಸ್ ವಂದಿಸಿದರು.…

Read More

UN NETWORKS ಉಳ್ಳಾಲ: ಉಳ್ಳಾಲ ಉಳಿಯದ ಉಳ್ತಾಲ್ತಿ ಧರ್ಮ ಅರಸರ ಕ್ಷೇತದ ಅಂತ ಗುರಿಕಾರ ರಾಜೇಶ್ ಹಾಗೂ ಸುಕನ್ಯಾ ದಂಪತಿ ಏಕೈಕ ಪುತ್ರ ರಿಷಿತ್ ಕುಮಾರ್ (12 ವರ್ಷ) ರವಿವಾರ ಬೆಳಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಜೆಪ್ಪು ಸಂತ ಜೆರೋಸಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ರಿಷಿತ್ ಕುಮಾರ್ ಕಳೆದ ಎರಡು ವರ್ಷಗಳಿಂದ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್)ನಿಂದ ಬಳಲುತ್ತಿದ್ದರು. ಇವರಿಗೆ ಆರಂಭದಲ್ಲಿ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಕೂಡಾ ಮಾಡಲಾಗಿತ್ತು. ಆರ್ಥಿಕವಾಗಿ ಮಧ್ಯಮ ವರ್ಗದ ಬಾಲಕನ ಚಿಕಿತ್ಸೆಗಾಗಿ ಆತ ಕಲಿಯುತ್ತಿದ್ದ ಶಾಲೆಯಲ್ಲಿ ಮಕ್ಕಳು ಸುಮಾರು 4 ಲಕ್ಷ ರೂ.ಗಳಷ್ಟು ಹಣವನ್ನು ಸಂಗ್ರಹಿಸಿ ನೀಡಿದ್ದರು. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಊರವರು ಕೂಡಾ ತಮ್ಮ ಪುತ್ರನನ್ನು ಉಳಿಸಿಕೊಳ್ಳಲು ಸಹಕರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿಷಿತ್ ರವಿವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.…

Read More

UN NETWORKS ಉಳ್ಳಾಲ: ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ನಡೆಯುವ ‘ಸ್ವಚ್ಛ ಮಂಗಳೂರು ಅಭಿಯಾನ’ದಡಿ ಉಳ್ಳಾಲ ಅಳೇಕಲದ ಮದನಿ ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್ ಘಟಕಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಪ್ರೌಢ ಶಾಲಾ ವಿಭಾಗದ ಸಂಚಾಲಕ ಯು.ಎನ್. ಇಬ್ರಾಹೀಂ ರಾಮಕೃಷ್ಣ ಮಿಷನ್‌ನ ಈ ಅಭಿಯಾನ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಪ್ರೌಢಶಾಲಾ ವಿಭಾಗದ ಅಧ್ಯಾಪಕ ಪಿ.ಡಿ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕಿ ಪ್ರಜ್ಞಾ ವಂದಿಸಿದರು.

Read More

UN NETWORKS ಉಳ್ಳಾಲ: ಆದರ್ಶ ಮಿತ್ರ ಮಂಡಳಿ, ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಕೊಲ್ಯ ಆಯ್ಕೆಯಾಗಿದ್ದಾರೆ. ಕೊಲ್ಯ ಶಾರದಾ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಶ್ರವಣ್ ಕುಜುಮಗದ್ದೆ, ಗುರುಪ್ರಸಾದ್ ಕೆ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್ ಕುಜುಮಗದ್ದೆ, ಜತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಶೈಲೇಶ್ ಕನೀರುತೋಟ, ಕೋಶಾಧಿಕಾರಿಯಾಗಿ ಸಚಿನ್ ಸಾಲ್ಯಾನ್ ಕೊಲ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನಿಖಿಲ್ ರಾಜ್ ಕೊಲ್ಯ, ಕ್ರೀಡಾ ಸಂಚಾಲಕರುಗಳಾಗಿ, ಅನುಷ್, ಹೃತಿಕ್, ಪ್ರದೀಪ್ ಕುಜುಮಗದ್ದೆ, ಹೃತಿಕ್, ಮೋಹನ್ ಮಂಕುಹಿತ್ಲು, ಚಂದ್ರಮೋಹನ್ ಕೆ.ಪಿ, ಮನು ಕಟ್ಟೆಮನೆ ಆಯ್ಕೆಯಾದರು.

Read More

UN NETWORKS ಉಳ್ಳಾಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾ), ನಗರಸಭೆ ಉಳ್ಳಾಲ ಮತ್ತು ಯೆನೆಪೋಯ ಮೆಡಿಕಲ್ ವೈದ್ಯಕೀಯ ಕಾಲೇಜು ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ `ವಿಶ್ವ ಸ್ತನ್ಯಪಾನ ಸಪ್ತಾಹ’ ಹಾಗೂ `ಬೇಟಿ ಪಡಾವೊ’ ಕಾರ್ಯಕ್ರಮ ಮಂಗಳವಾರ ಉಳ್ಳಾಲ ನಗರಸಭೆ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಗರಸಭೆಯ ಪೌರಾಯುಕ್ತೆ ವಾಣಿ ಆಳ್ವ ಉದ್ಘಾಟಿಸಿ ಮಾತನಾಡಿ ತಾಯಿ ಹಾಲಿನ ಮಹತ್ವ ಅರಿತು ಇಂದಿನ ಯುವ ಪೀಳಿಗೆ ಮುಂದುವರಿಯುವ ಅವಶ್ಯಕತೆಯನ್ನು ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಹಾರ ಮತ್ತು ಪೋಷಣಾ ಮಂಡಳಿಯ ಅಧಿಕಾರಿ ದಶರಥ ಪಾಂಡೆ ವಹಿಸಿ ಮಾತನಾಡಿ ತಾಯಿ ಹಾಲಿನಲ್ಲಿನ ಕೊಲೆಸ್ಟ್ರಾಲ್ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ತಿಳಿಸಿದರು. ಯೆನೆಪೆಪೋಯ ಮೆಡಿಕಲ್ ಕಾಲೇಜು, ಗ್ರಾಮೀಣ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರ ವೈದ್ಯ ಡಾ| ಸುದರ್ಶನ್ ಸ್ತನ್ಯಪಾನವನ್ನು ನೀಡುವುದರಿಂದ ತಾಯಿ ಮತ್ತು ಮಗುವಿಗೆ ಆಗುವ ಪ್ರಯೋಜನದ ಬಗ್ಗೆ , ತಾಯಿ ಹಾಲಿನಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ…

Read More

UN NETWORKS ಉಳ್ಳಾಲ: ವಿದ್ಯಾರ್ಥಿನಿಯರು ಓದುವ ಹವ್ಯಾಸವನ್ನು ಬೆಳೆಸಿ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಕಣಚೂರು ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ವಿಶ್ರಾಂತ ಕುಲಪತಿ ಪ್ರೊ| ಅಬ್ದುಲ್ ರೆಹಮಾನ್ ಆಭಿಪ್ರಾಯಪಟ್ಟರು. ವಿದ್ಯಾರ್ಥಿ ಸಂಘದ ಉದ್ಛಾಟನೆ ಮತ್ತು ಪ್ರೆಶರ್ಸ್‍ಡೇ ಇತ್ತೀಚೆಗೆ ಕಣಚೂರು ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಛಾಟಿಸಿ ಮಾತನಾಡಿ ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಿಗೆ ವಿದ್ಯಾರ್ಥಿಗಳು ಮಾರು ಹೋಗುತ್ತಿದ್ದಾರೆ. ಜಾಲತಾಣಗಳ ದುರುಪಯೋಗಪಡಿಸಿಕೊಳ್ಳದೇ, ಅವಶ್ಯಕತೆ ಇದ್ದಾಗ ಮಾತ್ರ ಅದರ ಉಪಯೋಗ ಪಡೆಯಬೇಕು. ಪದವಿ ಶಿಕ್ಷಣದ ಮಹತ್ವವನ್ನು ಅರಿತು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಸಂಸ್ಥೆಯ ಅಧ್ಯಕ್ಷ ಯು.ಕೆ ಮೋನು ವಹಿಸಿ ವಿದ್ಯಾರ್ಥಿನಿಯರು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು, ಆ ಗುರಿಯನ್ನು ಸಾಧಿಸುವ ಕಡೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ, ಎಲ್ಲವನ್ನು ಅರಿತು, ಜಯಿಸಿ, ತನ್ನ ಕಾಲ ಮೇಲೆ ತಾನು ಸ್ವಾತಂತ್ರವಾಗಿ ನಿಲ್ಲುವ ವಿದ್ಯಾರ್ಥಿ ಉತ್ತಮ ಬದುಕನ್ನು ನಡೆಸಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ…

Read More

UN NETWORKS ಉಳ್ಳಾಲ: ವಿದ್ಯುತ್ ಶಾಕ್ ತಗಲಿ ಶೀಟಿನ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಉಳ್ಳಾಲದ ಸೈಯ್ಯದ್ ಮದನಿ ದರ್ಗಾ ವಠಾರದಲ್ಲಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ಇನೋಳಿ ಮಲಾರು ನಿವಾಸಿ ಯೂಸುಫ್ (22) ಮೃತರು. ಮಹಿಳಾ ಪ್ರಾರ್ಥನಾಲಯದ ಕಟ್ಟಡದ ಮೇಲಿನ ಭಾಗಕ್ಕೆ ಶೀಟ್ ಹಾಕುವ ಕೆಲಸಕ್ಕೆ ಗುತ್ತಿಗೆ ವಹಿಸಲಾಗಿತ್ತು. ಗುತ್ತಿಗೆದಾರರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೂಸುಫ್ ಕೊನೆಯ ಶೀಟ್ ಹಾಕುವ ಸಂದರ್ಭ , ವಿದ್ಯುತ್ ತಂತಿಗೆ ತಗಲಿ ಶಾಕ್ ಉಂಟಾಗಿತ್ತು. ಕೂಡಲೇ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಯೂಸುಫ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

UN NETWORKS ಉಳ್ಳಾಲ: ಕುತ್ತಾರು ರಿಕ್ಷಾ ಪಾರ್ಕಿನಲ್ಲಿ ನಡದ ವಾಗ್ವಾದಕ್ಕೆ ಸಂಬಂಧಿಸಿ ರಿಕ್ಷಾ ಚಾಲಕನ ಕೊಲೆಗೆ ಯತ್ನಿಸಿದ ಇಬ್ಬರಲ್ಲಿ ಓರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮದನಿನಗರ ನಿವಾಸಿ ಮಹಮ್ಮದ್ ಕಬೀರ್ ತಸ್ಲೀಂ ಯಾನೆ ತಚ್ಚಿ (21) ಬಂಧಿತ.ರಿಕ್ಷಾ ಚಾಲಕ ಅಜಿತ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ರಿಕ್ಷಾ ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರಾದ ಅಜಿತ್ ಮತ್ತು ಮಹಮ್ಮದ್ ಆಲಿ ಎಂಬವರ ನಡುವೆ ವಾಗ್ವಾದ ನಡೆದಿತ್ತು. ಈ ಸಂಬಂಧ ಮಹಮ್ಮದ್ ಆಲಿ ತನ್ನ ಸಂಬಂಧಿಕನೇ ಆಗಿರುವ ನಾಲ್ಕು ಪ್ರಕರಣಗಳ ಆರೋಪಿ ಆಗಿರುವ ಮಹಮ್ಮದ್ ಕಬೀರ್ ಯಾನೆ ತಚ್ಚಿ ಎಂಬಾತನನ್ನು ಕರೆದಿದ್ದ. ಇಬ್ಬರು ಸೇರಿ ಅಜಿತ್ ಮೇಲೆ ಚೂರಿಯಿಂದ ಇರಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯನ್ನು ಒಡ್ಡಿದ್ದಾರೆ. ಬಳಿಕ ಅಜಿತ್ ಸ್ಥಳದಿಂದ ಪರಾರಿಯಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಅಲ್ಲಿಗೆ ಬಂದ ಮಹಮ್ಮದ್ ಆಲಿ, ತಚ್ಚಿ ವಿರುದ್ಧ ದೂರು ನೀಡಿದಲ್ಲಿ ತಲೆ ಹೋಗಬಹುದು ಎಂದು ಕೊಲೆಬೆದರಿಕೆ ಒಡ್ಡಿದ್ದನು. ಇದೀಗ ಬಂಧನಕ್ಕೊಳಗಾಗಿರುವ…

Read More