UN NETWORKS ಕೊಣಾಜೆ: ಶಿಕ್ಷಕರ ದಿನಾಚರಣೆಯಂದು ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡ ಕುರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರನ್ನು ಮುಡಿಪು ಕಾಲೇಜಿನಲ್ಲಿ ಶನಿವಾರ ಗೌರವಿಸಿ ಸನ್ಮಾನಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು, ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರು ತಪ್ಪಿನ ಜೊತೆ ರಾಜಿ ಮಾಡಿಕೊಳ್ಳದೆ, ನಿಷ್ಪಕ್ಷಪಾತವಾಗಿ, ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಶ್ರೇಷ್ಠ ಶಿಕ್ಷಕನಾಗಿ ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪ್ರತಿಯೊಂದಕ್ಕೂ ಲಾಭಿ ನಡೆಯುವುತ್ತಿರುವ ಇಂದಿನ ಕಾಲದಲ್ಲಿ ತನ್ನ ಅರ್ಹತೆಯ ಮೂಲಕವೇ ಮ್ಯಾಗೇರಿಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಅರಸಿಕೊಂಡು ಬಂದಿರುವುದು ಅವರ ಪ್ರಾಮಾಣಿಕತೆ ಮತ್ತು ಆದರ್ಶಕ್ಕೆ ಸಾಕ್ಷಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕಾಲೇಜು ಆಡಳಿತ ಮಂಡಳಿಯ ಕೊಲ್ಲರಮಜಲು ಈಶ್ವರ ಭಟ್ ಅವರು, ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಯೋಗ ಮತ್ತು ಯೋಗ್ಯತೆ ಎರಡೂ ಬೇಕು. ಇವೆರಡೂ ಅಷ್ಪಾಕ್…
Author: UllalaVani
UN NETWORKS ತೊಕ್ಕೊಟ್ಟು: ಶಾಲಾ ಮಕ್ಕಳಲ್ಲಿ ದೈಹಿಕ ಸಧೃಡತೆಯಿದ್ದಲ್ಲಿ ಮಾನಸಿಕ ಸಧೃಡತೆ ಕಾಪಾಡಲು ಸಾಧ್ಯ, ಈ ಕೆಲಸವನ್ನು ದೈಹಿಕ ಶಿಕ್ಷಕರು ಮಾಡುತ್ತಾ ಬಂದಿದ್ದಾರೆ ಎಂದು ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್ನ ಸಹಾಯಕ ಧರ್ಮಗುರು ಫಾ.ಲೈಝಿಲ್ ಡಿಸೋಜ ಅಭಿಪ್ರಾಯಪಟ್ಟರು. ರಾಜ್ಯ ದೈಹಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ವಲಯ ವತಿಯಿಂದ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಶಾಲಾ ಸಭಾಂಗಣದಲ್ಲಿ ಮಂಗಳವಾರ ನಡೆದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಕರಿಗೆ ಅಭಿನಂದನೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಉಳ್ಳಾಲ ಭಾಗದಲ್ಲಿ ಅಯೋಜಿಸುವ ಕೀಡಾಕೂಟಗಳು ಯಶಸ್ವೀಯಾಗಿ ನಡೆಯುತ್ತಿದ್ದು ದೈಹಿಕ ಶಿಕ್ಷಕರ ಒಗ್ಗಟ್ಟಿನ ಕೆಲಸದಿಂದ ಸಾಧ್ಯವಾಗಿದೆ. ಇಂತಹ ಒಗ್ಗಟ್ಟು ಕಾಣುವ ಮಕ್ಕಳಿಗೂ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ದೈಹಿಕ ಶಿಕ್ಷಣ ಸಾಧನೆಗೆ ಪೂರಕವಾಗುತ್ತದೆ, ಯಾವುದೇ ಶಾಲೆಗಳಲ್ಲೂ ದೈಹಿಕ ಶಿಕ್ಷಕರಿದ್ದರೆ ಆ ಶಾಲೆಗೆ ವಜ್ರವಿದ್ದಂತೆ. ಕ್ರೀಡೆಯೊಂದಿಗೆ ಮಕ್ಕಳ ಭವಿಷ್ಯ ನಿರ್ಮಿಸುವ ದೈಹಿಕ ಶಿಕ್ಷಕರು ಪ್ರಶಸ್ತಿ ತಾನಾಗಿಯೇ ಹರಸಿ ಬರುತ್ತದೆ ಎಂದು ಕಾಯುವುದು ಸರಿಯಲ್ಲ ಎಂದರು.…
UN NETWORKS ದೇರಳಕಟ್ಟೆ: ಮಧುಮೇಹ ಪ್ರಪಂಚದೆಲ್ಲೆಡೆ ದೊಡ್ಡ ಪ್ರಮಾಣದಲ್ಲಿಕಂಡುಬರುತ್ತಿದ್ದು ಭಾರತದ ಜನಸಂಖ್ಯೆಗೆ ಅನುಗುಣವಾಗಿ 20ಶೇ. ಜನರು ಮಧುಮೇಹಕ್ಕೆ ಒಳಗಾಗಿದ್ದಾರೆ. ಆ ಮೂಲಕ ಭಾರತ ಮಧುಮೇಹದ ರಾಜಧಾನಿಯಾಗುತ್ತಿದ್ದು ಮಧುಮೇಹದ ಕುರಿತು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿವೈದ್ಯಕೀಯ ಜೀವ ರಸಾಯನಶಾಸ್ತ್ರ ವಿಭಾಗದ ಕರ್ನಾಟಕ ರಾಜ್ಯ ಘಟಕ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಜಂಟಿ ಆಶ್ರಯದಲ್ಲಿಮೂರು ದಿನಗಳ ಕಾಲ ನಡೆಯಲಿರುವ 5ನೇ ರಾಜ್ಯಮಟ್ಟದ ಆಂಬಿಸಿಕಾನ್-2018ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇಮದಲ್ಲಿರುವ ಜೀವರಸಾಯನಶಾಸ್ತ್ರ ಕೇಂದ್ರ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿದ್ದುಅಂತಹ ವ್ಯವಸ್ಥೆ ದೇಶದ ಕೆಲವೇ ಸಂಸ್ಥೆಗಳಲ್ಲಿದೆ. ಫಿಸಿಶಿಯನ್ಗಳು ಅದರ ಸದ್ಬಳಕೆ ಮಾಡಬೇಕಿದೆ. ಹಾಗೆಯೇ ಇತರ ಪ್ಯಾರಾಮೆಡಿಕಲ್ ವಿಭಾಗದವರು ಬಳಸಿಕೊಳ್ಳಬೇಕು. ಇತರ ಸಂಸ್ಥೆಗಳಿಗೂ ಆದರಿಂದ ಸೇವೆ ಕೊಡಲು ಸಾಧ್ಯವಿದೆ. ಆ ಮೂಲಕ ಮಧುಮೇಹದಂತಹ ರೋಗಕ್ಕೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ನುಡಿದರು. ಸಮ್ಮೇಳನ ಪ್ರಯುಕ್ತ ಹೊರತರಲಾದ…
UN NETWORKS ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಒಳಪೇಟೆ ಮಾರುಕಟ್ಟೆ ಬಳಿ ವ್ಯಾಪಾರ ಮಳಿಗೆಗಳಿಗೆ ಮಂಗಳವಾರ ಅನೀರಿಕ್ಷಿತ ದಾಳಿ ಮಾಡಿದ ನಗರಸಭೆಯ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಗ್ಲಾಸ್ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕರುಗಳಾದ ಜಯಶಂಕರ್, ಶಾಜಿತ್, ರಾಜೇಶ್ ಹಾಗೂ ಸಿಬ್ಬಂದಿ ಅಂಗಾರ ಭಾಗವಹಿಸಿದ್ದರು.
UN NETWORKS ತೊಕ್ಕೊಟ್ಟು: ಭೀಕರ ಕಾರು ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಎರ್ನಾಕುಳಂ ನಿವಾಸಿ ಅನೂಪ್ ಆ್ಯಂಟನಿ (35) ಮೃತಪಟ್ಟವರು. ಅನೂಪ್ ಜತೆಗಿದ್ದ ಸಹೋದ್ಯೋಗಿಗಳಾದ ವಿದು ಎಸ್., ಜಾರ್ಜ್, ಆನಂದ್ ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಅನೂಪ್ ಆ್ಯಂಟನಿ ಕಳೆದ ಎರಡು ತಿಂಗಳಿನಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ಕೇರಳದ ಊರಿಗೆ ದೂರದಿಂದ ಬಂದ ಸಹೋದರನನ್ನು ಭೇಟಿಯಾಗಲೆಂದು ಒಂದೇ ರೂಮಿನಲ್ಲಿದ್ದ ಐವರು ಸಹುದ್ಯೋಗಿಗಳು ಕಾರಿನಲ್ಲಿ ತೆರಳಿದ್ದರು. ಅಲ್ಲಿಂದ ದೇರಳಕಟ್ಟೆ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ತೊಕ್ಕೊಟ್ಟು ಚಿಲ್ಡ್ರನ್ಸ್ ಕ್ಲಿನಿಕ್ ಮುಂಭಾಗಕ್ಕೆ ತಲುಪುತ್ತಿದ್ದಂತೆಯೇ ಹಠಾತ್ ಬ್ರೇಕ್ ಒತ್ತಿದ ಪರಿಣಾಮ ಕಾರು ರಸ್ತೆಯಲ್ಲಿ ಪಲ್ಟಿಯಾಗಿತ್ತು. ಪರಿಣಾಮ ಅನೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರನ್ನು ಗಂಭೀರ ಸ್ಥಿತಿಯಲ್ಲಿದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದು ಎಸ್ ಹಾಗೂ ಜಾರ್ಜ್…
UN NETWORKS ಉಳ್ಳಾಲ: ಉಳ್ಳಾಲ ಜನತಾದಳ(ಜಾತ್ಯಾತೀತ)ದಿಂದ ಉಳ್ಳಾಲ ನಗರಸಭೆಗೆ ನೂತನವಾಗಿ ಚುನಾಯಿತರಾದ ಕೌನ್ಸಿಲರ್ ಗಳಿಗೆ ಅಭಿನಂದನೆ ಮತ್ತು ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭವು ತೊಕ್ಕೊಟ್ಟು ಗಂಗಾ ಕಾಂಪ್ಲೆಕ್ಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಸೆ, 16 ಆದಿತ್ಯವಾರ ಸಂಜೆ 4.30ಘಂಟೆಗೆ ನಡೆಯಲಿದೆ. ಕ್ಷೇತ್ರಾಧ್ಯಕ್ಷ ಮೋಹನದಾಸ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದು .ರಾಜ್ಯ ಜನತಾದಳ ನಾಯಕರಾದ ಅಬೂಬಕ್ಕರ್ ಹಾಜಿ ನಾಟೆಕಲ್ ಹಾಗೂ ಜಿಲ್ಲಾ ನಾಯಕರು ಸಭೆಯಲ್ಲಿ ಭಾಗವಹಿಸಲಿರುವರು.ಪಕ್ಷದ ಕಾರ್ಯಕರ್ತರು, ಅಭಿಮಾನಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಉಳ್ಳಾಲ ನಗರ ಜನತಾದಳ ಚುನಾವಣಾ ಸಮಿತಿ ಸಂಚಾಲಕರಾದ ನಝೀರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಕೋಟೆಕಾರ್: ಪ್ರಪಂಚದಲ್ಲಿ 84ಲಕ್ಷ ಜೀವಿಗಳನ್ನು ಸೃಷ್ಟಿಸಿದ ಬಳಿಕ ಮನುಷ್ಯನ ಸೃಷ್ಟಿಯಾಗುತ್ತದೆ. ಹಾಗಾಗಿ ಮನುಷ್ಯನ ದೇಹಕ್ಕಿಂತ ಅವನು ಬದುಕಿನುದ್ದಕ್ಕೂ ಪಡೆದ ಜ್ಞಾನ ಬಲು ಶ್ರೇಷ್ಠ. ಮನುಷ್ಯ ಭೋಗ ಜೀವನ ಬದಿಗೆ ಸರಿಸಿ ಯೋಗ ಜೀವನ ನಡೆಸಬೇಕು ಎಂದು ಬಿಎಸ್ಎನ್ಎಲ್ ಡಿಜಿಎಂ ಕುಂಬ್ಳೇಕರ್ ಮೋಹನ್ ಕುಮಾರ್ ನುಡಿದರು. ಕೋಟೆಕಾರಿನ ಶೃಂಗೇರಿ ಶಂಕರಮಠದಲ್ಲಿ ಬುಧವಾರ ನಡೆದ ಶ್ರೀ ಗೌರೀ ಹಬ್ಬದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.”ಸೇವಾಹಿ ಧರ್ಮ ಮರಮೋ ಧರ್ಮ” ಎಂಬ ನುಡಿಯಂತೆ ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು. ನಾವು ದುಡಿದ ಸಂಪತ್ತು ದುಡ್ಡು. ಆ ದುಡ್ಡಿನಲ್ಲಿ ಧರ್ಮ ಕಾರ್ಯ ಮಾಡಬೇಕು. ಇತರ ಮಾರ್ಗದಲ್ಲಿ ದುಡಿದದ್ದು ಹಣ. ಅದು ಹೆಣವಾಗುವ ಸಾಧ್ಯತೆ ಇದೆ. ಹಾಗೆಯೇ ಯಾವುದೇ ವ್ಯಕ್ತಿ ಜಾತಿಯಲ್ಲಿ ಶೂದ್ರರಾಗಿಲ್ಲ. ಅವರವರ ಕರ್ಮಾನುಸಾರ ಜಾತಿ ನಿರ್ಣಯ ಎಂದು ನುಡಿದರು. ಮನುಷ್ಯನ ಅಂತರಂಗ ಪರಿಶುದ್ಧವಾದರೆ ಮಾತ್ರ ನಾದ ಬಹಳ ಸೊಗಸಾಗಿ ಮೂಡಿಬರಬಹುದು. ಭಗವಾನ್ ಶ್ರೀಕೃಷ್ಣ ತನ್ನ ಕೈಯಲ್ಲಿರುವ ಕೊಳಲಿಗೆ…
UN NETWORKS ಮಂಗಳೂರು: ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಂಗಳೂರು ಘಟಕದ ರೇಷ್ಮಾ ಅವರನ್ನು ಗೃಹರಕ್ಷಕದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಸನ್ಮಾನಿಸಿದರು. ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿಯಲ್ಲಿ ಆರು ದಿನಗಳ ಕಾಲ ನಡೆದ ಗೃಹರಕ್ಷಕಿಯರ “ನಿಸ್ತಂತು ಚಾಲನಾ ತರಬೇತಿ” ಪಡೆದಿದ್ದಾರೆ. ಉಪಸಮಾದೇಷ್ಟ ರಮೇಶ್, ಮಾರ್ಕ್ಶೇರಾ, ಹಿರಿಯ ಗೃಹರಕ್ಷಕ ಸುರೇಶ್ ಶೇಟ್ ಮತ್ತು ಮಂಗಳೂರು ಘಟಕದ ಗೃಹರಕ್ಷಕರು ಗೃಹರಕ್ಷಕಿಯರು ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ: ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗುರು ವಂದನಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಕಾರ್ಯಕ್ರಮ ಉದ್ಘಾಟಿಸಿದರು.ನಿವೃತ್ತ ಶಿಕ್ಷಕ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ನಿವೃತ್ತ ತಹಶೀಲ್ದಾರ ನಾರಾಯಣ ಶೆಟ್ಟಿ, ಪಂಚಾಯತಿ ಸ್ಥಳೀಯ ಸದಸ್ಯ ಕಬೀರ್ ಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಪಿ. ಐ, ಸಿಆರ್ ಪಿ ರಾಜೇಶ್ವರಿ, ನಯನ ಕುಮಾರಿ ಕೆ, ವಿಷ್ಣು ಹೆಬ್ಬಾರ್, ಅಂಬಿಕಾ, ವೆಂಕಟೇಶ್, ಅರುಣಾ, ವಿನಯ, ವಿಜಯ ಕೆ. ಆರ್, ಮನೋಜ್ ಕುಮಾರ್ ಟಿ ಎಮ್, ಮಹಮ್ಮದ್ ಇರ್ಷಾದ್ ಡಿ ಎಂ, ಆಸಿಫ್ ಮುಂಬೈ, ಮಹಮ್ಮದ್ ರಫೀಕ್ ಹಾಗೂ ಮೊೈದಿನ್ ಮನ್ಸೂರ್ ಉಪಸ್ಥಿತರಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಹಾಬುದ್ದೀನ್ ಡಿ. ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂದೀಪ್ ಪೂಜಾರಿ…
UN NETWORKS ಕಿನ್ಯ: ಇಸ್ಲಾಮಿನ ತತ್ವ, ಸಿದ್ಧಾಂತಗಳನ್ನು ಅಳವಡಿಸಿ ಪೂರ್ವಿಕ ಮಹಾತ್ಮರ ಹಾದಿಯಲ್ಲಿ ಮುನ್ನಡೆದರೆ ಇಹ-ಪರಗಳಲ್ಲಿ ವಿಜಯ ಹೊಂದಲು ಸಾಧ್ಯ ಎಂದು ಕಿನ್ಯ, ಬದ್ರಿಯಾ ನಗರ ಬುಖಾರಿ ಜುಮಾ ಮಸ್ಜಿದ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಹೇಳಿದರು. ಅವರು ಕಿನ್ಯ ಬುಖಾರಿ ಜುಮುಅ ಮಸ್ಜಿದ್ನಲ್ಲಿ ನಡೆದ ಖ್ಯಾತ ಹಿರಿಯ ವಿದ್ವಾಂಸ ಮರ್ಹೂಂ ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ತಂಙಳ್ ರವರ ಅನುಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಯ್ಯಿದ್ ಅಲವಿ ತಂಙಳ್ ದುವಾ ನೆರವೇರಿಸಿದರು.ನೂರುಲ್ ಉಲಮಾ ಮದ್ರಸದ ಸದರ್ ಮುಅಲ್ಲಿಂ ಶೌಕತ್ ಅಲಿ ಸಖಾಫಿ ಬೆಳ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಸಂದೇಶ ಭಾಷಣ ನಡೆಸಿದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್, ಕೆ.ಎಚ್ ಅಹ್ಮದ್ ಕುಂಞ, ಎಸ್ಎಂ.ಎ. ದೇರಳಕಟ್ಟೆ ರೀಜನಲ್ ಅಧ್ಯಕ್ಷ ಎಂ.ಕೆ.ಎಂ. ಇಸ್ಮಾಯಿಲ್ ಮೀಂಪ್ರಿ, ಅಬ್ದುಲ್ ಹಮೀದ್ ಮೀಂಪ್ರಿ, ಬುಖಾರಿ ಜುಮುಅ ಮಸ್ಜಿದ್ ಉಪಾಧ್ಯಕ್ಷ ಮೂಸಕುಂಞ ಬದ್ರಿಯಾನಗರ, ಮದ್ರಸದ ಮುಅಲ್ಲಿಂ ಹೈದರ್ ಮುಸ್ಲಿಯಾರ್ಮತ್ತಿತರರು…

