UN NETWORKS ನಾಟೆಕಲ್: ಶುಚಿತ್ವವು ಈಮಾನಿನ ಒಂದು ಭಾಗವಾಗಿದೆ, ಇಸ್ಲಾಮ್ ಸುಚಿತ್ವಕ್ಕೆ ಬಹಳಷ್ಟು ಮಹತ್ವ ಕಲ್ಪಿಸಿದೆ. “ನೀವು ಶುಚಿತ್ವ ಪಾಲಿಸಿ ಇಸ್ಲಾಮ್ ಶುಚಿವುಳ್ಳದ್ದಾಗಿದೆ” ಎಂದು ನಬಿ. ಸ.ಅ. ರವರ ತಿರು ವಚನದಂತೆ. S S Fನಾಟೆಕಲ್ ಶಾಖಾ ವತಿಯಿಂದ ಬೆಳಿಗ್ಗೆ S S F ಧ್ವಜ ದಿನದ ಅಂಗವಾಗಿ ನಾಟಕಲ್ ಪರಿಸರ ಮತ್ತು ಸರಕಾರಿ ಆಸ್ಪತ್ರೆಯ ವಾರಾಂಡದಲ್ಲಿ ಶುಚಿತ್ವ ಕಾರ್ಯಕ್ರಮ ಮತ್ತು ಶುಚಿತ್ವ ಅಭಿಯಾನವು ಶಾಖಾ ಅಧ್ಯಕ್ಷರಾದ ಹಮೀದ್ ಸಹಾರ ನಾಟಕಲ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಅಬ್ಬಾಸ್ ಮದಪಾಡಿ, ರಹ್ಮಾನಿಯ ಮದ್ರಸ ಪ್ರ.ಕಾರ್ಯದರ್ಶಿ ಸಿದ್ದಿಕ್ ಮದನಿ, ಹಿರಿಯ ಸದಸ್ಯರಾದ ಇಬ್ರಾಹಿಂ ನಾಟಕಲ್, ಶಾಖಾ ಉಪಾಧ್ಯಕ್ಷರಾದ ಫಾರೂಕ್ ನಾಟೆಕಲ್ ಪ್ರ. ಕಾರ್ಯದರ್ಶಿ ಹಮೀದ್ ah, ಕೋಶಾಧಿಕಾರಿ ಅಷ್ಫಾಕ್ , kcf ಸದಸ್ಯರಾದ ಇಕ್ಬಾಲ್ mn ನಾಟೆಕಲ್ ಸೇರಿದಂತೆ ಹಲವಾರು ಸದಸ್ಯರು ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.
Author: UllalaVani
UN NETWORKS ಕೋಟೆಕಾರು: ಎಸ್ ಡಿಐಪಿ ಅಜ್ಜಿನಡ್ಕ ಸಮಿತಿ ಮತ್ತು ಇಂಫಾಮೇ್ಶನ್, ಎಂಪವರ್ ಮೆಂಟ್ ಕೆ.ಸಿ ರೋಡು ಹಾಗೂ ಯೆನೆಪೂಯ ಮೇಡಿಕಲ್ ಕಾಲೇಜಿ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕೊಟೆಕಾರಿನ ಅಜ್ಜಿನಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಅಜ್ಜಿನಡ್ಕ ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲ್ಲೀಂ ಅಬ್ದುಲ್ ಸತ್ತಾರ್ ಮದನಿ ದುಅ ನೇತೃತ್ವ ವಹಿಸಿದರು. ಎಸ್ ಡಿಪಿ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯಕ್ಕೆ ಸೀಮಿತವಾಗಿದ್ದು ಎಸ್ ಡಿಪಿಐ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳದೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ರಾಜಕೀಯದ ಜೋತೆ ಜನರ ಮಧ್ಯೆ ಸಹಕಾರಿ ನೆಲೆಯಲ್ಲಿ ಬೆಳೆದು ಬರುತ್ತಿದೆ ಎಂದು ಹೇಳಿದರು. ಎಸ್ ಡಿಪಿಐ ಮಂಗಳೂರು ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯಾ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಜ್ಜಿನಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಯಶೋದ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು…
UN NETWORKS ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಫ್ರೆಂಡ್ಸ್ ಉಳ್ಳಾಲ ಆಶ್ರಯದಲ್ಲಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಉಳ್ಳಾಲ ಕೋಡಿಯ ಸರಕಾರಿ ಉರ್ದು ಪ್ರೌಢ ಶಾಲಾ ವಠಾರದಲ್ಲಿ ನಡೆಯಿತು. ಉಳ್ಳಾಲ ನಗರ ಸಭೆ ಸದಸ್ಯ ನಿಝಾಂ ಮಿಲ್ಲತ್ ನಗರ ಕಾರ್ಯಕ್ರಮ ಉದ್ಘಾಟಿಸಿದರು.ಉಳ್ಳಾಲ ನಗರ ಸಭೆ ಸದಸ್ಯ ಅಯ್ಯೂಬ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಗರ ಸಭೆ ಸದಸ್ಯರುಗಳಾದ ಅಸ್ಗರ್ ಅಲಿ, ರಮೀಝ್ ಕೋಡಿ, ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ತಾಂತ್ರಿಕ ಮುಖ್ಯಸ್ಥ ಎಡ್ವರ್ಡ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರ.ಕಾರ್ಯದರ್ಶಿ ನವಾಝ್ ಎಂ.ಬಿ, ಉಪಾಧ್ಯಕ್ಷರುಗಳಾದ ಸಲಾಂ ಚೆಂಬುಗುಡ್ಡೆ , ಮುನೀರ್ ಚೆಂಬುಗುಡ್ಡೆ, ಕೋಶಾಧಿಕಾರಿ ಮುಸ್ತಫಾ ಕೆ.ಸಿ ರೋಡು, ಫ್ರೆಂಡ್ಸ್ ಉಳ್ಳಾಲ ಇದರ ಅಧ್ಯಕ್ಷ ತೌಫೀಕ್ ಕೋಡಿ, ರೆಡ್ ಕ್ರಾಸ್ ನ ಮುಖ್ಯಸ್ಥ ಪ್ರವೀಣ್ ಉಪಸ್ಥಿತರಿದ್ದರು.
UN NETWORKS ಕೊಡಗು: ಕಳೆದ ತಿಂಗಳಲ್ಲಿ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭೂಪಾತ, ನೆರೆ ಹಾಗೂ ಭೀಕರ ಪೃಕೃತಿ ದುರಂತ ಗಳು ಸಂಭವಿಸಿದಾಗ ಜೋಡಪಾಲ- ಮಳೆನಾಡು ಪ್ರದೇಶಗಳಲ್ಲಿ ಮನೆ, ಭೂಮಿ ಹಾಗೂ ಪ್ರಾಣ ಕಳಕೊಂಡವರ ರಕ್ಷಣೆಗೆ ಅತಿ ಸಾಹಸಿಕವಾಗಿ ತನ್ನನ್ನು ತೊಡಗಿಸಿಕೊಂಡು ಅನೇಕ ಜನರ ಪ್ರಾಣ ಕಾಪಾಡಿದ್ದು ಅಲ್ಲದೆ ಇದೀಗ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಸುಂಟಿಕೊಪ್ಪದಲ್ಲಿ ಒಂದು ಏಕರೆ ಜಾಗವನ್ನೂ ಇತ್ತೀಚೆಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಮೂಲಕ ದಾನ ನೀಡಿದ ಸಮಾಜ ಸೇವಕ , ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ.ಲತೀಫ್ ಸುಂಟಿಕೊಪ್ಪ ಅವರ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅವರಿಗೆ “ಕೊಡಗಿನ ರತ್ನ” (Jewel of coorg) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರು ಬೆನ್ಸನ್ ಟೌನ್ ನಲ್ಲಿ ನಡೆದ ಸಮಾರಂಭದಲ್ಲಿ ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್…
UN NETWORKS ಮಂಡ್ಯ: ಮಂಡ್ಯದ ಚಾಮುಂಡೇಶ್ವರಿ ನಗರದ ಬನ್ನೂರು ರಸ್ತೆಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಹತ್ತಿರದ ಎಂ.ಸಿ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಕುಲುಕ್ಕಿ (ಮೀಟ್, ಈಟ್ ಆಂಡ್ ಡ್ರಿಂಕ್) ಷರಬತ್ತು ಮಳಿಗೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರೇಮ್ ಚಾಲನೆ ನೀಡಿದರು. ಆರೋಗ್ಯದಾಯಕ ಪಾನೀಯವಾಗಿರುವ ಕುಲುಕ್ಕಿಯನ್ನು ಮಂಡ್ಯದ ಜನತೆಗೆ ಪರಿಚಯಿಸುತ್ತಿರುವ ಸ್ನೇಹಿತರ ಕಾರ್ಯ ಯಶಸ್ಸಿನತ್ತ ಸಾಗಲಿ. ರೈತರು ಬೆಳೆಯುವ ಮಾವಿನಕಾಯಿ, ಮೆಣಸು ಇದನ್ನು ಬಳಸುವ ಮೂಲಕವೇ ಷರಬತ್ತನ್ನು ತಯಾರು ಆಗುವುದರಿಂದ ರೈತರಿಗೆ ಬೆಳೆಗೆ ಉತ್ತಮ ಪ್ರೋತ್ಸಾಹ ನೀಡಿದಂತೆ ಆಗುವುದು. ಮಂಡ್ಯದ ಜನತೆ ಇದನ್ನು ಪ್ರೋತ್ಸಾಹಿಸಲಿದ್ದಾರೆ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ನಾಯಕನ ನಟ ನಿನಾಸಂ ಸತೀಶ ಮಾತನಾಡಿ ಹೊಸ ಜನರೇಷನ್ನಿನವರು ಒಪ್ಪಿಕೊಳ್ಳುವಂತಹ ಹೊಸ ಟೇಸ್ಟ ಕುಲುಕ್ಕಿ ಸಂಸ್ಥೆಯವರು ನೀಡಿದ್ದಾರೆ. ಮಂಡ್ಯದ ಜನತೆಗೆ ಇದೊಂದು ಸಂತಸದ ಸುದ್ಧಿ. ಸಂಸ್ಥೆ ಯಶಸ್ವಿಯಾಗಿ ಬೆಳೆದು ಇನ್ನಷ್ಟು ಶಾಖೆಗಳನ್ನು ತೆರೆಯಲಿ ಎಂದು ಹಾರೈಸಿದರು. 1987 ಆರಂಭವಾದ ಎಂಕೆಹೆಚ್ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ ಕಳೆದ 7…
UN NETWORKS ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿದ್ಯಾದಾಯಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸುರತ್ಕಲ್ನಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ನಿತ್ಯಾಧರ್ ಶಾಲೆ ಬಬ್ಬುಕಟ್ಟೆಯ ನಾಲ್ಕನೇ ತರಗತಿಯ ವೆರೀನಾ ರೀವಾ ವಾಲ್ಡರ್ ಇಂಗ್ಲಿಷ್ ಕಂಠಪಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಮಂಗಳೂರಿನ ಪ್ರೊ.ರೊನಾಲ್ಡ್ ವಾಲ್ಡರ್ ಮತ್ತು ಪ್ರೊ.ವಿನುತಾಡಿಸೋಜ ದಂಪತಿಯ ಪುತ್ರಿ.
UN NETWORKS ಮಂಗಳೂರು: ಬಂಟ್ವಾಳದ ಗೂಡಿನಬಳಿ ಅಪ್ರಾಪ್ತೆ ಬಾಲಕಿಯನ್ನು ಅತ್ಯಾಚಾರಗೈದ ಮೂವರು ಆರೋಪಿಗಳನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಂದು, ಅವರ ಮಾಂಸವನ್ನು ನಾಯಿಗೆ ಹಾಕಿ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಅಮೀರ್ ತುಂಬೆ ಹೇಳಿದ್ದಾರೆ. ಗೂಡಿನಬಳಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ ತೀರಾ ಅಮಾನವೀಯ. ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಸಾರ್ವಜನಿಕವಾಗಿ ಕಲ್ಲೆಸೆದು ಕೊಲ್ಲಬೇಕಿದೆ. ಆನಂತರ ಅವರ ಮಾಂಸವನ್ನು ನಾಯಿಗಳಿಗೋ ಅಥವಾ ಪ್ರಾಣಿಗಳಿಗೋ ಹಾಕಬೇಕಿದೆ. ಈ ಮೂಲಕ ಅದನ್ನು ನೋಡಿ ಮುಂದೆ ಜನ ಭಯಭೀತರಾದರೆ ಮುಂದೆ ಇಂತಹ ಪ್ರಕರಣ ಸಂಭವಿಸುವುದಿಲ್ಲ. ಇಂತಹ ಗೋಮುಖ ವ್ಯಾಘ್ರರನ್ನು ಶೀಘ್ರವೇ ಗಲ್ಲಿಗೆ ಏರಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರಿಗೆ ಒಪ್ಪಿಸುವಂತೆ ವಾಟ್ಸ್ಯಾಪ್ ಮೂಲಕ ವಾಯ್ಸ್ ರೆಕಾರ್ಡಿನಲ್ಲಿ ತಿಳಿಸಿದ್ದಾರೆ. ಇದೀಗ ವಾಯ್ಸ್ ವೈರಲ್ ಆಗುತ್ತಿದೆ.
UN NETWORKS ತಲಪಾಡಿ: ಅವ್ಯವಸ್ಥೆಯ ಗೂಡಾಗಿರುವ ಕುಂದಾಪುರ-ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾನೂನು ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿರುವುದು ಜನಸಾಮಾನ್ಯರಿಗೆ ಗುತ್ತಿಗೆ ಕಂಪೆನಿ ನಡೆಸುತ್ತಿರುವ ಅನ್ಯಾಯ ಎಂದು ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿ, ಸರ್ವಿಸ್ ರಸ್ತೆ ನಿರ್ಮಾಣ ಅಪಘಾತ ವಲಯಗಳಲ್ಲಿ ಸುರಕ್ಷತೆ ಹಾಗೂ ಸ್ಥಳೀಯ ನೋಂದಾಯಿತ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯತಿಗೆ ಆಗ್ರಹಿಸಿ ತಲಪಾಡಿ ಟೋಲ್ ಗೇಟ್ ಬಳಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿ ಮೇಲ್ಛಾವಣಿಯಿಲ್ಲ, ಫ್ಲೈಓವರ್ ಇನ್ನೂ ಆಗಿಲ್ಲ. ಆರು ವರ್ಷಗಳಿಂದ ನಾಲ್ಕು ಕುಂದಗಳನ್ನು ಮಾತ್ರ ಹಾಕಿ 1,2 ಕಿಮೀ ಮೇಲ್ಛಾವಣಿ ಮಾತ್ರ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳು ಅವ್ಯವಸ್ಥೆಯ ಗೂಡಾಗಿದೆ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ. ಕಾನೂನುಬದ್ದವಾಗಿ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಿದ ನಂತರವೇ ಟೋಲ್ ಸಂಗ್ರಹಿಸಬೇಕಿದೆ. ತಲಪಾಡಿಯಿಂದ ಕುಂದಾಪುರದವೆರೆಗೆ ರಸ್ತೆ ವ್ಯವಸ್ಥೆಯೇ ಸರಿಯಿಲ್ಲ. ರಸ್ತೆ ಅವ್ಯವಸ್ಥೆಯಿಂದ ಸಾವು ಅಥವಾ ಹಾನಿ…
UN NETWORKS ಕೋಟೆಕಾರು: ಕೇಂದ್ರ ಸರಕಾರದ ಯೋಜನೆಗಳ ಪರಿಚಯಕ್ಕಾಗಿ ಪ್ರತಿ ಪಂಚಾಯಿತಿನಲ್ಲಿ ಸೇವಾ ಕೇಂದ್ರ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದವರು ಸೇವಾಕೇಂದ್ರಗಳನ್ನು ಅನುಷ್ಠಾನ ಮಾಡಲಿದ್ದಾರೆ. ಅದಕ್ಕಾಗಿ ಬುಧವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಜೊತೆಗೆ ಒಪ್ಪಂದ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪೌರಾಡಳಿತ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ನಿರ್ಮಿಸಲಾದ ಕೋಟೆಕಾರು ಪಟ್ಟಣ ಪಂಚಾಯತ್ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಗುರುವಾರದಂದು ನೆರವೇರಿಸಿ ಮಾತನಾಡಿದರು. ಜನ ಗ್ರಾಮದಲ್ಲಿ ತಮ್ಮ ಹಕ್ಕುಗಳಿಗೆ ಅಲೆದಾಡಬಾರದು ಅನ್ನುವ ಉದ್ದೇಶದಿಂದ ಪ್ರಧಾನಿ ಮೋದಿಯವರ ಕಲ್ಪನೆಯಂತೆ ಸೇವಾ ಕೇಂದ್ರಗಳನ್ನು ಪ್ರತಿ ಪಂಚಾಯಿತಿನಲ್ಲಿ ತೆರೆಯುವಂತಹ ಯೋಜನೆ ಕೇಂದ್ರ ಸರಕಾರದಿಂದ ರೂಪಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಜೊತೆಗೆ ಗುರುವಾರ ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಜಿಲ್ಲೆಯ ಪ್ರತಿ ಮತಗಟ್ಟೆಯಲ್ಲಿ ಕೇಂದ್ರ ಸರಕಾರದ ಸೇವಾಕೇಂದ್ರ ಕಾರ್ಯಾಚರಿಸಲಿದೆ ಅದರಲ್ಲಿ ಓರ್ವ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ ಅವರು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯಿತಿನಲ್ಲಿ ಸರಿಯಾಗಿ…
UN NETWORKS ಬಡಕಬೈಲ್: ಕಾರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಸಮೀಪದ ಪುಂಚಮೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.ಬಡಕಬೈಲ್ ನಿವಾಸಿ ಸೀತಾರಾಮ್ ಗಂಭೀರ ಗಾಯಗೊಂಡ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿದ್ದ ಸೀತಾರಾಮ್ ಅವರು ತನ್ನ ಬೈಕ್ ನಲ್ಲಿ ಬಡಕಬೈಲ್ ನಿಂದ ಪೊಳಲಿಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಎದುರಿನಲ್ಲಿ ಚಲಿಸುತ್ತಿದ್ದ ಜನಾರ್ದನ ಎಂಬವರ ರಿಡ್ಝ್ ಕಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸೀತಾರಾಮ್ ಅವರ ಮುಖದ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಸ್ಥಳೀಯರು ಸೀತಾರಾಮ್ ಅವರಿಗೆ ಅಡ್ಡೂರಿನಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಎಸ್ ಸಿ ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಘಟನೆಯಲ್ಲಿ ಕಾರಿನ ಹಿಂಬದಿ ಗಾಜು ಸಂಪೂರ್ಣ ಪುಡಿ ಪುಡಿಯಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

