Author: UllalaVani

Kannada News From Coastal Karnataka

UN NETWORKS ಮಂಗಳೂರು: ಶಿಕ್ಷಕರಿಗೆ ಒತ್ತಡ ರಹಿತ ವಾತಾವಾರಣ ಕಲ್ಪಿಸಿದರೆ ಅವರಿಂದ ಗುಣಮಟ್ಟದ ಬೋಧನೆ ಸಾಧ್ಯ. ಈ ಬಗ್ಗೆ ಸರಕಾರ ಚಿಂತನೆ ನಡೆಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಎಲ್ ಅಭಿಪ್ರಾಯಪಟ್ಟರು. ದ.ಕ. ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸಹಯೋಗದಲ್ಲಿ ಬುಧವಾರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಶೈಕ್ಷಣಿಕ ಸಮಾವೇಶ, ಸಮ್ಮಾನ, ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರುವ ಮುನ್ನ ಆ ಕ್ಷೇತ್ರದ ನುರಿತರೊಂದಿಗೆ ಚರ್ಚೆ ನಡೆಸಿ ಮುಂದೆ ಹೆಜ್ಜೆ ಇಡಬೇಕಾಗಿದೆ. ಇದರಿಂದ ಶಿಕ್ಷಕರ ಸಮಸ್ಯೆಗಳು ಸರಕಾರದ ಗಮನಕ್ಕೆ ಬರುತ್ತದೆ. ಆದರೆ ಪ್ರಸ್ತುತ ಶಿಕ್ಷಕರ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ನೇರ ಸುತ್ತೋಲೆಗಳನ್ನು ಕಳುಹಿಸಿ ಶಿಕ್ಷಕರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ತಿಳಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅವೈಜ್ಞಾನಿಕ ನಿಯಮಗಳಿಂದ ಶಿಕ್ಷಕರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ.…

Read More

UN NETWORKS ಪಜೀರು: ಧಾರ್ಮಿಕ, ಕೌಟುಂಬಿಕ ಏಕತೆ ಹೆಣ್ಮಕ್ಕಳ ಮಹತ್ವ ಹಾಗೂ ಪ್ರಕೃತಿ ಸಂರಕ್ಷಣೆ ಎಂಬ ನಾಲ್ಕು ಆಯಾಮಗಳನ್ನು ಮೋಂತಿ ಹಬ್ಬ ಹೊಂದಿದೆ ಎಂದು ಸಿಓಡಿಪಿ ಸಂಸ್ಥೆಯ ನಿರ್ದೇಶಕ ವಂ.ಫಾ. ಓಸ್ವಾಲ್ಡ್ ಮೊಂತೆರೋ ಹೇಳಿದರು. ಮಂಗಳೂರಿನ ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆಯ ಪ್ರವರ್ತಿತ ಸ್ನೇಹ ಮಹಾಸಂಘ ಪಜೀರು ಸ್ವಸಹಾಯ ಸಂಘಗಳ ವತಿಯಿಂದ ಶನಿವಾರ ಪಜೀರು ಚರ್ಚ್ ಸಭಾಂಗಣದಲ್ಲಿ ನಡೆದ `ಹೆಣ್ಮಕ್ಕಳ ಮಹತ್ವ ಮತ್ತು ಪ್ರಕೃತಿ ಸಂರಕ್ಷಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಕೃತಿ ಎಂಬ ಸ್ವಾಭಾವಿಕ ಸಂಪನ್ಮೂಲಗಳನ್ನು ದೇವರು ನಮಗೆ ನೀಡಿದ್ದು ಅದನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಕೆಲಸ ನಡೆಯಬೇಕು. ಹೆಣ್ಣು ಮಗು ಎನ್ನುವ ಕಾರಣಕ್ಕೆ ತಾತ್ಸಾರ ಭಾವನೆ ತೋರದೆ ಭ್ರೂಣಹತ್ಯೆ, ಅತ್ಯಾಚಾರದಂತಹ ಪಿಡುಗುಗಳಿಂದ ಸಮಾಜ ಮುಕ್ತವಾಗಬೇಕು ಎಂದು ತಿಳಿಸಿದರು.ಮಂಜುಳಾ ಸುನಿಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವಂ. ಸ್ವಾಮಿ ಫ್ರಾನ್ಸಿಸ್ ಆಸ್ಸಿಸಿ ಅಲ್ಮಾಡಾ, ಸಿಒಡಿಪಿ ಸಂಯೋಜಕ ರವಿ ಕುಮಾರ್ ಕ್ರಾಸ್ತಾ, ಸಂಯೋಜಕಿ ರೀಟಾ ಡಿಸೋಜ ಪಜೀರು…

Read More

UN NETWORKS ದೇರಳಕಟ್ಟೆ: ದೇರಳಕಟ್ಟೆಯ ಕೆ.ಎಸ್ .ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯದ ಮಾನಸಿಕ ರೋಗ ಚಿಕಿತ್ಸಾ ವಿಭಾಗ ಮತ್ತು ರಾಷ್ಟೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರಿವಳಿಕಾ ವಿಭಾಗ ತಜ್ಞೆ ಡಾ. ಗಾಯತ್ರಿ ಭಟ್ ಆತ್ಮಹತ್ಯೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕಳವಳಕಾರಿ ಸಂಗತಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮನೋ ವೈದ್ಯಶಾಸ್ತ್ರ ಪದವಿ ವಿದ್ಯಾರ್ಥಿನಿ ಡಾ. ನೀಲಾ ಬಿ. ಶೆಣೈ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯ. ವಿಶ್ವ ಸಂಸ್ಥೆಯ ಪ್ರಕಾರ ದಿನಕ್ಕೆ 3000ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ. ಯುವಜನಾಂಗ ಸಣ್ಣಪುಟ್ಟ ಸಮಸ್ಯೆಗಳೀಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತ ಎಂದರು. ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿಶಿ ಗುರು ಮಾತಾನಾಡಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಬಹುತೇಕ ಯುವ ಪೀಳಿಗೆಯವರೇ ಆಗಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿಸಮಸ್ಯೆಗೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಬಹು…

Read More

UN NETWORKS ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ 2017-18ನೇ ಸಾಲಿನಲ್ಲಿ ಸಂಘದ 62ವರ್ಷಗಳ ಇತಿಹಾಸದಲ್ಲಿ ಗರಿಷ್ಠ 379.11ಕೋಟಿ ರೂ. ಗಳ ವ್ಯವಹಾರ ನಡೆಸಿ 1.40ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ ಎಂದು ಸಂಘದ ಅಧ್ಯಕ ಎಂ. ಎ. ಮಹಮ್ಮದ್ ಬಶೀರ್ ಹೇಳಿದರು. ಸಂಘದ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡ ಮೊತ್ತದ ಲಾಭಾಂಶ ಗಳಿಸಲು ಸಾಧ್ಯವಾಗಿರುವುದಕ್ಕೆ ಸಂಘಧ ಸದಸ್ಯರು, ಗ್ರಾಹಕರು ಸೇವೆಯನ್ನು ಶ್ಲಾಘಿಸಿದ ಸಂಘ ನಿರಂತರವಾಗಿ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆಯುತ್ತಿದೆ ಎಂದು ನುಡಿದರು. ಠೇವಣಿ: ಕಳೆದ ಸಾಲಿನಲ್ಲಿ ಸಂಘ “ಎ” ತರಗತಿಯ 9304ಸದಸ್ಯರಿಂದ1.48ಕೋಟಿ ರೂ. ಗಳ ಪಾಲು ಬಂಡವಾಳವನ್ನು ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ 171.63 ಕೋಟಿ ಠೇವಣಿ ಸಂಗ್ರಹವಾಗಿದೆ.171.68ಕೋಟಿ ರೂ. ಠೇವಣಿದಾರರಿಗೆ ಹಿಂದಕ್ಕೆ ನೀಡಿ ವರ್ಷಾಂತ್ಯಕ್ಕೆ 86.96ಕೋಟಿ ರೂ. ಠೇವಣಿ ಹೊಂದಿದೆ. ಸಾಲ: ಕಳೆದ 86.92ಕೋಟಿ ರೂ. ಸಾಲ ವಿತರಿಸಿದ್ದು, 81.32ಕೋಟಿ ರೂ. ಸಾಲ ವಸೂಲಿಯಾಗಿದೆ. ವರ್ಷಾಂತ್ಯಕ್ಕೆ 60.16ಕೋಟಿ ರೂ. ಹೊರಬಾಕಿ ಸಾಲವಿರುತ್ತದೆ. ಸಾಲ…

Read More

UN NETWORKS ಉಳ್ಳಾಲ: ಇಂದಿನ ಆಧುನಿಕತೆಯ ಜೀವನದಲ್ಲಿ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆ ಅತೀ ಮುಖ್ಯ. ಆ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಗೆ ಭಾಗವಹಿಸುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದ್ದಾರೆ. ಅವರು ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಇದರ ಸಹಯೋಗದೊಂದಿಗೆ ಉಚ್ಚಿಲ ಬೋವಿ ಶಾಲೆಯ ಕ್ರೀಡಾಂಗಣದಲ್ಲಿ ಜರಗಿದ ದಕ್ಷಿಣ ಕನ್ನದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಮಣ್ಣಿನ ಕ್ರೀಡೆ ಎಂದರೆ ಕಬಡ್ಡಿ. ಈ ಪಂದ್ಯಾಟದಲ್ಲಿ ದೇಶದ ಸಾಧನೆ ಕೂಡ ಮೆಚ್ಚ ತಕ್ಕದ್ದು. ಇಂತಹ ಕ್ರೀಡೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಬೆಳೆಸಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ರಾಜೇಶ್ ಉಚ್ಚಿಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್…

Read More

UN NETWORKS ಉಳ್ಳಾಲ :  ಉಳ್ಳಾಲವನ್ನು ಉತ್ತಮ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ನಗರೊತ್ಥಾನ ಯೋಜನೆಯಡಿ ನಡೆಯಲಿರುವ ರಸ್ತೆ ಅಭಿವೃದ್ಧಿಯ ಪರಿಶೀಲನೆ ನಡೆಸಿ ಮಾತನಾಡಿದರು. ಅಬ್ಬಕ್ಕ ಸರ್ಕಲ್‍ನಿಂದ ಪ್ಯಾರಿಸ್ ಜಂಕ್ಷನ್, ಉಳ್ಳಾಲ ದರ್ಗಾ ಮಾರ್ಗವಾಗಿ, ಅಕ್ಕರೆಕೆರೆ, ಸೈಂಟ್ ಸೆಬಾಸ್ತಿಯನ್ ನಿಂದ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರ್ತಸೆ ಟೆಂಡರ್ ಮುಗಿದು ಕಾಮಗಾರಿ ಪ್ರಾರಂಭಗೊಳ್ಳಲಿದೆ. ಈ ರಸ್ತ ಕಾಂಕ್ರಟೀಕರಣದೊಂದಿಗೆ ಮಾದರಿ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಹೊಂಇದ್ದು ಈಗಾಗಲೇ 3.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ರಸ್ತೆಗೆ ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು.ಸಿಆರ್‍ಎಫ್‍ನಿಂದ ಪ್ಯಾರಿಸ್‍ನಿಂದ ಕೊಟೆಪುರ ಮಾರ್ಗವಾಗಿ 5 ಕೋಟಿ ರೂ. ಟೆಂಡರ್ ಹ,ತದಲ್ಲಿದ್ದು, ಓವರ್‍ಬ್ರಿಡ್ಜ್‍ನಿಂದ ಶಿಮ್ಲಾ ಬೇಕರಿ ಸಾರಸ್ವತ ಕಾಲನಿ ರಸ್ತೆಯಾಗಿ ಸೋಮೇಶ್ವರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಮುಡಿಪು ಜಂಕ್ಷನ್‍ನಿಂದ ಮೂಳೂರು ರ್ತಸೆ ಅಭಿವೃದ್ಧಿ ಶೀಘ್ರದಲ್ಲೆ…

Read More

UN NETWORKS  ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳ ಸಂಘ(ರಿ)ದ ವತಿಯಿಂದ ಮಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವು ಶನಿವಾರ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕೇತರ ಸಿಬ್ಬಂದಿಗಳಿಗೆ ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು, ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಶಿಕ್ಷಕೇತರ ಸಿಬ್ಬಂದಿಗಳ ಪಾತ್ರವೂ ಪ್ರಮುಖವಾದುದು. ಶಿಕ್ಷಕೇತರ ಸಂಘವು ಇತ್ತೀಚಿನ ವರ್ಷಗಳಲ್ಲಿ ವಿವಿ ಅಭಿವೃದ್ದಿ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ಗ್ರಂಥಾಲಯದಲ್ಲಿ ಅನುಚರರಾಗಿ ಸೇವೆ ಸಲ್ಲಿಸಿರುವ ಕೆ.ಎಂ.ಅಶೋಕ, ರಮೇಶ, ವಿವಿ ವಾಹನ ಚಾಲಕರಾದ ರಾಮಚಂದ್ರ, ಜವಾನ ರಾಜೀವ ಎಂ, ಲ್ಯಾಬ್ ಅಸಿಸ್ಟೆಂಟ್ ಮನೋಹರ ಎಂ, ಸಹಾಯಕ ಹಣಕಾಸು ಅಧಿಕಾರಿ ಜಯಂತಿ ಎನ್.ಶೆಣೈ, ಬೆರಳಚ್ಚುಗಾರರಾದ ವಿಜಯಲಕ್ಷ್ಮೀ ಎಂ, ಪ್ರಥಮ ದರ್ಜೆ ಸಹಾಯಕ ಬಾಸ್ಕರ, ದ್ವಿತೀಯ ದರ್ಜೆ ಸಹಾಯಕ ವಿಶ್ವನಾಥ್ ನಾೈಕ್, ಪ್ರಥಮ ದರ್ಜೆ ಸಹಾಯಕ ಎಚ್.ಗೋಪಾಲ,…

Read More

UN NETWORKS ನರಿಂಗಾನ: ಕಳೆದ ಕೆಲವು ತಿಂಗಳಿನಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಬಡ ಕೂಲಿ ಕಾರ್ಮಿಕ ಹರಿಶ್ಚಂದ್ರ ಶೆಟ್ಟಿಗಾರ ಅವರ ಪತ್ನಿ ಗೀತಾ ಶೆಟ್ಟಿಗಾರ್ ಅವರಿಗೆ ಚಿಕಿತ್ಸೆಗೆ ಸಹಾಯವಾಗಲೆಂದು ತೌಡುಗೋಳಿಯ ನರಿಂಗಾನ ಯುವಕ ಮಂಡಲದ ಸದಸ್ಯರು ಭಾನುವಾರ ಗೀತಾ ಶೆಟ್ಟಿಗಾರ ಅವರಿಗೆ 10ಸಾವಿರ ರೂ. ನೀಡುವ ಮೂಲಕ ಸಹಾಯ ಹಸ್ತ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು, ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ, ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಮಾಜಿ ಅಧ್ಯಕ್ಷರುಗಳಾದ ನವೀನ್ ಶೆಟ್ಟಿ ಮಂಗಲ್ಪಾಡಿ, ವಿಜಯ್ ಎಲ್. ಸರ್ಕುಡೇಲು, ಅವಿನಾಶ್ ಸರ್ಕುಡೇಲು, ಶ್ರೀಕುಮಾರ್ ಸರ್ಕುಡೇಲು, ರಾಕೇಶ್ ಕೊರಕಟ್ಟ, ನಿಖಿಲ್ ಆಳ್ವ ಗರೋಡಿ, ಜೀತೇಶ್ ಕುಲಾಲ್ ತೌಡುಗೋಳಿ, ಶೇಖರ ಶೆಟ್ಟಿಗಾರ ಹಾಗೂ ಗೀತಾ ಶೆಟ್ಟಿಗಾರ ಪತಿ ಹರಿಶ್ಚಂದ್ರ ಶೆಟ್ಟಿಗಾರ ಜೊತೆಗಿದ್ದರು.

Read More

UN NETWORKS ಕಿನ್ಯಾ: ಕಿನ್ಯಾ ಗ್ರಾಮದ ಮುಹಮ್ಮದ್ ಹಾಜಿ ಕಿನ್ಯಾ(90) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು 7 ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಹಮ್ಮದ್ ಹಾಜಿ ಅವರು ಕಿನ್ಯಾ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Read More

UN NETWORKS ಉಳ್ಳಾಲ: ವಿಶ್ವ ಬೀಚ್ ಸ್ವಚ್ಚತಾ ದಿನದ ಅಂಗವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಉಳ್ಳಾಲ ಹಾಗೂ ಸೋಮೇಶ್ವರ ಬೀಚ್‍ನ್ನು ಎರಡು ದಿನಗಳ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೆಂಟರ್ ಫಾರ್ ಸೋಶಿಯಲ್ ಕನ್ಸರ್ನ್ ಸಹಯೋಗದಲ್ಲಿ ಎರಡು ದಿನ ಉಳ್ಳಾಲ ಮತ್ತು ಸೋಮೇಶ್ವರ ಕಡಲ ಕಿನಾರೆಯ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಸಮುದ್ರ ಕಿನಾರೆಯನ್ನು ಕಸ ಮತ್ತು ಪ್ಲಾಸ್ಟಿಕ್ ಮುಕ್ತರಾಗಿಸಿದರು. ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ, ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More