Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ನೂತನ ಅಧ್ಯಕ್ಷರಾಗಿ ಯತೀಂದ್ರ ಬಹುಮಾನ್ ಮೂಡಬಿದ್ರೆ ಆಯ್ಕೆಯಾಗಿದ್ದಾರೆ. ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷರಾಗಿದ್ದ ದಿ. ದೇವೋಜಿ ರಾವ್ ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಜಪ್ಪಿನ ಮೊಗರು ಶಿವಾಜಿ ನಗರದ ಆರ್ಯ ಮರಾಠ ಭವನದಲ್ಲಿ ಉಪಾಧ್ಯಕ್ಷ ಕೃಷ್ಣ ಧರೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಗುಣಸಾಗರ್ ವಾಗ್ಮಾನ್ ಹಾಗೂ ಸಹಾಯಕರಾಗಿ ಅನಂತ್ ಪದ್ಮರಾಜ್ ಸಿಂಧ್ಯ ಕಾರ್ಯ ನಿರ್ವಹಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಬಹುಮಾನ್, ಕೋಶಾಧಿಕಾರಿ ಶ್ರೀಧರ್ ಬಹುಮಾನ್, ಜತೆ ಕಾರ್ಯದರ್ಶಿ ಶ್ರೀಧರ್ ಪಾಟೀಲ್, ಮಹಿಳಾ ವೇದಿಕೆ ಸಂಚಾಲಕಿ ಕೌಶಿಕಲಾ ಮೋಹನ್, ಯುವ ವೇದಿಕೆ ಸಂಚಾಲಕ ಲೋಕೇಶ್ ಬಹುಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೀವ ರಾವ್ ಸಿಂಧ್ಯಾ, ಮೋಹನ್ ರಾವ್ ಭೊಂಸ್ಲೇ, ಗಿರೀಶ್ ರಾವ್ ಭೊಂಸ್ಲೆ, ವಾಮನ ವಾಗ್ಮಾನ್ ಮುಲ್ಲಂಗೊಡ್, ನೀಳೋಜಿ ರಾವ್ ಭೊಂಸ್ಲೆ, ಬಿ ಜೆ ಚಂದ್ರಶೇಖರ್ ಪಾಟೀಲ್,…

Read More

UN NETWORKS ಉಳ್ಳಾಲ: ಹಿರಾ ಮಹಿಳಾ ಕಾಲೇಜು ಬಬ್ಬುಕಟ್ಟೆ, ಇಲ್ಲಿನ ವಾಣಿಜ್ಯ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದಿಂದ ಕೈಗಾರಿಕಾ ಭೇಟಿಯನ್ನು ತೃತೀಯ ಬಿ.ಎ, ಮತ್ತು ಬಿ.ಕಾಂ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರು ಬೈಕಂಪಾಡಿಯಲ್ಲಿರುವ ಕಲ್ಬಾವಿ ಕ್ಯಾಶ್ಯೂಇಂಡಸ್ಟ್ರೀಸ್ ಮತ್ತು ಕುಲಶೇಖರದ ಹಾಲಿನ ಡೈರಿಗೆ ಭೇಟಿ ನೀಡಿದರು. ಮಾರ್ಗದರ್ಶಕರ ಸಹಾಯದಿಂದ ವಿವಿಧ ವಿಭಾಗಗಳಲ್ಲಿ ಉತ್ಪನ್ನಗೊಳ್ಳುವ ವಸ್ತುಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿನಿಯರು ಪಡೆಯುವಂತಾಯಿತು. ಭೇಟಿ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅರ್ಚನ, ಮುಬೀನ, ಪ್ರಮಿಳ ಕೆ. ಮತ್ತು ಶಾಂತಿ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿಯಾದ ಉಮ್ಮರ್ ಬಾವ ಅವರು ಉಪಸ್ಥಿತರಿದ್ದರು.

Read More

UN NETWORKS ಮಂಜೇಶ್ವರ: ಅರ್ಬುದ ರೋಗದಿಂದ ಬಳಲುತ್ತಿರುವ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಹರಿಶ್ಚಂದ್ರ ಶೆಟ್ಟಿಗಾರ್ ಪತ್ನಿ ಗೀತಾ ಶೆಟ್ಟಿಗಾರ್ ಅವರಿಗೆ ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ತನ್ನ 15ನೇ ಯೋಜನೆಯ ಸಹಾಯ ಹಸ್ತ ನೀಡಿದರು. ತೌಡುಗೋಳಿ ಸಮೀಪದ ಗೀತಾ ಅವರ ಪತಿ ಕೂಲಿ ಕೆಲಸ ಮಾಡುತ್ತಾ ಮೂರು ಮಕ್ಕಳ ವಿದ್ಯಾಭ್ಯಾಸ, ದಿನ ನಿತ್ಯದ ಮನೆ ಖರ್ಚು, ಪತ್ನಿಯ ಔಷಧಿಯ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಮಗಳು ಕಲಿಕೆಯಲ್ಲಿ ಮುಂದಿದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ವಿಧ್ಯಾಭ್ಯಾಸ ಅರ್ಧದಲ್ಲಿ ಮೊಟಕುಗೊಳಿಸಿದ್ದರು. ಇದೀಗ ಮನೆ ಕೆಲಸ ಪೂರೈಸಿ ತೆರಳುತ್ತಿದ್ದಾರೆ. ಅವರ ಸಂಕಷ್ಟಮಯ ಬದುಕಿನ ಬವಣೆಯನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ಭಾನುವಾರ ಗೀತಾ ಅವರ ಮನೆಗೆ ತೆರಳಿ ಪತಿ ಹರಿಶ್ಚಂದ್ರ ಶೆಟ್ಟಿಗಾರರಿಗೆ ಸಂಸ್ಥೆಯ ಗೌರವ ಮಾರ್ಗದರ್ಶಕ ಶ್ರೀ ರಾಜ ಬೆಳ್ಚಪ್ಪಾಡ ಮನೆ ದೇವರಲ್ಲಿ ಪ್ರಾರ್ಥಿಸಿ 10ಸಾವಿರ ರೂ. ನೀಡಿದರು. ಸಂಸ್ಥೆಯ ಪಧಾಧಿಕಾರಿಗಳಾದ ಆಶಾ…

Read More

UN NETWORKS ಮಂಜೇಶ್ವರ:ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ಜುಲೈ ತಿಂಗಳ 16 ನೇ ಯೋಜನೆಯ ಸಹಾಯ ಹಸ್ತವನ್ನು ತಲಪಾಡಿ ಬಳಿಯ ನಾರ್ಲ ನಿವಾಸಿ ಮೋಹನ್ – ಹೇಮಲತಾ ದಂಪತಿ ಪುತ್ರ ರೋಶನ್ (10) ರವರಿಗೆ ನೀಡಲಾಯಿತು. ರೋಶನ್ ರವರು ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜಾಂಡೀಸ್ ಕಾಯಿಲೆಯಿಂದ ಬಳಲಿ ದಾಖಲಾಗಿದ್ದಾನೆ.ಉಚ್ಚಿಲ ಬೋವಿಸ್ ಫ್ರೌಡ ಶಾಲೆಯ 10 ನೇ ತರಗತಿಯ ವಿಧ್ಯಾರ್ಥಿಯಾಗಿರುವ ರೋಶನ್ ರಿಗೆ ಕಳೆದ ಕೆಲವು ದಿನಗಳಿಂದ ಜ್ವರ ಬಾಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪೋಷಕರು ಉಚ್ಚಿಲದಲ್ಲಿ ಕ್ಯಾಂಟೀನ್ ಹೊಂದಿದ್ದು, ಇದರಲ್ಲಿ ಸಿಗುವ ಅಲ್ಪ ಆದಾಯವೇ ಇವರ ಜೀವನ. ರೋಶನ್ ನ ಸಹೋದರಿ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತಿದ್ಧಾರೆ. ರೋಶನ್ ರಿಗೆ ಬಾಧಿಸಿದ ಜ್ವರದಿಂದ ಇದೀಗ ಲಿವರ್ಗೂ ತೊಂದರೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದೀಗ ಆಸ್ಪತ್ರೆಯ ಕರ್ಚು ವೆಚ್ಚಗಳು ಅಧಿಕವಾಗಿದ್ದು, ಮನೆಯವರಿಗೆ ಇದೀಗ ಏನು ಮಾಡಲು ಅಸಾಧ್ಯವಾಗಿದೆ. ಇವರ ಮನೆ ಮಂದಿಯ ಸಂಕಷ್ಟಮಯ…

Read More

UN NETWORKS ತೊಕ್ಕೊಟ್ಟು: ಮೇಲ್ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಮುಗಿಸಿತ್ತೇವೆ ಎಂದು ಭರವಸೆ ನೀಡಿರುವ ಸಂಸದರು ನೀಡಿರುವ ಭರವಸೆ ಹುಸಿಯಗಿದ್ದು ಕೊಟ್ಟ ಮಾತನ್ನು ಉಳಿಸಿ ಬಳಿಕ ಚುನಾವಣೆಗೆ ಮತ ಕೇಳಲು ಬನ್ನಿ ಎಂದು ಎಂದು ವಿಧಾನ ಪರಿಷರ್ತ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಲಹೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ, ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟಿನಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಆವರು ಮಾತನಾಡಿದರು.ಹೆದ್ದಾರಿ ಮೇಲ್ಸೇತುಗೆ ಕಾಮಗಾರಿಗೆ ಎಂಟು ವರ್ಷ ಸಂದಿದೆ. ಕಳೆದ ಎಂಟು ವರ್ಷಗಳಿಂದ ಮುಗಿಯದ ಕೆಲಸಕ್ಕೆ ಮತ್ತೆ ಮತ್ತೆ ಗಡುವು ನೀಡಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭ ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿರುವ ಅವರ ಬಗ್ಗೆ ಜನ ಬೇಸರಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಸೋಲು ಖಚಿತ. ಆದರೂ ಮತ ಕೇಳಲು ಜನರ ಬಳಿ ಹೋಗಬೇಕಾದರೆ ಅವರು ನೀಡಿರುವ ಗಡುವಿನೊಳಗಾದರೂ ಕಾಮಗಾರಿ ಮುಗಿಸಿ ಎಂದು ಹೇಳಿದರು.…

Read More

UN NETWORKS ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳ ಪುಣ್ಯಕೋಟಿನಗರ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ರಾಮಾಯಣ ಮಾಸಾಚರಣೆ ಪ್ರಯುಕ್ತ ಕೀರ್ತನ ಪ್ರವೀಣ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಅವರು “ಜಟಾಯು ಮೋಕ್ಷ” ಹರಿಕಥಾ ಸತ್ಸಂಗ ಬುಧವಾರ ನಡೆಸಿಕೊಟ್ಟರು. ದುಗ್ಗಪ್ಪ ಅಡ್ಕ ಹಾರ್ಮೋನಿಯಂ ಸಾಥ್ ನೀಡಿದರು. ಶಾಲಾ ಹಳೆವಿದ್ಯಾರ್ಥಿ ಕೌಶಿಕ ಮಂಜನಾಡಿ ತಬಲಾ ವಾದನದಲ್ಲಿ ಸಹಕರಿಸಿದರು. ಉಪ ಪ್ರಾಂಶುಪಾಲ ಸೋಮಶೇಖರ ಎಂ ಹಾಗೂ ಪ್ರಶಾಂತ್ ಕುಮಾರ್ ಮುದುಂಗಾರುಕಟ್ಟೆ ಉಪಸ್ಥಿತರಿದ್ದರು. ಸಹಶಿಕ್ಷಕ ಶ್ರೀಹರಿ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸಹಶಿಕ್ಷಕ  ಶ್ರೀನಿವಾಸ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಉಳ್ಳಾಲ: ತುಳುನಾಡಿನ ಜನರನ್ನು ಹೊರ ರಾಜ್ಯದವರಂತೆ ನೋಡುತ್ತಿರುವ ಸರಕಾರ ಭಾಷಾವಾರು ಪ್ರಾಂತ್ಯವಾದ ತುಳುನಾಡಿಗೆ ಪ್ರತ್ಯೇಕ ರಾಜ್ಯ ನೀಡುವಲ್ಲಿ ಸಹಕರಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಪ್ರದೇಶವು ತುಳುನಾಡಿನ ಭಾಗವಾಗಿದೆ, ಕರ್ನಾಟಕ ಮತ್ತು ಕೇರಳ ಸರಕಾರದೊಂದಿದೆ ಹಂಚಿಕೆಯಾದ ತುಳುನಾಡು ಇಂದು ಎರಡೂ ರಾಜ್ಯದ ದಬ್ಬಾಳಿಕೆ, ಅನ್ಯಾಯಗಳಿಂದ ತತ್ತರಿಸಿಹೋಗಿದೆ, ತುಳುನಾಡಿನ ಮೇಲೆ ಮಲತಾಯಿ ಧೋರಣೆ ಮಾಡುತ್ತಿರುವ ಸರಕಾರ ಪರಿಸರವನ್ನು ಹಾಳುಮಾಡುವ ಯೋಜನೆಗಳನ್ನು ಹಾಕಿಕೊಂಡು ತುಳುನಾಡಿನ ಪರಿಸರ ನಾಶದ ಜೊತೆಗೆ ಜನರ ಸ್ವಾಸ್ಥ್ಯವನ್ನೂ ಹಾಳುಗೆಡವುತ್ತಿದೆ, ಅಭಿವೃಧ್ದಿಯ ವಿಚಾರದಲ್ಲಿ ತುಳುನಾಡನ್ನು ಕಡೆಗಣಿಸಲಾಗಿದೆ,ಪ್ರತೀ ಬಜೆಟ್ನಲ್ಲೂ ತುಳುನಾಡನ್ನು ಕಡೆಗಣಿಸಲಾಗಿದೆ, ನೇತ್ರಾವತಿ ನದಿ ತಿರುವು ಯೋಜನೆಯ ಮೂಲಕ ತುಳುಣಾಡಿನ ಕೃಷಿಕರಿಗೆ ನದಿಪಾತ್ರರಿಗೆ ಅನ್ಯಾಯ ಮಾಡುತ್ತಿದೆ. ಈ ಮೂಲಕ ಪರಿಸರ ನಾಶವನ್ನೂ ಮಾಡುತ್ತಿದೆ ಪ್ರಶ್ನಿಸಿದೆ ನಮ್ಮನ್ನೇ ದಬಾಯಿಸಲಾಗುತ್ತಿದೆ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಬಾಷೆ ಹಾಗೂ ಸಂವಿಧಾನದ ಎಂಟನೇ…

Read More

UN NETWORKS ತಲಪಾಡಿ: ಭಾರತೀಯ ಸೇನೆಯು ಪಾಕಿಸ್ತಾನದ ಹಿಡಿತದಲ್ಲಿದ್ದ ಕಾರ್ಗಿಲ್‍ನ್ನು ವಶಪಡಿಸಿದ ದಿನವಾದ ಜು. 26ನ್ನು ನೆನಪಿಸುವ ಸಲುವಾಗಿ ಕಾರ್ಗಿಲ್ ವಿಜಯ ದಿವಸವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭೂಸೇನೆಯ ನಿವೃತ್ತ ಸೈನಿಕ ಹೇಮಂತ್ ಕುಮಾರ್ ಭಾರತೀಯ ಸೇನೆ ಮತ್ತು ಅದರ ಭವ್ಯ ಪರಂಪರೆ ಮತ್ತು ಕಾರ್ಗಿಲ್ ಕದನದಲ್ಲಿ ಭಾಗವಹಿಸಿದ್ದ ತಮ್ಮ ರೋಚಕ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನ್‍ಕರ್ ಮಾತನಾಡಿ ಸೈನಿಕನ ಜೀವನ ಹೇಗೆ ಇತರರಿಗೆ ಮಾದರಿಯಾಗಬಲ್ಲದು ಮತ್ತು ಭಾರತೀಯ ಸೇನೆಯಲ್ಲಿ ಲಭ್ಯವಿರುವ ವಿಪುಲ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಸಲುವಾಗಿ ಶಾಲೆಯ ಅಂತರ್‍ದಳಗಳ ನಡುವೆ ಅಮರ್ ಜವಾನ್ ಎಂಬ ವಿಷಯ ಆಧಾರಿತ ಪ್ರತಿಭಾ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಸೈನಿಕರ ಜೀವನದ ತ್ಯಾಗ ಮತ್ತು ಬಲಿದಾನಗಳ ಮಹತ್ವವನ್ನು ಅರಿತುಕೊಂಡರು.

Read More

UN NETWORKS ಉಳ್ಳಾಲ: ನಾಯಕತ್ವ ಗುಣದೊಂದಿಗೆ ಸಂಘಟನಾ ಚಾತುರ್ಯವಿದ್ದರೆ ಸಂಘ ಅಭಿವೃದ್ಧಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಉಳ್ಳಾಲ ವಲಯ ಬಂಟರ ಸಂಘದ ಪ್ರಾರಂಭದಿಂದ ಈಗಿನವರೆಗೆ ಸಂಘಟನೆಯಲ್ಲಿ ನಾಯಕತ್ವ ವಹಿಸಿದವರು ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ ಕಾರಣ ಭಟಮರ ಸಂಘಕ್ಕೆ ತನ್ನದೇ ಆದ ಮಹತ್ವ ಬಂದಿದೆ ಎಂದು ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್ಪೇರ್ ಅಸೋಸಿಯೇಶನ್‍ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ಬಂಟರ ಸಂಘ ಉಳ್ಳಾಲ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ಕಳೆದ ಎರಡು ವರ್ಷದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಸಾಥ್ರ್ಯಕ್ಯತೆ ಇದೆ. ಸಮಾಜ ನಮಗೆ ಯಾವ ಜವಾಬ್ದಾರಿ ನೀಡಿದೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಲಾಭ ಮಾಡುವುದರೊಂದಿಗೆ ಸಮಾಜ ಮೀರಿ ಸಹಾಯ ನೀಡುವ ಕಾರ್ಯ ಈ ಉಳ್ಳಾಲ…

Read More

UN NETWORKS ಉಳ್ಳಾಲ: ಅಧ್ಯಾಪನಾ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದ್ದು, ನಾನು ಆಧ್ಯಾಪಕನಾಗಿ, ನೃತ್ಯ ಗುರುವಾಗಿ ಎರಡೂ ಕ್ಷೇತ್ರದಲ್ಲೂ ಅಸಂಖ್ಯಾತ ಶಿಷ್ಯರನ್ನು ಪಡೆಯುವ ಮೂಲಕ ಜೀವನದಲ್ಲಿ ಕೃತಾರ್ಥನಾಗಿದ್ಧೇನೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ಗುರುದಶಮಿ ಪ್ರಯುಕ್ತ ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ `ಮಂತ್ರ ನಾಟ್ಯಕಲಾ ಗುರುಕುಲ’ಉಳ್ಳಾಲ ಇದರ ಆಶ್ರಯದಲ್ಲಿ ಮೊಗವೀರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಾಲಾ ಶಿಕ್ಷಕರಿಗೆ ಗುರುವಂದನೆ ಹಾಗೂ ನೃತ್ಯ ಕಾರ್ಯಕ್ರಮ `ಕೃತಾರ್ಥ` ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾನಾಡಿದರು .ನನ್ನ ಪ್ರಾರಂಭದ ಜೀವನ ಅಧ್ಯಾಪಕನಾಗಿ ಪ್ರಾರಂಭಿಸಿದ್ದೆ. ಅದರಲ್ಲೂ ಉಳ್ಳಾಲ ಮೊಗವೀರ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವಾಗ ಮತ್ತು ನಿವೃತ್ತಿಯ ಬಳಿಕವೂ ದಾರಿಯಲ್ಲಿ ಸಿಗುವ ಶಿಷ್ಯ ವೃಂದ ನೀಡುತ್ತಿದ್ದ ಗೌರವ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಶಿಕ್ಷಕನಾಗಿ ಭರತನಾಟ್ಯ ನೃತ್ಯ ಕಲೆಯನ್ನು ಪ್ರವೃತ್ತಿಯನ್ನಾಗಿ ಸ್ವೀಕರಿಸಿದ ಬಳಿಕವೂ ಅಸಂಖ್ಯಾತ ಶಿಷ್ಯ ವೃಂದವನ್ನು ಪಡೆದಿದ್ದು, ಕಳೆದ…

Read More